ಶಿಷ್ಟಾಚಾರ

ಸಂಕಲ್ಪ ಎನ್ನುವುದು ನಮ್ಮ ಪ್ರಾಚೀನರು ನಮಗೆ ಕಲಿಸಿ ಕೊಟ್ಟಂತಹ ವಿಶಿಷ್ಠ ಕೊಡುಗೆ. ನಾವು ಮಾಡುವ ಕೆಲಸ ಪರಿಪೂರ್ಣವಾಗಬೇಕಿದ್ದರೆ ಕೆಲಸ ಆರಂಭಿಸುವ ಮೊದಲು ಧೃಢ ಸಂಕಲ್ಪಮಾಡಬೇಕು. ಈ ಸಂಕಲ್ಪದಲ್ಲಿ ನಾವು ಏನನ್ನು, ಎಲ್ಲಿ, ಯಾವಾಗ, ಏಕಾಗಿ? ಮಾಡುತ್ತೇವೆ ಎನ್ನುವುದನ್ನು ಗುರುಹಿರಿಯರ ಸನ್ನಿಧಿಯಲ್ಲಿ ಹೇಳುತ್ತೇವೆ. ಇಂತಹ ಸಂಕಲ್ಪವು ನಮ್ಮನ್ನು ಸದಾಚಾರದ ಕ್ರಿಯಾಮಾರ್ಗದಲ್ಲಿ ನಿರಂತರ ನಡೆಯಲು ಸದಾ ಎಚ್ಚರಿಸುತ್ತಿರುತ್ತದೆ. ಸಂಕಲ್ಪ ಶಕ್ತಿಯನ್ನೇ ಆಂಗ್ಲಭಾಷೆಯಲ್ಲಿ ವಿಲ್ ಪವರ್ ಎನ್ನುತ್ತಾರೆ. ನಮ್ಮ ಸಂಕಲ್ಪ ಗಟ್ಟಿಯಾಗಿದ್ದರೆ ನಾವು ಏನನ್ನೂ ಸಾಧಿಸಬಹುದಾಗಿದೆ. ನಮ್ಮ ಸಂಕಲ್ಪವೇ ದುರ್ಬಲವಾಗಿದ್ದರೆ ನಾವು ಅಂದುಕೊಂಡಿದ್ದನ್ನು ಸಾಧಿಸಲಾರೆವು. ಒಮ್ಮೆ ಸಂಕಲ್ಪಮಾಡಿದರೆ ಅದು ಪೂರ್ಣಗೊಳ್ಳುವವರೆಗೂ ನಿರಂತರ ಪ್ರಯತ್ನಬೇಕಾಗುತ್ತದೆ. ಹಾಗೂ ನಾವು ಕ್ರಿಯಾಶೀಲರಾಗಿ ಕೆಲಸಮಾಡಬೇಕಾಗುತ್ತದೆ.

ಸಂಕಲ್ಪವನ್ನು ಯಾವುದೇ ಕೆಲಸದ ಪೂರ್ವದಲ್ಲಿ ಮಾಡಬಹುದು, ಪೂಜಾ ಸಂಕಲ್ಪ, ಜಪದ ಸಂಕಲ್ಪ, ವ್ರತದ ಸಂಕಲ್ಪ, ಕಾರ್ಯಕ್ರಮದ ಸಂಕಲ್ಪ, ಮುಂತಾಗಿ ಭಿನ್ನ ಭಿನ್ನ ವಿಚಾರಗಳಲ್ಲಿ ನಾವು ಸಂಕಲ್ಪ ಮಾಡಬಹುದು. ಸಂಘಟನೆಗಾಗಿಯೂ ಸಂಕಲ್ಪ ಮಾಡಬಹುದು, ಸಂಕಲ್ಪ ಮಾಡುವಾಗ ನಾವಿರುವ ಸ್ಥಳ, ಕಾಲ, ಸಂಕಲ್ಪದ ವಿಷಯ, ಸಂಕಲ್ಪದ ಉದ್ದೇಶ ಇವುಗಳನ್ನು ನಾನು ಇಂದಹವರ ಸಮ್ಮುಖದಲ್ಲಿ ಸಂಕಲ್ಪಿಸುತ್ತಿದ್ದೇನೆ ಎಂಬುದಾಗಿ ಹೇಳುವುದು. ಒಂದು ಕೆಲಸಕ್ಕೆ ದೀಕ್ಷೆತೆಗೆದುಕೊಂಡಂತೆ ಈ ಸಂಕಲ್ಪವಿರುತ್ತದೆ. ನಮ್ಮ ಉದ್ದೇಶಸಾಧನೆಯಾದಾಗ ಈ ಸಂಕಲ್ಪ ಪೂರ್ಣಗೊಳ್ಳುತ್ತದೆ.

 

ವಿಶೇಷ ಉದ್ದೇಶಗಳಿಗೆ ವಿಶೇಷ ಸಂಕಲ್ಪಮಾಡಬಹುದು. ಹಾಗೆಯೇ ಉದ್ದೇಶದ ಸಾಧನೆಗಾಗಿ ನಿರಂತರ ನಿತ್ಯಸಂಕಲ್ಪವನ್ನೂ ಮಾಡಬಹುದು.

ಬೆಳಿಗ್ಗೆ ಅಥವಾ ದಿನದಲ್ಲಿ ಪ್ರಥಮಬಾರಿಗೆ ಮಾಡುವ ಸಂಕಲ್ಪ ಹೀಗೆ ಮಾಡಬಹುದು.

ಆರಂಭಃ

(ಸ್ಥಳ ವ್ಯತ್ಯಾಸವಿದ್ದಲ್ಲಿ ನಾವಿರುವ ಸ್ಥಳವನ್ನು ಸರಿಯಾಗಿ ಹೇಳಬೇಕು. ಉದಾ ಹರಣೆಗೆ ಕರ್ನಾಟಕದಲ್ಲಿ ಉಡುಪಿಜಿಲ್ಲೆಯವರು ಪರಶುರಾಮಕ್ಷೇತ್ರ ಎಂಬುದಾಗಿ ತಾವಿರುವ ಸ್ಥಳವನ್ನು ಹೇಳಿದರೆ,  ಶಿವಮೊಗ್ಗ ಜಿಲ್ಲೆಯವರು ಗೋಕರ್ಣ ಮಂಡಲೇ ಭಾಸ್ಕರಕ್ಷೇತ್ರೇ ಎಂಬುದಾಗಿ ಹೇಳುತ್ತಾರೆ. ಹೀಗೆ ನಮ್ಮ ಸ್ಥಳೀಯ ಉಪಸ್ಥಿತಿಗನುಗುಣವಾಗಿ ಸ್ಥಳವನ್ನು ಹೇಳಬೇಕು ಇದನ್ನು ಸ್ಥಳೀಯ ಅರ್ಚಕರಿಂದ ಅಥವಾ ತಿಳಿದವರಿಂದ ಕೇಳಿ ತಿಳಿದುಕೊಳ್ಳಬಹುದು)

ಶುಭೇ ಶೋಭನೇ ಮುಹೂರ್ತೇ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಆದ್ಯ ಬ್ರಹ್ಮಣಃ ಧ್ವಿತೀಯಪರಾರ್ಧೇ ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಅಷ್ಟಾವಿಂಶತಿತಮೇ ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭರತಖಂಡೇ ಭಾರತವರ್ಷೇ ಮಹಾಮೇರೋರ್ದಕ್ಷಣೇ ಪಾರ್ಷ್ವೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ (ಗೋಕರ್ಣಮಂಡಲೇ ಗೋರಾಷ್ಟ್ರದೇಶೇ) ಶಾಲಿವಾಹನಶಕೇ ಬೌದ್ಧಾವತಾರೇ (ಭಾಸ್ಕರ / ರಾಮ) ಪರಶುರಾಮ ಕ್ಷೇತ್ರೇ ಅಸ್ಮಿನ್ ವರ್ತಮಾನಕಾಲೇ ವ್ಯವಹಾರಿಕೇ (ಶೋಭಕೃತ್ ನಾಮ) ಸಂವತ್ಸರೇ (ಉತ್ತರ) ಆಯನೇ (ಗ್ರೀಷ್ಮ) ಋತೌ (ಜ್ಯೇಷ್ಠ)ಮಾಸೇ (ಕೃಷ್ಣ)ಪಕ್ಷೇ (ಪಂಚಮಿ) ತಿಥೌ (ಗುರು) ವಾಸರಯುಕ್ತಾಯಾಂ (ಶ್ರವಣ) ನಕ್ಷತ್ರೇ (ಐಂದ್ರ) ಯೋಗೇ (ಕೌಲವ) ಕರಣೇ ಏವಂಗುಣ ವಿಶೇಷಣ ವಿಶಿಷ್ಟಾಯಾಂ (ಪಂಚಮಿ) ಶುಭತಿಥೌ (  ಶ್ರೀ ಅಗ್ನೇಃ ಸನ್ನಿಧೌ /ಶ್ರೀಗುರುಸನ್ನಿಧೌ / ಭಾರತಮಾತಾಯಾಃ/ಶ್ರೀಭಗವಾಧ್ವಜಸ್ಯ ಸನ್ನಿಧೌ ಧರ್ಮನಿಷ್ಠಸಹಪಾಠೀನಾಂ ಸನ್ನಿಧೌ) (ಯಾವುದು ಇದೆಯೋ ಅದನ್ನು ಹೇಳಿ ) ಮಮ ಕುಲ (ಇಷ್ಟ) ದೇವತಾಪ್ರೇರಣಯಾ ಸನಾತನಧರ್ಮಸಂರಕ್ಷಣಾರ್ಥಂ ಭಾರತಮಾತರಂ ವಿಶ್ವಗುರುಸ್ಥಾನೇ ಪುನಃಪ್ರತಿಷ್ಠಾಪನಾರ್ಥಂ ಅಖಂಡ-ಭಾರತ-ಸನಾತನ-ಸ್ವಾಭಿಮಾನ-ಸೇನಾಯಾಃ ಲಕ್ಷ್ಯಂ ಸಾಧಯಿತುಂ ಸಂಘಟನಶಕ್ತಿಸಂಚಯನಾರ್ಥಂ ಮಮ ಕುಟುಂಬಸ್ಯ ಕ್ಷೇಮಾಭ್ಯುದಯಾರ್ಥಂ ತ್ರಿಮೂರ್ತಿರೂಪ ಪರಬ್ರಹ್ಮ ಪ್ರೀತ್ಯರ್ಥಂ – (ಸ್ವನಾಮ) ನಾಮ್ನಾ ಅಹಂ ಯತಾನ್ ಶಕ್ತಿ (ಕುಲದೇವತಾ/ಇಷ್ಟದೇವತಾ) ನಾಮಜಪಂ ಕರಿಷ್ಯೇ. ( ದೇವಪೂಜಾಂ ಕರಿಷ್ಯೇ)

108 ಸಂಕ್ಯೆಯಲ್ಲಿ ಜಪ ಮಾಡುವುದು ಉತ್ತಮ ನಿಮಗನುಕೂಲವಾದಷ್ಟು ಜಪ ಮಾಡಿ. ಸಮಯ ಕಡಿಮೆ ಇದ್ದರೆ ಮೂರು ನಿಮಿಷ ಅಥವಾ ಐದು ನಿಮಿಷ ಹೀಗೆ ಜಪ ಮಾಡಿ.

* ಓಂ ಸ್ವಸ್ತಿ*

ಕರ್ತವ್ಯ ದೀಕ್ಷೆ –

ದೀಪಕ್ಕೆ ಕೈತೋರಿಸಿ ಅಘ್ನಿ ಸಾಕ್ಷಿಯಾಗಿ ದೀಕ್ಷೆ ಸ್ವೀಕರಿಸೋಣ.

 

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|

ಧರ್ಮಸಂಸ್ಥಾಪನಾರ್ಥಾಯ ಕಾರ್ಯಂ ಕುರ್ಮಃ ಕ್ಷಣೇ ಕ್ಷಣೇ ||

ಆಶಯಃ.

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ |

ದೇಶೋsಯಂ ಕ್ಷೊಭ ರಹಿತಃ ಸಜ್ಜನಾಃ ಸಂತು ನಿರ್ಭಯಾಃ ||

ಪ್ರಾರ್ಥನೆ.

ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಮ್ |

ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಪುರುಷೋತ್ತಮ ||

ಭಗವದರ್ಪಣೆ.

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇ ಸ್ವಭಾವಾತ್ |

ಕರೋಮಿ ಯದ್ಯತ್ ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ ||

ಇಷ್ಟದೇವರನ್ನು ಅಥವಾ ಕುಲದೇವರನ್ನು ನೆನೆದು ನಮಸ್ಕರಿಸಿರಿ. 

ಶಾಂತಿ ಮಂತ್ರಃ.

ಸರ್ವೇಭವಂತು ಸುಖಿನಃ ಸರ್ವೇಸಂತು ನಿರಾಮಯಾಃ

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ಧುಃಖಭಾಗ್ ಭವೇತ್.

ಓಂ ಶಾಂತಿಃ ಶಾಂತಿಃ ಶಾಂತಿಃ

 

ತ್ರಿಕಾಲ ಸ್ನಾನ, ತ್ರಿಕಾಲ, ಸಂಧ್ಯಾ, ತ್ರಿಕಾಲ ಪೂಜೆ ಇದು ಭಾರತೀಯರ ಸಂಸ್ಕೃತಿ ಸೂರ್ಯೋದಯದ ಸಮಯ, ಸೂರ್ಯಾಸ್ತದ ಸಮಯ ಹಾಗೂ ಮಧ್ಯಾನ್ಹದ ಸಮಯಗಳನ್ನು ಸಂಧಿಕಾಲಗಳು ಎನ್ನಲಾಗಿದೆ. ಆ ಸಮಯದಲ್ಲಿಯೇ ನಿತ್ಯಾನುಷ್ಠಾನ ಮಾಡಬೇಕು.  ಅನಿವಾರ್ಯ ಸಂದರ್ಭದಲ್ಲಿ ಹಿಂದೆ ಮುಂದೆ ½ ಘಂಟೆ ಹೆಚ್ಚು ಕಡಿಮೆ ಸಮಯವನ್ನು ಹೊಂದಿಸಿಕೊಳ್ಳಬಹುದು.

ನೀರಿನ ಅನುಕೂಲ ಇದ್ದರೆ ಕೈಕಾಲು ಮುಖ ತೊಳೆದು ತಿಲಕಧಾರಣೆ ಮಾಡಿ ಈ ಮುಂದಿನಂತೆ ಸಂಕಲ್ಪಮಾಡಿ.

ಅಸ್ಮಿನ್ ಶುಭ ಅವಸರೇ ಕುಲ (ಇಷ್ಟ) ದೇವತಾಪ್ರೇರಣಯಾ ಸನಾತನಧರ್ಮ ಸಂರಕ್ಷಣಾರ್ಥಂ ಭಾರತಮಾತರಂ ವಿಶ್ವಗುರುಸ್ಥಾನೇ ಪುನಃಪ್ರತಿಷ್ಠಾಪನಾರ್ಥಂ ಅಖಂಡ-ಭಾರತ-ಸನಾತನ-ಸ್ವಾಭಿಮಾನ-ಸೇನಾಯಾಃ ಸಂಘಟನಸ್ಯ ಶಕ್ತಿವರ್ಧನಾರ್ಥಂ (ಧರ್ಮಸಾಧಕ/ಸೈನಿಕ) ದಾಯಿತ್ವನಿರ್ವಹಣೇ ಕ್ಷಾತ್ರತೇಜ ಸಂಚಯನಾರ್ಥಂ ಮಮ ಕುಟುಂಬಸ್ಯ ಕ್ಷೇಮಾಭ್ಯುದಯಾರ್ಥಂ ತ್ರಿಮೂರ್ತಿರೂಪ ಪರಬ್ರಹ್ಮ ಪ್ರೀತ್ಯರ್ಥಂ (ನಟೇಶಃ (ಸ್ವನಾಮ)) ನಾಮ್ನಃ ಅಹಂ ಯಥಾಶಕ್ತಿ ಇಷ್ಟ(ಕುಲ) ದೇವತಾ-ನಾಮ-ಜಪಂ ಕರಿಷ್ಯೇ .

(108 ಸಂಖ್ಯೆಯಲ್ಲಿ ಜಪ ಮಾಡುವುದು ಉತ್ತಮ. ಸಮಯ ಕಡಿಮೆ ಇದ್ದರೆ ಒಂದು ಅಥವಾ ಮೂರು  ಅಥವಾ 5 ನಿಮಿಷ ಜಪ ಮಾಡೋಣ.)

ಓಂ ಸ್ವಸ್ತಿ

ಕರ್ತವ್ಯ ದೀಕ್ಷೆ –

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|

ಧರ್ಮಸಂಸ್ಥಾಪನಾರ್ಥಾಯ ಕಾರ್ಯಂ ಕುರ್ಮಃ ಕ್ಷಣೇ ಕ್ಷಣೇ ||

ಆಶಯಃ.

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ |

ದೇಶೋsಯಂ ಕ್ಷೊಭ ರಹಿತಃ ಸಜ್ಜನಾಃ ಸಂತು ನಿರ್ಭಯಾಃ ||

ಪ್ರಾರ್ಥನೆ.

ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಮ್ |

ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಪುರುಷೋತ್ತಮ ||

ಭಗವದರ್ಪಣೆ.

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |

ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ||

ಇಷ್ಟದೇವರನ್ನು ಅಥವಾ ಕುಲದೇವರನ್ನು ನೆನೆದು ನಮಸ್ಕರಿಸಿರಿ

ಶಾಂತಿ ಮಂತ್ರಃ.

ಸರ್ವೇಭವಂತು ಸುಖಿನಃ ಸರ್ವೇಸಂತು ನಿರಾಮಯಾಃ

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ಧುಃಖಭಾಗ್ ಭವೇತ್.

ಓಂ ಶಾಂತಿಃ ಶಾಂತಿಃ ಶಾಂತಿಃ

 

***

ಇಲ್ಲಿ ಮುಂದಿನ ವೀಡಿಯೋದಲ್ಲಿ ಬನ್ನಂಜೆಗೋವಿಂದಾಚಾರ್ಯರು ಸಂಕಲ್ಪದ ಮಹತ್ವವನ್ನು ಹೇಳಿದ್ದಾರೆ ನೋಡೊಣ

https://www.youtube.com/watch?v=GSdrV20PbC4

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |

ಗುರುಃ ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||

 

ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ|

ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ||

 

ರತ್ನಾಕರಾಧೌತಪದಾಂ ಹಿಮಾಲಯಕಿರೀಟಿನೀಮ್ |

ಬ್ರಹ್ಮರಾಜರ್ಷಿರತ್ನಾಢ್ಯಾಂ ವಂದೇ ಭಾರತಮಾತರಮ್ ||

 

ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |

ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್ ||

 

ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ |

ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ ||

 

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |

ನರ್ಮದೇ ಸಿಂಧು ಕಾವೇರಿ ಜಲೇSಸ್ಮಿನ್ ಸನ್ನಿಧಿಂ ಕುರು || (ಜಲೇ ಅಸ್ಮಿನ್)

 

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ |

ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||

 

ಶ್ರದ್ಧಾಂ ಮೇಧಾಂ ಯಶಃಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಮ್ |

ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಪುರುಷೋತ್ತಮ ||

 

ಅನ್ನಪೂರ್ಣೇ ಸದಾಪೂರ್ಣೇ ಶಂಕರಪ್ರಾಣವಲ್ಲಭೇ |

ಜ್ಞಾನ ಕ್ಷಾತ್ರತ್ವ ಸಿಧ್ಯರ್ಥಂ ಭಿಕ್ಷಾಂ ದೇಹೀ ಚ ಪಾರ್ವತಿ ||

 

ದೀಪಮೂಲೇ ಸ್ಥಿತೋಬ್ರಹ್ಮಾ ದೀಪಮಧ್ಯೇ ಜನಾರ್ದನಃ |

ದೀಪಾಗ್ರೇ ಶಂಕರಃ ಪ್ರೋಕ್ತಃ ಸಂಧ್ಯಾದೀಪ ನಮೋSಸ್ತುತೇ ||

 

ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಮ್ |

ಶಯನೇ ಯಃ ಸ್ಮರೇನ್ನಿತ್ಯಂ ದುಃಸ್ವಪ್ನಸ್ತಸ್ಯ ನಶ್ಯತಿ ||

ABSSS ಬಾಲ ಗುರುಕುಲ ತರಗತಿ

1.ಬಾಲತರಗತಿ 1 ರಿಂದ 6 ತರಗತಿಯ ಮಕ್ಕಳಿಗೆ

2.ಕಿಶೋರ ತರಗತಿ 7 ರಿಂದ 10 ನೇತರಗತಿಗಳವರೆಗೆ

ABSSS ಧರ್ಮಶಾಲಾ ತರಗತಿಯಲ್ಲಿ

ಹದಿನಾರು ವರ್ಷಮೇಲ್ಪಟ್ಟವರೆಲ್ಲರೂ ಭಾಗವಹಿಸಬೇಕು.

“ಶಿಷ್ಟಾಚಾರ ಹಾಗೂ ನಿತ್ಯ ಶ್ಲೋಕಗಳು”

(ತರಗತಿಯಲ್ಲಿ ಮಕ್ಕಳ ಸಂಖ್ಯೆ ಕನಿಷ್ಠ 10 ಗರಿಷ್ಠ 20 ಇರಲಿ)

a) ನೋಂದಣಿ ಮಾಡಿಸಬೇಕು –ಅರ್ಜಿಯಲ್ಲಿ ಎರಡನೇ ನಾಮದಲ್ಲಿ ಜಾತಿಪರಿಚಯದ ಬದಲು ಇನ್ನಿಶಿಯಲ್ (ಮೊದಲ ಲೆಟರ್) ಅಥವಾ ಊರಿನ ಹೆಸರು ಬರೆಯಬೇಕು.

ಶಿಷ್ಟಾಚಾರ ಪಾಠ

1. ಮಯಕ್ಕಿಂತ 5 ನಿಮಿಷ ಮುಂಚಿತವಾಗಿಯೇ ತರಗತಿಗೆ ಬರಬೇಕು.

2. ತರಗತಿಗೆ ಬರುವಾಗ ಮಕ್ಕಳು ಹಾಗೂ ಪಾಲಕರು ಭಾರತೀಯ ಸಂಸ್ಕೃತಿಗೆ ಹೊಂದುವ ಸಭ್ಯ ವಸ್ತ್ರಗಳನ್ನು ಧರಿಸಬೇಕು.

3. ತಮ್ಮ ಹಾಗೂ ಮಕ್ಕಳ ಹೆಸರಿನೊಂದಿಗೆ ಜಾತಿ ಸೂಚಕ ಉಪನಾಮವನ್ನು ಪ್ರದರ್ಶಿಸಬಾರದು.

4. ಮಕ್ಕಳು ಹಾಗೂ ಪಾಲಕರು ತಿಲಕ ಧಾರಣೆ ಮಾಡಿರಬೇಕು.

5. ತಿಲಕ ಧಾರಣೆ ಮಾಡದೇ ಬಂದರೆ ಪ್ರವೇಶದ್ವಾರದಲ್ಲಿ ತಿಲಕಧಾರಣೆಗೆ ಬೇಕಾದ ವ್ಯವಸ್ಥೆ ಮಾಡಿರಬೇಕು ಹಾಗೂ ಅದನ್ನು ಧರಿಸಬೇಕು.

6. ಚಪ್ಪಲಿಗಳನ್ನು ಸರತಿ ಸಾಲಿನಲ್ಲಿ ನೀಟಾಗಿ ಇಡುವುದು. 

7. ವರಾಂಡದಲ್ಲಿ ಎಲ್ಲಿಯಾದರೂ ಕಸ ಕಂಡರೆ ಅದನ್ನು ಎತ್ತಿ ಕಸದಬುಟ್ಟಿಗೆ ಹಾಕಬೇಕು.

8. ಭಾರತಮಾತೆಗೆ, ಗುರುಗಳಿಗೆ ನಮಸ್ಕರಿಸಿ ತರಗತಿಯಲ್ಲಿ ಕುಳಿತುಕೊಳ್ಳಬೇಕು.

9. ತರಗತಿಯಲ್ಲಿ ಮಕ್ಕಳು ಸ್ವಯಂ ಪರಿಚಯ ಮಾಡಿಕೊಳ್ಳಬೇಕು ನೋಂದಣಿಯಲ್ಲಿ ಬರೆದಂತೆ ತಮ್ಮ ಹೆಸರನ್ನು ಉಲ್ಲೇಖಿಸಬೇಕು.

10. ತರಗತಿಯ ಸಿದ್ಧತೆ

1. ತರಗತಿಯ ಸ್ಥಳಶುಭ್ರವಾಗಿರಬೇಕು.

2. ಕುಳಿತುಕೊಳ್ಳಲು ನೆಲದಮೇಲೆ ಜಮಖಾನ ಅಥವಾ ಚಾಪೆ ಇರಬೇಕು

3. ಕುಡಿಯುವ ನೀರಿನ ವ್ಯವಸ್ಥೆ ಇರಬೇಕು

4. ಭಾರತ ಮಾತೆಯ ಫೋಟೋ ಹಾಗೂ ದೀಪ ಎಣ್ಣೆ ಬೆಂಕಿ ಪೊಟ್ಟಣ ಇದ್ದು ದೀಪ ಹಚ್ಚಿರಬೇಕು. ಭಗವಧ್ವಜ ಇದ್ದರೆ ಅದನ್ನೂ ಜೊತೆಗೆ ಬಳಸಬಹುದು.  

5. ತರಗತಿಯಲ್ಲಿ ಆಂಗ್ಲ ಭಾಷೆಯನ್ನು ಹಾಗೂ ಆಂಗ್ಲ ಶಬ್ಧಗಳ ಉಪಯೋಗವನ್ನು ಕಡ್ಡಾಯವಾಗಿ ಮಾಡಬಾರದು. ಮಾತೃ ಭಾಷೆ ಬಳಸಬೇಕು. ಅದರೊಂದಿಗೆ ಸಾಧ್ಯವಾದಷ್ಟು ಸಂಸ್ಕೃತ ಶಬ್ಧಗಳ ಬಳಕೆಯನ್ನು ಹೆಚ್ಚಿಸಬೇಕು.

6. ತರಗತಿಯಲ್ಲಿ ಮಕ್ಕಳಿಗೆ ಕಲಿಸಲು ಬೇಕಾಗುವ ಶ್ಲೋಕ ಸಂಗ್ರಹ, ಪುಸ್ತಕಗಳು, ಆಟಿಕೆಗಳು, ಆಟಗಳು, ವೀರ ಪುರುಷರ ಹಾಗೂ ಪುರಾಣ ಪುರುಷರ, ವರ್ಣ ಚಿತ್ರಗಳು, ಪ್ರೇರಣಾತ್ಮಕ ನೀತಿ ಕಥೆಗಳು, ಸುಭಾಷಿತಗಳು, ಪದ್ಯಗಳು, ಇವುಗಳ ಪೂರ್ವ ಸಿದ್ಧತೆ ಇರಬೇಕು.

7. ಮಕ್ಕಳಿಗೆ ನಿದ್ದೆಬರುವಂತೆ ಪಾಠ ಇರಬಾರದು ಗೀತೆ, ಕಥೆ, ರಸಪ್ರಶ್ನೆ, ಅಭಿನಯ ಗೀತೆ, ಬೌದ್ಧಿಕ ಕ್ರೀಡೆ, ವಿನೋದ ಕ್ರೀಡೆ, ಇಂತಹ ವಿಷಯಗಳನ್ನೂ ಉಪಯೋಗಿಸಿಕೊಂಡು ರಂಜನಾತ್ಮಕವಾಗಿ ಕಲಿಸಬೇಕು.

8. ಮಕ್ಕಳು ತಮಗೆ ಅನುಕೂಲವಾಗುವ ಒಂದು ಆಸನದಲ್ಲಿ ಬೆನ್ನು ನೇರವಾಗಿಸಿ ಕುಳಿತುಕೊಳ್ಳಬೇಕು. ಎಲ್ಲರೂ ಒಂದೇ ಆಸನದಲ್ಲಿರುವುದು ಉತ್ತಮ ( ಸುಖಾಸನ, ಬಾಲಾಸನ, ವಜ್ರಾಸನ, ಪದ್ಮಾಸನ ಇತ್ಯದಿ)

9. ಮಕ್ಕಳೆಲ್ಲರೂ ಬಾಲಗುರುಕುಲ ತರಗತಿಗಳಿಗೆ ಭಾರತೀಯ ಶೈಲಿಯ ವಸ್ತ್ರಗಳನ್ನೇ ಧರಿಸಿ ಬರಬೇಕು.

b)ABSSSಸಂಘಟನೆಯ ಪರಿಚಯ :

ನಾವು ಎಲ್ಲಿ ಇದ್ದೇವೆ?  — ಅಖಂಡ ಭಾರತ ಸನಾತನ ಸ್ವಾಭಿಮಾನ ಸೇನೆಯ ಬಾಲಗುರುಕುಲ ತರಗತಿಯಲ್ಲಿ ಇದ್ದೇವೆ.

ಎಲ್ಲಿದ್ದೇವೆ? 

c) ಹಿಂದೂ ಧರ್ಮದ ಪರಿಚಯ – ಮಕ್ಕಳೇ ನಾವೆಲ್ಲರೂ ಸನಾತನ ಹಿಂದೂ ಧರ್ಮದ ಪ್ರತಿನಿಧಿಗಳು. ಸನಾತನ ಹಿಂದೂ ಧರ್ಮವು ಜಗತ್ತಿನಲ್ಲಿಯೇ ಅತ್ಯಂತ ಪ್ರಾಚೀನವಾದ ಶ್ರೇಷ್ಟವಾದ ಧರ್ಮವಾಗಿದೆ. ಭಾರತ ದೇಶದಲ್ಲಿ ವಿದೇಶೀ ಲೂಟಿಕೋರರ ಚಿಂತನೆಯ ಧರ್ಮಭ್ರಷ್ಟರಾದ ಅನುಯಾಯಿಗಳು ನಮ್ಮಧರ್ಮವನ್ನು ನಾಶಮಾಡಲು ನಿರಂತರವಾಗಿ ಮತಾಂತರ ಹಾಗೂ ಭಯೋತ್ಪಾದನೆಗಳನ್ನು ಮಾಡತ್ತಾ ಪ್ರಯತ್ನಮಾಡುತ್ತಿದ್ದಾರೆ . ಇವರಿಂದ ಹಿಂದೂ ಧರ್ಮವನ್ನು ಭಾರತದೇಶವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನೀವೆಲ್ಲರೂ ಇದಕ್ಕೆ ಸಿದ್ಧರಿದ್ದೀರಾ?

ಹಿಂದು ಎಂದರೆ ಯಾರು ? – ಹಿಂದು ಎಂದರೆ ಹಿಮಾಲಯದಿಂದ ಇಂದು ಸಾಗರದವರೆಗೆ (ಹಿಂದು ಮಹಾಸಾಗರ) ವಾಸಿಸುವ ಜನರೆಂದು ಅರ್ಥ.

d) ಭಾರತ ದೇಶದ ಪರಿಚಯ – ಭಾರತ ದೇಶವು ವಿಶ್ವದ ಅತ್ಯಂತ ಪ್ರಾಚೀನ ಸಂಸ್ಕೃತಿಯನ್ನು ಹೊಂದಿದ ದೇಶ ಭಾ- ಎಂದರೆ ಬೆಳಕು, ಭಾ – ಎಂದರೆ ಜ್ಞಾನ – ರತ ಎಂಬರೆ – ನಿರತರಾಗಿರುವುದು. ಎಂದರ್ಥ. ಭಾರತೀಯರೆಂದರೆ ಜ್ಞಾನಾರ್ಜನೆಯಲ್ಲಿ ನಿರತರಾದವರು ಎಂದು ಅರ್ಥ. ಭಾರತೀಯರೆಂದರೆ ವಿಶ್ವಕ್ಕೆ ಬೆಳಕನ್ನು ನೀಡುವವರೆಂದು ಅರ್ಥ. ಭಾರತವು ಹಿಂದೆ ಕನ್ಯಾಕುಮಾರಿಯಿಂದ ಇಂದಿನ ಇರಾನಿನ ವರೆಗೆ ವಿಸ್ಥರಿಸಿತ್ತು. ಈಗ ಹಲವು ಭೂ ಭಾಗಗಳನ್ನು ಭಾರತ ಕಳೆದುಕೊಂಡಿದೆ. ಮುಂದೆ ಪುನಃ ನಾವು ಕಳೆದುಕೊಂಡಿದ್ದನ್ನು ಗಳಿಸಿಕೊಳ್ಳಬೇಕಿದೆ. ರಾಮನ ಮಗ ಭರತ ಹಾಗೂ ದುಶ್ಯಂತನ ಮಗ ಭರತ ಇವರಿಂದಾಗಿ ಈದೇಶಕ್ಕೆ ಭಾರತ ಎನ್ನುವ ಹೆಸರು ಬಂದಿದೆ. ಎಂದೂ ಹೇಳಲಾಗುತ್ತದೆ.

ಧ್ಯಾನಮುದ್ರೆ ಯಲ್ಲಿ – ಕಣ್ಣುಮುಚ್ಚಿ ನೇರವಾಗಿ ಕುಳಿತುಕೊಳ್ಳುವುದು

ಮೂರುಬಾರಿ ದೀರ್ಘ ಉಸಿರಾಟ – ಪೂರಕ (ಉಸಿರನ್ನು ಒಳಗೆ ತೆಗೆದುಕೊಳ್ಳುವುದು) –       ರೇಚಕ – (ಉಸಿರನ್ನು ಹೊರಗೆ ಬಿಡುವುದು)

ಮೂರುಬಾರಿ ನಿಧಾನವಾಗಿ ಓಂಕಾರ ಹೇಳೋಣ – ಕೈಗಳನ್ನು ಉಜ್ಜಿ ಕಣ್ಣಿನಮೇಲಿಟ್ಟು ನಿಧಾನವಾಗಿ ಕಣ್ಣುಗಳನ್ನು ಬಿಡುವುದು.

10.ಗುರುವಂದನೆ.

 ನಮಗೆ ವಿದ್ಯೆ ಬುದ್ದಿಯನ್ನು ಕಲಿಸಿಕೊಟ್ಟು ಬದುಕಿನಲ್ಲಿ ಯೋಗ್ಯಮಾರ್ಗವನ್ನು ಆಯ್ದುಕೊಳ್ಳಲು ಮಾರ್ಗದರ್ಶನ ತೋರಿಸುವವರು ಗುರುಗಳು,. ಅಂತಹ ಗುರುಗಳನ್ನು ನಾವು ಗೌರವದಿಂದ ಸ್ಮರಿಸಬೇಕು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬುದಾಗಿ ಪುರಂದರದಾಸರು ಗುರುವಿನ ಮಹತ್ವವನ್ನು ಹೇಳಿದ್ದಾರೆ. ಅಜ್ಞಾನದ ಅಂಧಕಾರದಲ್ಲಿರುವವನನ್ನು ಜ್ಞಾನವೆಂಬ ಬೆಳಕಿನಿಂದ ಕಣ್ಣುತೆರೆಸುವವನು ಗುರುವಾಗಿದ್ದಾನೆ. ಗುರುಬಲವಿಲ್ಲದಿದ್ದರೆ ನಾವು ಕೈಗೊಳ್ಳುವ ಯಾವುದೇ ಕೆಲಸವೂ ಶೀಘ್ರವಾಗಿ ಕೈಗೂಡುವುದಿಲ್ಲ. ಭಾರತೀಯ ಜ್ಞಾನಪರಂಪರೆ, ಶೃತಿ ಸ್ಮೃತಿ ಪರಂಪರೆ. ಗುರುಶಿಷ್ಯ ಪರಂಪರೆ. ಸನಾತನ ಭಾರತದಲ್ಲಿ ವಿದ್ಯೆ ಎಂದೂ ಮಾರಾಟದ ವಸ್ತುವಾಗಿರಲಿಲ್ಲ ಗುರುಕುಲ ಪದ್ದತಿಯಲ್ಲಿ ಉಚಿತ ಶಿಕ್ಷಣ ವನ್ನು ನೀಡಲಾಗುತ್ತಿತ್ತು. 8 ವರ್ಷಕ್ಕೆ ಮಗುವನ್ನು ಗುರುಕುಲಕ್ಕೆ ಕಳಿಸುವ ಪದ್ದತಿ ಇತ್ತು ಮುಂದೆ ಹನ್ನೆರಡು ವರ್ಷಗಳು ಗುರುಕುಲದಲ್ಲಿ ಬದುಕಿನ ಸಮಗ್ರ ಶಿಕ್ಷಣವನ್ನು ಪಡೆಯುತ್ತಿತ್ತು.  ಶಿಕ್ಷಣವನ್ನು ಹಣಗಳಿಸುವ ಉದ್ದಿಮೆಯಾಗಿ ಪರಿವರ್ತಿಸಿದ್ದು ಕ್ರಿಶ್ಚಿಯನ್ ಮಿಷನರಿಗಳು. ಬ್ರಿಟಿಷರುಭಾರತಕ್ಕೆ ಬರುವಾಗ ಭಾರತದಲ್ಲಿ ಮೂರುಲಕ್ಷಗಳಿಗಿಂತ ಹೆಚ್ಚು ಗುರುಕುಲಗಳು ಇದ್ದವು ಹಾಗೂ ಸಮಾಜಕ್ಕೆ ಉಚಿತವಾಗಿ ಶಿಕ್ಷಣವನ್ನು ಕೊಡುತ್ತಿದ್ದವು. ಶಿಕ್ಷಣ ಮಾಧ್ಯಮವು ಸಂಸ್ಕೃತ ವಾಗಿತ್ತು. ಈ ಸಮಯದಲ್ಲಿ ಬಾರತ ವಿಶ್ವಗುರುವಾಗಿತ್ತು, ಶ್ರೀಮಂತವಾಗಿತ್ತು, ವಿಶ್ವವ್ಯಾಪಾರದಲ್ಲಿ 35 ಶೇ ಆರ್ಥಕತೆಯು ಭಾರತದ ಭಾಗವಾಗಿತ್ತು. ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತುರತ್ನಗಳನ್ನು ರಸ್ತೆಬದಿಯಲ್ಲಿ ಮಾರುತ್ತಿದ್ದ ಶ್ರೀಮಂತ ಇತಿಹಾಸವನ್ನು ನಾವು ಓದಿದ್ದೇವೆ.  ತಕ್ಷ ಶಿಲೆ ನಲಂದಾ ದಂತಹ ವಿದ್ಯಾಲಯಗಳಲ್ಲಿ 10 ಸಾವಿರಕ್ಕಿಂತ ಹೆಚ್ಚುಜನ ಕಲಿಯುತ್ತಿದ್ದುದು ಇತಿಹಾಸ. ಇಂತಹ ಗುರುಕುಲಗಳನ್ನು ಇಸ್ಲಾಮಿನ ಮತಾಂಧ ಭಯೋತ್ಪಾದಕ ಪಾತಕಿಗಳು ಬೆಂಕಿ ಹಚ್ಚಿ ಸುಟ್ಟು ನಾಶಮಾಡಿದರು.  ಮುಂದೆ ಕ್ರಿಶ್ಚಿಯನ್ನರಾದ ಬ್ರಿಟಿಷರ ಆಕ್ರಮಣದ ಸಮಯದಲ್ಲಿ ಇಂತಹ ಭವ್ಯ ಗುರುಕುಲ ಶಿಕ್ಷಣಪರಂಪರೆಯನ್ನು ಹಳಿತಪ್ಪಿಸಿದ ಹಾಗು ವಿನಾಶಕ್ಕೆ ದೂಡಲಾಯಿತು. ದಾನ ರೂಪದಲ್ಲಿ ನೀಡಲಾಗುತ್ತಿದ್ದ ಜ್ಞಾನವನ್ನು ಇಂಗ್ಲೀಷ್ ಶಾಲೆಗಳ ಮುಖಾಂತರ ದುಡ್ಡಿಗೆ ಮಾರುವ ಪದ್ದತಿಯನ್ನು ತರಲಾಯಿತು. ಇಂದಿಗೂ ಇದೇ ಅನಿಷ್ಟ ಪದ್ದತಿ ಮುಂದುವರಿಯುತ್ತಿದೆ.   https://www.youtube.com/watch?v=VtD2XC8MOhs (ಗುರುಕುಲ ಶಿಕ್ಷಣ ಮಹತ್ವಮಹತ್ವದ ಕುರಿತು ಅಮೃತವರ್ಷಿಣಿ ಅವರ ಮಾತು.)  ಶೃಂಗೇರೀ ಜಗದ್ಗುರುಗಳಾದ ಶ್ರೀ ವಿದ್ಯಾರಣ್ಯರ ಮಾರ್ಗದರ್ಷನದಲ್ಲಿ ಹಕ್ಕ ಬುಕ್ಕ ರಿಂದ ವಿಜಯನಗರ ಸಾಮ್ರಾಜ್ಯವು ನಿರ್ಮಾಣವಾಯಿತು, ಶ್ರೀ ಸಮರ್ಥರಾಮದಾಸರ ಮಾರ್ಗದರ್ಷನದಲ್ಲಿ ಶಿವಾಜಿ ಮಹಾರಾಜರು ಹಿಂದವೀ ಸಾಮ್ರಾಜ್ಯವನ್ನು ಕಟ್ಟಿದರು. ಚಾಣಕ್ಯರಿಂದ ಚಂದ್ರಗುಪ್ತಮೌರ್ಯ ರಾಜನಾದನು. ರಾಮಕೃಷ್ಣಪರಮ ಹಂಸರ ಶಿಷ್ಯ ವಿವೇಕಾನಂದರು ಅಮೇರಿಕಾದಲ್ಲಿ ಭಾರತದ ಹಿಂದೂ ಧರ್ಮದ ಶ್ರೇಷ್ಠತೆಯ ಪತಾಕೆಯನ್ನು ಹಾರಿಸಿದರು. ಹೀಗೆ ಉತ್ತಮಗುರುಗಳ ಪ್ರೇರಣೆಯಿಂದ ಅಗಾಧವಾದುದನ್ನು ಸಾಧಿಸಿದ ಅನೇಕ ಉದಾಹರಣೆ ಭಾರತೀಯ ಇತಿಹಾಸದಲ್ಲಿ ನೋಡಬಹುದಾಗಿದೆ. ನಮ್ಮ ಸನಾತನ ಗುರುಪರಂಪರೆ ಋಷಿಪರಂಪರೆಯಾಗಿದೆ. ಇಂತಹ ಗುರು ಪರಂಪರೆಗೆ ವಂದಿಸೋಣ. ಗುರುಗಳಿಗೆ ವಂದಿಸೋಣ.

1. ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |

ಗುರುಃ ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||

ಗುರುವೇ ಬ್ರಹ್ಮನು ಗುರುವೇ ವಿಷ್ಣುವು ಗುರುವೇ ದೇವನಾದ ಮಹೇಶ್ವರನು ಗುರುವೇ ಕಣ್ಣಿಗೆ ಕಾಣುವ ಪರಬ್ರಹ್ಮನು ಅವರಿಗೆ ಗುರುವಿಗೆ ನಮಸ್ಕಾರವು.

ಗುರುಮಹಾತ್ಮೆಯ ವಿವಿಧ ಶ್ಲೋಕಗಳನ್ನು ಹಾಗೂ ಪದ್ಯಗಳನ್ನು ಸುಭಾಷಿತಗಳನ್ನೂ ಸಂಗ್ರಹಿಸಿರಿ.

11. ಆದಿಪೂಜೆ:

2. ವಿಘ್ನನಿವಾರಕ ಗಣಪತಿಗೆ ವಂದನೆ:

ನಮ್ಮ ಸಂಸ್ಕೃತಿಯಲ್ಲಿ ದೇವರನ್ನು ಅನೇಕ ರೂಪಗಳಲ್ಲಿ ಹಾಗೂ ಬೇರೆ ಬೇರೆ ಹೆಸರುಗಳಲ್ಲಿ ಪೂಜಿಸುವ ಪದ್ದತಿ ಇದೆ. ಇಂತಹ ದೇವರರೂಪಗಳಲ್ಲಿ ಬಹುಜನಪ್ರಿಯವಾದ ಗಣಪತಿರೂಪವೂ ಒಂದು.   ಗಣಪತಿಯನ್ನು ವಿಘ್ನನಿವಾರಕನೆಂದು ಕರೆಯುತ್ತಾರೆ. ಆದುದರಿಂದ ವಿಘ್ನೇಶ ಎನ್ನುವ ಹೆಸರೂ ಇವನಿಗೆ ಇದೆ. ಈಶ ಎಂದರೆ ಒಡೆಯ ಎಂಬುದಾಗಿ ಅರ್ಥ.  ಈತನ ರೂಪಹೇಗಿದೆ? ಆನೆಯ ಮುಖ, ಉದ್ದವಾದ ಸೊಂಡಿಲು, ಅಗಲವಾದ ಕಿವಿ, ಚಿಕ್ಕದಾದ ಕಣ್ಣು, ಒಂದೇ ಹಲ್ಲು, ದೊಡ್ಡಹೊಟ್ಟೆ, ಹೊಟ್ಟೆಗೆ ಕಟ್ಟಿಕೊಂಡ ಹಾವು, ಇವನವಾಹನ ಚಿಕ್ಕ ಇಲಿ. ಗಣಪತಿಯು ವಿಘ್ನನಿವಾರಕನಾದುದರಿಂದ ಮೊದಲು ಗಣಪತಿಯನ್ನು ಸ್ಮರಿಸುವುದು ಸಂಪ್ರದಾಯವಾಗಿ ಬಂದಿದೆ. ಸಂಗೀತಕಾರ್ಯಕ್ರಮಗಳಲ್ಲಿ, ಭರತನಾಟ್ಯಗಳಲ್ಲಿ, ಯಕ್ಷಗಾನಗಳಲ್ಲಿ ಇದೇ ಸಂಪ್ರದಾಯವನ್ನು ಅನುಸರಿಸುತ್ತಾರೆ. ಗಣಪತಿಗೆ ಮೊದಲು ಪೂಜೆ ಸಲ್ಲುತ್ತದೆ. ಮುಂದಿನ ಶ್ಲೋಕದಲ್ಲಿ ಗಣಪತಿಯನ್ನು ಪ್ರಾರ್ಥಿಸಲಾಗಿದೆ.

2. ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ|

ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ||

ತಿರುಗಿದ ಸೊಂಡಿಲುಳ್ಳವನೇ ಬೃಹತ್ ದೇಹವನ್ನು ಹೊಂದಿದವನೇ

ಕೋಟಿ ಸೂರ್ಯರಿಗೆ ಸರಿಯಾದ  ಪ್ರಕಾಶ ಹೊಂದಿದವನೇ |

ವಿಘ್ನನಿವಾರಣೆಯನ್ನು ಮಾಡು ನನಗೆ ದೇವನೇ ಎಲ್ಲಕೆಲಸಗಳಲ್ಲಿ ಯಾವಾಗಲೂ ||

ಗಣೇಶನ ಕುರಿತಾದ ವಿವಿಧ ಶ್ಲೋಕಗಳನ್ನು ಸಂಗ್ರಹಿಸಿರಿ, ಗಣಪತಿಯ ವಿವಿಧ ನಾಮಗಳನ್ನು ಸಂಗ್ರಹಿಸಿರಿ, ಗಣಪತಿಯ ವಿವಿಧ ಕಥೆಗಳನ್ನು ಸಂಗ್ರಹಿಸಿರಿ, ದೇಶದಲ್ಲಿರುವ ಪ್ರಸಿದ್ಧಗಣೇಶ ದೇವಾಲಯಗಳನ್ನು ಪಟ್ಟಿಮಾಡಿರಿ. ಅಲ್ಲಿನ ವಿಶೇಷತೆಗಳನ್ನು ಸಂಗ್ರಹಿಸಿರಿ. ವಿವಿದ ಧೇಶಗಳಲ್ಲಿ ಗಣೇಶನನ್ನು ಏನೆಂದುಕರೆಯಲಾಗಿದೆ ಎಂಬುದಾಗಿ ಪಟ್ಟಿಮಾಡಿರಿ. ವಿವಿಧ ರೂಪದ ಗಣೇಶನ ಚಿತ್ರಗಳನ್ನು ಸಂಗ್ರಹಿಸಿರಿ.

ಭಾರತಮಾತೆಗೆ ನಮನ.

ನಮ್ಮೆಲ್ಲರದೇಶ ಭಾರತ, ನಾವು ಈ ಮಣ್ಣಿನಲ್ಲಿ ಹುಟ್ಟಿದ್ದೇವೆ, ಭಾರತಮಾತೆಯ ಮಣ್ಣೇ ಆಹಾರದ ರೂಪದಲ್ಲಿ ನಮ್ಮ ದೇಹವಾಗಿದೆ. ಮುಂದೆ ನಮ್ಮ ಮರಣಾನಂತರ ಈ ದೇಹ ಪುನಃ ಇಲ್ಲಿಯೇ ಮಣ್ಣಾಗಲಿದೆ. ಆದುದರಿಂದ ನಾವೆಲ್ಲರೂ ಭಾರತಮಾತೆಯ ಮಕ್ಕಳು. ಪ್ರತಿದಿನವೂ ನಾವು ಭಾರತಮಾತೆಗೆ ಕೃತಜ್ಞತೆ ಸಲ್ಲಿಸಬೇಕು. ನಮಸ್ಕರಿಸಬೇಕು, ಆಕೆಯ ರಕ್ಷಣೆ ನಮ್ಮ ಜೀವನದ ಅತಿಮುಖ್ಯಕರ್ತವ್ಯವಾಗಿದೆ.  ಭಾರತಮಾತೆಗೆ ನಮಸ್ಕರಿಸದವರು, ನಮಸ್ಕರಿಸದೆ ಅಪಮಾನಮಾಡುವವರು, ಆಕೆಯಮಕ್ಕಳಲ್ಲ ಅವರು  ದೇಶದ್ರೋಹಿಗಳು. ಈ ದೇಶವನ್ನು ಕೊಳ್ಳೆಹೊಡೆಯಲು ಬಂದ ಲೂಟಿಕೋರರ ಸಂತತಿಯವರು, ದುರ್ಜನರು, ಅಂತಹವರಿಗೆ ಈ ನೆಲದಲ್ಲಿ ಬದುಕುವ ಹಕ್ಕಿಲ್ಲ, ಅಂತಹವರು ವಿಷಸರ್ಪಗಳಿದ್ದಂತೆ, ಅಂತಹವರೇ ಒಟ್ಟಾಗಿ ಭಾರತಮಾತೆಯ ಕಯಗಳನ್ನು ಕಡಿದಿದ್ದಾರೆ. ಇವರು ಉಂಡಮನೆಗೆ ಕನ್ನಹಾಕುವ ದುರ್ಜನರು. ಹಾಗೂ ಅನ್ನದ ರುಣತೀರಿಸದ ಕೃತಘ್ನರು, ಇಂತಹ ಧರ್ಮಭ್ರಷ್ಟರನ್ನು  ಓಲೈಸುವ ಧರ್ಮದ್ರೋಹಿಗಳ ಪಕ್ಷವೂ ನಮ್ಮದೇಶದಲ್ಲಿದೆ. ಇವರೆಲ್ಲರೂ ಹಿಂದೂ ಧರ್ಮದ ನಾಶಕ್ಕಾಗಿ ಸತತ ಪ್ರಯತ್ನಿಸುತ್ತಿದ್ದಾರೆ. ಇಂತಹ ದೇಶದ್ರೋಹಿಗಳಿಂದ ಯಾವಾಗಲೂ ಈ ದೇಶವನ್ನು ನಾವು ರಕ್ಷಿಸಬೇಕು. ಹಿಂದಿನ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು. ವಿಶಾಲ ಭಾರತವನ್ನು ತುಂಡರಿಸಿದವರನ್ನು ಎಂದೂ ಮರೆಯಬಾರದು ಯಾವಾಗಲೂ ನಮ್ಮ ಸುತ್ತ ಮುತ್ತಲಿನ ದೇಶದ್ರೋಹಿಗಳನ್ನು ಗುರುತಿಸಬೇಕು. ಅಂತಹವರ ಬಗ್ಗೆ ಜಾಗ್ರತರಾಗಿದ್ದು ನಾವೆಲ್ಲರೂ ಸೇರಿ ಈದೇಶವನ್ನು ದುರ್ಜನರಿಂದ ರಕ್ಷಿಸಬೇಕು. ವಂದೇಮಾತರಮ್ ಇದು ಭಾರತೀಯರೆಲ್ಲರಪ್ರೇರಣಾ ಮಂತ್ರ. ಸ್ವತಂತ್ರ ಸಂಗ್ರಾಮದ ಐಕ್ಯಮಂತ್ರವಾಗಿತ್ತು. ಭಾರತ್ ಮಾತಾಕೀ ಜೈ ಇದು ಸರ್ವಭಾರತೀಯರ ಪ್ರೇರಣಾ ಘೋಷವಾಗಿದೆ. ಭಾರತಮಾತೆಗೆ ಜೈಕಾರಹಾಕುವಾಗ ಮೈ ರೋಮಾಂಚನ ಗೊಳ್ಳುತ್ತದೆ. ಕಣ್ಣುಗಳು ಕೃತಜ್ಞತೆಯಿಂದ ನೀರಾಗುತ್ತದೆ. ಜೈ ಹಿಂದ್ ಎನ್ನುವುದು ಪರಮವೀರ ಗಂಡುಗಲಿ ನೇತಾಜೀ ಸುಭಾಶ್ಚಂದ್ರ ಭೋಸರು ನೀಡಿದ ಘೋಷಣೆಯಾಗಿದೆ. ಈ ಪವಿತ್ರವಾದ ಭಾರತಭೂಮಿಯಲ್ಲಿ ಹುಟ್ಟಿದ ನಾವೇ ಪುಣ್ಯವಂತರು. ವಿಶ್ವವೇ ಮನೆಯಾದರೆ ಭಾರತವು ಆ ಮನೆಯ ದೇವರಕೋಣೆಯಾಗಿದೆ. ಹಿಂದುಗಳಾದ ನಾವೇ ಅರ್ಚಕರಾಗಿದ್ದೇವೆ. ಇಂತಹ ಭಾರತ ಮಾತೆಗೆ ನಮಿಸೋಣ.

3. ರತ್ನಾಕರಾಧೌತಪದಾಂ ಹಿಮಾಲಯಕಿರೀಟಿನೀಮ್ |

 ಬ್ರಹ್ಮರಾಜರ್ಷಿರತ್ನಾಢ್ಯಾಂ ವಂದೇ ಭಾರತಮಾತರಮ್ ||

ರತ್ನಾಕರ ಎನ್ನುವುದು ಹಿಂದೂ ಮಹಾಸಾಗರದ ಪೌರಾಣಿಕ ಹೆಸರು, ಇಂದುಸಾಗರ, ಸಿಂಧು ಸಾಗರ ಎಂಬುದಾಗಿಯೂ ಈ ಸಮುದ್ರವನ್ನು ಕರೆಯಲಾಗಿದೆ.

ರತ್ನಾಕರನು(ಸಮುದ್ರರಾಜನು) ತೊಳೆಯುತ್ತಿದ್ದಾನೆ ನಿನ್ನ ಪಾದಗಳನ್ನು ಹಿಮಾಲಯಕಿರೀಟವನ್ನು ಹೊಂದಿದವಳೇ|

ಬ್ರಹ್ಮರ್ಷಿ ರಾಜರ್ಷಿಗಳೇ ನಿನ್ನ ಅನರ್ಘ್ಯರತ್ನಗಳು ವಂದಿಸುತ್ತೇನೆ ಭಾರತ    ಮಾತೆಯನ್ನು ||

ಭಾರತದ ನೈಜ ಇತಿಹಾಸವನ್ನು ದೇಶದ್ರೋಹೀ ಎಡಪಂಥೀಯರು ತಿರುಚಿದ್ದಾರೆ. ಜಾತ್ಯಾತೀತರೆಂದು ಕರೆದುಕೊಲ್ಳುವವರೆಲ್ಲರೂ ಇಂತಹ ತಿರುಚಿದ ಇತಿಹಾಸದ ಪಾಲುದಾರರಾಗಿದ್ದಾರೆ ಇಂದು ಶಾಲೆ ಕಾಲೇಜುಗಳ ಇತಿಹಾಸದಲ್ಲಿಯೂ ಇದೇ ಇತಿಹಾಸವನ್ನು ಕಲಿಸಲಾಗುತ್ತಿದೆ. ಈದೇಶವನ್ನು ಲೂಟಿಮಾಡಲುಬಂದ ದರೋಡೆಕೋರರನ್ನು ವೈಭವೀಕರಿಸುವ ಇತಿಹಾಸ ಎಲ್ಲ ಪುಸ್ತಕಗಳಲ್ಲಿಯೂ ಇದೆ.  ಆದುದರಿಂದ ನಾವುಗಳು ಭಾರತೀಯರ ಶೌರ್ಯದ ನೈಜ ಇತಿಹಾಸವನ್ನು  ತಿಳಿಯಬೇಕು. ಭಾರತ ಶಬ್ಧದ ಅರ್ಥವನ್ನು ತಿಳಿಯಿರಿ, ಭಾರತವೆನ್ನುವ ಹೆಸರುಬರಲು ಕಾರಣ ವಾದವರನ್ನು ಸೂಚಿಸಿರಿ.  

13. ಸಂಕಲ್ಪಃ

ಸಂಕಲ್ಪ ಎನ್ನುವುದು ನಮ್ಮ ಪ್ರಾಚೀನರು ನಮಗೆ ಕೊಟ್ಟಂತಹ ವಿಶಿಷ್ಠ ಕೊಡುಗೆ. ನಾವು ಮಾಡುವ ಕೆಲಸ ಪರಿಪೂರ್ಣವಾಗಬೇಕಿದ್ದರೆ ಕೆಲಸ ಆರಂಭಿಸುವ ಮೊದಲು ಧೃಢ ಸಂಕಲ್ಪಮಾಡಬೇಕು. ಈ ಸಂಕಲ್ಪವನ್ನು ನಾವು ಏನನ್ನು, ಎಲ್ಲಿ, ಯಾವಾಗ, ಏಕಾಗಿ? ಮಾಡುತ್ತೇವೆ ಎನ್ನುವುದನ್ನು ಗುರುಹಿರಿಯರ ಸನ್ನಿಧಿಯಲ್ಲಿ ಹೇಳುತ್ತೇವೆ. ಇಂತಹ ಸಂಕಲ್ಪವು ನಮ್ಮನ್ನು ಸದಾಚಾರದ ಕ್ರಿಯಾಮಾರ್ಗದಲ್ಲಿ ನಡೆಯಲು ಸದಾ ಎಚ್ಚರಿಸುತ್ತಿರುತ್ತದೆ. ಸಂಕಲ್ಪ ಶಕ್ತಿಯನ್ನೇ ಆಂಗ್ಲಭಾಷೆಯಲ್ಲಿ ವಿಲ್ ಪವರ್ ಎನ್ನುತ್ತಾರೆ. ನಮ್ಮ ಸಂಕಲ್ಪ ಗಟ್ಟಿಯಾಗಿದ್ದರೆ ನಾವು ಏನನ್ನೂ ಸಾಧಿಸಬಹುದಾಗಿದೆ. ನಮ್ಮ ಸಂಕಲ್ಪವೇ ದುರ್ಬಲವಾಗಿದ್ದರೆ ನಾವು ಅಂದುಕೊಂಡಿದ್ದನ್ನು ಸಾಧಿಸಲಾರೆವು.   

ಸಂಕಲ್ಪಮಾಡುವಾಗ ಸ್ಥಳವನ್ನು ನಾವಿರುವ ಸ್ಥಳವನ್ನು ಹೇಳಬೇಕು ಅದಕ್ಕನುಗುಣವಾಗಿ ಮುಹೂರ್ತದಲ್ಲಿ ಸ್ವಲ್ಪ ಬದಲಾವಣೆ ಆಗುವುದು ಅದನ್ನು ಪಂಚಾಂಗದಿಂದ ತಿಳಿಯಬಹುದು. ಕರ್ನಾಟಕದ ಶಿವಮೊಗ್ಗಜಿಲ್ಲೆಯಲ್ಲಿ ಭಾಸ್ಕರಕ್ಷೇತ್ರ ಎನ್ನುತ್ತಾರೆ, ದಕ್ಷಣ ಕನ್ನಡ ಹಾಗೂ ಉಡುಪಿಜಿಲ್ಲೆಗಳಲ್ಲಿ ಪರಶುರಾಮಕ್ಷೇತ್ರ ಎನ್ನುತ್ತಾರೆ. ನಾವಿರುವ ಸ್ಥಳಕ್ಕನುಗುಣವಾಗಿ ನಾವಿದನ್ನು ಹೇಳಬೇಕು.

ಆರಂಭಃ

ಶುಭೇ ಶೋಭನೇ ಮುಹೂರ್ತೇ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಆದ್ಯ ಬ್ರಹ್ಮಣಃ ಧ್ವಿತೀಯಪರಾರ್ಧೇ ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಅಷ್ಟಾವಿಂಶತಿತಮೇ ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭರತಖಂಡೇ ಭಾರತವರ್ಷೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ (ಗೋಕರ್ಣಮಂಡಲೇ ಗೋರಾಷ್ಟ್ರದೇಶೇ ) ಶಾಲಿವಾಹನಶಕೇ ಬೌದ್ಧಾವತಾರೇ ಭಾಸ್ಕರ / ರಾಮ/ಪರಶುರಾಮ ಕ್ಷೇತ್ರೇ ಅಸ್ಮಿನ್ವರ್ತಮಾನಕಾಲೇ ವ್ಯವಹಾರಿಕೇ ………… ಸಂವತ್ಸರೇ ——- ಆಯನೇ —- ಋತೌ —— ಮಾಸೇ —— ಪಕ್ಷೇ —— ತಿಥೌ ——- ವಾಸರಯುಕ್ತಾಯಾಂ ——– ನಕ್ಷತ್ರ —– ಯೋಗ —– ಕರಣ ಏವಂಗುಣ ವಿಶೇಷಣ ವಿಶಿಷ್ಟಾಯಾಂ —– ಶುಭತಿಥೌ  ಶ್ರೀಗುರುಸನ್ನಿಧೌ/ ಭಾರತಮಾತಾಯಾಃ ಸನ್ನಿಧೌ/ಶ್ರೀಭಗವಧ್ವಜಸ್ಯ ಸನ್ನಿಧೌ ಧರ್ಮನಿಷ್ಠಸಹಪಾಠೀನಾಂ ಸನ್ನಿಧೌ ಮಮ ಕುಲ/ಇಷ್ಟ ದೇವತಾಪ್ರೇರಣಯಾ ಸನಾತನಧರ್ಮಸಂರಕ್ಷಣಾರ್ಥಂ ಭಾರತಮಾತರಂ ವಿಶ್ವಗುರುಸ್ಥಾನೇ ಪುನಃಪ್ರತಿಷ್ಠಾಪನಾರ್ಥಂ ಅಖಂಡ-ಭಾರತ-ಸನಾತನ-ಸ್ವಾಭಿಮಾನ-ಸೇನಾಯಾಃ ಬಾಲಗುರುಕುಲಕಕ್ಷ್ಯಾಯಾಂ/ (ಧರ್ಮ ಶಿಕ್ಷಣ ಕಕ್ಷ್ಯಾಯಾಂ) ನಟೇಶಃ ನಾಮ್ನಾ ಅಹಂ ಆರ್ಯ- ಸನಾತನ – ವೈದಿಕ-ಸಂಸ್ಕಾರ ಶಿಕ್ಷಣಸ್ಯ ಅಧ್ಯಯನಮ್ ಕರಿಷ್ಯೇ. 

(ಮನೆಯಲ್ಲಿ ಬೇರೆ ಬೇರೆ ವಿಷಯದಲ್ಲಿ ಸಂಕಲ್ಪ ಮಾಡುವಾಗ ತಟ್ಟೆ ಸೌಟು ನೀರು    ಇಟ್ಟುಕೊಂಡು ಕುಳಿತುಕೊಂಡು ಕರಿಷ್ಯೇ ಎನ್ನುವಾಗ ಒಂದು ಚಮಚ ನೀರು ಬಿಡಬೇಕು)

14. ದಿನಚರಿ – ನಿತ್ಯ ಶ್ಲೋಕಗಳು:

1. ಕರದರ್ಶನ:

ಮನುಷ್ಯನ ದಿನಚರಿ ಆರಂಭವಾಗುವುದು ಸೂರ್ಯೋದಯದಿಂದ. ಬಹುತೇಕ ಪ್ರಾಣಿಕುಲಕ್ಕೆ ರಾತ್ರಿ ಕಾಲವು ಮಲಗುವ ಸಮಯ ಮತ್ತು ವಿಶ್ರಾಂತಿಯ ಸಮಯವೂ ಆಗಿರುತ್ತದೆ. ರಾತ್ರಿ ಬೇಗನೆ ಮಲಗಿ ಬೆಳಿಗ್ಗೆ ಬೇಗನೆ ಉಷಃಕಾಲದಲ್ಲಿ ಏಳುವುದು ಉತ್ತಮ ಎಂಬುದಾಗಿ ಪ್ರಾಚೀನರು ಹೇಳಿದ್ದಾರೆ. ಹಾಗೆಯೇ ಸೂರ್ಯೋದಯಕ್ಕೆ ಮೊದಲೇ ನಾವು ಏಳುವುದನ್ನು ರೂಢಿಸಿಕೊಳ್ಳಬೇಕು. ಸೂರ್ಯೋದಯದ ನಂತರ ಏಳುವುದು ಆಲಸ್ಯದ ಹಾಗೂ ಅನಿಷ್ಟದ ಸಂಕೇತ ವಾಗಿದೆ. ಬೆಳಿಗ್ಗೆ ಹಾಸಿಗೆಯಿಂದ ಏಳುವುದು ಹೇಗೆ? ಬಲಕೈಯ್ಯನ್ನು ಹಿಂದಕ್ಕೆ ಚಾಚಿ ಬಲ ಮಗ್ಗುಲಿಗೆ ಹೊರಳಿ ಎಡಕೈ ಸಹಾಯದಿಂದ ನಿಧಾನವಾಗಿ ಎದ್ದು ಹಾಸಿಗೆಯಲ್ಲಿ ಕುಳಿತುಕೊಳ್ಳಬೇಕು. ಕೈಗಳನ್ನು ಉಜ್ಜಿ ಕಣ್ಣುಗಳ ಮೇಲಿಟ್ಟು ನಿಧಾನವಾಗಿ ಕಣ್ಣುಗಳನ್ನು ಬಿಡಬೇಕು ಹಾಗೆಯೇ ಹಸ್ತಗಳನ್ನೇ ನೋಡುತ್ತಾ ಕೈಯನ್ನು ಹಿಂದೆಸರಿಸಬೇಕು. ಕಣ್ಣಿನಿಂದ ಕೈಗಳು ಒಂದು ಅಡಿ ದೂರಬಂದಾಗ ಕೈಗಳನ್ನು ನೋಡುತ್ತಾ ಮುಂದಿನ ಶ್ಲೋಕವನ್ನು ಹೇಳಬೇಕು. ಶ್ಲೋಕವನ್ನು ಹೇಳುತ್ತಾ ಸಂಪತ್ತಿನ ದೇವತೆಯಾದ ಲಕ್ಷ್ಮೀಯನ್ನೂ, ಶಕ್ತಿಯ ಪ್ರತೀಕವಾದ ಗೌರಿಯನ್ನೂ ಸ್ಮರಿಸಬೇಕು. 

ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |

ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್ ||

ಕೈಯ್ಯಮುಂಬಾಗದಲ್ಲಿ (ಬೆರಳುಗಳ ತುದಿಯಲ್ಲಿ) ವಾಸಿಸುತ್ತಾಳೆ ಲಕ್ಷ್ಮೀಯು, ಕೈಯ ಮಧ್ಯಭಾಗದಲ್ಲಿ ಸರಸ್ವತಿಯೂ, ಕೈಯ ಬುಡದಲ್ಲಿ ನೆಲೆಸಿದ್ದಾಳೆ ಗೌರಿಯೂ ಪ್ರಾತಃಕಾಲದಲ್ಲಿ ಕೈಯ ದರ್ಶನವು. (ಮಂಗಳಕರವು)

( ಇಲ್ಲಿ ಕೈ ಎಂದರೆ ಅಂಗೈ ಆಗಿದೆ )

2. ಭೂವಂದನೆ.

ಹಿಂದೂ ಸಂಸ್ಕೃತಿಯಲ್ಲಿ ಭೂಮಿಯನ್ನು ತಾಯಿ ಎಂಬುದಾಗಿ ಪೂಜಿಸಲಾಗುತ್ತದೆ.  ಭೂಮಿತಾಯಿ ಎಂಬುದಾಗಿ ನಾವು ಈ ನೆಲವನ್ನು ಗೌರವಿಸುತ್ತೇವೆ. ನಮಗೆ ಜನ್ಮ ನೀಡಿರುವುದು ಬದುಕಿಗೆ ಆಧಾರವಾಗಿರುವುದು ನಮಗೆ ಆಹಾರ ನೀಡುವುದು ಎಲ್ಲವೂ ಇದೇ ಭೂಮಿತಾಯಿ ಆಗಿದ್ದಾಳೆ. ನಮ್ಮದೇಹವು ಈ ಮಣ್ಣಿನಿಂದ ಉತ್ಪತ್ತಿಯಾದ ಅನ್ನದಿಂದಲೇ ಬೆಳೆಯುತ್ತಿದೆ.  ಸಂಪತ್ತಿನ ಅಧಿಪತಿ ಲಕ್ಷ್ಮೀ ಹಾಗೂ ಸಂಪತ್ತಿನ ಆಗರ ಭೂಮಿ ಇವೆರಡನ್ನೂ ವಿಷ್ಣುವಿನ ಹೆಂಡತಿಯರೆಂದು ಹೇಳುತ್ತೇವೆ,  ಶ್ರೀದೇವಿ ಹಾಗೂ ಭೂದೇವಿಯರು ವಿಷ್ಣುವಿನ ಪತ್ನಿಯರೆಂದು ಪುರಾಣಗಳು ಹೇಳುತ್ತವೆ, ಶ್ರೀ ಎಂದರೆ ಲಕ್ಷ್ಮೀ ಎಂದರ್ಥ. ಲಕ್ಷ್ಮಿಯು ಸಂಪತ್ತನ್ನು ನೀಡಿದರೆ ಭೂದೇವಿಯು ನಮಗೆ ಆಶ್ರಯವನ್ನು ಆಹಾರವನ್ನೂ ನೀಡುತ್ತಾಳೆ. ನಮ್ಮಜೀವನದುದ್ದಕ್ಕೂ ಅನ್ನವನ್ನು, ಧಾನ್ಯಗಳನ್ನೂ, ಹಣ್ಣುಹಂಪಲುಗಳನ್ನೂ ನೀಡುತ್ತಾಳೆ. ನಮ್ಮನ್ನು ಹೊತ್ತು ಸಾಕುತ್ತಾಳೆ. ಆದುದರಿಂದ ನಾವು ಭೂಮಿಯನ್ನು ಭೂಮಿತಾಯಿ ಎಂದು ಕರೆಯುತ್ತೇವೆ. ಮಲೆನಾಡು ಪ್ರದೇಶಗಳಲ್ಲಿ ಭೂಮಿ ಹುಣ್ಣಿಮೆಯಂದು ರೈತರು ಹೊಲ ತೋಟಗಳಿಗೆ ಸಂಭ್ರಮದಿಂದ ಹೋಗಿ ಭೂಮಿತಾಯಿಗೆ ಪೂಜೆಸಲ್ಲಿಸುತ್ತಾರೆ. ಹಾಗೂ ಹೊಲದಲ್ಲಿಯೇ  ಕುಟುಂಬ ಸಮೇತರಾಗಿ ಅಂದಿನ ವಿಶೇಷವಾದ ಹಬ್ಬದ ಊಟವನ್ನು ಮಾಡುತ್ತಾರೆ. ಹೀಗೆ ಸಮಾನ ಆಚರಣೆ ಗಳನ್ನು ನಾವು ಸಮಗ್ರಭಾರತದಲ್ಲಿ ನೋಡಬಹುದು. ಇಂತಹ ಭೂಮಿಯಮೇಲೆ ನಾವು ನಿತ್ಯ ಓಡಾಡುತ್ತೇವೆ. ದಿನವೂ ಹಾಸಿಗೆಯಿಂದ ಎದ್ದಕೂಡಲೇ ನಾವು ನಮ್ಮ ಕಾಲಿನಿಂದ ಭೂಮಿತಾಯಿಯನ್ನು ತುಳಿಯುತ್ತೇವೆ. ಆದುದರಿಂದ ಪ್ರತೀ ದಿನವೂ ಬೆಳಿಗ್ಗೆ ಎದ್ದಕೂಡಲೇ ಭೂಮಿಗೆ ಕಾಲಿಡುವ ಮುನ್ನ ಭೂಮಿತಾಯಿಯನ್ನು ನಮಿಸಿ ಅವಳ ಕ್ಷಮೆ ಕೇಳಿ ಅವಳ ಅನುಮತಿಪಡೆದು ನೆಲದಮೇಲೆ ಕಾಲಿಡಬೇಕು. ಇಂತಹಾ ಜನ್ಮಭೂಮಿಯ ರಕ್ಷಣೆಗಾಗಿ ನಾವು ಯಾವಾಗಲೂ ಬದ್ಧರಾಗಿರಬೇಕು. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ಎಂಬುದಾಗಿ ಶ್ರೀರಾಮನು ರಾವಣನ ಸಂಹಾರದ ನಂತರ ಸ್ವರ್ಣಮಯವಾದ ಲಂಕೆಯನ್ನು ಬಿಟ್ಟು ಅಯೋಧ್ಯೆಗೆ ಹಿಂತಿರುಗುವಾಗ ಲಕ್ಷ್ಮಣನಲ್ಲಿ ಹೇಳುತ್ತಾನೆ. ಇಂತಹಾ ತಾಯ್ನಾಡಿಗೆ ನಮಿಸೋಣ.

ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ |

ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ ||

ಸಮುದ್ರವನ್ನೇ ವಸ್ತ್ರವಾಗಿ ಹೊಂದಿರುವ ದೇವಿಯೇ, ಪರ್ವತ ಮಂಡಲಗಳೇ (ಮಂಡಲ=ವೃತ್ತಾಕಾರ)  ಸ್ಥನವಾಗಿ (ಎದೆಯಭಾಗವಾಗಿ) ಹೊಂದಿರುವವಳೇ | ವಿಷ್ಣುವಿನಪತ್ನಿಯೇ ನಮಿಸುತ್ತೇನೆ ನಿನ್ನನ್ನು. ಕಾಲಿನಿಂದ ಮುಟ್ಟುತ್ತಿರುವುದಕ್ಕೆ ಕ್ಷಮೆಹೊಂದಿದವಳಾಗು ನನ್ನಲ್ಲಿ||

3. ಪುಣ್ಯನದಿಗಳಸ್ಮರಣೆ.

  ಭಾರತೀಯರಾದನಮಗೆ ನಮ್ಮಪೂರ್ವಜರು ಶ್ರೇಷ್ಟವಾದ ಸಂಸ್ಕೃತಿಯನ್ನು ನೀಡಿದ್ದಾರೆ. ಇಂತಹ ಸನಾತನ ಹಿಂದೂ ಸಂಸ್ಕೃತಿಯಲ್ಲಿ ನಾವು ನಮ್ಮ ಬದುಕಿಗೆ ಉಪಕಾರವಾಗುವ ಪ್ರತಿಯೊಂದು ವಸ್ತುಗಳನ್ನೂ ಗೌರವ ಆದರಗಳಿಂದ ನೋಡುತ್ತೇವೆ. ಪೂಜಿಸುತ್ತೇವೆ. ಆರಾಧಿಸುತ್ತೇವೆ. ಪ್ರಕೃತಿಪೂಜೆಯು ಹಿಂದುಗಳ ಸಂಸ್ಕೃತಿಗಳಲ್ಲಿ ವೇದಕಾಲದಿಂದ ಅಂದರೆ, ಅನಾದಿಯಿಂದ ಅನುಸರಿಸಿಕೊಂಡುಬಂದ ಪದ್ದತಿಯಾಗಿದೆ . ಹೀಗೆ ನಮ್ಮ ಆರಾಧನೆಯಪದ್ದತಿಗಳಲ್ಲಿ ನದಿಗಳು, ಪರ್ವತಗಳು, ನವಗ್ರಹಗಳೂ, ಸೂರ್ಯಚಂದ್ರರೂ, ಬೆಂಕಿ, ಗಾಳಿ, ನೀರೂ, ಮರಗಳೂ, ಪ್ರಾಣಿಪಕ್ಷಿಗಳೂ ಕೂಡಿವೆ. ನೀರು ಇಲ್ಲದಿದ್ದರೆ ಮನುಷ್ಯನು ಬದುಕುವುದು ಸಾಧ್ಯವಿಲ್ಲ. ಎಲ್ಲಾಪ್ರಾಚೀನ ನಾಗರೀಕತೆಗಳೂ ನದೀತೀರದಲ್ಲಿಯೇ ಜನ್ಮತಳೆದಿವೆ. ಭಾರತದಲ್ಲಿ ಅನೇಕ ಪುಣ್ಯನದಿಗಳು ಹರಿಯುತ್ತವೆ. ಗಂಗಾನದಿಯನ್ನು ನಾವು ಗಂಗಾಮಾತಾ ಎಂಬುದಾಗಿ ಕರೆಯುತ್ತೇವೆ. ತಾಯಿ ಎಂಬುದಾಗಿ ಗೌರವಿಸುತ್ತೇವೆ. ಭಾರತೀಯ ಸನಾತನ ಹಿಂದೂ ಸಂಸ್ಕೃತಿಯ ಉದಯವು ಸರಸ್ವತೀನದಿಯ ತೀರದಲ್ಲಿಯೇ ಆಗಿದೆ. ಇಂದು ಸರಸ್ವತೀ ನದಿಯು ಗುಪ್ತಗಾಮಿನಿಯಾಗಿದ್ದಾಳೆ. ಸರಸ್ವತೀ ನದಿ ಹಿಂದೆ ಇತ್ತೆಂಬುದನ್ನು ಸಂಶೋಧಕರು ಧೃಢಪಡಿಸಿದ್ದಾರೆ. ಈ ನದೀ ತೀರದಲ್ಲಿಯೇ ಜ್ಞಾನನಿಧಿಗಳಾದ ವೇದಗಳ ಉಗಮವಾಗಿದೆ. ಇದರಿಂದಾಗಿಯೇ ನಾವು ಸರಸ್ವತಿಯನ್ನು ವಿದ್ಯಾದೇವತೆ ಎಂದು ಕರೆದಿದ್ದೇವೆ. ನಾವು ಸ್ನಾನಮಾಡುವಾಗ ಇಂತಹ ಕೆಲವು ಶ್ರೇಷ್ಟನದಿಗಳನ್ನು ಸ್ಮರಿಸಿಕೊಂಡು ಎಲ್ಲಾನದಿಗಳನೀರೂ ನಾನು ಸ್ನಾನಮಾಡುವನೀರಿನಲ್ಲಿ ಸೇರಲಿ ಈ ನೀರು ಪವಿತ್ರವಾದ ತೀರ್ಥವಾಗಲೀ ಎಂದು ಪ್ರಾರ್ಥಿಸಿ ನಿರ್ಮಲಮನಸ್ಸಿನಿಂದ ಸ್ನಾನಮಾಡಬೇಕು. ಇದು ನಮ್ಮ ಸಂಸ್ಕೃತಿಯಾಗಿದೆ. ಸ್ನಾನಮಾಡುವುದದಿಂದ ದೇಹಶುದ್ಧಿಯೂ ಹಾಗೂ ಇಂತಹ ಶ್ಲೋಕಪಠನದಿಂದ ಮನಸ್ಸಿನ ಕಲ್ಮಶಗಳ ಶುದ್ಧಿಯೂ ಉಂಟಾಗುವುದು. ಭಾರತವು  ಭೌಗೋಳಿಕವಾಗಿ ಅನೇಕರಾಜರುಗಳಿಂದ ಆಳಲ್ಪಟ್ಟಿದ್ದರೂ, ಸಾಂಸ್ಕೃತಿಕವಾಗಿ ಸಮಗ್ರವಾಗಿತ್ತು. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಭಾಗಗಳು ಏಕಭಾವನೆಯಿಂದ ಆಧ್ಯಾತ್ಮಿಕವಾಗಿ ಬೆಸೆದಿತ್ತು. ಇದರ ಉದಾಹರಣಾರೂಪದಲ್ಲಿ ಈ ನದಿಗಳ ಸ್ಮರಣ ಶ್ಲೋಕವಿದೆ.  ಮುಂದಿನ ಶ್ಲೋಕದಲ್ಲಿ ಅಖಂಡ ಭಾರತದ ಕೆಲವು ಪ್ರಸಿದ್ಧನದಿಗಳ ಹೆಸರುಗಳನ್ನು ಹೇಳಿ ನಾನು ಸ್ನಾನಮಾಡುವ ನೀರಿನಲ್ಲಿ ನಿನ್ನ ಸಾನ್ನಿಧ್ಯ ಇರಲಿ ಎಂಬುದಾಗಿ ಪ್ರಾರ್ಥಿಸಲಾಗಿದೆ.

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |

ನರ್ಮದೇ ಸಿಂಧು ಕಾವೇರಿ ಜಲೇSಸ್ಮಿನ್ ಸನ್ನಿಧಿಂ ಕುರು || (ಜಲೇ ಅಸ್ಮಿನ್)

ಗಂಗೇ ಮತ್ತು ಯಮುನೇ ಮತ್ತು ನಿಶ್ಚಯವಾಗಿ ಗೋದಾವರಿ, ಸರಸ್ವತೀ |

ನರ್ಮದೇ, ಸಿಂಧು, ಕಾವೇರಿ ಈ ನೀರಿನಲ್ಲಿ ಸಾನ್ನಿಧ್ಯ(ಇರುವವಳಾಗಿ)ಮಾಡು||

ಎಲ್ಲಾ ನದಿಗಳ ಉಗಮ ಸ್ಥಾನ ಹಾಗೂ ಹರಿವಿನ ಸ್ಥಾನವನ್ನು ಭೂಪಟದಲ್ಲಿ ಗುರುತಿಸಿರಿ ಹಾಗೂ ಚಿತ್ರಿಸಿರಿ.

ನದಿಯ ಉಗಮ ಸ್ಥಾನ – ಸಮುದ್ರ ಸಂಗಮ – ಕ್ರಮಿಸುವ ರಾಜ್ಯಗಳು – ಒಟ್ಟು ಉದ್ದ.    ನದಿಗಳ ವಿಶೇಷತೆ. ನದಿ ದಡದಲ್ಲಿರುವ ಪ್ರಮುಖ ಪಟ್ಟಣಗಳು, ಐತಿಹಾಸಿಕ ನಗರಗಳು, ಸಂಬಂಧಿಸಿದ ಕಥೆಗಳು ಇವುಗಳ ಪಟ್ಟಿ ಮಾಡಿರಿ. ಓದಿರಿ.

4. ವಿದ್ಯಾಧಿದೇವತೆ ಸರಸ್ವತಿಯ ವಂದನೆ.

ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ವಿಚಾರದಲ್ಲಿಯೂ ದೇವರ ಒಂದೊಂದು ರೂಪವನ್ನು ಪ್ರತಿನಿಧಿಗಳೆಂದು ಪರಿಗಣಿಸುತ್ತೇವೆ. ಹಾಗೆಯೇ ವಿದ್ಯೆಯ ದೇವತೆಯಾಗಿ ಸರಸ್ವತಿಯನ್ನು ಪೂಜಿಸಲಾಗುವುದು.  ಸರಸ್ವತಿಯನ್ನು ಬ್ರಹ್ಮನ ಹೆಂಡತಿಯಾಗಿ ಪರಿಗಣಿಸಲಾಗಿದೆ. ಸರಸ್ವತಿಯ ಅನುಗ್ರಹವಾದವರು ಚತುರಮತಿಗಳೂ, ಬುದ್ದಿವಂತರೂ, ವಿದ್ಯಾವಂತರೂ ಆಗಿ ಸಮಾಜದಲ್ಲಿ ಉನ್ನತ ಗೌರವವನ್ನು ಹೊಂದುತ್ತಾರೆ. ಬಹು ಎತ್ತರಕ್ಕೆ ಬೆಳೆಯುತ್ತಾರೆ. ಆದುದರಿಂದ ನಾವು ಪ್ರತಿದಿನವೂ ಸರಸ್ವತಿಯನ್ನು ವಂದಿಸಬೇಕು. ನವರಾತ್ರಿಯ ಸಂದರ್ಭದಲ್ಲಿ ಹಿಂದುಗಳ ಮನೆಗಳಲ್ಲಿ ಸರಸ್ವತಿ ಪೂಜೆಯನ್ನು ಮಾಡುತ್ತಾರೆ. ಪುಸ್ತಕಗಳನ್ನು ಇಟ್ಟು ಪೂಜಿಸುತ್ತಾರೆ. ನಾವು ಪುಸ್ತಕಗಳನ್ನುಸರಸ್ವತಿಯ ಸ್ವರೂಪ ಎಂಬುದಾಗಿ ಭಾವಿಸುತ್ತೇವೆ. ನಮಗೆ ಪುಸ್ತಕಗಳು ಕೇವಲ ಕಾಗದಗಳಲ್ಲ, ಅವುಗಳನ್ನು ಕಾಲಿನಲ್ಲಿ ತುಳಿಯುವುದು. ಮಲಿನಜಾಗಗಳಲ್ಲಿಡುವುದು. ಅಗೌರವಿಸುವುದು ಎಲ್ಲೆಂದರಲ್ಲಿ ಎಸೆಯುವುದು ಮುಂತಾದವುಗಳನ್ನು ನಾವು ಎಂದಿಗೂ ಮಾಡಬಾರದು. ನಮ್ಮ ಬಾಲ್ಯದಲ್ಲಿ ಸರಕಾರೀ ಶಾಲೆಗಳಲ್ಲಿ ಶುಕ್ರವಾರ ಎಲ್ಲಮಕ್ಕಳೂ ಸೇರಿ ಸರಸ್ವತೀ ಪೂಜೆಯನ್ನುಮಾಡುವುದು ನಡೆಯುತ್ತಿತ್ತು . ಹಿಂದೂ ವಿರೋಧಿ ಜಾತ್ಯಾತೀತಪಕ್ಷಗಳ ಸರಕಾರಗಳು ಕಮ್ಯುನಿಷ್ಟದೇಶದ್ರೋಹಿಗಳ ಪ್ರಭಾವದಿಂದ ಮುಂದೆ ಈ ಪದ್ದತಿಯನ್ನು ನಿಲ್ಲಿಸಿದವು. ಉತ್ತಮ ವಿದ್ಯೆನಮಗೆ ಒಲಿಯಲಿ ಎಂಬುದಾಗಿ ಅಧ್ಯಯನದ  ಮೊದಲು ಸರಸ್ವತೀ ದೇವಿಯನ್ನು ವಂದಿಸೋಣ.

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ |

ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||

ಸರಸ್ವತಿ ನಮಿಸುತ್ತೇನೆ ನಿನಗೆ, ವರವನ್ನು ನೀಡುವವಳೇ, ಇಚ್ಛಿಸುವ ರೂಪವನ್ನು ಹೊಂದಬಲ್ಲವಳೇ, ವಿದ್ಯೆಯ ಆರಂಭವನ್ನು ಮಾಡುತ್ತೇನೆ. ಸಿದ್ಧಿಯು ಆಗಲಿ ನನಗೆ ಯಾವಾಗಲೂ||

ಸರಸ್ವತಿಯ ಕಥೆಗಳನ್ನು ತಿಳಿರಿಯಿರಿ. ಹಾಗೂ ಸರಸ್ವತೀ ನದಿಯಬಗ್ಗೆ ಮತ್ತು ನಾಗರೀಕತೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಿ

5.ಜಗತ್ತಿನ ರಕ್ಷಕನಾದ ಪರಮಾತ್ಮನಲ್ಲಿ ಪ್ರಾರ್ಥನೆ.

ನಾವು ಕೃತಜ್ಞತೆಯನ್ನು ಸಲ್ಲಿಸಲು ದೇವರನ್ನು ಪೂಜಿಸುತ್ತೇವೆ, ನಮಸ್ಕರಿಸುತ್ತೇವೆ, ಪ್ರದಕ್ಷಣೆ ಹಾಕುತ್ತೇವೆ, ಹಲವು ವಿಧಗಳಲ್ಲಿ ಸೇವೆಗಳರೂಪದಲ್ಲಿ, ಹರಕೆಗಳ ರೂಪದಲ್ಲಿ ಭಗವಂತನ ಋಣ ತೀರಿಸುವ ಪ್ರಯತ್ನಮಾಡುತ್ತೇವೆ. ದೇವರನ್ನು ನಮಿಸುವಾಗ ನಾವು  ಹೇಗೆ ಪ್ರಾರ್ಥಿಸಬೇಕೆಂಬುದಾಗಿ ಈ ಶ್ಲೋಕದಲ್ಲಿದೆ. ನಾವು ದೇವರ ಎದುರು ಕೇವಲ ಸಂಪತ್ತನ್ನು ಬೇಡುವ ಭಿಕ್ಷುಕರಾಗಬಾರದು. ನಾವು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು. ಅಂತಹ ವ್ಯಕ್ತಿಗಳಾಗಲು ನಮಗೆ ಏನೆಲ್ಲಾಬೇಕು ಎನ್ನುವುದನ್ನು ನಾವು ದೇವರಲ್ಲಿ ಕೇಳಿಕೊಳ್ಳಬೇಕು. ನಾವು ದೇವರಲ್ಲಿ ಏನು ಬೇಡಬೇಕೆಂಬುದನ್ನು ನಮ್ಮ ಹಿರಿಯರು ಕಲಿಸಿಕೊಟ್ಟಿದ್ದಾರೆ. ಎಷ್ಟುಜನ ದೇವರಿದ್ದಾರೆ? ನಾವು ಯಾರಲ್ಲಿ ಬೇಡಬೇಕು? ಇಂತಹ ಗೊಂದಲ ಯಾರಿಗೂ ಬೇಡ. ದೇವರೊಬ್ಬ ನಾಮ ಹಲವು ಈ ಸೂತ್ರದಂತೆ ನಾವು ನಮಗಿಷ್ಟವಾದ ರೂಪದಲ್ಲಿ ನಾವು ದೇವರಲ್ಲಿ ಪ್ರಾರ್ತೀಸೋಣ ದೇವರನ್ನು ಪೂಜಿಸೋಣ. ಹೊರಗಿನಿಂದ ನಾವು ನೋಡುವ ದೇವರು ನಾವೇ ಕಲ್ಪಸಿಕೊಂಡ, ರೂಪಿಸಿಕೊಂಡ, ವರ್ಣಿಸಿಕೊಂಡ ರೂಪವಾಗಿದೆ. ಅಂತರಂಗದಿಂದ ದೇವರನ್ನು ನೋಡುವ ಪ್ರಯತ್ನಮಾಡೋಣ. ದೇವರಿಗೆ ಇಷ್ಟವಾಗುವ ರೀತಿಯಲ್ಲಿ ಬದುಕೋಣ. ನಿರಂತರವಾಗಿ ದೇವರಿಗೆ ನಮಸ್ಕರಿಸುವ ಮುಂಚೆ ಮುಂದಿನ ಶ್ಲೋಕದಂತೆಯೇ ಪ್ರಾರ್ಥಿಸೊಣ.

ಶ್ರದ್ಧಾಂ ಮೇಧಾಂ ಯಶಃಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಮ್ |

ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಪುರುಷೋತ್ತಮ ||

ಶ್ರದ್ಧೆ, ಸ್ಮರಣಶಕ್ತಿ, ಕೀರ್ತಿ, ವಿಚಾರಶಕ್ತಿ, ವಿದ್ಯೆ, ಬುದ್ಧಿ, ಸಂಪತ್ತು, ಬಲ, ಆಯುಷ್ಯ, ತೇಜಸ್ಸು, ಆರೋಗ್ಯವನ್ನು ನೀಡು ನನಗೆ ಪುರುಷರಲ್ಲಿ ಉತ್ತಮನಾದವನೇ (ಭಗವಂತನೇ )

ಪ್ರಾರ್ಥನಾಸಂಬಂಧಿ ವಿವಿಧ ಶ್ಲೋಕಗಳನ್ನು ಸಂಗ್ರಹಿಸಿರಿ. ಅಭ್ಯಾಸಮಾಡಿರಿ

6. ಭೋಜನಮಂತ್ರಃ. 

ನಾವು ಮಾಡುವ ಪ್ರತೀಕೆಲಸದಲ್ಲಿಯೂ ದೇವರನ್ನು ಸ್ಮರಿಸುತ್ತೇವೆ ಹಾಗೆಯೇ ನಾವು ಮಾಡುವ ಊಟವೂ ದೇಹದಲ್ಲಿ ಜಠರಾಗ್ನಿರೂಪದಲ್ಲಿರುವ ಪರಮಾತ್ಮನಿಗೆ ಆಹುತಿಕೊಡುವ ಹವಿಸ್ಸಾಗಿದೆ. ಆತ್ಮರೂಪದಲ್ಲಿರುವ ಪರಮಾತ್ಮನಿಗೆ ನೀಡುವ ನೈವೇದ್ಯವೇಆಗಿದೆ. ಹೋಮಕ್ಕೆ ಅರ್ಪಿಸುವ ಪವಿತ್ರ ಹವಿಸ್ಸಾಗಿದೆ. ಆದುದರಿಂದ ನಮ್ಮ ಆಹಾರವು ಸಾತ್ವಿಕವಾಗಿರುವಂತೆ ನೋಡಿಕೊಳ್ಳಬೇಕು.  ಭೋಜನ ಪೂರ್ವದಲ್ಲಿ ಭಗವತಿಯನ್ನು ಸ್ಮರಿಸುವುದು ನಮ್ಮ ಹಿರಿಯರು ತೋರಿಸಿದ ದಾರಿ. ನಾವು ಸೇವಿಸುವ ಆಹಾರ ಹಾಗೂ ಆಹಾರಸೇವಿಸುವಾಗ ನಾವು ಚಿಂತಿಸುವ ಚಿಂತನೆ ಇವೆಲ್ಲವೂ ನಮ್ಮ ಬುದ್ಧಿಯಾಗಿ ಬದಲಾಗುವುದು. ನಮ್ಮ ಊಟ ಶ್ರಮಜೀವಿಗಳಾದ ರೈತರ ಬೆವರಿನ ಹನಿಯ ಫಲರೂಪವಾಗಿದೆ.  ಊಟದಲ್ಲಿ ಒಂದು ಅಗುಳನ್ನೂ ಹಾಳುಮಾಡಬಾರದು. ಅಗತ್ಯಕ್ಕಿಂತ ಹೆಚ್ಚು ತಿನ್ನಬಾರದು. ಇದನ್ನು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸಬೇಕು. ಭಾರತೀಯ ಸಂಸ್ಕೃತಿಯಲ್ಲಿ ಊಟವನ್ನೂ ಯಜ್ಞಕ್ಕೆ ಹೋಲಿಸಲಾಗಿದೆ ನಮ್ಮ ಮುಖ್ಯವಾಗಿ ಐದುಬಗೆಯ ಅಗ್ನಿಯು ಇರುವುದಾಗಿ ಹೇಳುತ್ತಾರೆ. ದೇಹದಲ್ಲಿರುವ ಅಗ್ನಿಗೆ ಜಠರಾಗ್ನಿ ಎಂದು ಹೆಸರು. ಇದರಿಂದಾಗಿಯೇ ದೇಹ ಬಿಸಿಯಾಗಿರುತ್ತದೆ. ಈ ಅಗ್ನಿ ಆರಿಹೋದರೆ. ಜೀವ ಹೋಯಿತೆಂಬುದಾಗಿ ಅರ್ಥ. ಇಂತಹ ಅಗ್ನಿಗೆ ನಾವು ಸ್ವೀಕರಿಸುವ ಆಹಾರವು ಆಹುತಿಯಾಗಿದೆ. ಊಟಮಾಡುವ ಸಮಯದಲ್ಲಿ ಭೌತಿಕ ವಿಷಯಗಳನ್ನು ಮಾತನಾಡಬಾರದೆಂಬುದಾಗಿ ಶಾಸ್ತ್ರವು ಹೇಳುತ್ತದೆ. ಭಗವಂತನ ನಾಮಸ್ಮರಣೆಯನ್ನುಮಾಡುವ ಪದ್ದತಿಯು ರೂಢಿಯಲ್ಲಿದೆ. ದಕ್ಷಣ ಭಾರತದಲ್ಲಿ ಊಟದ ಸಮಯದಲ್ಲಿ ಚೂರ್ಣಿಕೆ ಹೇಳುವ ಪದ್ದತಿಯನ್ನು ಸಂಪ್ರದಾಯಸ್ಥರ ಕಾರ್ಯಕ್ರಮಗಳಲ್ಲಿ  ಸಾಮೂಹಿಕ ಭೊಜನ ಸಂದರ್ಭಗಳಲ್ಲಿ ನಾವು ನೋಡಬಹುದು. ಎಲೆಗೆ ಎಲ್ಲಪದಾರ್ಥವನ್ನೂ ಬಡಿಸುವವರೆಗೆ ಕಾಯಬೇಕು. ಆರಂಭದಲ್ಲಿಯೇ ತಿನ್ನಲು ಆರಂಭಿಸಬಾರದು. ಆ ಸಮಯದಲ್ಲಿ ನಮ್ಮ ನಾಲಿಗೆಯು ಲಾಲಾರಸವನ್ನೂ ಸೃಜಿಸುತ್ತದೆ ಇದಕ್ಕೆ ಸಮಯನೀಡಬೇಕು. ಇದು ಜೀರ್ಣಕ್ರಿಯೆಗೆ ಆರೋಗ್ಯದೃಷ್ಟಿಯಿಂದ ಅತೀ ಉಪಯುಕ್ತವಾಗಿದೆ.  ನಂತರ ಕೈಮುಗಿದುಕೊಂಡು ಸಂಪ್ರದಾಯದಂತೆ ದೇವಸ್ಮರಣೆ ಮಾಡಿ ಊಟಮಾಡಬೇಕು. ಹಾಗೆಯೇ ಮುಂದಿನ ಶ್ಲೋಕವನ್ನು ಹೇಳಿ ಅನ್ನಪೂರ್ಣೆಗೆ ವಂದಿಸಿ ಅನ್ನವನ್ನು ಬೆಳೆಯುವ ರೈತರನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿ ಮೌನವಾಗಿ ಊಟವನ್ನು ಮಾಡಬೇಕು. ಉಣ್ಣುವ ಪದಾರ್ಥವನ್ನು ಎಂದಿಗೂ ಎಲೆಯಲ್ಲಿ ಬಿಡಬಾರದು, ಹಾಳುಮಾಡಬಾರದು, ಅಗೌರವ ತೋರಿಸಬಾರದು. ಹಿತಮಿತವಾಗಿ ಆರೋಗ್ಯಕ್ಕೆ ಉತ್ತಮವಾಗಿರುವ (ಸಾತ್ವಿಕ) ಆಹಾರವನ್ನೇ ಅಗತ್ಯವಿದ್ದಷ್ಟೇ ಸ್ವೀಕರಿಸಬೇಕು. ರಾತ್ರಿಯಸಮಯದಲ್ಲಿ ಊಟವನ್ನು ಬೇಗನೆ ಮಾಡಬೇಕು ಹಾಗೂ ಅಲ್ಪಪ್ರಮಾಣದಲ್ಲಿ ಸ್ವೀಕರಿಸಬೇಕು. ನಮ್ಮಲ್ಲಿ ಸಾವಕಾಶವಾಗಿ ಊಟಮಾಡಿ ಎನ್ನುವ ಕ್ರಮವಿದೆ. ಇದರ ಅರ್ಥ ಮೃಷ್ಠಾನ್ನ ಭೋಜನ ಉಚಿತವಾಗಿ ಸಿಕ್ಕಿದೆ ಎಂಬುದಾಗಿ ಕಂಠದವರೆಗೆ ಊಟಮಾಡಬಾರದು. ಹೊಟ್ಟೆಯಲ್ಲಿ ಸ್ವಲ್ಪ ಸ್ಥಳಾವಕಾಶವಿರುವಾಗಲೇ ಊಟವನ್ನು ಮುಗಿಸಿ ಎಂಬುದಾಗಿದೆ. ಸ ಅವಕಾಶ ಎಂದರೆ! ಅವಕಾಶ ಸಹಿತವಾಗಿ ಊಟಮಾಡಿ ಎಂದರ್ಥ. ಆದರೆ ಇಂದು ಇದರ ಅರ್ಥ ಬದಲಾಗಿದ್ದು ಹೊಟ್ಟೆಗೆ ಹಿಡಿಯುವಷ್ಟು ತಿನ್ನಿ ಎಂಬರ್ಥವಾಗಿದೆ. ಯಜಮಾನರು ಹೊಟ್ಟೆತುಂಬಿದಮೇಲೂ ಒತ್ತಾಯವನ್ನು ಮಾಡುವುದನ್ನು ನೋಡಬಹುದು ಇದು ಆರೋಗ್ಯದೃಷ್ಟಿಯಿಂದ ಅತ್ಯಂತ ಅವಿವೇಕದ ವರ್ತನೆಯಾಗಿರುವುದು. ಯಾರಿಗೂ ಊಟದಲ್ಲಿ ಒತ್ತಾಯಮಾಡಬಾರದು ಕಡಿಮೆ ಉಂಡಷ್ಟೂ ಆರೋಗ್ಯ ಉತ್ತಮವಾಗಿರುತ್ತದೆ. ದಿನದಲ್ಲಿ ಒಮ್ಮೆ ಊಟಮಾಡುವವನು ಯೋಗಿ, ಎರಡುಬಾರಿ ಊಟಮಾಡುವವನು ರೋಗಿ, ಮೂರುಬಾರಿ ಊಟಮಾಡುವವನನ್ನು ಎತ್ತಿಕೊಂಡುಹೋಗಿ ಎನ್ನುವುದಾಗಿ ಕನ್ನಡಭಾಷೆಯಲ್ಲಿ ಗಾದೆಮಾತಿದೆ. ಊಟದ ನಂತರ ನೂರುಹೆಜ್ಜೆ ನಡೆಯಬೇಕೆನ್ನುತ್ತಾರೆ. ಇದು ದೇಹದ ಉಷ್ಣತೆಯನ್ನು ಹೆಚ್ಚಿಸಿ ತಿಂದ ಆಹಾರ ಜೀರ್ಣವಾಗಲು ಸಹಾಯವಾಗುತ್ತದೆ. ಭೋಜನದ ಕೊನೆಯಲ್ಲಿ ತಂಪಾದ ಐಸ್ಕ್ರೀಮ್ ತಿನ್ನುವುದು ಈಗ ಪ್ರಚಾರದಲ್ಲಿದೆ. ಈ ಅಭ್ಯಾಸ ವೈದ್ಯಶಾಸ್ತ್ರದ ಪ್ರಕಾರ ಆರೋಗ್ಯಕ್ಕೆ ಉತ್ತಮವಲ್ಲ.

     ಭೋಜನ ಪೂರ್ವದಲ್ಲಿ ಬೇರೆ ಬೇರೆ ಮಂತ್ರಗಳನ್ನೂ ಹೇಳಲಾಗುತ್ತದೆ ನಾವು ಇಂದು ಈ ಮುಂದಿನ ಶ್ಲೋಕವನ್ನು ಕಲಿಯೋಣ. ಶಿವನ ಪ್ರಿಯಪತ್ನಿಯಾದ ಪಾರ್ವತಿಗೆ ಅನ್ನಪೂರ್ಣೆ ಎಂಬುದಾಗಿಯೂ ಹೆಸರಿದೆ. ಆಕೆಯನ್ನು ಸ್ಮರಿಸುವ ಶ್ಲೋಕ. ಮೂಲಶ್ಲೋಕದಲ್ಲಿ ವೈರಾಗ್ಯ ಸಿದ್ಧರ್ಥಂ ಎಂಬುದಾಗಿದೆ, ಇಲ್ಲಿ ಇದನ್ನು ಇಂದಿನ ಅಗತ್ಯಕ್ಕನುಗುಣವಾಗಿ ಕ್ಷಾತ್ರತ್ವ ಸಿದ್ಯರ್ಥಂ ಎಂಬುದಾಗಿ ಬದಲಾಯಿಸಿ ಕೊಂಡಿದ್ದೇವೆ.

ಅನ್ನಪೂರ್ಣೇ ಸದಾಪೂರ್ಣೇ ಶಂಕರಪ್ರಾಣವಲ್ಲಭೇ |

ಜ್ಞಾನ ಕ್ಷಾತ್ರತ್ವ ಸಿಧ್ಯರ್ಥಂ ಭಿಕ್ಷಾಂ ದೇಹೀ ಚ ಪಾರ್ವತಿ ||

ಅನ್ನಪೂರ್ಣೆಯೇ, ಸದಾ ಪೂರ್ಣಳಾಗಿರುವವಳೇ, ಶಿವನ ಪ್ರಾಣಪ್ರಿಯಳಾಗಿರುವವಳೇ | ಜ್ಞಾನ ಮತ್ತು (ಚ) ಶೌರ್ಯವು ಸಿದ್ಧಿಸುವಂತೆ ಊಟವನ್ನು ನೀಡು (ನನಗೆ) ಪಾರ್ವತಿಯೆ ||

ಭೋಜನ ಸಂಬಂಧೀ ಇತರ ಶ್ಲೋಕಗಳನ್ನು ಸಂಗ್ರಹಿಸಿರಿ. ಅಭ್ಯಾಸಮಾಡಿರಿ. ಆಯುರ್ವೇದರೀತ್ಯಾ ಸಾತ್ವಕ, ಪೌಷ್ಟಿಕ, ಆಹಾರಸ್ವೀಕರಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ, ಮಕ್ಕಳನ್ನು ಜಂಕ್ ಫುಡ್ ಹಾಗೂ ಬೀದಿಬದಿ ಸಿದ್ಧಪಡಿಸಿದ ತಿಂಡಿಗಳಿಂದ ದೂರವಿಡಿ, ಆರೋಗ್ಯವಂತ ಸಮಾಜನಿರ್ಮಿಸಲು ಕಾರಣರಾಗಿ.  ವೈದ್ಯರು ಹಾಗೂ ಆಸ್ಪತ್ರೆಗಳಿಂದ ದೂರವಿರಿ. ಸಣ್ಣಪುಟ್ಟ ವಿಚಾರಗಳಿಗೆ ಮನೆಮದ್ದುಗಳನ್ನು ಮಾಡಿ. ನಿತ್ಯಸಮಸ್ಯೆಗಳಿಗೆ ಸಮೀಪದ ಪಂಡಿತರು ಅಥವಾ ಆಯುರ್ವೇದ ವೈದ್ಯರುಗಳನ್ನೆ ಅವಲಂಭಿಸಿ.

7. ಸಂಧ್ಯಾದೀಪ ನಮನ.

ಸಂಜೆ ಆದ ಕೂಡಲೇ ದೇವರಿಗೆ ದೀಪವನ್ನು ಹಚ್ಛುತ್ತೇವೆ. ಇದು ನಮ್ಮ ಸಂಸ್ಕೃತಿ.  ಹಿಂದೆ ವಿದ್ಯತ್ ದೀಪದ ವ್ಯವಸ್ಥೆ ಇರಲಿಲ್ಲ. ಆಗ ಸಂಜೆಯಾದಕೂಡಲೇ ಮನೆಗಳಲ್ಲಿ ದೀಪಹಚ್ಚಿ ಕೈಮುಗಿಯುವ ಅಭ್ಯಾಸ ಇತ್ತು. ಇಂದು ನಾವು ಸಂಜೆಯಾದಾಗ ಮನೆಗಳಲ್ಲಿ ದೀಪಹಚ್ಚಿ ಕೈಮುಗಿಯುವ ಅಭ್ಯಾಸವನ್ನು ಮುಂದುವರಿಸಬೇಕು.  ದೀಪವು ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ನೀಡುತ್ತದೆ ಅದೇರೀತಿ ವಿದ್ಯೆಯೆಂಬ ದೀಪವು ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವನ್ನು ಹರಡುತ್ತದೆ. ಪ್ರತಿದಿನವೂ ಮುಸ್ಸಂಜೆಯಹೊತ್ತಿನಲ್ಲಿ ಮನೆಯಲ್ಲಿ ಮತ್ತು ಕೆಲಸಮಾಡುವ ಸ್ಥಳದಲ್ಲಿ ದೇವರ ಎದುರು ದೀಪವನ್ನು ಹಚ್ಚಬೇಕು, ಹಾಗೆಯೇ ಹಲವೆಡೆ ತುಳಸೀಕಟ್ಟೆಯ ಎದುರು ದೀಪವನ್ನು ಹಚ್ಚುವ ಪದ್ದತಿ ಇದೆ. ಇಂತಹ ದೀಪಬೆಳಗುವ ಸಮಯದಲ್ಲಿ ಮುಂದಿನ ಶ್ಲೋಕವನ್ನು ಹೇಳಿ ದೀಪವನ್ನು ಹಚ್ಚಿ ನಂತರ ಉರಿಯುತ್ತಿರುವ ದೀಪಕ್ಕೆ ನಮಸ್ಕರಿಸಬೇಕು. ದೀಪದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರ ಇವರುಗಳು ಇದ್ದಾರೆ ಎನ್ನುವುದು ನಮ್ಮೆಲ್ಲರ ನಂಬಿಕೆ. ದೀಪದಗುಣ ಸದಾ ಮೇಲ್ಮುಖವಾಗಿ ಉರಿಯುವುದು (ಊರ್ಧ್ವ ಜ್ವಲನಮ್) ಗಾಳಿಗೆ ಅತ್ತಿಂದತ್ತ ಹೊಯ್ದಾಡಿದರೂ ಸಾಮಾನ್ಯ ಸ್ಥಿತಿಯಲ್ಲಿ ಪ್ರಶಾಂತವಾಗಿ ಮೇಲ್ಮುಖವಾಗಿ ಉರಿಯುತ್ತಿರುತ್ತದೆ. ಹೀಗೆ ಮೇಲ್ಮುಖವಾಗಿ ಉರಿಯುವುದು ಹಾಗೂ ಪ್ರಕಾಶದ ಪ್ರಭೆಯನ್ನು ಬೀರುವುದು ದೀಪದ ಸ್ವಭಾವ. ದೀಪ ಕೊಂಡೊಯ್ದಲ್ಲೆಲ್ಲಾ ಅಂಧಕಾರ ದೂರವಾಗುತ್ತದೆ. ಸರ್ವವನ್ನೂ ಸುಟ್ಟು ಭಸ್ಮ ಮಾಡುವುದು ಬೆಂಕಿಯ ಗುಣ. ಇಲ್ಲಿ ನಮಗೆ ಒಂದು ನೀತಿ ಇದೆ ನಮ್ಮ ಸ್ವಭಾವವೂ ದೀಪದಂತಿರಬೇಕು. ನಮ್ಮಸುತ್ತಲೂ ಜ್ಞಾನದ ಪ್ರಭೆ ಇರಬೇಕು ನಾವು ಹೊದಲ್ಲೆಲ್ಲಾ ಸುಜ್ಞಾನವನ್ನು ಪಸರಿಸಬೇಕು. ಯಾವುದೇ ಅಡ್ಡಿ ಆತಂಕಗಳು ನಮ್ಮನ್ನು ವಿಚಲಿತಗೊಳಿಸಿದರೂ ನಾವು ನಮ್ಮ ಸ್ವಭಾವವನ್ನು ಬಿಡಬಾರದು ಉರಿಯುತ್ತಿರಿವ ದೀಪದಂತೆ ನಾವು ಬೆಳಗುತ್ತಲೇ ಇರಬೇಕು ಹಾಗೂ ಮೇಲ್ಮುಖವಾಗಿ ಬೆಳೆಯುತ್ತಲೇ ಇರಬೇಕು. ನಮ್ಮ ಸ್ವಭಾವದೊಂದಿಗಿರುವ ಅವಗುಣಗಳನ್ನು ಅಗ್ನಿಯಂತೆ ಸುಟ್ಟುಹಾಕಬೇಕು. ಅನ್ಯಾಯಗಳಿಗೆ ಬೆಂಕಿಯಾಗಬೇಕು. ನಮ್ಮ ಆತ್ಮೋನ್ನತಿಯನ್ನು ರಾಷ್ಟ್ರೋನ್ನತಿಯನ್ನೂ ನೆನೆಯುತ್ತಾ ಮುಂದಿನ ಶ್ಲೋಕದೊಂದಿಗೆ ದೀಪವನ್ನು ಹಚ್ಚಿ ದೀಪಕ್ಕೆ ಕೈ ಮುಗಿಯೋಣ.

ದೀಪಮೂಲೇ ಸ್ಥಿತೋಬ್ರಹ್ಮಾ ದೀಪಮಧ್ಯೇ ಜನಾರ್ದನಃ |

ದೀಪಾಗ್ರೇ ಶಂಕರಃ ಪ್ರೋಕ್ತಃ ಸಂಧ್ಯಾದೀಪ ನಮೋSಸ್ತುತೇ ||

ದೀಪದ ಬುಡದಲ್ಲಿ ನೆಲೆಸಿದ್ದಾನೆ ಬ್ರಹ್ಮ, ದೀಪದ ಮಧ್ಯದಲ್ಲಿ ವಿಷ್ಣುವು, ದೀಪದ ತುದಿಯಲ್ಲಿ ಶಿವನು ಹೇಳಲ್ಪಟ್ಟಿದ್ದಾರೆ, ಸಂಜೆಯಕಾಲದದೀಪವೇ ನಮಿಸುತ್ತೇನೆ ನಿನಗೆ

ದೀಪ ಹಚ್ಚುವಾಗ ಹಾಗೂ ಮಂಗಳಆರತಿ ಮಾಡುವಾಗ ಹೇಳುವ ಇತರ ಶ್ಲೋಕಗಳನ್ನು ಹಾಗೂ ಹಾಡುಗಳನ್ನು ಸಂಗ್ರಹಿಸಿರಿ.

8.ಶಯನ ಶ್ಲೋಕಃ.

ನಿದ್ರೆಯು ಪ್ರತಿಯೊಂದು ಜಿವಕ್ಕೂ ಅನಿವಾರ್ಯವಾಗಿದೆ ಇದು ಬಳಲಿದ ದೇಹಕ್ಕೆ ವಿಶ್ರಾಂತಿಯನ್ನು ಕೊಡುತ್ತದೆ. ನಾವು ಬೆಳಗ್ಗಿನಿಂದ ಸಂಜೆಯವರೆಗೆ ಅನೇಕ ಘಟನೆಗಳನ್ನು ನೋಡಿರುತ್ತೇವೆ ಇಂತಹ ಉತ್ತಮ ಹಾಗೂ ದುರ್ಘಟನೆಗಳಿಂದ ನಮ್ಮ ಮನಸ್ಸು ವಿಚಲಿತವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ನಮಗೆ ಸರಿಯಾಗಿ ನಿದ್ದೆ ಬರುವುದಿಲ್ಲ. ನಿದ್ದೆಯಲ್ಲಿಯೂ ದುಃಸ್ವಪ್ನಗಳು ಬೀಳುತ್ತವೆ. ಇವುಗಳ ನಿವಾರಣೆಗಾಗಿ ಪ್ರಶಾಂತವಾದಮನಸ್ಸನ್ನು ಹೊಂದಲು ನಾವು ಮಲಗುವಾಗ ಉತ್ತಮ ವಿಷಯಗಳನ್ನು ಚಿಂತಿಸುತ್ತಾಮಲಗಬೇಕು. ನಿದ್ರಾಭಂಗದ ಆಲೋಚನೆಗಳನ್ನೂ ತೊಂದರೆಗಳನ್ನು ಹೋಗಲಾಡಿಸಿ ಉತ್ತಮವಾಗಿ ನಿದ್ದೆಮಾಡಲು ಪುನಃ ನಾವು ದೇವರನ್ನು ಸ್ಮರಿಸುತ್ತೇವೆ. ಮಲಗುವಮೊದಲು ಮುಂದಿನ ಶ್ಲೋಕವನ್ನು ಹೇಳಿ ಅದರಲ್ಲಿರುವ ದುಷ್ಟಶಕ್ತಿಗಳನ್ನು ನಾಶಮಾಡುವ ದೇವರುಗಳನ್ನು ಸ್ಮರಿಸಿ ನಿಶ್ಚಿಂತೆಯಿಂದ ಮಲಗಬೇಕು. ಈ ಮುಂದಿನ ದೇವರುಗಳ ಹೆಸರುಕೇಳಿದರೇ ದುಷ್ಟ ಶಕ್ತಿಗಳು ಹೆದರಿಕೆಯಿಂದ ಹತ್ತಿರ ಸುಳಿಯುವುದಿಲ್ಲ. ದೇವರುಗಳು ನಮ್ಮನ್ನು ದುಷ್ಟಶಕ್ತಿಗಳಿಂದ ಸದಾ ರಕ್ಷಿಸುತ್ತಾರೆ.  ಇಂತಹ ಶ್ಲೋಕಪಠನದಿಂದ ನಮಗೆ ಭಯವಿಲ್ಲದೆ ಉತ್ತಮವಾಗಿ ನಿದ್ದೆ ಬರುತ್ತದೆ.

ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಮ್ |

ಶಯನೇ ಯಃ ಸ್ಮರೇನ್ನಿತ್ಯಂ ದುಃಸ್ವಪ್ನಸ್ತಸ್ಯ ನಶ್ಯತಿ ||

ರಾಮನನ್ನು, ಷಣ್ಮುಖನನ್ನು, ಆಂಜನೇಯನನ್ನು, ಗರುಡನನ್ನು, ಭೀಮನನ್ನು, ಹಾಸಿಗೆಯಲ್ಲಿ ಯಾರು ಸ್ಮರಿಸುತ್ತಾರೋ ಪ್ರತಿದಿನವೂ ಅವನ ಕೆಟ್ಟಸ್ವಪ್ನಗಳು ನಾಶವಾಗುತ್ತವೆ ||

ಇದು ನಮ್ಮ ಸಾಮಾನ್ಯ ದಿನಚರಿಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರವಾಗಿದೆ ಇವುಗಳನ್ನು ನಾವು ಅನುಸರಿಸಬೇಕು ಹಾಗೂ ನಮ್ಮ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಪ್ರತಿಯೊಬ್ಬರೂ ಕಲಿಸಬೇಕು. ಈ ಶ್ಲೋಕಗಳನ್ನು ಮಕ್ಕಳಿಗೆ ಬಾಯಿಪಾಠಮಾಡಿಸಬೇಕು.  ಇದರೊಂದಿಗೆ ದೇವರ ಕಥೆಗಳನ್ನು, ಪುರಾಣ ಕಥೆಗಳನ್ನು, ರಾಮಾಯಣ ಮಹಾಭಾರತದ ಕಥೆಗಳನ್ನೂ, ವಿರರ ಕಥೆಗಳನ್ನೂ, ನೀತಿಕಥೆಗಳನ್ನೂ ಹೇಳಬೇಕು, ಹಾಗೆಯೇ ಸಂಸ್ಕೃತದ ಶಬ್ಧಗಳನ್ನೂ, ಲಘು ಭಜನೆಗಳನ್ನೂ, ಭಗವದ್ಗೀತೆಯ ಶ್ಲೋಕಗಳನ್ನೂ, ಸುಭಾಷಿತ ಗಳನ್ನೂ ಇತರ ದೇವ ದೇವತೆಗಳ ಶ್ಲೋಕಗಳನ್ನೂ ಕಲಿಸಬೇಕು, ದೇವಸ್ಥಾನಗಳಿಗೆ, ದೈವಸ್ಥಾನಗಳಿಗೆ, ಕರೆದುಕೊಂಡು ಹೋಗಿ ಪೂಜೆ ಉತ್ಸವಾದಿಗಳನ್ನು ತೋರಿಸಬೇಕು. ಹಿಂದೂ ಸಂಸ್ಕೃತಿ ಸಂಸ್ಕಾರದ ಪರಿಚಯಮಾಡಬೇಕು. ನಮ್ಮ ದೇವಾಲಯಗಳನ್ನು ಸಂಸ್ಕೃತಿಗಳನ್ನು ನಾಶಮಾಡಿರುವ ಹಾಗೂ ನಾಶಮಾಡುತ್ತಿರುವ ಧರ್ಮಭ್ರಷ್ಟರು ಹಾಗೂ ಧರ್ಮದ್ರೋಹಿಗಳ ಇತಿಹಾಸವನ್ನೂ ತಿಳಿಸಿ ಅಂತಹವರಿಂದ ಎಚ್ಚರವಾಗಿರುವಂತೆ ತಿಳುವಳಿಕೆ ಮೂಡಿಸಬೇಕು.

ಹಿಂದುಗಳ ಪವಿತ್ರಗ್ರಂಥ ಭಗವದ್ಗೀತೆಯನ್ನು ಪರಿಚಯಮಾಡಿಸಬೇಕು, ಕಲಿಸಬೇಕು. ನಾವೆಲ್ಲರೂ ಆಯ್ದ ಇಲ್ಲಿ ಕೊಟ್ಟಿರುವ ಮುಖ್ಯವಾದ ಕನಿಷ್ಠ 36 ಶ್ಲೋಕಗಳನ್ನಾದರೂ ಕಲಿಯುವ ಸಂಕಲ್ಪಮಾಡಬೇಕಿದೆ. 

-ಶ್ರೀಜಿ

ಜೈ ಹಿಂದ್ ಜೈ ಶ್ರೀರಾಮ್

1. ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |

ಗುರುಃ ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||

ಗುರುವು ಎಲ್ಲಕ್ಕಿಂತ ಹೆಚ್ಚಿನವರಾಗಿದ್ದಾರೆ ಅಂತಹ ಗುರುವಿಗೆ ನಮಿಸುತ್ತೇನೆಂಬುದು ಶ್ಲೋಕದ ಅರ್ಥ. ನಮಗೆ ಸತ್ಯದ ಅರಿವು ಮೂಡಿಸುವವರು ಗುರುಗಳು.

ಗುರುವು ಬ್ರಹ್ಮ, ಗುರುವು ವಿಷ್ಣು, ಗುರುವು ಈಶ್ವರ, ಗುರುವು ಕಣ್ಣೆದುರಿರುವ ದೇವರು ಆದುದರಿಂದ ಶ್ರೀ ಗುರುವಿಗೆ ನಮಿಸುತ್ತೇನೆ.

ಶಬ್ಧಾರ್ಥಃ-ಅನ್ವಯಃ

ಗುರುಃ – ಗುರುವು, ರ್ಬ್ರಹ್ಮಾ- ಬ್ರಹ್ಮನು,  ಗುರುಃ-ಗುರುವು, ರ್ವಿಷ್ಣುಃ-ವಿಷ್ಣುವು, ಗುರುಃ-ಗುರುವು, ರ್ದೇವಃ-ದೇವನಾದ, ಮಹೇಶ್ವರಃ-ಈಶ್ವರನು, ಗುರುಃ-ಗುರುವು, ಸ ಅಕ್ಷಾತ್-ಕಣ್ಣೆದುರಿರುವ,  ಪರಂಬ್ರಹ್ಮ-ಪರಮಾತ್ಮನು, ತಸ್ಮೈ-ಅವರಿಗೆ, ಶ್ರೀಗುರವೇ-ಶ್ರೀಗುರುವಿಗೆ, ನಮಃ-ನಮಸ್ಕಾರಗಳು.

2. ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ|

ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ||

ಸಾರಾಂಶಃ

ಯಾವುದೇಕೆಲಸವು ನಿರ್ವಿಘ್ನವಾಗಿ ನೆರವೇರಲೆಂಬುದಾಗಿ ಗಣಪತಿ ಸ್ತುತಿಸುತ್ತೇವೆ. ಈ ಶ್ಲೋಕದಲ್ಲಿ ಗಣಪತಿಯ ಆಕಾರವನ್ನು ವರ್ಣಿಸಿ ನಮಿಸಲಾಗಿದೆ.

ತಿರುಗಿದ ಸೊಂಡಿಲುಳ್ಳವನೇ ಬೃಹತ್ ದೇಹವನ್ನು ಹೊಂದಿದವನೇ  ಕೋಟಿ ಸೂರ್ಯರಿಗೆ ಸರಿಯಾದ  ಪ್ರಕಾಶ ಹೊಂದಿದವನೇ |

ವಿಘ್ನನಿವಾರಣೆಯನ್ನು ಮಾಡು ನನಗೆ ದೇವನೇ ಎಲ್ಲಕೆಲಸಗಳಲ್ಲಿ ಯಾವಾಗಲೂ ||

ಶಬ್ಧಾರ್ಥಃ – ಅನ್ವಯಃ

ವಕ್ರ-ತಿರುಗಿದ, ತುಂಡ-ಸೊಂಡಿಲು, ಮಹಾ-ದೊಡ್ಡದಾರ, ಕಾಯ-ದೇಹ, ಕೋಟಿಸೂರ್ಯ-ಕೋಟಿಸೂರ್ಯರಿಗೆ, ಸಮ-ಸರಿಯಾದ, ಪ್ರಭ-ಬೆಳಕು, (ಉಳ್ಳವನೇ) ನಿರ್ವಿಘ್ನಂ-ತೊಂದರೆ ಉಂಟಾಗದಂತೆ, ಕುರು-ಮಾಡು, ಮೇ-ನನಗೆ, ದೇವ-ದೇವನೇ, ಸರ್ವ-ಎಲ್ಲಾ, ಕಾರ್ಯೇಷು-ಕೆಲಸಗಳಲ್ಲಿ, ಸರ್ವದಾ-ಯಾವಾಗಲೂ.

3. ರತ್ನಾಕರಾಧೌತಪದಾಂ ಹಿಮಾಲಯಕಿರೀಟಿನೀಮ್ |

ಬ್ರಹ್ಮರಾಜರ್ಷಿರತ್ನಾಢ್ಯಾಂ ವಂದೇ ಭಾರತಮಾತರಮ್ ||

 ಸಾರಾಂಶಃ

ರತ್ನಾಕರ ಎಂದರೆ ಹಿಂದೂಮಹಾಸಾಗರದ ಪೌರಾಣಿಕ ಹೆಸರಾಗಿದೆ. ಸಮುದ್ರರಾಜನು ಬಾರತಮಾತೆಯ ಕಾಲುಗಳನ್ನು ತೊಳೆಯುತ್ತಿದ್ದಾನೆ, ಹಿಮಾಲಯ ಪರ್ವತವೇ ಆಕೆಯ ಕಿರೀಟವಾಗಿದೆ. ಜ್ಞಾನಿಗಳೂ ವೀರರೂ ಆದಂತ ಬ್ರಹ್ಮರ್ಷಿಗಳೂ ರಾಜರ್ಷಿಗಳೂ ಅಕೆಯ ಆಭರಣಗಳಾಗಿದ್ದಾರೆ. ಅಂತಹ ಭಾರತಮಾತೆಗೆ ನಮಿಸುತ್ತೇನೆ ಎಂಬುದಾಗಿ ಅರ್ಥ.

ಶಬ್ದಾರ್ಥಃ

ರತ್ನಾಕರಃ-ರತ್ನಾಕರನು, ಧೌತ-ತೊಳೆಯುತ್ತಾನೆ, ಪದಾಂ-ಕಾಲನ್ನು, ಹಿಮಾಲಯಃ-ಹಿಮಾಲಯ ಪರ್ವತ, ಕಿರೀಟಿನೀಮ್-ಕಿರೀಟವಾಗಿ ಹೊಂದಿದವಳೇ, ಬ್ರಹ್ಮರ್ಷಿ – ಬ್ರಹ್ಮಜ್ಞಾನವನ್ನು ಹೊಂದಿದ ಋಷಿಮುನಿಗಳು, ರಾಜರ್ಷಿ-ಧರ್ಮಮಾರ್ಗದಲ್ಲಿ ಪ್ರಜಾಪಾಲನೆ ಮಾಡುವ ರಾಜ ಮಹಾರಾಜರುಗಳು. ರತ್ನಾಢ್ಯಾಂ-ರತ್ನಗಳಾಗಿ ಇರುವ,  ಭಾರತಮಾತರಮ್-ಭಾರತಮಾತೆಯನ್ನು, ವಂದೇ – ನಮಿಸುತ್ತೇನೆ.

4. ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |

ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್ ||

ಸಾರಾಂಶಃ

ಕೈಯ್ಯಮುಂಬಾಗದಲ್ಲಿ (ಬೆರಳುಗಳ ತುದಿಯಲ್ಲಿ) ವಾಸಿಸುತ್ತಾಳೆ ಲಕ್ಷ್ಮೀಯು ಕೈಯ ಮಧ್ಯಭಾಗದಲ್ಲಿ ಸರಸ್ವತಿಯೂ ಕೈಯ ಬುಡದಲ್ಲಿ ನೆಲೆಸಿದ್ದಾಳೆ ಗೌರಿಯೂ ಪ್ರಾತಃಕಾಲದಲ್ಲಿ ಕೈಯ ದರ್ಶನವು. (ಮಂಗಳಕರವು)

ಶಬ್ಧಾರ್ಥಃ

ಕರಸ್ಯ-ಕೈಯ, ಅಗ್ರೇ-ಮುಂಬಾಗದಲ್ಲಿ,  ವಸತೇ-ವಾಸಿಸುತ್ತಾಳೆ, ಲಕ್ಷ್ಮೀಃ-ಲಕ್ಷ್ಮಿಯು,  ಕರಸ್ಯ-ಕೈಯ್ಯ, ಮಧ್ಯೇ-ಮಧ್ಯಭಾಗದಲ್ಲಿ, ಸರಸ್ವತೀ-ಸರಸ್ವತಿಯು, ಕರಸ್ಯ-ಕೈಯ್ಯ, ಮೂಲೇ-ಬುಡದಲ್ಲಿ, ಸ್ಥಿತಾ-ನೆಲೆಸಿದ್ದಾಳೆ, ಗೌರೀ-ಗೌರಿಯು, ಪ್ರಭಾತೇ-ಬೆಳಿಗ್ಗೆ, ಕರಸ್ಯ-ಕೈಯ್ಯ, ದರ್ಶನಮ್-ಕಾಣಿಸಿಕೊಳ್ಳುವಿಕೆಯು. ( ಶ್ರೆಯಸ್ಕರವೆಂಬುದು ಭಾವ)

5.ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ |

ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ ||

ಸಾರಾಂಶಃ

ಭೂಮಿತಾಯಿಗೆ ಕೃತಜ್ಞತೆ ಸಲ್ಲಿಸುವುದು. ಸಮುದ್ರವನ್ನೇ ವಸ್ತ್ರವಾಗಿ ಹೊಂದಿರುವ ದೇವಿಯೇ ಪರ್ವತವೇ ಗೋಲಾಕಾರದ ಸ್ಥನವಾಗಿ ಹೊಂದಿರುವವಳೇ | ವಿಷ್ಣುವಿನ ಪತ್ನಿಯೇ ನಮಿಸುತ್ತೇನೆ ನಿನ್ನನ್ನು. ಕಾಲಿನಿಂದ ಮುಟ್ಟುತ್ತಿರುವುದಕ್ಕೆ ಕ್ಷಮೆಹೊಂದಿದವಳಾಗು ನನ್ನಲ್ಲಿ||

ಶಬ್ಧಾರ್ಥಃ

ಸಮುದ್ರ – ಸಮುದ್ರ, ವಸನೇ-ವಸ್ತ್ರದಲ್ಲಿ, ದೇವಿ-ದೇವಿಯೇ, ಪರ್ವತಃ-ಪರ್ವತವು, ಸ್ತನ-ಎದೆ(ಮೊಲೆ), ಮಂಡಲೇ-ಗೋಲಾಕಾರವಾಗಿ ಉಳ್ಳ, ವಿಷ್ಣುಃ-ವಿಷ್ಣುವಿನ, ಪತ್ನಿ-ಹೆಂಡತಿ, ನಮಃ-ನಮಿಸುತ್ತೇನೆ, ತುಭ್ಯಂ-ನಿನಗೆ, ಪಾದ-ಕಾಲು, ಸ್ಪರ್ಶಂ – ಸ್ಪರ್ಶಿಸುತ್ತಿದ್ದೇನೆ, ಕ್ಷಮಸ್ವ-ಕ್ಷಮಿಸು, ಮೇ-ನನಗೆ.

ಅನ್ವಯಃ

ಸಮುದ್ರ – ಸಮುದ್ರ, ವಸನೇ-ವಸ್ತ್ರದಲ್ಲಿ, ದೇವಿ-ದೇವಿಯೇ, ಪರ್ವತಃ-ಪರ್ವತವು, ಮಂಡಲೇ-ಗೋಲಾಕಾರವಾಗಿ ಉಳ್ಳ, ಸ್ತನ-ಎದೆಯಾಗಿ (ಮೊಲೆ), ವಿಷ್ಣುಃ-ವಿಷ್ಣುವಿನ, ಪತ್ನಿ-ಹೆಂಡತಿ, ತುಭ್ಯಂ-ನಿನಗೆ, ನಮಃ-ನಮಿಸುತ್ತೇನೆ, ಪಾದ-ಕಾಲು, ಸ್ಪರ್ಶಂ – ಸ್ಪರ್ಶಿಸುತ್ತಿದ್ದೇನೆ, ಕ್ಷಮಸ್ವ-ಕ್ಷಮಿಸು, ಮೇ-ನನಗೆ.

6. ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |

ನರ್ಮದೇ ಸಿಂಧು ಕಾವೇರಿ ಜಲೇsಸ್ಮಿನ್ ಸನ್ನಿಧಿಂ ಕುರು || (ಜಲೇ ಅಸ್ಮಿನ್)

ಸಾರಾಂಶಃ

ಗಂಗೇ ಮತ್ತು ಯಮುನೇ ಮತ್ತು ನಿಶ್ಚಯವಾಗಿ ಗೋದಾವರಿ ಸರಸ್ವತಿ |

ನರ್ಮದೇ ಸಿಂಧು ಕಾವೇರಿ ಈ ನೀರಿನಲ್ಲಿ ಸಾನ್ನಿಧ್ಯ(ಇರುವವಳಾಗಿ)ಮಾಡು||

ಶಬ್ಧಾರ್ಥಃ

ಗಂಗೇ-ಗಂಗೆಯೇ, ಚ-ಮತ್ತು, ಯಮುನೇ-ಯಮುನೆಯೇ, ಚ-ಮತ್ತು, ಏವ-ಖಂಡಿತವಾಗಿ, ಗೋದಾವರಿ-ಗೋದಾವರಿಯೇ, ಸರಸ್ವತಿ-ಸರವಸ್ವತಿಯೇ, ನರ್ಮದೇ – ನರ್ಮದೆಯೇ, ಸಿಂಧು-ಸಿಂಧು, ಕಾವೇರಿ-ಕಾವೇರಿಯೇ, ಜಲೇS-ಜಲದಲ್ಲಿ, ಅಸ್ಮಿನ್-ಈ, ಸನ್ನಿಧಿಂ-ಸಾನಿಧ್ಯವನ್ನು,  ಕುರು-ಮಾಡು,

7. ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ |

ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||

ಸಾರಾಂಶಃ

ಸರಸ್ವತಿ ನಮಿಸುತ್ತೇನೆ ನಿನಗೆ ವರವನ್ನು ನೀಡುವವಳೇ ಆಸೆಗಳರೂಪವನ್ನು ಹೊಂದಿದವಳೇ ವಿದ್ಯೆಯ ಆರಂಭವನ್ನು ಮಾಡುತ್ತೇನೆ ಸಿದ್ಧಿಯು ಆಗಲಿ ನನಗೆ ಯಾವಾಗಲೂ||

ಶಬ್ಧಾರ್ಥಃ

ಸರಸ್ವತಿ-ಸರಸ್ವತಿಯೇ, ನಮಃ-ನಮಿಸುತ್ತೇನೆ, ಸ್ತುಭ್ಯಂ-ನಿನ್ನನ್ನು, ವರದೇ-ವರವನ್ನು ನೀಡುವವಳೇ, ಕಾಮ-ಆಸೆಗಳ, ರೂಪಿಣಿ-ರೂಪವಂತೆಯೇ, ವಿದ್ಯಾರಂಭಂ-ವಿದ್ಯೆಯ ಆರಂಭವನ್ನು, ಕರಿಷ್ಯಾಮಿ-ಮಾಡುತ್ತೇನೆ, ಸಿದ್ಧಿಃ-ಸಿದ್ಧಿಯು, ಭವತು-ಉಂಟಾಗಲಿ, ಮೇ-ನನಗೆ, ಸದಾ-ಯಾವಗಲೂ,

8.ಶ್ರದ್ಧಾಂ ಮೇಧಾಂ ಯಶಃಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಮ್ |

 ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಪುರುಷೋತ್ತಮ ||

ಸಾರಾಂಶಃ

ದೇವರಲ್ಲಿ ಏನನ್ನು ಬೇಡಬೇಕೆಂಬುದು ಈ ಶ್ಲೋಕದಲ್ಲಿ ಹೇಳಲ್ಪಟ್ಟಿದೆ.

ಶ್ರದ್ಧೆ, ಸ್ಮರಣಶಕ್ತಿ, ಕೀರ್ತಿ, ವಿಚಾರಶಕ್ತಿ, ವಿದ್ಯೆ, ಬುದ್ಧಿ, ಸಂಪತ್ತು, ಬಲ, ಆಯುಷ್ಯ, ತೇಜಸ್ಸು, ಆರೋಗ್ಯವನ್ನು ನೀಡು ನನಗೆ ಪುರುಷರಲ್ಲಿ ಉತ್ತಮನಾದವನೇ (ಭಗವಂತನೇ )

ಶಬ್ಧಾರ್ಥಃ

ಶ್ರದ್ಧಾಂ-ಶ್ರದ್ಧೆಯನ್ನು, ಮೇಧಾಂ-ಸ್ಮರಣ ಶಕ್ತಿಯನ್ನು,  ಯಶಃ-ಕೀರ್ತಿಯನ್ನು, ಪ್ರಜ್ಞಾಂ-ವಿಚಾರಶಕ್ತಿಯನ್ನು, ವಿದ್ಯಾಂ-ವಿದ್ಯೆಯನ್ನು, ಬುದ್ಧಿಂ-ಬುದ್ಧಿಯನ್ನು, ಶ್ರಿಯಂ-ಸಂಪತ್ತನ್ನು, ಬಲಮ್-ಶಕ್ತಿಯನ್ನು, ಆಯುಷ್ಯಂ-ಆಯಸ್ಸನ್ನು, ತೇಜಃ-ತೇಜಸ್ಸು,  ಆರೋಗ್ಯಂ-ಆರೋಗ್ಯವನ್ನು, ದೇಹಿ-ನೀಡು, ಮೇ-ನನಗೆ, ಪುರುಷೋತ್ತಮ – ಪುರುಷರಲ್ಲಿ ಉತ್ತಮನಾದವನೇ. (ಪರಮಾತ್ಮನೇ)

9. ಅನ್ನಪೂರ್ಣೇ ಸದಾಪೂರ್ಣೇ ಶಂಕರಪ್ರಾಣವಲ್ಲಭೇ |

ಜ್ಞಾನ ಕ್ಷಾತ್ರತ್ವ ಸಿಧ್ಯರ್ಥಂ ಭಿಕ್ಷಾಂ ದೇಹೀ ಚ ಪಾರ್ವತಿ ||

ಸಾರಾಂಶಃ

ಊಟಮಾಡುವಾಗ ದೇವರನ್ನು ಸ್ಮರಿಸುವ ಶ್ಲೋಕ, ಅನ್ನಪೂರ್ಣೆಯೇ ಸದಾ ಪೂರ್ಣಳಾಗಿರುವವಳೇ ಶಿವನ ಪ್ರಾಣಪ್ರಿಯಳಾಗಿರುವವಳೇ | ಜ್ಞಾನ ಮತ್ತು (ಚ) ಕ್ಷಾತ್ರವು ಸಿದ್ಧಿಸುವಂತೆ ಊಟವನ್ನು ನೀಡು (ನನಗೆ) ಪಾರ್ವತಿಯೆ ||

ಶಬ್ಧಾರ್ಥಃ

ಅನ್ನಪೂರ್ಣೇ-ಅನ್ನಪೂರ್ಣೆಯೇ, ಸದಾ-ಯಾವಾಗಲೂ, ಪೂರ್ಣೇ-ಪೂರ್ಣಳಾಗಿರುವವಳೇ, ಶಂಕರಸ್ಯ-ಶಿವನ, ಪ್ರಾಣವಲ್ಲಭೇ-ಪ್ರಾಣಪ್ರಿಯಳೇ,

ಜ್ಞಾನ-ಜ್ಞಾನ, ಚ-ಮತ್ತು, ಕ್ಷಾತ್ರತ್ವ-ಕ್ಷಾತ್ರಗುಣ, ಸಿಧ್ಯರ್ಥಂ-ಸಿದ್ಧಿಗಾಗಿ, ಭಿಕ್ಷಾಂ-ಊಟವನ್ನು, ದೇಹೀ-ನೀಡು, ಪಾರ್ವತಿ-ಪರ್ವತದಲ್ಲಿ ಸಂಚರಿಸುವವಳೇ, (ಪರ್ವತರಾಯನ ಮಗಳೇ)

10. ದೀಪಮೂಲೇ ಸ್ಥಿತೋಬ್ರಹ್ಮಾ ದೀಪಮಧ್ಯೇ ಜನಾರ್ದನಃ |

ದೀಪಾಗ್ರೇ ಶಂಕರಃ ಪ್ರೋಕ್ತಃ ಸಂಧ್ಯಾದೀಪ ನಮೋSಸ್ತುತೇ ||

ಮುಸ್ಸಂಜೆಯ ಸಮಯದಲ್ಲಿ ದೀಪಹಚ್ಚುವಾಗ ಹೇಳುವ ಶ್ಲೋಕ, ಉರಿಯುತ್ತಿರುವದೀಪದಲ್ಲಿ ತ್ರಿಮೂರ್ತಿಗಳೂ ಇದ್ದಾರೆಂಬುದಾಗಿ ಅನುಸಂಧಾನ ಮಾಡುವುದು. ದೀಪದ ಬುಡದಲ್ಲಿ ನೆಲೆಸಿದ್ದಾನೆ ಬ್ರಹ್ಮ ದೀಪದ ಮಧ್ಯದಲ್ಲಿ ವಿಷ್ಣುವು ದೀಪದ ತುದಿಯಲ್ಲಿ ಶಿವನು ಹೇಳಲ್ಪಟ್ಟಿದ್ದಾರೆ ಸಂಜೆಯಕಾಲದದೀಪವೇ ನಮಿಸುತ್ತೇನೆ ನಿನಗೆ ||

ಶಬ್ದಾರ್ಥಃ

ದೀಪಸ್ಯ-ದೀಪದ, ಮೂಲೇ-ಬುಡದಲ್ಲಿ, ಸ್ಥಿತಃ-ಇದ್ದಾನೆ, ಬ್ರಹ್ಮಾ-ಬ್ರಹ್ಮನು,  ದೀಪಸ್ಯ-ದೀಪದ, ಮಧ್ಯೇ-ಮಧ್ಯದಲ್ಲಿ, ಜನಾರ್ದನಃ-ಜನಾರ್ಧನನು, ದೀಪಸ್ಯ-ದೀಪದ, ಅಗ್ರೇ-ತುದಿಯಲ್ಲಿ, ಶಂಕರಃ-ಶಿವನು, ಪ್ರೋಕ್ತಃ-ಹೇಳಲಾಗಿದೆ, ಸಂಧ್ಯಾ-ಸಂಜೆಯ, ದೀಪ-ದೀಪವೇ, ನಮಃ-ನಮಸ್ಕಾರವು, ಅಸ್ತು-ಆಗಲಿ, ತೇ-ನಿನಗೆ.

11. ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಮ್ |

ಶಯನೇ ಯಃ ಸ್ಮರೇನ್ನಿತ್ಯಂ ದುಃಸ್ವಪ್ನಸ್ತಸ್ಯ ನಶ್ಯತಿ ||

ಸಾರಾಂಶಃ

ಸಂಜೆ ಮಲಗುವ ಮೊದಲು ಹಾಸಿಗೆಯಲ್ಲಿ ಹೇಳುವ ಶ್ಲೋಕ ಇದಾಗಿದೆ. ರಾಮನನ್ನು ಷಣ್ಮುಖನನ್ನು ಆಂಜನೇಯನನ್ನು ಗರುಡನನ್ನು ಭೀಮನನ್ನು ಹಾಸಿಗೆಯಲ್ಲಿ ಯಾರು ಸ್ಮರಿಸುತ್ತಾರೋ ಪ್ರತಿದಿನವೂ ಅವನ ಕೆಟ್ಟಸ್ವಪ್ನಗಳು ನಾಶವಾಗುತ್ತವೆ ||

ಶ್ಲೋಕಾರ್ಥಃ

ರಾಮಂ-ರಾಮನನ್ನು, ಸ್ಕಂದಂ-ಷಣ್ಮುಖನನ್ನು, ಹನೂಮಂತಂ-ಆಮಜನೇಯನನ್ನು, ವೈನತೇಯಂ-ಗರುಡನನ್ನು, ವೃಕೋದರಮ್-ಭೀಮನನ್ನು,

ಶಯನೇ-ಹಾಸಿಗೆಯಲ್ಲಿ, ಯಃ-ಯಾರು, ಸ್ಮರೇತ್-ಸ್ಮರಿಸುತ್ತಾರೋ, ನಿತ್ಯಂ-ಪ್ರತಿದಿನವೂ, ತಸ್ಯ-ಅವನ, ದುಃಸ್ವಪ್ನಃ-ಕೆಟ್ಟ ಕನಸುಗಳು, ನಶ್ಯತಿ-ನಾಶವಾಗುತ್ತವೆ.

1. ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ವಯ್ಯುಪಪದ್ಯತೇ|

ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ ||2-3||

2. ದೇಹಿನೋsಸ್ಮಿನ್ ಯಥಾದೇಹೇ ಕೌಮಾರಂ ಯೌವನಂ ಜರಾ|

ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ||2-13||

3. ಜಾತಸ್ಯ ಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯ ಚ|

ತಸ್ಮಾದಪರಿಹಾರ್ಯೇsರ್ಥೇ ನ ತ್ವಂ ಶೋಚಿತುಮರ್ಹಸಿ||2-27||

­4. ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ|

ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ||2-38||

5. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|

ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ||2-47||

6. ಕ್ರೋಧಾದ್ ಭವತಿ ಸಮ್ಮೋಹಃ ಸಮ್ಮೋಹಾತ್ಸ್ಮೃತಿವಿಭ್ರಮಃ|

ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯತಿ||2-63||

7. ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ|

ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ||2-69||

8. ಅನ್ನಾದ್ ಭವನ್ತಿ ಭೂತಾನಿ ಪರ್ಜನ್ಯಾದನ್ನಸಮ್ಭವಃ|

ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ||3-14|| 

9. ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ|

ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ||3-21||

10. ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮಚೇತಸಾ|

ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತಜ್ವರಃ||3-30||

11. ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾತ್|

ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ||3-35||

12. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|

ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್||4-7||

13. ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|

ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||4-8||

14. ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ|

ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್||4-13||

15. ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ|

ತತ್ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ||4-38||

16. ಅಜ್ಞಶ್ಚಾಶ್ರದ್ಧಧಾನಶ್ಚ ಸಂಶಯಾತ್ಮಾ ವಿನಶ್ಯತಿ|

ನಾಯಂ ಲೋಕೋsಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ||4-40||

17. ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ|

ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಷಿನಃ||5-18||

18. ಉದ್ದರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್|

ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ||6-5||

19. ಭೂಮಿರಾಪೋsನಲೋ ವಾಯುಃ ಖಂ ಮನೋ ಬುದ್ಧಿರೇವ ಚ|

ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ||7-4||

20. ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ|

ಮಾಯಯಾಪಹೃತಜ್ಞಾನಾ ಆಸುರಂ ಭಾವಮಾಶ್ರಿತಾಃ||7-15||

21. ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ|

ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್||7-21||

22. ಯೇsಪ್ಯನ್ಯದೇವತಾ ಭಕ್ತಾ ಯಜಂತೇ ಶ್ರದ್ಧಯಾನ್ವಿತಾಃ|

ತೇsಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್||9-23||

23. ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ|

ತದಹಂ ಭಕ್ತ್ಯುಪಹೃತಮ,ಶ್ನಾಮಿ ಪ್ರಯತಾತ್ಮನಃ||9-26||

24. ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್|

ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಮ್||9-27||

25. ಶ್ರೇಯೋ ಹಿ ಜ್ಞಾನಮಭ್ಯಾಸಾಜ್ಞಾನಾದ್ಧ್ಯಾನಂ ವಿಶಿಷ್ಯತೇ|

ಧ್ಯಾನಾತ್ ಕರ್ಮಫಲತ್ಯಾಗಸ್ತ್ಯಾಗಾಚ್ಛಾಂತಿರನಂತರಮ್||12-12||

26. ದ್ವೌಭೂತಸರ್ಗೌ ಲೋಕೇsಸ್ಮಿನ್ದೈವ ಆಸುರ ಏವ ಚ|

ದೈವೋ ವಿಸ್ತರಶಃ ಪ್ರೊಕ್ತ ಆಸುರಂ ಪಾರ್ಥ ಮೇ ಶೃಣು||16-6||

27. ದೇವದ್ವಿಜಗುರುಪ್ರಾಜ್ಞಪೂಜನಂ ಶೌಚಮಾರ್ಜವಮ್|

ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ||17-14||

28. ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್|

ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ||17-15||

29. ಮನಃಪ್ರಸಾದಃ ಸೌಮ್ಯತ್ವಂ ಮೌನಮಾತ್ಮವಿನಿಗ್ರಹಃ|

ಭಾವಸಂಶುದ್ಧಿರಿತ್ಯೇತತ್ತಪೋ ಮಾನಸಮುಚ್ಯತೇ||17-16||

30. ದಾತವ್ಯಮಿತಿ ಯದ್ದಾನಂ ದೀಯತೇsನುಪಕಾರಿಣೇ|

ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ವಿಕ ಸ್ಮೃತಮ್||17-20||

31. ಅಧಿಷ್ಠಾನಂ ತಥಾಕರ್ತಾ ಕರಣಂ ಚ ಪೃಥಗ್ವಿಧಮ್ |

ವಿವಿಧಾಶ್ಚ ಪೃಥಕ್ ಚೇಷ್ಟಾ ದೈವಂ ಚೈವಾತ್ರ ಪಂಚಮಮ್ ||18-14||

32. ಶಮೋ ದಮಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ ಚ|

ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್||18-42||

33. ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಮ್|

ದಾನಮೀಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಮ್||18-43||

34. ಕೃಷಿಗೌರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಮ್|

ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಮ್||18-44||

35. ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ|

ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು||18-63||

36. ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ|

ತತ್ರ ಶ್ರೀರ್ವಿಜಯೋ ಭೂತಿಃ ಧ್ರುವಾ ನೀತಿರ್ಮತಿರ್ಮಮ||18-78||

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ ಸಪ್ತಶತ ಶ್ಲೋಕೇಷು ಅಖಂಡಭಾರತ ಸನಾತನ ಸ್ವಾಭಿಮಾನ ಸೇನಾಯಾಃ ಸಂಘಟನಶಕ್ತಿವರ್ಧನಾಯ ಸಂಘಗೀತಾಯಾಃ ಷಡ್ತ್ರಿಂಶ­­­­ತ್ ಶ್ಲೋಕಾಃ ಶ್ರೀ ಕೃಷ್ಣಾರ್ಪಣಮಸ್ತು.

ಓಂ ಸ್ವಸ್ತಿ

1.ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ವಯ್ಯುಪಪದ್ಯತೇ|

ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ ||2-3||

ಸಾರಾಂಶಃ

ಶತೃಗಳಿಗೆ ತಾಪವನ್ನುಂಟುಮಾಡುವ ಪೃಥೆಯಮಗನಾದ ಅರ್ಜುನನೇ ಷಂಡತನವನ್ನು ಹೊಂದಬೇಡ ಇದು ನಿನಗೆ ಸರಿಹೊಂದುವುದಿಲ್ಲ ಅಲ್ಪವಾದ ಹೃದಯದ ದೌರ್ಬಲ್ಯಗಳನ್ನು ತ್ಯಜಿಸಿ ಮೇಲೇಳು.

ಶಬ್ದಾರ್ಥಃ

ಕ್ಲೈಬ್ಯಂ-ಷಂಡತನವನ್ನು, ಮಾ ಸ್ಮ ಗಮಃ – ಹೊಂದಬೇಡ, ಪಾರ್ಥ-ಪೃಥೆಯಮಗನೇ,  ನ-ಎಂದಿಗೂ ಇಲ್ಲ. ಏತತ್ – ಇದು, ತ್ವಯಿ-ನಿನಗೆ, ಉಪಪದ್ಯತೇ-ಸರಿಹೊಂದುವುದು, ಕ್ಷುದ್ರಂ -ಅಲ್ಪವಾದ, ಹೃದಯ-ಹೃದಯದ, ದೌರ್ಬಲ್ಯಮ್-ದೌರ್ಬಲ್ಯವನ್ನು.  ತ್ಯಕ್ತ್ವಾ-ತ್ಯಜಿಸಿ. ಉತ್ತಿಷ್ಠ – ಮೇಲೇಳು. ಪರಂತಪ -ಶತೃಗಳನ್ನು ದಂಡಿಸುವವನೇ.|

ಅನ್ವಯಾರ್ಥಃ

ಪಾರ್ಥ-ಪೃಥೆಯಮಗನೇ,  ಕ್ಲೈಬ್ಯಂ-ಷಂಡತನವನ್ನು, ಮಾ ಸ್ಮ ಗಮಃ – ಹೊಂದಬೇಡ,  ಏತತ್ – ಇದು, ತ್ವಯಿ-ನಿನಗೆ, ನ ಉಪಪದ್ಯತೇ-ಸರಿಹೊಂದುವುದಿಲ್ಲ, ಪರಂತಪ –ಶತೃಗಳಿಗೆ ತಾಪವನ್ನು(ಉರಿ) ಉಂಟುಮಾಡುವವನೇ, ಕ್ಷುದ್ರಂ -ಅಲ್ಪವಾದ, ಹೃದಯಸ್ಯ-ಹೃದಯದ, ದೌರ್ಬಲ್ಯಮ್-ದೌರ್ಬಲ್ಯವನ್ನು.  ತ್ಯಕ್ತ್ವಾ-ತ್ಯಜಿಸಿ. ಉತ್ತಿಷ್ಠ – ಮೇಲೇಳು. |

2.ದೇಹಿನೋsಸ್ಮಿನ್ ಯಥಾದೇಹೇ ಕೌಮಾರಂ ಯೌವನಂ ಜರಾ|

ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ||2-13|| 

( ತಥಾ ದೇಹಾಂತರಪ್ರಾಪ್ತಿಃ ಧೀರಸ್ತತ್ರ ನ ಮುಹ್ಯತಿ )

ಸಾರಾಂಶಃ

ಜೀವಾತ್ಮನಿಗೆ ಈ ದೇಹದಲ್ಲಿ ಬಾಲ್ಯ ಯೌವನ ಮತ್ತು ವೃದ್ದಾವಸ್ಥೆಗಳು ಉಂಟಾಗುವಂತೆಯೇ ಬೇರೆ ದೇಹವೂ ದೊರೆಯುತ್ತದೆ. ಧೀರಪುರುಷನು ಈ ವಿಷಯದಲ್ಲಿ ಮೋಹಿತನಾಗುವುದಿಲ್ಲ, (ಭ್ರಮೆಗೆ ಒಳಗಾಗುವುದಿಲ್ಲ)

ಆತ್ಮನಿಗೆ ಸಾವಿಲ್ಲ ದೇಹ ಶಾಶ್ವತವಲ್ಲ ಆದುದರಿಂದ ಮರಣಕ್ಕೆ ಹೆದರಿ ಕರ್ತವ್ಯಭ್ರಷ್ಟನಾಗಬಾರದೆಂಬುದು ನೀತಿ.

ಶಬ್ಧಾರ್ಥಃ

ದೇಹಿನಃ-ಜೀವಿಗಳ, ಅಸ್ಮಿನ್-ಈ, ದೇಹೇ-ಈ ಶರೀರದಲ್ಲಿ,  ಕೌಮಾರಂ-ಬಾಲ್ಯ, ಯೌವನಂ-ಯೌವನ, ಜರಾ-ವೃದ್ದಾವಸ್ಥೆ, ಯಥಾ-ಹೇಗೋ, ತಥಾ-ಹಾಗೆ,  ದೇಹಾಂತರ – ಬೇರೆದೇಹವು, ಪ್ರಾಪ್ತಿಃ – ಹೊಂದುವಿಕೆಯು, (ಉಂಟಾಗುತ್ತದೆ) ಧೀರಃ – ಧೀರನಾದವನು. ತತ್ರ- ಅಲ್ಲಿ,  ನ ಮುಹ್ಯತಿ-ಮೋಹ ಗೊಳ್ಳುವುದಿಲ್ಲ.

3.ಜಾತಸ್ಯ ಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯ ಚ|

ತಸ್ಮಾದಪರಿಹಾರ್ಯೇsರ್ಥೇ ನ ತ್ವಂ ಶೋಚಿತುಮರ್ಹಸಿ||2-27||

(ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ)

ಸಾರಾಂಶಃ

ಹುಟ್ಟಿದವನಿಗೆ ಸಾವು ಹಾಗೂ ಮರಣಹೊಂದಿದವನಿಗೆ ಹುಟ್ಟು ನಿಶ್ಚಯವಾಗಿದೆ ಇದನ್ನು ತಪ್ಪಿಸಲು ಸಾಧ್ಯವಿಲ್ಲ ಆದುದರಿಂದ ನೀನು ಚಿಂತಿಸುವುದು ವ್ಯರ್ಥ. – ಹುಟ್ಟುಸಾವುಗಳಿಗೆ ವಿಚಲಿತರಾಗಬಾರದೆಂಬುದು ನೀತಿ ಇದು ಜೈವಿಕಚಕ್ರದ ತಪ್ಪಿಸಲಾಗದಂತಹ ನಿರಂತರ ಪ್ರಕ್ರಿಯೆಯಾಗಿದೆ.

ಶಬ್ಧಾರ್ಥಃ

ಜಾತಸ್ಯ-ಹುಟ್ಟಿದವನಿಗೆ, ಹಿ-ಖಂಡಿತವಾಗಿಯೂ, ಧ್ರುವಃ-ನಿಶ್ಚಿತ, ಮೃತ್ಯುಃ-ಸಾವು, ಧ್ರುವಮ್-ನಿಶ್ಚಿತವೇ, ಜನ್ಮ -ಜನನವು, ಮೃತಸ್ಯ-ಸತ್ತವನಿಗೆ, ಚ-ಮತ್ತು, ತಸ್ಮಾತ್ – ಆದ್ದರಿಂದ, ಅಪರಿಹಾರ್ಯೇ-ತಪ್ಪಿಸಲು, ಅರ್ಥೇ-ವಿಚಾರದಲ್ಲಿ, ನ-ಕೂಡದು, ತ್ವಮ್-ನೀನು, ಶೋಚಿತುಮ್-ದುಃಖಿಸಲು, ಅರ್ಹಸಿ-ಅರ್ಹನಾಗಿದ್ದೀಯೆ.

ಅನ್ವಯಃ

ಜಾತಸ್ಯ-ಹುಟ್ಟಿದವನಿಗೆ, ಹಿ-ಖಂಡಿತವಾಗಿಯೂ, ಮೃತ್ಯುಃ-ಸಾವು,  ಧ್ರುವಃ-ನಿಶ್ಚಿತ, ಚ-ಮತ್ತು, ಮೃತಸ್ಯ-ಸತ್ತವನಿಗೆ, ಜನ್ಮ -ಜನನವು, ಧ್ರುವಮ್-ನಿಶ್ಚಿತವೇ, ತಸ್ಮಾತ್ – ಆದ್ದರಿಂದ, ತ್ವಮ್-ನೀನು,  ಅರ್ಥೇ-ಈ ವಿಚಾರದಲ್ಲಿ, ಅಪರಿಹಾರ್ಯೇ-(ಮರಣವನ್ನು) ತಪ್ಪಿಸಲು, ಶೋಚಿತುಮ್-ದುಃಖಿಸಲು, ನ-ಅರ್ಹಸಿ-ಅರ್ಹನಾಗಿಲ್ಲ

4.ಸುಖದುಃಖೇ ಸಮೇ ಕೃತ್ವಾಲಾಭಾಲಾಭೌ ಜಯಾಜಯೌ|

ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ||2-38||

ಸಾರಾಂಶಃ

ಸುಖದುಃಖಗಳನ್ನೂ, ಲಾಭನಷ್ಟಗಳನ್ನೂ, ಜಯಅಪಜಯಗಳನ್ನೂ ಪರಿಗಣಿಸದೆ ಯುದ್ಧಮಾಡಲೆಂದೇ ಯುದ್ಧಮಾಡು, ಹೀಗೆ ಮಾಡುವುದರಿಂದ ನಿನಗೆ ಪಾಪ ಅಂಟಿಕೊಳ್ಳುವುದಿಲ್ಲ.

ನೀತಿಃ

ಹೋರಾಟದ ಹಾದಿಯಲ್ಲಿ ಪರಿಣಾಮಗಳಬಗ್ಗೆ ಚಿಂತಿಸಬಾರದು ಏಕಾಗ್ರತೆಯಿಂದ ಗುರಿಸಾಧನೆಗಾಗಿ ನಿರಂತರವಾಗಿ ಹೋರಾಡುತ್ತಿರಬೇಕು ಇಂತಹ ವಿಚಲಿತವಾಗದ ಹೋರಾಟದಲ್ಲಿ ನಮಗೆ ಜಯನಿಶ್ಚಿತ ಹಾಗೂ ನಮ್ಮ ಕರ್ಮಗಳ ದೋಷಗಳಿಂದ ನಮಗೆ ಪಾಪಉಂಟಾಗುವುದಿಲ್ಲ.

ಶಬ್ಧಾರ್ಥಃ

ಸುಖೇ-ಸುಖದಲ್ಲಿ, ದುಃಖೇ-ದುಃಖದಲ್ಲಿ, ಸಮೇ-ಸಮಭಾವದಲ್ಲಿ, ಕೃತ್ವಾ-ಇರುವಂತೆಮಾಡಿ, ಲಾಭ-ಅಲಾಭೌ ಲಾಭನಷ್ಟಗಳಲ್ಲಿ, ಜಯ-ಅಜಯೌ-ಜಯ ಅಪಜಯಗಳಲ್ಲಿ, ತತಃ-ಅನಂತರ, ಯುದ್ಧಾಯ-ಯುದ್ಧಮಾಡುವುದ ಕ್ಕಾಗಿಯೇ,  ಯುಜ್ಯಸ್ವ-ಯುದ್ಧಮಾಡು(ಹೋರಾಡು), ನ-ಎಂದಿಗೂ ಇಲ್ಲ, ಏವಂ-ಈ ರೀತಿಯಲ್ಲಿ, ಪಾಪಮ್- ಪಾಪವನ್ನು, ಅವಾಪ್ಸ್ಯಸಿ -ನೀನು ಹೊಂದುವೆ,

ಅನ್ವಯಃ

ಸುಖೇ-ಸುಖದಲ್ಲಿ, ದುಃಖೇ-ದುಃಖದಲ್ಲಿ, ಲಾಭ-ಅಲಾಭೌ ಲಾಭನಷ್ಟಗಳಲ್ಲಿ, ಜಯ-ಅಜಯೌ-ಜಯ-ಅಪಜಯಗಳಲ್ಲಿ, ಸಮೇ-ಸಮಭಾವದಲ್ಲಿ, ಕೃತ್ವಾ-ಇರುವಂತೆಮಾಡಿ, ತತಃ-ಅನಂತರ, ಯುದ್ಧಾಯ-ಯುದ್ಧಮಾಡುವುದ ಕ್ಕಾಗಿಯೇ,  ಯುಜ್ಯಸ್ವ-ಯುದ್ಧಮಾಡು(ಹೋರಾಡು), ಏವಂ-ಈ ರೀತಿಯಲ್ಲಿ ಯುದ್ಧಮಾಡುವುದರಿಂದ, ಪಾಪಮ್- ಪಾಪವನ್ನು,  ನ-ಅವಾಪ್ಸ್ಯಸಿ -ನೀನು ಹೊಂದುವುದಿಲ್ಲ.

5.ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|

ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ||2-47||

(ಮಾ ಕರ್ಮಫಲಹೇತುರ್ಭೂಃ ರ್ಮಾ ತೇ ಸಂಗೋಸ್ತ್ವಕರ್ಮಣಿ)

ಸಾರಾಂಶಃ

ನಿನಗೆ ನಿಯೋಜಿತ ಕರ್ತವ್ಯವನ್ನುಮಾಡುವುದಕ್ಕಷ್ಟೇ ಅಧಿಕಾರ. ಆದರೆ ಕರ್ಮಫಲಕ್ಕೆ ನಿನಗೆ ಅಧಿಕಾರವಿಲ್ಲ, 

ಕರ್ಮಫಲಕ್ಕೆ ನೀನು ಕಾರಣ ಎಂದು ಭಾವಿಸಬೇಡ. ಕರ್ಮವನ್ನು ಬಿಡಬೇಕೆನ್ನುವ ಮನಸ್ಸು ನಿನಗೆ ಆಗದಿರಲಿ.

ನೀತಿಃ

ಕರ್ತವ್ಯದಿಂದ ವಿಮುಖರಾಗದೇ ಕರ್ತವ್ಯವನ್ನು ಮಾಡಬೇಕು. ಫಲ ಸಿಗುವುದು ನಮ್ಮ ಕೈಯಲ್ಲಿಲ್ಲ. ಪ್ರತ್ಯಕ್ಷ ಫಲ ದೊರೆಯದಿದ್ದರೂ ನಾವು ಕರ್ಮದಿಂದ ವಿಮುಖರಾಗಬಾರದು. ನಿರಂತರ ಸತ್ಕರ್ಮಗಳನ್ನು ಮಾಡಬೇಕು. ಅದರಫಲ ಇದ್ದೇಇದೆ. ಭಗತ್ಸಿಂಗ್ ಸಾಯುವ ಮೊದಲು ಬ್ರಿಟಿಶರಿಗೆ ಒಂದುಮಾತು ಹೇಳುತ್ತಾನೆ. ನೀವುನನ್ನನ್ನು ಸಾಯಿಸಬಹುದು ನನ್ನ ಚಿಂತನೆಗಳನ್ನಲ್ಲ. ನೀವು ನನ್ನ ದೇಹವನ್ನು ನಾಶಮಾಡಬಹುದು ನನ್ನ ಆತ್ಮಬಲವನ್ನಲ್ಲ ಎಂಬುದಾಗಿ. ನಮ್ಮದಾರಿಯು ಸಾವಿರಾರುಜನರಿಗೆ ಸಾವಿರಾರುವರ್ಷಗಳಕಾಲ ಸ್ಪೂರ್ತಿಯಾಗುತ್ತದೆ. ಉದಾಹರಣೆಗೆ ಶಿವಾಜಿಮಹಾರಾಜರು.

ಶಬ್ಧಾರ್ಥಃ

ಕರ್ಮಣಿ-ವಿಹಿತ ಕರ್ತವ್ಯಗಳಲ್ಲಿ, ಏವ-ಖಂಡಿತವಾಗಿ, ಅಧಿಕಾರಃ-ಅಧಿಕಾರವು, ತೇ-ನಿನಗೆ, ಮಾ ಫಲೇಷು-ಫಲಗಳಲ್ಲಿ ಅಲ್ಲ, ಕದಾಚನ-ಯಾವುದೇ ಕಾಲದಲ್ಲಿಯೂ, ಮಾ ಕರ್ಮಫಲ-ಕರ್ಮದ ಫಲದಲ್ಲಿ ಬೇಡ, ಹೇತುಃ-ಕಾರಣವು, ಭೂಃ-ಆಗುವುದು, ಮಾ-ಆಗದೇ, ತೇ-ನಿನಗೆ, ಸಙ್ಗಃ-ಆಸಕ್ತಿಯು, ಅಸ್ತು-ಇರಲಿ, ಅಕರ್ಮಣಿ-ವಿಹಿತ ಕರ್ತವ್ಯಗಳನ್ನು ಮಾಡುವುದರಲ್ಲಿ.

ಅನ್ವಯಃ

ತೇ-ನಿನಗೆ, ಏವ-ಖಂಡಿತವಾಗಿ,  ಕರ್ಮಣಿ-ವಿಹಿತ ಕರ್ತವ್ಯಗಳಲ್ಲಿ, ಅಧಿಕಾರಃ-ಅಧಿಕಾರವು, ಕದಾಚನ-ಯಾವುದೇ ಕಾಲದಲ್ಲಿಯೂ, ಫಲೇಷು-ಫಲಗಳಲ್ಲಿ, ಮಾ – ಅಲ್ಲ, ತೇ-ನಿನಗೆ,  ಮಾ ಕರ್ಮಫಲ-ಕರ್ಮದ ಫಲದಲ್ಲಿ,  ಹೇತುಃ-ಕಾರಣವು, ಭೂಃ-ಆಗುವುದು, ಮಾ-ಬೇಡ, ಅಕರ್ಮಣಿ-ವಿಹಿತ ಕರ್ತವ್ಯಗಳನ್ನು ಮಾಡುವುದರಲ್ಲಿ. ಸಙ್ಗಃ-ಆಸಕ್ತಿಯು, ಅಸ್ತು-ಇರಲಿ,

6.ಕ್ರೋಧಾದ್ ಭವತಿ ಸಮ್ಮೋಹಃ ಸಮ್ಮೋಹಾತ್ಸ್ಮೃತಿವಿಭ್ರಮಃ|

ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯತಿ||2-63||

(ಸ್ಮೃತಿಭ್ರಂಶಾದ್ ಬುದ್ಧಿನಾಶಃ ಬುದ್ಧಿನಾಶಾತ್ಪ್ರಣಶ್ಯತಿ)

ಸಾರಾಂಶ    

ನಾವು ಚಿಂತಿಸುವ ವಿಷಯದಲ್ಲಿಯೇ ಆಸಕ್ತಿಉಂಟಾಗುತ್ತಾ ಹೋಗುತ್ತದೆ. ಬಯಸಿದ್ದು ಸಿಗದಾದಾಗ ಸಿಟ್ಟುಬರುತ್ತದೆ, ಸಿಟ್ಟಿನಿಂದ ಮನಸ್ಸು ಸ್ಥಿಮಿತಕಳೆದುಕೊಂಡಂತಾಗುತ್ತದೆ, ನೆನಪಿನ ಭ್ರಮೆ ಉಂಟಾಗುತ್ತದೆ, ಇದರಿಂದಾಗಿ ಬುದ್ಧಿಯನಾಶವಾಗುತ್ತದೆ, ಬುದ್ಧಿಯು ನಷ್ಟವಾದಾಗ ಮನುಷ್ಯನು ನಾಶಹೊಂದುತ್ತಾನೆ. ಆದುದರಿಮದ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆನ್ನುವುದು ನೀತಿ.

ಶಬ್ದಾರ್ಥಃ

ಕ್ರೋಧಾತ್ – ಕೋಪದಿಂದ, ಭವತಿ-ಉಂಟಾಗುತ್ತದೆ, ಸಮ್ಮೋಹಃ-ಭ್ರಮೆಯು(ಭ್ರಾಂತಿಯು), ಸಮ್ಮೋಹಾತ್-ಭ್ರಾಂತಿಯಿಂದ, ಸ್ಮೃತಿ-ನೆನಪಿನ, ವಿಭ್ರಮಃ-ಭ್ರಮೆಯು, ಸ್ಮೃತಿಭ್ರಂಶಾತ್-ನೆನಪಿನಭ್ರಮೆಯಿಂದ, ಬುದ್ದಿನಾಶಃ-ಬುದ್ಧಿಯನಾಶವು, ಬುದ್ಧಿನಾಶಾತ್-ಮತ್ತುಬುದ್ಧಿಯವಿನಾಶದಿಂದ, ಪ್ರಣಶ್ಯತಿ-ಪತನಹೊಂದುತ್ತಾನೆ.

ಅನ್ವಯಃ

ಕ್ರೋಧಾತ್-ಕ್ರೋಧದಿಂದ, ಸಂಮೋಹಃ-ಭ್ರಾಂತಿಯು, ಭವತಿ-ಉಂಟಾಗುತ್ತದೆ, ಸಂಮೋಹಾತ್-ಭ್ರಾಂತಿಯಿಂದ, ಸ್ಮೃತಿವಿಭ್ರಮಃ-ನೆನಪಿನಭ್ರಮೆಯು, ಸ್ಮೃತಿಭ್ರಂಶಾತ್-ನೆನಪಿನಭ್ರಮೆಯಿಂದ, ಬುದ್ಧಿನಾಶಃ-ಬುದ್ಧಿಯನಾಶ, ಬುದ್ಧಿನಾಶಾತ್-ಬುದ್ಧಿಯನಾಶದಿಂದ, ಪ್ರಣಶ್ಯತಿ-ಪತನ(ನಾಶ)ಹೊಂದುತ್ತಾನೆ.

7.ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ|

ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ||2-69||

ಸಾರಾಂಶ

ಆತ್ಮನಿಗ್ರಹ ಹೊಮದಿದ ಜ್ಞಾನಿಗೆ ಜಗತ್ತಿನ ಹಗಲು ಕತ್ತಲೆಯೂ ಜಗತ್ತಿನ ಕತ್ತಲೆಯು ಹಗಲೂ ಆಗಿರುವುದು.

ಇಂದು ಹಿಂದೂ ಸಮಾಜವು ಧರ್ಮ ಹಾಗೂ ರಾಷ್ಟ್ರ ರಕ್ಷಣೆಯ ಹಾಗೂ ಸಂಘಟನಾತ್ಮಕವಿಷಯಗಳಲ್ಲಿ ಘೋರವಾದ ನಿದ್ದೆಯಲ್ಲಿ ಮಲಗಿದೆ.  ಆದರೆ ವಿಷಯದಲ್ಲಿ ನಮ್ಮಂತಹ ಕೆಲವರು ಎಚ್ಚರವಾಗಿದ್ದೇವೆ. ಹಿಂದೂ ಸಮಾಜ ಹಣಗಳಿಗೆ, ಆಸ್ತಿಪಾಸ್ತಿಗಳಿಕೆ, ಪ್ರಚಾರ, ಅಧಿಕಾರ, ಸುಖ, ಮೋಜು ಮಸ್ತಿ, ಭ್ರಷ್ಟಾಚಾರ ಇವುಗಳಲ್ಲಿ ನಿರತರಾಗಿದ್ದಾರೆ ಅಂದರೆ ಎಚ್ಚರವಾಗಿದ್ದಾರೆ. ಹೀಗೆ ಜಗತ್ತೆಲ್ಲಾ ಎಚ್ಚರವಿರುವ ಇಂತಹ ಬೌತಿಕ ಬಯಕೆಗಳು ಧರ್ಮಸೈನಿಕರಾದ ನಮಗೆ ಕತ್ತಲೆಯಾಗಿದೆ. ಅಥವಾ ಅವುನಮಗೆ ಮುಖ್ಯವಾಗಿಲ್ಲ ಎನ್ನುವ ಭಾವ.

 ನೀತಿಃ

ಲೋಕ ಎಚ್ಚರವಿರುವ ಭೌತಿಕಸುಖದ ವಿಷಯದಲ್ಲಿ ನಾವು ಅನಾಸಕ್ತರಾಗಿರಬೇಕು. ಲೋಕ ಉದಾಸೀನ ಹೊಂದಿದ ಧರ್ಮರಕ್ಷಣೆಯ  ಗುರಿಸಾಧನೆಯಲ್ಲಿನಾವು  ಸದಾ ಎಚ್ಚರಿರಬೇಕೆನ್ನುವುದು ನೀತಿ.

ಶಬ್ಧಾರ್ಥಃ

ಯಾ-ಯಾವುದು, ನಿಶಾ-ರಾತ್ರಿಯಾಗಿದೆಯೋ, ಸರ್ವ-ಸಕಲ, ಭೂತಾನಾಮ್-ಜೀವಿಗಳಿಗೆ, ತಸ್ಯಾಮ್-ಅದರಲ್ಲಿ, ಜಾಗರ್ತಿ-ಎಚ್ಚರವಾಗಿರುತ್ತಾನೆ, ಸಂಯಮೀ-ಆತ್ಮನಿಗ್ರಹ ವುಳ್ಳವನು, ಯಸ್ಯಾಮ್-ಯಾವುದರಲ್ಲಿ, ಜಾಗ್ರತಿ-ಎಚ್ಚರವಾಗಿರುವವೋ, ಭೂತಾನಿ-ಎಲ್ಲಾಜೀವಿಗಳು, ಸಾ-ಅದು, ನಿಶಾ-ರಾತ್ರಿಯಾಗಿರುವುದು, ಪಶ್ಯತಃ-ಆತ್ಮಪರೀಕ್ಷಕನಾದ, ಮುನೇಃ-ಋಷಿಗೆ,

ಅನ್ವಯಃ

ಸರ್ವಭೂತಾನಾಂ-ಎಲ್ಲಾಜೀವಿಗಳಿಗೆ, ಯಾ-ಯಾವುದು, ನಿಶಾ-ರಾತ್ರಿಯೋ, ತಸ್ಯಾಂ-ಅದರಲ್ಲಿ,  ಸಂಯಮೀ-ಜಿತೇಂದ್ರಿಯನು, ಜಾಗರ್ತಿ-ಎಚ್ಚರಿರುವನು. ಯಸ್ಯಾಂ-ಯಾವುದರಲ್ಲಿ, ಭೂತಾನಿ-ಪ್ರಾಣಿಗಳು, ಜಾಗ್ರತಿ-ಎಚ್ಚರಿರುತ್ತವೋ,  ಪಶ್ಯತಃ- ನೋಡುತ್ತಿರುವ, ಮುನೇಃ-ಮುನಿಗೆ, ಸಾ-ಅದು, ನಿಶಾ-ಕತ್ತಲೆಯು,

8.ಅನ್ನಾದ್ ಭವನ್ತಿ ಭೂತಾನಿ ಪರ್ಜನ್ಯಾದನ್ನಸಮ್ಭವಃ|

ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ||3-14||

( ಯಜ್ಞಾದ್ ಭವತಿ ಪರ್ಜನ್ಯಃ ಯಜ್ಞಃ ಕರ್ಮಸಮುದ್ಭವಃ )

ಸಾರಾಂಶಃ

ಭೌತಿಕ ಸೃಷ್ಟಿಯ ಪ್ರಾಕೃತಿಕ ಸಮತೋಲನದ ವಿಷಯವನ್ನು ಇಲ್ಲಿ ಹೇಳಲಾಗಿದೆ. ದೇಹಪೋಷಣೆಗೆ ಆಹಾರವುಬೇಕು, ಆಹಾರದಾನ್ಯಗಳ ಉತ್ಪಾದನೆ  ಮಳೆಯಿಂದಲೂ, ಮಳೆಯು ಯಜ್ಞದಿಂದಲೂ, ಯಜ್ಞವು ನಮ್ಮ ಕರ್ಮದಿಂದಲೂ ಒಂಟಾಗುತ್ತದೆ. (ಯಜ್ಞದಮೂಲ ಬ್ರಹ್ಮವಾಗಿರುವುದು).

 ನೀತಿಃ

ಕರ್ಮವನ್ನು ತ್ಯಜಿಸಿದರೆ ಪ್ರಕೃತಿಯ ಸಮತೋಲನ ತಪ್ಪುವುದೆಂಬುದು ನೀತಿ, ಪ್ರಕೃತಿಪೋಷಕವಾದ ಯಜ್ಞ ಯಾಗಾದಿಗಳನ್ನು ನಿರಂತರ ಮಾಡಬೇಕು. ಭೋಗವೊಂದೇ ಜೀವನ ಅಲ್ಲ ಪ್ರಕೃತಿಯೊಂದಿಗೆ ಪರಸ್ಪರ ಸಾಮರಸ್ಯದಿಂದ ಬದುಕಬೇಕು ಪ್ರಕೃತಿಯ ರಕ್ಷಣೆ ಮಾಡಬೇಕು ನಮ್ಮ ಕೆಲಸಗಳು ಪ್ರಕೃತಿಯ ರಕ್ಷನೆಗೆ ಪೂರಕವಾಗಿರಬೇಕು ಎನ್ನುವುದು ನೀತಿ.

ಶಬ್ಧಾರ್ಥಃ

ಅನ್ನಾತ್-ಅನ್ನಹಾಗೂ ಆಹಾರಧಾನ್ಯಗಳಿಂದ, ಭವನ್ತಿ-ಬೆಳೆಯುತ್ತವೆ(ಉಂಟಾಗುತ್ತವೆ), ಭೂತಾನಿ-ಭೌತಿಕದೇಹಗಳು, ಪರ್ಜನ್ಯಾತ್-ಮಳೆಯಿಂದ, ಅನ್ನ-ಆಹಾರಧಾನ್ಯಗಳ, ಸಮ್ಭವಃ-ಉತ್ಪತ್ತಿಯು, ಯಜ್ಞಾತ್-ಯಜ್ಞಾಚರಣೆಯಿಂದ, ಭವತಿ-ಉಂಟಾಗುತ್ತದೆ,  ಪರ್ಜನ್ಯಃ-ಮಳೆಯು,  ಯಜ್ಞಃ-ಯಜ್ಞಾಚರಣೆಯು,  ಕರ್ಮ-ವಿದ್ಯುಕ್ತಕರ್ತವ್ಯಗಳಿಂದ, ಸಮುದ್ಭವಃ-ಹುಟ್ಟುತ್ತದೆ.

ಅನ್ವಯಃ

ಅನ್ನಾತ್-ಅನ್ನದಿಂದ, ಭೂತಾನಿ-ಪ್ರಾಣಿಗಳು, ಭವನ್ತಿ-ಉತ್ಪನ್ನವಾಗುತ್ತವೆ. ಪರ್ಜನ್ಯಾತ್-ಮಳೆಯಿಂದ, ಅನ್ನ-ಆಹಾರಧಾನ್ಯಗಳು, ಸಮ್ಭವಃ-ಉತ್ಪತ್ತನ್ನವಾಗುತ್ತವೆ. ಯಜ್ಞಾತ್-ಯಜ್ಞಾಚರಣೆಯಿಂದ, ಪರ್ಜನ್ಯಃ-ಮಳೆಯು,  ಭವತಿ-ಆಗುತ್ತದೆ.  ಯಜ್ಞಃ-ಯಜ್ಞಾಚರಣೆಯು,  ಕರ್ಮಸಮುದ್ಭವಃ- ಕರ್ಮದಿಂದ (ನಮ್ಮ ಕರ್ತವ್ಯಪಾಲನೆಯಿಂದ) ಉದ್ಭವಿಸುತ್ತದೆ.

9.ಯದ್ ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ|

ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ||3-21||

( ಯದ್ಯದಾಚರತಿ ಶ್ರೇಷ್ಠಃ ತತ್ತದೇವೇತರೋ ಜನಃ )

ಸಾರಾಂಶ: ಲೋಕದಲ್ಲಿ ಶ್ರೇಷ್ಠರೆನಿಸಿಕೊಂಡವರ ಆಚರಣೆಯನ್ನು ಸಾಮಾನ್ಯಜನರು ಅನುಸರಿಸುತ್ತಾರೆ. ಆದುದರಿಂದ ಜವಾಬ್ದಾರಿಯುತ ಸ್ಥಾನದಲ್ಲಿರುವವರ ವರ್ತನೆ ಶ್ರೇಷ್ಠವಾಗಿರಬೇಕು. ಉತ್ತಮ ವ್ಯಕ್ತಿಗಳೇ ಸಮಾಜಕ್ಕೆ ಆದರ್ಷರಾಗಬೇಕು.

ಶಬ್ಧಾರ್ಥಃ

ಯತ್ ಯತ್-ಯಾವುದನ್ನೆಲ್ಲಾ, ಆಚರತಿ-ಆಚರಿಸುತ್ತಾನೋ, ಶ್ರೇಷ್ಠಃ-ಗೌರವಾರ್ಹನಾಯಕನು, ತತ್-ಅದನ್ನು, ತತ್-ಅದನ್ನೇ, ಏವ-ಖಂಡಿತವಾಗಿಯೂ, ಇತರಃ-ಸಾಮಾನ್ಯ, ಜನಃ-ವ್ಯಕ್ತಿಯು, ಸಃ-ಅವನು, ಯತ್-ಯಾವುದನ್ನು, ಪ್ರಮಾಣಮ್-ನಿದರ್ಷನವೆಂದು, ಕುರುತೇ-ಆಚರಿಸುತ್ತಾನೋ, ಲೋಕಃ-ಜಗತ್ತು, ತತ್-ಅದನ್ನು, ಅನುವರ್ತತೆ-ಅನುಸರಿಸುತ್ತದೆ.

ಅನ್ವಯಃ

ಶ್ರೇಷ್ಠಃ-ಶ್ರೇಷ್ಠನಾದಪುರುಷನು(ಸಮಾಜದಲ್ಲಿ ಉನ್ನತ ಸ್ಥರದಲ್ಲಿರುವವನು), ಯತ್ ಯತ್-ಯಾವುದನ್ನೆಲ್ಲಾ, ಆಚರತಿ-ಆಚರಿಸುತ್ತಾನೋ, ತತ್ ತತ್-ಅದನ್ನೇ, ಏವ-ಖಂಡಿತವಾಗಿಯೂ, ಇತರಃ ಜನಃ -ಸಾಮಾನ್ಯ ವ್ಯಕ್ತಿಯು, (ಆಚರಿಸುತ್ತಾನೆ),  ಸಃ-ಅವನು(ಶ್ರೇಷ್ಠವ್ಯಕ್ತಿಯು), ಯತ್-ಯಾವುದನ್ನು, ಪ್ರಮಾಣಮ್-ನಿದರ್ಷನವೆಂದು, ಕುರುತೇ-ಮಾಡುತ್ತಾನೋ, ತತ್-ಅದನ್ನೇ,  ಲೋಕಃ-ಜಗತ್ತು, ಅನುವರ್ತತೆ-ಅನುಸರಿಸುತ್ತದೆ.

10.ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮಚೇತಸಾ|

ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತಜ್ವರಃ||3-30||

ಸಾರಾಂಶಃ

ಯಾವುದೇ ಭಾವಾವೇಶಕ್ಕೆ ಒಳಗಾಗದೆ  ಆಸೆ ಮತ್ತು ಮಮಕಾರಗಳನ್ನು ಹೊಂದದೆ, ಕರ್ಮಫಲವನ್ನು ನನಗೆ ಬಿಟ್ಟು ಸಮಚಿತ್ತನಾಗಿ ಯುದ್ಧವನ್ನು ಮಾಡು ಎಂಬುದಾಗಿ ಕೃಷ್ಣನು ಹೇಳುತ್ತಿದ್ದಾನೆ.

 ನೀತಿಃ

ಗುರಿಸಾಧನೆಯ ಹೋರಾಟದಲ್ಲಿ ಭಾವನೆಗಳಿಗೆ ಬಲಿಯಾಗಬಾರದು ಹಾಗೂ ನಕಾರಾತ್ಮಕ ಫಲಿತಾಂಶ ಗೋಚರಿಸಿದಂತೆ ಕಂಡರೂ ನಿರಾಶರಾಗಬಾರದು ಎನ್ನುವುದು ನೀತಿ.

ಶಬ್ಧಾರ್ಥಃ

ಮಯಿ-ನನ್ನಲ್ಲಿ, ಸರ್ವಾಣಿ-ಎಲ್ಲ ಬಗೆಯ, ಕರ್ಮಾಣಿ-ಕಾರ್ಯಗಳನ್ನು, ಸಂನ್ಯಸ್ಯ-ಸಂಪೂರ್ಣವಾಗಿ ತ್ಯಜಿಸಿ, ಅಧ್ಯಾತ್ಮ-ಪೂರ್ಣ ಆತ್ಮಜ್ಞಾನದ, ಚೇತಸಾ-ಪ್ರಜ್ಞೆಯಿಂದ, ನಿರಾಶೀಃ-ಲಾಭದ ಆಸೆಯಿಲ್ಲದವನೂ, ರ್ನಿರ್ಮಮಃ-ಒಡೆತನದಭಾವವಿಲ್ಲದವನೂ,  ಭೂತ್ವಾ-ಆಗಿ, ಯುಧ್ಯಸ್ವ-ಯುದ್ಧಮಾಡು, ವಿಗತ ಜ್ವರಃ-ತಾಪ ಅಥವಾ ಶೊಕ ಇಲ್ಲದವನಾಗಿ.

ಅನ್ವಯಃ

ಅಧ್ಯಾತ್ಮಚೇತಸಾ-ಅಧ್ಯಾತ್ಮ ಪ್ರಜ್ಞೆಯಿಂದ, ಸರ್ವಾಣಿ ಕರ್ಮಾಣಿ -ಎಲ್ಲಾಕರ್ಮಗಳನ್ನೂ, ಮಯಿ-ನನ್ನಲ್ಲಿ, ಸಂನ್ಯಸ್ಯ-ಅರ್ಪಿಸಿ, ನಿರಾಶೀಃ-ಆಸೆಯಿಲ್ಲದವನೂ, ರ್ನಿರ್ಮಮಃ-ಮಮತೆ ಇಲ್ಲದವನೂ, ವಿಗತ ಜ್ವರಃ-ತಾಪ ಅಥವಾ ಶೋಕ ಇಲ್ಲದವನು. ಭೂತ್ವಾ-ಆಗಿ, ಯುಧ್ಯಸ್ವ-ಯುದ್ಧಮಾಡು,

11.ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾತ್|

ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ||3-35||

ಸಾರಾಂಶಃ

ನಮ್ಮ ಧರ್ಮದಲ್ಲಿಯೇ ನಾವು ಬದುಕಬೇಕು ನಮ್ಮದಲ್ಲದ ಧರ್ಮವು ಆಕರ್ಷಕವಾಗಿ ಕಂಡರೂ ಅದುಭಯಾನಕವಾಗಿರುವುದು. ಮರಣವು ಕೂಡಾ ನಮ್ಮ ಧರ್ಮದಲ್ಲಿನಾವಿರುವಾಗ ಬಂದರೆ ಅದು ಶ್ರೇಷ್ಠವಾದದ್ದು. ಇಲ್ಲಿ ಧರ್ಮವೆಂದರೆ ನಾವು ನಂಬಿಕೊಂಡುಬಂದ ಶ್ರದ್ಧೆ ಹಾಗೂ ನಮಗೆ ಪರಿಚಿತವಿರುವ ಉದ್ಯೋಗವಾಗಿದೆ.

ನೀತಿಃ

ನಮಗೆ ಅಪರಿಚಿಯತವಾದ ಧರ್ಮ ಹಾಗೂ ಉದ್ಯೋಗ ಎರಡೂ ಭಯಾನಕವಾಗಿರುತ್ತದೆ ನಮಗೆ ಭಗವಂತ ತೋರಿಸಿದ ದಾರಿಯಲ್ಲಿ ಶ್ರದ್ಧೆಯಿಂದ ಕೆಲಸಮಾಡಬೇಕೆನ್ನುವುದು ನೀತಿ, ಕರ್ತವ್ಯದಿಂದ ಹಿಂದೆ ಸರಿಯಬಾರದು.  

ಶಬ್ಧಾರ್ಥಃ

ಶ್ರೇಯಾನ್-ಉತ್ತಮವಾದುದು, ಸ್ವಧರ್ಮಃ-ತನ್ನ ಧರ್ಮವು, ವಿಗುಣಃ-ಗುಣ ರಹಿತನಾಗಿದ್ದರೂ,

ಪರಧರ್ಮಾತ್-ಇತರರ ಆಚರಣೆಗಳಿಗಿಂದ, ಸುಅನುಷ್ಠಿತಾತ್-ಪರಿಪೂರ್ಣವಾಗಿ ಆಚರಿಸಿದ, ಸ್ವಧರ್ಮೇ-ತನ್ನ ಕರ್ತವ್ಯಗಳಲ್ಲಿ, ನಿಧನಮ್-ಮರಣವು,  ಶ್ರೇಯಃ-ಉತ್ತಮವು, ಪರಧರ್ಮಃ-ನಮ್ಮದಲ್ಲದ ಧರ್ಮವು, ಭಯಾವಹಃ-ಅಪಾಯಕಾರಿಯಾದುದು.

ಅನ್ವಯಃ

ಸುಅನುಷ್ಠಿತಾತ್-ಉತ್ತಮವಾಗಿ ಆಚರಿಸಿದ, ಪರಧರ್ಮಾತ್-ಇತರರ ಧರ್ಮಾಚರಣೆಗಳಿಗಿಂತಲೂ, ವಿಗುಣಃ-ಗುಣ ವಿಲ್ಲದ, ಸ್ವಧರ್ಮಃ-ತನ್ನ ಧರ್ಮವು, ಶ್ರೇಯಾನ್-ಉತ್ತಮವಾದುದು, ಸ್ವಧರ್ಮೇ-ಸ್ವಧರ್ಮದಲ್ಲಿ, ನಿಧನಮ್-ಮರಣವು, ಶ್ರೇಯಃ-ಒಳ್ಳೆಯದು, ಪರಧರ್ಮಃ-ನಮ್ಮದಲ್ಲದ ಧರ್ಮವು, ಭಯಾವಹಃ-ಭಯಂಕರವಾದದ್ದು.

12. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|

ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್||4-7||

ಸಾರಾಂಶಃ

ಯಾವಾಗೆಲ್ಲಾ ಧರ್ಮವು ಅಧಃಪತನಹೊಂದುವುದೋ ಅಧರ್ಮದ ಪ್ರಾಬಲ್ಯವು ಹೆಚ್ಚುವುದೋ ಆಗ ನಾನು ವ್ಯಕ್ತನಾಗುತ್ತೇನೆ ಎಂಬುದಾಗಿ ಕೃಷ್ಣನು ಹೇಳಿದ್ದಾನೆ. ಅಧರ್ಮವು ಅತಿಯಾದಾಗ ಭಗವಂತನ ಅವತಾರವಾಗುತ್ತದೆ ಎಂಬುದು ಅರ್ಥ.

ಶಬ್ಧಾರ್ಥಃ

ಯದಾ ಯದಾ-ಯಾವಾಗ ಮತ್ತು ಎಲ್ಲೆಲ್ಲಿ, ಹಿ-ಖಂಡಿತವಾಗಿಯೂ, ಧರ್ಮಸ್ಯ-ಧರ್ಮದ, ಗ್ಲಾನಿಃ-ಏರುಪೇರುಗಳು, ಭವತಿ-ಉಂಟಾಗುತ್ತವೂ, ಭಾರತ-ಭರತನ ಕುಲದವನೇ, ಅಭ್ಯುತ್ಥಾನಮ್-ಪ್ರಾಬಲ್ಯವು, ಅಧರ್ಮಸ್ಯ-ಅಧರ್ಮದ, ತದಾ-ಆ ಕಾಲದಲ್ಲಿ, ಆತ್ಮಾನಂ-ಸ್ವಯಂ, ಸೃಜಾಮಿ-ವ್ಯಕ್ತವಾಗುತ್ತೇನೆ, ಅಹಮ್-ನಾನು.

ಅನ್ವಯಃ

ಭಾರತ-ಅರ್ಜುನೇ(ಭರತವಂಶಜನೇ), ಯದಾ ಯದಾ -ಯಾವ ಯಾವಾಗ  ಧರ್ಮಸ್ಯ-ಧರ್ಮದ, ಗ್ಲಾನಿಃ-ಅವನತಿಯು, ಅಧರ್ಮಸ್ಯ-ಅಧರ್ಮದ, ಅಭ್ಯುತ್ಥಾನಮ್-ಉನ್ನತಿಯು, ಭವತಿ-ಆಗುತ್ತದೆಯೋ, ಹಿ -ಖಂಡಿತವಾಗಿ, ತದಾ-ಆಗ, ಅಹಮ್-ನಾನು. ಆತ್ಮಾನಂ-ಸ್ವಯಂ ಸೃಜಾಮಿ-ಅವತರಿಸುತ್ತೇನೆ,

13.ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|

ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||4-8||

ಸಾರಾಂಶಃ

ಸಜ್ಜನರ ರಕ್ಷಣೆ ಹಾಗೂ ದುರ್ಜನರ ನಾಶಕ್ಕಾಗಿ ಧರ್ಮವನ್ನು ಸಂಸ್ಥಾಪಿಸುವುದಕ್ಕಾಗಿ ಪ್ರತಿಯುಗದಲ್ಲಿಯೂ ಅವತರಿಸುತ್ತೇನೆ.

ಅಧರ್ಮ ಹೆಚ್ಚಾದಾಗ ತಾನು ಅವತರಿಸುವುದಾಗಿ ಕೃಷ್ಣನ ಮಾತು

ಶಬ್ಧಾರ್ಥಃ

ಪರಿತ್ರಾಣಾಯ-ರಕ್ಷಣೆಗಾಗಿ, ಸಾಧೂನಾಮ್-ಸಜ್ಜನರ, ವಿನಾಶಾಯ-ನಾಶಕ್ಕಾಗಿ, ಚ-ಮತ್ತು, ದುಷ್ಕೃತಾಮ್-ದುರ್ಜನರ, ಧರ್ಮ-ಧರ್ಮ ತತ್ವಗಳ, ಸಂಸ್ಥಾಪನಾರ್ಥಾಯ-ಪುನಃಸ್ಥಾಪನೆಗಾಗಿ, ಸಂಭವಾಮಿ-ಪ್ರಕಟವಾಗುತ್ತೇನೆ, ಯುಗೇ ಯುಗೇ-ಯುಗಯುಗಗಳಲ್ಲೂ,

ಅನ್ವಯಃ

ಸಾಧೂನಾಮ್-ಸಜ್ಜನರ, ಪರಿತ್ರಾಣಾಯ-ರಕ್ಷಣೆಗಾಗಿಯೂ, ದುಷ್ಕೃತಾಮ್-ದುರ್ಜನರ, ವಿನಾಶಾಯ-ವಿನಾಶಕ್ಕಾಗಿಯೂ, ಚ-ಮತ್ತು, ಧರ್ಮ-ಧರ್ಮ ತತ್ವಗಳ, ಸಂಸ್ಥಾಪನಾರ್ಥಾಯ-ಪುನಃಸ್ಥಾಪನೆಗಾಗಿಯೂ, ಯುಗೇ ಯುಗೇ-ಪ್ರತಿಯುಗದಲ್ಲೂ, ಸಂಭವಾಮಿ-ಅವತರಿಸುತ್ತೇನೆ,

14.ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ|

ತಸ್ಯ ಕರ್ತಾರಮಪಿ ಮಾಂ ವಿದ್ವ್ಯಕರ್ತಾರಮವ್ಯಯಮ್||4-13||

ಸಾರಾಂಶಃ

ಚಾತುರ್ವರ್ಣವು ಗುಣಕರ್ಮಗಳಿಂದ ನಿರ್ಧಾರವಾಗುತ್ತದೆಯೇ ಹೊರತು ಹುಟ್ಟಿನಿಂದ ಅಲ್ಲ ಇದು ನನ್ನಿಂದಲೇ ಸೃಷ್ಟಿಸಲ್ಪಟ್ಟಿದೆ ಎಂಬುದು ಕೃಷ್ಣನ ಮಾತು. ನಾವೇ ಕೆಲಸಮಾಡಿದರೂ ನನ್ನಿಂದಾಯಿತೆನ್ನುವ ಅಹಂಕಾರವೂ ಇರಕೂಡದು.

ಶಬ್ಧಾರ್ಥಃ

ಚಾತುರ್ವರ್ಣ್ಯಂ-ಸಮಾಜದ ನಾಲ್ಕು ವಿಭಾಗಗಳು, ಮಯಾ-ನನ್ನಿಂದ, ಸೃಷ್ಟಮ್-ಸೃಷ್ಟಿಸಲ್ಪಟ್ಟಿದೆ, ಗುಣ-ಗುಣದ, ಕರ್ಮ-ಮಾಡುವ ಕೆಲಸಗಳ, ವಿಭಾಗಶಃ-ವಿಭಾಗದ ಪ್ರಕಾರ. ತಸ್ಯ-ಅದರ, ಕರ್ತಾರಮ್-ತಂದೆಯು, ಅಪಿ-ಆಗಿದ್ದರೂ, ಮಾಮ್-ನನ್ನನ್ನು, ವಿದ್ದಿ-(ನೀನು) ತಿಳಿಯಬಹುದು. ಅಕರ್ತಾರಮ್-ಕರ್ತಾರನಲ್ಲವೆಂದು, ಅವ್ಯಯಮ್-ಬದಲಾಯಿಸಲಾಗದವನನ್ನು.

ಅನ್ವಯಃ

ಗುಣ-ಗುಣದ, ಕರ್ಮ-ಮಾಡುವ ಕೆಲಸಗಳ, ವಿಭಾಗಶಃ-ವಿಭಾಗದ ಪ್ರಕಾರ. ಚಾತುರ್ವರ್ಣ್ಯಂ-ಸಮಾಜದ ನಾಲ್ಕು ವಿಭಾಗಗಳು, ಮಯಾ-ನನ್ನಿಂದ, ಸೃಷ್ಟಮ್-ಸೃಷ್ಟಿಸಲ್ಪಟ್ಟಿದೆ, ತಸ್ಯ-ಅದರ, ಕರ್ತಾರಮ್-ತಂದೆಯು, ಅಪಿ-ಆಗಿದ್ದರೂ, ಮಾಮ್-ನನ್ನನ್ನು, ಅಕರ್ತಾರಮ್-ಕರ್ತಾರನಲ್ಲವೆಂದು, ಅವ್ಯಯಮ್-ವ್ಯಯವಾಗದವನೆಂಬುದಾಗಿ . ವಿದ್ದಿ-(ನೀನು) ತಿಳಿ.

15. ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ|

ತತ್ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ||4-38||

ಸಾರಾಂಶಃ

ಜಗತ್ತಿನಲ್ಲಿ ಜ್ಞಾನವೇ ಶ್ರೇಷ್ಠ ಯೋಗದಲ್ಲಿ (ಗುರಿಸಾಧನೆಯ ಹಾದಿಯಲ್ಲಿ) ಸಿದ್ಧಿಯನ್ನು ಹೊಂದಿದವನು ಸ್ವಯಂ ತಾನೇ ಅದನ್ನು ತನ್ನಲ್ಲಿ ಕಂಡುಕೊಳ್ಳುತ್ತಾನೆ.

ಶಬ್ಧಾರ್ಥಃ

ನ-ಯಾವುದೂ ಇಲ್ಲ, ಹಿ-ಖಂಡಿತವಾಗಿಯೂ, ಜ್ಞಾನೇನ-ಜ್ಞಾನದೊಂದಿಗೆ, ಸದೃಶಂ-ಸಮನಾದದ್ದು, ಪವಿತ್ರಮ್-ಪವಿತ್ರವಾದುದು, ಇಹ-ಈ ಜಗತ್ತಿನಲ್ಲಿ, ವಿದ್ಯತೇ-ಇರುತ್ತದೆ, ತತ್-ಅದನ್ನು, ಸ್ವಯಮ್-ಸ್ವತಃ, ಯೋಗ-ಭಕ್ತಿಯಲ್ಲಿ, ಸಂಸಿದ್ಧಃ-ಪರಿಪಕ್ವನಾದವನು, ಕಾಲೇನ-ಕಾಲಕ್ರಮದಲ್ಲಿ, ಆತ್ಮನಿ-ತನ್ನಲ್ಲಿಯೇ, ವಿಂದತಿ-ಅನುಭವಿಸುತ್ತಾನೆ.

ಅನ್ವಯಃ

ಇಹ-ಈ ಜಗತ್ತಿನಲ್ಲಿ, ಜ್ಞಾನೇನ-ಜ್ಞಾನಕ್ಕೆ, ಸದೃಶಂ-ಸಮನಾದ, ಪವಿತ್ರಮ್-ಪವಿತ್ರವಸ್ತು,  ನಹಿ ವಿದ್ಯತೇ-ಯಾವುದೂ ಇಲ್ಲ. ಕಾಲೇನ-ಕಾಲಕ್ರಮದಲ್ಲಿ, ಯೋಗ-ಯೋಗದಲ್ಲಿ, ಸಂಸಿದ್ಧಃ-ಸಿದ್ಧಿಯನ್ನು ಹೊಂದಿದವನು, ಸ್ವಯಮ್-ತಾನೇ, ಆತ್ಮನಿ-ತನ್ನಲ್ಲಿ, ತತ್-ಅದನ್ನು,(ಜ್ಞಾನವನ್ನು), ವಿಂದತಿ-ಹೊಂದುತ್ತಾನೆ.(ಕಂಡುಕೊಳ್ಳುತ್ತಾನೆ)

16.ಅಜ್ಞಶ್ಚಾಶ್ರದ್ಧಧಾನಶ್ಚ ಸಂಶಯಾತ್ಮಾ ವಿನಶ್ಯತಿ|

ನಾಯಂ ಲೋಕೋsಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ||4-40||

( ನಾಯಂ ಲೋಕೋSಸ್ತಿ ನ ಪರಃ  ನ ಸುಖಂ ಸಂಶಯಾತ್ಮನಃ )

ಸಾರಾಂಶಃ

ಸಂಶಯ ಸ್ವಭಾವದ ಶ್ರದ್ಧೆಯಿಲ್ಲದ ಮೂರ್ಖನು ನಾಶಹೊಂದುತ್ತಾನೆ . ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಇಂತಹವನಿಗೆ ನೆಮ್ಮದಿ ಇಲ್ಲ.

 ನೀತಿಃ

ಮಾಡುವ ಕೆಲಸದಲ್ಲಿ ನಂಬಿಕೆ ಹಾಗೂ ಶ್ರದ್ಧೆ ಇರಬೇಕು ಹಾಗೂ ಅದು ಯೋಗ್ಯವಾದಕೆಲಸ ಎನ್ನುವ ಜ್ಞಾನವೂ ಇರಬೇಕು. ಸಾಧನೆಯ ಮಾರ್ಗದಲ್ಲಿ ಸಂಶಯಪಡಬಾರದೆಂಬುದು ನೀತಿ.

ಶಬ್ಧಾರ್ಥಃ

ಅಜ್ಞಃ-ಮೂಢನು, ಚ-ಮತ್ತು, ಅಶ್ರದ್ಧಧಾನಃ-ವೇದಾದಿ ಧರ್ಮಗ್ರಂಥಗಳಲ್ಲಿ ಶ್ರದ್ಧೆ ಇಲ್ಲದವನು, ಚ-ಕೂಡಾ,  ಸಂಶಯ-ಸಂಶಯಗಳ, ಆತ್ಮನಃ-ವ್ಯಕ್ತಿಯು, ವಿನಷ್ಯತಿ-ಪತನಗೊಳ್ಳುತ್ತಾನೆ, ನ-ಎಂದಿಗೂ ಇಲ್ಲ, ಅಯಮ್-ಈ,  ಲೋಕಃ-ಜಗತ್ತು, ಅಸ್ತಿ-ಇದೆ, ನ-ಇಲ್ಲ, ಪರಃ-ಉನ್ನತ ಲೋಕವೂ,  ನ-ಇಲ್ಲ,  ಸುಖಮ್ -ಸುಖವು,  ಸಂಶಯ-ಸಂದೇಹವುಳ್ಳ, ಆತ್ಮನಃ-ವ್ಯಕ್ತಿಗೆ,

ಅನ್ವಯಃ

ಅಜ್ಞಃ-ಮೂಢನು, ಚ-ಮತ್ತು, ಅಶ್ರದ್ಧಧಾನಃ-ವೇದಾದಿ ಧರ್ಮಗ್ರಂಥಗಳಲ್ಲಿ ಶ್ರದ್ಧೆ ಇಲ್ಲದವನು, ಚ-ಕೂಡಾ,  ಸಂಶಯ-ಸಂಶಯಗಳ, ಆತ್ಮನಃ-ವ್ಯಕ್ತಿಯು, ವಿನಷ್ಯತಿ-ನಾಶವಾಗುತ್ತಾನೆ, ಸಂಶಯ-ಸಂದೇಹವುಳ್ಳ, ಆತ್ಮನಃ-ವ್ಯಕ್ತಿಗೆ, ಸುಖಮ್ –ಸುಖವು,  ಅಯಮ್-ಈ,  ಲೋಕಃ-ಜಗತ್ತು, ನ ಅಸ್ತಿ -ಎಂದಿಗೂ ಇಲ್ಲ, ನ ಪರಃ-ಮುಂದಿನ ಲೋಕದಲ್ಲಿಯೂ,  ನ – ಇಲ್ಲ, 

17.ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ|

ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಷಿನಃ||5-18||

ಸಾರಾಂಶಃ

ಜ್ಞಾನಿಗಳಿಗೆ ಉಚ್ಛ ನೀಚ ವೆಂಬ ಭೇಧಭಾವಗಳಿರುವುದಿಲ್ಲ. ಅವರು ಸಮಭಾವವನ್ನು ಹೊಂದಿರುತ್ತಾರೆ. ವಿದ್ಯೆ ವಿನಯ ಹೊಂದಿದ ಬ್ರಾಹ್ಮಣನಲ್ಲಿ, ಹಸುವಿನಲ್ಲಿ, ಆನೆಯಲ್ಲಿ, ನಾಯಿಯಲ್ಲಿ, ನಾಯಿಯ ಮಾಂಸತಿನ್ನುವವರಲ್ಲಿ, ಜ್ಞಾನವಂತರಾದವರು ಬೇಧ ಎಣಿಸುವುದಿಲ್ಲ. ಒಂದೇರೀತಿಯಲ್ಲಿ ನೋಡುತ್ತಾರೆ. .

ಶಬ್ಧಾರ್ಥ

ವಿದ್ಯಾ-ವಿದ್ಯೆ, ವಿನಯ-ಸೌಜನ್ಯ, ಸಂಪನ್ನೇ-ಪೂರ್ಣವಾಗಿ ಹೊಂದಿದ, ಬ್ರಾಹ್ಮಣೇ-ಬ್ರಾಹ್ಮಣನಲ್ಲಿ, ಗವಿ-ಹಸುವಿನಲ್ಲಿ, ಹಸ್ತಿನಿ-ಆನೆಯಲ್ಲಿ, ಶುನಿ-ನಾಯಿಯಲ್ಲಿ, ಚ-ಮತ್ತು, ಏವ-ಖಂಡಿತವಾಗಿ, ಶ್ವಪಾಕೇ-ನಾಯಿಯನ್ನು ತಿನ್ನುವವನಲ್ಲಿ(ಸಮಾಜದ ಅತ್ಯಂತಕಡೆಯವ್ಯಕ್ತಿಯಲ್ಲಿ) ಚ-ಮತ್ತು, ಪಂಡಿತಾಃ-ಜ್ಞಾನವಂತ ಜನರು, ಸಮದರ್ಷಿನಃ-ಒಂದೇರೀತಿ ನೋಡುತ್ತಾರೆ.

ಅನ್ವಯಃ

ಪಂಡಿತಾಃ-ಜ್ಞಾನಿಗಳು, ವಿದ್ಯಾ-ವಿದ್ಯೆ, ವಿನಯ-ಸೌಜನ್ಯ, ಸಂಪನ್ನೇ-ಪೂರ್ಣವಾಗಿ ಹೊಂದಿದ, ಬ್ರಾಹ್ಮಣೇ-ಬ್ರಾಹ್ಮಣನಲ್ಲಿ, ಚ-ಮತ್ತು, ಗವಿ-ಹಸುವಿನಲ್ಲಿ, ಹಸ್ತಿನಿ-ಆನೆಯಲ್ಲಿ, ಶುನಿ-ನಾಯಿಯಲ್ಲಿ, ಚ-ಮತ್ತು, ಶ್ವಪಾಕೇ-ನಾಯಿಯನ್ನು ತಿನ್ನುವವನಲ್ಲಿ(ಸಮಾಜದ ಅತ್ಯಂತಕಡೆಯವ್ಯಕ್ತಿಯಲ್ಲಿ) ಏವ-ಖಂಡಿತವಾಗಿ, ಸಮದರ್ಷಿನಃ-ಸಮಾನವಾದ ಭಾವವನ್ನು ಹೊಂದಿರುತ್ತಾರೆ.

18.ಉದ್ದರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್|

ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ||6-5||

( ಆತ್ಮೈವ ಹ್ಯಾತ್ಮನೋ ಬಂಧುಃ ಆತ್ಮೈವ ರಿಪುರಾತ್ಮನಃ )

ಸಾರಾಂಶಃ

ಮನುಷ್ಯನ ಉನ್ನತಿ ಹಾಗೂ ಅವನತಿಗೆ ಆತನೇ ಕಾರಣ ಆತನ ಮನಸ್ಸೇ ಆತನ ಬಂಧು ಹಾಗೂ ಆತನ ಶತೃ ಆದುದರಿಂದ ಮನಸ್ಸು ನಮ್ಮ ನಿಯಂತ್ರಣ ದಲ್ಲಿರಬೇಕು.

ಶಬ್ಧಾರ್ಥಃ

ಉದ್ದರೇತ್-ಉದ್ಧರಿಸಬೇಕು, ಆತ್ಮನಾ-ಮನಸ್ಸಿನಿಂದ, ಆತ್ಮಾನಮ್-ಬದ್ಧಾತ್ಮನನ್ನು,  ನ-ಇಲ್ಲ, ಆತ್ಮಾನಮ್-ಬದ್ಧಾತ್ಮನನ್ನು, ಅವಸಾದಯೇತ್-ಅವನತಿಗೊಳಿಸಬೇಕು, ಆತ್ಮಾ-ಮನಸ್ಸು, ಏವ-ಖಂಡಿತವಾಗಿಯೂ, ಹಿ-ನಿಜವಾಗಿ, ಆತ್ಮನಃ-ಬದ್ಧಾತ್ಮನ, ಬಂಧುಃ-ಸ್ನೇಹಿತನು, ಆತ್ಮಾ-ಮನಸ್ಸು, ಏವ-ಖಂಡಿತವಾಗಿಯೂ, ರಿಪುಃ-ಶತ್ರುವು, ಆತ್ಮನಃ-ಬದ್ಧಾತ್ಮನ.

ಅನ್ವಯಃ

ಆತ್ಮನಾ-ಮನಸ್ಸಿನಿಂದ, ಆತ್ಮಾನಮ್-ತನ್ನನ್ನು, ಉದ್ದರೇತ್-ಉದ್ಧಾರಮಾಡಿಕೊಳ್ಳಬೇಕು, ಆತ್ಮಾನಮ್-ತನ್ನನ್ನು, ನ ಅವಸಾದಯೇತ್-ಕುಗ್ಗಿಸಿಕೊಳ್ಳಬಾರದು, ಹಿ-ಏಕೆಂದರೆ,  ಏವ-ಖಂಡಿತವಾಗಿಯೂ, ಆತ್ಮಾ-ಮನಸ್ಸೇ, ಆತ್ಮನಃ-ತನ್ನ, ಬಂಧುಃ-ಸ್ನೇಹಿತನು, ಆತ್ಮಾ-ಮನಸ್ಸೇ, ಏವ-ಖಂಡಿತವಾಗಿಯೂ, ಆತ್ಮನಃ-ತನ್ನ. ರಿಪುಃ-ಶತ್ರುವು,

19.ಭೂಮಿರಾಪೋsನಲೋ ವಾಯುಃ ಖಂ ಮನೋ ಬುದ್ಧಿರೇವ ಚ|

ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ||7-4||

ಸಾರಾಂಶಃ

ಪಕೃತಿಯೆಲ್ಲವೂ ಭಗವಂತನದೇ ಭಿನ್ನರೂಪಗಳೆಂದು ತಿಳಿಯಬೇಕು. ಪ್ರಕೃತಿಯೇ ಭಗವಂತನ ಭೌತಿಕ ಶರೀರವೆನ್ನಬಹುದು ಬಗವಂತನು ಎಲ್ಲೆಡೆಯೂ ಭಿನ್ನ ಭಿನ್ನ ರೂಪಗಳಲ್ಲಿ ಇದ್ದಾನೆ. ಈ ಮುಂದಿನ ಎಂಟು ನನ್ನ

ಪ್ರಕೃತಿ ರೂಪಗ:ೆನ್ನುತ್ತಾನೆ ಕೃಷ್ಣ.

ಶಬ್ಧಾರ್ಥಃ

ಭೂಮಿಃ-ಭೂಮಿ, ಆಪಃ-ನೀರು, ಅನಲಃ-ಅಗ್ನಿ, ವಾಯುಃ-ಗಾಳಿ, ಖಮ್-ಆಕಾಶ, ಮನಃ-ಮನಸ್ಸು, ಬುದ್ಧಿಃ-ಬುದ್ಧಿಯು, ಏವ-ಖಂಡಿತವಾಗಿಯೂ, ಚ-ಮತ್ತು, ಅಹಂಕಾರಃ-ಅಹಂಕಾರವು, ಇತಿ-ಹೀಗೆ, ಇಯಮ್-ಇವೆಲ್ಲವೂ, ಮೇ-ನನ್ನ, ಭಿನ್ನಾ-ಬೇರೆಯಾದ, ಪ್ರಕೃತಿಃ-ಶಕ್ತಿಗಳು, ಅಷ್ಟಧಾ-ಎಂಟುವಿಧ.

ಅನ್ವಯಃ

ಭೂಮಿಃ-ಭೂಮಿ, ಆಪಃ-ನೀರು, ಅನಲಃ-ಅಗ್ನಿ, ವಾಯುಃ-ಗಾಳಿ, ಖಮ್-ಆಕಾಶ, ಮನಃ-ಮನಸ್ಸು, ಬುದ್ಧಿಃ-ಬುದ್ಧಿ, ಚ-ಮತ್ತು, ಅಹಂಕಾರಃ-ಅಹಂಕಾರವು, ಇತಿ-ಹೀಗೆ,  ಇಯಮ್-ಇವೆಲ್ಲವೂ, ಏವ-ಖಂಡಿತವಾಗಿಯೂ, ಮೇ-ನನ್ನ, ಭಿನ್ನಾ-ಭಿನ್ನವಾದ, ಅಷ್ಟಧಾ-ಎಂಟುವಿಧ. ಪ್ರಕೃತಿಃ-ಶಕ್ತಿಗಳು,

20. ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ|

ಮಾಯಯಾಪಹೃತಜ್ಞಾನಾ ಆಸುರಂ ಭಾವಮಾಶ್ರಿತಾಃ||7-15||

(ಮಾಯಯಾಪಹೃತಜ್ಞಾನಾಃ ಆಸುರಂ ಭಾವಮಾಶ್ರಿತಾಃ )

ಸಾರಾಂಶಃ

ಮೂರ್ಖರಾದವರು ನನಗೆ (ದೇವರಿಗೆ) ಶರಣಾಗುವುದಿಲ್ಲ ಇವರು ಮಾಯೆಯ ಭ್ರಮೆಯಿಂದ ಬುದ್ಧಿಯನ್ನು ಕಳೆದುಕೊಂಡು ರಾಕ್ಷಸ ಸ್ವಭಾವವನ್ನು ಹೊಂದುತ್ತಾರೆ.

ಶಬ್ಧಾರ್ಥಃ

ನ-ಇಲ್ಲ, ಮಾಮ್-ನನಗೆ, ದುಷ್ಕೃತಿನಃ-ದುಷ್ಟರು, ಮೂಢಾಃ-ಮೂರ್ಖರು, ಪ್ರಪದ್ಯಂತೇ-ಶರಣಾಗತರಾಗುತ್ತಾರೆ, ನರ ಅಧಮಾಃ-ಮಾನವರಲ್ಲಿ ಅತಿ ನೀಚರು, ಮಾಯಯಾ-ಮಾಯಾಶಕ್ತಿಯಿಂದ, ಅಪಹೃತ-ಅಪಹರಿಸಲ್ಪಟ್ಟ, ಜ್ಞಾನಾಃ-ಜ್ಞಾನವುಳ್ಳ, ಆಸುರಮ್-ಆಸುರೀ, ಭಾವಮ್-ಸ್ವಭಾವವನ್ನು, ಆಶ್ರಿತಾಃ-ಸ್ವೀಕರಿಸಿರುವ,

ಅನ್ವಯಃ

ಮಾಯಯಾ-ಮಾಯೆಯಿಂದ, ಅಪಹೃತ-ಅಪಹರಿಸಲ್ಪಟ್ಟ, ಜ್ಞಾನಾಃ-ಜ್ಞಾನವುಳ್ಳ, ಆಸುರಮ್-ಆಸುರೀ, ಭಾವಮ್-ಸ್ವಭಾವವನ್ನು, ಆಶ್ರಿತಾಃ-ಆಶ್ರಯಿಸಿರುವ, ದುಷ್ಕೃತಿನಃ-ದುಷ್ಟರು, ಮೂಢಾಃ-ಮೂರ್ಖರು (ಆದ), ನರ ಅಧಮಾಃ-ಮಾನವರಲ್ಲಿ ಅತಿ ನೀಚರು, ಮಾಮ್-ನನ್ನನ್ನು, ನ ಪ್ರಪದ್ಯಂತೇ-ಹೊಂದುವುದಿಲ್ಲ (ಶರಣಾಗತರಾಗುವುದಿಲ್ಲ).

21.ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ|

ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್||7-21||

ಸಾರಾಂಶಃ

ಯಾರು ಯಾರು ಯಾವ ಯಾವ ರೂಪದಲ್ಲಿ ಭಗವಂತನನ್ನು ಪೂಜಿಸಿದರೂ ಅವರಿಗೆ ಅದೇ ರೂಪದಲ್ಲಿ ಅನುಗ್ರಹಿಸುವುದಾಗಿ ಕೃಷ್ಣನ ಮಾತು. ಪೂಜಾವಿಧಾನ, ದೇವರರೂಪ, ನಾಮ ಭಿನ್ನವಾದರೂ ಶ್ರದ್ಧೆಯಿದ್ದರೆ ಫಲ ಸಮಾನವಾಗಿರುವುದು.

ಶಬ್ಧಾರ್ಥಃ

ಯಃ ಯಃ-ಯಾರು ಯಾರು, ಯಾಮ್ ಯಾಮ್-ಯಾವ ಯಾವ, ತನುಮ್-ದೇವತಾರೂಪವನ್ನು, ಭಕ್ತಃ-ಭಕ್ತನು, ಶ್ರದ್ಧಯಾ-ಶ್ರದ್ಧೆಯಿಂದ, ಅರ್ಚಿತುಮ್-ಪೂಜಿಸಲು, ಇಚ್ಛತಿ-ಅಪೇಕ್ಷಿಸುತ್ತಾನೋ, ತಸ್ಯ ತಸ್ಯ-ಅವರಿಗೆ, ಅಚಲಾಮ್-ಸ್ಥಿರವಾದ, ಶ್ರದ್ಧಾಮ್-ಶ್ರದ್ಧೆಯನ್ನು, ತಾಮ್- ಆ, ಏವ-ಖಂಡಿತವಾಗಿಯೂ, ವಿದಧಾಮಿ-ಕೊಡುತ್ತೇನೆ, ಅಹಮ್-ನಾನು,

ಅನ್ವಯಃ

ಯಃ ಯಃ-ಯಾವ ಯಾವ, ಭಕ್ತಃ-ಭಕ್ತನು, ಯಾಮ್ ಯಾಮ್-ಯಾವ ಯಾವ, ತನುಮ್-ಶರೀರವನ್ನು(ದೇವತಾರೂಪವನ್ನು) ಶ್ರದ್ಧಯಾ-ಶ್ರದ್ಧೆಯಿಂದ, ಅರ್ಚಿತುಮ್-ಪೂಜಿಸಲು, ಇಚ್ಛತಿ-ಇಚ್ಛಿಸುತ್ತಾನೋ, ತಸ್ಯ ತಸ್ಯ-ಅವನವನಿಗೆ, ತಾಮ್ಏವ-ಅದೇ, ಅಚಲಾಮ್-ಸ್ಥಿರವಾದ, ಶ್ರದ್ಧಾಮ್-ಶ್ರದ್ಧೆಯನ್ನು, ಅಹಮ್-ನಾನು, ವಿದಧಾಮಿ-ಕೊಡುತ್ತೇನೆ,

22. ಯೇsಪ್ಯನ್ಯದೇವತಾ ಭಕ್ತಾ ಯಜಂತೇ ಶ್ರದ್ಧಯಾನ್ವಿತಾಃ|

ತೇsಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್||9-23||

(ಯೇSಪ್ಯನ್ಯದೇವತಾ ಭಕ್ತಾಃ  ಯಜಂತೇ ಶ್ರದ್ಧಯಾನ್ವಿತಾಃ)

ಸಾರಾಂಶಃ

ದೇವರು ಒಬ್ಬನೇ ನಾಮ ಹಲವು ಎಂಬುದು ಸಾರ ಯಾವುದೇ ನಾಮ ರೂಪದಲ್ಲಿ ಪೂಜಿಸಿದರೂ ಜನರು ನನ್ನನ್ನೇ ಪೂಜಿಸುತ್ತಾರೆಂಬುದಾಗಿ ಕೃಷ್ಣನ ಮಾತು.

ಶಬ್ಧಾರ್ಥಃ

ಯೇ-ಯಾವ, ಅಪಿ-ಕೂಡಾ, ಅನ್ಯ-ಇತರ, ದೇವತಾ-ದೇವತೆಗಳ, ಭಕ್ತಾಃ-ಭಕ್ತರು, ಯಜಂತೇ-ಪೂಜಿಸುತ್ತಾರೋ, ಶ್ರದ್ಧಯಾ ಅನ್ವಿತಾಃ-ಶ್ರದ್ಧೆಯೊಂದಿಗೆ, ತೇ-ಅವರು, ಅಪಿ-ಕೂಡಾ, ಮಾಮ್-ನನ್ನನ್ನು, ಏವ-ಮಾತ್ರವೇ, ಕೌಂತೇಯ-ಕುಂತೀಪುತ್ರನೇ, ಯಜಂತಿ-ಅರ್ಚಿಸುತ್ತಾರೆ, ಅವಿಧಿಪೂರ್ವಕಮ್-ಅಜ್ಞಾನಪೂರ್ವಕವಾಗಿ,

ಅನ್ವಯಃ

ಕೌಂತೇಯ- ಎಲೈ ಅರ್ಜುನನೇ, ಯೇ-ಯಾವ, ಅನ್ಯ-ಇತರ, ದೇವತಾ-ದೇವತೆಗಳ, ಭಕ್ತಾಃ-ಭಕ್ತರು,  ಅಪಿ-ಕೂಡಾ, ಶ್ರದ್ಧಯಾ ಅನ್ವಿತಾಃ-ಶ್ರದ್ಧೆಯೊಂದಿಗೆ, ಯಜಂತೇ-ಪೂಜಿಸುತ್ತಾರೋ, ತೇ-ಅವರು, ಅಪಿ-ಕೂಡಾ, ಮಾಮ್ ಏವ –ನನ್ನನ್ನೇ, ಅವಿಧಿಪೂರ್ವಕಮ್-ಅಜ್ಞಾನದಿಂದ, ಯಜಂತಿ-ಅರ್ಚಿಸುತ್ತಾರೆ,

23. ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ|

ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ||9-26||

(ತದಹಂ ಭಕ್ತ್ಯುಪಹೃತಮ್ ಅಶ್ನಾಮಿ ಪ್ರಯತಾತ್ಮನಃ)

ಸಾರಾಂಶಃ

ಭಗವಂತನಕೃಪೆಗೆ ಆಡಂಬರದ ಪೂಜೆಯ ಅಗತ್ಯವಿಲ್ಲ ಭಕ್ತಿ ಹಾಗೂ ಚಿತ್ತ ಶುದ್ಧಿಯೇ ಮುಖ್ಯವಾದ ಅಪೇಕ್ಷೆ ಎಂಬುದು ಕೃಷ್ಣನ ಮಾತಿನ ಸಾರ.

ಶಬ್ಧಾರ್ಥಃ

ಪತ್ರಂ-ಒಂದು ಎಲೆಯನ್ನು, ಪುಷ್ಪಂ-ಒಂದು ಹೂವನ್ನು, ಫಲಂ-ಒಂದು ಹಣ್ಣನ್ನು, ತೋಯಮ್-ಸ್ವಲ್ಪ ನೀರನ್ನು, ಯಃ-ಯಾವನು, ಮೇ-ನನಗೆ, ಭಕ್ತ್ಯಾ-ಭಕ್ತಿಯಿಂದ, ಪ್ರಯಚ್ಛತಿ-ಅರ್ಪಿಸುತ್ತಾನೋ, ತತ್-ಅದನ್ನು, ಅಹಮ್-ನಾನು,  ಭಕ್ತಿ ಉಪಹೃತಮ್-ಭಕ್ತಿಯಿಂದ ಅರ್ಪಿಸಿದ, ಅಶ್ನಾಮಿ-ಸ್ವೀಕರಿಸುತ್ತೇನೆ, ಪ್ರಯತ ಆತ್ಮನಃ-ಶುದ್ಧಪ್ರಜ್ಞೆಯಲ್ಲಿ ಇರುವವನಿಂದ.

ಅನ್ವಯಃ

ಯಃ-ಯಾವನು, ಮೇ-ನನಗೆ, ಭಕ್ತ್ಯಾ-ಭಕ್ತಿಯಿಂದ, ಪತ್ರಂ-ಎಲೆಯನ್ನು, ಪುಷ್ಪಂ-ಹೂವನ್ನು, ಫಲಂ-ಹಣ್ಣನ್ನು, ತೋಯಮ್-ನೀರನ್ನು, ಪ್ರಯಚ್ಛತಿ-ಕೊಡುತ್ತಾನೋ, ಪ್ರಯತ ಆತ್ಮನಃ-ಶುದ್ಧಮನಸ್ಸಿನಲ್ಲಿ ಇರುವವನಿಂದ.

ಭಕ್ತ್ಯಾ ಉಪಹೃತಮ್-ಭಕ್ತಿಯಿಂದ ಸಮರ್ಪಿಸಿದ, ತತ್-ಅದನ್ನು, ಅಹಮ್-ನಾನು, ಅಶ್ನಾಮಿ-ಸ್ವೀಕರಿಸುತ್ತೇನೆ,

24. ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್|

ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಮ್||9-27||

ಸಾರಾಂಶಃ

ಮಾಡುವ ಸಾತ್ವಿಕ ಕೆಲಸವನ್ನು ದೇವರಕೆಲಸ ಎನ್ನುವ ಭಾವನೆಯಿಂದ ಮಾಡಬೇಕು.

ಶಬ್ಧಾರ್ಥಃ

ಯತ್-ಏನೆಲ್ಲಾ, ಕರೋಷಿ-ಮಾಡುತ್ತೀಯೋ, ಯತ್-ಏನೆಲ್ಲಾ, ಅಶ್ನಾಸಿ-ತಿನ್ನುತ್ತೀಯೋ, ಯತ್-ಏನನ್ನು, ಜುಹೋಷಿ-ಅರ್ಪಿಸುತ್ತೀಯೋ, ದದಾಸಿ-ಕೊಡುತ್ತೀಯೋ, ಯತ್-ಏನನ್ನಾದರೂ, ಯತ್-ಏನೆಲ್ಲ, ತಪಸ್ಯಸಿ-ವ್ರತಗಳನ್ನು ಆಚರಿಸುತ್ತೀಯೋ, ಕೌಂತೇಯ-ಕುಂತೀಪುತ್ರನೇ, ತತ್-ಅದನ್ನು, ಕುರುಷ್ವ-ಮಾಡು, ಮತ್- ನನಗೆ, ಅರ್ಪಣಮ್-ಅರ್ಪಿತವನ್ನಾಗಿ.

ಅನ್ವಯಃ

ಕೌಂತೇಯ-ಎಲೈ ಅರ್ಜುನನೆ, ಯತ್-ಯಾವುದನ್ನು, ಕರೋಷಿ-ಮಾಡುತ್ತೀಯೋ, ಯತ್-ಯಾವುದನ್ನು, ಅಶ್ನಾಸಿ-ತಿನ್ನುತ್ತೀಯೋ, ಯತ್-ಯಾವುದನ್ನು, ಜುಹೋಷಿ- (ಹೋಮದಮೂಲಕ) ಅರ್ಪಿಸುತ್ತೀಯೋ, ಯತ್-ಯಾವುದನ್ನು, ದದಾಸಿ-ದಾನ ಮಾಡುತ್ತೀಯೋ, ಯತ್-ಏನೆಲ್ಲ, ತಪಸ್ಯಸಿ-ವ್ರತಗಳನ್ನು (ತಪಸ್ಸು) ಆಚರಿಸುತ್ತೀಯೋ, ತತ್-ಅದನ್ನು, ಮತ್- ನನಗೆ, ಅರ್ಪಣಮ್-ಅರ್ಪಿತವನ್ನಾಗಿ. ಕುರುಷ್ವ-ಮಾಡು,

25. ಶ್ರೇಯೋ ಹಿ ಜ್ಞಾನಮಭ್ಯಾಸಾಜ್ಞಾನಾದ್ಧ್ಯಾನಂ ವಿಶಿಷ್ಯತೇ|

ಧ್ಯಾನಾತ್ ಕರ್ಮಫಲತ್ಯಾಗಸ್ತ್ಯಾಗಾಚ್ಛಾಂತಿರನಂತರಮ್||12-12||

( ಶ್ರೇಯೋ ಹಿ ಜ್ಞಾನಮಭ್ಯಾಸಾತ್ ಜ್ಞಾನಾದ್ಧ್ಯಾನಂ ವಿಶಿಷ್ಯತೇ)

( ಧ್ಯಾನಾತ್ ಕರ್ಮಫಲತ್ಯಾಗಃ ತ್ಯಾಗಾಚ್ಛಾಂತಿರನಂತರಮ್ )

ಸಾರಾಂಶಃ

ಇಲ್ಲಿ ಕೃಷ್ಣನು ಉತ್ತಮ ವರ್ತನೆ ಹೇಗೆಂದು ಹೇಳುತ್ತಾನೆ. ಯೋಗಕ್ಕಿಂತ ಜ್ಞಾನ ಜ್ನಾನಕ್ಕಿಂತ ಧ್ಯಾನ ಧ್ಯಾನಕ್ಕಿಂತ ಕರ್ಮಫಲತ್ಯಾಗ ಹೀಗೆ ಸಾಗಬೇಕೆಂಬುದು ಕೃಷ್ಣನ ಅಭಿಲಾಷೆ. ಹೀಗೆ ಕರ್ಮ ಫಲತ್ಯಾಗದಿಂದ ಮನಸ್ಸಿನ ಶಾಂತಿಯು ಲಭಿಸುತ್ತದೆಂದು ಹೇಳುತ್ತಾನೆ.

ಶಬ್ಧಾರ್ಥಃ

ಶ್ರೇಯಃ-ಉತ್ತಮವು, ಹಿ-ಖಂಡಿತವಾಗಿಯೂ, ಜ್ಞಾನಮ್-ಜ್ಞಾನವು, ಅಭ್ಯಾಸಾತ್-ಅಭ್ಯಾಸಕ್ಕಿಂತ, ಜ್ಞಾನಾತ್-ಜ್ಞಾನಕ್ಕಿಂತ, ದ್ಧ್ಯಾನಮ್-ಧ್ಯಾನವು, ವಿಶಿಷ್ಯತೇ-ಉತ್ತಮವೆಂದು, ಪರಿಗಣಿತವಾಗಿದೆ, ಧ್ಯಾನಾತ್-ಧ್ಯಾನಕ್ಕಿಂತ, ಕರ್ಮ ಫಲ ತ್ಯಾಗಃ-ಕರ್ಮ ಫಲಗಳ ತ್ಯಾಗವು, ತ್ಯಾಗಾತ್-ಅಂತಹ ತ್ಯಾಗದಿಂದ, ಶಾಂತಿಃ-ಶಾಂತಿಯು, ರನಂತರಮ್-ಆಮೇಲೆ.

ಅನ್ವಯಃ

ಹಿ-ಏಕೆಂದರೆ, ಅಭ್ಯಾಸಾತ್-(ಯೋಗ) ಅಭ್ಯಾಸಕ್ಕಿಂತಲೂ, ಜ್ಞಾನಮ್-ಜ್ಞಾನವು, ಶ್ರೇಯಃ-ಉತ್ತಮವು, ಜ್ಞಾನಾತ್-ಜ್ಞಾನಕ್ಕಿಂತ, ಧ್ಯಾನಮ್-ಧ್ಯಾನವು, ವಿಶಿಷ್ಯತೇ-ಉತ್ತಮವೆಂದು, ಪರಿಗಣಿತವಾಗಿದೆ, ಧ್ಯಾನಾತ್-ಧ್ಯಾನಕ್ಕಿಂತ, ಕರ್ಮ ಫಲ ತ್ಯಾಗಃ-ಕರ್ಮ ಫಲಗಳ ತ್ಯಾಗವು, ತ್ಯಾಗಾತ್-ಅಂತಹ ತ್ಯಾಗದ, ಅನಂತರಮ್-ಆಮೇಲೆ ಶಾಂತಿಃ-ಶಾಂತಿಯು (ಉಂಟಾಗುತ್ತದೆ).

26. ದ್ವೌಭೂತಸರ್ಗೌ ಲೋಕೇsಸ್ಮಿನ್ದೈವ ಆಸುರ ಏವ ಚ|

ದೈವೋ ವಿಸ್ತರಶಃ ಪ್ರೊಕ್ತ ಆಸುರಂ ಪಾರ್ಥ ಮೇ ಶೃಣು||16-6||

(ದ್ವೌಭೂತಸರ್ಗೌ ಲೋಕೇSಸ್ಮಿನ್ ದೈವ ಆಸುರ ಏವ ಚ)

( ದೈವೋ ವಿಸ್ತರಶಃ ಪ್ರೊಕ್ತಃ  ಆಸುರಂ ಪಾರ್ಥ ಮೇ ಶೃಣು )

ಸಾರಾಂಶಃ

ಲೋಕದಲ್ಲಿ ಎರಡು ವಿಧದ ಜನರಿರುತ್ತಾರೆ ಸಜ್ಜನರು ದುಷ್ಟರು, ಅಸುರರು ರಾಕ್ಷಸರು ಎಂಬುದಾಗಿ ಹೇಳುತ್ತಾನೆ ಕೃಷ್ಣ ಇಲ್ಲಿ ನಮಗೆ ಸಂಶಯವಿರಬಾರದು. ಸಬ್ಕಾ ಸಾತ್ ಸಬ್ಕಾ ವಿಕಾಸ್ ಸಜ್ಜನರಿಗೆ ಮಾಡುವ ಧ್ರೊಹವಾಗಿದೆ. ಅಸಸುರರನ್ನು ಬೆಳೆಸಿದರೆ ಅವರು ಸಜ್ಜನರನ್ನು ನಾಶಮಾಡುತ್ತಾರೆ ಇದನ್ನು ಲೋಕದಲ್ಲಿ ನೋಡುತ್ತಿದ್ದೇವೆ. ಉಷ್ಟ ಸಜ್ಜನರ ರಕ್ಷಣೆ ಹಾಗೂ ದುರ್ಜನರ ನಿಗ್ರಹ ಇದುವೇ ರಾಜಧರ್ಮವಾಗಿದೆ.

ಶಬ್ಧಾರ್ಥಃ

ದ್ವೌ-ಎರಡು, ಭೂತಸರ್ಗೌ-ಸೃಷ್ಟಿಸಿದ ಜೀವಿಗಳು, ಲೋಕೇ-ಜಗತ್ತಿನಲ್ಲಿ, ಅಸ್ಮಿನ್-ಈ, ದೈವಃ-ದೈವಿಕ, ಆಸುರಃ-ಆಸುರೀ, ಏವ-ಖಂಡಿತವಾಗಿಯೂ, ಚ-ಮತ್ತು, ದೈವಃ-ದೈವಿಕವು, ವಿಸ್ತರಶಃ-ವಿಸ್ತಾರವಾಗಿ, ಪ್ರೊಕ್ತಃ-ಹೇಳಲ್ಪಟ್ಟಿದೆ. ಆಸುರಮ್-ಆಸುರಿಯನ್ನು, ಪಾರ್ಥ-ಪಾರ್ಥನೇ, ಮೇ-ನನ್ನಿಂದ, ಶೃಣು-ಕೇಳು.

ಅನ್ವಯಃ

ಪಾರ್ಥ-ಪಾರ್ಥನೇ, ಅಸ್ಮಿನ್-ಈ ಲೋಕೇ-ಜಗತ್ತಿನಲ್ಲಿ, ಏವ-ಖಂಡಿತವಾಗಿಯೂ,  ದೈವಃ-ದೈವಿಕ, ಚ-ಮತ್ತು, ಆಸುರಃ-ಆಸುರೀ, ದ್ವೌ-ಎರಡು, ಭೂತಸರ್ಗೌ-ಸೃಷ್ಟಿಸಿದ ಜೀವಿಗಳು,(ಇರುತ್ತವೆ) ದೈವಃ-ದೈವಿಕವು, ವಿಸ್ತರಶಃ-ವಿಸ್ತಾರವಾಗಿ, ಪ್ರೊಕ್ತಃ-ಹೇಳಲ್ಪಟ್ಟಿದೆ. ಆಸುರಮ್-ಆಸುರಿಯನ್ನು, ಮೇ-ನನ್ನಿಂದ, ಶೃಣು-ಕೇಳು.

27. ದೇವದ್ವಿಜಗುರುಪ್ರಾಜ್ಞಪೂಜನಂ ಶೌಚಮಾರ್ಜವಮ್|

ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ||17-14||

( ದೇವದ್ವಿಜಗುರುಪ್ರಾಜ್ಞ-ಪೂಜನಂ ಶೌಚಮಾರ್ಜವಮ್)

(ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ)

ಸಾರಾಂಶಃ

ದೇವರು, ಬ್ರಹ್ಮಜ್ಞಾನಿಗಳು, ಗುರುಗಳು, ಪ್ರಜ್ಞಾವಂತ ಸಜ್ಜನರ ಪೂಜೆಯು(ಗೌರವಿಸುವುದು) ಶುಚಿತ್ವ, ಸರಳತೆ, ಬ್ರಹ್ಮಚರ್ಯ, ಅಹಿಂಸಾ, ಇವುಗಳ ಆಚರಣೆ ಶಾರೀರಿಕ ತಪಎನಿಸಿದೆ.

ಶಬ್ಧಾರ್ಥಃ

ದೇವ-ಪರಮಪ್ರಭುವು, ದ್ವಿಜ-ವೇದಾಧ್ಯಯನ ಮಾಡಿದ ಜ್ಞಾನಿ, ಗುರು-ಗುರು, ಪ್ರಾಜ್ಞ-ಪ್ರಜ್ಞಾಪೂರ್ವಕ ವ್ಯಕ್ತಿಗಳ, ಪೂಜನಮ್-ಪೂಜೆಯು, ಶೌಚಮ್-ಶುಚಿತ್ವವು, ಆರ್ಜವಮ್-ಸರಳತೆಯು, ಬ್ರಹ್ಮಚರ್ಯಮ್-ಬ್ರಹ್ಮಚರ್ಯವು, ಅಹಿಂಸಾ-ಹಿಂಸೆಮಾಡದಿರುವುದು, ಚ-ಮತ್ತು, ಶಾರೀರಮ್-ದೇಹಕ್ಕೆ ಸಂಬಂಧಿಸಿದ, ತಪಃ-ತಪಸ್ಸು, ಉಚ್ಯತೇ-ಎಂದು ಹೆಳಲಾಗುತ್ತದೆ.

ಆನ್ವಯಃ

ದೇವ-ಪರಮಪ್ರಭುವು, ದ್ವಿಜ-ವೇದಾಧ್ಯಯನ ಮಾಡಿದ ಜ್ಞಾನಿ, ಗುರು-ಗುರು, ಪ್ರಾಜ್ಞ-ಪ್ರಜ್ಞಾವಂತ ಸಜ್ಜನರು, ಪೂಜನಮ್-ಪೂಜೆಯು, ಚ-ಮತ್ತು, ಶೌಚಮ್-ಶುಚಿತ್ವವು, ಆರ್ಜವಮ್-ಸರಳತೆಯು, ಬ್ರಹ್ಮಚರ್ಯಮ್-ಬ್ರಹ್ಮಚರ್ಯವು, ಅಹಿಂಸಾ-ಹಿಂಸೆಮಾಡದಿರುವುದು, ಶಾರೀರಮ್-ದೇಹಕ್ಕೆ ಸಂಬಂಧಿಸಿದ, ತಪಃ-ತಪಸ್ಸು, ಉಚ್ಯತೇ-ಎಂದು ಹೆಳಲಾಗುತ್ತದೆ.

28. ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್|

ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ||17-15||

ಸಾರಾಂಶಃ

ವೇದಾದಿ ಶಾಸ್ತ್ರಗ್ರಂಥಗಳ ಅಧ್ಯಯನ  ಹಾಗೂ ಅಭ್ಯಾಸ ಮಾಡುತ್ತಾ. ಮತ್ತು ಉದ್ವೇಗಕ್ಕೋಳಗಾಗದೆ, ಯಾವಾಗಲೂ ಸತ್ಯವಾದ, ಪ್ರಿಯವಾದ ಹಿತವಾದ ಮಾತನಾಡುವುದು ಮಾತಿನ ತಪಸ್ಸು ಎಂದು ಹೇಳಲ್ಪಡುತ್ತದೆ.

ಶಬ್ಧಾರ್ಥಃ

ಅನುದ್ವೇಗಕರಮ್-ಉದ್ವೇಗಕರವಲ್ಲದ, ವಾಕ್ಯಮ್-ಮಾತುಗಳು, ಸತ್ಯಮ್-ಸತ್ಯವಾದ, ಪ್ರಿಯ-ಪ್ರಿಯವಾದ, ಹಿತಮ್-ಹಿತಕರವಾದ, ಚ-ಮತ್ತು, ಯತ್-ಯಾವುದು, ಸ್ವಾಧ್ಯಾಯ-ವೇದಾಧ್ಯಯನದ, ಅಭ್ಯಸನಮ್-ಅಭ್ಯಾಸವು, ಚ-ಮತ್ತು, ಏವ-ಖಂಡಿತವಾಗಿಯೂ, ವಾಕ್ ಮಯಮ್-ಮಾತುಗಳ, ತಪಃ-ತಪಸ್ಸು, ಉಚ್ಯತೇ-ಎಂದು ಹೇಳಲಾಗುತ್ತದೆ.

ಅನ್ವಯಃ

ಅನುದ್ವೇಗಕರಮ್-ಉದ್ವೇಗಕರವಲ್ಲದ, ವಾಕ್ಯಮ್-ಮಾತುಗಳು, ಸತ್ಯಮ್-ಸತ್ಯವಾದ, ಪ್ರಿಯ-ಪ್ರಿಯವಾದ, ಹಿತಮ್-ಹಿತಕರವಾದ, ಚ-ಮತ್ತು, ಯತ್-ಯಾವುದು, ಸ್ವಾಧ್ಯಾಯ-ವೇದಾಧ್ಯಯನದ, ಅಭ್ಯಸನಮ್-ಅಭ್ಯಾಸವು, ಚ-ಮತ್ತು, ಏವ-ಖಂಡಿತವಾಗಿಯೂ, ವಾಕ್ ಮಯಮ್-ಮಾತುಗಳ, ತಪಃ-ತಪಸ್ಸು, ಉಚ್ಯತೇ-(ಎಂದು) ಹೇಳಲಾಗುತ್ತದೆ.

29. ಮನಃಪ್ರಸಾದಃ ಸೌಮ್ಯತ್ವಂ ಮೌನಮಾತ್ಮವಿನಿಗ್ರಹಃ|

ಭಾವಸಂಶುದ್ಧಿರಿತ್ಯೇತತ್ತಪೋ ಮಾನಸಮುಚ್ಯತೇ||17-16||

(ಭಾವಸಂಶುದ್ಧಿರಿತ್ಯೇತತ್   ತಪೋ ಮಾನಸಮುಚ್ಯತೇ)

ಸಾರಾಂಶಃ

ಮನಸ್ಸಿನ ಪ್ರಸನ್ನತೆ, ಸೌಮ್ಯಭಾವ, ಮೌನ, ಆತ್ಮನಿಗ್ರಹ, ಶುದ್ಧವಾದ ಸ್ವಭಾವ(ಭಾವನೆ) ಹೊಂದಿರುವುದು ಇವನ್ನು ಮನಸ್ಸಿನ ತಪ ಎಂದು ಹೇಳವಾಗುತ್ತದೆ.

ಶಬ್ಧಾರ್ಥಃ

ಮನಃಪ್ರಸಾದಃ-ಮನಸ್ಸಿನ ತೃಪ್ತಿಯು, ಸೌಮ್ಯತ್ವಮ್- ಪ್ರೀತಿಪೂರ್ವಕ ಸೌಮ್ಯಸ್ವಭಾವ. ಮೌನಮ್-ಮೌನವು, ಆತ್ಮ-ಸ್ವಯಂ, ವಿನಿಗ್ರಹಃ-ನಿಯಂತ್ರಣವು, ಭಾವ-ಸ್ವಭಾವದ, ಸಂಶುದ್ಧಿಃ-ಶುದ್ಧಿಯು, ಇತಿ-ಹೀಗೆ, ಏತತ್-ಈ, ತಪಃ-ತಪಸ್ಸು, ಮಾನಸಮ್-ಮನಸ್ಸಿನದು, ಉಚ್ಯತೇ-ಎಂದು ಹೇಳಲಾಗುತ್ತದೆ.

ಅನ್ವಯಃ

ಮನಃಪ್ರಸಾದಃ-ಮನಸ್ಸಿನ ತೃಪ್ತಿಯು, ಸೌಮ್ಯತ್ವಮ್- ಸೌಮ್ಯಸ್ವಭಾವ. ಮೌನಮ್-ಮೌನವು, ಆತ್ಮ-ಸ್ವಯಂ, ವಿನಿಗ್ರಹಃ-ನಿಯಂತ್ರಣವು, ಭಾವ-ಸ್ವಭಾವದ, ಸಂಶುದ್ಧಿಃ-ಶುದ್ಧಿಯು, ಇತಿ-ಹೀಗೆ, ಏತತ್-ಇದು, ಮಾನಸಮ್-ಮನಸ್ಸಿನ, ತಪಃ-ತಪಸ್ಸು, ಉಚ್ಯತೇ- (ಎಂದು) ಹೇಳಲಾಗುತ್ತದೆ.

30. ದಾತವ್ಯಮಿತಿ ಯದ್ದಾನಂ ದೀಯತೇsನುಪಕಾರಿಣೇ|

ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ವಿಕ ಸ್ಮೃತಮ್||17-20||

ಸಾರಾಂಶಃ

ಉತ್ತಮ ಸ್ಥಳದಲ್ಲಿ, ಉತ್ತಮ ಸಮಯದಲ್ಲಿ, ಯೋಗ್ಯ ವ್ಯಕ್ತಿಗೆ ಫ್ರತಿಫಲದ ಅಪೇಕ್ಷೆ ಇಲ್ಲದೆ ದಾನಮಾಡಬೇಕೆಂದೇ ದಾನಮಾಡುವುದು. ಸಾತ್ವಿಕ ದಾನವಾಗಿದೆ. ದುರ್ಜನರಿಗೆ, ಅಪಾತ್ರರಿಗೆ, ಅನಗತ್ಯಸಮಯದಲ್ಲಿ ದಾನಮಾಡಬಾರದು ಎಂದು ತಿಳಿಯಬೇಕು. ಉದಾ ಅಮೇರಿಕಾ ಪಾಕಿಸ್ಥಾನಕ್ಕೆ ಹಣಕೊಟ್ಟಂತೆ, ಭಾರತ ಟರ್ಕಿಗೆ ಸಹಾಯ ಮಾಡಿದಂತೆ. ಇದು ಅಪಾತ್ರರಿಗೆ ಕೊಡುವ ದಾನವಾಗಿದೆ.

ಶಬ್ಧಾರ್ಥಃ

ದಾತವ್ಯಮ್-ಕೊಡಬೇಕು ಎಂಬುದಾಗಿ, ಇತಿ-ಹೀಗೆ, ಯತ್-ಯಾವುದು, ದಾನಮ್-ದಾನವು, ದೀಯತೆ-ಕೊಡಲ್ಪಡುವುದೋ, ಅನುಪಕಾರಿಣೇ-ಪ್ರತಿಫಲಗಳನ್ನು ಬಯಸದೆ, ದೇಶೇ-ವಿಶಿಷ್ಟ ಸ್ಥಳದಲ್ಲಿ, ಕಾಲೇ-ಯೋಗ್ಯಕಾಲದಲ್ಲಿ, ಚ-ಮತ್ತು, ಪಾತ್ರೇ-ಅರ್ಹವ್ಯಕ್ತಿಗೆ, ಚ-ಮತ್ತು, ತತ್-ಆ, ದಾನಮ್-ದಾನವು, ಸಾತ್ವಿಕಮ್-ಸತ್ವಗುಣದಲ್ಲಿರುವಂತಹುದು. ಸ್ಮೃತಮ್-ಎಂದು ಪರಿಗಣಿತವಾಗಿದೆ.

ಅನ್ವಯಃ

ದಾತವ್ಯಮ್-ದಾನಮಾಡಬೇಕು ಎಂಬುದಾಗಿ, ಯತ್-ಯಾವುದು, ದಾನಮ್-ದಾನವು, ದೀಯತೆ-ಕೊಡಲ್ಪಡುವುದೋ, ಅನುಪಕಾರಿಣೇ-ಪ್ರತಿಫಲಗಳನ್ನು ಬಯಸದೆ, ದೇಶೇ-ವಿಶಿಷ್ಟ ಸ್ಥಳದಲ್ಲಿ, ಕಾಲೇ-ಯೋಗ್ಯಕಾಲದಲ್ಲಿ, ಚ-ಮತ್ತು, ಪಾತ್ರೇ-ಅರ್ಹವ್ಯಕ್ತಿಗೆ, ಚ-ಮತ್ತು, ತತ್-ಆ, ದಾನಮ್-ದಾನವು, ಸಾತ್ವಿಕಮ್-ಸತ್ವಗುಣದಲ್ಲಿರುವಂತಹುದು. ಇತಿ-ಹೀಗೆ, ಸ್ಮೃತಮ್-ಎಂದು ಪರಿಗಣಿತವಾಗಿದೆ.

31. ಅಧಿಷ್ಠಾನಂ ತಥಾಕರ್ತಾ ಕರಣಂ ಚ ಪೃಥಗ್ವಿಧಮ್ |

ವಿವಿಧಾಶ್ಚ ಪೃಥಕ್ ಚೇಷ್ಟಾ ದೈವಂ ಚೈವಾತ್ರ ಪಂಚಮಮ್ ||18-14||

( ವಿವಿಧಾಶ್ಚ ಪೃಥಕ್ ಚೇಷ್ಟಾಃ  ದೈವಂ ಚೈವಾತ್ರ ಪಂಚಮಮ್ ) 

ಸಾರಾಂಶಃ

ಯಾವುದೇ ಸಂಕಲ್ಪದ ಯಶಸ್ಸಿಗೆ ಐದು ಅಂಶಗಳು ಕಾರಣವಾಗುತ್ತವೆ. ಕೆಲಸಮಾಡುವ ಸ್ಥಳ, ಮಾಡುವ ವ್ಯಕ್ತಿ, ಭಿನ್ನ ಭಿನ್ನ ಸಾದನಗಳು, ಭಿನ್ನ ಭಿನ್ನ ಪ್ರಯತ್ನಗಳು, ಮತ್ತು ಐದನೆಯದಾಗಿ ಭಗವಂತನ ಕೃಪೆ. ಅಂದರೆ 80% ನಮ್ಮ ಶ್ರಮವು ಗುರಿತಲುಪುವಲ್ಲಿ ಕುಖ್ಯವಾಗಿರುತ್ತದೆ. ಎಲ್ಲದನ್ನೂ ದೇವರೇಮಾಡುತ್ತಾನೆಂದು ಪೂಜೆಮಾಡುತ್ತಾಕೂತರೆ ಅದರಿಂದ ಕಾರ್ಯಸಿದ್ಧಿಯಾಗುವುದಿಲ್ಲ ಎಂಬುದು ಅರ್ಥ.

 ಶಬ್ಧಾರ್ಥಃ

ಅಧಿಷ್ಠಾನಮ್ – ಕೆಲಸಮಾಡುವ ಸ್ಥಳ, ತಥಾ-ಹಾಗೆಯೇ, ಕರ್ತಾ- ವ್ಯಕ್ತಿ, ಕರಣಮ್ – ಸಾಧನಗಳು, ಪೃಥಗ್ವಿಧಮ್ – ಭಿನ್ನ ಭಿನ್ನವಾದ, ವಿವಿದಾಃ- ವಿಧವಿಧವಾದ, ಚ-ಮತ್ತು, ಪೃಥಕ್ – ಬೇರೆ ಬೇರೆ, ಚೇಷ್ಟಾ- ಪ್ರಯತ್ನಗಳು ದೈವಂ – ದೇವರು, ಚ-ಮತ್ತು, ಏವ-ಖಂಡಿತವಾಗಿ, ಅತ್ರ-ಇಲ್ಲಿ, ಪಂಚಮಮ್ = ಐದನೆಯವನು.

ಅನ್ವಯಃ

ಅಧಿಷ್ಠಾನಮ್ – ಕೆಲಸಮಾಡುವ ಸ್ಥಳ, ತಥಾ-ಹಾಗೆಯೇ, ಕರ್ತಾ- ಕೆಲಸಮಾಡುವ ವ್ಯಕ್ತಿ, ಪೃಥಗ್ವಿಧಮ್ – ಭಿನ್ನ ಭಿನ್ನವಾದ, ವಿವಿದಾಃ- ವಿಧವಿಧವಾದ, ಕರಣಮ್ – ಸಾಧನಗಳು, ಚ-ಮತ್ತು, ಪೃಥಕ್ – ಬೇರೆ ಬೇರೆ, ಚೇಷ್ಟಾ- ಪ್ರಯತ್ನಗಳು, ಚ-ಮತ್ತು, ದೈವಂ – ದೇವರು, ಏವ-ಖಂಡಿತವಾಗಿ, ಅತ್ರ-ಇಲ್ಲಿ, ಪಂಚಮಮ್ = ಐದನೆಯವನು.

32. ಶಮೋ ದಮ ಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ ಚ|

ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್||18-42||

ಸಾರಾಂಶಃ

ಈ ಶ್ಲೋಕದಲ್ಲಿ ಬ್ರಹ್ಮಣ್ಯದ ಲಕ್ಷಣವನ್ನು ಹೇಳಲಾಗಿದೆ, ಶಾಂತಸ್ವಭಾವ ಆತ್ಮನಿಗ್ರಹ, ನಿರಂತರ ಅಧ್ಯನ(ತಪಃ), ಶುಚಿತ್ವ, ತಾಳ್ಮೆ, ಪ್ರಾಮಾಣಿಕತೆ, ಜ್ಞಾನ, (ವಿಮರ್ಷಾತ್ಮಕ) ವಿಶೇಷ ಜ್ಞಾನ, ದೈವಶ್ರದ್ಧೆ, ಇವು ಬ್ರಾಹ್ಮಣರ ಕರ್ತವ್ಯ ಹಾಗೂ ಸಹಜ ಜನ್ಮಸ್ವಭಾವವಾಗಿದೆ.

ಶಬ್ಧಾರ್ಥಃ

ಶಮಃ-ಶಾಂತಿಯು, ದಮಃ-ಆತ್ಮನಿಗ್ರಹವು, ತಪಃ-ತಪಸ್ಸು, ಶೌಚಮ್-ಶುಚಿತ್ವವು, ಕ್ಷಾಂತಿಃ-ತಾಳ್ಮೆಯು, ಆರ್ಜವಮ್-ಪ್ರಾಮಾಣಿಕತೆಯು, ಏವ-ಖಂಡಿತವಾಗಿಯೂ, ಚ-ಮತ್ತು, ಜ್ಞಾನಮ್-ಜ್ಞಾನವು, ವಿಜ್ಞಾನಮ್-ವಿಮರ್ಷಾತ್ಮಕ ವಿಶೇಷಜ್ಞಾನವು, ಆಸ್ತಿಕ್ಯಮ್-ಧಾರ್ಮಿಕತೆಯು, ಬ್ರಹ್ಮ-ಬ್ರಾಹ್ಮಣರ, ಕರ್ಮ-ಕರ್ತವ್ಯ, ಸ್ವಭಾವಜಮ್-ಸ್ವಭಾವದಿಂದ ಜನಿಸಿದ,

ಅನ್ವಯಃ

ಶಮಃ-ಶಾಂತಿಯು, ದಮಃ-ಆತ್ಮನಿಗ್ರಹವು, ತಪಃ-ತಪಸ್ಸು, ಶೌಚಮ್-ಶುಚಿತ್ವವು, ಕ್ಷಾಂತಿಃ-ತಾಳ್ಮೆಯು, ಆರ್ಜವಮ್-ಪ್ರಾಮಾಣಿಕತೆಯು, ಚ-ಮತ್ತು, ಜ್ಞಾನಮ್-ಜ್ಞಾನವು, ವಿಜ್ಞಾನಮ್-ವಿಮರ್ಷಾತ್ಮಕ ವಿಶೇಷಜ್ಞಾನವು, ಆಸ್ತಿಕ್ಯಮ್-ಧಾರ್ಮಿಕತೆಯು, ಏವ-ಖಂಡಿತವಾಗಿಯೂ, ಬ್ರಹ್ಮ-ಬ್ರಾಹ್ಮಣರ, ಸ್ವಭಾವಜಮ್-ಸ್ವಭಾವದಿಂದ ಜನಿಸಿದ, ಕರ್ಮ-ಕರ್ತವ್ಯ,

33. ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಮ್|

ದಾನಮೀಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಮ್||18-43||

ಸಾರಾಂಶಃ

ಶೌರ್ಯ, ತೇಜಸ್ಸು, ಧೃಢನಿರ್ಧಾರ, ಕಾರ್ಯದಕ್ಷತೆ, ಯದ್ಧದಿಂದ ಪಲಾಯನಮಾಡದಿರುವುದು, ಉದಾರತೆ, ನಾಯಕತ್ವಗುಣ, ಕ್ಷತ್ರಿಯನ ಕರ್ತವ್ಯ ಮತ್ತು ಜನ್ಮ ಸಹಜ ಸ್ವಭಾವವು.

ಶಬ್ಧಾರ್ಥಃ

ಶೌರ್ಯಮ್-ಶೌರ್ಯವು, ತೇಜಃ-ತೇಜಸ್ಸು, ಧೃತಿಃ-ದೃಢ ನಿರ್ಧಾರವು, ರ್ದಾಕ್ಷ್ಯಮ್-ಕಾರ್ಯದಕ್ಷತೆ(ವ್ಯಾವಹಾರಿಕ ಚತುರತೆ),  ಯುದ್ಧೇ-ಯುದ್ಧದಲ್ಲಿ, ಚ-ಮತ್ತು, ಅಪಿ-ಕೂಡಾ, ಅಪಲಾಯನಮ್-ಓಡಿಹೋಗದಿರುವುದು, ದಾನಮ್-ದಾರಾಳತನ, ಈಶ್ವರ-ನಾಯಕತ್ವದ, ಭಾವಃ-ಸ್ವಭಾವವು, ಚ-ಮತ್ತು, ಕ್ಷಾತ್ರಮ್-ಕ್ಷತ್ರಿಯನ, ಕರ್ಮ-ಕರ್ತವ್ಯ, ಸ್ವಭಾವಜಮ್-ಸ್ವಭಾವದಿಂದ ಜನಿಸಿದ,

ಅನ್ವಯಃ

ಶೌರ್ಯಮ್-ಶೌರ್ಯವು, ತೇಜಃ-ತೇಜಸ್ಸು, ಧೃತಿಃ-ದೃಢನಿರ್ಧಾರವು, ರ್ದಾಕ್ಷ್ಯಮ್-ಕಾರ್ಯದಕ್ಷತೆ,  ಚ-ಮತ್ತು, ಯುದ್ಧೇ-ಯುದ್ಧದಲ್ಲಿ, ಅಪಲಾಯನಮ್-ಓಡಿಹೋಗದಿರುವುದು, ಚ-ಮತ್ತು,  ದಾನಮ್-ದಾರಾಳತನ, ಈಶ್ವರ-ನಾಯಕತ್ವದ, ಭಾವಃ-ಸ್ವಭಾವವು, ಅಪಿ-ಕೂಡಾ, ಕ್ಷಾತ್ರಮ್-ಕ್ಷತ್ರಿಯನ, ಸ್ವಭಾವಜಮ್-ಸ್ವಭಾವದಿಂದ ಜನಿಸಿದ, ಕರ್ಮ-ಕರ್ತವ್ಯವು,

34. ಕೃಷಿಗೌರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಮ್|

ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಮ್||18-44||

ಸಾರಾಂಶಃ

ಕೃಷಿ, ಗೋ ಪಾಲನೆ ಹಾಗೂ ರಕ್ಷಣೆ, ವ್ಯಾಪಾರ, ವೈಶ್ಯರ ಸಹಜ ಸ್ವಭಾವವಾಗಿದೆ. ಸೇವಾಕ್ಷೇತ್ರದಲ್ಲಿ ಸಹಾಯಕರಾಗಿ ಕೆಲಸಮಾಡುವುದು ಸಹಜವಾಗಿ ಶೂದ್ರಸ್ವಭಾವವಾಗಿದೆ.

ಶಬ್ಧಾರ್ಥಃ

ಕೃಷಿ-ಉಳುಮೆ, ಗೋ-ಹಸುಗಳ, ರಕ್ಷ್ಯ-ರಕ್ಷಣೆ, ವಾಣಿಜ್ಯಮ್-ವ್ಯಾಪಾರ, ವೈಶ್ಯ-ವೈಶ್ಯರ, ಕರ್ಮ-ಕರ್ತವ್ಯ,  ಸ್ವಭಾವಜಮ್-ಸ್ವಭಾವದಿಂದ ಜನಿಸಿದ, ಪರಿಚರ್ಯಾ-ಸೇವೆಯಿಂದ, ಆತ್ಮಕಮ್-ಕೂಡಿರುವುದು. ಕರ್ಮ-ಕರ್ತವ್ಯವು, ಶೂದ್ರಸ್ಯ-ಶೂದ್ರರಿಗೆ, ಅಪಿ-ಕೂಡಾ, ಸ್ವಭಾವಜಮ್-ಸ್ವಾಭಾವದಿಂದ ಹುಟ್ಟಿದ,

ಅನ್ವಯಃ

ಕೃಷಿ-ಉಳುಮೆ, ಗೋ-ಹಸುಗಳ, ರಕ್ಷ್ಯ-ರಕ್ಷಣೆ, ವಾಣಿಜ್ಯಮ್-ವ್ಯಾಪಾರ, ವೈಶ್ಯ-ವೈಶ್ಯರ, ಸ್ವಭಾವಜಮ್-ಸ್ವಭಾವದಿಂದ ಜನಿಸಿದ, ಕರ್ಮ-ಕರ್ತವ್ಯವು,  ಪರಿಚರ್ಯಾ-ಸೇವೆಯಿಂದ, ಆತ್ಮಕಮ್-ಕೂಡಿರುವುದು. ಶೂದ್ರಸ್ಯ-ಶೂದ್ರರಿಗೆ, ಅಪಿ-ಕೂಡಾ, ಸ್ವಭಾವಜಮ್-ಸ್ವಾಭಾವದಿಂದ ಹುಟ್ಟಿದ, ಕರ್ಮ-ಕರ್ತವ್ಯವು,

35. ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ| 

ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು||18-63||

 

ಸಾರಾಂಶಃ

ಭಗವದ್ಗೀತೆಯನ್ನು ಉಪದೇಶಿಸಿದ ಶ್ರೀ ಕೃಷ್ಣನು ಕೊನೆಯಲ್ಲಿ ಅರ್ಜುನನಿಗೆ ಹೀಗೆ ಹೇಳುತ್ತಾನೆ ನಾನು ನಿನಗೆ ಅತ್ಯಂತರಹಸ್ಯವಾದ ಜ್ಞಾನವನ್ನು ಬೋಧಿಸಿದ್ದೇನೆ ಇದನ್ನು ವಿಮರ್ಷಿಸಿ ನಿನಗೆ ಸರಿಕಂಡಂತೆ ಮಾಡು ಎಂಬುದಾಗಿ. ಹಿಂದೂ ಧರ್ಮದಲ್ಲಿ ಯಾವುದನ್ನೂ ಯಾರಮೇಲೂ ಹೇರುವುದಿಲ್ಲ ಎನ್ನುವುದಕ್ಕೆ ಇದು ಉತ್ತಮ ನಿದರ್ಷನ. ಸ್ವಯಂ ನಿರ್ಧರದ ಸ್ವಾತಂತ್ರ ಎಲ್ಲರಿಗೂ ಇದೆ. ಆದುದರಿಮದಲೇ ಹಿಂದೂ ಧರ್ಮ ಶ್ರೇಷ್ಟವಾಗಿದೆ.

ಶಬ್ಧಾರ್ಥಃ

ಇತಿ-ಹೀಗೆ, ತೇ-ನಿನಗೆ, ಜ್ಞಾನಮ್ – ಜ್ಞಾನವು, ಆಖ್ಯಾತಂ-ವಿವರಿಸಲ್ಪಟ್ಟಿದೆ. ಗುಹ್ಯಾತ್-ರಹಸ್ಯಕ್ಕಿಂತ, ಗುಹ್ಯತರಂ-ರಹಸ್ಯಮಯವಾದ, ಮಯಾ-ನನ್ನಿಂದ,

ವಿಮೃಶ್ಯ-ವಿಮರ್ಶಿಸಿ, ಏತತ್-ಇದನ್ನು, ಅಶೇಷೇಣ-ಪೂರ್ಣವಾಗಿ, ಯಥಾ-ಹೇಗೆ, ಇಚ್ಛಸಿ-ಇಷ್ಟಪಡುತ್ತೀಯೋ, ತಥಾ-ಹಾಗೆ. ಕುರು-ಮಾಡು.

ಅನ್ವಯಃ

ಮಯಾ-ನನ್ನಿಂದ, ತೇ-ನಿನಗೆ, ಗುಹ್ಯಾತ್-ರಹಸ್ಯಕ್ಕಿಂತ, ಗುಹ್ಯತರಂ-ರಹಸ್ಯಮಯವಾದ, ಜ್ಞಾನಮ್ – ಜ್ಞಾನವು, ಇತಿ-ಹೀಗೆ, ಆಖ್ಯಾತಂ-ವಿವರಿಸಲ್ಪಟ್ಟಿದೆ. ಏತತ್-ಇದನ್ನು, ಅಶೇಷೇಣ-ಪೂರ್ಣವಾಗಿ, ವಿಮೃಶ್ಯ-ವಿಮರ್ಶಿಸಿ, ಯಥಾ-ಹೇಗೆ, ಇಚ್ಛಸಿ-ಇಷ್ಟಪಡುತ್ತೀಯೋ, ತಥಾ-ಹಾಗೆ. ಕುರು-ಮಾಡು.

36. ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ|

ತತ್ರ ಶ್ರೀವಿಜಯೋ ಭೂತಿಃ ಧ್ರುವಾ ನೀತಿರ್ಮತಿರ್ಮಮ||18-78||

(ಯತ್ರ ಯೋಗೇಶ್ವರಃ ಕೃಷ್ಣಃ  ಯತ್ರ ಪಾರ್ಥೋ ಧನುರ್ಧರಃ)

ಸಾರಾಂಶಃ

ಗೀತೆಯಕೊನೆಯಲ್ಲಿ ಸಂಜಯನು ಈಮಾತನ್ನು ಹೇಳುತ್ತಾನೆ ಎಲ್ಲಿ ಕೃಷ್ಣಾರ್ಜುನರಿದ್ದಾರೋ ಅಲ್ಲಿ ಜಯ ನಿಶ್ಚಿತ ಎಂಬುದಾಗಿ. ಕುಷ್ಣನನ್ನು ಬುದ್ಧಿಗೂ ಅರ್ಜುನನ್ನು ಬಲಕ್ಕೂ ಹೋಲಿಸಲಾಗಿದೆ. ಬುದ್ಧಿ ಹಾಗೂ ಬಲ ಎರಡೂ ಇರುವಲ್ಲಿ ಜಯ ನಿಶ್ಚಿತ ಎಂಬುದು. ಸಾರಾಂಶ.

ಶಬ್ಧಾರ್ಥಃ

ಯತ್ರ-ಎಲ್ಲಿ, ಯೋಗಃ-ಯೋಗದ, ಈಶ್ವರಃ-ವಡೆಯನಾದ, ಕೃಷ್ಣಃ-ಕೃಷ್ಣನು, ಯತ್ರ-ಎಲ್ಲಿ, ಪಾರ್ಥಃ-ಅರ್ಜುನನು, ಧನುರ್ಧರಃ – ಬಿಲ್ಲನ್ನು ಹಿಡಿದಿರುವ,  ತತ್ರ -ಅಲ್ಲಿ , ಶ್ರೀಃ-ಸಂಪತ್ತು(ಲಕ್ಮೀ), ವಿಜಯಃ-ವಿಜಯವು, ಭೂತಿಃ-ಅಸಾಧಾರಣ ಶಕ್ತಿಯು,  ಧ್ರುವಾ-ಖಂಡಿತವು, ನೀತಿಃ-ನೀತಿಯು, ರ್ಮತಿಃಮಮ-ನನ್ನ ಅಭಿಪ್ರಾಯವು. 

ಅನ್ವಯಃ

ಯತ್ರ-ಎಲ್ಲಿ, ಯೋಗಃ-ಯೋಗದ, ಈಶ್ವರಃ-ವಡೆಯನಾದ, ಕೃಷ್ಣಃ-ಕೃಷ್ಣನು, ಯತ್ರ-ಎಲ್ಲಿ, ಧನುರ್ಧರಃ – ಬಿಲ್ಲನ್ನು ಹಿಡಿದಿರುವ, ಪಾರ್ಥಃ-ಅರ್ಜುನನು,  (ಇರುವರೋ) ತತ್ರ -ಅಲ್ಲಿ, ಭೂತಿಃ-ಅಸಾಧಾರಣ ಶಕ್ತಿಯು, ವಿಜಯಃ-ವಿಜಯ, ಶ್ರೀಃ-ಲಕ್ಮೀಯು, ನೀತಿಃ-ನೀತಿಯು, ಧ್ರುವಾ-ಖಂಡಿತವು, ಮತಿಃಮಮ-(ಹೀಗೆ) ನನ್ನ ಅಭಿಪ್ರಾಯವು. 

 

ನಮ್ಮ ಸಮಾಜವನ್ನು ಹಿಂದೂ ಸಮಾಜವೆಂಬುದಾಗಿ ಕರೆಯಲಾಗುತ್ತದೆ. ಹಿಂದೂಜೀವನ ಪದ್ದತಿ ಭೌಗೋಳಿಕವಾಗಿ ಭಿನ್ನವಾಗಿದೆ. ಸಾಂಸ್ಕೃತಿಕವಾಗಿಯೂ ಸಾಕಷ್ಟು ವ್ಯತ್ಯಾಸಗಳಿವೆ ಅದರೂ ಸಮಗ್ರವಾಗಿ ಅವಲೋಕಿಸಿದಾಗ ನಾವೆಲ್ಲರೂ ಹಿಂದುಗಳೂ ಒಂದೇ ತಾಯಿಯ ಭಿನ್ನ ಮಕ್ಕಳಂತೆ ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ. ನಮ್ಮೆಲ್ಲರ DNA ಒಂದೇ ಆಗಿದೆ. ಇಂದು ವಿಶ್ವದಲ್ಲಿ ನೂರು ಕೋಟಿ ಹಿಂದುಗಳಿದ್ದಾರೆ ಎನ್ನಲಾಗುತ್ತದೆ. ಆದರೆ ಎಷ್ಟು ಜನರಲ್ಲಿ ಹಿಂದುತ್ವ ಇದೆ?  ಎಂಬುದನ್ನು ಅವಲೋಕಿಸಿದಾಗ ಬಹಳ ಕಡಿಮೆ ಜನ ಗಣನೆಗೆ ಸಿಗುತ್ತಾರೆ. ಹಿಂದುಗಳೆಲ್ಲರಲ್ಲೂ ಹಿಂದುತ್ವ ಇದೆಯಾ? ಎಂದರೆ ಖಂಡಿತವಾಗಿಯೂ ಇಲ್ಲವೇ ಇಲ್ಲ. ಎಷ್ಟೋಜನರಿಗೆ ಹಿಂದು ಎಂದರೆ ಗೊತ್ತಿದೆ. ಹಿಂದುತ್ವ ಎಂದರೆ ಗೊತ್ತಿಲ್ಲ. ಬ್ರಾಹ್ಮಣ ಎಂದರೆ ಗೊತ್ತಿದೆ. ಬ್ರಹ್ಮಣತ್ವ ಎಂದರೆ ಗೊತ್ತಿಲ್ಲ. ಸನ್ಯಾಸಿ ಎಂದರೆ ಗೊತ್ತಿದೆ. ಸನ್ಯಾಸತ್ವ ಎಂದರೆ ಗೊತ್ತಿಲ್ಲ ಇದು ನಮ್ಮ ಸಮಾಜದ ದೊಡ್ಡ ದುರಂತವಾಗಿದೆ.

ಶಬ್ಧಕ್ಕೆ ತತ್ವ ಹಾಗೂ ಸತ್ವ ಸೇರಿದರೆಮಾತ್ರ ಅದಕ್ಕೆ ಮೌಲ್ಯ ಇಲ್ಲವಾದಲ್ಲಿ ಅಂತಹ ಶಬ್ಧವಾಗಲೀ ವಸ್ತುವಾಗಲೀ ಮೌಲ್ಯಕಳೆದುಕೊಳ್ಳುತ್ತದೆ. ಹಿಂದುತ್ವ ಇಲ್ಲದ ಹಿಂದು ಎಂದರೆ ತತ್ವ ಹಾಗೂ ಸತ್ವ ಎರಡೂ ಇಲ್ಲದ ಹಿಂದುವೆಂದು ಅರ್ಥ. ಅಪ್ಪಹಿಂದು ಆಗಿದ್ದರಿಂದ ತಾನು ಹಿಂದು. ಹೆಸರಿನಲ್ಲಿ ರಾಮ ಇರುವುದರಿಂದ ನಾನು ಹಿಂದು ಎಂದು ಕರೆದು ಕೊಳ್ಳುವ ಜನ ಇವರಾಗಿರುತ್ತಾರೆ. ಇಂತಹ ಬಹಳಷ್ಟು ಹಿಂದುತ್ವವಿಲ್ಲದ ಹಿಂದುಗಳನ್ನು ನಾವು ಸಮಾಜದಲ್ಲಿ ನೋಡಬಹುದಾಗಿದೆ. ಕಾಂಗ್ರೇಸ್ ನಾಯಕರು ತಾವೇ ತತ್ವ ಇಲ್ಲದ ಹಿಂದುಗಳೆಂದು ತಮ್ಮನ್ನು ಕರೆದುಕೊಳ್ಳುವುದನ್ನೂ ನಾವು ನೋಡಿದ್ದೇವೆ.

ಹಿಂದುತ್ವೆಂದರೆ ಏನು? ಎಂದು ಪ್ರಶ್ನೆಯನ್ನು ಕೇಳಿಕೊಂಡು ಉತ್ತರ ಹುಡುಕಲು ಹೊರಟರೆ! ಹಿಂದೂ ಧರ್ಮದ ಸಾತ್ವಿಕ ಆಚಾರ ವಿಚಾರಗಳನ್ನು ಯಾವುದೇ ವ್ಯಕ್ತಿ ನಿತ್ಯ ಅಭ್ಯಾಸದಲ್ಲಿ ಅಳವಡಿಸಿಕೊಂಡು ಅದಕ್ಕನುಗುಣವಾಗಿ ಆತನ ಜೀವನ ಪದ್ದತಿ ಇದ್ದರೆ ಅದುವೇ ಆತನ ಹಿಂದುತ್ವ ವಾಗಿದೆ. ಅಂದರೆ ಚಿಂತನೆ ಹಾಗೂ ಜೀವನ ಎರಡೂ ಒಂದೇ ಆಗಿರಬೇಕು. ತತ್ವ ಹಾಗೂ ಸತ್ವ ಮೇಳೈಸಿರಬೇಕು. ಯಾವುದೇ ವಿಚಾರ ಉಪದೇಶಕ್ಕೆ ಮಾತ್ರ ಸೀಮಿತವಾಗಿದ್ದರೆ, ತೋರಿಕೆಗೆ ಮಾತ್ರ ಸೀಮಿತವಾಗಿದ್ದರೆ,  ಅಂತಹ ಮಾತು ಹಾಗೂ ವ್ಯಕ್ತಿ ಸಮಾಜದಲ್ಲಿ ಗೌರವವನ್ನು ಪಡೆಯುವುದಿಲ್ಲ. ಕಾಲಕ್ರಮದಲ್ಲಿ ಆತ ಸಮಾಜದ ಅವಗಣನೆಗೆ ಒಳಗಾಗುತ್ತಾನೆ. ಆದುದರಿಂದ ನಾವು ಏನು ಹೇಳುತ್ತೇವೆಯೋ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಯಲ್ಲಿ ಇಟ್ಟುಕೊಳ್ಳಬೇಕು. ಚಾತುರ್ವರ್ಣಗಳಲ್ಲಿಯೂ ಇದು ಅನ್ವಯವಾಗುತ್ತದೆ. ಬ್ರಾಹ್ಮಣನಲ್ಲಿ ಬ್ರಾಹ್ಮಣತ್ವ ಇರಬೇಕು. ಆಚಾರ ವಿಚಾರಗಳಲ್ಲಿ ಇದು ಇರಬೇಕು. ಕ್ಷತ್ರಿಯನಲ್ಲಿ ಕ್ಷಾತ್ರತ್ವ ಇರಬೇಕು. ವೈಶ್ಯರು ವೈಶ್ಯಧರ್ಮ ಪಾಲಿಸಬೇಕು. ಇವುಗಳು ಸ್ವಾಭಾವಾನುಗುಣ ವೃತ್ತಿಯೇ ಹೊರತು ಜಾತಿ ಅಲ್ಲ ಎಂಬುದನ್ನು ಪ್ರತಿಯೊಬ್ಬನೂ ಅರ್ಥಮಾಡಿಕೊಳ್ಳಬೇಕು. ಬ್ರಾಹ್ಮಣ ಹೆಸರಿನೊಂದಿಗೆ ಸತ್ವ ಸೇರಿದರೆ ಬ್ರಾಹ್ಮಣತ್ವವಾಗುವುದು.  ಸತ್ವ ಇಲ್ಲವಾದಲ್ಲಿ ಅದು ಕೇವಲ ನಾಮ ಫಲಕಕ್ಕೆ ಸೀಮಿತವಾಗುವುದು. ಅದರಲ್ಲಿ ಸತ್ವ ವೂ ತತ್ವವೂ ಎರಡೂ ಇರುವುದಿಲ್ಲ. ಬ್ರಾಹ್ಮಣರಲ್ಲಿ ಅನೇಕ ಉಪನಾಮಗಳನ್ನು ನೋಡುತ್ತೇವೆ, ಚತುರ್ವೇದಿ, ಸಾಮವೇದಿ, ಅಗ್ನಿಹೋತ್ರಿ, ಸಾಮಗ, ಉಪಾಧ್ಯಾಯ, ಆಚಾರ್ಯ, ತಂತ್ರಿ, ಶಾಸ್ತ್ರೀ ಇವೆಲ್ಲವೂ ಅವರ ಜೀವನ ಪದ್ದತಿಯ ಸೂಚಕವಾಗಿದೆ. ಅದಕ್ಕನುಗುಣವಾಗಿ ಆಚರಣೆ ಇಲ್ಲವಾದಲ್ಲಿ ಈ ಉಪನಾಮಕ್ಕೆ ಅರ್ಥ ಏನು? ಇದನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಔಚಿತ್ಯವಾದರೂ ಏನು? ನನ್ನ ಪರಂಪರೆ ಹೀಗಿತ್ತು ನಾನೀಗ ಇದನ್ನು ಮುನ್ನಡೆಸುತ್ತಿಲ್ಲ ಎನ್ನುವುದು ಆತನಿಗೆ ಅರಿವಿಗೆ ಬರಬೇಕು. ತಾನು ಹಿರಿಯರ ದಾರಿಯಿಂದ ವಿಮುಖನಾಗಿದ್ದಕ್ಕೆ ಪಶ್ಚಾತ್ತಾಪ ಪಡಬೇಕು ಮತ್ತು ಕುಟುಂಬದ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವುದಕ್ಕೆ ಮುಂದಾಗಬೇಕು. ಘರ್ ವಾಪಸಿಯೊಂದಿಗೆ ಸಂಸ್ಕೃತಿಯ ವಾಪಾಸಾತಿಯೂ ಆಗಬೇಕು. ನಾವು ನಮ್ಮ ಹಿರಿಯರ ದಾರಿಯನ್ನು ಒಮ್ಮೆ ಹಿಂದಿರುಗಿ ನೋಡಬೇಕು. ಅದನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ABSSS ಮೂಲಕ ನಾವಿಂದು ಹಿಂದುಗಳನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದೇವೆ. ಇದು ಸೊಶಿಯಲ್ ಮೀಡಿಯಾದಲ್ಲಿ ಪ್ರಚಾರಕ್ಕಾಗಿ ಮಾಡುವ ಕೆಲಸ ಅಲ್ಲ. ಯಾವುದೇ ವೈಯುಕ್ತಿಕ ಹಿತಾಸಕ್ತಿಗಾಗಿ ಮಾಡುವ ಕೆಲಸ ಅಲ್ಲ. ಇದು ನಿಜವಾಗಿ ಹಿಂದುಗಳ ಪರಂಪರೆಯನ್ನು ನೆನಪಿಸುವ ಪುನರುತ್ಥಾನಗೊಳಿಸುವ ಕೆಲಸವಾಗಿದೆ. ನಾವು ಹಿಂದುತ್ವದ ಸಾಮಾನ್ಯ ಲಕ್ಷಣಗಳನ್ನು ಪಟ್ಟಿಮಾಡಬೇಕು. ಸುಲಭ ಹಾಗೂ ಸರಳವಾಗಿರುವ ಅಂಶಗಳನ್ನು ಮೊದಲು ಜನರ ಆಚರಣೆಯಲ್ಲಿ ತರಬೇಕು. ಇಂತಹ ಅಭ್ಯಾಸ ಜೀವನ ಪದ್ದತಿಯಾಗಬೇಕು. ಇದನ್ನು ಹಿಂದುಗಳು ಅಭಿಮಾನದಿಂದ ಮಾಡಬೇಕು. ನಾವು ನಮ್ಮ ಸಂಸ್ಕೃತಿಯ ವಿಚಾರಗಳನ್ನು ನಿತ್ಯಜೀವನದಲ್ಲಿ ಆಚರಣೆಯಲ್ಲಿಟ್ಟುಕೊಂಡು ನಂತರ ಬೇರೆಯವರಿಗೆ ಉಪದೇಶಿಸಬೇಕು. ಭಗವದ್ಗೀತೆಯಲ್ಲಿ ಕೃಷ್ಣನು ಹೀಗೆ ಹೇಳಿದ್ದಾನೆ.

ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ|

ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ(3-21)

ಎಂಬುದಾಗಿ ಇದರ ಅರ್ಥ ಹೀಗಿದೆ. ಸಮಾಜದಲ್ಲಿ ಶ್ರೇಷ್ಟರಾದವರು ಏನನ್ನು ಆಚರಿಸಿ ಪ್ರಮಾಣಿಕರಿಸುತ್ತಾರೋ ಅದನ್ನು ಲೋಕವು ಅನುಸರಿಸುತ್ತದೆ ಎಂಬುದಾಗಿ. ಆದುದರಿಂದ ನಾವು ಆಚರಿಸಿ ಬೇರೆಯವರಿಗೆ ಹೇಳಬೇಕು. ನಮ್ಮಲ್ಲಿ ಆಚರಣೆ ಇಲ್ಲವಾದಲ್ಲಿ ನಾವು ಬೇರೆಯವರಿಗೆ ಹೇಳುವ ಅರ್ಹತೆಯನ್ನು ಕಳೆದುಕೊಳ್ಳುತ್ತೇವೆ.

ಇನ್ನೊಂದು ಸುಭಾಷಿತ ಹೀಗೆ ಹೇಳುತ್ತದೆ.

ಪರೋಪಕಾರವೇಲಾಯಾಂ ಶಿಷ್ಟಾಃ ಸರ್ವೇ ಭವಂತಿ ವೈ |

ವಿಸ್ಮರಂತೀಹ ಶಿಷ್ಟತ್ವಂ ಸ್ವಕಾರ್ಯೇ ಸಮುಪಸ್ಥಿತೇ||

ಇದರ ಅರ್ಥ ಹೀಗಿದೆ. ಬೇರೆಯವರಿಗೆ ಉಪದೇಶಮಾಡುವಾಗ ಎಲ್ಲರೂ ಶಿಷ್ಟಾಚಾರಸಂಪನ್ನರೇ ಆಗಿರುತ್ತಾರೆ. ತಮ್ಮ ವಿಚಾರ ಬಂದಾಗ ಮಾತ್ರ ಶಿಷ್ಟಾಚಾರವನ್ನು ಮರೆತುಬಿಡುತ್ತಾರೆ. ಸ್ವಯಂ ಆಚರಿಸುವುದಿಲ್ಲ ಎನ್ನುವುದು ಅರ್ಥ. ನಾವು ರಾಮಕೃಷ್ಣ ಪರಮಹಂಸರ ಕಥೆಯಲ್ಲಿ ತಾಯಿ ಮಗುವಿಗೆ ಬೆಲ್ಲತಿನ್ನುವುದನ್ನು ಬಿಡುವಂತೆ ತಿಳಿಸಲು ವಿನಂತಿಸಿಕೊಂಡಾಗ ಎರಡು ದಿನ ಬಿಟ್ಟು ಬರಲು ಹೇಳುತ್ತಾರೆ ಎಂದು ಓದಿದ್ದೇವೆ. ಮಗುವಿಗೆ ಹೇಳುವಾಗ ತಾನು ಮೊದಲು ತಿನ್ನುವುದನ್ನು ಬಿಡಬೇಕೆನ್ನುವುದು ಅವರ ವಿಚಾರವಾಗಿತ್ತು. ಇದು ಹಿಂದುತ್ವದ ವಿಚಾರದಲ್ಲಿಯೂ ಬಹಳ ಮುಖ್ಯವಾಗಿದೆ.

ಹಿಂದೂ ಮುಖಂಡರು ಎನಿಸಿಕೊಂಡವರು ಅಥವಾ ಕಾರ್ಯಕರ್ತರೆಂದು ಕರೆದುಕೊಳ್ಳುವವರು ಬಹಳಷ್ಟು ಜನ ಸ್ವಯಂ ಆಚರಣೆಯಲ್ಲಿ ಹಿಂದುತ್ವವನ್ನು ಪಾಲಿಸದಿರುವುದರಿಂದಲೇ ಹಿಂದೂ ಸಂಘಟನೆಗಳು ಬಲಿಷ್ಟವಾಗಿಲ್ಲ ಎನ್ನಬಹುದು. ಅಥವಾ ದೀರ್ಘಾವಧಿಯಲ್ಲಿ ದುರ್ಬಲವಾಗುತ್ತವೆ. ರಾಜಕೀಯವಾಗಿ ಹಿಂದುತ್ವದ ಪಕ್ಷ ಎಂದುಕರೆದುಕೊಳ್ಳುವವರೂ ಬಹಳಷ್ಟುಜನ ಕೇವಲ ತಮ್ಮ ಉದ್ದಿಮೆಬೆಳಸಲು ಪಕ್ಷ ಸೇರಿದ್ದಾರೆ. ಇಂದು ಸರ್ಕಾರೀ ಅಧೀನದ ದೇವಾಲಯಗಳ ದುಸ್ಥಿತಿಯನ್ನು ಪರಿಹರಿಸಿಲ್ಲ. ಹಿಂದು ಧರ್ಮ ಶಿಕ್ಷಣಕ್ಕೆ ಅವಕಾಶ ಅನುದಾನ ಕೊಡುತ್ತಿಲ್ಲ. ತಾವು ವಿದೇಶೀ ವಾಹನಗಳಲ್ಲಿ ಓಡಾಡುತ್ತಾರೆ. ಇವೆಲ್ಲವೂ ಸಾಮಾನ್ಯ ಹಿಂದುಗಳಿಗೆ ಭ್ರಮನಿರಸನವನ್ನು ಉಂಟುಮಾಡುತ್ತವೆ. ಹೀಗಾಗದಂತೆ ನಾವು ಕೆಲವು ಸಾಮಾನ್ಯ ಆಚರಣೆಯ ಅಂಶಗಳನ್ನು ನಮ್ಮ ಸಂಘಟನೆಯ ಮೂಲಕ ಸಮಾಜದ ಜನರಲ್ಲಿ ನಿತ್ಯ ಅಭ್ಯಾಸದಲ್ಲಿ ತರಲು ಪ್ರಯತ್ನಿಸಬೇಕು. ಹಿಂದೂ ಸಂಸ್ಕೃತಿಯ ಮೂಲಭೂತಲಕ್ಷಣಗಳನ್ನು ಎಲ್ಲರೂ ಪಟ್ಟಿಮಾಡೋಣ. ಅದರಲ್ಲಿ ಸರಳವಾದ ಕನಿಷ್ಠ ಹತ್ತು ಅಭ್ಯಾಸಗಳನ್ನು ನಾವು ಮೊದಲ ಹಂತದಲ್ಲಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ವೈಯುಕ್ತಿಕ, ಕೌಟುಂಬಿಕ, ಸಾರ್ವತ್ರಿಕ ಹೀಗೆ ಪಟ್ಟಿಮಾಡೋಣ, ವೈಯುಕ್ತಿಕದಲ್ಲಿ ಸ್ತ್ರೀ ಪುರುಷರು ಭಿನ್ನವಾಗಿ ಪಟ್ಟಿ ಮಾಡಿ ಅವಲೋಕಿಸೊಣ.

ಹಿಂದುವಿನ ವೈಯುಕ್ತಿಕ ಬಾಹ್ಯ ಗುರುತುಗಳೇನು?

ತಿಲಕ, ಧೋತಿ, ಜುಬ್ಬ, ಶಲ್ಯ, ಕರ್ಣಾಭರಣ, ಉಂಗುರ, ತಲೆಗೆ ಮುಂಡಾಸು/ಪೇಟ, ರಕ್ಷಾಬಂಧನ, ಸೊಂಟದಲ್ಲಿ ಉಡದಾರ, ಕೈ ಹಾಗೂ ಕಾಲುಗಳಿಗೆ ಕಡಗ, ಇವೇ ಮುಂತಾದುವು ಪುರುಷರ ಗುರುತುಗಳಾಗಿವೆ. 

ಉಪವೀತರಾದವರು ಹೆಚ್ಚುವರಿಯಾಗಿ – ಶಿಖೆ ಹಾಗೂ ಜನಿವಾರ ಧರಿಸುವುದು ಪದ್ದತಿ.

ಮಹಿಳೆಯರ ಗುರುತುಗಳೇನು?

ಬಾಲಕಿಯರು – ತಿಲಕಧಾರಣೆ, ಲಂಗಧಾವಣಿ, ಕರ್ಣಾಭರಣ, ನಾಸಿಕಾಭರಣ, ಕಂಠಾಭರಣ, ಕೈಗಳಿಗೆ ಬಳೆಗಳು, ಜಡೆ, ಕೇಶಾಭರಣ, ಸೊಂಟದಲ್ಲಿ ಉಡದಾರ, ಕಾಲುಗಳಿಗೆ ಗೆಜ್ಜೆ ಇವೇ ಮುಂತಾದುವು ಬಾಲಕಿಯರ ಸಾಮಪ್ರದಾಯಿಕ ಪದ್ದತಿ ಹಾಗೂ ಗುರುತುಗಳಾಗಿವೆ. 

ಸುಮಂಗಲೆಯರು ಹೆಚ್ಚುವರಿಯಾಗಿ, ಸೀರೆ, ಕುಪ್ಪುಸ, ಮಾಂಗಲ್ಯ, ಕಾಲುಂಗುರ, ಗಳನ್ನು ಧರಿಸುತ್ತಾರೆ.

ನಮ್ಮ ಆಚರಣೆಗಳು ಹೇಗಿರಬೇಕು?

ಬೆಳಿಗ್ಗೆ ಬೇಗನೆ ಏಳುವುದು ನಿತ್ಯಶ್ಲೋಕಗಳನ್ನು ಆಯಾ ಸಂದರ್ಭದಲ್ಲಿ ಹೇಳುವುದು. ಹಿರಿಯರಿಗೆ ನಮಸ್ಕರಿಸುವುದು. ತ್ರಿಕಾಲ ಅನುಷ್ಟಾನ, ದೇವರ ಪೂಜೆ, ನಿತ್ಯ ಯೋಗ, ಸಾತ್ವಕ ಆಹಾರ, ದುಶ್ಚಟ ರಹಿತ ಜೀವನ, ಜಾತಿಪ್ರದರ್ಷನ ಮಾಡದಿರುವುದು. ಊಟಕ್ಕೆ ಮೊದಲು ದೇವರ ಸ್ಮರಣೆ , ಕುಟುಂಬದವರೊಂದಿಗೆ ಒಟ್ಟಿಗೆ ಸಾಮೂಹಿಕ ಭೋಜನ, ಸಂಜೆ ಭಜನೆ, ಅತಿಥಿ ಸತ್ಕಾರ. ಆಡಂಬರವಿಲ್ಲದ ಜೀವನ. ಉದ್ಯೋಗದ ಸ್ಥಳದಲ್ಲಿ ದೇವರ ಸನ್ನಿಧಾನ. ಇವೆಲ್ಲವೂಇರಬೇಕು.

ನಮ್ಮ ಮನೆ ಹೇಗಿರಬೇಕು?

ಹೊಸಮನೆಕಟ್ಟುವಾಗ ಜಾಗ ಖರಿದಿಸುವಾಗ ಸಾಧ್ಯವಾದಷ್ಟು ವಾಸ್ತುಅನುಗುಣ ಇರುವಂತೆ ನೋಡಿಕೊಳ್ಳಿ, ಮನೆ ಎದುರು ತುಳಸಿಕಟ್ಟೆ ಇರಬೇಕು, ಇದಕ್ಕೆ ನಿತ್ಯ ನೀರು ಹಾಕಬೇಕು, ಸಂಜೆ ದೀಪ ಇಡಬೇಕು. ಮನೆಯಲ್ಲಿ ದೇವರ ಪೂಜಾ ಸ್ಥಳ ಇರಬೇಕು, ಪೂಜೆಗೆ ಹೂಗಳನ್ನು ಬೆಳೆಸಬೇಕು, ನಿತ್ಯ ದೇವಪೂಜೆ ನಡೆಯಬೇಕು, ಭಗವದ್ಗೀತೆಯ ಪುಸ್ತಕ ಇರಬೇಕು ಕನಿಷ್ಟ ಹತ್ತಾದರೂ ಶ್ಲೋಕ ಗಳನ್ನು ನಿತ್ಯ ಪಠಿಸಬೇಕು. ಮನೆಯೊಳಗೆ ಚಪ್ಪಲಿ ಹಾಕಿಕೊಂಡು ಹೋಗಬಾರದು, ಕಾಲುತೊಳೆದು ಮನೆಯ ಒಳಬರುವ ಪದ್ದತಿಯನ್ನು ಅನುಸರಿಸಬೇಕು. ಮನೆಯನ್ನು ಶುಭ್ರವಾಗಿ ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ಸಾಧ್ಯವಿದ್ದವರು ದೇಸೀತಳಿಯ ಗೋವನ್ನು ಸಾಕಬೇಕು. ಮನೆಯಲ್ಲಿ ಮುಖ್ಯವಾದ ಹಬ್ಬಗಳನ್ನು ಸಂತೋಷದಿಂದ ಆಚರಿಸಬೇಕು. ವಾರಕ್ಕೊಮ್ಮೆ ಕುಟುಂಬ ಸಮೇತ ದೇವಸ್ಥಾನಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಭೇಟಿ ನೀಡಬೇಕು. ವರ್ಷಕ್ಕೊಮ್ಮೆ ಕುಲದೇವರ ದರ್ಶನ ಮಾಡಬೇಕು. ಹಿರಿಯರ ದಿನಗಳನ್ನು ಆಚರಿಸಬೇಕು. ವರ್ಷದಲ್ಲಿ ಒಂದುದಿನ ದೇವತಾಪೂಜೆ ಮಾಡಿ ಆತ್ಮೀಯರಿಗೆ ಅನ್ನದಾನ ಮಾಡಬೇಕು. ಜೀವನದಲ್ಲಿ ಒಮ್ಮೆಯಾದರೂ ವಿಶೇಷ ತೀರ್ಥಸ್ಥಳಗಳ ಯಾತ್ರೆಮಾಡಬೇಕು. ಕುಟುಂಬದ ಪಾರಂಪರಿಕ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಮಕ್ಕಳಿಗೂ ಕಲಿಸಬೇಕು.

ಸಮಾಜಿಕವಾಗಿ ಹೇಗಿರಬೇಕು?

ಸಮಾಜದ ಅಗತ್ಯಗಳಿಗೆ ಸ್ಪಂದಿಸಬೇಕು. ದಾನ ಧರ್ಮ ಮಾಡಬೇಕು. ಪರಿಸರದಬಗ್ಗೆ ಕಾಳಜಿ ಇರಬೇಕು ಸ್ವಚ್ಛತೆ, ಸ್ವಾಸ್ಥ್ಯ ಶಿಸ್ತು ಇವುಗಳು ಜೀವನದ ಭಾಗವಾಗಿರಬೇಕು. ಊರಿನ ಉತ್ಸವ ಗಳಲ್ಲಿ ಭಾಗವಹಿಸಬೇಕು. ಸ್ಥಳೀಯ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು. ಊರಿನ ಹಿತಕ್ಕಾಗಿ ಸಜ್ಜನರೊಂದಿಗೆ ಹೊಂದಿಕೊಂಡು ಹೆಜ್ಜೆ ಹಾಕಬೇಕು. ಸ್ವಹಿತದೊಂದಿಗೆ ಸಮಾಜದ ಹಿತವೂ ತನ್ನ ಜವಾಬ್ದಾರಿ ಎನ್ನುವ ಅರಿವಿರಬೇಕು. ಅಸ್ಪೃಷ್ಯತೆಯ ಆಚರಣೆ ಸಮಾಜದಲ್ಲಿ ಇರಬಾರದು. ಧರ್ಮ ಹಾಗೂ ದೇಶಕ್ಕೆ ಹಾನಿಯಾಗುವ ಸಂದರ್ಭ ಬಂದಾಗ ಅದರ ರಕ್ಷಣೆಗೆ ಎದ್ದುನಿಲ್ಲಬೇಕು. ಚಿಂತನೆ, ಮಾತು, ಆಚಾರ, ವ್ಯವಹಾರ, ಆಹಾರ ಎಲ್ಲವನ್ನೂ ಸಾತ್ವಿಕಗೊಳಿಸುವತ್ತ ಪ್ರಯತ್ನ ಇರಬೇಕು. ಧರ್ಮಶ್ರದ್ಧೆಇರುವ ಸಾತ್ವಿಕ ವ್ಯಕ್ತಿಗಳಿಂದಲೇ ನಾವು ವ್ಯಾಪಾರ ವ್ಯವಹಾರ ಮಾಡಬೇಕು. ಸಜ್ಜನರನ್ನು ಬಲಗೊಳಿಸಬೇಕು ಹಾಗೂ ಬೆಳೆಸಬೇಕು. ದುರ್ಜನರನ್ನು ದುರ್ಬಲಗೊಳಿಸಬೇಕು ಹಾಗೂ ನಾಶಪಡಿಸಬೇಕು. “ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಮ್” ಎನ್ನುವ ಕೃಷ್ಣನ ಸಂದೇಶವನ್ನು ಅನುಷ್ಠಾಗೊಳಿಸುವತ್ತ ನಮ್ಮ ವ್ಯವಹಾರ ಇರಬೇಕು.  

ಹೀಗೆ ನಾವು ಹಿಂದುಗಳಲ್ಲಿ ಹಿಂದುತ್ವವನ್ನು ಜಾಗ್ರತಗೊಳಿಸಬೇಕು ಆಗ ಮಾತ್ರ ಹಿಂದುಗಳ ಹಾಗೂ ಹಿಂದುತ್ವದ ರಕ್ಷಣೆ ಸಾಧ್ಯವಾಗುವುದು. ಇದನ್ನು ಬೇರೆಯಾರೋ ಮಾಡುತ್ತಾರೆಂದು ಕಾಯುವುದು ಮೂರ್ಖತನ ಇದನ್ನು ನಾವೇ ಆರಂಭಿಸಬೇಕು. ನಮ್ಮಮನೆಯಿಂದಲೇ ಪ್ರಾರಂಭವಾಗಬೇಕು. ಪ್ರತಿಯೊಬ್ಬ ಹಿಂದೂಮಗುವೂ ವೀರ ಶಿವಾಜಿ, ರಾಣಾಪ್ರತಾಪ, ರಾಣಿಚೆನ್ನಮ್ಮಾ, ರಾಣಿ ಲಕ್ಷ್ಮೀಭಾಯಿ ಯಂತೆ ಬೆಳೆಯಬೇಕು. ಈದಿಕ್ಕಿನಲ್ಲಿ ಯುವ ಜನಾಂಗವನ್ನು ಬೆಳೆಸೋಣ. ಇದಕ್ಕೆ ಮುನ್ನುಡಿಯನ್ನು ನಾವೇ ಬರೆಯೋಣ. ನಮ್ಮಿಂದಲೇ ನಮ್ಮೆದುರೇ ಇಂತಹ ಹೊಸಪೀಳಿಗೆ ಬೆಳೆಯಬೇಕು. ಅವರೆಲ್ಲರೂ ಒಟ್ಟಾಗಿ ಭಾರತದ ಸಂಸ್ಕೃತಿಯನ್ನೂ, ಭಾರತವನ್ನೂ ರಕ್ಷಣೆ ಮಾಡಲಿ. ವಿಶ್ವದೆಲ್ಲೆಡೆ ಹಿಂದುತ್ವದ ಧ್ವಜವನ್ನು ಹಾರಿಸಲಿ. ಬನ್ನಿ ಒಟ್ಟಾಗಿ ನಡೆಯೋಣ ಭಾರತವನ್ನು ವಿಶ್ವಗುರುವಾಗಿಸೊಣ.

  • ಶ್ರೀಜಿ

ಜೈ ಹಿಂದ್ ಜೈ ಶ್ರೀರಾಮ್

1. ಭಾರತ ಎನ್ನುವ ಹೆಸರಿನ ಅರ್ಥ ಏನು ?

ಭಾ ಎಂದರೆ ಬೆಳಕು. ರತ ಎಂದರೆ ಅದರಲ್ಲಿಯೇ ನಿರತವಾಗಿರುವವನೆಂದು ಅರ್ಥ. ಜ್ಞಾನದ ಬೆಳಕನ್ನು ಜಗತ್ತಿಗೆ ನಿರಂತರ ನೀಡಿದ ದೇಶ ಭಾರತ ವಾಗಿದೆ.

“ಭಾ” ಎಂದರೆ ಜ್ಞಾನ “ರತ” ಎಂದರೆ ನಿರಂತರವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳುವುದೆಂತರ್ಥ. ಭಾರತ ವೆಂದರೆ ನಿರಂತರವಾಗಿ ಜ್ಞಾನ ಹಾಗೂ ಜ್ಞಾನದ ಅನ್ವೇಷಣೆಯಲ್ಲಿ ತಮ್ಮನ್ನುತೊಡಗಿಸಿಕೊಂಡವರ ದೇಶವೆಂಬುದಾಗಿ ಅರ್ಥ. ಭಾರಾತಾಳ ಇವುಗಳು ಮೇಳೈಸಿದ ಜೀವಂತ ಸಂಸ್ಕೃತಿಯ ಇತಿಹಾಸವಿರುವ ಭವ್ಯಪರಂಪರೆಯ ದೇಶ ಭಾರತವಾಗಿದೆ. ರಾಮನ ತಮ್ಮನಾದ ಭರತನ ಆದರ್ಶದ ಸ್ಮರಣೆಯೂ ಭಾರತ ಹೆಸರಿನೊಂದಿಗೆ ಆಗುತ್ತದೆ. ಶಕುಂತಲೆ ದುಷ್ಯಂತರ ಮಗನಾದ ಭರತ ಚಕ್ರವರ್ತಿಯು ಆಳಿದ ನೆಲವಾಗಿಯೂ ಭಾರತ ಗುರುತಿಸಲ್ಪಟ್ಟಿದೆ. ಭಾರತ ವಿಶ್ವದಲ್ಲಿನ ಅತಿಪ್ರಾಚೀನ ಶ್ರೇಷ್ಠ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆಯ ನಾಡಾಗಿದೆ. ಜ್ಞಾನಭೂಮಿ, ಕರ್ಮಭೂಮಿ, ಪುಣ್ಯಭೂಮಿ, ದೇವಭೂಮಿ, ಋಷಿಭೂಮಿ ಎಂದೂ ಭಾರತ ತನ್ನನ್ನು  ಕರೆಸಿಕೊಂಡಿದೆ. ಕಳೆದ 2000 ವರ್ಷಗಳಲ್ಲಿನ ಜಗತ್ತಿನ ಆರ್ಥಿಕತೆಯನ್ನು ಅಧ್ಯಯನ ಮಾಡಿ ವಿಶ್ವ ಆರ್ಥಿಕತೆಗೆ ಯಾವದೇಶದ ಕೊಡುಗೆ ಎಷ್ಟೆಂದು ಪರಿಶೋಧಿಸಿದಾಗ ಮೊದಲ ಒಂದುವರೆ ಸಾವಿರ ವರ್ಷಗಳು ಭಾರತವೇ ಪ್ರಥಮಸ್ಥಾನದಲ್ಲಿದ್ದು ವಿಶ್ವದ 40% ಆರ್ಥಿಕ ನಿರ್ವಹಣೆಯನ್ನು ಭಾರತ ನಿಯಂತ್ರಿಸುತ್ತಿದ್ದುದು ತಿಳಿಯುತ್ತದೆ. ಇಂದು 4% ಇದೆ. ನಾವು ಪುನರ್ವೈಭವವನ್ನು ಗಳಿಸಬೇಕಿದೆ.

2. ಪ್ರಾಚೀನ ಭಾರತದ ವ್ಯಾಪ್ತಿ ಯಾವುದು? ಹಾಗೂ ಹಿಂದೆ ಭಾರತವನ್ನು ಹೇಗೆ ಕರೆಯುತ್ತಿದ್ದರು?

ಪ್ರಾಚೀನ ಭಾರತವನ್ನು ಜಂಬೂದ್ವೀಪ, ಭಾರತವರ್ಷ, ಭರತಖಂಡ, ಹಿಂದೂಸ್ಥಾನ ಮುಂತಾಗಿ ಕರೆಯುತ್ತಿದ್ದರು. ಇದನ್ನು ಮಹಾಮ್ಮೇರುವಿನ (ಹಿಮಾಲಯ ಎನ್ನಬಹುದು ಇಲ್ಲವೇ ಉತ್ತರ ಧೃವವೂ ಆಗಿರಬಹುದು) ದಕ್ಷಿಣ ಭಾಗ ಎಂಬುದಾಗಿ ಗುರುತಿಸಲಾಗಿತ್ತು. ಸಪ್ತಸಿಂಧೂ ವಸುಂಧರಾ ಎನ್ನುವುದಾಗಿಯೂ, ಆರ್ಯಾವರ್ತ ಎಂಬುದಾಗಿಯೂ ಭಾರತವನ್ನು ಕರೆಯುತ್ತಿದ್ದರು. ಇದುವೇ ಮುಂದೆ ಬ್ರಿಟಿಶರಿಂದ ಇಂಡಿಯಾವಾಗಿಯೂ, ಅನ್ಯದೇಶೀಯರಿಂದ ಹಿಂದೂಸ್ಥಾನ ವೆಂಬುದಾಗಿಯೂ ಗುರುತಿಸಿಕೊಂಡಿದೆ. ಭಾರತದ ವ್ಯಾಪ್ತಿ ಇಂದಿನ ಅಫಘಾನಿಸ್ಥಾನ, ಪಾಕಿಸ್ಥಾನ, ನೇಪಾಳ, ಬಾಂಗ್ಲಾ, ಬರ್ಮಾ, ಥಾಯ್ಲ್ಯಾಂಡ, ಸಿಂಗಾಪುರ, ಮಲೇಶಿಯಾ, ಭೂತಾನ್, ಟಿಬೆಟ್, ಬಾಲಿ,  ಇಂಡೋನೇಶಿಯಾ ಇಲ್ಲೆಲ್ಲಾ ಹರಡಿತ್ತು. ದಕ್ಷಿಣದಲ್ಲಿ ಶ್ರೀಲಂಕಾವೂ ಭಾರತದದಭಾಗವೇ ಆಗಿತ್ತು.  ವಿಶ್ವಾದ್ಯಂತ ಭಾರತದ ದೇವಾಲಯಗಳ ಕುರುಹುಗಳು ಸಿಗುವುದನ್ನು ನಾವು ಇತಿಹಾಸದಲ್ಲಿ ನೋಡಬಹುದಾಗಿದೆ.

3. ಜಗತ್ತು ಭಾರತೀಯರನ್ನು ಹೇಗೆ ಗುರುತಿಸುತ್ತದೆ?

ಜಗತ್ತು ನಮ್ಮನ್ನು ಭಾರತೀಯರು, ಹಿಂದುಸ್ಥಾನಿಗಳು, ಹಿಂದುಗಳು ಎಂಬುದಾಗಿ ಗುರುತಿಸುತ್ತದೆ. ಹಿಂದೂಸ್ಥಾನ ಎಂದರೆ ಇದೊಂದು ಭೂಪ್ರದೇಶವಾಗಿದ್ದು ಇಲ್ಲಿವಾಸಿಸುವವರೆಲ್ಲರೂ ಹಿಂದೂಗಳೇ ಆಗಿದ್ದಾರೆ, ಹಿಮಾಲಯದಿಂದ ದಕ್ಷಣ ಸಮುದ್ರ ಹಿಂದೂ. ಮಹಾಸಾಗರ ದವರೆಗಿನ ಭೂಭಾಗವೇ ಹಿಂದೂಸ್ತಾನ ಎಂದು ಕರೆಸಿಕೊಂಡಿದೆ. ಈ ಪ್ರದೆಶದಲ್ಲಿ ವಾಸಿಸುವ ಮೂಲ ಜನರೇ ಹಿಂದೂಗಳಾಗಿದ್ದಾರೆ. ಹಿಂದು ಮಹಾಸಾಗರವನ್ನು ಪ್ರಾಚೀನರು ಇಂದು ಸಾಗರ ಎಂದು ಕರೆಯುತ್ತಿದ್ದರು. ಇದರಿಂದಾಗಿ ಹಿಮಾಲಯದ “ಹಿ” ಹಾಗೂ ಇಂದು ವಿನ “0ದು” ಒಟ್ಟಾಗಿ ಹಿಂದು ಆಗಿದೆ ಎನ್ನಲಾಗಿದೆ ಈ ಶಬ್ದಮೊದಲಿನಿಂದಲೂ ಬಳಕೆಗೆ ಬಂದಿದೆ. ದಕ್ಷಿಣದ ಮಹಾಸಾಗರವೇ ಇಂದು ಹಿಂದು ಹೆಸರಿನಲ್ಲಿ ಕರೆಯಲ್ಪಟ್ಟಿದೆ.

ಭಾರತದ ಕುರಿತು ಹೀಗೊಂದು ಶ್ಲೋಕವಿದೆ

ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಮ್ |

ವರ್ಷಂ ತದ್ಭಾರತಂ ನಾಮ ಭಾರತೀ ಯತ್ರ ಸಂತತಿಃ ||

ಉತ್ತರಕ್ಕೆ ಹಿಮಾಲಯ ಪರ್ವತವೂ,  ದಕ್ಷಣಕ್ಕೆ ಸಮುದ್ರವೂ ಇರುವ ಮಧ್ಯದ ಭೂಭಾಗವನ್ನು ಭಾರತ ಎನ್ನಲಾಗಿದೆ ಇಲ್ಲಿ ಹುಟ್ಟಿದವರನ್ನು (ವಾಸಿಸುವವರನ್ನು) ಭಾರತೀಯರು ಎನ್ನಲಾಗುವುದು.

ಹಾಗೆಯೇ ಸಿಂಧುನದಿಯ ಸಿಂಧು ಶಬ್ಧದ ಅಪಭ್ರಂಶದಿಂದಾಗಿಯೂ ಹಿಂದು ಶಬ್ಧದ ಉತ್ಪತ್ತಿಯಾಗಿದೆ  ಎಂಬುದಾಗಿಯೂ  ಹೇಳಲಾಗುತ್ತದೆ. ಸಿಂಧು ಶಬ್ಧದ ಉತ್ಪತ್ತಿಗೆ ಸಿಂಧುನದಿಯೇ ಕಾರಣವಾಗಿದೆ ಭವಿಷ್ಯಪುರಾಣದಲ್ಲಿ ಹೀಗೊಂದು ಶ್ಲೋಕವಿದೆ

ಸಿಂಧುಸ್ಥಾನಮಿತಿಜ್ಞೇಯಂ ರಾಷ್ಟ್ರಮಾರ್ಯಸ್ಯಚೋತ್ತಮಮ್|

ಮ್ಲೇಚ್ಛಸ್ಥಾನಂ ಪರಂ ಸಿಂಧೋಃ ಕೃತಂ ತೇನ ಮಹಾತ್ಮನಾ||

4. ಮನುಷ್ಯ ಜನ್ಮದ ಗುರಿ ಏನು? ಸಾಧನೆಯ ಪಥ ಯಾವುದು?

ಮನುಷ್ಯನ ಜೀವನದ ಅಂತಿಮ ಗುರಿ ಮುಕ್ತಿ ಅಥವಾ ಮೋಕ್ಷ ಎಂಬುದಾಗಿ ನಮ್ಮ ಹಿರಿಯರು ನಮಗೆ ತಿಳಿಸಿಕೊಟ್ಟಿದ್ದಾರೆ. ಮುಕ್ತಿ  ಅಥವಾ ಮೋಕ್ಷ ಎಂದರೆ ಬಿಡುಗಡೆ ಎಂಬದಾಗಿ ಅರ್ಥ. ಭೌತಿಕ ಬದುಕಿನಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಗಳೆಂಬ ಅರಿಷಡ್ವರ್ಗಗಳಿಂದ ಬಿಡುಗಡೆಹೊಂದುವುದೇ ಮುಕ್ತಿಯಾಗಿದೆ. ಇವುಗಳಿಂದ ಮುಕ್ತನಾದವನು ಅಲೌಕಿಕವಾದ ಆನಂದದಲ್ಲಿ ನಿರಂತರ ಬದುಕುತ್ತಾನೆ. ಇನ್ನು ಜೀವನು ದೇಹವನ್ನು ತೊರೆದನಂತರ ಭಗವಂತನ ಸನ್ನಿಧಾನವನ್ನು ಸೇರುವುದು ಜೀವನ್ಮುಕ್ತಿ.  ಇದನ್ನು ಮೋಕ್ಷ ಎನ್ನಲಾಗಿದೆ. ನಾವು ಧರ್ಮ, ಅರ್ಥ, ಕಾಮದ ದಾರಿಯಲ್ಲಿ ಕ್ರಮಿಸಿ ಮೋಕ್ಷ ವನ್ನು ಹೊಂದಬೇಕು. ಈ ಮಾರ್ಗವನ್ನು ಭ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ, ಈ ನಾಲ್ಕು ಆಶ್ರಮಗಳಿಂದಾಗಿ ಕ್ರಮಿಸುವುದು ಉತ್ತಮ ಮಾರ್ಗ ಅಡ್ಡಮಾರ್ಗ ಆಯ್ದುಕೊಂಡರೆ ಅದು ಸನ್ಮಾರ್ಗವಾಗುವುದಿಲ್ಲ.

5.ನಾವು ನಮ್ಮ ಪೂರ್ವಜರ ಇತಿಹಾಸವನ್ನು ಹೇಗೆ ತಿಳಿಯಬಹುದು?

ವೇದಗಳು, ಉಪನಿಷತ್ತುಗಳು, ಪುರಾಣಗಳ ಕಥೆಗಳು, ದರ್ಶನಗಳು, ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳು, ಅಗಾಧವಾಗ ಸಂಸ್ಕೃತ ಸಾಹಿತ್ಯಗಳು, ನಾಟಕಗಳು ಹೀಗೆ ಶ್ರಿಮಂತವಾದ ಪ್ರಾಚೀನ ಸಾಹಿತ್ಯ ಪರಂಪರೆಗಳಿಂದ ನಾವು ನಮ್ಮ ಪೂರ್ವಜರ ಇತಿಹಾಸವನ್ನು ತಿಳಿಯಬಹುದಾಗಿದೆ. ಅನೇಕ ಶಿಲಾಮಯ ದೇವಾಲಯಗಳು, ಅಲ್ಲಿನ ಕೆತ್ತನೆಗಳೂ ನಮ್ಮ ಇತಿಹಾಸವನ್ನು ಸಂಸ್ಕೃತಿಯನ್ನು ಹೇಳುತ್ತಿವೆ.

6. ಹಿಂದುಗಳಾದ ನಾವು ಜಗತ್ತಿಗೆ ಶ್ರೇಷ್ಠ ಜ್ಞಾನವನ್ನು ಸಂಸ್ಕೃತಿಯನ್ನು ನೀಡಿದ್ದೇವೆಂದು ಹೆಮ್ಮೆಪಡಲು ಕಾರಣವೇನು?

ಹಲವುಸಾವಿರ ವರುಷಗಳ ಹಿಂದೆ ಜಗತ್ತಿನ ಜನರು ಅನಾಗರಿಕರಂತೆ ಕಾಡುಗಳಲ್ಲಿ ವಾಸಿಸುತ್ತಿದ್ದರು. ಆ ಕಾಲದಲ್ಲಿಯೇ ಭಾರತದ ಜನರು ಬಂಗಾರದ ಬಟ್ಟಲಲ್ಲಿ ಊಟಮಾಡುತ್ತಿದ್ದರು. ಭಾರತದಲ್ಲಿ ಉನ್ನತ ಶ್ರೀಮಂತ ಸಂಸ್ಕೃತಿ ಇತ್ತು ಮತ್ತು ಜನ ಉದಾತ್ತ ಜೀವನ ಪದ್ದತಿಯಿಂದಾಗಿ ಸುಸಂಸ್ಕೃತ ಬದುಕನ್ನು ಬದುಕುತ್ತಿದ್ದರು. ಇವುಗಳಿಗೆ ನಮ್ಮ ಸಂಸ್ಕೃತ ಸಾಹಿತ್ಯ ಗ್ರಂಥಗಳಲ್ಲಿರುವ ಜ್ಞಾನವು ಸಾಕ್ಷಿಯಾಗಿದೆ. ವಿಶ್ವಶ್ರೇಷ್ಠವಾದ ಸಂಸ್ಕೃತ ಭಾಷೆಯ ಶೋಧನೆ ನಮ್ಮ ಶ್ರೇಷ್ಠತೆಯನ್ನು ತಿಳಿಸುತ್ತದೆ. ಜ್ಞಾನದ ಗಣಿಗಳಂತಿರುವ ವಿಶ್ವದ ಪ್ರಾಚೀನ ಸಾಹಿತ್ಯಗಳಾದ ವೇದಗಳು, ಸಾಹಿತ್ಯ ಕಾವ್ಯಗಳು, ಯೋಗಶಾಸ್ತ್ರ, ಆಯುರ್ವೇದ, ಧನುರ್ವೇದ, ಶಿಲ್ಪಕಲೆ, ಸಂಗೀತ ಶಾಸ್ತ್ರ, ನಾಟ್ಯಶಾಸ್ತ್ರ, ಖಗೋಳ ಶಾಸ್ತ್ರ, ಜ್ಯೋತಿಷ ಶಾಸ್ತ್ರ, ಪಂಚಾಂಗ ರಚನೆ, ಗ್ರಹಣದ ಲೆಕ್ಕಾಚಾರ, ಗ್ರಹಗಳಜ್ಞಾನ, ಕಾಲಗಣನೆ, ಭವ್ಯದೇಗುಲಗಳನ್ನು ಕಟ್ಟಿದ ವಾಸ್ತುಶಾಸ್ತ್ರ, ಯುಧ್ಧಕಲೆ, ಸಮರಕಲೆ, ನಮ್ಮ ಕೃಷಿಪದ್ದತಿ, ಆಹಾರಪದ್ದತಿ, ವಸ್ತ್ರವಿನ್ಯಾಸ, ಆಭರಣ ಅಲಂಕಾರಗಳು, ಅಥಿತಿ ಸತ್ಕಾರ, ಕೌಟಿಲ್ಯನ ಅರ್ಥಶಾಸ್ತ್ರ, ಋಷಿಮುನಿಗಳ ಅಲೌಕಿಕ, ಆಧ್ಯಾತ್ಮ ವಿದ್ಯೆ, ಪಶು ಪಕ್ಷಿ ಪ್ರಕೃತಿಗಳೊಂದಿಗಿನ ಸಂಬಂಧ, ಬಂಗಾರದ ಆಭರಣಗಳ ಬಳಕೆ, ರೇಶಿಮೆ ವಸ್ತ್ರಗಳ ಬಳಕೆ, ಗುಹಾಲಯಗಳ ನಿರ್ಮಾಣ, ರಾಮಸೇತುವಿನಂತ ಅದ್ಭುತಕಾರ್ಯ, ದ್ವಾರಕೆಯಂತಹ ನಗರ ನಿರ್ಮಾಣ, ರಾಮನಂತಹ ಪರಾಕ್ರಮಿ, ಕೃಷ್ಣನಂತಹ ರಾಜನೀತಿಜ್ಞ, ಚಾಣಕ್ಯನ ತಂತ್ರಗಾರಿಕೆ. ಹರಿಶ್ಚಂದ್ರನ ಸತ್ಯ, ಭೀಮನ ಬಲ, ಮುಂತಾಗಿ ವರ್ಣಿಸಲಸಾಧ್ಯವಾದಂತಹ ಶ್ರೀಮಂತ ಪರಂಪರೆ ನಮ್ಮದಾಗಿದೆ. ಇದರಿಂದಾಗಿ ನಾವು ಹೆಮ್ಮೆಪಡಬಹುದಾಗಿದೆ.

7. ಹಿಂದುಗಳಲ್ಲಿರುವ ಗೊಂದಲಗಳಿಗೆ ಕಾರಣವೇನು?

ಹಲವು ಸಾವಿರವರುಷಗಳಲ್ಲಿ ಪರಂಪರೆಗಳಲ್ಲಾದ ಬದಲಾವಣೆಗಳು ಹಾಗೂ ಮಧ್ಯಯುಗದಲ್ಲಿ ಮಾರ್ಗದರ್ಶಕರಲ್ಲಿರುವ ತಾರ್ಕಿಕ ಭಿನ್ನತೆಯಿಂದುಂಟಾದ ಹಲವು ಆಂತರಿಕ ಮತಬೇಧ ಗಳು ಅವುಗಳನ್ನು ಪ್ರತಿನಿಧಿಸುತ್ತಿರುವವರಲ್ಲಿರುವ ಅಜ್ಞಾನ, ಅದೇಸಮಯದಲ್ಲಾದ ಪರಕೀಯರ ಆಕ್ರಮಣ, ದಾಳಿ, ಲೂಟಿ ಇವೆಲ್ಲಾ ನಮ್ಮ ಗೊಂದಲಕ್ಕೆ ಹಾಗೂ ಪರಂಪರೆಯ ಕುರಿತು ಅಜ್ಞಾನಕ್ಕೆ ಕಾರಣಗಳು.

8. ಅಸ್ಪೃಷ್ಯತೆ, ತಾರತಮ್ಯ (ಜಾತಿಯಲ್ಲಿನ ಮೇಲು ಕೀಳು) ಇವು ನಮ್ಮ ಸಂಸ್ಕೃತಿಯ ಅನಿವಾರ್ಯ ಭಾಗವೇ?

ಇವು ಹಿಂದುಗಳನ್ನು ಹಾದಿತಪ್ಪಿದ ಆಚರಣೆಗಳು. ಇವು ನಮ್ಮ ಪ್ರಾಚೀನ ಸಂಸ್ಕೃತಿಯ ಭಾಗಗಳಲ್ಲ. ನಮ್ಮ ಪ್ರಾಚೀನ ಸಂಸ್ಕೃತಿಯಲ್ಲಿ ಅಸ್ಪೃಷ್ಯತೆ ಇರಲಿಲ್ಲ. ಅಂದು ಅಸ್ಪೃಷ್ಯತೆ ಇದ್ದಿದ್ದರೆ! ಗೊಲ್ಲನಾದ ಕೃಷ್ಣನನ್ನು ದೇವರೆಂದು ಸ್ವೀಕರಿಸುತ್ತಿರಲಿಲ್ಲ. ಬ್ರಾಹ್ಮಣರು ಪೂಜಿಸುತ್ತಿರಲಿಲ್ಲ. ಕ್ಷತ್ರಿಯ ರಾಮನೂ ದೇವರಾಗುತ್ತಿರಲಿಲ್ಲ. ದಾಸೀಪುತ್ರ ವಿದುರನ ಮನೆಗೆ ಕೃಷ್ಣ ಊಟಕ್ಕೆ ಹೋಗುತ್ತಿರಲಿಲ್ಲ. ಕೃಷ್ಣ ಸುಧಾಮರು ಒಟ್ಟಿಗೇ ಗುರುಕುಲದಲ್ಲಿ ಕಲಿತು ಮಿತ್ರರಾಗುತ್ತಿರಲಿಲ್ಲ. ದೃಪದ ದ್ರೋಣರೂ ಮಿತ್ರರಾಗುತ್ತಿರಲಿಲ್ಲ. ಋಷಿಪುತ್ರ ರಾವಣನನ್ನು ರಾಕ್ಷಸ ಎನ್ನುತ್ತಿರಲಿಲ್ಲ. ಕ್ಷತ್ರಿಯರಾದ ಪಾಂಡವರು ಧರ್ಮರಾಯನ ನೇತೃತ್ವದಲ್ಲಿ ವೇಷ ಮರೆಸಿಕೊಂಡು ಏಕಚಕ್ರಾನಗರದಲ್ಲಿ ಬ್ರಾಹ್ಮಣನ ಮನೆಯಲ್ಲಿ ವಸತಿ ಬಯಸಿ ಉಳಿಯುತ್ತಿರಲಿಲ್ಲ. ಬ್ರಾಹ್ಮಣ ವೇಷದಲ್ಲಿದ್ದ ಪಾಂಡವರು ದ್ರೌಪದೀಸ್ವಯಂವರಕ್ಕೆ ಹೋಗುವಾಗ ಕುಂಬಾರನ ಮನೆಯಲ್ಲಿ ತಂಗುತ್ತಿರಲಿಲ್ಲ. ಬೇಡನಾದ ವಾಲ್ಮೀಕಿಯನ್ನೂ, ಬೆಸ್ತರ ಕನ್ಯೆಯ ಮಗನಾದ ವೇದವ್ಯಾಸರನ್ನೂ ಮಹರ್ಷಿಗಳೆಂದು ಸ್ವೀಕರಿಸುತ್ತಿರಲಿಲ್ಲ. ಕ್ಷತ್ರಿಯನಾದ ಕೌಶಿಕರಾಜನು ವಿಶ್ವಾಮಿತ್ರಮುನಿಯಾಗಿ ಬ್ರಹ್ಮರ್ಷಿಯ ಗೌರವ ಪಡೆಯುವುದು ಸಾಧ್ಯವಿರಲಿಲ್ಲ.  ಆದುದರಿಂದ ಹುಟ್ಟಿದ ಜಾತಿ ಯಿಂದ ಮೇಲು ಕೀಳು ನಿರ್ಧರಿಸುವುದು ಅಜ್ಞಾನಿಗಳ ಕೊಳಕು ಬುದ್ದಿಯೇ ಹೊರತು ಅದು ನಮ್ಮ ಪ್ರಾಚೀನ ಪರಂಪರೆಯಲ್ಲ. ನಾವು ಇದನ್ನು ಅರ್ಥಮಾಡಿಕೊಂಡು ವಿಶಾಲ ಮನಸ್ಥಿತಿಯವರಾಗಿ ಬದುಕ ಬೇಕಿದೆ.

9.ಉತ್ತಮರು ಹಾಗೂ ಅಧಮರು ಯಾರು?

ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿ ಗಳೊಂದಿಗೆ ಧರ್ಮದಿಂದ ಬದುಕುವ ವಿವೇಕಿ ಮನುಶ್ಯನು ಉತ್ತಮನು. ಅವನ ಹುಟ್ಟು ಎಲ್ಲಿ ಆಗಿದೆ ಎನ್ನುವುದು ಮುಖ್ಯವಲ್ಲ. ಅಧರ್ಮಿಯೂ, ಅವಿವೇಕಿಯೂ, ಅನೀತಿ ವಂತನೂ, ಆಚಾರ, ವಿಚಾರ ಶೂನ್ಯನೂ, ಸಂಸ್ಕಾರ ಸಂಸ್ಕೃತಿಯಿಂದ ವಿಮುಖನಾದವನೂ, ದುರ್ವ್ಯಸನಿಯೂ, ಅಶುದ್ಧನೂ ಕ್ರೂರನೂ, ಧರ್ಮಬ್ರಷ್ಟನೂ, ಧರ್ಮದ್ರೋಹಿಯೂ ಆದ ಮನುಷ್ಯನೇ ಅಧಮನು. ವಾಲ್ಮೀಕಿ, ವ್ಯಾಸ, ವಿದುರ, ಕರ್ಣ, ಇವರೆಲ್ಲಾ ತಮ್ಮ ಕಾರ್ಯದಿಂದಾಗಿ ವಿಶ್ವಮಾನ್ಯರಾಗಿದ್ದಾರೆ, ಇವರ ಹುಟ್ಟು ಇವರ ಬೆಳವಣಿಗೆಯನ್ನು ತಡೆಯಲಿಲ್ಲ. ಹುಟ್ಟಿನಿಂದ ಎಲ್ಲರೂ ಅಮೃತ ಪುತ್ರರೇ ಆಗಿತ್ತಾರೆ.  ಜಾತಿಯಿಂದ ಯಾರೂ ಕೀಳರಿಮೆ ಹೊಂದಬೇಕಿಲ್ಲ. ಸ್ವಭಾವದಿಂದ ಉತ್ತಮ ಹಿಂದುಸಾಧಕರಾಗೋಣ.

10. ನಾವು ದುರ್ಜನ ಹಾಗೂ ಕೊಳಕು ಜನರೊಂದಿಗೆ ಸಮಾನರಂತೆ ಬೆರೆಯಬೇಕೇ?

ಖಂಡಿತವಾಗಿಯೂ ನಾವು ಕೊಳಕುಜನರೊಂದಿಗೆ ಸಮಾನರಂತೆ ಬೆರೆಯಬೇಕಾಗಿಲ್ಲ. ಶೌಚದಲ್ಲಿ ಎರಡುವಿಧ ಬಾಹ್ಯ ಶುದ್ಧತೆ ಹಾಗೂ ಅಂತರಂಗ ಶುದ್ಧತೆ ಇವೆರಡೂ ಇಲ್ಲದ ಹೊಲಸು ಜನರಿಂದ ನಾವು ದೂರವೇ ಇರಬೇಕು. ಮನುಶ್ಯನ ಜ್ಯೇಷ್ಟತೆಗೆ ಆ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಸಂಸ್ಕಾರ ಮಾನದಂಡವಾಗಬೇಕೇ ಹೊರತು ಜಾತಿ ಮಾನದಂಡವಾಗಬಾರದು. ದೈಹಿಕ ಮಾಲಿನ್ಯ ತಾತ್ಕಾಲಿಕ. ಆದರೆ ಮಾನಸಿಕ ಮಾಲಿನ್ಯ ದೀರ್ಘಕಾಲೀನ. ಆದುದರಂದ ಎರಡೂ ಜನರಿಂದ ಅಂತರ ಕಾಯ್ದುಕೊಳ್ಳಬೇಕು. ದೇಹ ಮಲಿನ ವಾಗಿರುವವರಿಗಿಂತಲೂ ಮನಸ್ಸು ಮಲಿನ ವಾಗಿರುವವರಿಂದ ಹೆಚ್ಚು ಜಾಗ್ರತೆ ವಹಿಸಬೇಕು. ಬಾಹ್ಯ ಶುದ್ಧತೆ ಇಲ್ಲದವರಬಗ್ಗೆ ಅಸಹ್ಯ ಭಾವವನ್ನು ಹೊಂದದೆ ಅನುಕಂಪ ಭಾವದಿಂದ ಅವರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು.

11. ಇಂದಿನ ಹಿಂದು ಸಮಾಜದಲ್ಲಿರುವ ಮುಖ್ಯ ದೋಷಗಳು ಯಾವುವು.

ನಮ್ಮಲ್ಲಿರುವ ಮುಖ್ಯ ದೋಷ ಅಜ್ಞಾನ. ಧರ್ಮದ ಬಗ್ಗೆ ತಪ್ಪುತಿಳುವಳಿಕೆ. ಆತ್ಮದ ಅರಿವಿನ ಕೊರತೆ ಅಥವಾ ಭ್ರಮೆ. ನಮ್ಮ ದಾರ್ಶನಿಕರು “ನಾನು” ಎಂದರೆ ದೇಹವೋ ಆತ್ಮವೋ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದನ್ನು ಸರಿಯಾಗಿ ಅರಿತವರು ಅಜ್ಞಾನಿಗಳಂತೆ ವರ್ತಿಸುವುದಿಲ್ಲ. ದೇಹವು ನಶ್ವರ. ಇದು ಎಲ್ಲ ಜಾತಿ ವರ್ಣಗಳಲ್ಲಿಯೂ ನಾಶವಾಗುವಂತಹುದು. ಅದಕ್ಕೆ ಶ್ರೇಷ್ಟ ಕನಿಷ್ಠ ಎನ್ನುವ ಬೇಧ ಇಲ್ಲ. ಜೀವ ಹೋದ ಹೆಣಕ್ಕೆ ಎಲ್ಲೆಡೆಯೂ ಒಂದೇರೀತಿಯ ಮರ್ಯಾದೆ.  ದೇಹವು ಬಾಹ್ಯಶುದ್ಧಿಯನ್ನು ಹೊಂದಿರಬೇಕು ಇದುವೇ ಮುಖ್ಯ. ದೇಹ ಮಾತ್ರ ಜಾತಿಯನ್ನು ಪ್ರತಿನಿಧಿಸುತ್ತದೆ. ಆದರೆ ಆತ್ಮ ಇದು ಅವಿನಾಶಿ ನಾಶವಿಲ್ಲದ್ದು ಇದು ಸಾಯುವುದಿಲ್ಲ. ದೃಷ್ಠಿಗೋಚರ ಅಲ್ಲ. ಆತ್ಮಕ್ಕೆ ಜಾತಿ ಇಲ್ಲ. ಒಂದು ದೇಹವನ್ನು ತೊರೆದ ಆತ್ಮ ಇನ್ನೊಂದು ದೇಹವನ್ನು ಪಡೆಯುವಾಗ ಜಾತಿಯನ್ನು ಹುಡುಕುವುದಿಲ್ಲ. ಆದುದರಿಂದ ಆತ್ಮಕ್ಕೆ ಮಡಿ ಮೈಲಿಗೆ ಇಲ್ಲ. ಆತ್ಮವು ಅಸ್ಪೃಷ್ಯವೆನ್ನುವುದು ಅರ್ಥಹೀನ. ನಾನು ಎನ್ನುವುದು ಆತ್ಮವೇ ಹೊರತು ದೇಹ ಅಲ್ಲ. ವ್ಯಕ್ತಿಯ ಗುಣಸಂಸ್ಕಾರಗಳೇ ಗೌರವಕ್ಕೆ ಮೂಲಕಾರಣವಾಗುವುದು. ಆದುದರಿಂದ ದೇಹ ಹಾಗೂ ಮನಸ್ಸಿನಿಂದ ಶುಭ್ರವಾಗಿರುವವರೆಲ್ಲಾ ಶ್ರೇಷ್ಠರು. ದೇಹ ಹಾಗೂ ಮನಸ್ಸಿನಿಂದ ಅಶುಭ್ರವಾಗಿರುವವರೆಲ್ಲರೂ ಕನಿಷ್ಠರು ಎಂದು ವಿಭಾಗಿಸುವುದು ಉತ್ತಮ ಬದುಕಿಗೆ ಸಹಾಯವಾಗುವುದು. ಕೊಳಕು ದೇಹಕ್ಕಿಂತಲೂ ಕೊಳಕು ಮನಸ್ಸಿನವರು ಅತ್ಯಂತ ನೀಚರು ಎನ್ನಬಹುದು. ದೇಹಶುದ್ಧಿ ಬಲುಬೇಗದಲ್ಲಿ ಸಾಧ್ಯ. ಮನಶುಃದ್ಧಿ ಅಷ್ಟು ಸುಲಭದಲ್ಲಿ ಸಾಧ್ಯವಲ್ಲ. ಮನಸ್ಸಿನ ಕೊಳೆತೊಳೆಯಲು ಉತ್ತಮ ಸಂಸ್ಕಾರ ಸಜ್ಜನರ ಸಹವಾಸ ಹಾಗೂ ಸತತ ಪ್ರಯತ್ನದ ಬಲ ಬೇಕು.

12. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಇವು ಜಾತಿಯೇ?

ಇವು ಜಾತಿಗಳಲ್ಲ ಇವು ಸಮಾಜದ ನಾಲ್ಕು ಅನಿವಾರ್ಯ ಅಂಗಗಳು ಅಥವಾ ವ್ಯವಸ್ಥೆಗಳು, ವಿಶೇಷಗುಣಗಳು. ಇವುಗಳಲ್ಲಿ ಯಾವುದು ದುರ್ಬಲವಾದರೂ ದೇಶನಾಶವಾಗುವುದು. ಧರ್ಮವೂ ನಾಶವಾಗುವುದು. ಮನುಷ್ಯನ ದೇಹದಲ್ಲಿ ತಲೆ, ದೇಹ, ತೋಳುಗಳು, ಹಾಗೂ ಕಾಲುಗಳು ಇರುವಂತೆ, ಈ ನಾಲ್ಕು ವರ್ಣಗಳು ಇವೆ. ಈ ಅಂಗಗಳಲ್ಲಿ ಯಾವುದು ಇಲ್ಲದಿದ್ದರೂ ದೇಹಪೂರ್ಣವಲ್ಲ ನಮ್ಮ ಬದುಕು ವ್ಯರ್ಥವಾಗುವುದು. ಯಾವುದೂ ಮೇಲಲ್ಲ ಯಾವುದೂ ಕೆಳಗಲ್ಲ. ನಾಲ್ಕುವರ್ಣದ ಯಾವುದೇ ಅಂಗ ದುರ್ಬಲವಾದರೂ ದೇಶ ಅಂಗವಿಕಲವಾದಂತೆ. ದೇಶವೆಂಬ ದೇಹಕ್ಕೆ ಈ ನಾಲ್ಕು ವರ್ಣಗಳು ಅಂಗಾಂಗಳು ಆಗಿವೆ. ನಾಲ್ಕುವರ್ಗಗಳಲ್ಲಿ ಪರಸ್ಪರ ಅವಲಂಬನೆ (Interdependent) ಹಾಗೂ ಹೊಂದಾಣಿಕೆ ಇದ್ದರೆ ಮಾತ್ರ ಸಮಾಜವು ಆರೋಗ್ಯಕರವಾಗಿರುವುದು. ದೇಶ ಹಾಗೂ ಧರ್ಮ ಉಳಿಯುವುದು. ನಾಲ್ಕುವರ್ಣಗಳಲ್ಲಿ ಯಾವವಿಭಾಗ ದುರ್ಬಲವಾದರೂ ದೇಶವೂ ನಾಶ ವಾಗುವುದು. ಧರ್ಮವೂ ನಾಶವಾಗುವುದು. ನಾಲ್ಕು ವರ್ಣಗಳಲ್ಲಿ ಮೇಲು ಕೀಳೆಂಬುದು ಇಲ್ಲ ಹಾಗೂ ಇವು ಜಾತಿಗೆ ಸೀಮಿತವಾಗಿಲ್ಲ. ಪುರುಷಶ್ಲೋಕದಲ್ಲಿ ಕಾಲಪುರುಷನ ವಿವರಣೆಯ ಒಂದು ಮಂತ್ರದಲ್ಲಿ ಹೀಗೆ ಹೇಳಲಾಗಿದೆ.  ಬ್ರಾಹ್ಮಣೋSಸ್ಯ ಮುಖಮಾಸೀತ್ | ಬಾಹೂ ರಾಜನ್ಯಃ ಕೃತಃ| ಊರೂ ತದಸ್ಯ ಯದ್ವೈಶ್ಯಃ|ಪದ್ಭ್ಯಾಂ ಶೂದ್ರೋ ಅಜಾಯತ| ಎಂಬುದಾಗಿ ಕೆಲವರು ಅಜ್ಞಾನೀ ಪಂಡಿತರು ಪುರುಷಶ್ಲೋಕದ ಈ ಉಕ್ತಿಯನ್ನು ಉಲ್ಲೇಖಿಸಿ. ಬ್ರಾಹ್ಮಣರು ಭಗವಂತನ ತಲೆಯಿಂದಲೂ, ಶ್ರಮಜೀವಗಳು ಭಗವಂತನ ಪಾದದಲ್ಲಿಯೂ ಜನಿಸಿದರು ಎನ್ನುವುದಾಗಿ ಹೇಳಿ ಬ್ರಾಹ್ಮಣರಿಗೆ ಶ್ರೇಷ್ಟತೆಯನ್ನು ಅರೋಪಿಸುತ್ತಾರೆ. ಇಲ್ಲಿ ಭಗವಂತನ ತಲೆ ಶ್ರೇಷ್ಟ ಕಾಲು ಕನಿಷ್ಟ ಎನ್ನುವ ಅಜ್ಞಾನ ಮನೆಮಾಡಿರುತ್ತದೆ. ಭಗವಂತನ ಎಲ್ಲವೂ ಶ್ರೇಷ್ಠವೇ ಆಗಿದೆ . ಭಗವಂತನಿಗೆ ರೂಪ ಕಲ್ಪಸಿದವರು ನಾವು. ಇದು ನಮ್ಮ ಅನುಕೂಲಕ್ಕಾಗಿ. ಸೃಷ್ಟಿಯ ಎಲ್ಲರೂಪವೂ ಆವನಾಗಿದ್ದಾನೆ. ನೋಡುವ ಕಣ್ಣಿರಬೇಕಷ್ಟೆ. ಮೇಲು ಕೀಳೆನ್ನುವ ಇಂತಹ ಹೇಳಿಕೆಯಿಂದ ಇತರವರ್ಗಗಳ ಜನರು ಕೀಳರಿಮೆ ಹೊಂದುತ್ತಾರೆ. ಹೀಗೆ ತಾವು ಶ್ರೇಷ್ಟ ಎನ್ನುವ ಮೇಲರಿಮೆ ಹೊಂದಿದವರು ನಮ್ಮ ಪ್ರಾಚೀನರು ಕಲಿಸಿದ ಸಂಸ್ಕೃತಿ ಯನ್ನು ಮರೆಯುತ್ತಾರೆ. ಭಕ್ತನ ತಲೆ ಭಗವಂತನ ಪಾದಗಳಿಗೇ ನಮಿಸುವುದನ್ನು ನಮಗೆ ಕಲಿಸಿದ್ದಾರೆ. ಇದರಅರ್ಥ ಪಾದವೇ ಶ್ರೆಷ್ಠ  ಎಂಬುದು ತಾನೇ. ಅಂದರೆ ಶೂದ್ರ ಜನಿಸಿದ ಭಾಗಕ್ಕೇ ಪೂಜೆ ಹಾಗೂ ನಮಸ್ಕಾರ ಸಲ್ಲಬೇಕೆಂದು ಅರ್ಥವಲ್ಲವೇ? ಆದುದರಿಂದ ಪವಿತ್ರ ಮಂತ್ರಗಳನ್ನು ನಮಗೆ ಬೇಕಾದಂತೆ ಅರ್ಥೈಸುವುದು ಅಜ್ಞಾನವೇ ಆಗಿದೆ. ಹುಟ್ಟುವ ದೇಹದಲ್ಲಿ ಯಾವುದೂ ಮೇಲಲ್ಲ ಯಾರೂ ಕೀಳಲ್ಲ. ಬೆಳೆಯುತ್ತಾ ಬೆಳೆಯುತ್ತಾ ನಾವು ಬದುಕುವ ರೀತಿ ನಮ್ಮ ಸ್ಥಾನವನ್ನು ನಿರ್ಧರಿಸುತ್ತದೆ. ತಲೆಯನ್ನು ಭಗವಂತನ ಪಾದಕ್ಕೆ ಬಾಗಿಸುವುದನ್ನು ಕಲಿತವನೇ ಜ್ಞಾನಿಯಾಗಿದ್ದಾನೆ. ತಲೆಬಾಗದವನು ದುರಹಂಕಾರಿ ಯಾಗಿ ಮುಂದೊದು ದಿನ ತನ್ನ ತಲೆಯನ್ನೇ ಕಳೆದುಕೊಳ್ಳುತ್ತಾನೆ. ಇಂತಹ ಅನೇಕ ಉದಾಹರಣೆಗಳನ್ನು ಪುರಾಣಕಥೆಗಳಲ್ಲಿ ನೋಡುತ್ತೇವೆ. ಹಿರಿಯರು ವಿದ್ಯಾದಧಾತಿ ವಿನಯಂ ಎಂದಿದ್ದಾರೆ. ವಿನಯ ಇಲ್ಲದವನು ಜ್ಞಾನಿಆಗಲಾರ. ಜ್ಞಾನಿ ಆದವನು ಪರರನ್ನು ಕೀಳಾಗಿ ನೋಡಲಾರ. ಪರಸ್ಪರ ತಾರತಮ್ಯ ಮಾಡಲಾರ. ಇದರಿಂದ ಯಾವುದು ಶ್ರೇಷ್ಠ ಯಾವುದು ಕನಿಷ್ಠ ಎನ್ನುವ ಬದಲು ಭಗವಂತನ ಸರ್ವಾಂಗವೂ ಶ್ರೇಷ್ಟ ಸಮಾಜದ ಎಲ್ಲರೂ ಮುಖ್ಯರೇ ಪರಸ್ಪರ ಸಹಕಾರದಿಂದ ಬಾಳಬೇಕು ಎನ್ನುವ ಅರಿವು ಮೂಢರಿಗೆ ಬಂದಾಗ ಹಿಂದೂ ಸಮಾಜ ಒಂದಾಗುತ್ತದೆ. ಬಲಿಷ್ಠವಾಗುತ್ತದೆ ಭಾರತ ವಿಶ್ವಗುರು ಆಗುತ್ತದೆ.

ಭಗವದ್ಗೀತೆಯಲ್ಲಿ ಕೃಷ್ಣ ಹೀಗೆ ಹೇಳಿದ್ದಾನೆ.

ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ|

ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್||4-13||

ಶ್ಲೋಕದ ಮೊದಲ ಸಾಲಿನ ಅರ್ಥ ಹೀಗಿದೆ. ನನ್ನಿಂದ ಸೃಷ್ಟಿಸಲಾದ ನಾಲ್ಕುವರ್ಣಗಳೂ ವ್ಯಕ್ತಿಯ ಗುಣ ಹಾಗೂ ಮಾಡುವ ಕೆಲಸಕ್ಕನುಗುಣವಾಗಿರುತ್ತದೆ ಎಂಬುದಾಗಿ ಸ್ಪಷ್ಟವಾಗಿದೆ. ಆದುದರಿಂದ ಶಾಸ್ತ್ರದಲ್ಲಿನ ವರ್ಣಕ್ಕೂ ಇಂದಿನ ಜಾತಿಗೂ ಸಂಬಂಧವೇ ಇಲ್ಲವಾಗಿದೆ.

ಇದಲ್ಲದೆ ಇನ್ನೊಂದು ಶ್ಲೋಕದಲ್ಲಿ ಯಾರು ಪಂಡಿತರು ಎಂಬುದಾಗಿ ಹೀಗೆ ಹೇಳಿದ್ದಾನೆ.

ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ|

ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಷಿನಃ||5-18||

ಜ್ಞಾನವಂತರಾದವರು ವಿದ್ಯೆ ಹಾಗೂ ವಿನಯವನ್ನು ಹೊಂದಿದ ಬ್ರಾಹ್ಮಣನಲ್ಲಿ, ಹಸುವಿನಲ್ಲಿ, ಆನೆಯಲ್ಲಿ, ನಾಯಿಯಲ್ಲಿ, ನಾಯಿಯ ಮಾಂಸತಿನ್ನುವವರಲ್ಲಿ ಅಂದರೆ ಸಮಾಜದ ಅತ್ಯಂತ ಕನಿಷ್ಟವ್ಯಕ್ತಿಯಲ್ಲಿಯೂ, ಬೇಧ ಎಣಿಸುವುದಿಲ್ಲ. ಒಂದೇರೀತಿಯಲ್ಲಿ ನೋಡುತ್ತಾರೆ ಎಂದಿದೆ. ಈ ದೃಷ್ಟಿಕೊನ ನಮ್ಮಲ್ಲಿಯೂ ಇರಬೇಕಾಗಿದೆ.

ಒಂದು ಸುಭಾಷಿತ ಹೀಗೆ ಹೇಳುತ್ತದೆ.

ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್ |

ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ ||

ಅರ್ಥ ಹೀಗಿದೆ. ಇವನು ನಮ್ಮವನು ಅವನು ಪರಕೀಯನು ಇಂತಹ ಲೆಕ್ಕಾಚಾರಮಾಡುವವರು ಸಣ್ಣ ಬುದ್ದಿಯವರು. ಉದಾರಮನಸ್ಸಿನವರಿಗೆ ವಿಶ್ವವೇ ಕುಟುಂಬವಾಗಿದೆ.  ಉತ್ತಮರು ವಿಶ್ವವನ್ನೇ ತನ್ನ ಕುಟುಂಬ ಎಂಬುದಾಗಿ ತಿಳಿಯುತ್ತಾರೆ ಎನ್ನುವುದು ಅರ್ಥ.

ಹಿಂದೆ ಸಕಲವಿದ್ಯೆಗಳಿಗೂ ಗುರುಗಳಾಗಿದ್ದವರನ್ನು ಬ್ರಾಹ್ಮಣರು ಎನ್ನುತ್ತಿದ್ದರು. ಎಲ್ಲಾವರ್ಣದವರೂ ಇವರಲ್ಲಿ ಬಂದು ಒಟ್ಟಿಗೇ ಕಲಿಯುತ್ತಿದ್ದರು. ಗುರುಕುಲ ಶಿಕ್ಷಣದಲ್ಲಿ ಶಿಶ್ಯನು ಮೊದಲು ಕೆಲವು ವರ್ಷಗಳಕಾಲ ಗುರು ಸೇವೆಯ ಹೆಸರಿನಲ್ಲಿ ಆಶ್ರಮದ ನಿತ್ಯದ ಅಗತ್ಯಗಳಿಗೆ ಸಹಾಯವಾಗುವ ಶ್ರಮದಾಯಕ ಕೆಲಸಗಳನ್ನೂ, ಕೃಷಿಯನ್ನೂ, ಗೋಪಾಲನೆಯನ್ನೂ ಮಾಡಬೇಕಿತ್ತು.  ಇಲ್ಲಿ ವಿದ್ಯಾರ್ಥಿಯು ಜೀವನದ ಶಿಷ್ಟಾಚಾರಗಳನ್ನು ಕಲಿಯುತ್ತಿದ್ದನು. ಭಿಕ್ಷಾಟನೆಯ ರೂಪದಲ್ಲಿ ಲೋಕಜ್ಞಾನ ಹಾಗೂ ವ್ಯವಹಾರ ಜ್ಞಾನವನ್ನೂತಿಳಿಸಲಾಗುತ್ತಿತ್ತು ಹಾಗೂ ಅಹಂಕಾರದ ನಾಶವೂ ಆಗುತ್ತಿತ್ತು. ನಂತರ ಶಸ್ತ್ರವಿದ್ಯೆಯನ್ನೂ, ಯುದ್ಧವಿದ್ಯೆಯನ್ನೂ ಕಲಿಸುತ್ತಿದ್ದರು. ಅಂತಿಮವಾಗಿ ಶಾಸ್ತ್ರವಿದ್ಯೆಯನ್ನೂ ಕಲಿಸುತ್ತಿದ್ದರು. ಹೀಗೆ ಒಬ್ಬ ಶಿಕ್ಷಾರ್ಥಿ ಹನ್ನೆರಡು ವರ್ಷಗಳ ಅಧ್ಯಯನದಲ್ಲಿ ಪರಿಪೂರ್ಣನಾಗಿ ಉತ್ತಮಪ್ರಜೆಯಾಗಿ ಗುರುಕುಲದಿಂದ ಹೊರಬರುವ ಶಿಕ್ಷಣ ಕ್ರಮ ಭಾರತದಲ್ಲಿ ಇತ್ತು. ಇಂದಿನಂತೆ ಕೇವಲ ಹಣಗಳಿಸುವ ಏಕಮುಖ ದೃಷ್ಟಿಕೋನದ. ಕೇವಲ ಗುಮಾಸ್ತನ ಕೆಲಸಮಾಡುವ ವಾಣಿಜ್ಯವಿದ್ಯೆ ಕಲಿಸುವ ಸಂಕುಚಿತಮನೋಭಾವದ ಸೀಮಿತ ವ್ಯವಸ್ಥೆ ಇರಲಿಲ್ಲ. ದ್ರೋಣ, ಕೃಪ, ಅಶ್ವಥ್ಥಾಮ, ಪರಷುರಾಮರು ಬ್ರಾಹ್ಮಣರಾಗಿದ್ದೂ ಮಹಾಶೂರರಾಗಿದ್ದುದನ್ನು ನಾವು ಯುದ್ಧಭೂಮಿಯ ಇತಿಹಾಸದಲ್ಲಿ ತಿಳಿಯುತ್ತೇವೆ. ಇಂದು ಏನೂ ಅರಿವು ಆಚರಣೆಗಳನ್ನು ಪಾಲಿಸದವರನ್ನೂ, ಕೇವಲ ಹುಟ್ಟಿನಿಂದ ಜಾತಿಯಲ್ಲಿ ಗುರುತಿಸಿಕೊಂಡವರನ್ನೂ ಬ್ರಾಹ್ಮಣರೆನ್ನುತ್ತಿದ್ದೇವೆ. ಇದು ಸರಿಯಲ್ಲ, ಬ್ರಾಹ್ಮಣ್ಯ ಇದೊಂದು ಅರ್ಹತೆ, ಇದೊಂದು ಗುರುಸ್ಥಾನ, ಹೀಗೆ ಕರೆದುಕೊಳ್ಳಲು ಅರ್ಹತೆ ಮಾನದಂಡವಾಗಬೇಕೇ ಹೊರತಾಗಿ ಕೇವಲ ಹುಟ್ಟು ಮಾನದಂಡವಾಗಬಾರದು. ಬ್ರಾಹ್ಮಣನೆಂದು ಕರೆದುಕೊಳ್ಳಲು ವ್ಯಕ್ತಿಯಲ್ಲಿ ಬ್ರಹ್ಮಣತ್ವ ಇರಬೇಕು ತತ್ವ ಹಾಗೂ ಸತ್ವ ವ್ಯಕ್ತಿತ್ವದಲ್ಲಿ ಸೇರಿರಬೇಕು.  ಈ ಅರ್ಹತೆ ಗಳಿಸಲು ಜಾತಿಯ ಕಟ್ಟಳೆಗಳಿಲ್ಲ. ಯಾರೂ ಈ ಸ್ಥಾನಕ್ಕಾಗಿ ಸಾಧನೆ ಮಾಡಬಹುದು. ಮತ್ತು ಏರಬಹುದು. ಭಾರತದ ಚರಿತ್ರೆಯಲ್ಲಿ ಭಿನ್ನ ಸಮುದಾಯದಲ್ಲಿ ಜನಿಸಿಯೂ ಗುರುಸ್ಥಾನ ಅಲಂಕರಿಸಿದವರು, ಗೌರವಾರ್ಹ ಪೂಜಾರ್ಹ ಸ್ಥಾನದಲ್ಲಿ ಪ್ರತಿಷ್ಠಾಪಿತರಾಗಿರುವ ಹಲವು ಸಂತರನ್ನು ನಾವು ಕಾಣಬಹುದಾಗಿದೆ. ವಾಲ್ಮೀಕಿ, ವ್ಯಾಸ, ವಿವೇಕಾನಂದರಂತಹವರು, ಹಲವುಜನ ನಮಗೆ ಮಾದರಿಯಾಗಿದ್ದಾರೆ. ನಾವು ನಮ್ಮ ಜಾತಿಯನ್ನು ಬಹಿರಂಗವಾಗಿ ಹೆಸರಿನೊಂದಿಗೆ ಪ್ರದರ್ಷನ ಮಾಡುವುದನ್ನು ನಿಲ್ಲಿಸಬೇಕಿದೆ. ನಾವಾರೆಂದು ನಮ್ಮ ವ್ಯಕ್ತಿತ್ವ ಹಾಗೂ ವ್ಯವಹಾರದಿಂದಲೇ ಪರಿಚಯವಾಗಬೇಕಿದೆ. ಇಲ್ಲಿಂದಲೇ ನಾವು ಸಮಾಜ ಸುಧಾರಣೆಗೆ ಮುನ್ನಡಿ ಇಡಬೇಕಿದೆ.

13. ಮೇಲ್ವರ್ಗದವರು ಕೆಳವರ್ಗದವರನ್ನು ಶಿಕ್ಷಣ ದಿಂದ ವಂಚಿಸಿದರೇ? ಶೋಶಿಸಿದರೇ? ಲೋಕದ ಸಮಸ್ಯೆಗೆಲ್ಲಾ ಬ್ರಾಹ್ಮಣರೇ ಕಾರಣರೇ?

ಜನರ ಮನಸ್ಸನ್ನು ಕೆಡಿಸಲು ಈ ರೀತಿಯಾಗಿ ಹಿಂದೂ ವಿರೋಧಿಗಳು ಸರ್ವದಾ ಚರ್ಚೆ ಮಾಡುತ್ತಿರುತ್ತಾರೆ. ಕೆಳವರ್ಗ ಮೇಲ್ವರ್ಗದವರನ್ನು ದ್ವೇಶಿಸುವಂತೆ, ಆರ್ಥಿಕ ದುರ್ಬಲರು ಸಬಲರನ್ನು ದ್ವೇಶಿಸುವಂತೆ, ಉತ್ತೇಜಿಸುತ್ತಾ ತಾವು ರಾಜಕೀಯ ಲಾಭ ಮಾಡಿಕೊಳ್ಳುತ್ತಿರುತ್ತಾರೆ. ಇಂದಿನ ಚಲನಚಿತ್ರಗಳ ಕಥೆಯೂ ಹೀಗೆಯೇ ಇರುತ್ತದೆ. ಇದೊಂದು ಮನಶ್ಯಾಸ್ತ್ರವೇ ಆಗಿದೆ. ಹಿಂದೆ ಇಂದಿನಂತೆ ಶಾಲಾ ಶಿಕ್ಷಣದಿಂದ ಉದ್ಯೋಗ ಎನ್ನುವ ಸಾಮಾಜಿಕ ವ್ಯವಸ್ಥೆ ಇರಲಿಲ್ಲ. ಹಿಂದಿನ ಶಿಕ್ಷಣದಲ್ಲಿ ಗುರುಕುಲಗಳಲ್ಲಿ ಮುಖ್ಯವಾಗಿದ್ದುದು ಶಸ್ತ್ರವಿದ್ಯೆ ಹಾಗೂ ಶಾಸ್ತ್ರ ವಿದ್ಯೆ ಇವುಗಳು ಮುಖ್ಯವಾಗಿತ್ತು. ಕೌಶಲ್ಯಾಧಾರಿತ ಹಾಗೂ ಉದ್ಯೋಗಾಧಾರಿತ ವಿಷಯಗಳಲ್ಲಿ ಹಳ್ಳಿಗಳು ಸ್ವಾವಲಂಬಿಗಳಾಗಿದ್ದವು. ತಂದೆಯಿಂದ ಮಗನಿಗೆ ಕುಟುಂಬದ ವೃತ್ತಿ ಕೌಶಲಗಳ ತಲೆ ತಲೆಮಾರುಗಳಿಂದ ನಡೆಸಿಕೊಂಡು ಬಂದ ಜ್ಞಾನ ಸ್ವಾಭಾವಿಕವಾಗಿಯೇ ಬರುತ್ತಿತ್ತು. ವೃತ್ತಿಆಧಾರಿತ ವಿದ್ಯೆಗಳಿಗೆ ಪ್ರತ್ಯೇಕ ಗುರುಕುಲಗಳಿರುತ್ತಿರಲಿಲ್ಲ. ಕುಟುಂಬದ ಹಿರಿಯರೇ ಗುರುಗಳಾಗಿರುತ್ತಿದ್ದರು. ಕುಟುಂಬದಲ್ಲಿ ಹೆಂಡತಿ ಮಕ್ಕಳು ಎಲ್ಲರೂ ಯಜಮಾನನ ಕೆಲಸದಲ್ಲಿ ಸಹಾಯಮಾಡುತ್ತಿದ್ದರು. ಹೀಗೆ ಕೆಲಸಮಾಡುತ್ತಾ ಮಾಡುತ್ತಾ ಸಹಜವಾಗಿಯೇ ಕೌಟುಂಬಿಕವಾಗಿ ಬರುವ ಈವಿದ್ಯೆಗಳನ್ನು ಅವರ ಮಕ್ಕಳು ಕಲಿಯುತ್ತಿದ್ದರು. ಶಿಲ್ಪಿಗಳು, ನೇಕಾರರು, ಕುಂಬಾರರು, ಕಮ್ಮಾರರು, ಸ್ವರ್ಣಕಾರರು, ಕೃಷಿಕರು, ಹೀಗೆ ಅನೇಕ ವಿದ್ಯೆಗಳು ಸಮುದಾಯ ಶಿಕ್ಷಣದಿಂದ, ಕುಟುಂಬ ಶಿಕ್ಷಣದಲ್ಲಿಯೇ ತಲೆಮಾರುಗಳಿಂದ ತಲೆಮಾರುಗಳಿಗೆ ಪರಂಪರೆಯಾಗಿ ಮುಂದುವರಿಯುತ್ತಿತ್ತು. ಹಾಗೆಯೇ ವೇದಾಧ್ಯಯನ ಕೂಡಾ ಕುಟುಂಬಗಳಲ್ಲಿ ಸಹಜವಾಗಿ ಮುಂದುವರಿಯುತ್ತಿತ್ತು. ಅದನ್ನು ಕಲಿಯುವ ಅಗತ್ಯವೂ ಅನ್ಯವೃತ್ತಿಗೆ ಅನಿವಾರ್ಯವೆನಿಸುತ್ತಿರಲಿಲ್ಲ. ಇದು ಉದ್ಯೋಗಾಧಾರಿತ ಶಿಕ್ಷಣವೂ ಆಗಿರಲಿಲ್ಲ. ಕೌಶಲ್ಯಾಧಾರಿತ ಶಿಕ್ಷಣವಾಗಿತ್ತು. ವಿವಾಹ ಸಂದರ್ಭಗಳಲ್ಲಿಯೂ ವೃತ್ತಿ ಅನುಭವವು ಮನೆಗೆಬರುವ ಹೆಣ್ಣುಮಗಳಿಗೂ ಇರಲೆಂಬುದಾಗಿಯೇ ಸಮಾನ ಸಮಾಜದಿಂದ ಹುಡುಗಿಯನ್ನು ತರಲಾಗುತ್ತಿತ್ತು. ಇಂದು ಸಾಮಾಜಿಕ ವ್ಯವಸ್ಥೆ ಬೇರೆಯಾಗಿದೆ. ಆವಿಷಯ ಬೇರೆ. ಆದುದರಿಂದ ಬ್ರಾಹ್ಮಣರು ಅನ್ಯರಿಗೆ ವಿದ್ಯೆಕಲಿಸಲಿಲ್ಲ ಎನ್ನುವ ಇಂತಹ ವಿಚಾರಗಳು ಕೇವಲ ಸಮಾಜವನ್ನು ಒಡೆಯಲು ಬಳಸುವ ಷಡ್ಯಂತ್ರಗಳಾಗಿವೆ. ಬ್ರಹ್ಮಣದ್ವೇಷವನ್ನು ಬಿತ್ತುವ ೀ ಮೂಲಕ ಹಿಂದೂ ಸಮಾಜವನ್ನು ದುರ್ಬಲಗೊಳಿಸುವ ಷಡ್ಯಂತ್ರವಾಗಿದೆ. ಹಿಂದಿನ ಕಾಲದಲ್ಲಿ ಸರ್ವಸಮುದಾಯಗಳೂ ವೇದಕಲಿತು ಮಾಡುವ ಕೆಲಸವೇನೂ ಇರಲಿಲ್ಲ. ಸಮಾಜದಲ್ಲಿ ಕೃಷಿಪ್ರದಾನವಾಗಿತ್ತು. ಇದಕ್ಕೆ ಪೂರಕವಾದ ಉದ್ಯೋಗಗಳು ಅವಶ್ಯವಾಗಿತ್ತು. ಈ ಕೆಲಸಗಳನ್ನು ಮಾಡದ ಬ್ರಾಹ್ಮಣ ಬಡವನಾಗಿಯೇ ಇದ್ದ. ಭಿಕ್ಷಾಟನೆಯೇ ಆತನ ಬದುಕಿನ ದಾರಿಯಾಗಿತ್ತು. ಇದನ್ನು ತಿರುಚಿ ಬ್ರಾಹ್ಮಣರೇ ಎಲ್ಲರನ್ನೂ ಶೋಶಿಸಿದರು ಎಂಬುದಾಗಿ ದೊಡ್ಡಮಟ್ಟದಲ್ಲಿ ಪ್ರಚಾರಮಾಡುವ ಒಂದು ವ್ಯವಸ್ಥಿತ ವ್ಯವಸ್ಥೆ ನಮ್ಮ ಸಮಾಜದಲ್ಲಿ ಇಂದು ಇದೆ. ಇಂದು ಹಿಂದೂ ಧರ್ಮದ ನಾಶಕ್ಕಾಗಿ ಬ್ರಾಹ್ಮಣರನಾಶವನ್ನು ಬಯಸುವ ದೊಡ್ಡ ಷಡ್ಯಂತ್ರವು ನಡೆಯುತ್ತಿದೆ. ಬ್ರಾಹ್ಮಣರು ತಮ್ಮ ವಿದ್ಯೆಯು ರಾಜಾಶ್ರಯವನ್ನು ಕಳೆದುಕೊಂಡಾಗ ಇತರ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬದುಕನ್ನು ರೂಪಿಸಿಕೊಳ್ಳತೊಡಗಿದರು. ಬ್ರಹ್ಮಣರನ್ನು ದೂಶಿಸುವ ಎಷ್ಟುಜನ ಇಂದು ವೇದಾಧ್ಯಯನಮಾಡಲು. ಶಾಸ್ತ್ರ ಪರಂಪರೆಯನ್ನು ಉಳಿಸಲು ಸಿದ್ಧರಿದ್ದಾರೆ ಎಂದು ಪ್ರಶ್ನಿಸಿದರೆ ಯಾರೂ ಮುಂದೆ ಬರುವವರಿಲ್ಲ. ಸಂಸ್ಕೃತ ವಿದ್ಯಾಪೀಠಗಳು ಕಲಿಯುವವರಿಲ್ಲದೆ ಮುಚ್ಚುತ್ತಿವೆ. ಇಂದು ಸರ್ವಸಮುದಾಯವೂ ಶಾಸ್ತ್ರಾಧ್ಯನಕ್ಕೆ ಮುಂದಾಗಿ. ಧರ್ಮ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸಮಾಡಬೇಕಿದೆ. ಇದು ಇಂದಿನ ಅನಿವಾರ್ಯತೆಯಾಗಿದೆ. ಇಂದು ಸಂಸ್ಕೃತ ಶಿಕ್ಷಣವನ್ನು ಸರಕಾರಗಳು ಸರ್ವರಿಗೂ ಮುಕ್ತವಾಗಿಸಿದ್ದರೂ ಸಂಸ್ಕೃತ ವಿದ್ಯಾಲಯಗಳಿಗೆ ಬೇರಾವುದೇ ವೃತ್ತಿಯವರು ಹೆಚ್ಚಾಗಿ ಬಂದು ಕಲಿಯುತ್ತಿಲ್ಲ. ಕೆಲವು ಸಂಪ್ರದಾಯವಾದಿಗಳು ವೇದವನ್ನು ಇತರರಿಗೆ ಕಲಿಸದಿದ್ದರೂ ರಾಮಕೃಷ್ಣ ಮಠದಂತ ಅನೇಕ ಸಂಸ್ಥೆಗಳು ಸರ್ವಸ್ಪರ್ಶಿಯಾಗಿ ವೇದವನ್ನು ಕಲಿಸುತ್ತವೆ. ಸಂಸ್ಕೃತ ಕಲಿಯಿರಿ ಎಂದು ಹೇಳಿದರೆ ಜನ ಸಂಸ್ಕೃತದಿಂದ ಯಾವ ಉದ್ಯೋಗ ಸಿಗುತ್ತದೆ? ಎಂಬುದಾಗಿ ಪ್ರಶ್ನಿಸುತ್ತಾರೆ. ಹಿಂದೆಯೂ ಹೀಗೆಯೇ ಇತ್ತು ಅವರವರ ಆಸಕ್ತಿಗೆ ಯೋಗ್ಯವಾದ ಕ್ಷೇತ್ರವನ್ನು ಅವರವರು ಆಯ್ದುಕೊಂಡು ಮುಂದುವರಿಯುತ್ತಿದ್ದರು. ಅದು ಇಂದೂ ಹಾಗೆಯೇ ನಡೆಯುತ್ತಿದೆ. ಬೇರೆಯವರನ್ನು ದೂರುವುದು ಸುಲಭ ಸ್ವಯಂ ಸಾಧನೆ ಮಾಡುವುದು ಕಷ್ಟ. ಕ್ರಿಶ್ಚಿಯನ್ ಪಾದ್ರಿ ಮೆಕಾಲೆ ಭಾರತವನ್ನು ನಾಶಮಾಡಲು ಏನು ಮಾಡಬೇಕೆಂಬುದನ್ನು ಅಧ್ಯಯನ ಮಾಡಲೆಂದೇ ಭಾರತಕ್ಕೆ ಬಂದನು. ಅವನು ಅಧ್ಯಯನ ಮಾಡಿ ಬ್ರಿಟಿಶ್ ಸರ್ಕಾರಕ್ಕೆ ಹೀಗೆ ವರದಿಯನ್ನು ನೀಡುತ್ತಾನೆ. ಅದರಲ್ಲಿ ಭಾರತವನ್ನು ವಶಪಡಿಸಿಕೊಳ್ಳಲು ಭಾರತದ ಸಂಸ್ಕೃತಿಯನ್ನು ನಾಶಮಾಡಬೇಕೆಂಬುದಾಗಿ ಪ್ರತಿಪಾದಿಸುತ್ತಾನೆ. ಇದಕ್ಕೆ ಮೊದಲು ಗುರುಕುಲಗಳನ್ನು ನಾಶಮಾಡಲು ಸೂಚಿಸುತ್ತಾನೆ. ಬ್ರಾಹ್ಮಣರನ್ನು ದುರ್ಬಲಗೊಳಿಸಬೇಕು. ದೇವಾಲಯಗಳನ್ನು ದುರ್ಬಲಗೊಳಿಸಬೇಕು ಎನ್ನುವುದು ಅವನ ವಿಚಾರ. ಆಗ ಭಾರತದಲ್ಲಿ ಮೂರು ಲಕ್ಷಗುರುಕುಲಗಳು ಉಚಿತವಾಗಿ ಸಂಸ್ಕೃತಮಾಧ್ಯಮದಲ್ಲಿ ವಿದ್ಯಾದಾನ ಮಾಡುತ್ತಿದ್ದವು ಎಂಬುದಾಗಿ ಇತಿಹಾಸ ಹೇಳುತ್ತದೆ. ಗುರುಕುಲ ನಾಶದಿಂದ ಸಂಸ್ಕೃತ ನಾಶವಾಯಿತು. ಸಂಸ್ಕೃತದ ನಾಶದಿಂದ ಸಂಸ್ಕೃತಿ ದುರ್ಬಲವಾಯಿತು. ಹೀಗೆ ನಮ್ಮ ಪ್ರಾಚೀನ ಜ್ಞಾನ ನಷ್ಟವಾಗತೊಡಗಿತು. ಗುರುಕುಲದಲ್ಲಿ ಪಾಠಮಾಡುವ ಅಧ್ಯಾಪಕರುಗಳು ಅಧ್ಯನದಿಂದ ಹಾಗೂ ಅಧ್ಯಾಪನದಿಂದ ವಂಚಿತರಾದರು. ನಮ್ಮ ಜ್ಞಾನಪರಂಪರೆ ಪೋಷಣೆ ಇಲ್ಲದೆ ಸೊರಗತೊಡಗಿತು.  ಸಮಾಜವನ್ನು ಜಾತಿಗಳಲ್ಲಿ ಮೇಲ್ವರ್ಗ-ಕೆಳವರ್ಗ, ಬ್ರಾಹ್ಮಣ-ಶೂದ್ರ, ಆರ್ಯ-ದ್ರಾವಿಡ ಮೊದಲಾದ ವಾದಗಳಲ್ಲಿ ಒಡೆಯಲಾಯಿತು. ಇದೆಲ್ಲಾ ಈ ದೇಶವನ್ನು ದುರ್ಬಲಗೊಳಿಸಲು ಹಿಂದೂ ಧರ್ಮವನ್ನು ನಾಶಮಾಡಲು ವಿದೇಶೀ ದುಷ್ಟ ಶಕ್ತಿಗಳು ಹೆಣೆದ ಜಾಲವಾಗಿತ್ತು. ಮುಂದೆ ಅಲ್ಪಸಂಖ್ಯಾತರ ಪಕ್ಷಪಾತಿ ಕಾಂಗ್ರೇಸ್ ಸರ್ಕಾರ ಈ ನೀತಿಯನ್ನೇ ಮುಂದುವರಿಸಿತು ಭಾರತದ ಸಂಸ್ಕೃತಿಯ ಶಿರೋಭಾಗದಂತೆ ಬ್ರಾಹ್ಮಣ ರಿದ್ದರು. ಯಾವುದೇ ಧನಾರ್ಜನೆ ಇಲ್ಲದೆಯೂ ವೇದಾಧ್ಯಯನ, ಜಪ ತಪ ನಿತ್ಯ ಅನುಷ್ಠಾನಮನೆಗಳಲ್ಲಿ ಮಾಡುತ್ತಾ, ಸಂಬಳವಿಲ್ಲದಿದ್ದರೂ ದೇವಸ್ಥಾನಗಳಲ್ಲಿ ಪೂಜೆಮಾಡುತ್ತಾ. ಸಂಸ್ಕೃತಿಯನ್ನು ಉಳಿಸುವ ಕೆಲಸಮಾಡುತ್ತಿದ್ದರು.  ಇವರನ್ನು ದುರ್ಬಲಗೊಳಿಸುವ ನಾಶಗೊಳಿಸುವ ಪ್ರಯತ್ನ ಎಲ್ಲೆಡೆಯಿಂದ ನಡೆಯಿತು. ಬ್ರಾಹ್ಮಣರು ಕಲಿಸುವ ಶಾಸ್ತ್ರಗಳೆಲ್ಲಾ ಅವೈಜ್ಞಾನಿಕ ಎಂಬುದಾಗಿ ಪ್ರಚಾರಮಾಡಲಾಯಿತು. ಅವರ ಜುಟ್ಟು ಜನಿವಾರಗಳನ್ನು ಮೂದಲಿಸಲಾಯಿತು, ಅವರ ಆಹಾರಪದ್ದತಿಯನ್ನು ಅವಹೇಳನಮಾಡಲಾಯಿತು. ಅವರಲ್ಲಿ ಹೆಚ್ಚಿನವರು ಎಂದೂ ಕೃಷಿಮಾಡುತ್ತಿರಲಿಲ್ಲ ಇವರಿಗೆ ಹಾಗೂ ದೇವಾಲಯಗಳಿಗೆ ದಾನವಾಗಿಬಂದಿದ್ದ ಭೂಮಿಯನ್ನು ಕಾಂಗ್ರೇಸ್ ಸರಕಾರದಿಂದ ಉಳುವವನೇ ಭೂಒಡೆಯ ಎಂಬಕಾನೂನಿನಿಂದ ಕಸಿದುಕೊಳ್ಳಲಾಯಿತು. ಎಲ್ಲಾಕಡೆಯೂ ಸಮಾಜಿಕನ್ಯಾಯಮಾತನಾಡುವವರು. ಮುಜರಾಯಿ ದೇವಾಲಯದ ಅರ್ಚಕರಿಗೂ ಕನಿಷ್ಟವೇತನ ಇರಬೇಕು. ನಿವೃತ್ತಿ ವೇತನ ಇರಬೇಕು ಎಂದು ಎಂದೂ ಚಿಂತಿಸಿಲ್ಲ. ಭಕ್ತರು ತಾವಾಗಿಯೇ ಹಾಕುವ ದಕ್ಷಿಣೆಯನ್ನೂ ಅರ್ಚಕರಿಗೆ ಕೊಡಬಾರದೆಂಬುದಾಗಿ ದೇವಾಲಯಗಳಲ್ಲಿ ಫಲಕಗಳಲ್ಲಿ ಬರೆದು ಹಾಕಿರುತ್ತಾರೆ.  ತಟ್ಟೆಕಾಸು ಎಂಬುದಾಗಿ ಅವಹೇಳನಮಾಡುತ್ತಾರೆ. ಆದರೂ ಇದೆಲ್ಲಾ ಭಗವಂತನ ಲೀಲೆ ಎಂದು ತಮ್ಮಕರ್ತವ್ಯ ತಾವು ಮಾಡುವ ಸಾವಿರಾರು ಸರ್ಚಕರನ್ನು ನಾವು ನೋಡಬಹುದಾಗಿದೆ. ಬ್ರಾಹ್ಮಣರನ್ನು ಎಲ್ಲಾರೀತಿಯ ಸರಕಾರಿ ಸೌಲಭ್ಯಗಳಿಂದ ಹೊರಗಿಟ್ಟಿದ್ದಾರೆ. ಮೂರು ಶೇಕಡಾ ಇರುವ ಬ್ರಾಹ್ಮಣರನ್ನು ನಾಶಮಾಡಿದರೆ ಇನ್ನು 97 ಶೇಕಡಾ ಹಿಂದುಗಳನ್ನು ಜನರನ್ನು ಮತಾಂತರ ಮಾಡುವುದು ಸುಲಭ ಎನ್ನುವುದು ಕ್ರಿಶ್ಚಿಯನ್ ಮಿಶನರಿಗಳ ಚಿಂತನೆಯಾಗಿತ್ತು ಈಗಲೂ ಇದು ನಡೆಯುತ್ತಿದೆ. ಈ ಎಲ್ಲಾ ಪ್ರಯತ್ನಗಳೂ ಷಡ್ಯಂತ್ರದ ಭಾಗವೇ ಆಗಿದೆ.  ಇಂತಹ ಸರಕಾರೀ ಹಾಗೂ ಸಮಾಜದ ದೌರ್ಜನ್ಯದಿಂದಾಗಿ ಬೇಸತ್ತ ಬ್ರಾಹ್ಮಣ ಯುವಜನತೆ ಇಂದು ಸಂಪ್ರದಾಯದಿಂದ ದೂರವಾಗಿ ಜ್ಞಾನರಾಶಿಯ ಕೀಲಿಕೈಯಂತಿರುವ ಸಂಸ್ಕೃತವನ್ನು ಕಲಿಯುವುದನ್ನು ಕೈ ಬಿಡುತ್ತಿದ್ದಾರೆ. ಸರಕಾರಗಳೂ ಸಂಸ್ಕೃತ ಭಾಷೆಯನ್ನು ಹಿಂದಕ್ಕೆ ತಳ್ಳುತ್ತಿದೆ. ದೇವಾಲಯಗಳನ್ನು ಸರ್ಕಾರೀಕರಣ ಗೊಳಿಸಿ ಹಿಂದೂ ಸಂಸ್ಕೃತಿಯ ನಾಶಕ್ಕೆ ಕಾಂಗ್ರೇಸ್ ಮುಂದಾಯಿತು. ಬ್ರಾಹ್ಮಣರನ್ನು ಎಲ್ಲಾ ಕ್ಷೇತ್ರದಿಂದ ಹೊರಗಿಡಲಾಯಿತು. ಹಾಗೂ ಸಮಾಜದ ಸಮಸ್ಯೆಗಳಿಗೆಲ್ಲಾ ಬ್ರಾಹ್ಮಣರೇ ಕಾರಣ ಎಂಬಂತೆ ಸಮಾಜದಲ್ಲಿ ಬಿಂಬಿಸಲಾಯಿತು ಇಂದಿಗೂ ಹೀಗೆಯೇ ಬಿಂಬಿಸಲಾಗುತ್ತಿದೆ. ಆದರೆ 33ಸಾವಿರ ದೇವಾಲಯಗಳನ್ನು ನಾಶಮಾಡಿದ, ಲಕ್ಷಾಂತರ ಹಿಂದುಗಳನ್ನು ಅತ್ಯಾಚಾರಮಾಡಿದ, ಕೊಂದ, ಇಸ್ಲಾಮಿನ ಬರ್ಭರತೆಯ ಬಗ್ಗೆಯಾಗಲೀ, ಭಾರತವನ್ನು ಬಿಕಾರಿಗಳ ದೇಶವಾಗಿಸಿದ, ಲಕ್ಷಾಂತರ ಹಿಂದುಗಳನ್ನು ಅಮಾನುಷವಾಗಿ ಮತಾಂತರ ಮಾಡಿದ, ಹಿಂದೂ ಸಂಸ್ಕೃತಿಯನ್ನು ಅಳಿಸಲು ಪ್ರಯತ್ನಿಸುತ್ತಿರುವ ಕ್ರಿಶ್ಚಿಯನ್ನರ ಬಗ್ಗೆಯಾಗಲೀ ಇವರು ಮಾತನಾಡುವುದಿಲ್ಲ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಭಯೋತ್ಪಾದಕ ಎನ್ನುವ ಇವರು, ಲಕ್ಷಾಂತರ ಹಿಂದುಗಳ ಹತ್ಯೆಗೆ ಕಾರಣವಾದ ದೇಶವಿಭಜನೆಗೆ ಕಾರಣವಾದ ಕಾಂಗ್ರೇಸ್ ಪಕ್ಷ ಹಾಗೂ ಭಾರತದೇಶವನ್ನು ತುಂಡರಿಸುವಲ್ಲಿ ಬ್ರಿಟಿಷರೊಂದಿಗೆ ಸಹಕರಿಸಿದ ಒಪ್ಪಂದಕ್ಕೆ ಸಹಿಹಾಕಿದ ಅಂದಿನ ಕಾಂಗ್ರೇಸಿನ ನೇತಾರರಾದ ಗಾಂಧಿ, ನೆಹರು ಮುಂತಾದವರನ್ನು ಮಹಾತ್ಮರು ದೇಶೋಧ್ಧಾರಕರು ರಾಷ್ಟ್ರಪಿತ ಎನ್ನುತ್ತಾರೆ. ಇಂತಹ ಧರ್ಮದ್ರೋಹಿ ದುಷ್ಟ ಶಕ್ತಿಗಳ ಧರ್ಮ ಹಾಗೂ ಜಾತಿ ಒಡೆಯುವ ದುಷ್ಕೃತ್ಯಗಳಿಂದ ಹಿಂದುಗಳು ಎಚ್ಚರವಾಗಿರಬೇಕು. ಹಿಂದಿನ ಕಾಂಗ್ರೇಸಿನ ಅವಧಿಯಲ್ಲಿ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವನ್ನು ಒಡೆಯುವ ಪ್ರಯತ್ನ ನಡೆಯಿತು. ಇದು ಕಾಂಗ್ರೇಸಿನ ಹಿಂದೂವಿರೋಧಿನೀತಿಗೆ ಇತ್ತೀಚಿನ ಉದಾಹರಣೆಯಾಗಿ ನಮ್ಮ ಕಣ್ಣಮುಂದೆಯೇ ಇದೆ. ಬ್ರಾಹ್ಮಣರು ಇತರಜಾತಿಗಳವರನ್ನು ವಿದ್ಯೆಯಿಂದ ವಂಚಿಸಿದರೆಂಬುದು ಸಮಾಜವನ್ನು ಒಡೆಯುವ ಹಾಗೂ ಬ್ರಾಹ್ಮಣರನ್ನು ದುರ್ಬಲಗೊಳಿಸುವ ದುರ್ಮತಿಗಳ ಷಡ್ಯಂತ್ರದ ಭಾಗವೇ ಆಗಿದೆ. ಕೆಲವು ಸಂಪ್ರದಾಯಸ್ಥ ಬ್ರಾಹ್ಮಣರು ಅಸ್ಪೃಶ್ಯತೆಯ ಆಚರಣೆಯಿಂದ ತಪ್ಪಾಗಿನಡೆದುಕೊಂಡಿದ್ದರೂ ಇತರ ಮತೀಯರಂತೆ ಎಂದೂ ಬೇರೆಯವರ ತಲೆಕಡಿಯುವ ಕೆಲಸವನ್ನು ಮಾಡಿಲ್ಲ. ಮತಾಂತರಿಗಳಂತೆ ಇತರರ ಮನೆಮುರಿಯುವ ಕೆಲಸ ಮಾಡಿಲ್ಲ. ಅಲ್ಲದೆ ಅನೇಕ ಉದಾರ ಮನಸ್ಸಿನವರೂ ದೇಶದಲ್ಲಿ ಬಹಳಷ್ಟು ಜನರಿದ್ದುದು ಸಮಾಜಸುಧಾರಣೆಗೆ ಕಾರಣರಾಗಿದ್ದಾರೆ. ಯಾರೂ ಬಸವಣ್ಣ ಬ್ರಾಹ್ಮಣರಾಗಿದ್ದರು ಸಮಾಜದ ಹಿತಕ್ಕಾಗಿ ಕೆಲಸಮಾಡಿದರು ಎನ್ನುವುದಿಲ್ಲ. ಅಂಬೇಡ್ಕರ್ ಪ್ರತಿಭೆಯನ್ನು ಗುರುತಿಸಿ ಅವರ ಜಾತಿ ಅವರಿಗೆ ಸಮಸ್ಯೆ ಆಗಬಾರದೆಂದು ತನ್ನ ಅಂಬೇಡ್ಕರ್ ಎನ್ನುವ ಹೆಸರನ್ನೇ ಅವರಿಗೆ ನೀಡಿದ್ದು ಒಬ್ಬ ಬ್ರಾಹ್ಮಣ ಎಂದು ಯಾವದಲಿತನೂ ನೆನಪಿಸಿಳ್ಳುವುದಿಲ್ಲ. ವಿಮರ್ಶಿಸುವವರು ಎರಡೂ ವಿಧದಲ್ಲಿಯೂ ನೋಡಬೇಕಿರುತ್ತದೆ.  ಇಂದಿನ ಕಾಲದಲ್ಲಿ ಸಾಮಾಜಿಕ ವ್ಯವಸ್ಥೆ ಹಿಂದನಂತಿಲ್ಲ ಬ್ರಾಹ್ಮಣರೂ ತಮ್ಮ ಮಡಿವಂತಿಕೆಯನ್ನು ಮನೆಗೆ ಸೀಮಿತವಾಗಿಟ್ಟುಕೊಂಡು ದೇಶ ಹಾಗೂ ಧರ್ಮದ ರಕ್ಷಣೆಗಾಗಿ ಸರ್ವಸಾಮಾಜವನ್ನು ಮುನ್ನಡೆಸುವ ಮಾರ್ಗದರ್ಷನ ನೀಡುವ ಕೆಲಸಕ್ಕೆ ಮುಂದಾಗಬೇಕಿದೆ. ತಮ್ಮ ಶಿಷ್ಯಸಮೂಹವನ್ನು ಉದಾರ ಮನಸ್ಸಿನವರನ್ನಾಗಿ ರೂಪಿಸುವ ಅವಶ್ಯಕತೆ ಇಂದು ಹಿಂದೆಂದಿಗಿಂತ ಹೆಚ್ಚಾಗಿದೆ. ಸಮಾಜದಲ್ಲಿ ತಾರ ತಮ್ಯ ಮಾಡುತ್ತಾ ಜಾತಿ ಜಾತಿ ಗಳಲ್ಲಿ ಸಮಾಜವನ್ನು ಒಡೆಯುವ ಕೆಲಸಕ್ಕೆಮುಂದಾಗುವ ಬದಲಾಗಿ ಎಲ್ಲ ಸಮಾಜದವರೂ ಸೇರಿ ಹಿಂದೂ ಸಮಾಜವನ್ನು ಒಂದಾಗಿಸುವ ಕೆಲಸಕ್ಕೆ ನಾವು ಕೈಜೋಡಿಸಬೇಕಿದೆ. ಭಾರತ ಮಾತೆಯನ್ನು ವಿಶ್ವಗುರುವಾಗಿಸಬೇಕಿದೆ.

14. ಧರ್ಮ ಎಂದರೇನು? 

ಭಗವಂತನ ಸೃಷ್ಟಿಯೊಂದಿಗೆ ಹೊಂದಿಕೊಂಡು ಪ್ರಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬದುಕುವುದೇ ಧರ್ಮ. ನಮ್ಮ ಬದುಕಿಗಾಗಿ ಭಗವಂತನಿಗೆ ಕೃತಜ್ಞನಾಗಿರುವುದು ಹಾಗೂ ಅತೀ ಅನಿವಾರ್ಯವಾದಲ್ಲಿ ಸುತ್ತಲಿನ ಸಮಾಜ, ಪ್ರಕೃತಿಗೆ, ಪರಿಸರಕ್ಕೆ ನಮ್ಮಿಂದುಂಟಾಗುವ ಹಾನಿ ಕನಿಷ್ಠವಾಗುವಂತೆ ಎಚ್ಚರಿಕೆವಹಿಸಿ ಬದುಕುವುದೇ ಧರ್ಮ. ನಾವು ಬೇರೊಬ್ಬರೊಂದಿಗೆ ಹೇಗೆ ನಡೆದುಕೊಳ್ಳುತ್ತೇವೆಯೋ ಹಾಗೆಯೇ ಅಂತಹುದೇ ಸನ್ನಿವೇಷದಲ್ಲಿ ಬೇರೆಯವರು ನಮ್ಮೊಂದಿಗೆ ನಡೆದುಕೊಂಡಾಗಲೂ ನಮ್ಮ ಮನಸ್ಸು ಪ್ರಸನ್ನತೆಯಿಂದ ಅದನ್ನು ಸ್ವೀಕರಿಸುವುದಾದಲ್ಲಿ ಅಂತಹ ಆಚರಣೆಯನ್ನು ಧರ್ಮ ಎನ್ನಬಹುದು.

15. ಜಗತ್ತಿನಲ್ಲಿ ಎಷ್ಟು ಧರ್ಮ ಇರಲು ಸಾಧ್ಯ? ಧರ್ಮವನ್ನು ನಿರ್ಧರಿಸುವುದು ಹೇಗೆ?

ಜಗತ್ತಿನಲ್ಲಿ ಒಂದೇ ಧರ್ಮ ಇರಲು ಸಾಧ್ಯ. ಧರ್ಮ ಶಾಶ್ವತವಾದದ್ದು ಮತ್ತು ಸಾರ್ವಕಾಲಿಕವಾದದ್ದು. ಧರ್ಮವು ದೇಶ, ಕಾಲ, ಕಾರಣ ಗಳಿಂದ ನಿರ್ಧರಿಸಲ್ಪಡುವುದು. ಧರ್ಮದ ಉದ್ದೇಶ ಎಲ್ಲೆಡೆ ಅಹಿಂಸೆ ಹಾಗೂ ಶಾಂತಿನೆಲೆಸುವಂತೆ ನೋಡಿಕೊಳ್ಳುವುದು. ಸಜ್ಜನರ ರಕ್ಷಣೆ ದುರ್ಜನರ ನಾಶ ಇದು ಧರ್ಮದ ಕೆಲಸ.

ಪೂಜೆ ಪ್ರಾರ್ಥನೆ ಮಾಡುವುದು ಸಂಸ್ಕೃತಿಯಾಗಿದ್ದು ಇದು ಧರ್ಮದ ಒಂದು ಅಂಗವಾಗಿದೆ. ಕೇವಲ ಪೂಜಾದಿಕಾರ್ಯಗಳನ್ನು ಮಾತ್ರವೇ ಮಾಡುವುದು ಧರ್ಮ ಅಲ್ಲ. ಧರ್ಮದ ರಕ್ಷಣೆ ಮಾಡುವವರಿಗೆ ಎಲ್ಲಾರೀತಿಯ ಸಹಕಾರ ನೀಡುವುದು ಹಾಗೂ ಕೃತಜ್ಞತೆ ಸಲ್ಲಿಸುವುದೇ ಪೂಜೆ.

16. ಜಗತ್ತಿನಲ್ಲಿ ಹಲವು ಧರ್ಮ ಇದೆ ಎಂಬುದಾಗಿ ಹೇಳಲಾಗುತ್ತಿದೆ. ಇದು ಸತ್ಯವೇ ಅಥವಾ ಸಾಧ್ಯವೇ?

ಮೊದಲೇ ಹೇಳಿದಂತೆ ಜಗತ್ತಿನಲ್ಲಿ ಹಲವು ಧರ್ಮವಿರಲು ಸಾಧ್ಯವಿಲ್ಲ. ಶ್ರೇಷ್ಠವಾದ ಬದುಕುವ ವಿಧಾನವೇ ಧರ್ಮವಾಗಿದೆ. ಇದು ಹಲವಿರುವುದು ಸಾಧ್ಯವಿಲ್ಲ. ವ್ಯಕ್ತಿ ಧರ್ಮದಲ್ಲಿ ಬದುಕಿದ್ದಾನೋ ಇಲ್ಲವೋ ಎನ್ನುವುದನ್ನು ವ್ಯಕ್ತಿಯ ಬದುಕೇ ಹೇಳುತ್ತದೆ. ಅವನ ತೋರಿಕೆಯ ಆಚರಣೆಗಳಲ್ಲ. ಧರ್ಮದಿಂದ ಬದುಕಲು ಹಲವು ಮಾರ್ಗಗಳಿವೆ. ಹಲವು ಮಾರ್ಗಗಳನ್ನೇ ಹಲವು ಧರ್ಮಗಳು ಎನ್ನುವುದು ಉಚಿತವಲ್ಲ. ಮನುಷ್ಯ ಹಲವು ಬಟ್ಟೆ ತೊಡಬಹುದು, ತನ್ನ ವೇಷ ಬದಲಿಸಬಹುದು ಆದರೆ ಆತನ ವೇಷಬದಲಾದಕೂಡಲೇ ವ್ಯಕ್ತಿಬದಲಾಗುವುದಿಲ್ಲ. ಇಂತಹ ವಿವಿಧ ವೇಷಗಳನ್ನೇ ನಾವು ವಿವಿಧ ಮತಗಳು ಎನ್ನಬಹುದು.  ಅಥವಾ ಸಂಸ್ಕೃತಿ ಎನ್ನಬಹುದು. ಒಂದೊಂದು ಮತಗಳಲ್ಲಿಯೂ ಒಂದೊಂದು ಸಂಸ್ಕೃತಿ ಬೆಳೆದು ಬಂದಿದೆ. ಸಂಸ್ಕೃತಿಯನ್ನು ಸದ್ಗತಿಯ ಗುರಿಸೇರಲು ಇರುವ ಮಾರ್ಗ ಎನ್ನಬಹುದು. ಸಂಸ್ಕೃತಿ ದಾರಿಯೇ ಹೊರತು ಗುರಿಯಲ್ಲ. ವಿಭಿನ್ನ ಮತಗಳ ಜನರಲ್ಲಿ ಯಾವದಾರಿ ಹಿಡಿದವರು ಎಲ್ಲಿಗೆ ತಲುಪುತ್ತಿದ್ದಾರೆ ಎನ್ನುವುದನ್ನು ವಿಮರ್ಷೆಗೆ ಒಳಪಡಿಸಿದಾಗ ಯಾವ ಮತದ ದಾರಿ ಸರಿ ಎನ್ನುವುದು ನಮ್ಮ ಅರಿವಿಗೆ ಬರುತ್ತದೆ. ಒಂದು ಮತದ ಸಂಸ್ಕೃತಿಯಲ್ಲಿ ಆಳವಾಗಿ ಮತಗ್ರಂಥವನ್ನು ಅಪ್ಪಿಕೊಂಡವನು ಉಗ್ರಗಾಮಿಯಾಗಿ ಹೊರ ಬರುತ್ತಾನೆ. ಇನ್ನೊಂದು ಮತದಲ್ಲಿ ಸಹಜ ಸಂಸ್ಕೃತಿಯೇ ಮದ್ಯಪಾನ ವಾಗಿದೆ ಇದರಿಂದ ಭೋಗ ಅಲ್ಲಿಂದ ವ್ಯಭಿಚಾರ ಸಹಜ ಬದುಕಾಗುವುದು. ಆಮಿಶ ಹಾಗೂ ವಂಚನೆಯ ಮತಾಂತರ ಇವರ ಜೀವನ ಪದ್ದತಿಯಾಗಿರುವುದು. ಇವೆಲ್ಲವೂ ಅಧರ್ಮದ ಹಾಗೂ ಧರ್ಮವಿರೋಧೀ ಕೆಲಸಗಳು ಇಂತಹ ಮತಗಳಿಗೆ “ಧರ್ಮ “ಎನ್ನುವುದುಕೂಡಾ ಧರ್ಮಕ್ಕೆ ಮಾಡುವ ಅಪಚಾರವಾಗಿದೆ.  ಧರ್ಮದ್ರೋಹವೇ ಆಗಿದೆ. ಹಿಂದೂ ಸಂಸ್ಕೃತಿಯಲ್ಲಿ ಮಾತ್ರ ಧರ್ಮದಕಡೆಗೆ ಅತಿಯಾಗಿ ಸೆಳೆಯಲ್ಲಪಟ್ಟವನು ಯೋಗಿಯೂ, ತ್ಯಾಗಿಯೂ, ಮಹಾತ್ಮನೂ, ಸನ್ಯಾಸಿಯೂ ಆಗಿ ಹೊರ ಬರುತ್ತಾನೆ. ಸಾವಿರಾರು ಆಧ್ಯಾತ್ಮಿಕ ಸಾಧಕರು, ಜ್ಞಾನಿಗಳು ಸೃಷ್ಟಿಯಾದ ನೆಲ ಬಾರತವಾಗಿದೆ ಹಾಗೂ ಧರ್ಮ ಸನಾತನ ಹಿಂದೂ ಧರ್ಮವೇ ಆಗಿದೆ. ನಮ್ಮದೇ ನೆಲವಾಗಿದ್ದ ಅಫಗಾನಿಸ್ಥಾನ, ಪಾಕಿಸ್ಥಾನ, ಬಾಂಗ್ಲಾಗಳು ಇಂದು ದುರ್ಮತದ ನೆರಳಿನಲ್ಲಿ ನರಳುತ್ತಿರುವುದು ನಮ್ಮೆದುರಿನ ಜ್ವಲಂತ ಉದಾಹರಣೆಯಾಗಿದೆ.  ಇದನ್ನು ವಿಮರ್ಷಿಸಿ ಪ್ರಜ್ಞಾವಂತರು ಶ್ರೇಷ್ಠದಾರಿಯನ್ನು ಆಯ್ಕೆಮಾಡಿಕೊಂಡು ನಡೆಯುತ್ತಾರೆ. ವಿವೇಕಿಗಳು ಇಂತಹ ಸಜ್ಜನರನ್ನು ಅನುಸರಿಸುತ್ತಾರೆ. ಮೂರ್ಖರು ಅಜ್ಞಾನದಿಂದ ಕರೆದವರ ಹಿಂದೆ ಹೋಗಿ ಮತಾಂತರವಾಗಿ ಧರ್ಮಭ್ರಷ್ಠರಾಗಿ ತಮ್ಮ ಬದುಕನ್ನು ನಾಶಮಾಡಿಕೊಳ್ಳುತ್ತಾರೆ. ಗ್ರಹಣ ಕಾಲದಲ್ಲಿ ಊಟಮಾಡುತ್ತೇನೆ, ಮಾಂಸತಿಂದು ದೇವಾಲಕ್ಕೆ ಹೋಗುತ್ತೇನೆ, ಗೋವನ್ನು ತಿನ್ನುವುದು ನನ್ನ ಆಹಾರದ ಹಕ್ಕು ಹೀಗೆನ್ನುವವರು ರಾಕ್ಷಸರೂ, ಧರ್ಮದ್ರೋಹಿಗಳೂ ಆಗಿರುತ್ತಾರೆ. ಇವರು ಸಂಸ್ಕೃತಿ ವಿರೋಧಿಗಳಾಗುತ್ತಾರೆ. ಎಲ್ಲರ ಗುರಿಯೂ ಒಂದೇ ಆಗಿದ್ದರೂ ಎಲ್ಲರದಾರಿಯೂ ಒಂದೇ ಗುರಿಯನ್ನು ತಲುಪತ್ತವೆಂಬ ಖಚಿತತೆ ಇರುವುದಿಲ್ಲ. ಹೀಗೆ ನಮ್ಮ ದಾರಿಯಲ್ಲಿ ಅನುಮಾನಬಂದರೆ ವಿಮರ್ಷೆಗೆ ಜಿಜ್ಞಾಸೆಗೆ ತರ್ಕಕ್ಕೆ ಮುಕ್ತವಾಗಿರಬೇಕು ಮುಕ್ತವಾಗಿ ಪ್ರಶ್ನಿಸುವ ಅಧಿಕಾರ ಇರಬೇಕು, ಬದಲಿಸಲಾರದ ಕಟ್ಟುಪಾಡುಗಳು ಸತ್ಯದ ಅರಿವನ್ನು ಮೂಡಿಸಲಾರವು. ಧರ್ಮಾಚರಣೆಯನ್ನು ಅಂತರಂಗ ಒಪ್ಪಬೇಕು, ಸಮಾಜದ ಹೆದರಿಕೆಯಿಂದ ಆಚರಿಸುವಂತಿರಬಾರದು.  ಹೀಗೆ ವಿಮರ್ಷೆಗೆ ಅವಕಾಶವಿರುವ ಸಂಸ್ಕೃತಿಯೇ ಜಗತ್ತಿನ ಶ್ರೇಷ್ಠ ಸಂಸ್ಕೃತಿ ಅದು ಭಾರತೀಯ ಹೆಮ್ಮೆಯ ಸನಾತನ ಸಂಸ್ಕೃತಿ. ಇಲ್ಲಿ ಯಾರಿಗೂ ವತ್ತಾಯದ ಕಟ್ಟುಪಾಡುಗಳಿಲ್ಲ. ವ್ಯಕ್ತಿಗೆ ಆಚರಣೆಗೆ ಆಯ್ಕೆಯ ಸ್ವಾತಂತ್ರವಿದೆ ಆದುದರಿಂದಲೇ ಇಲ್ಲಿ ಸಾಂಸ್ಕೃತಿಕ ವೈವಿಧ್ಯತೆ ಇದೆ.

ಭಗವದ್ಗೀತೆಯನ್ನು ಬೋಧಿಸಿದ ಕೃಷ್ಣನು ಕೊನೆಗೆ ಅರ್ಜುನನಿಗೆ ಒಂದುಮಾತನ್ನು ಹೇಳುತ್ತಾನೆ.

ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ|

ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು||18-63||

 ಈ ಶ್ಲೋಕದ ಅರ್ಥ ಈ ರೀತಿಯಾಗಿದೆ.

ಹೀಗೆ ನಿನಗೆ ಅತ್ಯಂತ ರಹಸ್ಯಮಯವಾದ ಜ್ಞಾನವನ್ನು ಬೋಧಿಸಿದ್ದೇನೆ ಇದನ್ನು ವಿಮರ್ಷೆಮಾಡಿ ನಿನ್ನ ಮನಸ್ಸು ಇಚ್ಚಿಸಿದಂತೆ ಮಾಡು. ಎಂಬುದಾಗಿ ಅಂದರೆ ಭಾರತೀಯತೆಯಲ್ಲಿ ಯಾವುದನ್ನೂ ಹೇರಲಾಗುವುದಿಲ್ಲ. ಆತನ ಆತ್ಮ ಒಪ್ಪಿ ಅದನ್ನು ಆತ ಅನುಸರಿಸಬೇಕು. ಯಾರೋ ಧರ್ಮ ಸ್ಥಾಪಕ ಹೇಳಿದ್ದರಿಂದ ಮಾಡಬೇಕು ಇಲ್ಲವಾದರೆ ತಲೆ ಕಡಿತುತ್ತೇನೆ ಎನ್ನುವುದು ಮೂರ್ಖರ ಮತಗಳಲ್ಲಿ ಮಾತ್ರ ನೋಡಲು ಸಿಗುವುದು. ಇಂತಹ ಮತಗಳಲ್ಲಿ ಹೆದರಿಕೆಯೇ ಬಂಡವಾಳವಾಗಿದೆ. ಇಂತಹ ಮತಾನುಯಾಯಿಗಳು ನಿತ್ಯಾಚರಣೆಯನ್ನು ಜ್ಞಾನಕ್ಕಿಂತಮಿಗಿಲಾಗಿ ಮೌಢ್ಯದಿಂದ ಹಾಗೂ ಜೀವದ ಭಯದಿಮದ ಆಚರಿಸುತ್ತಾರೆ.  ಹಿಂದೂಗಳು ಅಂತರಂಗದಿಂದ ಒಪ್ಪಿದರೆ ಮಾತ್ರ ಅನುಸರಿಸುತ್ತಾರೆ. ಧರ್ಮದ ಅಥವಾ ದೇವರ ಭಯದಿಂದ ಅಲ್ಲ. ಇದು ಹಿಂದೂ ಸಂಸ್ಕೃತಿಯ ಸೌಂದರ್ಯವಾಗಿದೆ.

ಭಾರತದೇಶವು ಒಂದು ಸಹಜ ಹೂದೋಟದಂತಿದೆ, ಬೇರಾವ ದೇಶದ ಸಂಸ್ಕೃತಿಯಲ್ಲಿಯೂ ಇದು ಕಂಡುಬರುವುದಿಲ್ಲ. ಇತರ ಮತಗಳು ನೆಟ್ಟುಬೆಳೆಸಿದ ಒಂದೇ ಜಾತಿಯ ಮರಗಳ ತೋಟದಂತೆ ಏಕತಾನತೆಯಿಂದ ಬಸವಳಿದಿವೆ. ದೂರದಿಂದ ನೋಡಲು ವಿದೆಶೀ ಆಕ್ರಮಣಕಾರೀ ಮತಗಳು ಒಮ್ಮೆಗೆ ಸುಂದರವಾಗಿ ಅಚ್ಚುಕಟ್ಟಾಗಿ, ಸರಳವಾಗಿ, ಕಾಣಬಹುದು ಆದರೆ ದೀರ್ಘಾವಧಿಯಲ್ಲಿ ಇವು ವೈವಿಧ್ಯತೆ ಇಲ್ಲದೆ ಏಕತಾನತೆಯಿಂದ ಬಳಲುತ್ತಾ ಶಿಥಿಲವಾಗುವುವು, ದಯರ್ಬಲವಾಗುವವು ಹಾಗೂ ನಾಶ ಹೊಂದುವುದು. ಇಲ್ಲಿನ ಅನುಯಾಯಿಗಳು ಅಚ್ಚಿನಲ್ಲಿ ಎರಕ ಹೊಯ್ಯುವ ಗೊಂಬೆಗಳಂತೆ ಇವರ ಮತಾನುಯಾಯಿಗಳು ಸಿದ್ಧರಾಗುತ್ತಾರೆ. ಒಂದು ಅಚ್ಚಿನಲ್ಲಿ ಉಗ್ರಗಾಮಿಗಳ ಎರಕ ಹೊಯ್ಯಲಾಗುತ್ತಿದೆ. ಇನ್ನೊಂದು ಅಚ್ಚಿನಲ್ಲಿ ಮತಾಂತರ ಮಾಡುವ ಹೆಂಡಕುಡುಕ ವ್ಯಭಿಚಾರಿಗಳನ್ನು ಸೃಷ್ಟಿಸಲಾಗುತ್ತಿದೆ. ಈ ಎರಡು ಒಸ್ತುಗಳು (ಪ್ರೋಡಕ್ಟ್) ಇಂದು ವಿಶ್ವಾದ್ಯಂತ ಬಹು ಜೋರಾಗಿ ಮಾರಾಟವಾಗುತ್ತಿವೆ. ಇದರಗುಣಮಟ್ಟದ, ಹಾಗೂ ದುಷ್ಪರಿಣಾಮದ ಅರಿವು ಜನರಿಗೆ ಆದಾಗ ಈ ದುರ್ಮತಗಳು ಅವಸಾನದ ಹಾದಿಯನ್ನು ಹಿಡಿಯುತ್ತವೆ. ಆಗ ಹಿಂದೂ ಸಂಸ್ಕೃತಿಯು ಪುನಃ ವಿಶ್ವವನ್ನು ವ್ಯಾಪಿಸುತ್ತದೆ. ಭಾರತವು ಪುನಃ ವಿಶ್ವಗುರುವಾಗುತ್ತದೆ.  ಪರಿವರ್ತನೆ ಜಗದ ನಿಯಮ. ಇದು ಸಹಜವಾಗಿರಬೇಕು. ಬಲಾತ್ಕಾರದ ಪರಿವರ್ತನೆಯನ್ನು ಪ್ರಕೃತಿ ಸಹಿಸುವುದಿಲ್ಲ. ಅಧರ್ಮವನ್ನು ಅಪ್ಪಿಕೊಂಡ ಪಾಕಿಸ್ಥಾನ ಇಂದುಭಿಕ್ಷೆಬೇಡುತ್ತಿದೆ. ಅಫಗಾನಿಸ್ತಾನದಲ್ಲಿ ಜೀವಕ್ಕೆ ಬೆಲೆಇಲ್ಲದಂತಾಗಿದೆ. ಇದನ್ನು ಜಗತ್ತಿನಾದ್ಯಂತ ನಾವಿಂದು ನೋಡುತ್ತಿದ್ದೇವೆ. ಮತಾಂತರಿಗಳು ಜಿಹಾದಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು. ಮುಂದೊಂದು ದಿನ ಸರಳ ಸಾತ್ವಿಕ ಹಿಂದೂ ಧರ್ಮ ವಿಶ್ವವನ್ನು ವ್ಯಾಪಿಸಲಿದೆ. ಅದರ ರಾಯಭಾರಿಗಳು ನಾವೇ ಆಗೋಣ.

17. ಸಂಸ್ಕೃತಿ ಎಂದರೇನು?

ಧರ್ಮದಿಂದ ಬದುಕಲು ಸಹಾಯವಾಗುವಂತೆ, ಬದುಕಿಗೆ ಪ್ರೇರಣೆ ನೀಡುವಂತೆ ರೂಪಿಸಲಾದ ತಲೆ ತಲೆಮಾರುಗಳಿಂದ ನಡೆದುಕೊಂಡು ಬಂದ ವಿಧಿವಿಧಾನಗಳ ಆಚರಣೆಗಳೇ ಸಂಸ್ಕೃತಿಯಾಗಿದೆ. ಸಂಸ್ಕೃತಿಯು ದೀರ್ಘಕಾಲದಿಂದ ಜನರು ಅನಸರಿಸಿಕೊಂಡು, ಆಚರಿಸಿಕೊಂಡು ಬಂದ ಸಾಮಾಜಿಕ ಪದ್ದತಿ ಎನ್ನಬಹುದು.

18. ಜಗತ್ತಿನ ಅತ್ಯಂತ ಶ್ರೇಷ್ಠ ಸಂಸ್ಕೃತಿಯಾವುದು? ಮತ್ತು ಜಗತ್ತಿಗೆ ಇದನ್ನು ನೀಡಿದವರು ಯಾರು?

ಜಗತ್ತಿನ ಅತ್ಯಂತ ಶ್ರೇಷ್ಠ ಸಂಸ್ಕೃತಿ ಭಾರತೀಯ ಸನಾತನ ಹಿಂದೂ ಸಂಸ್ಕೃತಿ. ಇದನ್ನು ಜಗತ್ತಿಗೆ ನೀಡಿದವರು ಭಾರತೀಯರು. ಹಿಂದುಗಳು. ನಮ್ಮ ಹಿರಿಯರಾದ ಋಷಿಮುನಿಗಳು, ಕವಿಗಳು, ನಾಟಕಕಾರರು, ಹಾಗೂ ಶ್ರೇಷ್ಠ ಗ್ರಂಥರಚನಾಕಾರರು. ಮುಖ್ಯವಾಗಿ ನಾಲ್ಕುವೇದಗಳು, ಉಪನಿಶತ್ತುಗಳು, ರಾಮಾಯಣ ಮಹಾಭಾರತ ಕಾವ್ಯಗಳು ಹಾಗೂ ಹದಿನೆಂಟು ಪುರಾಣಗಳು ನಮ್ಮ ಸಂಸ್ಕೃತಿಯ ಮೂಲ ಪ್ರೇರಕಗಳಾಗಿವೆ.

19. ಹಿಂದೂ ಸಂಸ್ಕೃತಿಯ ವಿಶೇಷತೆ ಏನು?

ಹಿಂದೂ ಸಂಸ್ಕೃತಿಯು ಜಗತ್ತಿನ ಅತೀ ಪ್ರಾಚೀನ ಸಂಸ್ಕೃತಿ, ಇದು ಲಕ್ಷಾಂತರ ವರುಷಗಳಿಂದ ನಡೆದುಕೊಂಡುಬಂದಿದೆ. ಈ ಸಂಸ್ಕೃತಿ ಋಷಿ ಸಂಸ್ಕೃತಿ. ಆರ್ಯಸಂಸ್ಕೃತಿ, ವೇದ ಸಂಸ್ಕೃತಿ. ವೈದಿಕ ಸಂಸ್ಕೃತಿ ಈ ಸಂಸ್ಕೃತಿಯು ತನ್ನ ಮೂಲಗುಣವನ್ನು ಉಳಿಸಿಕೊಂಡು ಕಾಲಕ್ಕೆತಕ್ಕಂತೆ ಬದಲಾವಣೆಗೊಳ್ಳುತ್ತಾ ಸಮಯಕ್ಕೆ ಸನ್ನಿವೇಶಕ್ಕೆ ಹೊಂದಿಕೊಳ್ಳುತ್ತಾ ಶ್ರೀಮಂತವಾಗುತ್ತಾ ಬೆಳೆದು ಬಂದಿದೆ.

ಹಿಂದುಗಳು ಪ್ರಕೃತಿ ಪೂಜಕರು ಅಥವಾ ಆರಾಧಕರು. ಸರ್ವಜೀವಿಗಳಲ್ಲಿಯೂ ದೇವರಿದ್ದಾನೆ ಎನ್ನುವ ವಿಶಾಲವಾದ ಮನಸ್ಥಿತಿಯವರು. ಪುನರ್ಜನ್ಮವನ್ನು ನಂಬುವವರು. ಪಾಪ-ಪುಣ್ಯ ಹಾಗೂ ಸ್ವರ್ಗ-ನರಕ ಗಳ ಕಲ್ಪನೆ ಕೊಟ್ಟವರು. ಮೋಕ್ಷವು ಹಿಂದುಗಳ ಬದುಕಿನ ಅಂತಿಮ ಗುರಿಯಾಗಿರುವುದು. ಧರ್ಮ ಅರ್ಥ ಕಾಮ ಈ ಮೂರು ತಳಪಾಯದ ಮೇಲೆ ಮೋಕ್ಷ ನಿಂತಿದೆ. ಭ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಇವು ಜೀವನದ ನಾಲ್ಕು ಘಟ್ಟಗಳು, ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಇವು ಸಮಾಜದ ನಾಲ್ಕು ಸ್ಥರಗಳು ಇದು ಜನರ ನಾಲ್ಕು ವಿಧದ ಸ್ವಭಾವಗಳ ವಿಂಗಡಣೆಯಾಗಿದೆ. ಒಬ್ಬನೇ ಪರಮಾತ್ಮನನ್ನು ವಿವಿಧ ಹೆಸರುಗಳಿಂದ, ರೂಪಗಳಿಂದ ಹಾಗೂ ಪದ್ದತಿಗಳಿಂದ ಪೂಜಿಸುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಉತ್ತಮ ಬದುಕಿನಿಂದ ಸಮಾಜಕ್ಕೆ ದಾರಿತೋರಿದ ಹಾಗೂ ಪ್ರೇರಣೆಯಾಗುವ ಮಹಾನ್ ವ್ಯಕ್ತಿಗಳನ್ನು ದೇವರ ಅವತಾರವೆಂದು ಪರಿಗಣಿಸುತ್ತೇವೆ.

ತಾಳ್ಮೆಯು ಹಿಂದೂಗಳ ಮಹತ್ತರವಾದ ಅಸ್ತ್ರವಾಗಿದೆ. ಇದರಿಂದಾಗಿಯೇ ಎಷ್ಟೇ ಕಷ್ಟ ಕಾರ್ಪಣ್ಯಗಳು ಬಂದರೂ ನಮ್ಮ ಸಂಸ್ಕೃತಿ ಜೀವಂತವಾಗಿ ಉಳಿದುಕೊಂಡಿದೆ. ಹಿಂದುಗಳು ಕಷ್ಟ ಬಂದಾಗ ಹತಾಶರಾಗದೆ ದೈವೇಚ್ಚೆ ಎಂದು ನಗುನಗುತ್ತಲೇ ಎಲ್ಲವನ್ನೂ ಸ್ವೀಕರಿಸುವ ಗುಣವನ್ನು  ಹೊಂದಿದ್ದಾರೆ. ಈ ನೆಲದಲ್ಲಿ ಕಾಲದ ಅವಶ್ಯಕತೆಗೆ ತಕ್ಕಂತೆ ನಿರಂತರವಾಗಿ ಮಹಾಪುರುಷರು ಜನ್ಮವೆತ್ತುತ್ತಿದ್ದಾರೆ. ಅವರು ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಜೀವನದ ಯಶಸ್ಸು ತಾಳ್ಮೆಯೊಂದಿಗೆ ಬೆಸೆದಿದೆ. ತಾಳಿದವನು ಬಾಳಿಯಾನು ಎನ್ನುವ ಗಾದೆ ಮಾತಿದೆ. ಇದನ್ನೇ ನಮ್ಮ ಮಹಾತ್ಮರ ಜೀವನ ಚರಿತ್ರೆಯಲ್ಲಿ ಮಾದರಿಯಾಗಿ ವಿವರಿಸಲಾಗಿದೆ. ರಾಮಾಯಣ, ಮಹಾಭಾರತ, ಸತ್ಯ ಹರಿಶ್ಚಂದ್ರನ ಕಥೆ ಇವೆಲ್ಲವೂ ಹೇಗೆ ಕಷ್ಟಗಳನ್ನು ಎದುರಿಸಿ ಮನಷ್ಯ ಬದುಕಬೇಕೆಂಬುದನ್ನು ಕಲಿಸುತ್ತವೆ.  ಇಂದಿನ ದಿನಗಳಲ್ಲಿ ಸಂಸ್ಕೃತಿಯ ವಿಕೃತಿ ಹಾಗೂ ಧಾರ್ಮಿಕ ಅಜ್ಞಾನದಿಂದ ಹತಾಶ ಪರಿಸ್ಥಿತಿಯನ್ನು ಹೊಂದಿ ಕಷ್ಟಗಳನ್ನು ಎದುರಿಸುವ ಧೈರ್ಯವಿಲ್ಲದೆ ದುರ್ಬಲ ಮನಸ್ಸಿನ ಜನರಿಂದ ಸಮಾಜದಲ್ಲಿ ಆತ್ಮಹತ್ಯೆಗಳು, ವಿವಾಹ ವಿಚ್ಚೇದನಗಳು ಹೆಚ್ಚುತ್ತಿವೆ. ಇದು ಪಾಶ್ಚಾತ್ಯ ದುರ್ಮತಗಳ ವಿಕೃತಿಯ ಪರಿಣಾಮವಾಗಿದೆ.  ಕೇವಲ ಸುಖ ಮೋಜುಗಳನ್ನಷ್ಟೇ ವೈಭವೀಕರಿಸುವ ಮಾಧ್ಯಮಗಳು. ಧಾರವಾಹಿಗಳು. ಚಲನಚಿತ್ರಗಳು ಜನರಲ್ಲಿ ಭ್ರಮಾಲೋಕವನ್ನು ನಿರ್ಮಿಸಿವೆ. ಕಷ್ಟಗಳನ್ನು ಎದುರಿಸಿ ಬದುಕುವ ನಮ್ಮ ಇತಿಹಾಸಗಳು, ಪುರಾಣಗಳು. ಮಹಾಭಾರತ, ರಾಮಾಯಣ ಕಥೆಗಳು ಸಮಾಜದಲ್ಲಿ ಗೌಣವಾಗಿವೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದ್ದುದರಿಂದ ಅನೇಕ ಕಲೆ ಸಂಸ್ಕೃತಿ ಬೆಳೆಯಲು ನೆರವಾಗಿದೆ. ಹೀಂದೂಸ್ಥಾನದಲ್ಲಿ ಕಾಲಕಾಲಕ್ಕೆ ತಕ್ಕಂತೆ ಸಮಾಜ ಸುಧಾರಕರು ಜನ್ಮತಾಳಿ ಜನರನ್ನು ಸರಿಯಾದ ದಾರಿಯಲ್ಲಿ ನಡೆಸುತ್ತಾ ಸಾಗಿದ್ದಾರೆ.  ಒಬ್ಬ ಸಮಾಜ ಸುಧಾರಕನ ನಂತರದ ಹಲವು ಕಾಲದಲ್ಲಿ ಸಮಾಜ ಅಡ್ಡದಾರಿ ತುಳಿಯಲು ಆರಂಭಿಸಿದಾಗ ಇನ್ನೊಬ್ಬ ಮಹಾಪುರುಷನ ಜನ್ಮವಾಗುತ್ತದೆ. ಇದು ಈ ನೆಲದ ವಿಶೇಷ. ಇದುವೇ ಸನಾತನ ಸಂಸ್ಕೃತಿಯ ಬಲ ಹಾಗೂ ಕೊಡುಗೆ. ಇತರ ವಿದೇಶಿ ಮತಗಳಲ್ಲಿ ಮತಾಂಧ ರಾಕ್ಷಸರಷ್ಷೇ ಜನ್ಮ ತಾಳಲು ಸಾಧ್ಯ ಹಾಗೂ ಅಂತಹವರು ಸಮಾಜದ ಶಾಂತಿಯನ್ನು ನಾಶಮಾಡುವವರಾಗಿದ್ದಾರೆ. ಸಾವಿರಾರು ವರುಷಗಳ ಹಿಂದಿನ ಯಾವುದೋ ಒಂದು ಗ್ರಂಥವನ್ನು ಇಂದಿಗೂ ವಿಮರ್ಷೆಗೆ ಒಡ್ಡದೆ ಕಣ್ಣುಮುಚ್ಚಿ ಅನುಸರಿಸುವ ಒಂದು ಮೂರ್ಖ ಹಾಗೂ ಮತಾಂಧ ಪರಂಪರೆ ಅನ್ಯಮತಗಳಲ್ಲಿ ನಡೆದುಕೊಂಡು ಬಂದಿದೆ. ಇವರು ಸಮಾಜದ ನಾಶಕ್ಕೆ ಮುಂದಾಗಿದ್ದಾರೆ. ಹಿಂದುಸ್ಥಾನದಲ್ಲಿ ಜ್ಞಾನಿಗಳು ಸಾವಿರಾರುಜನ ಜನಿಸಿ ಹೋಗಿದ್ದಾರೆ. ಅವರೆಲ್ಲರೂ ಆಯಾಕಾಲಕ್ಕೆ ತಕ್ಕಂತೆ ನೀತಿ ಬೋಧೆಗಳನ್ನು ಆಚಾರ ವಿಚಾರಗಳನ್ನು ಪ್ರಜಾಕ್ಷೇಮಕ್ಕಾಗಿ ನೀಡಿದ್ದಾರೆ. ಇವೆಲ್ಲವೂ ಅಂದಿನ ಕಾಲಘಟ್ಟಕ್ಕೆ ಉಚಿತವಾಗಿರುವವೇ ಆಗಿವೆ. ಬದಲಾವಣೆಯೇ ಜಗದನಿಯಮ ಇಂದಿನ ಕಾಲಘಟ್ಟಕ್ಕೆ ನಾವು ಅಗತ್ಯವಾದ ರೀತಿಯಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಅಗತ್ಯ ವಿದೆ. ಬದಲಾವಣೆಯನ್ನು ಒಪ್ಪುವ ಗುಣ ಹಾಗೂ ಸ್ವಾತಂತ್ರ್ಯ ಹಿಂದೂ ಧರ್ಮದಲ್ಲಿ ಮಾತ್ರ ಇದೆ. ಆದರೆ ವೇದ ಸಂದೇಶಗಳು ಕಾಲಾತೀತವಾಗಿವೆ. ಇಂದು ಜನರಿಗೆ ವೇದಗಳ ಜ್ಞಾನದ ಕೊರತೆ ಇದೆ. ಇದು ನೀಗಬೇಕಿದೆ. ಹಿಂದೂ ಸಂಸ್ಕೃತಿಯು ತ್ಯಾಗದ ಬದುಕಿನ ಸಂಸ್ಕೃತಿ ಅದು ಭೋಗದ ಸಂಸ್ಕೃತಿ ಅಲ್ಲ. ಹಿಂದುಗಳು ಕರ್ಮಸಿದ್ದಾಂತವನ್ನು ನಂಬುವವರು. ಇಡೀ ವಿಶ್ವಕ್ಕೆ ಒಳ್ಳೆಯದನ್ನು ಬಯಸಿದವರು. ವಿಶ್ವವೇ ಒಂದು ಕುಟುಂಬವೆಂದು ಸಾರಿದವರು. ಸರ್ವೇಜನಾಃ ಸುಖಿನೋ ಭವಂತು ಎನ್ನುವುದು ವೇದ ಘೋಷವಾಗಿದೆ.

20. ಆಧ್ಯಾತ್ಮ ಎಂದರೇನು?

ದೇಹ ಮನಸ್ಸು ಹಾಗೂ ಆತ್ಮಗಳ ಸಮನ್ವಯತೆಯೇ ಆಧ್ಯಾತ್ಮ, ಇಂದ್ರಿಯಗಳನ್ನು ನಮ್ಮ ನಿಯಂತ್ರಣಕ್ಕೆ ತಂದುಕೊಂಡು ಪರಮಾತ್ಮನೆಂಬ ಒಂದೇ ಗುರಿಯಚಿಂತನೆಯಲ್ಲಿ ಸ್ಥಾಪಿಸುವುದೇ ಆಧ್ಯಾತ್ಮ, ಆತ್ಮವೆಂಬ ಅಣುಚೇತನವು ಪರಮಾತ್ಮ ನೆಂಬ ವಿಶ್ವಚೇತನವನ್ನು ಅರಿಯುವುದೇ ಆಧ್ಯಾತ್ಮದ ಉದ್ದೇಶ. ಆ ದಿಸೆಯಲ್ಲಿ ಸಾಗುವ ದಾರಿಯೇ ಆಧ್ಯಾತ್ಮಮಾರ್ಗ. ಆಧ್ಯಾತ್ಮಮಾರ್ಗದಲ್ಲಿ ಮನಸ್ಸನ್ನು ನೆಟ್ಟವನಿಗೆ ಬೇರಾವುದೇ ಮಾರ್ಗಕ್ರಮಣವು ಕಠಿಣವಾಗಲಾರದು. ನಮ್ಮೆಲ್ಲಗುರಿಸಾಧನೆಗೆ ಆಧ್ಯಾತ್ಮ ಸಾಧನೆಯು ಆನೆಬಲವನ್ನು ನೀಡುತ್ತದೆ. ಮನಸ್ಸಿನ ಏಕಾಗ್ರತೆಗೆ ಆಧ್ಯಾತ್ಮದ ಕೊಡುಗೆ ಅಪಾರ. ಜೀವನದಲ್ಲಿ  ಎದುರಾಗುವ ಕಷ್ಟಗಳನ್ನು ಎದುರಿಸಲು ಆಧ್ಯಾತ್ಮವು ನಮಗೆ ಧೈರ್ಯವನ್ನು ನೀಡುತ್ತದೆ.  

21. ಆಧ್ಯಾತ್ಮ ಸಾಧನೆಯ ಮಾರ್ಗಗಳಾವುವು? 

ಆಧ್ಯಾತ್ಮ ಸಾಧನೆಗೆ ಜ್ಞಾನ ಮಾರ್ಗ, ಕರ್ಮ ಮಾರ್ಗ, ಯೋಗ ಮಾರ್ಗ, ಭಕ್ತಿ ಮಾರ್ಗ, ಹೀಗೆ ಹಲವು ಮಾರ್ಗಗಳು ಇವೆ. ಇವೆಲ್ಲವುಗಳಲ್ಲಿ ಜ್ಞಾನ ಮಾರ್ಗವು ಶ್ರೇಷ್ಠವಾದುದಾಗಿದೆ. ಎಂಬುದಾಗಿ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿದ್ದಾನೆ.

22. ಗುರು ಯಾರು?

ನಮ್ಮ ಬದುಕಿನ ಉನ್ನತಿಗೆ ಮಾರ್ಗದರ್ಷನ ನೀಡುವವನೇ ಗುರು. ಭೌತಿಕ ಜ್ಞಾನಕ್ಕೆ ನಮಗೆ ಹಲವು ಗುರುಗಳಿರಬಹುದು, ಆಧ್ಯಾತ್ಮ ಸಾಧನೆಗೆ ಶ್ರೇಷ್ಠರಾದ ಒಬ್ಬರೇ ಗುರುಗಳ ಮಾರ್ಗದರ್ಷನದಲ್ಲಿ ಸಾಧನೆ ಮಾಡುವುದು ಶ್ರೇಯಸ್ಕರ. ಇಂತಹವರನ್ನು ಆಧ್ಯತ್ಮಿಕ ಗುರು ಎನ್ನಬಹುದು. ಹಿಂದೂ ಸಮಾಜದಲ್ಲಿ ಬಹುದೊಡ್ಡಗುರುಪರಂಪರೆಯೇ ಇದೆ.

23. ದೇವರು ಯಾರು? ದೇವರು ಇದ್ದಾನೆಯೇ?

ಜಗತ್ತಿನಲ್ಲಿ ಪ್ರತಿಯೊಂದು ವಸ್ತುವಿಗೂ ಪ್ರಾಣಿಗೂ ಶಕ್ತಿ ಇದೆ ಹಾಗೂ ಆ ಶಕ್ತಿಗೆ ಮಿತಿ ಇದೆ. ಈ ಶಕ್ತಿಯ ಅಪರಿಮಿತವಾದ ಮೂಲವನ್ನೇ ದೇವರು ಎನ್ನಲಾಗುವುದು. ಇಂತಹ ಜಗತ್ತು ಜೀವಂತವಾಗಿದ್ದು ನಿರಂತರತೆಯಿಂದ ಕೂಡಿದ್ದು ಚಲನಾತ್ಮಕವಾಗಿದೆ. ಹೀಗಿರಲು ಈ ಜಗತ್ತನ್ನು ಸೃಷ್ಠಿಸಿದವನು, ನಿಯಂತ್ರಿಸುತ್ತಿರುವವನು ಒಬ್ಬನು ಚಾಲಕ ಸ್ಥಾನದಲ್ಲಿ ಇರಬೇಕು ತಾನೆ? ಆತ ಅಪರಿಮಿತ ಶಕ್ತಿಸಂಪನ್ನನಾಗಿರಬೇಕು ಎಂಬುದು ನಮ್ಮೆಲ್ಲರ ನಂಬಿಕೆ. ಆ ಶಕ್ತಿಯೇ ಅಥವಾ ಶಕ್ತಿಯ ಮೂಲವೇ ದೇವರು ಎಂಬುದಾಗಿ ನಾವು ನಂಬಿದ್ದೇವೆ. “ತೃಣಮಪಿ ನಚಲತಿ ತೇನ ವಿನಾ” ಎಂಬುದಾಗಿ ಉಪನಿಷತ್ತು ಹೇಳುತ್ತದೆ. ಇದರ ಅರ್ಥ ಅವನಿಲ್ಲದೆ ಹುಲ್ಲು ಕಡ್ಡಿಯೂ ಕದಲಲಾರದು ಎಂಬುದಾಗಿದೆ.

24. ದೇವರಿಗೆ ರೂಪ ಇದೆಯೇ? ಆತನು ಎಲ್ಲಿದ್ದಾನೆ?

ಇದು ಬಹುಚರ್ಚಿತ ವಿಷಯ. ಹಿಂದುಗಳ ಆರಾಧನಾ ಪದ್ದತಿಯನ್ನು ಬಳಸಿಕೊಂಡು ಇತರಮತೀಯರು ಹಿಂದೂ ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಾರೆ. ದೇವರಿಗೆ ನಿರ್ಧಿಷ್ಟವಾದ ರೂಪ ಇಲ್ಲ. ಆದರೆ ಎಲ್ಲರೂಪಗಳಲ್ಲೂ ಅವನಿದ್ದಾನೆ. ದೇವರಿಗೆ ನಿರ್ಧಿಷ್ಠ ಸ್ಥಳ ಇಲ್ಲ ಆದರೆ ಎಲ್ಲಾ ಸ್ಥಳದಲ್ಲಿಯೂ ಆತನಿದ್ದಾನೆ. ದೇವರಿಗೆ ನಿರ್ಧಿಷ್ಠ ಗುಣ ಇಲ್ಲ. ಆದರೆ ಎಲ್ಲಗುಣರೂಪಿಯೂ ಅವನೇ ಆಗಿದ್ದಾನೆ. ಆತನು ಸರ್ವಶಕ್ತಿಗಳಲ್ಲಿಯೂ, ಸರ್ವಲಿಂಗಗಳಲ್ಲಿಯೂ, ಸರ್ವಜೀವಗಳಲ್ಲಿಯೂ ಇದ್ದು ಜಗತ್ತಿನ ಸರ್ವಸ್ವದಲ್ಲಿಯೂ ಆತನೇ ವ್ಯಾಪ್ತನಾಗಿದ್ದಾನೆ. ಸೃಷ್ಟಿಯ ಸರ್ವವೂ ಅವನದ್ದೇ ಆಗಿದೆ. ಹಿಂದುಗಳು ತಮಗಿಷ್ಟವಾದ ಕಲ್ಪನೆಗಳಲ್ಲಿ, ಹೆಸರುಗಳಲ್ಲಿ, ಬಗೆಗಳಲ್ಲಿ ದೇವರನ್ನು ಕಲ್ಪಿಸಿಕೊಂಡು ಪೂಜಿಸುವಂತಹ ಶ್ರೀಮಂತ ಸಂಸ್ಕೃತಿಯನ್ನು ಬೆಳೆಸಿಕೊಂಡಿದ್ದಾರೆ. ಇದರಿಂದ ಜೀವನದಲ್ಲಿ ಸುಖ ಸಂತೋಷ ಹಾಗು ಆನಂದವನ್ನು ಕಂಡುಕೊಂಡಿದ್ದಾರೆ.

25. ದೇವರು ಎಷ್ಟುಮಂದಿ ಇದ್ದಾರೆ? ಒಬ್ಬನೇ ದೇವರೇ? ಹಲವು ಮಂದಿ ಇದ್ದಾರೆಯೇ?

ಈ ಮೇಲಿನ ಪ್ರಶ್ನೆಯೂ ಬಹುಜನರಮನಸ್ಸಿನಲ್ಲಿ ಗೊಂದಲವನ್ನುಂಟುಮಾಡುತ್ತದೆ. ದೇವರು ಒಬ್ಬನೆ ಆಗಿದ್ದಾನೆ. ಅವನನ್ನೇ ಹಲವು ನಾಮಗಳಿಂದ ಕರೆಯುತ್ತೇವೆ. ಹಲವು ರೂಪಗಳಿಂದ ಪೂಜಿಸುತ್ತೇವೆ. ದೇವರೊಬ್ಬ ನಾಮಹಲವು ಎನ್ನುವುದು ಪ್ರಸಿದ್ದ ಮಾತಾಗಿದೆ. “ಆಕಾಶಾತ್ ಪತಿತಂ ತೋಯಂ ಯಥಾಗಚ್ಚತಿ ಸಾಗರಂ, ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಚತಿ” ಎಂದು ಹಿರಿಯರು ನಮ್ಮೆಲ್ಲಾ ಪೂಜೆಯೂ ಒಬ್ಬನಿಗೇಸಲ್ಲುವುದೆಂಬುದನ್ನು ಹೇಳಿದ್ದಾರೆ.  ಆಕಾಶದಿಂದ ಬೀಳುವ ಮಳೆಯ ನೀರು ವಿಭಿನ್ನ ಕಾಡು, ಮೇಡು, ನದಿಕೊಳ್ಳಗಳಲ್ಲಿ ಹರಿದು ನೀರಿನಿಂದ ತುಂಬಿದ ಇಂತಹ ಹಲವು ನದಿಗಳು ಸಮುದ್ರವನ್ನು ಹೇಗೆ ಸೇರುತ್ತವೆಯೋ ಹಾಗೆಯೇ ಎಲ್ಲ ರೂಪದ ದೇವರ ಸಾತ್ವಿಕ ಆರಾಧನೆಗಳೂ ಅಂತಿಮವಾಗಿ ಪರಮಾತ್ಮನನ್ನೇ ಸೇರುತ್ತವೆ. ಇದರಲ್ಲಿ ಸಂಶಯಬೇಡ. ದೇವರುಗಳು ಬೇರೆ ಬೇರೆ. ನಾನು ಪೂಜಿಸವ ದೇವರುಮಾತ್ರ ದೇವರು, ಅಥವಾ ಅಧಿಕ ಶಕ್ತಿವಂತ ಉಳಿದವರ ದೇವರು ದುರ್ಬಲರು ಈ ಭಾವವು ಅಜ್ಞಾನ ಎಂಬುದಾಗಿ ನಾವು ತಿಳಿದು. ಎಲ್ಲರ ಆರಾಧನೆಯನ್ನೂ ಗೌರವಿಸೋಣ ನಮ್ಮ ಇಷ್ಟದೈವದ ರೂಪವನ್ನು ಪೂಜಿಸೋಣ.

26. ಜಗತ್ತಿಗೆಲ್ಲಾ ಒಬ್ಬರೇ ದೇವರಾದರೆ ನಾವು ಪೂಜಿಸುವ ಹಲವು ದೇವರುಗಳು, ಹಲವು ಮೂರ್ತಿಗಳು ವ್ಯರ್ಥವೇ? ಇವುಗಳನ್ನು ಯಾಕೆ ಮಾಡಿದ್ದಾರೆ?

ದೇವರು ಒಬ್ಬನೆ. ಆ ದೇವರ ಅಪಾರ ಶಕ್ತಿಯನ್ನು ವರ್ಣಿಸಲು ನಮ್ಮ ಹಿರಿಯರು ಆತನ ಶಕ್ತಿಗಳಿಗೆ ರೂಪಕೊಟ್ಟು, ಹೆಸರುಗಳನ್ನು ಕೊಟ್ಟು, ವಿವಿಧ ಪಾತ್ರಗಳನ್ನು ಕೊಟ್ಟು ಚಿತ್ರಿಸಿ ಪುರಾಣ ಕಥೆಗಳನ್ನು ರಚಿಸಿದರು. ವೇದದ ಆಳವಾದ ವಿಚಾರಗಳನ್ನು ಅರ್ಥೈಸಿಕೊಳ್ಳಲು ಕಷ್ಟವಾಗುವ ಸಾಮಾನ್ಯಜನರು ದೇವರ ಬಗ್ಗೆ ತಿಳುವಳಿಕೆ ಹೊಂದಲು ಈ ವಿಧಾನವನ್ನು ಅನುಸರಿಸಿದರು. ದೇವರನ್ನು ಮನುಷ್ಯರಂತೆಯೇ ಕಲ್ಪಿಸಿ ಅವನಿಗೆ ಕೆಲವು ವಿಶೇಷಣಗಳನ್ನು ಕೊಟ್ಟು ವರ್ಣಿಸಿದರು. ಈ ಮೂಲಕ ಕೆಟ್ಟ ಗುಣಗಳು ಹಾಗೂ ಒಳ್ಳೆಯ ಗುಣಗಳನ್ನು ವಿವರಿಸಿದರು. ಹೀಗೆ ಸಾಮಾನ್ಯಜನರು ಸಂಸ್ಕಾರವಂತರಾಗಲು ಸುಲಭವಾಗುವಂತೆ ಉತ್ತಮ ಬದುಕಿಗೆ ಧರ್ಮಮಾರ್ಗವನ್ನು ಬೋಧಿಸುವ ಪ್ರಯತ್ನ ಮಾಡಿದರು. ಸಾಮಾನ್ಯರು ಭಯ ಭಕ್ತಿಗಳಿಂದ ಇದನ್ನು ಅಳವಡಿಸಿಕೊಂಡು ಆಚರಿಸಿಕೊಂಡು ಬಂದರು. ಇದುವೇ ನಮ್ಮ ಸಂಸ್ಕೃತಿಯಾಗಿ ಬೆಳೆದುಬಂದಿದೆ. ಮನಸ್ಸಿನ ಏಕಾಗ್ರತೆಗೆ ದೇವರೊಂದಿಗಿನ ಭಾವನಾತ್ಮಕ ಸಂಬಂಧಕ್ಕೆ ನಮಗೆ ವಿಗ್ರಹಗಳು, ದೇವಸ್ಥಾನಗಳು, ಪುರಾಣಕಥೆಗಳು ಸಹಾಯಕವಾಗಿದೆ. ಕಥಾರೂಪದ ನೀತಿ ಬಹುಕಾಲ ಮನಸ್ಸಿನಲ್ಲಿ ನಿಲ್ಲುತ್ತದೆ. ಮಕ್ಕಳಿಗೆ ಬೇಗ ಅರ್ಥವೂ ಆಕರ್ಷಕವೂ ಆಗುತ್ತದೆ. ಕಥೆ ಮೂಲಕ ನೀತಿಯನ್ನು ಹೇಳುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಪಂಚತಂತ್ರ ಇದರ ನೀತಿಯಿಂದಾಗಿಯೇ ಪ್ರಸಿದ್ಧವಾಗಿದೆ. ದೇವರ ನಾಮ, ರೂಪ ಹಾಗೂ ಆತನ ಕಥೆಗಳು ನಮ್ಮ ಹಿರಿಯರ ಅನುಭವದ ಕೊಡುಗೆ ಯಾಗಿದೆ. ಇವೆಲ್ಲವೂ ಒಬ್ಬನೇ ಭಗವಂತನ ಅಪಾರ ಶಕ್ತಿಯ ವಿವಿಧ ರೂಪಗಳಾಗಿವೆ ಎನ್ನುವುದು ಸೂಕ್ತ ಉತ್ತರವಾದೀತು. ಆದುದರಿಂದ ಬಹುದೇವರ ಗೊಂದಲಕ್ಕೆ ಒಳಗಾಗಬೇಕಿಲ್ಲ. ಮೂವತ್ತಮೂರು ಕೋಟಿದೇವರುಗಳಿದ್ದಾರೆ ಎಂದು ನಂಬುವುದಕ್ಕಿಂತ ಒಬ್ಬನೇ ಭಗವಂತ ಅಷ್ಟುರೂಪಗಳಿಂದ ಪ್ರಕಟನಾಗಿದ್ದಾನೆ ಎಂದು ನಂಬುವುದು ಉತ್ತಮ. ಹಾಗೂ ಗೊಂದಲ ರಹಿತ ಭಕ್ತಿಗೆ ಇದು ಕಾರಣ ವಾಗುವುದು. ಶತಪಥ ಬ್ರಾಹ್ಮಣ 4-5-7-2 ರಲ್ಲಿ 33 ದೇವತೆಗಳ ಉಲ್ಲೇಖ ಇದೆ. ಅಗ್ನಿ, ವಾಯು, ಪೃಥ್ವಿ, ಅಂತರಿಕ್ಷ, ಸೂರ್ಯ, ಚಂದ್ರಮಾ, ಆಕಾಶ ಮತ್ತು ನಕ್ಷತ್ರಗಳೆಂದು ಎಂಟು ವಸುಗಳು. ಪ್ರಾಣ, ಅಪಾನ, ವ್ಯಾನ, ಸಮಾನ, ಉದಾನ, ನಾಗ, ಕೂರ್ಮ, ಕೃಕಿಲಾ, ದೇವದತ್ತ, ಧನಂಜಯ ಮತ್ತು ಜೀವಾತ್ಮಾ ಎಂದು ಹನ್ನೊಂದು ರುದ್ರರು, ಚೈತ್ರ, ವೈಶಾಕ, ಜ್ಯೇಷ್ಠ, ಆಶಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತೀಕ, ಮಾರ್ಗಿಶರ, ಪುಷ್ಯ, ಮಾಘ, ಫಾಲ್ಗುಣ ಇವು ಹನ್ನೆರಡು ಮಾಸಗಳು, ಹನ್ನೆರಡು ಆದಿತ್ಯರು, ಯಜ್ಞ, ವಿದ್ಯುತ್ ಅಥವಾ ಇಂದ್ರ, ಇವರೆಲ್ಲರ ಪಾಲಕ ಪ್ರಜಾಪತಿ ಪರಮೇಶ್ವರನು ಮೂವತ್ತ ನಾಲ್ಕನೆಯ ದೇವತೆ. ಇದನ್ನೇ ಮೂವತ್ತಮೂರು ಕೋಟಿ ದೇವತೆಗಳೆಂದೂ ಒಬ್ಬ ಪರಮಾತ್ಮನೆಂದೂ ಹೇಳಿರಬಹುದು. ಏಕಂ ಸದ್ವಿಪ್ರಾ ಬಹುಧಾ ವದಂತಿ. ಅಗ್ನಿಂ, ಇಂದ್ರಂ, ಯಮಂ ಮಾತರಿಶ್ವಾನಮಾಹುಃ – ಋಗ್ವೇದ. ಇಲ್ಲಿ ವಿಶೇಷ ಪ್ರಜ್ಞಾವಂತರು ಒಂದನ್ನೇ ಬಹುವಿಧವಾಗಿ ಅಗ್ನಿ, ಯಮ, ಇಂದ್ರ, ಮಾತರಿಶ್ವ, ಮುಂತಾದ ನಾಮಗಳಿಂದ ಕೆರೆಯುತ್ತಾರೆಂಬುದಾಗಿ ಋಗ್ವೇದ ಹೇಳುತ್ತದೆ. ಬಹುದೇವರ ಅಸ್ಥಿತ್ವನ್ನು ಪ್ರತಿಪಾದಿಸುವುದು ಅವರಲ್ಲಿ ಹೆಚ್ಚು ಕಡಿಮೆ ಎಂದು ತಾರತಮ್ಯ ಮಾಡುವುದು ಇದು ಜನರಲ್ಲಿ ಗೊಂದಲಕ್ಕೆ ಕಾರಣವಾಗುವುದೇ ಹೊರತು ಇದರಿಂದ ಸಮಾಜಕ್ಕೆ ಏಕತೆಯ ಒಗ್ಗಟ್ಟಿನ ದಾರಿ ತೋರಲಾರದು. ಅಂತಹಪಂಡಿತರನ್ನು ದೂರದಿಂದಲೇ ಗೌರವಿಸುವುದು ಉತ್ತಮ. ಒಂದೇ ದೇವರ ದೇವಲಾಯಗಳಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಜನರ ಶ್ರದ್ಧೆ ಭಿನ್ನವಾಗಿರುವುದನ್ನು ನಾವು ನೋಡಬಹುದು. ಕೆಲವು ದೇವಾಲಯಗಳಲ್ಲಿ ಅಧಿಕ ಕಾರಣಿಕವಿದೆ ಎನ್ನುತ್ತೇವೆ.

27. ನಾವು ದೇವರನ್ನು ಯಾವ ರೂಪದಲ್ಲಿ ಪೂಜಿಸಬೇಕು? ಯಾವ ಹೆಸರಿನಿಂದ ಪೂಜಿಸಬೇಕು? ಯಾವದೇವರನ್ನು ನಂಬ ಬೇಕು? ಇವು ಗೊಂದಲವಲ್ಲವೇ?

ಕರೆಂಟ್ ಅಥವಾ ವಿದ್ಯುತ್ ಎನ್ನುವ ಶಕ್ತಿ ಫ್ಯಾನಿನ ರೂಪದಲ್ಲಿಯೂ, ಲೈಟಿನ ರೂಪದಲ್ಲಿಯೂ, ಟಿ ವಿ ರೂಪದಲ್ಲಿಯೂ, ರೆಫ್ರಿಜರೇಟರ್ ನ ರೂಪದಲ್ಲಿಯೂ ನಮ್ಮ ಕೆಲಸವನ್ನು ಸುಲಭ ವಾಗಿಸುತ್ತದೆ. ಇಲ್ಲಿ ಹೇಗೆ ಹೆಸರು ರೂಪ ಬೇರೆಯಾಗಿದ್ದರೂ ಚಾಲಕ ಶಕ್ತಿ ಒಂದೆ ಆಗಿದೆಯೋ? ಹಾಗೆಯೇ ಭಗವಂತನು ನಾವು ಪೂಜಿಸುವ ಎಲ್ಲಾರೂಪ ಹಾಗೂ ನಾಮಗಳ ಚಾಲಕ ಶಕ್ತಿಯಾಗಿದ್ದು ಆ ಶಕ್ತಿರೂಪದ ಭಗವಂತ ಒಬ್ಬನೇ ಆಗಿದ್ದಾನೆ ಎಂದು ತಿಳಿಯಬೇಕು. ನಾವು ಭಗವಂತನನ್ನು ಯಾವರೂಪದಲ್ಲಿ ಪೂಜಿಸಬೇಕೆಂಬುದನ್ನು ಬೇರೆಯವರು ಹೇಳುವುದು ಸಾಧ್ಯವಿಲ್ಲ. ನಮ್ಮ ಕುಟುಂಬ ನಂಬಿಕೊಂಡು ಬಂದ ದೇವರ ರೂಪ, ಸ್ಥಳ ಇವುಗಳನ್ನು ನಾವು ಕುಲದೇವರು ಮೂಲಸ್ಥಾನ ಎನ್ನುತ್ತೇವೆ. ಈ ನಂಬಿಕೆ ನಮಗೆ ಚಿಕ್ಕಂದಿನಿಂದ ಬಳುವಳಿಯಾಗಿ ಪೂರ್ವಜರಿಂದಲೇ ಬಂದಿರುವುದರಿಂದ ನಮಗೆ ಬಾಲ್ಯದಿಂದಲೂ ಅಂತಹ ಸ್ಥಳ ಹಾಗೂ ಸಂಪ್ರದಾಯಗಳಲ್ಲಿ ವಿಶೇಷ ಶ್ರದ್ಧೆ ಬೆಳೆದು ಬಂದಿರುತ್ತದೆ. ನಾವು ಭಾವನಾತ್ಮಕವಾಗಿ ಆಸ್ಥಳದೊಂದಿಗೆ ಆ ದೇವರೊಂದಿಗೆ, ಆ ಕ್ಷೇತ್ರದೊಂದಿಗೆ, ಸಂಬಂಧ ಹೊಂದಿರುತ್ತೇವೆ.  ನಾವು ಕುಲದೇವರ ರೂಪದಲ್ಲಿ ಭಗವಂತನನ್ನು ಸಂಪ್ರದಾಯದ ನಡಾವಳಿಯಂತೆ ಆರಾಧಿಸಬೇಕು. ನಂತರ ನಮ್ಮ ಮನಸ್ಸಿಗೆ ಹಿತವೆನಿಸುವ ಭಗವಂತನ ರೂಪವನ್ನು ಇಷ್ಟದೈವದ ರೂಪದಲ್ಲಿಯೂ ನಾವು ಆರಾಧಿಸಬಹುದು. ಇನ್ನು ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೂ ನಡೆದುಕೊಳ್ಳಬಹುದು. ಇದಕ್ಕೆ ನಮ್ಮ ಮನಸ್ಸೇಮುಖ್ಯ ಕಾರಣ ಒಬ್ಬೊಬ್ಬರ ಶ್ರದ್ಧೆ ಒಂದೊಂದು ಕ್ಷೇತ್ರ, ಒಂದೊಂದು ದೈವ, ದೇವರಲ್ಲಿ, ನೆಲೆಯಾಗಿರುತ್ತದೆ. ಇದು ಅವರವರ ಶ್ರದ್ಧೆ ಹಾಗೂ ಅನುಭವಕ್ಕೆ ಸಂದಂಧಿಸಿರುತ್ತದೆ. ಎಲ್ಲದೇವರಲ್ಲಿಯೂ ನಾವು ನಮ್ಮ ಕುಲದೇವರ ಅಥವಾ ಇಷ್ಟ ದೇವರ ರೂಪ ಕಾಣಬಹುದು. ಎಲ್ಲಾರೂಪಗಳೂ ಒಂದೇಶಕ್ತಿಯ ಹಲವು ಮುಖಗಳೆಂದು ಅರಿತುಕೊಳ್ಳಬೇಕು. ದೇವರೊಬ್ಬ ನಾಮ ಹಲವು ಇದುವೇ ಸತ್ಯ. ಇದುವೇನಿತ್ಯ. ಹಲವು ದೇವರಲ್ಲಿ ಗೊಂದಲಗೊಳ್ಳಬೇಕಿಲ್ಲ. ಯಾವುದೇ ಕ್ಷೇತ್ರದಲ್ಲಿ ವಿಗ್ರಹದ ಎದುರು ಕಣ್ಣುಮುಚ್ಚಿ ನಿಂತರೂ ನೀವು ಆ ವಿಗ್ರಹದಲ್ಲಿ ನಿಮ್ಮ ಕುಲದೇವರೇ ಅಥವಾ ಇಷ್ಟದೇವರೇ ಬಂದು ನಿಮ್ಮನ್ನು ಅನುಗ್ರಹಿಸಿದಂತೆ ಕಾಣುವುದು ಕಷ್ಠವೇನಲ್ಲ.

ಭಗವದ್ಗೀತೆಯಲ್ಲಿ ಕೃಷ್ಣನು ಈ ಮಾತನ್ನು ಹೇಳಿದ್ದಾನೆ.

ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ|

ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್||7-21||

 

ಭಕ್ತರು ಯಾರು ಯಾರು ಯಾವ ಯಾವ ರೂಪದಲ್ಲಿ ಶ್ರದ್ಧೆಯಿಂದ ಪೂಜಿಸಿದರೂ ಅವರವರ ಅಛಲವಾದ ಶ್ರದ್ಧೆಯನ್ನು ಅದೇ ರೂಪದಲ್ಲಿ ಅನುಗ್ರಹಿಸುವುದಾಗಿ ಕೃಷ್ಣನ ಮಾತು.

28. ದೇವರನ್ನು ನಾವೇಕೆ ಪೂಜಿಸಬೇಕು? ದೇವಸ್ಥಾನಗಳಿಗೆ ನಾವೇಕೆ ಹೋಗಬೇಕು?

ದೇವರನ್ನು ನಾವೇಕೆ ಪೂಜಿಸಬೇಕು? ದೇವಸ್ಥಾನಗಳಿಗೆ ನಾವೇಕೆ ಹೋಗಬೇಕು? ಇಂತಹ ಮಾತುಗಳನ್ನು ಇಂದಿನ ಸಮಾಜದಲ್ಲಿ ಮಕ್ಕಳು ಸಹಜವಾಗಿ ಕೇಳುತ್ತಾರೆ. ಇದಕ್ಕೆ ಸಮಾಧಾನಹೇಳಲು ನಾವು ಅಸಮರ್ಥರಾದರೆ, ನಮ್ಮ ಮಕ್ಕಳು ಅನ್ಯಮತದ ಮತಾಂತರಿ ರಾಕ್ಷಸರಿಗೆ ಆಹಾರವಾಗುತ್ತಾರೆ. ಹಾಗಾಗದಂತೆ ನಾವು ಎಚ್ಚರಿಕೆ ವಹಿಸಬೇಕು. ವಿಶೇಷವಾದ ಒಂದು ಅಗೋಚರ ಚೇತನಾಶಕ್ತಿ ಜಗತ್ತನ್ನು ನಿಯಂತ್ರಿಸುತ್ತಿದೆ. ಇದು ನಮ್ಮ ಅನುಭವಕ್ಕೂ ಹಲವು ಬಾರಿ ಬಂದಿರುತ್ತದೆ. ನಾವು ಎಣಿಸಿದಾಗ ಅಂತಹವರು ಎದುರು ಸಿಗುವುದು. ನಾವು ನೆನೆದ ಯಾವುದೋ ಕೆಲಸ ಕೂಡಲೇ ಘಟಿಸುವುದು. ಮುಂತಾದ ಅನುಭವ ನಮ್ಮ ಜೀವನದಲ್ಲೂ ನಡೆಯುತ್ತಿರುತ್ತದೆ. ಇದಕ್ಕೆ ಕಾರಣವೇ ಆ ಅಗೋಚರವಾದ ದೈವಿಕ ಶಕ್ತಿ ಈ ಅಗೋಚರ ಚೈತನ್ಯವೇ ದೇವರು ಎಂಬುದಾಗಿ ನಾವು ನಂಬುತ್ತೇವೆ. ದೇವರನ್ನು ಪೂಜಿಸುವುದು ಪರಮಾತ್ಮನಿಗೆ ನಾವು ಸಲ್ಲಿಸುವ ಕೃತಜ್ಞತೆಯಾಗಿದೆ. ನಮಗೆ ಮನುಷ್ಯ ಜನ್ಮವನ್ನು ದಯಪಾಲಿಸಿ ಆರೋಗ್ಯವನ್ನು, ಅನ್ನವನ್ನು, ವಸ್ತ್ರವನ್ನು ದೊರೆಯುವಂತೆ ಮಾಡಿದ ಪರಮಾತ್ಮನನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ನಮಗೆ ಜೀವನದಲ್ಲಿ ದೇವರು ಏನುಕೊಟ್ಟಿದ್ದಾನೋ ಅದನ್ನು ಆತನಿಗೆ ಕೃತಜ್ಞತಾ ಪೂರ್ವಕ ಸಮರ್ಪಿಸಿ ಬಳಸುವುದು ಹಿಂದೂ ಸಂಸ್ಕೃತಿ. ಈ ಉದ್ದೇಶದಿಂದಲೇ ದೇವರಿಗೆ ಪೂಜೆಯನ್ನು ಮಾಡಿ ನಾವು ಹಾಲು, ಹಣ್ಣು, ಅನ್ನ, ವಸ್ತ್ರ, ಆಭರಣ, ಪುಷ್ಪ, ಗಂಧ, ಧೂಪ, ಮುಂತಾದುವನ್ನು ಸಮರ್ಪಿಸುವ ಪರಿಪಾಠ ಬೆಳೆದುಬಂದಿದೆ. ಸಾಲ ಮಾಡಿ ಅರ್ಚನೆ ಮಾಡುವುದು ಮೂರ್ಖತನದ ಪರಮಾವಧಿ ಎನ್ನಬಹುದು. ದೇವರ ಪೂಜೆಗೆ ಆಡಂಬರ ಬೇಕೆಂದೇನೂ ಇಲ್ಲ. ನಮ್ಮ ಊಟವನ್ನೇ ನೈವೇದ್ಯವೆಂದು ಅರ್ಪಿಸುತ್ತೇವೆ. ನಮ್ಮಂತೆಯೇ ದೇವರನ್ನು ಅಲಂಕರಿಸುತ್ತೇವೆ. ನಮ್ಮ ದುಡಿಮೆಯಲ್ಲಿ ಆರನೇ ಒಂದು ಭಾಗ ದಾನ ಧರ್ಮ ಗಳಿಗೆ ವಿನಿಯೋಗಿಸಬೇಕೆಂದು ಹಿಂದೂಗಳ ಧರ್ಮಶಾಸ್ತ್ರ ಹೇಳುತ್ತದೆ. ಆದರಂತೆ ನಾವು ದೇವರಿಗೂ, ದೇಶಕ್ಕೂ, ಧರ್ಮಕ್ಕೂ, ಸಮಾಜಕ್ಕೂ ನಮ್ಮ ದುಡಿಮೆಯ ಒಂದು ಪಾಲನ್ನು ನೀಡುವುದು ಧರ್ಮ ಕಾರ್ಯವಾಗಿದೆ. ದೇವಸ್ಥಾನಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸಲು ಹೋಗಬೇಕೇ ಹೊರತು ದೇವರಲ್ಲಿ ಬೇಡುವ ಉದ್ದೇಶದಿಂದ ಭಿಕ್ಷುಕರಾಗಿ ಹೋಗಬಾರದು ಅಥವಾ ನಮ್ಮ ಪಾಪದ ಹರಕೆ ತೀರಿಸಲು ಹೋಗಬಾರದು. ದೇವರಲ್ಲಿ ಮನಸ್ಸಿನಲ್ಲಿನ ಸಾತ್ವಿಕ ಸಂಕಲ್ಪ ಹೇಳಿಕೊಂಡು ಅದರಪ್ರಾಪ್ತಿಯಮಾರ್ಗದಲ್ಲಿ ವಿವೇಕವನ್ನು, ಧೈರ್ಯವನ್ನು, ವಿದ್ಯೆಯನ್ನು, ಬುದ್ದಿಯನ್ನು, ಆರೋಗ್ಯವನ್ನು, ಆಯಸ್ಸನ್ನು ನೀಡೆಂದು ಕೇಳಬೇಕು. ನಮ್ಮಹಿರಿಯರು ದೇವರಲ್ಲಿ ಏನು ಬೇಡಬೇಕೆಂಬುದನ್ನೂ ಶ್ಲೋಕರೂಪದಲ್ಲಿ ಹೇಳಿದ್ದಾರೆ

ಶ್ರದ್ಧಾಂ ಮೇಧಾಂ ಯಶಃಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಮ್ |

ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಪುರುಷೋತ್ತಮ ||

ಶ್ಲೋಕದ ಅರ್ಥ ಈ ರೀತಿಯಾಗಿದೆ.  ಶ್ರದ್ಧೆ, ಸ್ಮರಣಶಕ್ತಿ, ಕೀರ್ತಿ, ವಿಚಾರಶಕ್ತಿ, ವಿದ್ಯೆ, ಬುದ್ಧಿ, ಸಂಪತ್ತು, ಬಲ, ಆಯುಷ್ಯ, ತೇಜಸ್ಸು, ಆರೋಗ್ಯವನ್ನು ನೀಡು ನನಗೆ ಪುರುಷರಲ್ಲಿ ಉತ್ತಮನಾದವನೇ (ಭಗವಂತನೇ) ಎಂಬುದಾಗಿ.

ಮೇಲಿನ ಶ್ಲೋಕದಲ್ಲಿರುವವೇ ನಿಜವಾದ ಸಂಪತ್ತು. ಇವು ನಮ್ಮಲ್ಲಿ ಇದ್ದರೆ ಭೌತಿಕ ಸಂಪತ್ತನ್ನು ಸಂಪಾದಿಸುವುದು ಕಷ್ಟಅಲ್ಲ. ಆದರೆ ಹೆಚ್ಚಿನವರು ಆರ್ಥಿಕ ಹಾಗೂ ಆರೋಗ್ಯದ ಲಾಭಕ್ಕಾಗಿ ಬೇಡುವುದಕ್ಕಾಗಿ ದೇವರಲ್ಲಿಗೆ ಹೋಗುತ್ತಾರೆ. ದೇವರಿಗೆ ಲಂಚ ದಂತೆ ಕಾಣಿಕೆ, ಉತ್ಸವ, ಪೂಜೆ, ಹರಕೆ, ಹೇಳಿಕೊಳ್ಳುತ್ತಾರೆ. ಇವೆಲ್ಲಾ ಆತ್ಮವಿಶ್ವಾಸದ ಕೊರತೆಯ ಫಲದಂತೆ ಭಾಸವಾಗುತ್ತದೆ. ಅಜ್ಞಾನವೇ ಆತ್ಮವಿಶ್ವಾಸದ ಕೊರತೆಗೆ ಕಾರಣ. ಹೀಗೆ ಹರಕೆ ಹೇಳಿಕೊಳ್ಳುವುದರಿಂದ ದೇವರು ಅನುಗ್ರಹಿಸುತ್ತಾರೆಂಬ ನಂಬಿಕೆ ಹೆಚ್ಚಾಗಿ ಆತ್ಮವಿಶ್ವಾಸ ವೃದ್ಧಿಸುವುದಿದ್ದಲ್ಲಿ ಅದರಿಂದ ಹಾನಿ ಇಲ್ಲ. ಒಳಿತೇ ಆಗುತ್ತದೆ. ಆದರೆ ಇದು ಅಲ್ಲಿರುವ ಅರ್ಚಕರ ವ್ಯಾವಹಾರಿಕ ಬುದ್ದಿವಂತಿಕೆಯ ಫಲ ಆಗಿರಬಾರದು. ನಮ್ಮಲ್ಲಿರುವ ಅಂಧ ವಿಶ್ವಾಸದ ಫಲವೂ ಆಗಬಾರದು. ಸ್ವಯಂಪ್ರೇರಣೆಯಾಗಿರಬೇಕು ನಮ್ಮ ನಂಬಿಕೆಗಳಬಗ್ಗೆ ನಮಗೆ ಅಛಲ ಶ್ರದ್ಧೆಯೂ ಇರಬೇಕು. ಆಗನಮ್ಮ ಸಂಕಲ್ಪ ನಿಶ್ಚಯವಾಗಿ ನೆರವೇರುತ್ತದೆ. ನಮ್ಮ ಹರಕೆ ಫಲಿಸುತ್ತದೆ. ದೈವಾನುಗ್ರಹವಿದ್ದರೂ ನಮ್ಮ ಪ್ರಯತ್ನವಿಲ್ಲದೆ ಏನೂ ಆಗಲಾರದು ಈ ವಿವೇಕ ನಮ್ಮಲ್ಲಿ ಸದಾ ಇರಬೇಕು. ಎಷ್ಟೋಜನರು ದೇವರೇ ಎಲ್ಲವನ್ನೂ ಮಾಡುತ್ತಾನೆಂದು ಸ್ವಯಂ ಕರ್ತವ್ಯದಿಂದ ವಿಮುಖರಾಗುತ್ತಾರೆ. ದೇವರಮೇಲೆ ಭಾರಹಾಕಿದ್ದೇನೆ ಎನ್ನುತ್ತಾ ದೇವಾಲಯದಲ್ಲಿ ಪ್ರದಕ್ಷಿಣೆ ಹೆಚ್ಚುಮಾಡತೊಡಗುತ್ತಾರೆ. ಮಾಡಬೇಕಾದ ಕೆಲಸದಪ್ರಯತ್ನದಲ್ಲಿ ಶ್ರದ್ಧೆಯನ್ನು ತೋರಿಸುವುದಿಲ್ಲ. ಇಂತಹವರು ಜೀವನದಲ್ಲಿ ವಿಫಲರಾಗುತ್ತಾರೆ. ನಂತರದಲ್ಲಿ ದೇವರನ್ನು ನಿಂದಿಸಲು ಆರಂಭಿಸುತ್ತಾರೆ. ನಿಧಾನವಾಗಿ ಧರ್ಮದ್ರೋಹಿಗಳೂ, ಧರ್ಮಭ್ರಷ್ಟರೂ ಆಗಿ ಬದಲಾಗುತ್ತಾರೆ. ಇಲ್ಲವೇ ನಾಸ್ತಿಕರಾಗುತ್ತಾರೆ. ಭಗವದ್ಗೀತೆಯಲ್ಲಿ ಕೃಷ್ಣ ರ್ಜುನನಿಗೆ ನನ್ನನ್ನು ನಂಬಿ ನಿನ್ನ ಕರ್ತವ್ಯವನ್ನು ಮಾಡು ಎಂಬುದಾಗಿ ಹೇಳಿದ್ದಾನೆ. ನಾವು ದೇವಾಲಯಕ್ಕೆ ಹೋದಾಗ ಆಯಾದೇವರ ಕಥೆಗಳನ್ನು ಅದರ ನೀತಿಗಳನ್ನು ಚಿಂತಿಸಿ ಅದರಂತೆ ನಡೆಯಲು ಸಂಕಲ್ಪ ಬದ್ಧರಾಗಬೇಕು. ನಮಗೆ ದೇವರಲ್ಲಿ ಭಕ್ತಿ ಪ್ರೀತಿ ನಂಬಿಕೆ ಇರಬೇಕೇ ಹೊರತು ಭಯವಿರಕೂಡದು. ಭಯವಿರುವಲ್ಲಿ ಭಕ್ತಿಯೂ ಪ್ರೀತಿಯೂ ಇರುವುದಿಲ್ಲ ಅಲ್ಲಿ ಕೇವಲ ಅಭಿನಯ ಮಾತ್ರ ಇರುತ್ತದೆ. ದೇವರಲ್ಲಿನ ಭಯಕ್ಕೆ ದೇವರಬಗೆಗಿನ ಅಜ್ಞಾನವೇ ಕಾರಣ ವಾಗಿರುತ್ತದೆ. ದೇವರು ಸಜ್ಜನರ ರಕ್ಷಕನಾಗಿದ್ದಾನೆಯೇ ಹೊರತೂ ಪೀಡಕನಾಗಿಲ್ಲ.

29. ಪುರಾಣಗಳು ನಡೆದ ಘಟನೆಗಳೇ? ಅಥವಾ ಕಟ್ಟು ಕಥೆಗಳೇ?

ಪುರಾಣಗಳು ನಡೆದ ಘಟನೆಗಳೇ? ಅಥವಾ ಕಟ್ಟು ಕಥೆಗಳೇ? ಈ ಪ್ರಶ್ನೆಯೂ ಬಹಳಷ್ಟುಜನರನ್ನು ಬಾಧಿಸುತ್ತದೆ. ಪುರಾಣಗಳು ನಡೆದಘಟನೆಗಳೆಂದು ನಿರೂಪಿಸುವುದಾಗಲೀ ಅಥವಾ ಊಹಿಸುವುದಾಗಲೀ ಇಂದು ಸಾಧ್ಯವಿಲ್ಲ. ಪುರಾಣ ಕಥೆಗಳ ಕಾಲ ನಮ್ಮ ಪಂಚಾಂಗದಲ್ಲಿನ ಯುಗಗಳ ಲೆಕ್ಕದಲ್ಲಿ ಲೆಕ್ಕಮಾಡಿದರೆ ಹಲವು ಲಕ್ಷ ವರ್ಷಗಳಾಗಬಹುದು. ಇದು ಅವರವರ ವಿವೇಚನೆಗೆ ಬಿಟ್ಟ ವಿಷಯ. ಇವು ದೇವರ ಶಕ್ತಿಯನ್ನು ಪ್ರತಿಪಾದಿಸುವ ಕಥೆಗಳೆನ್ನಬಹುದು. ಪುರಾಣಗಳ ಬಹುರೂಪವು ಭಗವಂತನ ಬಹುಗುಣಗಳನ್ನು ಪ್ರತಿನಿಧಿಸುತ್ತವೆ ಎನ್ನಬಹುದು. ವೇದಗಳು ಅರ್ಥವಾಗದ ಜನರಿಗೆ ಸ್ವಾರಸ್ಯಕರವಾಗಿ ಧರ್ಮಸೂಕ್ಷ್ಮಗಳನ್ನು ತಿಳಿಸಲು ಪ್ರಾಚೀನರು ಬಳಸಿದ ಕಥಾ ಮಾರ್ಗವೇ ಪುರಾಣಗಳಾಗಿವೆ. ಇವುಗಳ ರಚನೆಗೆ ಅಂದಿನ ಸಮಾಜದ ಘಟನೆಗಳು ಸ್ಪೂರ್ತಿಯಾಗಿರಬಹುದು ಆದರೆ ಬಹಳಷ್ಟು ಘಟನೆಗಳನ್ನು ಕಲ್ಪನೆಯಿಂದ ರೋಚಕತೆಗೇರಿಸಿದ ಕಥೆ ಎನ್ನಬಹುದು. ಪುರಾಣಗಳನ್ನು ಇತಿಹಾಸ ಎನ್ನಲಾಗದು ಆದರೆ ಪುರಾಣಗಳಲ್ಲಿಯೂ ಇತಿಹಾಸ ಹುದುಗಿದೆ ಎನ್ನಬಹುದು.

30. ರಾಮಾಯಣ ಮಹಾಭಾರತಗಳು ನಡೆದಘಟನೆಗಳೇ? ಇತಿಹಾಸವೇ? ಕಾವ್ಯವೇ?

ರಾಮಾಯಣ ಹಾಗೂ ಮಹಾಭಾರತವನ್ನು ಇತಿಹಾಸ ಕಾವ್ಯಗಳೆಂಬುದಾಗಿ ಕರೆಯಲಾಗಿದೆ. ಇತಿಹಾಸವನ್ನೂ ಕಾವ್ಯವಾಗಿ ಹೇಳಬಹುದು ಕಾವ್ಯದೊಳಗೂ ಇತಿಹಾಸ ಹುದುಗಿರಬಹುದು. ಆದರೆ ಇದರಲ್ಲಿ ಇತಿಹಾಸದ ಭಾಗ ಎಷ್ಟು? ಕಾವ್ಯಭಾಗ ಎಷ್ಟು? ಎನ್ನುವುದನ್ನು ಸರಿಯಾಗಿ ಗ್ರಹಿಸುವ ಶಕ್ತಿ ನಮ್ಮಲ್ಲಿರಬೇಕು. ರಾಮಾಯಣ ಹಾಗೂ ಮಹಾಭಾರತ ಇವುಗಳು ನಡೆದ ಘಟನೆಗಳೆಂದು ನಂಬಬಹುದು. ಭೌಗೋಳಿಕವಾದ ಅನೇಕ ಸಾಕ್ಷಿಗಳು ಇಂದೂ ದೊರೆಯುತ್ತವೆ. ಆದರೆ ಎಲ್ಲವೂ ಕಾವ್ಯದಲ್ಲಿ ವರ್ಣಿಸಿದಂತೆಯೇ ನಡೆದಿರಬೇಕೆಂದಿಲ್ಲ. ಕವಿ ಕಾವ್ಯ ಸೌಂದರ್ಯಕ್ಕನುಗುಣವಾಗಿ ಹಾಗೂ ತಾನು ನೀಡಬೇಕಾದ ಸಂದೇಶಕ್ಕನುಗುಣವಾಗಿ ಅದರಲ್ಲಿ ಕೆಲವು ಉತ್ಪ್ರೇಕ್ಷೆಗಳನ್ನು ಮಾಡಿರಬಹುದು. ಕೆಲವು ವಿಷಯಗಳನ್ನು ಹೆಚ್ಚುವರಿಯಾಗಿ ಉಪ ಕಥೆಗಳನ್ನು ಸೇರಿಸಿಯೂ ಹೇಳಿರಬಹುದು. ಆದರೂ ಇದೊಂದು ನೈಜ ಘಟನೆಯಾಧಾರಿತ ಕಾವ್ಯ ಎನ್ನುವುದನ್ನು ನಾವು ನಂಬಬಹುದು. ಇದಕ್ಕೆ ಉತ್ಕನನದಲ್ಲಿ ಹಲವು ಸಾಕ್ಷಗಳನ್ನು ಸಂಗ್ರಹಿಸಲಾಗಿದೆ. ಸಮುದ್ರದೊಳಗಿನ ದ್ವಾರಕೆ, ರಾಮೇಶ್ವರದಲ್ಲಿ ರಾಮಸೇತು, ಅಯೋಧ್ಯೆ, ಕುರುಕ್ಷೇತ್ರ, ಶ್ರೀಲಂಕಾ ಇವೆಲ್ಲಾ ಸತ್ಯದ ಭೌಗೋಳಿಕ ಕುರುಹಾಗಿದೆ. ಅಂದಿನ ಅನೇಕ ಉಲ್ಲೇಖಿತ ಸ್ಥಳಗಳು ಇಂದಿಗೂ ಅದೇ ಹೆಸರಿನಲ್ಲಿ ಇರುವುದನ್ನು ನಾವು ಕಾಣಬಹುದು.

31. ಶ್ರೀ ರಾಮ, ಶ್ರೀ ಕೃಷ್ಣ, ಮುಂತಾದವರು ದೇವರ ಅವತಾರವೇ? ಅತವಾ ಮನುಷ್ಯರೇ?

ಶ್ರೀ ರಾಮ, ಶ್ರೀ ಕೃಷ್ಣ ಇವರುಗಳನ್ನು ನಾವು ಅವತಾರಪುರುಷರೆಂದು ಪೂಜಿಸತ್ತೇವೆ. ಇವರು ಮಾನವರೂಪದಲ್ಲಿಯೇ ಜನಿಸಿದ್ದಾರೆ. ಆದರೂ ತಮ್ಮ ಬದುಕಿನ ಆದರ್ಷದಿಂದ ದೈವತ್ವಕ್ಕೆ ಏರಿದವರಾಗಿದ್ದಾರೆ. ಮನುಷ್ಯರಲ್ಲಿ ಮಂದಮತಿಗಳೂ ಇರುತ್ತಾರೆ. ಇವರನ್ನು ದಡ್ಡರೆನ್ನುತ್ತೇವೆ. ಸಾಮಾನ್ಯರನ್ನು ಸಾಮಾನ್ಯರು ಎನ್ನುತ್ತೇವೆ. ಇನ್ನು ಚತುರಮತಿಗಳೂ ಇರುತ್ತಾರೆ ಇವರನ್ನು ಬುದ್ಧಿವಂತರೆಂದು ಪರಿಗಣಿಸುತ್ತೇವೆ. ಇನ್ನು ಉನ್ನತ ಆದರ್ಷಗಳನ್ನು ತೋರಿದ ಗೌರವಾನ್ವಿತರನ್ನು ಮಹಾತ್ಮರು ಎನ್ನುತ್ತೇವೆ. ಇವೆಲ್ಲವನ್ನೂ ಮೀರಿದ ಮನಸ್ಥಿತಿಯಲ್ಲಿ ಸ್ವಾರ್ಥರಹಿತವಾಗಿ ಬದುಕನ್ನು ಬದುಕಿ ಸಾಮಾನ್ಯರಿಂದ ಅಸಾಧ್ಯವಾದ ಅಸಾಮಾನ್ಯ ಸಾಧನೆಗಳನ್ನು ಮಾಡಿ ಸಮಾಜಕ್ಕೆ ಆದರ್ಶ ಮಾರ್ಗವನ್ನು ಹಾಕಿಕೊಟ್ಟವರನ್ನು ದೇವರ ಅವತಾರ ಎನ್ನುತ್ತೇವೆ. ಈ ರೀತಿಯಾಗಿಯೇ ಸಾಮಾನ್ಯ ಜನ್ಮದಲ್ಲಿ ಬಂದ ಶ್ರೀ ರಾಮ ಹಾಗೂ ಶ್ರೀ ಕೃಷ್ಣರು ದೈವತ್ವಕ್ಕೇರಿ ಮಾದರಿಯಾದ ವ್ಯಕ್ತಿಗಳಾಗಿದ್ದಾರೆ. ಇವರನ್ನು ವಿಷ್ಣುವಿನ ಅವತಾರ ವೆಂದು ಪೂಜಿಸುತ್ತೇವೆ. ಪ್ರಜಾಪರಿಪಾಲನೆ (ಸ್ಥಿತಿ) ವಿಷ್ಣುವಿನ ಕಾರ್ಯ. ರಾಮ, ಕೃಷ್ಣರೂ ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆ ಮಾಡಿದ್ದರಿಂದ ಇವರನ್ನು ವಿಷ್ಣುವಿನ ಅವತಾರ ಎಂದು ಪರಿಗಣಿಸಿದ್ದಾರೆ. ಸಮಾನ್ಯ ಮನುಷ್ಯರನ್ನು ಮೀರಿದ ದೈವಿಕ ಗುಣಗಳನ್ನು ಇವರು ತಮ್ಮ ಬದುಕಿನಲ್ಲಿ ಪ್ರದರ್ಷಿಸಿದ್ದಾರೆ. ಮತ್ತು ಹಾಗೆಯೇ ಬದುಕಿದ್ದಾರೆ. ಆದುದರಿಂದ ದೇವರಾಗಿ ಪೂಜಿಸಲ್ಪಡುತ್ತಿದ್ದಾರೆ, ಈ ಮಣ್ಣಿನಲ್ಲಿ ಮಹಾತ್ಮರೆಲ್ಲರೂ ಪೂಜೆಗೊಳ್ಳುವುದು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ಧರ್ಮ ರಕ್ಷಕರನ್ನೆಲ್ಲಾ ನಾವು ಅವತಾರಪುರುಷರೆಂದೇ ಪರಗಣಿಸಿದ್ದೇವೆ. ಭಗವದ್ಗೀತೆಯಲ್ಲಿ ಕೃಷ್ಣ ಈ ಮಾತನ್ನು ಹೇಳಿದ್ದಾನೆ.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|

ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್||

ಈ ಶ್ಲೋಕದ ಅರ್ಥ ಈ ರೀತಿಯಾಗಿದೆ. ಯಾವಾಗೆಲ್ಲಾ ಧರ್ಮವು ಅಧಃಪತನಹೊಂದುವುದೋ ಅಧರ್ಮದ ಪ್ರಾಬಲ್ಯವು ಹೆಚ್ಚುವುದೋ ಆಗ ನಾನು ಹುಟ್ಟಿಬರುತ್ತೇನೆ. ಆದುದರಿಂದಲೇ ನಾವು ಮಹಾಪುರುಷರನ್ನು ದೈವಾಂಶ ಸಂಭೂತರು. ಅವತಾರಪುರುಷರು ಎಂಬುದಾಗಿ ನಂಬುತ್ತೇವೆ.

32. ನಮ್ಮ ಪ್ರಾಚೀನ ಅಂದರೆ ವೇದಕಾಲೀನ ಸಂಸ್ಕೃತಿ ಹಾಗೂ ಆಧುನಿಕ ಸಂಸ್ಕೃತಿಯ ಮಧ್ಯೆ ಗುರುತಿಸಬಹುದಾದ ಮುಖ್ಯ ಬದಲಾವಣೆಯಾವುದು.

ವೇದಕಾಲೀನ ಪ್ರಾಚೀನ ಸಂಸ್ಕೃತಿಯಲ್ಲಿ ವಿಗ್ರಹಾರಾಧನೆ ಇರಲಿಲ್ಲ. ಪ್ರಕೃತಿಯ ಪೂಜೆಯು ನಡೆಯುತ್ತಿತ್ತು. ಪೂಜಾಪದ್ಧತಿಯು ಯಜ್ಞಯಾಗಾದಿಗಳಿಂದ ನಡೆಯುತ್ತಿತ್ತು. ಋಷಿಮುನಿಗಳು ಲೌಕಿಕದಿಂದ ದೂರವಾಗಿ ತಪಸ್ಸಿನ ಮೂಲಕ ಜ್ಞಾನಸಂಪಾದನೆ ಮಾಡಿ ಲೋಕಹಿತಕ್ಕಾಗಿ ಯಜ್ಞ ಯಾಗಾದಿಗಳಲ್ಲಿ ನಿರತರಾಗಿರುತ್ತಿದ್ದರು. ನದಿ ವನಗಳಿಂದ ಕೂಡಿರುವ ಪ್ರಶಾಂತ ಸ್ಥಳಗಳಲ್ಲಿ ಆಶ್ರಮಗಳನ್ನು ನಡೆಸಿಕೊಂಡು ವಿದ್ಯಾದಾನ ಮಾಡುತ್ತಾ ಉತ್ತಮ ಪ್ರಜೆಗಳನ್ನು ಸಮಾಜಕ್ಕೆನೀಡಿ ಮಾರ್ಗದರ್ಷನ ಮಾಡುತ್ತಿದ್ದರು. ಇಂತಹವರೇ ಮುಂದೆ ರಾಜಗುರುಗಳಾಗಿ ಧರ್ಮಮಾರ್ಗದ ತಿಳುವಳಿಕೆಯನ್ನು ರಾಜನಿಗೆ ನೀಡುತ್ತಿದ್ದರು. ವರ್ಣಾಶ್ರಮ ಪದ್ದತಿ ಜಾರಿಯಲ್ಲಿತ್ತು. ಜಾತಿಪದ್ದತಿ ಇರಲಿಲ್ಲ. ಅಸ್ಪೃಷ್ಯತೆ ಇರಲಿಲ್ಲ ಎಲ್ಲವೃತ್ತಿಗಳಿಗೂ ಗೌರವ ಮಾನ್ಯತೆ ಇತ್ತು. ನಾಲ್ಕುವರ್ಣಗಳೂ ಸಮತೋಲಿತವಾಗಿ ರಾಷ್ಟ್ರಹಿತ ಹಾಗೂ ಸಮಾಜ ಹಿತವೇ ಮುಖ್ಯವಾಗಿ ಸಹಕಾರದಿಂದ ಬದುಕುತ್ತಿದ್ದರು. ಜನರು ಸತ್ಯವಂತರೂ ಶೌರ್ಯವಂತರೂ, ತ್ಯಾಗಜೀವಿಗಳೂ, ಆತ್ಮಾಭಿಮಾನಿಗಳೂ, ಜ್ಞಾನಿಗಳೂ, ವಿಶಾಲಹೃದಯದವರೂ ಆಗಿದ್ದರು. ಭಾರತದೇಶ ಶ್ರೀಮಂತಿಕೆಯಿಂದ ಕೂಡಿತ್ತು ಸಂಪದ್ಭರಿತವಾಗಿತ್ತು.

ನಂತರದ ಕಾಲದಲ್ಲಿ ವೇದಾರ್ಥಗಳನ್ನು ಅಪಾರ್ಥಮಾಡಿಕೊಂಡ ಸಮಾಜವು. ಯಜ್ಞ ಯಾಗಾದಿಗಳಲ್ಲಿ ಹಿಂಸಾಮಾರ್ಗವನ್ನು ಅನುಸರಿಸಿತೆಂಬುದಾಗಿ ತಿಳಿಯುತ್ತೆವೆ. ಅಂತಹ ಸಮಯದಲ್ಲಿ ಸಾಂಸ್ಕೃತಿಕ ಪಲ್ಲಟವಾಗಿ ಬೌದ್ಧ ಹಾಗೂ ಜೈನ ಚಿಂತನೆಗಳು ಮುನ್ನೆಲೆಗೆ ಬಂದವು. ಇವುಗಳಿಂದ ಯಜ್ಞ ಯಾಗಾದಿಗಳು ತಿರಸ್ಕರಿಸಲ್ಪಟ್ಟು ವೈದಿಕ ಸಂಸ್ಕೃತಿ ಅವನತಿಯನ್ನು ಹೊಂದಿದಾಗ ಪ್ರಕೃತಿ ಆರಾಧನೆ ಹಾಗೂ ಯಜ್ಞಯಾಗಗಳು ಬದಲಾಗಿ ವಿಗ್ರಹಾರಾಧನೆ ಆರಂಭವಾಯಿತು. ಮುಂದೆ ದೇವಸ್ಥಾನಗಳು ರೂಪುಪಡೆದವು, ವೇದಾಧ್ಯಯನ ಮಾಡುತ್ತಿದ್ದ ಬ್ರಾಹ್ಮಣ ವರ್ಗ ಅರ್ಚಕರಾದರು ಆಶ್ರಮಗಳನ್ನು ನಿರ್ಮಸಿಕೊಂಡು ಅರಣ್ಯವಾಸಿಗಳಾಗಿರುತ್ತಿದ್ದ ಸನ್ಯಾಸಿಗಳು.  ನಗರವಾಸಿಗಳಾಗತೊಡಗಿದರು. ಮಠಗಳಲ್ಲಿ ವಾಸಿಸ ತೊಡಗಿದರು. ವರ್ಣಗಳು ವಿಕೃತಗೊಂಡು ಜಾತಿಗಳಾಗಿ ಮಾರ್ಪಟ್ಟವು. ದೇಶ ಪರಕೀಯರ ದಾಳಿಗೊಳಗಾಗಿ ಹಿಂದುಗಳ ಶ್ರಧ್ಧಾ ಸ್ಥಳಗಳ ಸಮೂಹಿಕ ನಾಶವಾದಾಗ ಸಮಾಜ ಬಹಳಷ್ಟು ಹಾನಿಗೊಂಡು ಅನೇಕ ಅನಿಷ್ಟಪದ್ದತಿಗಳು ಆಚರಣೆಯಲ್ಲಿ ಬಂದುವು. ಧಾರ್ಮಿಕ ಆಚರಣೆಗೆ ಮುಕ್ತ ಅವಕಾಶವಿಲ್ಲದೆ ರಾಜಾಶ್ರಯವಿಲ್ಲದೆ ಹಲವಾರು ವಿಚಾರಗಳಲ್ಲಿ ಸಮಾಜಕ್ಕೆ ಸರಿಯಾದ ಮಾರ್ಗದರ್ಶನ ಸಿಗದೆ ಸಮಾಜದಲ್ಲಿ ಹಲವು ಆಚರಣೆಗಳು ಅರ್ಥಅರಿಯದ ಆಚರಣೆಗಳಾದುವು. ಇದುವೇ ಮೂಢನಂಬಿಕೆಗಳಾಗಿ ಬೆಳೆಯಲು ದಾರಿಆಯಿತು. ಅಸ್ಪೃಷ್ಯತೆ ಅಜ್ಞಾನ ಜನರ ಮನಸ್ಸಿನಲ್ಲಿ ಮನೆಮಾಡತೊಡಗಿತು. ಜನರು ಕ್ಷಾತ್ರಹೀನರು, ಧರ್ಮಹೀನರೂ, ಅಪ್ರಾಮಾಣಿಕರೂ ಹೇಡಿಗಳೂ ಆಗತೊಡಗಿದರು. ದೇಶ ಬಡತನಕ್ಕೆ ದೂಡಲ್ಪಟ್ಟಿತು. ಶಿಕ್ಷಣ ಅದಃಪತನ ಹೊಂದಿತು. ಇಂದು ನಾವು ಹಿಂದಿನ ತಪ್ಪನ್ನು ಸರಿಪಡಿಸಿಕೊಂಡು ಮುಂದೆ ನಡೆಯುವ ಅಗತ್ಯವಿದೆ.

33. ಒಬ್ಬ ಹಿಂದು ತಾನು ಹಿಂದುವೆಂದು ಹೆಮ್ಮೆ ಪಡಲು ಹೇಗಿರಬೇಕು?

ಒಬ್ಬ ಸಾಮಾನ್ಯ ಮನುಷ್ಯ ಪರಿಪೂರ್ಣ ಹಿಂದು ಎನಿಸಿಕೊಳ್ಳಲು ಇಂದಿನ ಕಾಲದಲ್ಲಿ ಆತನು ನಾಲ್ಕು ವರ್ಣಗಳ ಸಮತೋಲಿತ ಪೂರ್ಣರೂಪನಾಗಿದ್ದು ನಾಲ್ಕೂ ವರ್ಣಗಳ ಗುಣಗಳ ಪ್ರತಿನಿಧಿಯಾಗಿರಬೇಕು. ಕಾಲದ ಅನಿವಾರ್ಯತೆಗನುಗುಣವಾಗಿ ಹಿಂಜರಿಕೆ, ಹೆದರಿಕೆ ಇಲ್ಲದೆ ನಾಲ್ಕೂ ವರ್ಣಗಳ ಕೊರತೆಯನ್ನು ನೀಗಿಸುವಷ್ಟು ಪರಿಪಕ್ವನಾಗಿರಬೇಕು. ಅಸಮಾನತೆ, ಅಸ್ಪೃಷ್ಯತೆ, ಮೆಲರಿಮೆ, ಕೀಳರಿಮೆ ಆತನ ಮನಸ್ಸಿನಲ್ಲಿ ಸುಳಿಯಬಾರದು, ಆತ ಜ್ಞಾನಿಯೂ, ಪರಾಕ್ರಮಿಯೂ, ವ್ಯಹಾರಚತುರನೂ ಹಾಗೂ ಪರಿಶ್ರಮಿಯೂ ಆಗಿರಬೇಕು. ಧರ್ಮಮಾರ್ಗದಿಂದ ಬದುಕಬೇಕು. ಅಧರ್ಮದ ವಿರುದ್ಧ ನಿರಂತರ ಹೋರಾಡಲು ಸಿದ್ದನಿರಬೇಕು. ನಮ್ಮ ಸಂಸ್ಕೃತಿಯಮೇಲಾಗುತ್ತಿರುವ ಆಕ್ರಮಣಗಳನ್ನು ಹಿಮ್ಮೆಟ್ಟಿಸಬೇಕು. ಈ ಎಲ್ಲಾ ಗುಣಗಳಿರುವವನೇ ಹೆಮ್ಮೆಪಡಬಹುದಾದ ಆದರ್ಷ ಹಿಂದು ಎನ್ನಿಸಿಕೊಳ್ಳುವನು.  

34. ನಾವು ಹಿಂದು ಸ್ವಾಭಿಮಾನಿಗಳೆಂದು ನಿರೂಪಿಸುವುದು ಹೇಗೆ? ಸಾಮಾನ್ಯ ಹಿಂದುವಿನ ವ್ಯಕ್ತಿಗತ ಕನಿಷ್ಟ ಸಾಂಸ್ಕೃತಿಕ ಬಾಹ್ಯ ಲಕ್ಷಣ ಹೇಗಿರಬೇಕು?

ಸ್ವಾಭಿಮಾನವೆಂದರೆ ತನ್ನ ಹಿರಿಯರು ನಡೆದುಬಂದ ದಾರಿ, ಅನುಸರಿಸಿಕೊಂಡು ಬಂದ ಸಂಪ್ರದಾಯ, ತನ್ನ ವ್ಯಕ್ತಿತ್ವ, ಕುಟುಂಬ, ಊರು, ಭಾಷೆ, ದೇಶ, ಧರ್ಮ, ಸಂಸ್ಕೃತಿಯ ಬಗ್ಗೆ ಹೆಮ್ಮೆ ಹಾಗೂ ಅಭಿಮಾನ ಹೊಂದಿರುವುದಾಗಿದೆ. ನಮ್ಮನ್ನು ನೋಡಿದಕೂಡಲೇ ನಾವು ಹಿಂದುಗಳೆಂದು ಅನ್ಯರಿಗೆ ತಿಳಿಯಬೇಕು. ನಮಗೆ ಕೀಳರಿಮೆ ಇರಬಾರದು. ಇನ್ನೊಬ್ಬ ಹಿಂದುವನ್ನು ನೋಡದ ಕೂಡಲೇ ಇವನು ನಮ್ಮವನೆಂಬ ಭಾವನೆ ನಮ್ಮಲ್ಲಿ ಬರಬೇಕು. ಇದಕ್ಕೆ ನಾವು ಮಾಡಬಹುದಾದ ಕನಿಷ್ಟ ಸಂಸ್ಕಾರಗಳು. ಹಣೆಯಲ್ಲಿ ಸದಾ ತಿಲಕ ಧಾರಣೆಮಾಡುವುದು. ನಿತ್ಯ ಅನುಷ್ಠಾನ ಮಾಡುವುದು. ನಮಗೆ ನಮ್ಮ ದೇಶದ ಬಗ್ಗೆ ಇಲ್ಲಿನ ವಸ್ತುಗಳಬಗ್ಗೆ ಅಭಿಮಾನವಿರಬೇಕು. ನಾವು ಸಾಧ್ಯವಾದಷ್ಟು ಸಭ್ಯ ಸ್ವದೇಶೀ ಶೈಲಿಯ ಬಟ್ಟೆಗಳನ್ನು ತೊಡುವುದು. ಸ್ವದೇಶೀ ಒಸ್ತುಗಳನ್ನೇ ಸಾಧ್ಯವಾದಷ್ಟು ಗರಿಷ್ಟ ಪ್ರಮಾಣದಲ್ಲಿ ಅಭಿಮಾನದಿಂದ ಬಳಸುವುದು. ಸ್ವದೇಶೀ ಭಾಷೆಯನ್ನೇ ಮಾತನಾಡುವುದು.  ಸ್ವಚ್ಚವಾಗಿರುವುದು ಹಾಗೂ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದು. ಕೈಯಿ ಬಾಯಿಗಳನ್ನು ಶುದ್ಧವಾಗಿಟ್ಟುಕೊಳ್ಳುವುದು. ಸಜ್ಜನನಾಗಿರುವುದು, ಸ್ವಜನ ಪಕ್ಷಪಾತಿಯಾಗದೆ ನ್ಯಾಯವನ್ನು ಬೆಂಬಲಿಸುವುದು, ಅನ್ಯಾಯವನ್ನು ವಿರೋಧಿಸುವುದು. ಪುರುಷರು ಕೈಯಲ್ಲಿ ನಿತ್ಯ ರಕ್ಷಾ ಬಂಧನದ ಪವಿತ್ರದಾರವನ್ನು ಧರಿಸುವುದು. ಸ್ತ್ರೀಯರು ಕೈಗೆ ಬಳೆಗಳನ್ನು ಧರಿಸುವುದು. ತಲೆಗೆ ಹೂಮುಡಿಯುವುದು. ಸುಂಗಲೆಯರು ಮಾಂಗಲ್ಯ, ಮಂಗಳ ಸೂತ್ರ ಧರಿಸುವುದು. ಇವು ಸಾಮಾನ್ಯ ಹಿಂದುಗಳ ಸಾಂಸ್ಕೃತಿಕ ಸ್ವಾಭಿಮಾನದ ಕೆಲವು ಕನಿಷ್ಟ ಲಕ್ಷಣಗಳಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಭಾರತೀಯ ಅಭಿರುಚಿಯ ವಸ್ತ್ರಗಳನ್ನು ಧರಿಸುವುದು ಹಾಗೂ ಮಕ್ಕಳಿಗೆ ನಮ್ಮ ಸಾಂಸ್ಕೃತಿಕ ಸಂಸ್ಕಾರವನ್ನು ಕಲಿಸುವದು. ವ್ಯವಹಾರದ ಸ್ಥಳದಲ್ಲಿ ದೇವರ ಫೋಟೋ ಇಟ್ಟು ಕೈ ಮುಗಿಯುವುದು. ಸಂಸ್ಕೃತವನ್ನು ಒಂದು ಭಾಷೆಯಾಗಿ ಕಲಿಯುವುದು. ವಾರಕ್ಕೊಮ್ಮೆಯಾದರೂ ದೇವಾಲಯಕ್ಕೆ ಕುಟುಂಬಸಹಿತ ಭೇಟಿ ನೀಡುವುದು. ಭಗವದ್ಗೀತೆಯನ್ನು ಅಧ್ಯಯನ ಮಾಡುವುದು. ಮನೆಯಲ್ಲಿ ನಿತ್ಯ ಭಜನೆ ಮಾಡುವುದು ಮುಂತಾಗಿ ನಿತ್ಯರೂಢಿಯಲ್ಲಿ ಅನುಸರಿಸುವುದರಿಂದ ನಮ್ಮಲ್ಲಿ ಹಿಂದುಗಳೆಂಬ ಭಾವ ಜಾಗ್ರತವಾಗುತ್ತದೆ.

35. ಸಾಮಾನ್ಯ ಹಿಂದುವಿನ ಮನೆ ಹಾಗೂ ಆತನ ನಿತ್ಯಕರ್ಮ ಕನಿಷ್ಟ ಹೇಗಿರಬೇಕು?

ಮನೆ ಎದುರು ತುಳಸಿಗಿಡ ಇರಬೇಕು. ಮನೆ ಎದುರು ಹಾಗೂ ದೇವರ ಎದುರು ರಂಗವಲ್ಲಿ ಹಾಕಬೇಕು. ದೇವರ ಪೂಜೆಗೆ ಸ್ವತಃ ಬೆಳೆದ ಹೂವುಗಳನ್ನು ಬಳಸಬೇಕು. ಇದಕ್ಕಾಗಿ ಹೂವಿನ ಗಿಡಗಳನ್ನು ಬೆಳೆಸಿರಬೇಕು. ಮನೆಯಲ್ಲಿ ದೇವರಕೋಣೆ ಹಾಗೂ ಇಷ್ಟದೇವರ ವಿಗ್ರಹ ಇಲ್ಲವೇ ಚಿತ್ರಪಟಗಳಿರಬೇಕು. ಹಾಗೂ ಇಷ್ಟಗುರುಗಳ ಚಿತ್ರಪಟ ಇರಬೇಕು. ನಿತ್ಯ ಸ್ನಾನದ ನಂತರ ಶುಭ್ರವಾದ ಬಟ್ಟೆ ಧರಿಸಿ ಮನೆಯ ಸದಸ್ಯರೊಬ್ಬರು (ಪುರುಷ ಮಹಿಳೆ ಮಕ್ಕಳು ಯಾರಾದರೊಬ್ಬರು) ಮನೆ ದೇವರಿಗೆ ಪೂಜಿಸಬೇಕು. ಕನಿಷ್ಟಪೂಜಾ ಪದ್ದತಿಯನ್ನು ಅಭ್ಯಾಸಮಾಡಬೇಕು. ದೇವರಿಗೆ ದೀಪ ಹಚ್ಚಬೇಕು ಘಂಟೆ ಶಂಖಗಳ ನಾದ ಮೊಳಗಬೇಕು. ದಿನದಲ್ಲಿ ಸ್ವಲ್ಪಹೊತ್ತು ಕನಿಷ್ಠ ಅರ್ಧ ಘಂಟೆ ಧ್ಯಾನ, ನಾಮಜಪ, ಭಜನೆ ಧಾರ್ಮಿಕ ಪುಸ್ತಕ ಅಧ್ಯಯನ ಇವುಗಳಲ್ಲೊಂದಕ್ಕೆ ಮೀಸಲಿಡಬೇಕು. ಯೋಗ, ಸಂಗೀತ, ಕಲೆ, ಇವುಗಳಲ್ಲೊಂದು ಹವ್ಯಾಸವಾಗಿರಬೇಕು. ವಾರಕ್ಕೊಮ್ಮೆ ಕುಟುಂಬ ಸಮೇತ ಸಾಂಪ್ರದಾಯಿಕ ವಸ್ತ್ರ ಧರಿಸಿ ದೇವಸ್ಥಾನಕ್ಕೆ ಹೋಗಬೇಕು. ವರುಷಕ್ಕೊಮ್ಮೆಯಾದರೂ ಕುಲದೇವರ ದರ್ಷನ ಮಾಡಬೇಕು. ಜೀವನದಲ್ಲೊಮ್ಮೆಯಾದರೂ ತೀರ್ಥಯಾತ್ರೆ ಮಾಡಬೇಕು. ಹಬ್ಬಗಳನ್ನು, ಹಿರಿಯರ ದಿನಗಳನ್ನು ಆಚರಿಸಬೇಕು. ವರ್ಷದಲ್ಲಿ ಒಮ್ಮೆಯಾದರೂ ಮನೆಯಲ್ಲಿ ದೇವರ ಪೂಜೆ ಮಾಡಿಸಿ ವಿಶ್ವಾಸಿಕರನ್ನು ಆಹ್ವಾನಿಸಿ ಅನ್ನದಾನದಿಂದ ಸತ್ಕರಿಸಬೇಕು. ಧಾರ್ಮಿಕ ಗ್ರಂಥಗಳನ್ನು ಸಂಗ್ರಹಿಸಿ ಓದಬೇಕು. ಮಕ್ಕಳಿಗೆ ತಿಳಿಸಿಕೊಡಬೇಕು ಸಂಪ್ರದಾಯಗಳನ್ನು ಕಲಿಸಬೇಕು. ಕುಟುಂಬದ ನಡಾವಳಿ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಊರಿನ ನಡಾವಳಿಗಳಲ್ಲಿ ಭಾಗವಹಿಸಬೇಕು ಹಾಗೂ ಸಹಕಾರ ನೀಡಬೇಕು. ಸಾಂಸ್ಕೃತಿಕ ಹಾಗೂ ಜಾನಪದ ಕಲೆ ಕ್ರೀಡೆ ಸಂಪ್ರದಾಯಗಳನ್ನು ಪ್ರೋತ್ಸಾಹಿಸಿ ಉಳಿಸಿಕೊಂಡು ಮುಂದುವರಿಸಿಕೊಂಡು ಹೋಗಬೇಕು. ಸಂಸ್ಕೃತ ಭಾಷೆಯನ್ನು ಕಲಿಯುವುದು ಮತ್ತು ಮಾತನಾಡುವುದು ನಮ್ಮ ಹವ್ಯಾಸಗಳಲ್ಲಿ ಒಂದಾಗಬೇಕು.

36. ಹಿಂದುಗಳಾದ ನಾವು ಪವಿತ್ರ ಧಾರ್ಮಿಕ ಗ್ರಂಥವೆಂದು ಯಾವುದನ್ನು ಪರಿಗಣಿಸಬೇಕು?

ಭಗವದ್ಗೀತೆಯನ್ನು ನಮ್ಮ ಪವಿತ್ರ ಧಾರ್ಮಿಕ ಗ್ರಂಥ ಎಂಬುದಾಗಿ ಪರಿಗಣಿಸಬೇಕು.  ಭಗವದ್ಗೀತೆಯ ಬಗ್ಗೆ ವಿಶೇಷ ಅಧ್ಯಯನದಿಂದ ಜ್ಞಾನವನ್ನು ಹೊಂದಬೇಕು. ಭಗವದ್ಗೀತೆಯನ್ನು ನಮ್ಮ ಮಕ್ಕಳಿಗೂ ಕಲಿಸಬೇಕು. ಭಗವದ್ಗೀತೆಯಲ್ಲಿ 18 ಅಧ್ಯಾಯಗಳೂ 700 ಶ್ಲೋಕಗಳೂ ಇವೆ. ಇವುಗಳಲ್ಲಿ ನಮ್ಮ ಸಂಘಟನೆಯಲ್ಲಿ ಆಯ್ದ 36 ಶ್ಲೋಕಗಳನ್ನು ಸುಚಿಸಲಾಗಿದ್ದು. ಕನಿಷ್ಟ ಅವಿಷ್ಟನ್ನಾದರೂ ಪ್ರತಿಯೊಬ್ಬರೂ ಕಲಿಯಬೇಕು. ಮಕ್ಕಳಿಗೆ ಕಲಿಸಬೇಕು. ಇದರೊಂದಿಗೆ ರಾಮಾಯಣ, ಮಹಾಭಾರತ, ಹಾಗೂ ಪುರಾಣಗಳ ಕಥೆಗಳ ಪ್ರಾಥಮಿಕ ಜ್ಞಾನವೂ ಇರಬೇಕು. ವಿಶೇಷ ಆಸಕ್ತರು ವೇದಾಧ್ಯಯನ ಮಾಡಬಹುದು. ಆದರೆ ಅರ್ಚಕವೃತ್ತಿಯವರು ಕಡ್ಡಾಯವಾಗಿ ವೇದಾಧ್ಯಯನ ಮಾಡಲೇ ಬೇಕು. ದೇವಾಲಯಗಳ ಆಡಳಿತ ಮಂಡಳಿಯ ಸದಸ್ಯರು ಸಂಸ್ಕೃತ ಭಾಷೆಯ ಕನಿಷ್ಟ ಜ್ಞಾನ ಹೊಂದಬೇಕು. ಸಂಸ್ಕೃತ ಕಲಿಯಲು ಯಾವುದೇ ಜಾತಿಯ ಹಿಂಜರಿಕೆಗಳಿರಬಾರದು ಸಂಸ್ಕೃತಿ, ಸಂಸ್ಕಾರ ಹಾಗೂ ಚಾರಿತ್ರ್ಯ ಶುದ್ಧತೆ ಇವುಗಳು ನಮ್ಮ ಯೋಗ್ಯತೆಯನ್ನು ಹೆಚ್ಚಿಸುತ್ತವೆ.

37. ಹಿಂದುಗಳು ಯಾವ ಭಾಷೆಯನ್ನು ಹೆಚ್ಚುವರಿಯಾಗಿ ದ್ವೀತೀಯ ಭಾಷೆಯಾಗಿ ಕಲಿಯಬೇಕು?

ಪ್ರತಿಯೊಬ್ಬ ಭಾರತೀಯನೂ ನಮ್ಮ ಸಂಸ್ಕೃತಿಯನ್ನು ಉಳಿಸಲು ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆಯಬೇಕು. ಆಂಗ್ಲಭಾಷೆಯನ್ನು ವ್ಯಾವಹಾರಿಕ ದೃಷ್ಟಿಯಿಂದ ಕಲಿತರೂ ಅದನ್ನು ಉದ್ಯೋಗಕ್ಕಷ್ಟೇ ಸೀಮಿತವಾಗಿಸಬೇಕು. ನಮ್ಮ ನಿತ್ಯ ವ್ಯವಹಾರದಲ್ಲಿ ಮನೆಯಲ್ಲಿ ಮಕ್ಕಳೊಂದಿಗೆ ಮಾತೃಭಾಷೆಯನ್ನೇ ಮಾತನಾಡಬೇಕು. ಮಾತೃಭಾಷೆಯ ನಂತರ ದ್ವಿತೀಯ ಆದ್ಯತೆಯಾಗಿ ದೇವರ ಭಾಷೆ ಎನ್ನಲಾಗುವ ಸಂಸ್ಕೃತವನ್ನು ವಿಶೇಷ ಸಾಂಸ್ಕೃತಿಕ ಭಾಷೆಯಾಗಿ ಹಿಂದುಗಳು ಪ್ರತಿಯೊಬ್ಬರೂ ಕಲಿಯಬೇಕು. ಸಂಸ್ಕೃತ ಇದ್ದಲ್ಲಿ ಸಂಸ್ಕೃತಿ ಇದೆ ಸಂಸ್ಕೃತಿ ಇದ್ದಲ್ಲಿ ಸಮೃದ್ಧಿ ಇದೆ. ಪ್ರಾಚೀನ ಸಂಸ್ಕೃತ ಸಾಹಿತ್ಯದ ಅಧ್ಯಯನವನ್ನು ಅದೇ ಭಾಷೆಯಲ್ಲಿ ಮಾಡುವಷ್ಟು ಪ್ರಭುದ್ಧರಾಗಬೇಕು.

38. ನಮ್ಮ ಪುರಾಣ ಕಥೆಗಳು ಧಾರ್ಮಿಕ ಗ್ರಂಥಗಳು ಭಗವದ್ಗೀತೆ ಇವುಗಳ ಸಹಜ ಸಂದೇಶವೇನು?

ಪ್ರಕೃತಿ ಸ್ನೇಹಿಯಾಗಿ ಬದುಕಬೇಕು. ಬದುಕಿನಲ್ಲಿ ಅಹಿಂಸೆಗೆ ಹೆಚ್ಚಿನ ಮಹತ್ವಕೊಡಬೇಕು. ದುರ್ಜನರ ಮರ್ದನಕ್ಕೆ ಅಹಿಂಸಾ ಸಿದ್ಧಾಂತ ಅಡ್ಡಿಯಾಗಬಾರದು. ದುಷ್ಟರು ಸ್ವಬಾಂಧವರಾದರೂ ಅವರಬಗ್ಗೆ ಕನಿಕರ ತೋರಬಾರದು. ನಿತ್ಯ ಜೀವನ ನಿರ್ವಹಣೆಯಲ್ಲಿ ಅನಿವಾರ್ಯಸಂದರ್ಭದಲ್ಲಿ ಕನಿಷ್ಟ ಹಿಂಸೆಯು ಪಾಪವಾಗಲಾರದು. ಉದಾ ಕೃಷಿ ಕಾರ್ಯದಲ್ಲಿ ಎತ್ತುಗಳ ಬಳಕೆ ಮುಂತಾದುವು.  ಫಲಾಪೇಕ್ಷೆ ಇಲ್ಲದೆ ಕರ್ತವ್ಯವೆಂಬುದಾಗಿ ಕರ್ಮ ಮಾಡಬೇಕು. ಯಾವಾಗಲೂ ಹೇಡಿಯಾಗಬಾರದು. ಧರ್ಮದ, ದೇಶದ, ಸಂಸ್ಕೃತಿಯ ವಿಚಾರ ಬಂದಾಗ ಕ್ಷಾತ್ರವೃತ್ತಿ ಪ್ರತಿಯೊಬ್ಬರಲ್ಲೂ ಜಾಗ್ರತವಾಗಬೇಕು. ಹೋರಾಡುವ ಸಮಯ ಬಂದರೆ ಪ್ರಾಣತ್ಯಾಗಕ್ಕೂ ಸಿದ್ಧನಿರಬೇಕು. ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸಕ್ಕೆ ಖಂಡಿತಾ ಫಲ ದೊರೆಯುವುದು. ಇದನ್ನು ಪರೋಪಕಾರಿಗಳ ಬದುಕಿನಲ್ಲಿ ನೋಡಬಹುದು. ಅಧರ್ಮದ ವಿರುದ್ಧ ಜೀವದ ಹಂಗುತೊರೆದು ಶಸ್ತ್ರಧಾರಿಗಳಾಗಿ ಹೋರಾಟಮಾಡಬೇಕು. ಅಧರ್ಮವನ್ನು ಪಾಲಿಸುತ್ತಿರುವ ಜನರೊಂದಿಗೆ ಕರುಣೆ ಸಲ್ಲದು. ಇದುವೇ ನಮ್ಮ ಧಾರ್ಮಿಕ ಗ್ರಂಥಗಳ ಭಗವದ್ಗೀತೆಯ ಸಾರ. ದುಷ್ಟನಿಗ್ರಹ ಶಿಷ್ಟ ಪರಿಪಾಲನೆಗಾಗಿಯೇ ನಮ್ಮೆಲ್ಲಾ ದೇವ ದೇವತೆಗಳ ಕೈಯ್ಯಲ್ಲಿ ಆಯುಧಗಳಿವೆ. ಇದನ್ನು ನೆಪಿಸುವ ಸಲುವಾಗಿಯೇ ದಸರಾ ಸಂದರ್ಭದಲ್ಲಿ ನಾವು ಆಯುಧಪೂಜೆ ಮಾಡುತ್ತೇವೆ. ನಾವು ಧರ್ಮರಕ್ಷಣೆಗಾಗಿ ಕ್ಷತ್ರಗುಣವನ್ನು ಪುನಃ ಬೆಳೆಸಿಕೊಳ್ಳಬೇಕಿದೆ. ಇದುವೇ ನಮ್ಮ ಪುರಾಣಗಳು ಹಾಗೂ ಭಗವದ್ಗೀತೆಯ ಸಂದೇಶವಾಗಿದೆ.

39. ಹಿಂದುಗಳಿಗೆ ಎಂತಹ ಧಾರ್ಮಿಕ ಶಿಕ್ಷಣ ಬೇಕು?

ಹಿಂದುಗಳಿಗೆ ಧರ್ಮರಕ್ಷಣೆಗಾಗಿ, ಕ್ಷಾತ್ರಗುಣ ಪೂರಕ ಶಿಕ್ಷಣ ಬೇಕು. ಪರಿಸರಸ್ನೇಹಿ, ನೈತಿಕ ಶಿಕ್ಷಣ ಬೇಕು. ದೇಶಭಕ್ತಿ, ಕರ್ತವ್ಯ ಪ್ರಜ್ಞೆ, ಸ್ವಾಭಿಮಾನ, ಹಾಗೂ ಸಜ್ಜನರಿಗೆ ಸಹಾಯಮಾಡುವಂತೆ ಪ್ರೇರೇಪಿಸುವ ಮೌಲ್ಯಯುತ ಧಾರ್ಮಿಕ ಶಿಕ್ಷಣ ಬೇಕು. ನಾಲ್ಕುವರ್ಣಗಳ ಗುಣಗಳನ್ನು ನಮ್ಮಲ್ಲಿ ತುಂಬುವ ಉತ್ತೇಜಿಸುವ ಎಲ್ಲಸಜ್ಜನರನ್ನೂ ಸಮಾನವಾಗಿನೋಡುವ ವೈಚಾರಿಕ ಮಾರ್ಗದರ್ಶನಬೇಕು. ದುಷ್ಟರನ್ನು, ದೇಶದ್ರೋಹಿಗಳನ್ನೂ, ಧರ್ಮದ್ರೋಹಿಗಳನ್ನೂ ಗುರುತಿಸುವ ಕೌಶಲ್ಯದ ಶಿಕ್ಷಣಬೇಕು. ದುಷ್ಟರನ್ನು ಹಿಮ್ಮಟ್ಟಿಸುವ ಹಾಗೂ ಆತ್ಮರಕ್ಷಣೆ ಮಾಡಿಕೊಳ್ಳುವ ಶಸ್ತ್ರ ಹಾಗೂ ಸಮರಕಲೆಯ ಶಿಕ್ಷಣವೂ ಬೇಕು. ನಾಲ್ಕುಗುಣ ವರ್ಣಗಳು 1 ಜ್ಞಾನ (ತೇಜಸ್ಸು) 2.ಶೌರ್ಯ (ಕ್ಷಾತ್ರ) 3.ವಾಣಿಜ್ಯ ಚಾತುರ್ಯ (ವೈಶ್ಯ) 4. ಪರಿಶ್ರಮ (ಶೂದ್ರ) ಈ ನಾಲ್ಕು ಶ್ರೇಷ್ಠ ವರ್ಣಗಳನ್ನೂ ನಮ್ಮೆಲ್ಲರಲ್ಲಿಯೂ ಜಾಗ್ರತ ಗೊಳಿಸುವಂತಹ ಶಿಕ್ಷಣ ನಮಗೆಬೇಕು. ನಾಲ್ಕು ವರ್ಣದ ಗುಣಗಳು 1. ಬ್ರಾಹ್ಮಣ = ಅಜ್ಞಾನದ ವಿರುದ್ಧ ಹೋರಾಡುವುದು. 2. ಕ್ಷತ್ರಿಯ = ಅನ್ಯಾಯದ ವಿರುದ್ಧ ಹೋರಾಡುವುದು. 3. ವೈಶ್ಯ = ಅಭಾವದ ವಿರುದ್ಧ ಹೋರಾಡುವುದು 4. ಶೂದ್ರ = ಆಲಸ್ಯದ ವಿರುದ್ಧ ಹೋರಾಡುವುದು. ಈ ನಾಲ್ಕೂ ಗುಣ ಗಳು ಪ್ರತಿ ಹಿಂದುವಿನಲ್ಲಿಯೂ ಜಾಗ್ರತವಾಗಿರಬೇಕು. ಇದನ್ನು ಕಲಿಸುವ ಶಿಕ್ಷಣಬೇಕು. ಶಿಕ್ಷಣ ಹಣಮಾಡುವುದನ್ನು ಕಲಿಸುವುದಲ್ಲ ನೈತಿಕತೆಯಿಂದ ಬದುಕುವುದನ್ನು ಕಲಿಸಬೇಕು. ನಮ್ಮ ಶಾಸ್ತ್ರಗಳು  ನೂರುಕೈಗಳಲ್ಲಿ ದುಡಿ ಸಾವಿರ ಕೈಗಳಲ್ಲಿ ದಾನಮಾಡು ಎನ್ನುತ್ತವೆ. ನಾನು ದುಡಿದ್ದು ಸಾಕೆಂದು ಸುಮ್ಮನೆ ಮನೆಯಲ್ಲಿಯೂ ಕೂರಬಾರದು. ದುಡಿಮೆ ನಿಲ್ಲಿಸಿದನಂತರ ಸಮಾಜ ದೇಶ ಹಾಗೂ ಧರ್ಮದ ಕೆಲಸದಲ್ಲಿ ನಮ್ಮ ಸಮಯವನ್ನು ತೊಡಗಿಸಿಕೊಂಡು ಪರೋಪಕಾರಿಯಾಗಿ ಬದುಕುತ್ತಾ. ಸಮಾಜಕ್ಕೆ ಆದರ್ಶವಾಗಬೇಕು. ಶಿಕ್ಷಣ ಇಂತಹ ವಿಚಾರಗಳನ್ನು ಕಲಿಸಬೇಕು.

40. ಹಿಂದು ಸಮಾಜಕ್ಕೆ ಇಂದು ಸೂಕ್ತ ಧಾರ್ಮಿಕ ಶಿಕ್ಷಣ ಸಿಗದಿರಲು ಕಾರಣ ಏನು?

ಹಿಂದು ಸಮಾಜಕ್ಕೆ ಇಂದು ಸೂಕ್ತ ಧಾರ್ಮಿಕ ಶಿಕ್ಷಣ ಸಿಗದಿರಲು ಹಲವು ಕಾರಣಗಳಿವೆ ಮುಖ್ಯವಾಗಿ

1. ವಿದೇಶೀ ಲೂಟಿಕೋರರಾದ ಪರಮತೀಯರ ಅಕ್ರಮ ಆಡಳಿತದಲ್ಲಿ ನಮ್ಮ ನಂಬಿಕೆಗಳನ್ನು ನಾಶಮಾಡುವ ಪ್ರಯತ್ನನಡೆಯಿತು. ನಮ್ಮ ಪಾರಂಪರಿಕ ಆಚರಣೆಗಳೆಲ್ಲವನ್ನೂ ಕಂದಾಚಾರ ಮೂಢನಂಬಿಕೆ ಎಂದು ಬಿಂಬಿಸಿ ನಮ್ಮಸಂಸ್ಕೃತಿಯ ಬಗ್ಗೆ ಹಿಂದುಗಳಲ್ಲಿ ಕೀಳರಿಮೆಯನ್ನು ಮೂಡಿಸಲಾಯಿತು.

2. ಅಸ್ಪೃಷ್ಯತೆ ಜಾತೀಯತೆ ಸಮಾಜದಲ್ಲಿ ಅನಿಷ್ಟಪದ್ದತಿಯಾಗಿ ಬೆಳೆದಿದ್ದು, ಹಿಂದೂರಾಷ್ಟ್ರವನ್ನು ಧರ್ಮದ್ರೋಹಿ ಕಾಂಗ್ರೇಸ್ ಸರಕಾರದಲ್ಲಿ ಮುಸಲ್ಮಾನ ಫಿರೋಜ್ ಖಾನನ ಹೆಂಡತಿಯಾದ ಮೈಮುನಾ ಬೇಗಂ ಯಾನೆ ಇಂದಿರಾಗಾಂಧಿ ಜಾತ್ಯಾತೀತ ರಾಷ್ಟ್ರ ಎಂಬುಬುದಾಗಿ ಬದಲಾಯಿಸಿ ಹಿಂದುಗಳನ್ನು ದ್ವಿತೀಯದರ್ಜೆಯ ಪ್ರಜೆಗಳಂತೆ ನಡೆಸಿಕೊಂಡರು. ಹಿಂದೂ ದೇವಾಲಯಗಳನ್ನು ಸರಕಾರೀಕರಣ ಗೊಳಿಸಿ ಹಿಂದೂಗಳ ಆದಾಯವನ್ನು ದೋಚಿದರು. ಮಸೀದಿ ಚರ್ಚುಗಳನ್ನು ಸ್ವತಂತ್ರವಾಗಿ ಬೆಳೆಯಲು ಬಿಟ್ಟರು.

3. ಹಿಂದೂ ವಿರೋಧಿ ಕಾಂಗ್ರೇಸ್ ನಮ್ಮ ಶಿಕ್ಷಣದಿಂದ ಧರ್ಮವನ್ನು ಬೇರ್ಪಡಿಸಿತು ಹಿಂದೂ ಸಂಸ್ಕೃತಿಯನ್ನು ಕಲಿಸದಂತೆ ತಡೆಯಿತು. ಭಾರತದಲ್ಲಿ ಶಿಕ್ಷಣವಿದೆ ಶಿಕ್ಷಣದಲ್ಲಿ ಬಾರತವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಯಿತು.

4. ಹೆಚ್ಚಿನ ಮಠಾಧೀಶರು ಪುರೋಹಿತರು ಧರ್ಮದ ನೈಜ ಅರ್ಥವನ್ನು ಕಡೆಗಣಿಸಿ ಕೇವಲ ದೇವರೊಂದಿಗೆ ಧರ್ಮವನ್ನು ಬೆಸೆದು ತಮ್ಮ ಶ್ರದ್ಧೆಯನ್ನು ಭಕ್ತಿಗೆ ಸೀಮಿತ ಮಾಡಿದರು. ಹಲವು ಧಾರ್ಮಿಕ ಶ್ರಧ್ದಾಕೇಂದ್ರಗಳು ಆಡಂಬರಗಳಿಗೆ ಮನ್ನಣೆ ನೀಡುತ್ತಾ ನಿಧಾನವಾಗಿ ವಾಣಿಜ್ಯ ರೂಪ ಪಡೆಯತೊಡಗಿತು.

5. ಹಲವು ಧಾರ್ಮಿಕ ಮುಖಂಡರು ಧರ್ಮದ ಹಿತಾಸಕ್ತಿಯನ್ನುಮರೆತು ತಮ್ಮ ಆಚಾರ್ಯರ ಮತಪ್ರಚಾರದಲ್ಲಿ ತೊಡಗಿ ಧಾರ್ಮಿಕ ಸಾಹಿತ್ಯವನ್ನು ತಮಗೆ ಬೇಕಾದಂತೆ ತಮ್ಮ ಅಭಿಪ್ರಾಯಸ ಮರ್ಥನೆಗೆ ಅನುಗುಣವಾಗಿ ರಚಿಸಿ ಸಮಾಜವವನ್ನು ಒಡೆದು ಗೊಂದಲಕ್ಕೆ ದೂಡಿದರು.

6. ಯುವ ಜನರಲ್ಲಿ ಪಾಶ್ಚಾತ್ಯ ವ್ಯಾಮೋಹ ಬೆಳೆಯಿತು ಹಾಗೂ ಪಾಶ್ಚಾತ್ಯ ಸಂಸ್ಕೃತಯನ್ನೇ ಮಾಧ್ಯಮಗಳ ಜನರು ವೈಭವೀಕರಿಸಿದರು.

7. ಉತ್ತಮರಾದ ಪ್ರತಿಫಲಾಪೇಕ್ಷೆ ಇಲ್ಲದ ಧಾರ್ಮಿಕ ಮಾರ್ಗದರ್ಷಕರು ನಮ್ಮ ಧರ್ಮದಲ್ಲಿ ವಿರಳವಾಗಿರುವುದು ಮತ್ತು ಧರ್ಮ ಪ್ರಚಾರಕ್ಕೆ ಸಂಘಟಿತ ವ್ಯವಸ್ಥೆ ಇಲ್ಲದಿರುವುದು.

8. ಹಿಂದೂಗಳೊಳಗಿನ ಒಂದೊಂದು ಒಳಪಂಥ ಹಾಗೂ ಮತದವರು ಒಂದೊಂದು ರೀತಿಯಲ್ಲಿ ಧರ್ಮವನ್ನು ವ್ಯಾಖ್ಯಾನಿಸುವುದು,

9. ಆಚರಣೆಗೆ ಒಂದು ಸರಳ ಯೋಗ್ಯ ಮಾರ್ಗವನ್ನು ನಾವು ಅಳವಡಿಸಿ ಕೊಳ್ಳದಿರುವುದು,

10. ಆಸಕ್ತರಿಗೆ ಸೂಕ್ತ ಮಾರ್ಗದರ್ಷಕರು ಹಾಗೂ ಸೂಕ್ತ ಗ್ರಂಥಗಳು ಸುಲಭವಾಗಿ ಲಭ್ಯವಿಲ್ಲದಿರುವುದು. ಗ್ರಂಥಾಲಯಗಳ ಕೊರತೆ.

11. ಇಂದು ಹೆಚ್ಚಿನಜನರು ಸ್ವಪ್ರಯತ್ನಕ್ಕೆ ಉದಾಸೀನರಾಗಿ ಸುಲಭದ ಆದಾಯನ್ನು ಹುಡುಕುತ್ತಾ ಮೀಸಲಾತಿ ಅನುದಾನಗಳತ್ತ ಮುಖ ಮಾಡಿ ಅಧ್ಯನಕ್ಕೆ ಮನಸ್ಸು ಮಾಡದಿರುವುದು. ವೇದ ಶಿಕ್ಷಣ ವಂಚಿತ ಜನರು ಬ್ರಾಹ್ಮಣರನ್ನು ದೂಷಿಸುವುದರಲ್ಲಿ ನಿರತರಾದಷ್ಟು ಅಧ್ಯಯನಕ್ಕೆ ಮನಮಾಡದಿರುವುದು. ಸಂಸ್ಕೃತ ಭಾಷೆ ತತ್ವಶಾಸ್ತ್ರಗಳು ಇಂದು ಮುಕ್ತ ವಾಗಿ ಸರ್ವ ಜನರಿಗೂ ಅಧ್ಯಯನಕ್ಕೆ ಲಭ್ಯವಿದ್ದರೂ ಅಧ್ಯಯನ ಮಾಡುವ ಅವಕಾಶವಿದ್ದರೂ ಬಳಸಿಕೊಳ್ಳದಿರುವುದು. ಜಾತ್ಯಾತೀತ ಸರಕಾರಗಳ ಹಿಂದೂ ವಿರೋಧಿಗಳಾಗಿ ದೇಶದ್ರೋಹೀ ಮತಗಳ ಬೆಳವಣಿಗೆಗೆ ಪ್ರೊತ್ಸಾಹಿಸುತ್ತಿರುವುದು. ಮುಂತಾಗಿ ಅನೇಕ ಕಾರಣಗಳಿಂದ ನಮ್ಮ ಜನರಿಗೆ ಸರಿಯಾದ ಧಾರ್ಮಿಕ ಶಿಕ್ಷಣ ದೊರೆಯಲಿಲ್ಲ.

41. ನಮ್ಮ ದೇಶ ವಿದೇಶೀ ದಾಳಿಕೋರರ ವಶವಾಗಲು ಕಾರಣ ವೇನು? ನಾವು ಎಡವಿದ್ದೆಲ್ಲಿ?

ಸಹಜವಾಗಿಯೇ ಕ್ಷತ್ರಿಯರಾಗಿದ್ದ ಹಿಂದುಗಳು ಎಲ್ಲಿಯವರೆಗೆ ಸನಾತನ ಧರ್ಮದ ವೇದಸಂಸ್ಕೃತಿಯ ಅನುಯಾಯಿಗಳಾಗಿದ್ದರೋ ಅಲ್ಲಿಯವರೆಗೆ ವಿಶ್ವದ ಯಾವುದೇ ಶಕ್ತಿ ನಮ್ಮನ್ನು ಸೋಲಿಸುವುದು ಸಾಧ್ಯವಾಗಿರಲಿಲ್ಲ. ನಾವು ಅಜೇಯರಾಗಿದ್ದೆವು. ಹಿಂದೂ ಸಂಸ್ಕೃತಿ ವುಶ್ವವ್ಯಾಪಿ ಹಾಗೂ ವಿಶ್ವಮಾನ್ಯವಾಗಿತ್ತು. ಯಾವಾಗ ಜೈನ ಹಾಗೂ ಬೌದ್ಧ ಪಂಥಗಳ ಉದಯವಾಯಿತೋ ಆಗ ವೇದಗಳನ್ನು ತಿರಸ್ಕರಿಸಲಾಯಿತು ಇದರಿಂದ ಸನಾತನ ಧರ್ಮದ ಕ್ಷಾತ್ರಗುಣ ಕ್ಷೀಣಿಸತೊಡಗಿತು. ಜೈನರ ಹಾಗೂ ಬೌದ್ಧರ ಅತಿರೇಕದ ಅಹಿಂಸೆಯ ಬೋಧನೆಯಿಂದ ಪ್ರಭಾವಿತರಾದ ಕ್ಷತ್ರಿಯರು, ಅಖಂಡ  ಭಾರತದ ರಾಜ ಮಹಾರಾಜರುಗಳು ಶಸ್ತ್ರಗಳನ್ನು ಕೆಳಗಿಟ್ಟು ಸನ್ಯಾಸಿಗಳಾಗ ತೊಡಗಿದರು. ಇದಕ್ಕೆ ಅಶೋಕ ಚಕ್ರವರ್ತಿ ಹಾಗೂ ಆತನ ಕಳಿಂಗ ಯುದ್ಧವೇ ಉತ್ತಮ ಉದಾಹರಣೆ. ಆತನ ಮಕ್ಕಳು ಬೌದ್ಧಭಿಕ್ಷುಗಳಾದರು. ಹೀಗೆ ನಾಲ್ಕುವರ್ಣಗಳಲ್ಲಿ ಒಂದಾದ ಕ್ಷಾತ್ರವರ್ಣ ಕಳೆಗುಂದಿತು. ಇದರಿಂದಾಗಿ ಹಿಂದು ದೇಶ ಹಾಗೂ ಹಿಂದೂ ಸಮಾಜ ದುರ್ಬಲವಾಯಿತು. ಪರಕೀಯರ ದಾಳಿಯಲ್ಲಿ ಪ್ರತಿರೋಧದ ಕೊರತೆ ಹಾಗೂ ಸೂಕ್ತ ಮಾರ್ಗದರ್ಷಕ ಗುರುಗಳ ಕೊರತೆ ಎದುರಾಯಿತು. ಸಮಾಜಕ್ಕೆ ಸನಾತನಧರ್ಮದ ತಿಳುವಳಿಕೆ ಕೊಡುವ ಗುರುಗಳು ಮೂಲೆಗುಂಪಾದರು. ಬೌದ್ಧ ಜೈನ ಮತಪ್ರಚಾರ ಪಡೆದ ನಂತರ ಶಂಕರಾಚಾರ್ಯರ ವರೆಗಿನ ಸುಮಾರು ಒಂದುಸಾವಿರ ವರ್ಷಗಳ ಕಾಲವನ್ನು ಹಿಂದೂ ಧರ್ಮದ ಕತ್ತಲೆಯ ಯುಗ ಎನ್ನಲಾಗುವುದು. ಈ ನ್ಯೂನ್ಯತೆಯ ಪರಿಣಾಮ ನಂತರ 1000 ವರುಷ ನಾವು ಪರಕೀಯರ ದಾಸ್ಯ ಅನುಭವಿಸಬೇಕಾಯಿತು. ಸಮತೋಲಿತವಾಗಿರಬೇಕಾದ ಹಿಂದು ಸಮಾಜದ ನಾಲ್ಕು ಅಂಗಗಳಲ್ಲಿ (ಚಾತುವರ್ಣಗಳಲ್ಲಿ) ಯಾವುದೇ ಒಂದು ದುರ್ಬಲವಾದರೂ ದೇಶನಾಶ, ಸಂಸ್ಕೃತಿ ನಾಶ ಖಂಡಿತ. ಇದನ್ನು ಅರಿತರೆ ಮಾತ್ರ ದೇಶ ಧರ್ಮ ಹಾಗೂ ಬದುಕು ಬಲಿಷ್ಠ ಗೊಳ್ಳಲು ಸಾಧ್ಯ. ಈ ಗುಣಗಳಿಗೆ ಜಾತಿ ಮಾನದಂಡವಲ್ಲ. ನಾವು ವ್ಯಕ್ತಿಗತವಾಗಿ ನಾಲ್ಕು ವರ್ಣಗಳಲ್ಲಿಯೂ ಬಲಿಷ್ಠ ಗೊಳ್ಳಬೇಕಿದೆ.

42. ಹಿಂದು ಸಮಾಜದ ಇಂದಿನ ಪ್ರಮುಖ ದೋಷ ಏನು? 

ಆತ್ಮವಿಶ್ವಾಸದ ಕೊರತೆ, ಜಾತಿ ಬೇಧ, ಜಾತೀವಾದದ ಅಸಹ್ಯಕರ ಪ್ರದರ್ಷನ. ಅಸ್ಪೃಷ್ಯತೆ, ಹಾಗೂ ಅನಕ್ಷರತೆ. ಕೀಳರಿಮೆ, ವಿಘಟನೆ, ಸ್ವಾರ್ಥ, ಧನ, ಅಧಿಕಾರ ಹಾಗೂ ಕೀರ್ತಿಯ ವ್ಯಾಮೋಹ, ಧರ್ಮಶಿಕ್ಷಣದ ಕೊರತೆ, ಸಂಸ್ಕೃತಿಯ ಮೇಲಿನ ಅಭಿಮಾನ ಶೂನ್ಯತೆ, ವಿದೆಶೀ ವ್ಯಾಮೋಹ, ಇವೇ ಮೊದಲಾದುವು ಇಂದಿನ ಹಿಂದುಗಳ ಪ್ರಮುಖ ದೋಶಗಳು ಆದರೆ ಇಂದು ಇದು ಕಡಿಮೆಯಾಗುತ್ತಿದೆ. ನಾವೂ ಸಮಾಜವನ್ನು ಎಚ್ಚರಿಸಬೇಕಿದೆ. ಅಸರಿಯಾದ ಮಾರ್ಗದರ್ಶನ ನೀಡಬೇಕಿದೆ.

43. ಹಿಂದೂ ಸಮಾಜದ ಕೊರತೆ ಏನು?

ಹಿಂದುಗಳೂ ಜಾತಿಗಳಲ್ಲಿ ವಿಘಟಿತರಾಗಿದ್ದು, ಯೋಗ್ಯ ಧರ್ಮ ಶಿಕ್ಷಣ ಸಿಗದಿರುವುದು, ಭಿನ್ನಚಿಂತನೆಯ ಹಲವು ಧಾರ್ಮಿಕನೇತಾರರು, ಸಂಪ್ರದಾಯಕ್ಕೆ ಜೋತುಬಿದ್ದ ಮಠಾಧಿಪತಿಗಳು. ಹಾಗೂ ಅಧಿಕಾರ ಸ್ಥಾನದಲ್ಲಿ ಅರ್ಹತೆಯ ಮಾನದಂಡ ಗೌಣವಾಗಿದ್ದು ಅಯೋಗ್ಯರು ಆಕ್ರಮಿಸಿಕೊಂಡಿರುವುದು. ಹಿಂದೂ ಧರ್ಮವಿರೊಧಿಗಳಾದ ಧರ್ಮಶ್ರದ್ಧೆಇಲ್ಲದ ಅಧರ್ಮಿಗಳಿಂದ ಕೂಡಿದ ರಾಜಕೀಯಪಕ್ಷಗಳು ದೀರ್ಘಕಾಲ ಆಡಳಿತ ನಡೆಸಿದ್ದು. ವಿದೇಶೀ ಮತೀಯರ ಹಣದ ಪ್ರಭಾವವು ನಮ್ಮಶಕ್ತಿಯನ್ನು ಕುಂದಿಸಿದ್ದು ಇವೇ ಮುಂತಾದುವು ಹಿಂದೂಗಳ ದುಸ್ಥಿತಿಗೆ ಕಾರಣಳಾಗಿವೆ. 

44. ಹಿಂದೂ ಧರ್ಮ ಪ್ರಚಾರಕ್ಕೆ ಇಂದಿರುವ ಅನುಕೂಲತೆ ಏನು?

ಇಂದು ಆಧುನಿಕ ತಾಂತ್ರಿಕತೆಯಿಂದ ಶೀಘ್ರ ಸಂವಹನಸಾಧ್ಯವಿದೆ. ಜಾಗ್ರತವಾಗುತ್ತಿರುವ ಬುದ್ದಿವಂತ ಯುವಜನತೆ ಹೆಚ್ಚಾಗುತ್ತಿದ್ದಾರೆ. ಸ್ವಾಭಿಮಾನೀ ಸ್ವತಂತ್ರ ಪ್ರಜಾಪ್ರಭುತ್ವ ವ್ಯವಸ್ಥೆ ದೇಶವನ್ನು ಆಳುತ್ತಿದೆ. ಜಾತಿಗೆ ಸೀಮಿತವಲ್ಲದಂತೆ ಎಲ್ಲರೂ ಎಲ್ಲ ಉದ್ಯೋಗಗಳನ್ನೂ ಮಾಡುವ ಮುಕ್ತ ಅವಕಾಶ ಹಾಗೂ ಅನಿವಾರ್ಯತೆ ಇಂದು ಸಮಾಜದಲ್ಲಿದೆ. ಜಾತಿ ಮರೆತು ಒಟ್ಟಾಗಿ ಕೆಲಸಮಾಡುವ ಹಾಗೂ ಪರಸ್ಪರಗೌರವಿಸುವ ಸ್ವಭಾವ ಯುವಜನರಲ್ಲಿ ಹೆಚ್ಚುತ್ತಿರುವುದು. ದೇಶಕ್ಕೆ ಬಲಿಷ್ಟ ಹಿಂದೂ ನಾಯಕತ್ವ ದೊರೆತಿರುವುದು. ಹಾಗೂ ಸುಜ್ಞಾನವನ್ನು ಇಂದು ಮುಕ್ತವಾಗಿ ವಿಶ್ವದೆಲ್ಲೆಡೆ ಪಸರಿಸುವ ಅಂತರ್ಜಾಲ ಮಾಧ್ಯಮದ ಪ್ರಭಾವ. ಇವೆಲ್ಲವೂ ಇಂದು ಹಿಂದೂ ಧರ್ಮದ ಸತ್ಯವನ್ನು ವಿಶ್ವಕ್ಕೆ ಸಾರಲು ಇರುವ ಅನುಕೂಲತೆಗಳು.

45. ಹಿಂದೂ ಧರ್ಮ ಹಾಗೂ ಹಿಂದೂ ರಾಷ್ಟ್ರ ರಕ್ಷಣೆಗಾಗಿ ನಾವೇನು ಮಾಡಬೇಕು?

ಹಿಂದೂ ಧರ್ಮದ, ಹಿಂದೂಸಮಾಜದ, ಹಿಂದೂ ರಾಷ್ಟ್ರದ, ಹಿತಕ್ಕಾಗಿ ನಾವು ತನು, ಮನ, ಧನ ಗಳಿಂದ ಸಂಘಟಿತರಾಗಿ ಜನಜಾಗ್ರತಿಯನ್ನು ಮಾಡಬೇಕಿದೆ ಮತ್ತು ಸಂಘಟನೆ ಕಾರ್ಯಕರ್ತರೊಂದಿಗೆ ಕೈ ಜೋಡಿಸಿ ಸುಸಂಘಟಿತರಾಗಬೇಕಿದೆ. ನಾವು ನಮ್ಮ ಧರ್ಮ ಹಾಗೂ ನಮ್ಮ ಸಂಸ್ಕೃತಿಯನ್ನು ನಿತ್ಯಬದುಕಿನಲ್ಲಿ ಅಭಿಮಾನದಿಂದ ಆಚರಿಸಬೇಕು. ಧರ್ಮಪ್ರೇಮಿಗಳೊಂದಿಗೇ ವ್ಯಾಪಾರಮಾಡುವುದು. ಸ್ವದೇಶೀ ವಸ್ತುಗಳನ್ನೇ ಬಳಸುವುದು. ಸ್ವಾಭಿಮಾನಿಗಳಾಗಿರುವುದು. ಹಾಗೂ ಹಿಂದೂ ರಕ್ತದಲ್ಲಿ ಕ್ಷಾತ್ರವನ್ನು ಜಾಗ್ರತ ಗೊಳಿಸುವುದು ನಮ್ಮ ಮುಂದಿರುವ ಸವಾಲುಗಳಾಗಿವೆ. ನಮ್ಮಮಧ್ಯದಲ್ಲಿರುವ ಜಾತ್ಯಾತೀತ ಮುಖವಾಡದ ಧರ್ಮವಿರೋಧಿಗಳನ್ನು ನಿಗ್ರಹಿಸಿ ತಕ್ಕಪಾಠಕಲಿಸಬೇಕಿದೆ. ಇವೆಲ್ಲಕ್ಕೂ ಸಂಘಟಿತರಾಗುವುದು ಅತಿಮುಖ್ಯವಾಗಿದೆ. ಸಂಘೇ ಶಕ್ತಿ ಕಲೌಯುಗೇ ಎಂಬುದಾಗಿ ನಮ್ಮ ಹಿರಿಯರು ಹೇಳಿದ್ದಾರೆ.

46. ಹಿಂದುಧರ್ಮ ರಕ್ಷಣೆಗೆ ಎಂತಹ ಧರ್ಮಯೋಧರು ಬೇಕಾಗಿದ್ದಾರೆ?

ಧರ್ಮರಕ್ಷಣೆ ಕೇವಲ ಭಾಷಣಗಳಿಂದ, ಪ್ರತಿಭಟನೆಗಳಿಂದ, ಸಮಾವೇಶಗಳಿಂದ, ಕಾನೂನುಗಳಿಂದ ಆಗುವುದಿಲ್ಲ. ನಾವು ಸ್ವಯಂ ಧರ್ಮಾಚರಣೆ ಮಾಡುವವರಾಗಿರಬೇಕು. ಆಚರಣೆ ಇಲ್ಲದವರ ಉಪದೇಶಗಳನ್ನು ಯಾರೂ ಗೌರವಿಸುವುದಿಲ್ಲ. ಅನುಸರಿಸುವುದಿಲ್ಲ.  ಧರ್ಮ ಪ್ರಚಾರಕ್ಕಾಗಿ ಸಮಯ ಕೊಡಬಹುದಾದ ಪ್ರಚಾರಕರು, ಸಂಘಟಕರು, ಗ್ರಂಥಸಂಗ್ರಹಕಾರರು, ಧರ್ಮ ಶಿಕ್ಷಣ ವರ್ಗ ನಡೆಸುವವರು, ಧನಸಹಾಯ ಮಾಡುವ ದಾನಿಗಳು, ಅಧರ್ಮವನ್ನು ಪ್ರತಿಭಟಿಸುವ ಕ್ಷಾತ್ರ ತೇಜರು. ಇವರುಗಳೆಲ್ಲಾ ನಮಗೆ ಬೇಕಾಗಿದ್ದಾರೆ.

47. ಹಿಂದೂಗಳ ಜೀವನದ ಗುರಿ ಏನಾಗಬೇಕು?

ನಮ್ಮ ಗುರಿ ಇಂಡಿಯಾ ವನ್ನು ಭಾರತವನ್ನಾಗಿ ಬದಲಾಯಿಸುವುದು. ಅಖಂಡ ಸ್ವರಾಜ್ಯವನ್ನು ಹಿಂದೂಧರ್ಮದ ತಳಹದಿಯಮೇಲೆ ಸುರಾಜ್ಯವಾಗಿ ರೂಪಿಸುವುದು. ಗುಲಾಮೀತನದ ಕುರುಹುಗಳನ್ನು ಅಳಿಸುವುದು. ಹಾಗೂ ಭಾರತವನ್ನು ಹಿಂದೂರಾಷ್ಟ್ರ ಎಂಬುದಾಗಿ ಘೋಷಿಸುವುದು. ನಮ್ಮ ಜೀವನದ ಗುರಿಯಾಗಬೇಕು. ಅಜ್ಞಾನದಿಂದ ಕೂಡಿದ ಆಮದು ಮತಗಳಲ್ಲಿನ ದೋಷಗಳನ್ನು ಅಜ್ಞಾನಿಗಳಿಗೆ ತೋರಿಸಿ ಮತಾಂತರವಾದ ಹಿಂದುಗಳನ್ನು ಪುನಃ ಮಾತೃಧರ್ಮಕ್ಕೆ ಸೇರಿಸುವುದು ನಮ್ಮಗುರಿಯಾಗಬೇಕು. ಇಡೀವಿಶ್ವ ಸಹೋದರೆತೆಯಿಂದ ಬದುಕುವಂತೆ ಸನಾತನ ದರ್ಮದ ಜ್ಞಾನವನ್ನು ವಿಶ್ವಕ್ಕೆ ನೀಡುವ ಮೂಲಕ ಬಲಿಷ್ಟ ಭಾರತ ವಿಶ್ವಗುರುವಿನ ಸ್ಥಾನವನ್ನು ಅಲಂಕರಿಸಬೇಕು. ಈದೆಸೆಯಲ್ಲಿ ನಿರಂತರ ಕರಿಯಾಶೀಲರಾಗುವುದೇ ನಮ್ಮ ಜೀವನದ ಗುರಿಯಾಗಬೇಕು.

47. ಭಾರತವನ್ನು ವಿಶ್ವಗುರುವಾಗಿಸಲು ನಾವೇನು ಮಾಡಬೇಕು?

ನಮ್ಮ ಪ್ರಾಚೀನರ ಸಂಸ್ಕಾರ ಹಾಗೂ ಸಂಸ್ಕೃತಿಯ ಆಚರಣೆಗಳು ಪುನಃ ನಮ್ಮಿಂದಲೇ ಆರಂಭವಾಗಬೇಕು. ಮೊದಲು ನಾವು ನಂತರ ನಮ್ಮ ಮನೆ, ನಂತರ ನಮ್ಮ ಕುಟುಂಬ ನಂತರ ನಮ್ಮ ಪರಿಸರದ ಬದಲಾವಣೆಗಾಗಿ ನಾವು ಕೆಲಸ ಮಾಡಬೇಕು. ಜಾತೀವಾದವನ್ನು ಜಾತಿ ಪ್ರದರ್ಷನವನ್ನು ತ್ಯಜಿಸಬೇಕು. ಚಾರಿತ್ರ್ಯವಂತರನ್ನೂ ವಿದ್ಯಾವಂತರನ್ನೂ, ನೀತಿವಂತರನ್ನೂ, ದೇಶಪ್ರೇಮಿಗಳನ್ನೂ ರಾಜಕೀಯವಾಗಿ ಬೆಳೆಸಬೇಕು. ದೇವಸ್ಥಾನಗಳನ್ನು ರಾಜಕೀಯದಿಂದ ಬೇರ್ಪಡಿಸಿ ಧಾರ್ಮಿಕ ಪರಿಷತ್ತಿನ ಅಡಿಯಲ್ಲಿ ಸಂಘಟಿತಗೊಳಿಸಬೇಕು. ಯುವಜನತೆಗೆ ದೇಶದ ಹೆಮ್ಮೆಯ ಇತಿಹಾಸವನ್ನು ಕಲಿಸಬೇಕು. ಧಾರ್ಮಿಕ ಶಿಕ್ಷಣವನ್ನು ನೀಡಬೇಕು. ಸ್ವಾಭಿಮಾನೀ, ರಾಷ್ಟ್ರಾಭಿಮಾನೀ, ಪ್ರಜ್ಞಾವಂತ, ಶೌರ್ಯವಂತ, ವಿದ್ಯಾವಂತ ಹಿಂದು ಯುವಸಮಾಜವನ್ನು ಕಟ್ಟಿಬೆಳೆಸಬೇಕು. ಅಖಂಡ ಸನಾತನ ಸ್ವಾಭಿಮಾನ ಸೇನಾ ಇದರೊಂದಿಗೆ ಕೈಜೋಡಿಸುವ ಮೂಲಕ ನಾವು ಸನಾತನ ಹಿಂದೂ ಧರ್ಮದ ರಕ್ಷಣೆಗೆ ಕಟಿಬದ್ಧರಾಗೋಣ.

  • ಶ್ರೀಜಿ

ಜೈ ಹಿಂದ್ ಜೈ ಶ್ರೀರಾಮ್