ಸಂಘಟನೆ

ಸಂಘಟನೆ – ಒಂದು ಮಹತ್ತರ ಉದ್ದೇಶ ಹಾಗೂ ಗುರಿಸಾಧನೆಗಾಗಿ ಸಮಾನ ಮನಸ್ಥಿತಿಯವರು ಸ್ವಾರ್ಥವಿಲ್ಲದೆ ಒಂದಾಗುವುದು. ಗುರಿಸಾಧನೆಯ ಹಾದಿಯಲ್ಲಿ ನಿರಂತರ ಕ್ರಿಯಾಶೀಲರಾಗುವುದು ಹಾಗೂ ಈ ಉದ್ದೇಶಸಾಧನೆಗಾಗಿ ಅಧಿಕಾಧಿಕ ಜನರನ್ನು ಒಂದೆಡೆ ಸೇರಿಸುವುದು. ಹೀಗೆ ಒಂದು ಮಹತ್ತರ ಧ್ಯೇಯ ಸಾಧನೆಗಾಗಿ ಸಮಾನ ಮನಸ್ಕರು ಒಂದೆಡೆ ಸೇರಿ ದೀರ್ಘಾವಧಿಯವರೆಗೆ ಹೋರಾಡಲು ರೂಪಿಸಿಕೊಂಡ ವ್ಯವಸ್ಥೆಯೇ ಈ ಸಂಘಟನೆಯಾಗಿದೆ. ಸಂಘಟನೆಯ ಸದಸ್ಯರು ಸಂಘಟನೆಯನ್ನು ಬಲಪಡಿಸುತ್ತಾ, ನಿತ್ಯಜೀವನದಲ್ಲಿ ಸಂಘಟನೆಯ ಗುರಿಸಾಧನೆಗೆ ಪೂರಕವಾಗಿ ಬದುಕುತ್ತಾ, ಅನಿವಾರ್ಯವಾದಾಗ ಸಂಘಟನೆಯೊಂದಿಗೆ ಸೇರಿ ಸಂಘರ್ಷದಲ್ಲಿ ಭಾಗಿಯಾಗುವಂತಹ ಸ್ವಾರ್ಥರಹಿತ ಮನಸ್ಥಿತಿಯ ಜನರ ಸಮೂಹವನ್ನು ಉತ್ತಮ ಸಂಘಟನೆ ಎನ್ನಲಾಗುವುದು. ಜನರು ದುರುದ್ದೇಶಗಳಿಂದಲೂ ಸಂಘಟಿತರಾಗುತ್ತಾರೆ ಹಾಗೂ ಇರುವ ಸಂಘಟನೆಗಳೊಂದಿಗೆ ಸೇರಿಕೊಳ್ಳುತ್ತಾರೆ ಇದು ಸತ್ಪಲವನ್ನು ನೀಡುವುದಿಲ್ಲ. ಇಂತಹವರಿಂದ ಎಚ್ಚರವಾಗಿರಬೇಕು.

***

ಅಖಂಡಭಾರತ – ಹಿಂದೆ ಭಾರತದೇಶ ವಿಶ್ವದ ಅತ್ಯಂತ ದೊಡ್ಡದೇಶವಾಗಿತ್ತು. ನಂತರದಲ್ಲಿ ತನ್ನ ಭೂಭಾಗಗಳನ್ನು ಕಳೆದುಕೊಳ್ಳುತ್ತಾ ತುಂಡಾಗುತ್ತಾ ಹೋಯಿತು. ಕಾರಣ ಬಲಿಷ್ಟವಾದ ನಾಯಕತ್ವದ ಕೊರತೆ. ಸೂಕ್ತಮಾರ್ಗದರ್ಶನದ ಕೊರತೆ ಹಾಗೂ ಜನರಲ್ಲಿನ ದೂರದೃಷ್ಠಿಯ ಕೊರತೆ. ಸನಾತನ ವೈಧಿಕ ಧರ್ಮದ ಆಚರಣೆಗಳು ಕ್ರಮೇಣ ಅಡ್ಡದಾರಿ ಹಿಡಿಯತೊಡಗಿದಾಗ ಬೌದ್ಧ ಹಾಗೂ ಜೈನ ಮತಗಳು ಉದಯವಾದವು. ಇವು ಸಮಾಜದ ಮೇಲೆ ಪ್ರಭಾವ ಬೀರತೊಡಗಿದಾಗ ಸನಾತನ ವೈದಿಕ ಸಂಸ್ಕೃತಿಯ ಮೂಲಸ್ವರೂಪವಾದ ಕ್ಷಾತ್ರ ಹಾಗೂ ತೇಜ ಇದರಿಂದ  ಜನರು ಹಾಗೂ ರಾಜರು ಕ್ರಮೇಣ ದೂರಾದರು. ಹೀಗೆ ರಾಜರ ಕ್ಷಾತ್ರತ್ಯಜಿಸಿದ ದುರ್ಬಲ ಮನಸ್ಥಿತಿಯಿಂದಾಗಿ ಮತ್ತು ಜನರು ದೇಶದ ಚಿಂತನೆಯನ್ನು ಮರೆತು ಸ್ವಾರ್ಥಚಿಂತನೆಯಲ್ಲಿ ತೊಡಗಿದುದರ ಪರಿಣಾಮ ವಾಗಿ ನಮ್ಮ ದೇಶ ದುರ್ಬಲವಾಯಿತು ಹಾಗೂ ತನ್ನ ಭೂಭಾಗಗಳನ್ನು ಕಳೆದುಕೊಂಡಿತು. ಅಖಂಡ ಭಾರತದವ್ಯಾಪ್ತಿ ಎಲ್ಲಿವರೆಗೆ ಇತ್ತು ಅಥವಾ ಯಾವುದೆಲ್ಲಾ ದೇಶ ಭಾರತದೊಂದಿಗೆ ಜೋಡಿಸಿಕೊಂಡಿತ್ತು. ನೋಡೋಣ ಅಫಘಾನಿಸ್ಥಾನ ( ಗಾಂಧಾರ), ಪಾಕಿಸ್ಥಾನ, ಭಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಟಿಬೆಟ್, ಭೂತಾನ್, ಬರ್ಮಾ(ಬ್ರಹ್ಮದೇಶ), ಇಂಡೋನೇಶಿಯಾ, ಮಲೇಶಿಯಾ, ಬಾಲಿ, ಸಿಂಗಾಪೂರ್, ಮಿಯಾನ್ಮಾರ್, ಇವೆಲ್ಲವೂ ಒಂದುಕಾಲದಲ್ಲಿ ಸಾಂಸ್ಕೃತಿಕ ಭಾರತದ ಭಾಗವಾಗಿತ್ತು. ಇದು ಪುನಃ ಭಾರತವಾಗಬೇಕೆನ್ನುವುದು ಸಂಘಟನೆಯ ಗುರಿ. ಸಮಗ್ರ ಹಿಂದುಗಳ ಆಸೆ.

 

(ಶ್ರೀರಾಮನ ಆಳ್ವಿಕೆ ಎಲ್ಲಿವರೆಗೆ ಇತ್ತು, ಯುಧಿಷ್ಟಿರನ ಸಾಮ್ರಾಜ್ಯ ಎಲ್ಲಿವರೆಗೆ ಹಬ್ಬತ್ತು, ವಿಕ್ರಮಾದಿತ್ಯನ ಸಾಮ್ರಾಜ್ಯ ಎಲ್ಲಿವರೆಗೆ ಇತ್ತು ಇವುಗಳಬಗ್ಗೆ ತಿಳಿಯಿರಿ. ಭಾರತದ ಹೀಂದೂ ಚಕ್ರವರ್ತಿಗಳ ದಂಡಯಾತ್ರೆಯ ಕಥೆಗಳನ್ನು ಓದಿ ತಿಳಿದುಕೊಳ್ಳಿರಿ)

 

ಸನಾತನ – ಸನಾತನ ಎಂದರೆ ಅನಾದಿ ಅಂದರೆ ಅತ್ಯಂತ ಪುರಾತನವಾದದ್ದು, ಆದಿ ಯಾವುದೆಂದು ತಿಳಿಯದ್ದು. ಆದಿಇಲ್ಲದುದಕ್ಕೆ ಆಂತ್ಯವೂ ಇಲ್ಲಎಂಬುದಾಗಿ ಅರ್ಥ. ನಮ್ಮ ಧರ್ಮ ಹಾಗೂ ಸಂಸ್ಕೃತಿ ಜಗತ್ತಿನಲ್ಲಿಯೇ ಅತ್ಯಂತ ಪ್ರಾಚೀನವಾದುದಾಗಿದೆ. ಭಾರತದೇಶದ ಸಂಸ್ಕೃತಿಯೇ ಜೀವಂತವಿರುವ ವಿಶ್ವದ ಅತ್ಯಂತ ಪ್ರಾಚೀನ ಸಂಸ್ಕೃತಿಯಾಗಿದೆ. ಋಗ್ವೇದವು ಜಗತ್ತಿನ ಅತ್ಯಂತ ಪ್ರಾಚೀನ ಸಾಹಿತ್ಯವಾಗಿದೆ. ಸಂಸ್ಕೃತ ಜಗತ್ತಿನ ಅತ್ಯಂತ ಪ್ರಾಚೀನ ಹಾಗೂ ಶ್ರೇಷ್ಠ ಭಾಷೆಯಾಗಿದೆ. ಜ್ಞಾನ, ವಿಜ್ಞಾನ, ಕಲೆ, ಸಾಹಿತ್ಯ, ವಾಸ್ತು, ಜ್ಯೋತಿಷ್ಯ, ಖಗೋಲ, ಜೀವಶಾಸ್ತ್ರ, ರಸಾಯನ ಶಾಸ್ತ್ರ, ಶಿಲ್ಪಶಾಸ್ತ್ರ, ನಾಟ್ಯಶಾಸ್ತ್ರ ಹೀಗೆ ಯಾವುದೇ ವಿಷಯವನ್ನು ತೆಗೆದುಕೊಂಡರೂ ಜಗತ್ತಿಗೆ ಮೊದಲು ಇವುಗಳನ್ನು ಪರಿಚಯಿಸಿದವರು ನಾವು ಭಾರತೀಯರು, ಹಿಂದುಗಳು. ಇದುವೇ ಸನಾತನ ಭಾರತದ ಕೊಡುಗೆ ಇಂತಹ ಸನಾತನ ಸಂಸ್ಕೃತಿಯಬಗ್ಗೆ ಹೆಮ್ಮೆ ಹೊಂದಿದವರು ನಾವು. ನಮಗೆ ನಮ್ಮ ಪೂರ್ವಜರ ಬಗ್ಗೆ ಆದರ ಇರಬೇಕು. ಅವರ ಸಾಧನೆಯ ಅರಿವು ಇರಬೇಕು. ನಮ್ಮ ಸಂಸ್ಕೃತಿಯನ್ನು ನಾವು ಅಭಿಮಾನದಿಂದ ಪಾಲಿಸಿಕೊಂಡು ಶ್ರದ್ಧೆಯಿಂದ ಮುಂದಿನ ಪೀಳಿಗೆಗೆ ಕಲಿಸಿಕೊಂಡು ಮುಂದೆ ಹೋಗಬೇಕಿದೆ.

 

ಸಾನಾತನ ಸಂಸ್ಕೃತಿಯ ಆಚರಣೆಗಳನ್ನು ಹಾಗೂ ಅದರ ಅರ್ಥಗಳನ್ನು ತಿಳಿಯುವ ಪ್ರಯತ್ನಮಾಡೋಣ. ಅದರ ಸೌಂದರ್ಯವನ್ನು ಆಶ್ವಾದಿಸೋಣ.

 

ಸ್ವಾಭಿಮಾನ – ಸ್ವಾಭಿಮಾನ ಎಂದರೆ ತನ್ನಬಗ್ಗೆ ತಾನು ಹೆಮ್ಮೆಪಡುವುದು. ನಾನು ಶ್ರೇಷ್ಟವಾದ ಸನಾತನ ಧರ್ಮದ ಪರಂಪರೆಯಲ್ಲಿ ಹುಟ್ಟಿದ್ದೇನೆ. ನಾನು ಹಾಗೂ ನನ್ನ ಪೂರ್ವಜರು ಯಾವುದೇ ಆಸೆ ಆಮಿಷ ಬೆದರಿಕೆಗಳಿಗೆ ಬಗ್ಗದೆ ಹಿಂದೂ ಧರ್ಮವನ್ನು ಆಚರಿಸಿಕೊಂಡುಬಂದಿದ್ದಾರೆ. ನಾನು ನನ್ನ ಧರ್ಮದ ಹಿರಿಯರಬಗ್ಗೆ ಅಭಿಮಾನ ಪಡುತ್ತೇನೆ. ನಾನು ಉತ್ತಮವಾದ ಪ್ರಜೆ, ನನ್ನ ಸ್ವಭಾವ ಉತ್ತಮವಾದದ್ದು, ನನ್ನ ಜ್ಞಾನ ಶ್ರೇಷ್ಠವಾದದ್ದು, ನನ್ನ ಉದ್ಯೋಗವು ಸಮಾಜ ಹಾಗೂ ರಾಷ್ಟ್ರಹಿತಕ್ಕೆ  ಪೂರಕವಾದದ್ದು. ನನ್ನಮನೆ ಸನಾತನ ಸಂಸ್ಕೃತಿಯಮೌಲ್ಯಗಳನ್ನು ಕಾಪಾಡಿಕೊಂಡು ಬರುತ್ತಿರುವ ಮನೆ, ನನ್ನ ದೇಶ ಜಗತ್ತಿನಲ್ಲಿಯೇ ಶ್ರೇಷ್ಠದೇಶ, ನನ್ನ ಸಂಸ್ಕೃತಿ ಜಗತ್ತಿನಲ್ಲಿಯೇ ಶ್ರೇಷ್ಠಸಂಸ್ಕೃತಿ. ನನ್ನ ಧರ್ಮ ವಿಶ್ವದಲ್ಲಿಯೇ ಅತಿಶ್ರೇಷ್ಠ ಧರ್ಮ. ನನ್ನ ಸಂಘಟನೆ ದೇಶ ಧರ್ಮ ಸಂಸ್ಕೃತಿ ಇವುಗಳ ರಕ್ಷಣೆಯೇ ಮುಖ್ಯಉದ್ದೇಶವಾಗಿ ಹೊಂದಿದ ಸ್ವಾರ್ಥ ರಹಿತ ಧರ್ಮಪ್ರೇಮಿಗಳಿಂದ ಕೂಡಿದ ಸಂಘಟನೆಯಾಗಿದೆ. ಈ ರೀತಿಯಾಗಿ ನಾವು ನಮ್ಮ ಮನಸ್ಸಿನಲ್ಲಿ ಹೊಂದುವ ಸಕಾರಾತ್ಮಕ ಭಾವನೆಯೇ ಸ್ವಾಭಿಮಾನವಾಗಿದೆ. ಸ್ವಾಭಿಮಾನವೆಂದರೆ ಅಹಂಕಾರವಲ್ಲ. ಇದೊಂದು ಆತ್ಮಗೌರವದ ನಡೆ. ಸ್ವಾಭಿಮಾನಕಳೆದುಕೊಂಡರೆ ರಾಷ್ಟ್ರಕಟ್ಟಲು ಸಾಧ್ಯವಿಲ್ಲ. ನಮಗೆ ನಮ್ಮದರ ಬಗ್ಗೆ ಹಾಗೂ ನಮ್ಮವರ ಬಗ್ಗೆ ಅಭಿಮಾನವಿರಬೇಕು ಇದುವೇ ಸ್ವಾಭಿಮಾನ. ಆದರೆ ಇಂತಹ ಅಭಿಮಾನ ಅಂಧಾಭಿಮಾನವೋ ದುರಭಿಮಾನವೋ ಅಹಂಕಾರವೋ ಆಗಿರಬಾರದು. ಹಾಗಾದಲ್ಲಿ ಅದು ರಾಷ್ಟ್ರಹಿತಕ್ಕೆ ಮಾರಕವಾಗುವುದು.

 

ಸೇನಾ – ಸೈನ್ಯ ಅಥವಾ ಸೇನೆಯು ದೇಶ, ಧರ್ಮ, ಸಂಸ್ಕೃತಿ ಹಾಗೂ ಸಮಾಜದಸಜ್ಜನರ ರಕ್ಷಣೆಗಾಗಿ ನಿರಂತರ ಜಾಗ್ರತ ಸ್ಥಿತಿಯಲ್ಲಿರುವ ಹೋರಾಡುವ ಮನಸ್ಥಿತಿಯ ಜನರ ಸಮುಹವಾಗಿದೆ. ಹಾಗೂ ಇವುಗಳ ಮೇಲೆ ಅನ್ಯಾಯ ಆಕ್ರಮಣಗಳುಂಟಾದಾಗ ಎಲ್ಲಾ ಆಯಾಮಗಳಿಂದ ಪ್ರತಿರೋಧಿಸುವುದು, ಹಾಗೂ ಯೋಗ್ಯಮಾರ್ಗದಲ್ಲಿ ಪರಿಣಾಮಕಾರಿಯಾಗಿ ತೀವ್ರವಾಗಿ ಸಂಘಟಿತರಾಗಿ ಪರಸ್ಪರ ಸಮನ್ವಯದಿಂದ ಹೋರಾಟನಡೆಸಿ ತನ್ನ ಲಕ್ಷ್ಯವನ್ನು ಸಾಧಿಸುತ್ತಾ ದೇಶ, ಧರ್ಮ, ಹಾಗೂ ಸಂಸ್ಕೃತಿಯನ್ನು ರಕ್ಷಿಸಲು ಸದಾ ಸಿದ್ಧರಾಗಿರುವವರ ಜಾಗ್ರತ ಕ್ಷಾತ್ರ ಸಮೂಹ ವನ್ನು ಸೇನೆ ಎನ್ನುವೆವು.

ಇದು ಅಖಂಢ ಭಾರತ ಸನಾತನ ಸ್ವಾಭಿಮಾನ ಸೇನಾ ಎನ್ನುವ ಈ ಸಂಘಟನೆಯ ಸ್ಥೂಲ ಪರಿಚಯವಾಗಿದೆ.

-ಶ್ರೀಜಿ.

ಜೈ ಹಿಂದ್ ಜೈ ಶ್ರೀರಾಮ್

 

ಸಂಘಟನೆಗಳಲ್ಲಿ ಅನೇಗ ವಿಧಗಳಿರುತ್ತವೆ ಹಾಗೂ ಉದ್ದೇಶಗಳಿರುತ್ತವೆ. ಸನಾತನ ಸ್ವಾಭಿಮಾನ ಸೇನಾ ಇದು ತನ್ನಹೆಸರಿನಲ್ಲಿರುವ ಉದ್ದೇಶಸಾಧನೆಗಾಗಿಯೇ ರಚಿತವಾದ ಸಂಘಟನೆಯಾಗಿದೆ.

ಭಾರತ ಅಖಂಡವಾಗಬೇಕು. ಭಾರತ ವಿಶ್ವಗುರುವಾಗಬೇಕು. ಸನಾತನ ಹಿಂದೂ ಸಂಸ್ಕೃತಿ ವಿಶ್ವ ವ್ಯಾಪಿಯಾಗಬೇಕು. ಹಿಂದುಗಳು ಸರ್ವಮಾನ್ಯರಾಗಬೇಕು ಇದು ಸಂಘಟನೆಯ ಗುರಿ.

ಇಂತಹ ಗುರಿಸಾಧನೆಯ ಮಾರ್ಗ ಯಾವುದು ? ಇದು ಹೇಗೆ ಸಾಧ್ಯ ? ಇದು ಸಾಧ್ಯವೇ ? ಮುಂತಾದ ಸಹಜ ಪ್ರಶ್ನೆಗಳು ಸಂಶಯಗಳು ನಮ್ಮಲ್ಲಿ ಉದ್ಭವಿಸುತ್ತವೆ. ಇದಕ್ಕೆ ಉತ್ತರ ಕೊಡುವುದೇ ನಮ್ಮ ಕೆಲಸ. ಸಾಮಾನ್ಯ ಹಿಂದುಗಳಲ್ಲಿಅಭದ್ರತೆಯ ಭಾವ ಇರಬಹುದು ಆದರೆ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಈಗೊಂದು ಮೂವತ್ತು ವರುಷಗಳ ಹಿಂದೆ ಹಿರಿಯರು ಸಾಮಾನ್ಯವಾಗಿ ಹೇಳುವ ಮಾತು ನಮ್ಮ ದೆಶ ಉದ್ಧಾರವಾಗುವುದಿಲ್ಲ ಈ ದೇಶವೇ ಹೀಗೆ ಎಂಬುದಾಗಿ. ಆದರೆ ಇಂದು ಭಾರತ ಜಗತ್ತಿನಲ್ಲಿ ಅತೀವೇಗದಲ್ಲಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯಾಗಿದೆ. ಮೋದಿಜಿ ಪ್ರಧಾನಿ ಆದಮೇಲೆ ವಿಶ್ವವೇ ಭಾರತವನ್ನು ಆಶ್ಚರ್ಯದಿಂದ ಹಾಗೂ ಅಭಿಮಾನದಿಂದ ನೋಡುತ್ತಿದೆ. ಭಾರತ ಇಂದು ಜಗತ್ತಿನ ಐದನೆಯ ದೊಡ್ಡ ಅರ್ಥವ್ಯವಸ್ಥೆಯಾಗಿದೆ. ಹಿಂದೂ ಸಂಸ್ಕೃತಿಯನ್ನು ನಾಶಮಾಡಿದ ಪಾಕಿಸ್ಥಾನ ಇಂದು ಹೊಟ್ಟೆಗೆ ಅನ್ನವಿಲ್ಲದೆ ಭಿಕ್ಷೆ ಬೇಡುತ್ತಿದೆ. ಸರಿಯಾದ ಕಾರ್ಯಯೋಜನೆಯೊಂದಿಗೆ ಉತ್ತಮ ಉದ್ದೇಶಕ್ಕಾಗಿ ನಾವು ಸಂಘಟಿತರಾಗಿ ನಿರಂತರವಾಗಿ ಕೆಲಸಮಾಡಿದಾಗ ಸಾಮಾನ್ಯ ಮನುಷ್ಯನೂ ಅಸಾಮಾನ್ಯ ವಾದುದನ್ನು ಸಾಧಿಸಬಹುದು.

ಎಲ್ಲವನ್ನೂ ಕಳೆದುಕೊಂಡ ಕಾಲಿಕೈಯಲ್ಲಿ ರಾಜ್ಯತೊರೆದ ಪಾಂಡವರಿಂದ ಬಲಿಷ್ಟ ಹನ್ನುಂದು ಅಕ್ಷೋಹಿಣಿಯ ಬೃಹತ್ ಸೈನ್ಯವನ್ನು ಹೊಂದಿದ ಭೀಷ್ಮದ್ರೋಣ ಕರ್ಣಾದಿಗಳಂಥ ಅಥಿರಥ ಮಹಾ ರಥರನ್ನೊಳಗೊಂಡ ಕೌರವರನ್ನು ಸೋಲಿಸಲು ಸಾಧ್ಯವಾಗುವುದಾದರೆ!

ಒಬ್ಬಚಾಣಕ್ಯನಿಂದ ಬಲಿಷ್ಟ ನಂದರಾಜನನ್ನು ಪರಾಜಯಗೊಳಿಸಿ ಒಬ್ಬಸಾಮಾನ್ಯನಾದ  ಬಾಲಕ ಚಂದ್ರಗುಪ್ತನನ್ನು ತರಬೇತಿಗೊಳಿಸಿ ಮೌರ್ಯಸಾಮ್ರಾಜ್ಯವನ್ನು ಸ್ಥಾಪಿಸಲು ಸಾಧ್ಯವಾಗುವುದಾದರೆ!

ಮೂವತ್ತೆರಡನೇ ವಯಸ್ಸಿನ್ನೊಳಗಾಗಿ ನಾಲ್ಕುಬಾರಿ ಅಖಂಡ ಭಾರತವನ್ನು ಬರಿಗಾಲಲ್ಲಿ ಸುತ್ತಿ ವಿನಾಶದ ಅಂಚಿನಲ್ಲಿದ್ದ ಸನಾತನ ವೈದಿಕ ಸಂಸ್ಕೃತಿಯನ್ನು ಅಖಂಢ ಭಾರತದಲ್ಲಿ ಪುನಸ್ಥಾಪಿಸಲು ಒಬ್ಬ ಶಂಕರಾಚಾರ್ಯರಿಗೆ ಸಾಧ್ಯವಾಗುವುದಾದರೆ!

ಹಕ್ಕ ಬುಕ್ಕರೆಂಬ ಸಾಮಾನ್ಯ ಸಹೋದರರಿಂದ ಗುರು ವಿದ್ಯಾರಣ್ಯರ ಮಾರ್ಗದರ್ಶನ ಹಾಗು ಆಶೀರ್ವಾದದಿಂದ ವಿಶ್ವವೇಬೆರಗಾಗುವಂತ ವಿಜಯನಗರ ಸಾಮ್ರಾಜ್ಯ ಕಟ್ಟಲು ಸಾಧ್ಯವಾಗಬಹುದಾದರೆ!

ಸುತ್ತಲೂ ಬಲಿಷ್ಟ ಶತೃಗಳಿದ್ದಾಗ  ಅಧಿಕಾರ ರಾಜ್ಯ ಸೈನ್ಯ ಸಂಪತ್ತು ಏನೂ ಇಲ್ಲದೆ ಹುಟ್ಟಿದ ಸಾಮಾನ್ಯನಾದ ಶಿವಾಜಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಗುಡ್ಡಗಾಡುಜನರನ್ನು ಸಂಘಟಿಸಿ ಬಲಿಷ್ಠಸೈನ್ಯ ಕಟ್ಟಿ ಅಸಾಮಾನ್ಯ ಸಾಧನೆಯಮೂಲಕ ಬಲಿಷ್ಟಮೊಗಲರನ್ನು ಸೋಲಿಸಿ ಹಿಂದವೀ ಸಾಮ್ರಾಜ್ಯ ಸ್ಥಾಪಿಸಲು ಸಾಧ್ಯವಾಗುವುದಾದರೆ!

ಪ್ರಯಾಣಕ್ಕೂ ಊಟಕ್ಕೂ ಹಣವಿಲ್ಲದಂತ ಅತ್ಯಂತ ದಾರುಣ ಪರಿಸ್ಥಿತಿಯಲ್ಲಿ ಅಮೇರಿಕಾದ ಸರ್ವಧರ್ಮಸಮ್ಮೇಳನಕ್ಕೆ ತೆರಳಿದ ಅಲ್ಲಿ ಅನೇಕ ಪ್ರತೀಕೂಲ ಪರಿಸ್ಥಿತಿಗಳನ್ನು ಎದುರಿಸಿ ಅಮೇರಿಕಾದಲ್ಲಿ ಹಿಂದುಧರ್ಮವನ್ನು ಎತ್ತಿಹಿಡಿಯಲು ಒಬ್ಬ ವೀರ ಸನ್ಯಾಸಿ ವಿವೇಕಾನಂದರಿಂದ ಸಾಧ್ಯವಾಗುವುದಾದರೆ!

ಕೆಲವೇಜನ ಬಾಲಕರನ್ನು ಒಂದೆಡೆ ಸೇರಿಸಿ ದಿನದಲ್ಲಿ ಒಂದುಗಂಟೆ ಆಟದೊಂದಿಗೆ ರಾಷ್ಟ್ರ ಹಿತವನ್ನು ಚರ್ಚಿಸುತ್ತಾ  ಆರಂಭವಾದ RSS ಇಂದು ವಿಶ್ವದ ಅತಿದೊಡ್ಡ ಸ್ವಯಂಸೇವಕ ಸಂಘಟನೆ ಎಂಬುದಾಗಿ ಬೆಳೆಯಲು ಡಾ ಹೆಡಗೇವಾರ್ ಇವರ ಒಂದು ಚಿಂತನೆಯಿಂದ ಸಾಧ್ಯವಾಗುವುದಾದರೆ!

ಶತೃಗಳ ಕಣ್ಣುತಪ್ಪಿಸಿ ದೇಶತೊರೆದು ವಿದೇಶದಲ್ಲಿನ ಜನರನ್ನು ಸಂಘಟಿಸಿ ಸೈನ್ಯವನ್ನುಕಟ್ಟಿ ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಯುದ್ಧಮಾಡಲು ಒಬ್ಬ ನೇತಾಜಿಯಿಂದ ಸಾಧ್ಯವೆಂದಾದರೆ!

ತನ್ನ ಎಪ್ಪತೈದನೇ ವಯಸ್ಸಿನಲ್ಲಿ ಅಮೇರಿಕಾದೇಶಕ್ಕೆ ಹೋಗಿ  ಇಸ್ಕಾನ್ ಸಂಸ್ಥೆಯನ್ನು ಸ್ಥಾಪಿಸಿ ವಿಶ್ವದೆಲ್ಲೆಡೆ ಕೃಷ್ಣಪ್ರಜ್ಞೆಯನ್ನು ಪಸರಿಸಲು ಶ್ರೀ ಚೈತನ್ಯ ಪ್ರಭುಪಾದರಿಂದ ಸಾಧ್ಯವಾಗುವುದಾದರೆ.

ಬಾಲ್ಯದಲ್ಲಿ ಚಾ ಮಾರುತ್ತಿದ್ದ ಸಾಮಾನ್ಯ ಹುಡುಗ ಮೋದೀಜಿ ಇಂದು ಕೋಟ್ಯಾಂತರ ಜನರ ಕಣ್ಮಣಿಯಾಗಿ ವಿಶ್ವನಾಯಕನಾಗಿ ಅಸಾಮಾನ್ಯನಾಗಿ ಬೆಳೆಯಲು ಸಾಧ್ಯವಾಗಬಹುದಾದರೆ

ಸಾಮಾನ್ಯ ಬಾಲಕ ಸನ್ಯಾಸಿಯಾಗಿ ಜೀವನ ಆರಂಭಿಸಿ ಇಂದು ಮುಖ್ಯಮಂತ್ರಿಯಾಗಿ ಉತ್ತರ ಪ್ರದೇಶದಲ್ಲಿ ಅಸಾಮಾನ್ಯ ಭೂಗತ ಗೂಂಡಾಗಳನ್ನು ಮಟ್ಟಹಾಕಲು ಸಾಧ್ಯವಾಗುವುದಾದರೆ ನಮ್ಮಿಂದೇಕೆ ಅಸಾಮಾನ್ಯವಾದುದನ್ನು ಸಾಧಿಸಲಾಗದು? ಖಂಡಿತ ಸಾಧ್ಯವಿದೆ. ವಿಶ್ವಾಸವಿರಲಿ.

ಪ್ರೇರಣಾದಾಯಕ ಸಾವಿರಾರು ಸಾಧಕರ ಇಂತಹ ಜೀವನ ಚರಿತ್ರೆಗಳು ನಮ್ಮ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ನಮ್ಮ ಪರಂಪರೆಯಲ್ಲಿದೆ. ನಮ್ಮ ಕಣ್ಣ ಮುಂದೆಯೇ ಇದೆ. ನಮ್ಮ ಪೂರ್ವಜರ ಇತಿಹಾಸದಲ್ಲಿದೆ. ಇದನ್ನು ನಾವು ಓದಬೇಕು ತಿಳಿಯಬೇಕು. ಇವುಗಳಿಂದ ಸ್ಪೂರ್ತಿಪಡೆಯಬೇಕು. ಹಿರಿಯರ ಸಾಧಕರ ಸಾಧನೆಗಳನ್ನು ನೋಡಿದಾಗ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವ ಅರಿವು ಹಾಗೂ ಆತ್ಮವಿಶ್ವಾಸ ನಮಗೆ ಉಂಟಾಗುತ್ತದೆ.  ಸರಿಯಾದ ಯೋಜನೆಯೊಂದಿಗೆ ಉತ್ತಮ ಉದ್ದೇಶ, ಸ್ಪಷ್ಟವಾದ ಗುರಿ ಹಾಗೂ ಗುರಿಸಾಧಿಸುವ ಛಲ ಹಾಗೂ ಪೂರಕವಾದ ಪ್ರಯತ್ನ ಇವು ನಮ್ಮಲ್ಲಿದ್ದೆರೆ, ನಾವು ಏನನ್ನೂ ಸಾಧಿಸಬಹುದಾಗಿದೆ. ನಮಗೆ ನಾವು ಮಾಡುತ್ತಿರುವ ಕೆಲಸ ಸಾಗುತ್ತಿರುವ ಹಾದಿ ಇದರಲ್ಲಿ ಸ್ಪಷ್ಟತೆ ಹಾಗೂ ವಿಶ್ವಾಸ ಇರಬೇಕು ಅಷ್ಟೆ.

ಕೃಷ್ಣನ ಕೌಶಲ್ಯ, ಅರ್ಜುನನ ಗುರಿ, ಭೀಮನ ಭಲ, ಧರ್ಮರಾಯನ ಸಹನೆ ಮತ್ತು ಧರ್ಮಪ್ರಜ್ಞೆ, ಅಭಿಮನ್ಯುವಿನ ಶೌರ್ಯ, ಏಕಲವ್ಯನ ಶ್ರದ್ಧೆ, ಕರ್ಣನ ದಾನ. ಭೀಷ್ಮನ ದೀಕ್ಷೆ (ಪ್ರತಿಜ್ಞೆ), ಯುಧಿಷ್ಠಿರನ ಹಠ, ವಿದುರನ ನೀತಿ, ಶಕುನಿಯ ಪ್ರತೀಕಾರ. ದ್ರೌಪತಿಯ ಹೊಂದಾಣಿಕೆ, ಕುಂತಿಯಸ್ವೀಕಾರ ಭಾವ, ಎಲ್ಲವೂ ನಾವು ಕಲಿಯುವ, ತಿಳಿಯುವ, ಅನುಸರಿಸುವ, ಅನುಕರಿಸುವ ವಿಷಯಗಳೇ ಆಗಿವೆ. ನಮ್ಮ ಹಿರಿಯರು ನಮಗೆ ಎಲ್ಲವನ್ನೂ ಹೇಳಿದ್ದಾರೆ. ತೋರಿಸಿದ್ದಾರೆ. ನಾವು ಏನನ್ನೂ ನೋಡದೆ ಕಣ್ಣುಮುಚ್ಚಿಕುಳಿತಿದ್ದೇವೆ. ನಾವು ಧೃತರಾಷ್ಟ್ರನಂತೆ ಅಂಧರಲ್ಲ ಆದರೆ ಗಾಂಧಾರಿಯಂತೆ ಸ್ವಯಂ ಕಣ್ಣು ಮುಚ್ಚಿಕೊಂಡು ಬದುಕುತ್ತಿದ್ದೇವೆ. ನಮ್ಮ ಪ್ರಾಚೀನರ ಶಾಸ್ತ್ರಜ್ಞಾನವನ್ನು ನಾವು ತಿಳಿಯುತ್ತಿಲ್ಲ. ನೋಡುತ್ತಿಲ್ಲ ನಮ್ಮ ಮಕ್ಕಳಿಗೆ ಹೇಳುತ್ತಿಲ್ಲ. ಧೃತರಾಷ್ಟ್ರ ಗಾಂಧಾರಿಯಂತೆ ನಾವು ನಮ್ಮ ಮುಂದಿನ ಜನಾಂಗವನ್ನು ಸಂಸ್ಕಾರದ ನಡೆಯಲ್ಲಿ ನಡೆಸದಿದ್ದಲ್ಲಿ. ನಮ್ಮ ಹಿಂದುತ್ವ ಹಿಂದೂ ಧರ್ಮ ಸರ್ವನಾಶವಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಬದುಕು ಗಾಂಧಾರಿಯಂತಿದೆ. ಕನಸು ಕೃಷ್ಣನಂತಿದೆ. ಅಂದರೆ ಸಿದ್ಧತೆ ಶೂನ್ಯ, ಬುದ್ಧಿ ಶೂನ್ಯ, ನಮ್ಮ ಮುಂದಿನ ಪೀಳೆಗೆನ್ನು ಬೆಳೆಸುತ್ತಿರುವ ದಾರಿ ದೇವರೇಬಲ್ಲ. ನಾವು ಮಕ್ಕಳಿಗೆ ಯಾವ ಸಂಸ್ಕಾರವನ್ನು ಕೊಡುತ್ತೇವೆಯೋ ಅದನ್ನೇ ಮುಂದೆ ಅವರಿಂದ ಪಡೆಯುತ್ತೇವೆ. ಇಂದು ವೃದ್ಧಾಶ್ರಮಗಳು, ವಿಚ್ಛೇದನಗಳು ಹೆಚ್ಚುತ್ತಿರುವುದಕ್ಕೆ ನಮ್ಮ ಶಿಕ್ಷಣವೇ ಕಾರಣ. ಭಾರತೀಯ ಧರ್ಮ ಹಾಗೂ ಸಂಸ್ಕೃತಿಯ ಗಂಧ ಗಾಳಿಯೂ ಇಲ್ಲದ ಮನೆಯ ಸಂಸ್ಕಾರಗಳನ್ನೂ ನಾಶಮಾಡುವ ಕ್ರಿಶ್ಚಿಯನ್ ಮಿಷನರಿಗಳು ನಡೆಸುವ ಕಾನ್ವೆಂಟ್ ಶಾಲೆಗಳಿಗೆ ಲಕ್ಷ ಲಕ್ಷ ದೇಣಿಗೆ ಕೊಟ್ಟು ಮಕ್ಕಳನ್ನು ಸೇರಿಸುತ್ತಾ. ಅಧರ್ಮ ನಾಶವಾಗಬೇಕು. ಹಿಂದೂ ಧರ್ಮ ಉಳಿಯಬೇಕು. ಹಿಂದೂಗಳು ಸಂಘಟಿತರಾಗಬೇಕು. ಭಾರತ ವಿಶ್ವಗುರುವಾಗಬೇಕೆಂದು ಕನಸುಕಾಣುತ್ತಿದ್ದೇವೆ. ಇದು ಸಾಧ್ಯವೇ? ನಾವು ಬದಲಾದರೆ ಎಲ್ಲವೂ ಸಾಧ್ಯ. ಬೇರೆಯವರನ್ನು ಬದಲಾಯಿಸುವ ಮೊದಲು ನಾವು ಬದಲಾಗಬೇಕು. ಬೇರೆಯವರಿಗೆ ಹೇಳುವ ಮೊದಲು ನಾವು ಆಚರಿಸಬೇಕು. ಇದುವೇ ಸಂಸ್ಕಾರ ಶಿಷ್ಟಾಚಾರ.

ಸಂಘಟನೆಯ ಆವಶ್ಯಕತೆಗಳು.

ಒಂದು ಸಂಘಟನೆಯ ಯಶಸ್ಸಿಗೆ ಸ್ಪಷ್ಟ ಹಾಗೂ ಉದಾತ್ತವಾದ ಗುರಿ ಇರಬೇಕು. ಅದನ್ನು ತಲುಪುವ ಕಾರ್ಯಯೋಜನೆ ಇರಬೇಕು ಪೂರ್ವಸಿದ್ಧತೆ ಬೇಕು. ಅದಕ್ಕೆ ಪೂರಕವಾಗಿ ಅರ್ಪಣಾಭಾವದ ಕಾರ್ಯಕರ್ತರ ಅವಶ್ಯಕತೆ ಇರುತ್ತದೆ. ಅಂತಹವರನ್ನು ಸಂಘಟನೆಯಲ್ಲಿ ಸಕ್ರಿಯವಾಗಿ ಜೋಡಿಸಬೇಕಾಗುತ್ತದೆ. ಅವರಿಗೆ ತಾವೇನು ಮಾಡಬೇಕೆಂಬುದು ಸ್ಪಷ್ಠವಾಗಿ ತಿಳಿದಿರಬೇಕಾಗುತ್ತದೆ. ಅವರಿಗೆ ನಿಯಮಿತವಾದ ತರಬೇತಿ ನೀಡಬೇಕಾಗುತ್ತದೆ. ಅವರನ್ನು ನಾಯಕರನ್ನಾಗಿ ಬೆಳೆಸಬೇಕಾಗುತ್ತದೆ. ನಮ್ಮ ದೇಶದ , ಧರ್ಮದ, ಇತಿಹಾಸದ, ಸಂಸ್ಕೃತಿಯ, ಬಗ್ಗೆ ಅವರಿಗೆ ತಿಳುವಳಿಕೆ ನೀಡಬೇಕಾಗುತ್ತದೆ.

ನಮ್ಮ ವಿರೋಧಿಗಳಾರು? ಅವರ ಉದ್ದೇಶವೇನು? ಅವರ ಕಾರ್ಯಚಟುವಟಿಕೆಗಳೇನು? ಅವರ ತಂತ್ರಗಳೆನು? ಅವರ ದೋಷಗಳೇನು ? ಅವರನ್ನು ನಿಯಂತ್ರಿಸುವುದು ಹೇಗೆ ? ಅವರ ತಂತ್ರಗಳಿಗೆ ನಾವೇನು ಪ್ರತಿತಂತ್ರಮಾಡಬೇಕು? ಈ ಎಲ್ಲಾ ವಿಚಾರಗಳನ್ನು ನಾವು ಮನಗಂಡು ನಮ್ಮ ಸಂಘಟನೆಯ ಕಾರ್ಯಯೋಜನೆಯ ರೂಪುರೇಷೆಗಳನ್ನು ರಚಿಸಬೇಕು.

ಧರ್ಮಸ್ಯಮೂಲಂ ಅರ್ಥಃ  ಎಂಬುದಾಗಿ ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಆತನ ಕುಟುಂಬವನ್ನು ಸಲಹುವ ಜವಾಬ್ದಾರಿ ಇರುತ್ತದೆ. ಇದಕ್ಕಾಗಿ ಉದ್ಯೋಗವೋ, ಉದ್ಯಮವೋ ಅಥವಾ ಇನ್ನಾವುದೇ ಆರ್ಥಿಕಸಂಪಾದನೆಯ ಮಾರ್ಗವೋ ಇರಬೇಕಾಗುತ್ತದೆ. ಹಣ ಇಲ್ಲದವನು ಸಂಘಟನಾ ಕೆಲಸಕ್ಕೆ ಸಮಯನೀಡುವುದು ಅಸಾಧ್ಯ. ಆದುದರಿಂದ ಸಂಘಟನೆಗಾಗಿ ಕೆಲಸಮಾಡುವವರಿಗೆ ಕುಟುಂಬನಿರ್ವಹಣೆಯ ಮಾರ್ಗವನ್ನೂ ತೋರಿಸಬೇಕಾಗುವುದು. ಇದಲ್ಲದೆ ಸಂಘಟನೆಯ ಕಾರ್ಯವಿಸ್ತರಣೆಗಳಿಗಾಗಿ ರಾಜ್ಯಾದ್ಯಂತ ದೇಶಾದ್ಯಂತ ಪ್ರವಾಸಮಾಡಬೇಕಾಗುವುದು. ಇದಕ್ಕೂ ಅನೇಕ ವೆಚ್ಛಗಳಿರುವುದು. ಕಾರ್ಯಾಲಯಗಳು ಬೇಕಾಗುವುದು. ಸುಳ್ಳುಕೇಸುಗಳನ್ನು ಎದುರಿಸಬೇಕಾಗಬಹುದು. ಕಾನೂನುರೀತ್ಯಾ ಹೋರಾಟ ಮಾಡಬೇಕಾಬಹುದು. ಕೆಲವು ಸಂತ್ರಸ್ಥರನ್ನು ಭೇಟಿಯಾಗಿ ಅವರಿಗೆ ನೈತಿಕ ಬಲ ತುಂಬಬೇಕಾಗಬಹುದು. ಹೀಗೆ ಇವೆಲ್ಲದರ ಬಗ್ಗೆಯೂ ಚಿಂತಿಸಬೇಕು. ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೂ ನಮ್ಮಲ್ಲಿ ಯೋಜನೆಗಳಿರಬೇಕು. 

ಬದ್ಧತೆ ಹಾಗೂ ಕಾರ್ಯದಕ್ಷತೆ – ಸಂಘಟನೆಗಾಗಿ ಕೆಲಸಮಾಡುವವರಿಗೆ ಬದ್ಧತೆ ಹಾಗೂ ಕಾರ್ಯದಕ್ಷತೆ ಇರಬೇಕು ನಾನು ಎನ್ನುವ ಅಹಂಕಾರವಿರಬಾರದು. ಕಾರ್ಯಕರ್ತರು ತಮ್ಮ ಕೆಲಸವನ್ನು ಬದಿಗಿರಿಸಿ ಸಂಘಟನೆಗಾಗಿ ಸಮಯಕೊಡುತ್ತಿರುತ್ತಾರೆ. ಇಂತಹ ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಇಲ್ಲಿ ಹಿರಿಯರು, ಕಿರಿಯರು, ಶ್ರೀಮಂತರು, ದುರ್ಬಲರು, ಮೇಲ್ಜಾತಿ ಕೆಳಜಾತಿ, ತಮಿಳು, ಕನ್ನಡ, ಹಿಂದಿ, ಇಂತಹ ಭಿನ್ನತೆಯ ತಾರತಮ್ಯದ ಅಲ್ಪತನವನ್ನು ಯಾರೂ ಪ್ರದರ್ಶಿಸಬಾರದು. ಅನೇಕ ಬಾರಿ ನಮ್ಮಲ್ಲಿ ಸಣ್ಣಮಟ್ಟದ ಅಹಂಕಾರ ಇದ್ದಲ್ಲಿ ಸಂಘಟನೆಯಲ್ಲಿ ನಮ್ಮನ್ನು ಅವಗಣಿಸುತ್ತಿದ್ದಾರೆಂಬ ಭಾವನೆ ನಮಗೆ ಬರಬಹುದು. ತಮ್ಮನ್ನು ಸರಿಯಾಗಿ ಮಾತನಾಡಿಸಲಿಲ್ಲ. ನನ್ನ ಸಲಹೆಯನ್ನು ಮನ್ನಿಸಲಿಲ್ಲ, ನನಗೆ ಹೆಚ್ಚು ಸಮಯವನ್ನು ನೀಡಲಿಲ್ಲ ನನಗೆ ಕಾರ್ಯಕ್ರಮದಲ್ಲಿ ನಿರ್ವಹಣಾ ಜವಬ್ದಾರಿ ನೀಡಲಿಲ್ಲ ವೇದಿಕೆಗೆ ಕರೆಯಲಿಲ್ಲ. ಹೀಗೆ ಅನೇಕ ನಮ್ಮ ಸಣ್ಣಪುಟ್ಟ ಅಪೇಕ್ಷಗಳಿರಬಹುದು. ಇಂತಹ ವಿಚಾರವನ್ನು ದೊಡ್ಡದು ಮಾಡಬಾರದು. ನಾನೆಂಬ ಅಹಂಕಾರವನ್ನು ಮನೆಯಲ್ಲಿಯೇ ಬಿಡಬೇಕು ನಾವು ಎಂಬುದಾಗಿ ಕೆಲಸಮಾಡಬೇಕು. ಬೇರೆಯವರು ಮಾಡುವುದನ್ನು ಕಂಡು ಖುಷಿ ಪಡಬೇಕು. ನಾನು ಹೈಲೈಟ್ ಆಗಬೇಕೆನ್ನುವ ಸ್ವಾರ್ಥ ಇರಬಾರದು. ನಮ್ಮಲ್ಲಿ ಸೇವಾಭಾವ ಪ್ರಧಾನವಾಗಿರಬೇಕು. ಎಲ್ಲಿ ಯಾವಾಗ ಏನು ಮಾಡಬೇಕೆನ್ನುವುದನ್ನು ನಾವೇ ಯೋಚಿಸಿಮಾಡಬೇಕು ಇಲ್ಲವೇ ನಾವೇ ಹಿರಿಯರಲ್ಲಿ ಕೇಳಿ ಮಾಡಬೇಕು. ನಾವು ಮಾಡಿದ ಕೆಲಸವನ್ನು ಹಿರಿಯರು ಗುರುತಿಸಬೇಕು, ನಮ್ಮನ್ನು ಪ್ರಶಂಸಿಸಬೇಕು ಎಂಬುದಾಗಿ ಬಯಸಬಾರದು. ಯಾವುದೇ ದೋಷಗಳು ಸಂಭವಿಸಿದರೆ ಅಂತಹದೋಷಗಳನ್ನು ಹಿರಿಯರು ಸ್ವೀಕರಿಸಬೇಕು. ಯಶಸ್ಸನ್ನು ಕಿರಿಯರಿಗೆ ನೀಡಬೇಕು. ಈ ರೀತಿ ಕಿರಿಯರಿಗೆ ಧೈರ್ಯನೀಡಬೇಕು. ಇಂತಹ ಅರ್ಪಣಾಭಾವದ ಸ್ವಯಂಸೇವಕರಿಂದ ಮಾತ್ರ ಸಂಸ್ಥೆಯು ಉನ್ನತವಾದುದನ್ನು ಸಾಧಿಸುವುದು ಸಾಧ್ಯವಾಗಿದೆ.

 

ಸಂಘಟನೆಯ ಸ್ವರೂಪ.

ಸಮಾಜದಲ್ಲಿನ ಜನರನ್ನು ಸ್ವಭಾವಕ್ಕನುಗುಣವಾಗಿ ಇಲ್ಲಿ ಅನೇಕ ವಿಭಾಗಗಳಲ್ಲಿ ಗುರುತಿಸಲಾಗಿದೆ. ಸಂಘಟನೆಯ ಚಿಂತನೆಗಳಿಗೆ ನಕಾರಾತ್ಮಕವಾಗಿರುವ ಸ್ವಭಾವದವರನ್ನು ಕೃಷ್ಣಪಕ್ಷದವರು ಎಂಬುದಾಗಿಯೂ, ಸಂಘಟನೆಗೆ ಪೂರಕವಾಗಿರುವ ಸಕಾರಾತ್ಮಕ ಮನಸ್ಥಿತಿಯವರನ್ನು ಶುಕ್ಲ ಪಕ್ಷದವರೆಂಬುದಾಗಿಯೂ ಪರಿಗಣಿಸಲಾಗುವುದು.

ಕೃಷ್ಣ ಎಂದರೆ ಕಪ್ಪು ಎಂಬುದಾಗಿ ಅರ್ಥ, ಈ ವರ್ಗದವರನ್ನು ಅಂಧಕಾರಕ್ಕೆ, ನಕಾರಾತ್ಮಕತೆಗೆ, ತಾಮಸ ಪ್ರವೃತ್ತಿಗೆ, ಅಧರ್ಮಕ್ಕೆ ಹೋಲಿಸಬಹುದು, ಕೃಷ್ಣಪಕ್ಷದಲ್ಲಿ ಚಂದ್ರ ವಿಕಾರವಾಗುತ್ತಾ ಹೋಗಿ ಅಮಾವಾಸ್ಯೆಯಂದು ಸಂಪೂರ್ಣ ಕಪ್ಪಾಗಿಬಿಡುತ್ತಾನೆ. ಹೀಗೆಯೇ ಕೃಷ್ಣಪಕ್ಷದವರು ಧರ್ಮದ್ರೋಹದ ಹಾದಿಯನ್ನು ಹಿಡಿದು ಮುಂದುವರಿಯುತ್ತಾ ಕೊನೆಗೊಂದು ದಿನ ಧರ್ಮಭ್ರಷ್ಟರಾಗಿ ಹೋಗುತ್ತಾರೆ. ನಾವು ಕೃಷ್ಣಪಕ್ಷದವರಿಂದ ದೂರವಿರಬೇಕು ಜಾಗ್ರತರಾಗಿರಬೇಕು. ಅವರನ್ನು ಶುಕ್ಲಪಕ್ಷಕ್ಕೆ ತರಲು ನಿರಂತರ ಕ್ರಿಯಾಶೀಲರಾಗಿರಬೇಕು.

ಶುಕ್ಲ ಎಂದರೆ ಬಿಳಿ ಎಂದರ್ಥ ಇದನ್ನು ನಾವು ಪ್ರಕಾಶಕ್ಕೆ ಹೋಲಿಸಬಹುದು. ಸಕಾರಾತ್ಮಕತೆ, ಸಾತ್ವಿಕ ಪ್ರವೃತ್ತಿ,  ಧರ್ಮ ಮಾರ್ಗಕ್ಕೆ ಹೋಲಿಸಬಹುದು. ಶುಕ್ಲಪಕ್ಷದಲ್ಲಿ ಕೃಷ್ಣ ಬೆಳಗುತ್ತಾ ಹೋಗಿ ಹುಣ್ಣಿಮೆಯಂದು ಪೂರ್ಣ ಚಂದ್ರನಾಗಿ ಬೆಳಗುತ್ತಾನೆ. ನಮ್ಮ ಜೀವನ ಕೃಷ್ಣಪಕ್ಷದ ಚಂದ್ರನತಾಗದೆ ಶುಕ್ಲಪಕ್ಷದ ಚಂದ್ರನಂತಾಗಬೇಕು.

ಆಹಾರಪದ್ದತಿಯಲ್ಲಿಅಭ್ಯಾಸಕ್ಕನುಗುಣವಾಗಿ ಎರಡು ವಿಭಾಗ ಸಮಾಜದಲ್ಲಿದೆ ಇದನ್ನು ಸಾಂಕೇತಿಕವಾಗಿ  ಎರಡೂ ಪದ್ದತಿಗಳಲ್ಲಿ ಬಲಿಷ್ಟವಾಗಿರುವ ಆನೆ ಹಾಗೂ ಸಿಂಹ ಗಳಿಗೆ ಹೋಲಿಸಲಾಗಿದೆ. (ಶಾಖಾಹಾರಿ ಹಾಗೂ ಮಾಂಸಾಹಾರಿ) ಎಂಬುದಾಗಿ.

ಸಂಘಟನೆಗೆ ಸೇರುವವರು ಅಂತರ್ಜಾಲದಲ್ಲಿ ಹೆಸರನ್ನು ನೊಂದಣಿಮಾಡಬೇಕು ಹೀಗೆ ನೊಂದಾಯಿತರಾದವರಿಗೆ ಸಪೋರ್ಟರ್ ಅಥವಾ ಧರ್ಮ ಸಾಧಕ ಎನ್ನಲಾಗುವುದು. ನೋಂದಣಿಗೆ ಯಾವುದೇ ನೊಂದಣಿಶುಲ್ಕ ಇರುವುದಿಲ್ಲ . ಆದರೆ ಒಬ್ಬರು ಪರಿಚಯಿಸುವವರು ಬೇಕಾಗುತ್ತದೆ. ಸಂಘಟನೆಯಲ್ಲಿ ಧರ್ಮ ಸೈನಿಕ (ಪ್ರೋಮೋಟರ್/ಕಾರ್ಯಕರ್ತ) ಜವಾಬ್ದಾರಿ ಇರುವವರು ಮಾತ್ರ ನಿಮ್ಮ ನೊಂದಣಿಯನ್ನು ಧೃಢಿಕರಿಸಬಹುದು.

ಪ್ರಮೋಟರ್ (ಧರ್ಮಸೈನಿಕ) ಜವಾಬ್ದಾರಿ ಇರುವವರಿಗೆ ಸಂಘಟನಾಸೂಚನೆಗಣುಗುಣವಾಗಿ ಒಂದು ನಿರ್ಧಿಷ್ಟ ಸಂಖ್ಯೆಯ ಧರ್ಮಾಭಿಮಾನಿಗಳನ್ನು (ಸಪೋರ್ಟರ್ಸ್/ಸದಸ್ಯರನ್ನು) ಸೇರಿಸುವ ಜವಾಬ್ದಾರಿ ಇರುತ್ತದೆ.  ಅವರಲ್ಲಿ ಸ್ವಲ್ಪಜನ ಕಾರ್ಯಕರ್ತರು (ಪ್ರೊಮೋಟರ್ಸ) ಇರುವಂತೆ ನೋಡಿಕೊಳ್ಳಬೇಕು.

ನಂತರದಲ್ಲಿ ಮುಂದುವರಿದಂತೆ ತಮ್ಮ ಕಾರ್ಯಕ್ಷಮತೆ ಹಾಗೂ ಸಂಘಟನಾ ಸಾಮರ್ಥ್ಯವನ್ನು ಬಳಸಿಕೊಂಡು ಅವರು ತಮ್ಮ ದಳವನ್ನು ಮುನ್ನಡೆಸುತ್ತಾ ತಾವೂ ಉತ್ತಮ ನಾಯಕರಾಗಿ ಬೆಳೆಯಬೇಕು ಹೀಗೆ ಮುಂದುವರಿದಂತೆ ಸಂಘಟನೆಯಲ್ಲಿ ಕಾರ್ಯಕರ್ತರ ಬೆಳವಣಿಗೆಗೆ ಅನುಗುಣವಾಗಿ ಅವರ ಜವಾಬ್ದಾರಿ ವರ್ಧಿಸುತ್ತಾ ಹೋಗುವುದು. ಸ್ವಸಾಮರ್ಥವೇ ಇಲ್ಲಿ ಬೆಳವಣಿಗೆಯ ಮಾನದಂಡವಾಗಿರುವುದು. ಅವಕಾಶಗಳು ನಮ್ಮನ್ನರಸಿಬರುವುದು ದೈವಾಧೀನವಾಗಿರುವುದು. ಮೊದಲು ಅವಕಾಶವನ್ನು ಬಳಸಿಕೊಂಡವರು ಬಹುಬೇಗನೆ ಬೆಳೆಯಲು ಸಾಧ್ಯವಾಗಲಿದೆ.

ಸಂಘಟನೆಗೆ ಪ್ರವೇಶ –

1.ಧರ್ಮ ಸಾಧಕ – ಸದಸ್ಯ ಅಥವಾ ಬೆಂಬಲಿಗ ಅಥವಾ ಸಪೋರ್ಟರ್ .  ಈತ ತಾನು ಸಂಘಟನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುತ್ತಾನಾದಲ್ಲಿ ಎರಡನೇ ಸ್ಥಾನಕ್ಕೆ ತನ್ನ ಹೆಸರನ್ನು ಪರಿಗಣಿಸಬೇಕಾಗಿ ತನ್ನನ್ನು ಪರಿಚಯಿಸಿದವರಲ್ಲಿ ಕೇಳಿಕೊಳ್ಳಬಹುದು .

2.ಧರ್ಮಸೈನಿಕ–  ಕಾರ್ಯಕರ್ತ ಅಥವಾ ಪ್ರಮೋಟರ್ .  ದ್ವಿತೀಯ ಸ್ಥಾನದ ಜವಾಬ್ದಾರಿಯನ್ನು ಹೊಂದಿದವನು. ಈತ ನೂರುಜನರ ತಂಡವನ್ನು ಕಟ್ಟಿ ಮುನ್ನಡೆಸುವ ಜವಾಬ್ದಾರಿಯನ್ನು ಹೊಂದಿರುತ್ತಾನೆ.

 

ಸಂಘಟನೆಯ ಕಾರ್ಯಪದ್ದತಿ.

ಸಮಾಜದಲ್ಲಿ ಎರಡುಗಣಗಳಿರುವುದಾಗಿ ಈ ಹಿಂದೆ ಸ್ಪಷ್ಟಪಡಿಸಿದೆ. ಶುಕ್ಲ ಪಕ್ಷ ಹಾಗೂ ಕೃಷ್ಣಪಕ್ಷ ಇಲ್ಲಿ ಕೃಷ್ಣಪಕ್ಷದವರನ್ನು ಶುಕ್ಲಪಕ್ಷಕ್ಕೆ ಪರಿವರ್ತಿಸುವುದು ಹಾಗೂ ಶುಕ್ಲಪಕ್ಷದವರನ್ನು ಉನ್ನತಿಯತ್ತ ಮುನ್ನಡೆಯಲು ಮಾರ್ಗದರ್ಷನ ನೀಡುವುದು. ಕೆಲಸವಾಗಿರುತ್ತದೆ.

ಯಾವುದೇ ಮಹಾನ್ ಕಾರ್ಯದ ಯಶಸ್ಸುಕೂಡಾ ಚಿಕ್ಕ ಚಿಕ್ಕ ಕೆಲಸಗಳನ್ನು ಶ್ರದ್ಧೆಯಿಂದ ನಿರಂತರವಾಗಿ ಮಾಡುವುದರಿಂದ ಸಾಧ್ಯವಾಗುತ್ತದೆ. ಆದುದರಿಂದ ಸಂಘಟನೆಯ ಗುರಿಸಾಧಿಸಲು ಸದಸ್ಯರು ಮಾಡಬೇಕಾದ ಚಿಕ್ಕ ಚಿಕ್ಕ ಕೆಲಸಗಳನ್ನು ಪಟ್ಟಿಮಾಡಿ ಅದನ್ನು ನಿರಂತರವಾಗಿ ಪಾಲಿಸುವ ಹವ್ಯಾಸವನ್ನು ರೂಢಿಗೊಳಿಸುವುದು ಸಂಘಟನೆಯ ಪ್ರಮುಖಕಾರ್ಯವಾಗುವುದು.

“ಹಿಂದೂ ರಾಷ್ಟ್ರ” ಸ್ಥಾಪನೆ ನಮ್ಮ ಸಂಘಟನೆಯ ಗುರಿಯಾಗಿದೆ. ನಮ್ಮ ದೇಶ ಇಂಡಿಯಾದಿಂದ ಭಾರತವಾಗಬೇಕಿದೆ. ಹಿಂದೂ ರಾಷ್ಟ್ರದಲ್ಲಿ ಹಿಂದುವಿನ ವರ್ತನೆ ಹೇಗಿರಬೇಕು? ಆತನ ಮನೆ ಹೇಗಿರಬೇಕು? ಕುಟುಂಬದಲ್ಲಿ ಆತನ ಜವಾಬ್ದಾರಿ ಏನು?  ಭಾರತದಲ್ಲಿ ಇರುವ ಇತರ ಮತೀಯರ ಸ್ಥಾನಮಾನ ಏನು? ಹಿಂದುಗಳ ಧಾರ್ಮಿಕ ಸ್ಥಳಗಳು ಹೇಗಿರಬೇಕು? ರಾಜಕೀಯ ನಾಯಕರು ಹೇಗಿರಬೇಕು? ವಿದೇಶೀನೀತಿ ಹೇಗಿರಬೇಕು? ಶಿಕ್ಷಣ ಹೇಗಿರಬೇಕು? ಈ ಎಲ್ಲಾ ವಿಚಾರಗಳಲ್ಲಿ ನಮಗೆ ಸ್ಪಷ್ಟತೆ ಇರಬೆಕು. ಜನರನ್ನು ಜಾಗ್ರತಿಗೊಳಿಸಬೇಕಿದೆ. ಈ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡೋಣ.  

 

ಶ್ರೀಜಿ

ಜೈ ಹಿಂದ್ ಜೈ ಶ್ರೀರಾಮ್

1. ಅಖಂಡ ಭಾರತ ಸನಾತನ ಸ್ವಾಭಿಮಾನ ಸೇನೆ ಸಂಘಟನೆ ಸ್ಥಾಪಿಸಿರುವುದು ಹಿಂದೂ ಧರ್ಮ ಹಾಗೂ ಹಿಂದೂ ರಾಷ್ಟ್ರ ರಕ್ಷಣೆ ಹಾಗೂ ಸನಾತನ ಸಂಸ್ಜೃತಿಯ ಪುನರುತ್ಥಾನದ ದೃಷ್ಟಿಯೊಂದಿಗೆ. ಅಸಂಘಟಿತ ಹಿಂದುಗಳಿಗೆ ಧ್ವನಿಯಾಗುವುದೇ ಸಂಘಟನೆಯ ಮೂಲ ಉದ್ದೇಶವಾಗಿದೆ.

 

2.ಯಾವುದೇ ವ್ಯಕ್ತಿ ಸಂಘಟನೆಯಒಳಬರಬೇಕಿದ್ದರೆ ಆತನು ಒಬ್ಬ ಧರ್ಮಸೈನಿಕನ ಮಾರ್ಗದರ್ಷನದಲ್ಲಿಯೇ ಬರಬೇಕು. ಅನ್ಯಮಾರ್ಗ ಇರುವುದಿಲ್ಲ. ನಮ್ಮಲ್ಲಿ ಹೆಸರು ನೊಂದಾಯಿಸಿಕೊಂಡ ವ್ಯಕ್ತಿಯು, ಧರ್ಮಸಾಧಕ/ಬೆಂಬಲಿಗ/ಸಪೋರ್ಟರ್/ ಹೀಗೆ ಗುರುತಿಸಿಕೊಳ್ಳುತ್ತಾನೆ. ಅತನಿಗೆ ಒಂದು ಗುರುತಿನ ಸಮಕ್ಯೆ ಇರುತ್ತದೆ. ಗುರುತುಪತ್ರ ಸಿಗುತ್ತದೆ.

 

3.ಧರ್ಮಸಾಧಕನು ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳಲು ಬಯಸಿದಲ್ಲಿ ಧರ್ಮಸೈನಿಕನಾಗಿ ಜವಾಬ್ದಾರಿಯನ್ನು ಹೊಂದಬಹುದು. ಈ ಜವಾಬ್ದಾರಿ ಏನೆಂಬುದನ್ನು ನಿಮ್ಮನ್ನು ಪರಿಚಯಿಸಿದ ಧರ್ಮ ಸೈನಿಕನು ನೀಡುತ್ತಾನೆ.

 

4.“ಅಖಂಡ ಭಾರತ ಸನಾತನ ಸ್ವಾಭಿಮಾನ ಸೇನೆ” ಈ ಸಂಘಟನೆಗೆ ಬರುವವರಿಗೆ ಸಂಘಟನೆಯಗುರಿಗೆ ಬಲನೀಡುವುದು ಅವರ ಗುರಿಯಾಗಬೇಕು. ವೈಯುಕ್ತಿಕ ಗುರಿಗಾಳಾದ, ರಾಜಕೀಯ ಅಪೇಕ್ಷೆ, ಪ್ರತಿಫಲಾಪೇಕ್ಷ, ಅಧಿಕಾರ ಅಪೇಕ್ಷೆ, ಪ್ರಚಾರ ಅಭಿಲಾಷೆ, ಧನಾಪೇಕ್ಷೆ, ಹಾಗು ತಮ್ಮ ವ್ಯವಹಾರದ ವೇದಿಕೆಯಾಗಿಸಿಕೊಳ್ಳುವ ಅಪೇಕ್ಷೆ ಇಂತಹ ಯಾವುದೇ ಸಂಕುಚಿತ ಮನೋಭಾವದ ಸ್ವ ಹಿತಾಸಕ್ತಿ ಇರಬಾರದು. ನಮ್ಮ ಧರ್ಮ, ನಮ್ಮ ದೇಶ, ಹಾಗೂ ನಮ್ಮ ಸಂಸ್ಕೃತಿಗಾಗಿ ನನ್ನ ಸೇವೆ, ಸಮಯ, ಹಾಗೂ ಶ್ರಮವನ್ನು ಅರ್ಪಿಸುತ್ತಿದ್ದೇನೆ ಎನ್ನುವ ಸಮರ್ಪಣಾ ಭಾವದೊಂದಿಗೆ ಆತ ಕೆಲಸಮಾಡಬೇಕು. ನಿಷ್ಕಾಮ ಕರ್ಮ. ಸಮಷ್ಟಿಹಿತ. ಇವೆರಡು ಮುಖ್ಯವಾಗಿರಬೇಕು. ಆಗ ಫಲಿತಾಂಶ ನಿಧಾನಗತಿಯಲ್ಲಿದ್ದರೂ ನಿರಾಶೆ ಹತಾಶೆಗಳು ಆಗುವುದಿಲ್ಲ.

 

5.ನಾವು ಮಾಡಹೊರಟಿರುವ ಕಾರ್ಯ ದೀರ್ಘಾವಧಿಯದ್ದು. ಅಲ್ಪಾವಧಿಯದ್ದೋ ಶೀಘ್ರ ಪ್ರತಿಫಲ ದೊರೆಯುವಂತಹದ್ದೋ ಅಲ್ಲ ಈ ಪರಿಜ್ಞಾನ ಪ್ರತಿಯೊಬ್ಬರಿಗೂ ಇರಬೇಕು. ಇಲ್ಲಿ ಸಹನೆ ಹಾಗೂ ನಿರಂತರ ಕ್ರಿಯಾಶೀಲತೆ ಬೇಕಾಗುತ್ತದೆ. ನಮ್ಮ ಕೆಲಸವನ್ನು ತಪಸ್ಸಿನಂತೆ ಮಾಡಬೇಕು. ಎಲ್ಲಿಯೂ ಮಾರ್ಗಭ್ರಷ್ಟರಾಗಬಾರದು. ಸಹನೆಯನ್ನು ಕಳೆದುಕೊಳ್ಳಬಾರದು. ಕರ್ತರ್ವ್ಯದಿಂದ ವಿಮುಖರಾಗಬಾರದು. ಅಡೆತಡೆಗಳು ನೂರಾರು ಬರುತ್ತವೆ. ಮಾನಾಪಮಾನಗಳಾಗುತ್ತವೆ ಇದಕ್ಕೆಲ್ಲಾ ವಿಛಲಿತರಾಗದೆ ಕಲಸ ಮಾಡುವ ಕಾರ್ಯ ಕ್ಷಮತೆಯನ್ನು ಹೊಂದಬೇಕು. ಒಂದು ಗುರಿಯ ಸಾಧನೆಗೆ ಶ್ರದ್ಧೆಯಿಂದ ನಿರಂತರವಾಗಿ ಮಾಡುವ ಕೆಲಸವನ್ನೇ ತಪಸ್ಸು ಎನ್ನಲಾಗುತ್ತದೆ.

 

6.ಕಾರ್ಯಕರ್ತರಿಗೆ “ನಾನು” ನನ್ನಿಂದ ಎನ್ನುವ ಅಹಂಕಾರ ಇರಬಾರದು. ನಾನು ವಯಸ್ಸಿನಲ್ಲಿ ಹಿರಿಯ, ನಾನು ಜಾತಿಯಲ್ಲಿ ಉತ್ತಮ, ನಾನು ಹಣದಲ್ಲಿ ಸಮರ್ಥ, ನಾನು ಉನ್ನತ ಹುದ್ದೆಯಲ್ಲಿರುವವನು, ನಾನು ಬುದ್ಧಿವಂತ, ನಾನು ಶಕ್ತಿವಂತ, ನನ್ನ ಹಿಂದೆ ದೊಡ್ಡಬೆಂಬಲಿಗರ ಪಡೆ ಇದೆ. ನನ್ನಲ್ಲಿ ರಾಜಕೀಯ ಶಕ್ತಿ ಇದೆ. ನಾನು ಇಷ್ಟು ಕೆಲಸಮಾಡಿದ್ದೇನೆ, ಇಷ್ಟು ಹಣ ದೇಣಿಗೆ ನೀಡಿದ್ದೇನೆ, ನನಗೆ ವಿಶೇಷ ಮರ್ಯಾದೆ ಕೊಡಬೇಕು. ಗುರುತಿಸಬೇಕು. ಸಾಲುಹಾಕಿ ಸನ್ಮಾನಿಸಬೇಕು, ಬರುವಾಗ ಎದ್ದುನಿಲ್ಲಬೇಕು. ಹೀಗೆ ಅಪೇಕ್ಷೆ ಮತ್ತು ಅಹಂಭಾವ ಎರಡೂ ಇರಬಾರದು. ನನ್ನನ್ನು ಕಂಡಾಗ ಹಿರಿಯರು ಮಾತನಾಡಿಸಲಿಲ್ಲ, ಕರೆದು ಕೂರಿಸಲಿಲ್ಲ, ನನಗೆ ಸಂವಾದಕ್ಕೆ ಹೆಚ್ಚು ಸಮಯಾವಕಾಶ ನೀಡಲಿಲ್ಲ, ನನ್ನ ಮಾತನ್ನು ಕೇಳಲಿಲ್ಲ, ಇಂತಹ ಸಂಕುಚಿತ ಭಾವ ಇರಬಾರದು. ಎಲ್ಲರೂ ಒಂದೇ ಉದ್ದೇಶಕ್ಕೆ ಒಂದೇ ಗುರಿಗೆ ಕೆಲಸಮಾಡಲು ಬಂದವರು ಎಲ್ಲರ ಕೆಲಸವೂ ಮಹತ್ವವಾದದ್ದು ನನಗೆ ದೇವರು ಶಕ್ತಿಕೊಟ್ಟಿದ್ದು ನಾನು ನನ್ನ ಶಕ್ತಿಗನುಗುಣವಾಗಿ ಅಧಿಕ ಸೇವೆ ಮಾಡುತ್ತೇನೆ ನಾನು ಎಲ್ಲರೊಂದಿಗೆ ಸಮಾನ ಎನ್ನುವ ಉದಾರತೆ ಇರಬೇಕು. ನಮ್ಮಲ್ಲಿ ಏನೇವಿಶೆಷತೆ ಇದ್ದರೂ ದೇವರ ಅನುಗ್ರಹದಿಂದ ಬಂದಿದ್ದು ಎನ್ನುವ ಕೃತಜ್ಞತಾಭಾವ ಇರಬೇಕು.

 

7.ನಿರ್ಣಯತೆಗೆದುಕೊಳ್ಳುವಾಗ ಎಲ್ಲರೊಂದಿಗೆ ಸಮಾಲೋಚನೆ ಮಾಡಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ತೆಗೆದುಕೊಳ್ಳಬೇಕು. ಕೆಲ ಒಮ್ಮೆ ಎರಡು ವಿಭಿನ್ನ ಅಭಿಪ್ರಾಯಗಳು ಪ್ರಭಲವಾಗಿ ವ್ಯಕ್ತವಾದಾಗ ಹಿರಿಯರು ತೆಗೆದುಕೊಳ್ಳುವ ನಿರ್ಣಯಕ್ಕೆ ನಾವು ಬೆಂಬಲಿಸಬೇಕು. ಮುಂದೆ ಅದು ತಪ್ಪಿದ್ದಲ್ಲಿ ಪುನಃ ಪುನರ್ವಿಮರ್ಷೆಗೊಳಪಡಿಸಿ ಸರಿಪಡಿಸಿಕೊಳ್ಳಬೇಕು. ಕೆಲ ಒಮ್ಮೆ ಹತ್ತುಜನರ ಅಭಿಪ್ರಾಯ ಒಂದಿದ್ದು ಒಬ್ಬರ ಅಭಿಪ್ರಾ ವಿಭಿನ್ನವಾಗಿದ್ದು ಅದುವೇ ಸಂಘಟನೆಗೆ ಪೂರಕ ಎಂಬಂತಿದ್ದರೆ. ಹಿರಿಯರು ಅದನ್ನೇ ಸ್ವೀಕರಿಸಬಹುದು. ಅಂತಹ ಸಂದರ್ಭದಲ್ಲಿ ಸಮಾಧಾನದಿಂದ ವರ್ತಿಸಬೇಕು. ಎಲ್ಲೆಡೆಯೂ ಬಹುಮತವೇ ಮಾನದಂಡವಾಗಲಾರದು. ಆದರೆ ಅಂತಹ ಸೂಕ್ಷ್ಮವಿಷಯವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಬೇಕು. ಒಂದು ವೇಳೆ ಅವರ ನಿರ್ಣಯ ತಪ್ಪೆಂದು ತಿಳಿದಾಗ ಹಿರಿಯರೂ ಸ್ವಾಭಿಮಾನಬಿಟ್ಟು ಯೋಗ್ಯನಿರ್ಣಯವನ್ನು ಮನ್ನಿಸಬೇಕು.

 

8. ಉತ್ತಮವಾಗಿ ನಿಸ್ವಾರ್ಥಕೆಲಸಮಾಡಿಯೂ ಕೆಲಒಮ್ಮೆ ಅಪವಾದಗಳನ್ನು ಕೇಳುವ ಪರಿಸ್ಥಿತಿ ಬರಬಹುದು. ಹೆರಿಯರೇ ನಮ್ಮನ್ನು ಅಪರಾಧಿ ಎಂಬಂತೆ ನೋಡಬಹುದು. ಅಂತಹ ಸಂದರ್ಭದಲ್ಲಿ ಅತೀವ ದುಃಖ ನಿರಾಶೆ ಹತಾಶೆ ಉಂಟಾಗುವುದು ಸಹಜ. ಸಿಟ್ಟೂಬರುತ್ತೆದೆ. ಅಂತಹ ಸಮಯದಲ್ಲಿ ಧರ್ಮದರಕ್ಷಣೆಗಾಗಿ ತಾಳ್ಮೆಯಿಂದ ವರ್ತಿಸಬೇಕು. ಸ್ವಲ್ಪಸಮಯ ನಿರ್ಲಿಪ್ತರಾಗಿದ್ದು ವೀಕ್ಷಿಸಬೇಕು. ಏಕಾಂಗಿಯಾಗಿಯೇ ನಮ್ಮ ಪಥದಲ್ಲಿ ನಡೆಯಬೇಕು ಆದರೆ ಧರ್ಮದ್ರೋಹಿಗಳೊಂದಿಗೆ ಸೇರಬಾರದು. ವಿರೋಧಿಗಳೊಂದಿಗೆ ಸೇರುವುದು. ಅವರಿಗೆ ಸಹಾಯವಾಗುವಂತೆ ನಡೆದುಕೊಳ್ಳುವುದು ಮುಂತಾಗಿ ಮಾಡಬಾರದು. ಸಣ್ಣಪುಟ್ಟ ದೋಶಗಳನ್ನು ಕ್ಷಮಿಸುವ ವಿಶಾಲತೆಯೂ ಕೆಲವೊಮ್ಮೆ ಇರಬೇಕು.

 

9.ಹಿರಿಯರ ನಿರ್ಣಯವು ತಪ್ಪಾಗಿದ್ದಲ್ಲಿ ನೇರವಾಗ ಅವರೊಂದಿಗೆ ನಿಮ್ಮ ಅಭಿಪ್ರಾಯವನ್ನು ಹೇಳಬೇಕು. ಹೊರಗಡೆ ಅದನ್ನು ರಾದ್ದಾಂತ ಮಾಡಬಾರದು. ಭಿನ್ನಾಭಿಪ್ರಾಯಗಳಿದ್ದಲ್ಲಿ ವಾದಮಾಡದೆ ಮೌನವಾಗಿಬಿಡಬೇಕು ಉದ್ದ ಎಳೆಯುತ್ತಾ ಹೋಗಬಾರದು. ನಿನ್ನ ಅಭಿಪ್ರಾಯ ನಿನಗೆ ನನ್ನ ಅಭಿಪ್ರಾಯ ನನಗೆ ವಾದಬೇಡ ಎಂದು ಸ್ನೇಹ ಉಳಿಸಿಕೊಳ್ಳಬೇಕು. ವಾದಕ್ಕೂ ಒಂದು ಮಿತಿ ಇರುತ್ತದೆ ಹೇಳಿದವಿಷಯವನ್ನೂ ಮೂರಕ್ಕಿಂತ ಹೆಚ್ಚುಬಾರಿ ಎಳೆಯಬಾರದು. ಭಿನ್ನಾಭಿಪ್ರಾಯವಿದ್ದರೆ. ಆವಿಷಯದಲ್ಲಿ ಸಕ್ರಿಯತೆ ತೋರದೆ ಸುಮ್ಮನಾಗಿ ಬಿಡಬೇಕು. ಮುಂದೆ ನೀವು ಸರಿ ಇದ್ದರೆ ಅದನ್ನು ಗುರುತಿಸುವವರೂ ಇರುತ್ತಾರೆ. ಕಾಲವು ಎಲ್ಲವನ್ನೂ ಸರಿಮಾಡುತ್ತದೆ.

 

10.ಸಂಘಟನೆಯಲ್ಲಿ ಅನ್ಯರದೋಷಾಣ್ವೇಶಣೆ ಮಾಡುವುದು ಹಾಗೂ ಅದನ್ನು ಸರ್ವತ್ರ ವರದಿಮಾಡುವುದು ಇದೇ ನಮ್ಮ ನಿತ್ಯವ್ಯವಹಾರವಾಗಿರಬಾರದು. ಇಂತಹ ದೋಷಗಳನ್ನು ಹಿರಿಯರ ಗಮನಕ್ಕೆ ತರಬೇಕು ಹಿರಿಯರು ಇದಕ್ಕೆ ಸರಿಯಾಗಿ ಸ್ಪಂದಿಸಬೇಕು. ಮೂರನೆಯವರಲ್ಲಿ ಅಥವಾ ಕಂಡ ಕಂಡವರಲ್ಲಿ ಹೇಳುತ್ತಾ ಕೇಳುತ್ತಾ ಹೋಗುವುದು ಒಂದು ಛಾಳಿ, ಅಥವಾ ಒಂದು ಮಾನಸಿಕ ರೋಗವಾಗಿದೆ. ನಮ್ಮಲ್ಲಿ ಇಂತಹ ರೋಗದ ಲಕ್ಷಣ ಿರದಂತೆ ಣೊಡಿಕೊಳ್ಳಬೇಕು.

 

11.ಸಂಘಟನೆಯ ಶಿಷ್ಟಾಚಾರಗಳು ಬೇರೆಯವರಿಗೆ ಉಪದೇಶಕ್ಕಾಗಿ ಆಗಿರುವುದಿಲ್ಲ ನಾವು ಸ್ವಯಂ ಪರಿಪಾಲಿಸಬೇಕು. ಬೇರೆಯವರು ನಾವು ಹೇಳಿದ್ದನ್ನು ಕೇಳಿ ಶಿಷ್ಟಾಚಾರ ಕಲಿಯುವುದಲ್ಲ ನಮ್ಮವರ್ತನೆಯನ್ನು ನೋಡಿ ಕಲಿಯುವಂತೆ ಬದುಕಬೇಕು.

 

12.ಅನ್ಯಾಯವನ್ನು ಎಷ್ಟೇ ದೊಡ್ಡ ಜನರುಮಾಡಿದರೂ ಅದನ್ನು ಅನ್ಯಾಯವೆಂದು ಹೇಳಲು ಹಾಗೂ ಪ್ರತಿಭಟಿಸಲು ಯಾವುದೇ ಹಿಂಜರಿಕೆ ಇರಬಾರದು. ಆದರೆ ಅದು ಆದಷ್ಟು ನಾಲ್ಕುಗೋಡೆಗಳ ಮಧ್ಯದಲ್ಲಿ ಹಿರಿಯರೊಂದಿಗೆ ಪರಿಹಾರವಾಗುವಂತೆ ನೋಡಿಕೊಳ್ಳಬೇಕು. ಆಸಾಧ್ಯವಾದಲ್ಲಿ ಬೀದಿಗೆಬಂದು ಹೋರಾಡುವುದಕ್ಕೂ ಸಿದ್ಧರಿರಬೇಕು.

 

13.ಸಂಘಟನೆಯನ್ನು ಬೆಳೆಸಬೇಕು ಇಲ್ಲಿ ಸಂಖ್ಯೆ ಮಾತ್ರ ಮುಖ್ಯವಾಗಿರದೆ ಸದಸ್ಯರ ವ್ಯಕ್ತಿತ್ವ ಹಾಗೂ ಗುಣಮಟ್ಟವೂ ಅತ್ಯಂತ ಮುಖ್ಯವಾಗಿರಬೇಕು. ಆದರೆ ಯಾರನ್ನೂ ಅವರ ಜಾತಿ ಅಥವಾ ಅವರ ದೌರ್ಬಲ್ಯವನ್ನು ಎತ್ತಿಇಹಿಡಿದು ದೂಷಿಸಬಾರದು. ಅವಮಾನಿಸಬಾರದು.

 

14.ಸಂಘಟನೆಯಿಂದ ತನಗೇನು ಲಾಭ ಎನ್ನುವ ವೈಯುಕ್ತಿಕ ಬಯಕೆ ಇರಬಾರದು. ನಾನು ಧರ್ಮ ದೇಶ ಹಾಗೂ ಸಂಸ್ಕೃತಿಗಾಗಿ ಏನು ಮಾಡಬಲ್ಲೆ ಎಂಬುದಾಗಿ ಚಿಂತಿಸಿ ಕೆಲಸಮಾಡಬೇಕು. ಅಖಂಡಭಾರತ ಸನಾತನ ಸ್ವಾಭಿಮಾನ ಸೇನೆಯು ಹಿಂದೂ ಧರ್ಮ ಸಾಧಕರಿಗೆ ಹಾಗೂ ಧರ್ಮ ಸೈನಿಕರಿಗೆ ಧರ್ಮ ರಕ್ಷಣೆಯ ಕರ್ಯಮಾಡಲು ಒಂದು ವೇದಿಕೆಯಾಗಿದೆ.

 

15.ಧರ್ಮ ಸೈನಿಕನಿಗೆ ಪ್ರಚಾರದ ಗೀಳು ಇರಬಾರದು ಸಂಘಟನಾತ್ಮಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಂಘಟನೆಗೆ ನಕಾರಾತ್ಮಕವಾದ ವಿಪರೀತ ಪರಿಣಾಮ ಉಂಟಾಗುವಂತೆ ನಡೆದುಕೊಳ್ಳಬಾರದು. ಪ್ರಚಾರದ ವಿಚಾರದಲ್ಲಿ ಬಹುಜಾಗರೂಕರಾಗಿರಬೇಕು. ವಿರೋಧಿಗಳ ಕಣ್ಣಿಗೆ ಬಿದ್ದರೆ ನಮ್ಮ ಕೆಲಸದ ವೇಗ ಮಂದಗತಿಯನ್ನು ಹೊಂದುವುದು. ಇದು ಸಂಘಟನೆಯ ಬೆಳವಣಿಗೆಗೆ ಮಾರಕವಾಗುವುದು. ವಿರೋಧಿಗಳು ನಮ್ಮ ಬೆಳವಣಿಗೆಗೆ ಅಡ್ಡಗಾಲಾಗಬಹುದು. ಆದುದರಿಂದ ಎಚ್ಚರಿಕೆಯಿಂದಿರಬೇಕು. ಯೋಚಿಸಿ ಮುನ್ನಡೆಯಬೇಕು. ಅನಗತ್ಯ ಪ್ರಚಾರಕ್ಕೆ ಮುಂದಾಗಬಾರದು. ಮುಖತಃ ಮಾತನಾಡಿ ಮನಃಪರಿವರ್ತನೆ ಮಾಡಬೇಕು. ನಮ್ಮ ತಂಡದಲ್ಲಿ ಕೇವಲ ತೊಂಬತ್ತುಜನ ಧರ್ಮ ಸಾದಕರು ಹಾಗೂ ಹತ್ತು ಜನ ಧರ್ಮ ಸೈನಿಕರು ಇರುತ್ತಾರೆ. ಇವರನ್ನು ಉತ್ತಮ ಸಂಪರ್ಕ ಹಾಗೂ ಸಂಬಮದದಲ್ಲಿಟ್ಟುಕೊಳ್ಳುವುದು ಅಷ್ಟೇನೂ ಕಷ್ಟದ ಕೆಲಸ ಅಲ್ಲ.

 

16.ನಾವು ಮಾತನಾಡುವಾಗ ಸಂಯಮ ಅಗತ್ಯ ಸುಳ್ಳು ಆಶ್ವಾಸನೆ ಭರವಸೆಗಳನ್ನು ಕೊಡಬಾರದು. ಸಂಘಟನೆಗೆ ಬಂದರೆ ಹಣಸಿಗುತ್ತದೆ. ಉದ್ಯೋಗ ಸಿಗುತ್ತದೆ. ಮುಂತಾಗಿ ಸುಳ್ಳು ಆಮಿಶ ತೋರಿಸಿ ಕರೆತರಬಾರದು ಸಂಘಟನೆಯು ಕಷ್ಟ ಇದ್ದವರಿಗೆ ಸಲಹೆ ನೀಡಬಹುದು, ಧೈರ್ಯ ತುಂಬಬಹುದು. ಮಾರ್ಗದರ್ಶನಮಾಡಬಹುದು. ಆದರೆ ಹಣಕೊಡುವುದಿಲ್ಲ ಅಥವಾ ಅನುಚಿತ ಮಾರ್ಗದಲ್ಲಿ ಯಾರೊಬ್ಬರ ವೂಯುಕ್ತಿಕ ಹಿತಾಸಕ್ತಿಯ ಈಡೇರಿಕೆಗೆ ಯಾವುದೇ ಪ್ರಭಾವ ಬೀರುವುದಿಲ್ಲ. ಈ ಅರಿವು ಎಲ್ಲರಿಗೂ ಇರಬೇಕು.

 

17.ಸಂಘಟನೆಯ ಆಂತರಿಕ ಸ್ವರೂಪವನ್ನು ಆಡಳಿತಾತ್ಮಕ ವಿಷಯಗಳನ್ನು ಬಹಿರಂಗ ಪಡಿಸಲು ಹೋಗಬಾರದು. ನಮ್ಮ ವಿಚಾರಧಾರೆಗಳು ಕಾರ್ಯಯೋಜನೆಗಳು ಗುಪ್ತಗಾಮಿನಿಯಾಗಿ ಸಮಾಜದಲ್ಲಿ ಹರಿಯಬೇಕು. ಎಲ್ಲರ ನಿತ್ಯದ ವ್ಯವಹಾರದಲ್ಲಿ ನಮ್ಮ ಕೆಲಸದ ಪರಿಣಾಮ ಕಾಣಬೇಕು. ಗಿಡದಲ್ಲಿ ಹೂವುಗಳು ಅರಳಿದಂತೆ ಹಿಂದುಗಳ ಮನೆಯಲ್ಲಿ ಸುಸಂಸ್ಕೃತ ಸಂಸ್ಕಾರದ ಮೊಗ್ಗುಗಳು ಹೂವಾಗಿ ಅರಳುವುದನ್ನು ಸಮಾಜ ಗುರುತಿಸುವಂತೆ ನಾವು ಕೆಲಸಮಾಡಬೇಕು.

 

18.ನಮ್ಮ ಸಿದ್ಧಾಂತಗಳು ವಿಚಾರಗಳು ಕೇವಲ ನಾಲಗೆಯಲ್ಲಿರದೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿರದೆ ಸ್ವಯಂ ಆಚರಣೆಯಲ್ಲಿರುವಂತೆ ನೋಡಿಕೊಳ್ಳಬೇಕು. ನಿತ್ಯಾನುಷ್ಠಾನಗಳನ್ನು ನಾವು ಅನುಸರಿಸಬೇಕು. ದೇಶದ ಸಕಾರಾತ್ಮಕ ಇತಿಹಾಸವನ್ನು ತಿಳಿಯಬೇಕು ಮತ್ತು ಮುಂದಿನ ತಲೆಮಾರಿಗೆ ತಿಳಿಸಬೇಕು.

 

19.ಹಿಂದುಗಳ ಬೇಕು ಬೇಡಗಳ ಪಟ್ಟಿಮಾಡಿ ಸರಕಾರದಮೇಲೆ ಒತ್ತಡ ತಂದು ಅದನ್ನು ಈಡೇರಿಸಿಕೊಳ್ಳಬೇಕು.

 

20.ಸಾಮಾನ್ಯ ಕನಿಷ್ಠ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಬೇಕು

 

-ಶ್ರೀಜಿ.

ಜೈ ಹಿಂದ್ ಜೈ ಶ್ರೀರಾಮ್. 

 

1. ಭಾರತೀಯ ಪರಂಪರೆಯನ್ನು ಅನುಸರಿಸುವ ನಾವೆಲ್ಲರೂ ಸನಾತನ ಧರ್ಮದ ಪ್ರತಿನಿಧಿಗಳು (ಹಿಂದುಗಳು)

2. ಭಾರತಜನ್ಯ ಚಿಂತನೆಯ ಎಲ್ಲಾ ಮತ ಶಾಖೆಗಳ ಮೂಲ ಒಂದೇ ಆದುದರಿಂದ ಬೌದ್ಧ, ಜೈನ, ಸಿಖ್, ಮುಂತಾಗಿ ಎಲ್ಲಾ ಭಾರತೀಯ ಚಿಂತನೆಗಳೂ ಹಿಂದೂ ಧರ್ಮದ ವಿವಿಧ ಆಯಾಮಗಳ ಚಿಂತನಾ ಶಾಖೆಗಳಾಗಿವೆ. ನಾವೆಲ್ಲರೂ ಸಮಗ್ರವಾಗಿ ಹಿಂದುಗಳಾಗಿದ್ದೇವೆ. ಪರಸ್ಪರ ಗೌರವ ನಮ್ಮ ಸ್ವಭಾವವಾಗಿದೆ.

3. ದೇವನೊಬ್ಬ ನಾಮ ಹಲವು ಎಂಬುದು ನಮ್ಮೆಲ್ಲರ ನಂಬಿಕೆ ಯಾಗಿದೆ.

4. ವಿವಿಧರೂಪಗಳಲ್ಲಿ ವಿವಿಧ ಹೆಸರುಗಳಲ್ಲಿ ವಿವಿಧ ಬಗೆಗಳಲ್ಲಿ ದೇವರನ್ನು ಪೂಜಿಸುವುದು ಆರಾಧಿಸುವುದು ನಮ್ಮ ಸಂಸ್ಕೃತಿಯಾಗಿದೆ.

5. ವಿಶ್ವದ ಎಲ್ಲಾ ಶಕ್ತಿಗಳಿಗೂ ದೇವರೇ ಮೂಲ ಶಕ್ತಿ. ಆಶಕ್ತಿಗೆ ಕೃತಜ್ಞತೆ ಸಲ್ಲಿಸುವುದೇ ಪುಜೆ ಇದು ನಮ್ಮ ಜವಾಬ್ದಾರಿ.

6. ಪ್ರಕೃತಿಯೇ ದೇವರ ಸ್ಥೂಲ ರೂಪ. ಪ್ರಕೃತಿ ಪೂಜೆ ನನ್ನ ಸಂಸ್ಕೃತಿ ಆಧಾರ. ಪ್ರಕೃತಿಯ ಸಂರಕ್ಷಣೆ ನನ್ನ ಜವಾಬ್ದಾರಿ.

7. ನನ್ನ ಹುಟ್ಟು ಎಲ್ಲೇ ಆಗಿರಲಿ ನನ್ನ ಮನೆಯ ಸಂಪ್ರದಾಯ ಹೇಗೆಯೇ ಇರಲಿ ಇದೆಲ್ಲವನ್ನೂ ನಾನು ನನಗೆ ನನ್ನ ಮನೆಗೆ ಹಾಗೂ ನನ್ನ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಿಕೊಂಡು ಸಮಾಜದಲ್ಲಿ ನಾನ್ನ ಗುರುತನ್ನು ಒಬ್ಬ ಹಿಂದುವಾಗಿ ಗುರುತಿಸಿಕೊಳ್ಳುತ್ತೇನೆ. ವಿಭಜಿತ ಜಾತಿಯಿಂದಲ್ಲ. ನನ್ನ ಬದುಕೇ ಹಿಂದುತ್ವ ನನ್ನ ಜಾತಿ ಹಿಂದು. 

8. ನನ್ನ ಕುಟುಂಬದ ಜಾತಿಯನ್ನು ನಾನು ಸಾರ್ವಜನಿಕವಾಗಿ ಎಂದೂ ಪ್ರದರ್ಶನ ಮಾಡಲು ಇಚ್ಛಿಸುವುದಿಲ್ಲ.

9. ಜಾತಿಯನ್ನು ಪ್ರದರ್ಶನ ಮಾಡುವವರ ಮನಃಪರಿವರ್ತಿಸಲು ಪ್ರಯತ್ನಿಸುತ್ತೇನೆ.

10. ವಿಶ್ವದ ಪ್ರಾಚೀನ ಭಾಷೆ ಹಾಗೂ ಭಾರತ ಮಾತೆಯ ಮೂಲ ಬಾಷೆ “ಸಂಸ್ಕೃತ” ಇದನ್ನು ಕಲಿತು ಮಾತನಾಡುವುದು ನನ್ನ ಜೀವನದ ಗುರಿಗಳಲ್ಲಿ ಒಂದಾಗಿರುವುದು. ಈ ಉದ್ದೇಶಕ್ಕಾಗಿ ಹಾಗೂ ಸಂಸ್ಕೃತದ ಪ್ರಚಾರಕ್ಕೆ ನಾನು ವಿಶೇಷವಾಗಿ ಶ್ರಮಿಸುತ್ತೇನೆ.

11. ಗೋವು ಈ ನೆಲದ ಪವಿತ್ರ ಜೀವ. ಗೋಭಕ್ಷಕರನ್ನು ಗೋ ಹಂತಕರನ್ನು ನಾನು ರಾಕ್ಷಸರೆಂದು ಪರಿಗಣಿಸುತ್ತೇನೆ. ಇಂತಹರಾಕ್ಷಸರ ಎಲ್ಲರೀತಿಯ ಬೆಳವಣಿಗೆಯನ್ನೂ ತಡೆಯುವುದು ನನ್ನ ಜೀವನದ ಗುರಿಯಾಗಿದೆ.

12. ಭಾರತೀಯ ಸನಾತನ ಹಿಂದೂ ಸಂಸ್ಕೃತಿಯನ್ನು ಅಪಮಾನಿಸುವ ಎಲ್ಲರನ್ನೂ ನಾನು ಧರ್ಮದ್ರೋಹಿಗಳೆಂದು ಪರಿಗಣಿಸುತ್ತೇನೆ. ಇಂತಹ ಧರ್ಮದ್ರೋಹಿಗಳ ಎಲ್ಲರೀತಿಯ ಬೆಳವಣಿಗೆಯನ್ನೂ ತಡೆಯುವುದು ನನ್ನ ಜೀವನದ ಗುರಿಯಾಗಿದೆ.

13. ಜಾತ್ಯಾತೀತ ಎನ್ನುವ ಶಬ್ದವು ಭಾರತವನ್ನು ಹಾಗೂ ಹಿಂದೂ ಸಂಸ್ಕೃತಿಯನ್ನು ನಾಶಮಾಡಲು ದೇಶದ್ರೋಹಿಗಳು ವಿದೇಶೀ ಶಕ್ತಿಗಳೊಂದಿಗೆ ಒಂದುಗೂಡಿ ರಚಿಸಿದ ಶಡ್ಯಂತ್ರದ ಒಂದು ಭಾಗ ಎಂಬುದಾಗಿ ನಾನು ಭಾವಿಸುತ್ತೇನೆ. ಡೋಂಗೀ ಜಾತ್ಯಾತೀತರೆಲ್ಲರನ್ನೂ ನಾನು ಧರ್ಮದ್ರೋಹಿಗಳೆಂದು ಪರಿಗಣಿಸುತ್ತೇನೆ. ಇವರ ಬೆಂಬಲಿಗರೆಲ್ಲರನ್ನೂ ನಾನು ಅಜ್ಞಾನದ ಅಪಾಯಕಾರೀ ಜನರೆಂದೂ ದೇಶದ್ರೋಹಿಗಳೆಂದೂ ಪರಿಗಣಿಸುತ್ತೇನೆ.

14. ನಾನು ನನ್ನ ದೇಶದ ವಿಭಜನೆಗೆ ಕಾರಣವಾದ ಕಾಂಗ್ರೇಸ್ ಪಾರ್ಟಿ ಹಾಗೂ ವಿಭಜನೆಗೆ ಕಾರಣವಾದ ಮತ ಹಾಗೂ ವಿಭಜನೆಗೆ ಕಾರಣರಾದ ಅಂದಿನ ಇ್ಬಬ್ಬರು ಸ್ವಘೋಷಿತ ನಾಯಕರು ಹಾಗೂ ಇವರನ್ನು ಬೆಂಬಲಿಸಿದ ಚರಕಾಸುರ ಇವರನ್ನು ಎಂದೂ ನಾನು ಮರೆಯುವುದಿಲ್ಲ. ಇಂತಹ ತಪ್ಪು ಮುಂದೆ ಆಗಲು ಬಿಡುವುದಿಲ್ಲ.

15. ನಾನೊಬ್ಬ ಸನಾತನ ಹಿಂದುವೆಂದು ಗುರುತಿಸಿಕೊಳ್ಳಲು ಹೆಮ್ಮ ಪಡುತ್ತೇನೆ.

16. ಅಸ್ಪೃಷ್ಯತೆ ಹಿಂದೂ ಸಮಾಜದ ಬಹು ದೊಡ್ಡದೋಷ ಇದರ ನಿವಾರಣೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

17. ನಾನು ಮನುಷ್ಯನನ್ನು ಆತನ ಚಾರಿತ್ರ್ಯ ಹಾಗೂ ಸದ್ಗುಣಗಳನ್ನು ನೋಡಿ ಗೌರವಿಸುತ್ತೇನೆ ಆತನ ಹುಟ್ಟಿನ ಮೂಲವನ್ನೋ, ಹಣವನ್ನೋ, ಅಧಿಕಾರವನ್ನೋ ನೋಡಿ ಅಲ್ಲ.

18. ನಾನು ಹಿಂದೂ ಸಂಸ್ಕೃತಿಯ ವಿಭಿನ್ನ ಸಂಪ್ರದಾಯ ಹಾಗೂ ನಂಬಿಕೆಗಳನ್ನು ಆಚರಣೆಗಳನ್ನು ಗೌರವಿಸುತ್ತೇನೆ ಮತ್ತು ನನ್ನ ಮನಸ್ಸು ಒಪ್ಪಿದ ಪದ್ದತಿಯನ್ನು ಬೇರೆಯವರಿಗೆ ತೊಂದರೆ ಯಾಗದಂತೆ ಆಚರಿಸುತ್ತೇನೆ.

19. ನನ್ನ ಜೀವನದ ಪ್ರಥಮ ಆದ್ಯತೆ [ 1 ] ರಾಷ್ಟ್ರ [ 1 ] ಧರ್ಮ [ 2 ] ಕುಟುಂಬ

20. ನಾನು ನನ್ನ ಮಕ್ಕಳನ್ನು ಹಿಂದೂ ಧರ್ಮವನ್ನು ಗೌರವಿಸುವ ಆಡಳಿತದ ಶಾಲೆಯಲ್ಲಿಯೇ ಕಲಿಸುತ್ತೇನೆ. ಸಂಸ್ಕೃತಿ ನಾಶಮಾಡುವ ವಿದೇಶೀ ಚಿಂತನೆಯ ಗುಲಾಮರ ಶಾಲೆಗಳಲ್ಲಿ ಅಲ್ಲ.

21. ನನ್ನ ಜೀವನ ಭಾರತೀಯ ಸನಾತನ ಸಂಸ್ಕೃತಿಯ ಭಾಗವಾಗಿದೆ ಈ ಸಂಸ್ಕೃತಿಯನ್ನು ನಾನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಬದ್ಧನಾಗಿದ್ದೇನೆ

22. ಭಗವದ್ಗೀತೆ ಹಿಂದೂ ಧರ್ಮದ ಪರಮೊಚ್ಛಗ್ರಂಥವೆಂದು ನಾನು ಪರಿಗಣಿಸುತ್ತೇನೆ ಇದರ ಅಧ್ಯಯನ ಹಾಗೂ ಪ್ರಚಾರ ನನ್ನ ಕರ್ತವ್ಯವಾಗಿದೆ.

23. ನನ್ನ ವ್ಯಾಪಾರ ವ್ಯವಹಾರಗಳೆಲ್ಲವೂ ಶುಕ್ಲಪಕ್ಷದಲ್ಲಿರುವ ನನ್ನ ಧರ್ಮಪ್ರೇಮೀ ಸಹೋದರರೊಂದಿಗೇ ಇರುವಂತೆ ನೋಡಿಕೊಳ್ಳುತ್ತೇನೆ. ಪ್ರತಿವರ್ಷವೂ ಲಾಭಾಂಶದಲ್ಲಿ ಒಂದಂಶ ಧರ್ಮರಕ್ಷಣೆಗಾಗಿ ವಿನಿಯೋಗಿಸುತ್ತೇನೆ.

24. ಸ್ವದೇಶೀ ವಸ್ತುಗಳ ಉಪಯೋಗವೇ ನನ್ನ ಜೀವನದ ಪ್ರಥಮ ಆದ್ಯತೆಯಾಗುವಂತೆ ಪ್ರಯತ್ನಿಸುತ್ತೇನೆ.

25. ಸಾತ್ವಿಕ ಆಹಾರಕ್ಕೆ ಗರಿಷ್ಟ ಆದ್ಯತೆ ನೀಡುತ್ತೇನೆ.

26. ವಿದ್ಯೆ ಆರೋಗ್ಯ ಹಾಗೂ ಆಹಾರ ಇವುಗಳು ಮನುಷ್ಯನ ಮೂಲಭೂತ ಅವಷ್ಯಕತೆಗಳು ಇವು ಸುಲಭವಾಗಿ ಜನರಿಗೆ ಲಭ್ಯವಾಗುವಂತೆ ಸಂಘಟಿತವಾಗಿ ಗರಿಷ್ಟ ಪ್ರಯತ್ನ ಮಾಡುತ್ತೇನೆ.

27. ನನ್ನ ಜೀವನ ನನ್ನ ಮನೆ ನನ್ನ ಕುಟುಂಬ ಸಮಾಜಕ್ಕೆ ಆದರ್ಷವಾಗುವಂತೆ ಬದುಕುತ್ತೇನೆ.

28. ಸನಾತನ ಸಂಸ್ಕೃತಿಯ ರಕ್ಷಣೆಬಗ್ಗೆ ಮಾತನಾಡುವ ಮೊದಲು ನಾನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ.

29. ಮಕ್ಕಳು ಸಂಸ್ಕಾರವನ್ನು ಹೇಳಿಕಲಿಯುವುದಕ್ಕಿಂತ ನೋಡಿಕಲಿಯುವ ವಾತಾವರಣವನ್ನು ಮನೆಯಲ್ಲಿ ನಿರ್ಮಿಸುತ್ತೇನೆ.

30. ಅನ್ಯಾಯ ಹಾಗೂ ಭ್ರಷ್ಟಾಚಾರವನ್ನು ಎಲ್ಲೆ ಕಂಡರೂ ನಿರ್ಭೀತಿಯಿಂದ ವಿರೋಧಿಸುತ್ತೇನೆ. ಹಾಗೂ ಸಂಘಟಿತವಾಗಿ ಸಮಾಜ ಸುಧಾರಣೆಗೆ ಕೈಜೋಡಿಸುತ್ತೇನೆ.

31. ಮದ್ಯಪಾನ ಧೂಮಪಾನ ಮಾದಕವಸ್ತುಸೇವನೆ, ಜೂಜು, ಇವುಗಳನ್ನು ಸಮಾಜದ ಅನಿಷ್ಟವೆಂಬುದಾಗಿ ಪರಿಗಣಿಸುತ್ತೇನೆ. ಇವುಗಳಿಂದ ನಾನು ದೂರವಿರುತ್ತೇನೆ ಇವುಗಳನ್ನು ಸಮಾಜದಿಂದ ದೂರಮಾಡಲು ಪ್ರಯತ್ನಿಸುತ್ತೇನೆ.

32. ರಾಷ್ಟ್ರಹಿತ ಹಾಗೂ ಜಾತಿಹಿತ ಬಂದಾಗ ರಾಷ್ಟ್ರಹಿತವನ್ನು ನನ್ನ ಮೊದಲ ಆದ್ಯತೆಎಂದು ಪರಿಗಣಿಸುತ್ತೇನೆ

 

ಸಂಘಟನೆಯಲ್ಲಿ ಮೊದಲ ದಿನದ ದಿಕ್ಷಾ ಸಂಕಲ್ಪ.

 

1. ಸನಾತನ ಧರ್ಮದ ಪ್ರತಿನಿಧಿಯೆಂಬ ಅಭಿಮಾನದಿಂದ ನಾನು ಸರ್ವದಾ ನನ್ನ ಜೀವನದಲ್ಲಿ ತಿಲಕಧಾರಣೆಯನ್ನು ಮಾಡುತ್ತೇನೆ.

2. ಪ್ರತಿದಿನವೂ ಕನಿಷ್ಠ ಒಂದಾದರೂ ಭಗವದ್ಗೀತೆಯ ಶ್ಲೋಕವನ್ನು ಪಠಿಸುತ್ತೇನೆ.

3. ಸಾರ್ವಜನಿಕವಾಗಿ ನಾನು ನನ್ನಹೆಸರಿನೊಂದಿಗೆ ಜಾತಿಯ ಪ್ರದರ್ಷನವನ್ನು ಮತ್ತು ಪರಿಚಯವನ್ನು ಮಾಡಲು ಇಚ್ಛಿಸುವುದಿಲ್ಲ ಬೇರೆಯವರನ್ನೂ ಈ ವಿಚಾರದಲ್ಲಿ ಜಾಗ್ರತಿ ಗೊಳಿಸುತ್ತೇನೆ.

4. ನನ್ನ ಗರಿಷ್ಟ ವ್ಯಾಪಾರ ವ್ಯವಹಾರಗಳು ಧರ್ಮಪ್ರೇಮಿಗಳಲ್ಲಿಯೇ ಇರುವಂತೆ ವ್ಯವಹರಿಸುತ್ತೇನೆ.

5. ಭಾರತ ದೇಶದ ಹಾಗೂ ಸನಾತನ ಧರ್ಮದ ರಕ್ಷಣೆ ನನ್ನ ಆದ್ಯ ಕರ್ತವ್ಯವೆಂಬದಾಗಿ ಪರಿಗಣಿಸುತ್ತೇನೆ.

6. ಹಿಂದೂ ಧರ್ಮದ ಎಲ್ಲಾರೀತಿಯ ಅಪಮಾನವನ್ನೂ, ಅಪಮಾನ ಮಾಡುವವರನ್ನೂ, ಅವರನ್ನು ಬೆಂಬಲಿಸುವವರನ್ನೂ ನಾನು ವಿರೋಧಿಸುತ್ತೇನೆ ಹಾಗೂ ಎಂದಿಗೂ ಕ್ಷಮಿಸುವುದಿಲ್ಲ.

7. ಮನೆಯಲ್ಲಿ ವ್ಯವಹಾರದ ಸ್ಥಳದಲ್ಲಿ ದೇವರ ವಿಗ್ರಹ ಅಥವಾ ಫೋಟೋ ಇಟ್ಟು ನಿತ್ಯವೂ ನಮಸ್ಕರಿಸುತ್ತೇನೆ. ಇಂತಹ ಸ್ಥಳದಲ್ಲಿಯೇ ವ್ಯವಹಾರ ಮಾಡುತ್ತೇನೆ.

8. ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿ ಹಾಗೂ ಸಂಸ್ಕೃತದ ಪರಿಚಯ ಮಾಡಿಕೊಡುತ್ತೇನೆ.

9. ಭಾರತೀಯ ಆಚಾರ, ವಿಚಾರ, ವೇಶಭೂಷಣ, ಭಾಷೆ ಇವುಗಳಿಗೆ ಪ್ರಥಮ ಆದ್ಯತೆ ಕೊಡುತ್ತೇನೆ.

10. ಯಾವುದೇ ಜಾತಿ ತಾರತಮ್ಯ ಮಾಡದೇ ಹಿಂದುಸಮಾದ ರಕ್ಷಣೆಗಾಗಿ ಸಂಘಟನೆಯೊಂದಿಗೆ ಕೈಜೋಡಿಸುತ್ತೇನೆ.

 

ಶ್ರೀಜಿ

ಜೈ ಹಿಂದ್  ಜೈ ಶ್ರೀರಾಮ್

 

ಪ್ರಾಥಮಿಕ ಚಿಂತನೆ.

ಹಿಂದು ತತ್ವಶಾಸ್ತ್ರಗಳಲ್ಲಿ ಅನೇಕ ಮಹನೀಯರು ಅನೇಕ ಅಭಿಪ್ರಾಯವನ್ನು ಒಂದೇ ವಿಷಯದಬಗ್ಗೆ ಕೊಟ್ಟಿರುವುದರಿಂದ ಸತ್ಯ ಒಂದೇ ಆಗಿದ್ದರೂ ಅದನ್ನು ನೋಡುವ ದೃಷ್ಟಿಕೋನ ಭಿನ್ನವಾಗಿದ್ದು ಒಂದೊಂದೂ ವಿಚಾರಧಾರೆಯೂ ಒಂದೊಂದು ಮತಪಂಥ ವಾಗಿ ಬೆಳೆದಿದೆ. ನಾವು ಎಲ್ಲರಿಂದಲೂ ಸಂಘಟನೆಗೆ ಅನುಕೂಲಕರವಾದ, ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹಿಂದುಗಳಲ್ಲಿ ಏಕತೆಯನ್ನು ರೂಪಿಸಲು ಸಹಾಯಕವಾಗುವ ದೇಶಹಿತಕ್ಕೆ ಪೂರಕವಾದ ವಿಚಾರಗಳನ್ನು ಸ್ವೀಕರಿಸಿ ಅಳವಡಿಸಿಕೊಳ್ಳೋಣ. ಯಾರ ಬಗ್ಗೆಯೂ ಯಾವುದೇ ವಿಚಾರದ ಬಗ್ಗೆಯೂ ಪೂರ್ವಗ್ರಹ ಬೇಡ. ನಿಂದನೆ ಅಥವಾ ತಿರಸ್ಕಾರ ಅಗೌರವ ಬೇಡ, ದೂಷಣೆ ಬೇಡ. ಟೀಕೆ ಟಿಪ್ಪಣಿಗಳು ಬಂದಾಗ ಪೂರ್ವಾಗ್ರಹ ಇಲ್ಲದೆ ಸ್ವೀಕರಿಸೋಣ. ಇವುಗಳನ್ನು ವಿಮರ್ಷಿಸಿ ಏಕತೆಗೆ ಪೂರಕವಾಗುವಂತಹ ಅಂಶಗಳನ್ನು ಅಳವಡಿಸಿಕೊಳ್ಳೋಣ. ಎಲ್ಲರಿಗೂ ಎಲ್ಲವಿಷಯಗಳೂ ಸಮ್ಮತವಾಗುವುದಿಲ್ಲ . ಅಂತಹ ಸಮಯದಲ್ಲಿ ಹಿರಿಯರ ಸಲಹೆಯನ್ನು ಪಡೆಯೋಣ. ಬಹುಮತದೊಂದಿಗೆ ನಿರ್ಣಯಕ್ಕೆ ಬರೋಣ. ನಮ್ಮ ಪ್ರಯತ್ನ ಕ್ಷಾತ್ರ ತೇಜ ರಾದ ಹಿಂದುಸೈನಿಕರಿಂದೊಡಗೂಡಿದ  ಶ್ರೇಷ್ಠ ಸನಾತನ ಹಿಂದೂ ಧರ್ಮ ರಕ್ಷಣೆಗಾಗಿ ಎಲ್ಲಾ ಸಮಾಜವನ್ನೊಳಗೊಂಡ ತಾರತಮ್ಯ ರಹಿತ ಬಲಿಷ್ಟ ಸಂಘಟನೆ ಕಟ್ಟುವುದೇ ಹೊರತು ಹಿಂದೂ ಸಾಧಕರುಗಳಲ್ಲಿ, ಸಂತರುಗಳಲ್ಲಿ, ದೇವರುಗಳಲ್ಲಿ ಜಾತಿಗಳಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎನ್ನುವುದನ್ನು ಸಾಧಿಸುವುದಲ್ಲ. ಇವರಲ್ಲಿ ಯಾರುಸರಿ ಯಾರು ತಪ್ಪು ಎನ್ನುವುದಾಗಲಿ, ಹಿಂದೂ ಸಮಾಜದಲ್ಲಿ ಯಾರು ಮೇಲು ಯಾರು ಕೆಳಗೆ ಎನ್ನುವುದಾಗಲಿ, ದೇವತೆಗಳಲ್ಲಿ ಯಾರು ಶ್ರೇಷ್ಟ ಯಾರು ಕನಿಷ್ಟ ಎಂಬುದಾಗಿ ಸಾಧಿಸುವುದಾಗಲಿ, ಆಚರಣೆಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವುದಾಗಿ ವಾದಿಸುವುದಾಗಲಿ ನಮ್ಮ ಗುರಿ ಅಲ್ಲ. ನಮ್ಮ ಮನೆಯಲ್ಲಿ ನಡೆದುಕೊಂಡುಬಂದ ಸಂಪ್ರದಾಯ ಪದ್ದತಿಗಳನ್ನು ಮನೆಗಳಲ್ಲಿ ಮುಂದುವರಿಸಿಕೊಂಡು ಹೋಗೋಣ. ಅದನ್ನು ಸಾರ್ವಜನಿಕ ಗೊಳಿಸುವುದು ಬೇಡ.  ದೇಶಭಕ್ತರೆಲ್ಲರೂ ಏಕ ಭಾವದಿಂದ ಒಗ್ಗಟ್ಟಾಗಲು ಹಿಂದುಗಳನ್ನು ಪ್ರೇರೇಪಿಸುವುದು ಅವರಲ್ಲಿ ಕ್ಷಾತ್ರ ಹಾಗೂ ಜ್ಞಾನ ದೊಂದಿಗೆ ಸ್ವಾಭಿಮಾನವನ್ನು ರೂಪಿಸುವುದು. ಗೊಂದಲಗಳನ್ನು ನಿವಾರಿಸುವುದು. ಈ ಮೂಲಕ ಭಾರತವನ್ನು ವಿಶ್ವಗುರುವಾಗಿಸುವುದು ನಮ್ಮ ಗುರಿ. ಇದಕ್ಕೆ ಪೂರಕವಾಗಿ ನಮ್ಮ ಮನಸ್ಥಿತಿ ಹೇಗಿರಬೇಕು. ಮುಂದೆ ನೋಡೋಣ. ಸಮಾಜದಲ್ಲಿ ಭೇದಭಾವವನ್ನು ಭೋಧಿಸಿ ಅಸಮಾನತೆಯನ್ನು ಬೋಧಿಸುವ ಅಪಾಯಕಾರೀ ವ್ಯಕ್ತಿಗಳ ಬಗ್ಗೆಎಚ್ಚರದಿಂದಿದ್ದು ಅವರನ್ನು ತಿದ್ದಬೇಕಾದ ಅನಿವಾರ್ಯತೆ ಇಂದು ಹಿಂದೂಸಮಾಜಕ್ಕೆ ಅನಿವಾರ್ಯವಾಗಿದೆ. ಈದಿಸೆಯಲ್ಲಿ ಕಾರ್ಯತತ್ಪರರಾಗೋಣ.

 

ಮೊದಲಿಗೆ ಸಾಮಾನ್ಯವಾದ ಮನಸ್ಸಿನ ಗೊಂದಲ ಗಳನ್ನು ಪರಿಹರಿಸಿ ಕೊಳ್ಳೋಣ:

1. ಪರಮಾತ್ಮನು ಒಬ್ಬನೆ.

ದೇವರೊಬ್ಬ ನಾಮ ಹಲವು ಇದುವೇಸತ್ಯ. ಭಕ್ತರಿದ್ದಷ್ಟು ಭಗವದ್ ರೂಪ ಎಂಬುದಾಗಿ ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ. ಇದರಂತೆ ನಮಗಿಷ್ಟವಾದ ರೂಪದಲ್ಲಿ, ಇಷ್ಟವಾದ ಪದ್ದತಿಯಲ್ಲಿ, ಇಷ್ಟವಾದ ಹೆಸರಿನಲ್ಲಿ ನಾವು ಭಗವಂತನನ್ನು ಕಲ್ಪಿಸಿಕೊಂಡು ಆರಾಧಿಸುತ್ತೇವೆ ಪೂಜಿಸುತ್ತೇವೆ, ಪ್ರಾರ್ಥಿಸುತ್ತೇವೆ. ಇದು ಹಿಂದು ಸಂಸ್ಕೃತಿಯ ವೈಶಿಷ್ಟ್ಯತೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ. ಆದುದರಿಂದ ಯಾರಿಗೂ ಬಹುದೇವರ ಗೊಂದಲ ಬೇಡ. ಸರ್ವಶಕ್ತಿಯಮೂಲ ಒಬ್ಬನೇ ಭಗವಂತ ಈ ಮನಸ್ಥಿತಿ ಎಲ್ಲರದ್ದೂ ಆಗಿರಲಿ, ವಿಷ್ಣು, ಶಿವ, ದೇವಿ, ಹೀಗೆ ನಾವು ಭಿನ್ನ ಚಿಂತನೆಯನ್ನು ಹೊಂದುವುದು ಬೇಡ, ಆರಾಧನಾ ಪದ್ದತಿ ನಮ್ಮ ನಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯದಂತೆ ನಡೆಯೋಣ, ಆಕಾಶಾತ್ ಪತಿತಂ ತೋಯಂ ಅಥಾಗಚ್ಚತಿ ಸಾಗರಂ ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ಎನ್ನುವಂತೆ ಆಕಾಶದಿಂದ ಬೀಳುವಮಳೆಯನೀರು ಹೇಗೆ ಸಮುದ್ರವನ್ನು ಸೇರುತ್ತದೋ ಹಾಗೆಯೇ ಭಿನ್ನ ಭಿನ್ನ ಹೆಸರು ಹಾಗೂ ರೂಪ ಹಾಗೂ ವಿಧಾನಗಳಿಂದ ಪೂಜಿಸುವ ಎಲ್ಲಾ ಉಪಾಸನೆಗಳೂ ಒಬ್ಬನೇ ಪರಮಾತ್ಮನನ್ನು ಸೇರುತ್ತವೆ. ಇದರಲ್ಲಿಯೇ ನಂಬಿಕೆಯನ್ನಿಡೋಣ.  ಹೆಸರು ಏನಿದ್ದರೂ ಅವನು ಒಬ್ಬನೇ ಎಲ್ಲವೂ ಅವನದೇ ವಿಭಿನ್ನರೂಪಗಳು ಇದು ಭಗವಂತನ ಲೀಲೆ ಎಂದು ಚಿಂತಿಸೊಣ. ಇಂದು ನಾವು ಧರ್ಮ ಹಾಗೂ ದೇಶದ ರಕ್ಷಣೆಗಾಗಿ ಏಕಭಾವದಿಂದ ಮುನ್ನಡೆಯುವುದು ಅನಿವಾರ್ಯವಾಗಿದೆ. ನಮಗಿಷ್ಟವಾದ ಬಹುವಿಧದ ರೂಪಗಳಲ್ಲಿ, ಹೆಸರಿನಲ್ಲಿ ಏಕದೇವನನ್ನು ಪೂಜಿಸುತ್ತೇನೆನ್ನುವ ಭಾವ ನಮ್ಮಲ್ಲಿ ಇರಲಿ, ಶಿವನು ಕಾಶಿಯಲ್ಲೂ ಇದ್ದಾನೆ. ರಾಮೇಶ್ವರದಲ್ಲೂ ಇದ್ದಾನೆ, ಗೋಕರ್ಣದಲ್ಲೂ ಇದ್ದಾನೆ, ಧರ್ಮಸ್ಥಳದಲ್ಲೂ ಇದ್ದಾನೆ, ಮನೆಯಲ್ಲಿಯೂ ಇದ್ದಾನೆ. ನಾವು ಎಲ್ಲೆಡೆಯೂ ಹೋಗಿ ಅಲ್ಲಿಯ ಸಂಪ್ರದಾಯದಂತೆ ಪೂಜಿಸುತ್ತೇವೆ ಶಿವನು ಒಬ್ಬನೇ ತಾನೇ? ಈ ರೀತಿಯಲ್ಲಿಯೇ ಉಳಿದೆಲ್ಲಾದೇವ ದೇವತೆಗಳು ಕೂಡಾ ಏಕದೇವನ ವಿವಿಧ ರೂಪಗಳು. ದ್ವೈತ ಸಿದ್ಧಾಂತ ದೇವರೊಬ್ಬನೇ ಎನ್ನುವ ವಿಚಾರವನ್ನುಸಮ್ಮತಿಸುವುದಿಲ್ಲ ಅಲ್ಲಿ ಎಲ್ಲದೇವರೂ ಇದ್ದಾರೆ ಅವರಲ್ಲಿ ವಿಷ್ಣುವೇ ಶ್ರೇಷ್ಟ ಹಾಗೂ ಉಳಿದದೇವರು ವಿಷ್ಣುವಿನ ಅಧೀನರು ಎಂಬುದಾಗಿ ತಾರತಮ್ಯದ ವಿಶ್ಲೇಷಣೆ ಇದೆ ಆದರೆ ಇದನ್ನು ವಿದ್ವತ್ ಚರ್ಚೆಯಲ್ಲಿ ವಿಶ್ಲೇಷಣೆ ಮಾಡಬಹುದು. ಇದನ್ನು ಸಾಕ್ಷೀಕರಿಸಲು ಸಾಧ್ಯವಿಲ್ಲ. ಸಾರ್ವತ್ರಿಕವಾದ ತಾರತಮ್ಯ ಭೋಧನೆ ಅಥವಾ ಆಚರಣೆ ಏಕತೆಗೆ ಮಾರಕ. ಭಿನ್ನ ಭಿನ್ನ ವಿಚಾರಗಳು ನಮ್ಮೆದುರಿಗೆ ಬಂದಾಗ ಸಮಷ್ಟಿಹಿತಕ್ಕಾಗಿ ಯಾವುದು ಅನುಸರಣ ಯೋಗ್ಯವೋ ಅದನ್ನು ನಾವು ಅನುಸರಿಸೋಣ. ಯಾವುದು ಸರಿ ಯಾವುದು ತಪ್ಪು ಎನ್ನುವ ಚರ್ಚೆ ಇಲ್ಲಿ ಅಪ್ರಸ್ತುತ. ನಾನು ಉತ್ತಮ ನೀನು ಅಧಮ ಎನ್ನುವ ಜಾಗದಲ್ಲಿ ಸಾಮರಸ್ಯ ಇರಲು ಸಾಧ್ಯವಿಲ್ಲ. ಬೇರೆಯವನು ಕನಿಷ್ಠ ನಾನು ಶ್ರೇಷ್ಠ ಎನ್ನುವನ ಮನಸ್ಸು ಶುದ್ಧವಾಗಿರಲು ಸಾಧ್ಯವಿಲ್ಲ.  ಅವರವ ನಂಬಿಕೆ ಅವರವರಿಗೆ ಆದರೆ ಅದು ಸಮಾಜದ ಸ್ವಾಸ್ಥ್ಯಕೆಡಿಸಬಾರದು ಅಷ್ಟೆ. ಸಾರ್ವಜನಿಕವಾಗಿ ಅಭಿವ್ಯಕ್ತವಾಗಬಾರದು. ನಮ್ಮ ವಿಚಾರಗಳು ಸಿದ್ದಾಂತಗಳು ಮಾತುಗಳು ವ್ಯವಹಾರಗಳು ವರ್ತನೆಗಳು ಇನ್ನೊಬ್ಬರ ಮನಸ್ಸನ್ನು ನೋಯಿಸುವಂತಿರಬಾರದು. ಇದುವೇ ಮನುಷ್ಯತ್ವ ಮನುಷ್ಯತ್ವವೇ ಧರ್ಮದ ಮೊದಲಮೆಟ್ಟಿಲು. ಇಲ್ಲಿ ನಮ್ಮ ಸಂಘಟನೆಯಲ್ಲಿ ನಾವು ಪರಮಾತ್ಮನೊಬ್ಬನೇ ನಾಮ ಹಲವು ಎನ್ನುವ ಚಿಂತನೆಯಲ್ಲಿ ಮನಸ್ಸಿನ ಗೊಂದಲವನ್ನು ನಿವಾರಿಸಿಕೊಳ್ಳೋಣ.  ಹಾಗೆಯೇ ಜಾತಿಪದ್ದತಿ ಆಚರಣೆ ಏನಿದ್ದರೂ ಅಂತಿಮಗುರಿ ಸನಾತನ ಹಿಂದೂ ರಾಷ್ಟ್ರನಿರ್ಮಾಣ. ಭಿನ್ನತೆ ವಿವಿಧತೆ ವೈಯುಕ್ತಿಕವಾಗಿರಲಿ ವಿವಿಧತೆಯಲ್ಲಿ  ಏಕತೆ ನಮ್ಮ ಸಂಸ್ಕೃತಿ.  ಸಮಾಜದಲ್ಲಿ ನಾವೆಲ್ಲರೂ ಹಿಂದೂ ಎನ್ನುವ ಏಕಭಾವದಿಂದ ಗುರುತಿಸಿಕೊಳ್ಳೋಣ. ನಾವು ದೋಷಹುಡುಕುತ್ತಾ ಮನಸ್ಸನ್ನು ಕೆಡಿಸಿಕೊಳ್ಳುವ ಬದಲು ಉತ್ತಮವಾದುದನ್ನು ಗುರುತಿಸುತ್ತಾ ಸಂತೋಷ ಅನುಭವಿಸುತ್ತಾ ಸಂಘಟಿತರಾಗೋಣ. ನೊಣವಾಗುವುದುಬೇಡ ಜೇನುನೊಣವಾಗೋಣ. (ನೊಣ ಯಾವಾಗಲೂ ಹೊಲಸಿನ ಸುತ್ತಲೂ ಹಾರಾಡುತ್ತಿರುತ್ತದೆ ಆದರೆ ಜೇನುನೊಣವು ಯಾವಾಗಲೂ ಮಧುವನ್ನೇ ಆರಸುತ್ತದೆ) ಸಂಸ್ಕೃತದ ಒಂದು ಸುಭಾಷಿತ ಉತ್ತಮರ ಬಗ್ಗೆ ಹೀಗೆ ಹೇಳುತ್ತದೆ

 

ವಿಸೃಜ್ಯ ಶೂರ್ಪವದ್ ದೋಶಾನ್ ಗುಣಾನ್ ಗೃಣ್ಹಂತಿ ಸಾಧವಃ |

ದೋಶಗ್ರಾಹಿ ಗುಣತ್ಯಾಗೀ ಚಾಲನೀವದ್ ಹಿ ದುರ್ಜನಃ ||  

 

ಸುಭಾಷಿತದ ಅರ್ಥ ಹೀಗಿದೆ. ತಡಪೆ ಅಥವಾ ಮೊರದಂತೆ ಸಜ್ಜನರು ದೋಷಗಳನ್ನು ಹೊರಗೆ ಎಸೆದು ಗುಣಗಳನ್ನು ಮಾತ್ರ ಗ್ರಹಿಸುತ್ತಾರೆ. ದುರ್ಜನರು ಸಾಣಿಗೆ ಅಥವಾ ಜರಡೆಯಂತೆ ಉತ್ತಮವಾದುದನ್ನು ಹೊರಹಾಗಿ ದೋಷಗಳನ್ನೇ ಧರಿಸುತ್ತಾರೆ ಎಂಬುದಾಗಿ – ಶೂರ್ಪ ಎಂದರೆ – ಮೊರ/ತಡಪೆ, ಚಾಲನೀ ಎಂದರೆ – ಜರಡೆ/ಸಾರಣಿಗೆ

 

2. ದೇವರಲ್ಲಿ ಪ್ರೀತಿ :

ದೇವರಿಗೆ ಹೆದರುವವರು ಪಾಪಿಗಳು ಮಾತ್ರ. ಕ್ರಿಶ್ಚಿಯನ್ ಮತದಲ್ಲಿ ಹೀಗೆ ಹೇಳುತ್ತಾರೆ “ಹುಟ್ಟಿದ ಮನುಷ್ಯರೆಲ್ಲರೂ ಪಾಪಿಗಳು” ಅಥವಾ ಪಾಪಾತ್ಮರು ಏಸುವನ್ನು ನಂಬಿದರೆ ಏಸು ಅವರನ್ನು ಉದ್ಧರಿಸಿ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾನೆ ಎಂಬುದಾಗಿ. ಆದರೆ ಹಿಂದೂಗಳು ಎಂದೂ ಹುಟ್ಟುವಾಗಲೇ ಪಾಪಿಗಳಾಗಿರುವುದಿಲ್ಲ ಅವರು ಅಮೃತ ಪುತ್ರರಾಗಿರುತ್ತಾರೆ. ಹುಟ್ಟಿದ ಮಗುವು ಯಾವುದೇ ಕ್ಲೇಷವಿಲ್ಲದೆ ಭಗವಂತನ ಸ್ವರೂಪ ವಾಗಿರುತ್ತದೆ. ಮಗುವಿನಲ್ಲಿ ಪರಮಾತ್ಮನನ್ನು ಕಾಣುವುದು ನಮ್ಮ ಸಂಸ್ಕೃತಿ 5 ವರುಷಗಳವರೆಗೆ ಹಿಂದೂ ಮಕ್ಕಳು ದೇವ ಹಾಗೂ ದೇವತಾ ರೂಪಗಳೆಂದು ಹಿಂದುಗಳು ಭಾವಿಸುತ್ತಾರೆ. ಮಕ್ಕಳ ಮನಸ್ಸಿನಲ್ಲಿ ಕಲ್ಮಶವಿರುವುದಿಲ್ಲ. ಮೇಲುಕೀಳು ಭಾವ ಇರುವುದಿಲ್ಲ. ಕ್ರಿಯಾಶೀಲವಾಗಿರುತ್ತವೆ ಪೂರ್ವಾಗ್ರಹ ಪೀಡಿತರಾಗಿರುವುದಿಲ್ಲ. ಇದರಿಂದಾಗಿಯೇ ನಮ್ಮಸಂಸ್ಕೃತಿಯಲ್ಲಿ ಕುಮಾರಿ ಪೂಜೆ, ಬ್ರಹ್ಮಚಾರಿ ಆರಾಧನೆ ಇವೆಲ್ಲಾ ನಡೆದುಕೊಂಡು ಬಂದಿದೆ. ಇಂತಹ ದೇವರ ಮಕ್ಕಳಾದ ನಾವು ಧರ್ಮ ಮಾರ್ಗದಲ್ಲಿರುವಾಗ ನಮ್ಮ ತಂದೆಯಾದ ದೇವರಿಗೆ ಹೆದರಬೇಕಿಲ್ಲ. ನಾವು ಪುಣ್ಯಾತ್ಮರು ಹಿಂದೂ ಸಂಸ್ಕೃತಿ ನಮಗೆ ಜಗತ್ತನ್ನು ಪ್ರಕೃತಿಯನ್ನು ಹಾಗೂ ದೇವರನ್ನು ಪ್ರೀತಿಸಲು ಕಲಿಸಿದೆ. ಗೌರವಿಸಲು ಕಲಿಸಿದೆ. ಬಾಲಕ ಪ್ರಹ್ಲಾದ ನರಸಿಂಹನ ಉಗ್ರರೂಪವನ್ನು ನೋಡಿ ಹೆದರಿದನೇ? ಇಲ್ಲ ತಾನೆ? ಯಾರೂ ಎಂದೂ ದೇವರಿಗೆ ಹೆದರಬೇಡಿ. ನಿಮ್ಮ ಪಾಪಕರ್ಮಗಳಿಗೆ ಹೆದರಿ. ದೇವರಿಗೆ ಹೆದರುವುದು ಹಿಂದೂಗಳ ಸಂಸ್ಕೃತಿ ಅಲ್ಲ. ದೇವರಿಗೆ ಹೆದರುವುದು ತಪ್ಪುಮಾಡಿದವರು ಮಾತ್ರ. ಹಿಂದೂಗಳು ಪಾಪಕಾರ್ಯ ಮಾಡುವವರಲ್ಲ ಜಗತ್ತಿಗೆ ಒಳ್ಳೆಯದನ್ನು ಮಾಡುವರು. ಬೇರೇದೇಶವನ್ನು ಲೂಟಿಮಾಡಿ ನಾಶಮಾಡಿ ಅನ್ಯಾಯ ಅತ್ಯಾಚಾರಮಾಡಿದಂತಹ ಇತಿಹಾಸನಮ್ಮ ಪೂರ್ವಜರದ್ದು ಅಲ್ಲ ಇಂದಿನವರದ್ದೂ ಅಲ್ಲ.  ಹೀಗೆ ಮಾಡಿದವರು ಪುಣ್ಯವಂತರಾಗಲು ಸಾಧ್ಯವಿಲ್ಲ. ಇವರು ದೇವಪ್ರೀತಿಗಳಿಸಲೂ ಸಾಧ್ಯವಿಲ್ಲ. ಇಂತಹವರು ರಾಕ್ಷಸಮೂಲದವರು ಆಗಿರುತ್ತಾರೆ. ರಾಕ್ಷಸರು ಎಂದೂ ಸಜ್ಜನರ ಪೀಡಕರಾಗಿರುತ್ತಾರೆ. ದೈವದ್ವೇಷಿಗಳಾಗಿರುತ್ತಾರೆ. ವಿಗ್ರಹ ಹಾಗೂ ಸಮಸಂಸ್ಕೃತಿಯ ಭಂಜಕರಾಗಿರುತ್ತಾರೆ. ಇಂದಿನ ಜಗತ್ತಿನಲ್ಲಿ ರಾಕ್ಷಸರು ಯಾರೆಂದು ನೀವೇಚಿಂತಿಸಿ. ಅಧರ್ಮ ಇರುವಲ್ಲಿ ದೇವರು ಮಳೆ ಬೆಳೆ ನೀಡುವುದಿಲ್ಲ ಅಲ್ಲಿ ನದಿಗಳು ಹರಿಯುವುದಿಲ್ಲ ಕಾಡುಗಳು ಬೆಳೆಯುವುದಿಲ್ಲ. ಅಂತಹ ಸ್ಥಳ ನೀರಿಲ್ಲದೆ ಮರಳುಗಾಡಾಗುತ್ತದೆ. ಸತ್ಯ ಇರುವಲ್ಲಿ ಹೆದರಿಕೆ ಇರುವುದಿಲ್ಲ. ಹೆದರಿಕೆ ಕೇವಲ ಕಳ್ಳರಿಗೆ ಮಾತ್ರ ಇರುತ್ತದೆ. ಹೆದರಿಕೆ ಇರುವವರು ಆಕ್ರಮಣ ಶೀಲರಾಗಿರುತ್ತಾರೆ. ಹಿಂದುಗಳು ಎಂದೂ ಬೇರೆಯವರಿಗೆ ಅನ್ಯಾಯ ಮಾಡಿಲ್ಲ. ಆಶ್ರಯ ಕೋರಿ ಬಂದವರಿಗೆಲ್ಲ ಆಶ್ರಯಕೊಟ್ಟು ಸಾಕಿದ್ದಾರೆ. ಹಿಂದು ಧರ್ಮದ ನಂಬಿಕೆಯಂತೆ ಹಿಂದು (ಆತ್ಮ) ಎಂದಿಗೂ ಸಾಯುವುದಿಲ್ಲ. ಕೇವಲ ದೇಹ ಬದಲಿಸುತ್ತಾನಷ್ಟೇ ಇದನ್ನು ಕೃಷ್ಣ ಅರ್ಜುನನಿಗೆ ಗೀತೆಯಲ್ಲಿ ಹೇಳಿದ್ದಾನೆ. ಆದುದರಿಂದ ಹೆದರುವುದು ಹೇಡಿತನ. ಅದು ನಮಗೆ ಬೇಕಿಲ್ಲ. ಜ್ಞಾನಿಯಾದವನಿಗೆ ಎಂದೂ ಹೆದರಿಕೆ ಇಲ್ಲ. ನಮ್ಮ ಹಿರಿಯರು ಎಂದೂ ಜೀವಕ್ಕಾಗಿ ಹೆದರಿಲ್ಲ. ಮಾನ ಮರ್ಯಾದೆ ಹಾಗೂ ಅಧರ್ಮದ ನಡೆಗೆ ಹೆದರಿದ್ದಾರೆ. ಆದುದರಿಂದ ದೇವರಿಗೆ ಹೆದರುವವರು ಅನ್ಯಾಯ ಮಾಡುತ್ತಿರುವ ಅಜ್ಞಾನದಿಂದ ಕೂಡಿರುವ ಮೂರ್ಖ ಮತದವರು ಮಾತ್ರ. ಕೆಲವು ಅಲ್ಪರಾದ ಅಜ್ಞಾನೀ ಪಂಡಿತರು ನಿಮ್ಮನ್ನು ದೇವರ ಹೆಸರಿನಲ್ಲಿ ಹೆದರಿಸಬಹುದು, ಹೀಗೆ ದೇವರ ಹೆಸರಿನಲ್ಲಿ ಹೆದರಿಸುವ ಅಲ್ಪರಸ್ವಾರ್ಥಕ್ಕೆ ನೀವು ಬಲಿಯಾಗದಿರಿ. ನಾವು ಹೆದರಬೇಕಿರುವುದು ನಮ್ಮ ಪಾಪಕರ್ಮಗಳಿಗೆ ಮಾತ್ರ. ನಾವು ಅನ್ಯಾಯ ಮಾಡಿದ್ದರೆ ಹೆದರಲೇ ಬೇಕು. ನಮ್ಮ ಪಾಪಗಳನ್ನು ದೇವರಲ್ಲಿ ತಪ್ಪು ನಿವೇದನೆ ಮಾಡುವುದರಿಂದ, ಅಥವಾ ದೇವರ ಪೂಜೆಗಳಿಂದ, ಹರಕೆಗಳಿಂದ, ಕಾಣಿಕೆಗಳಿಂದ, ಕಳೆಯಲು ಸಾಧ್ಯವಿಲ್ಲ. ಪಾಪದ ಫಲ ಈಜನ್ಮದಲ್ಲಿರಲಿ ಇಲ್ಲವೇ ಮುಂದಿನ ಜನ್ಮದಲ್ಲಿರಲಿ ನಾವು ಅನುಭವಿಸಲೇ ಬೇಕು. ಪಾಪದ ಫಲತೊರೆಯಲು ಪುಣ್ಯದ ಕೆಲಸಮಾಡಬೇಕು. ಪರೋಪಕಾರ ಮಾಡುವುದು. ಧರ್ಮಹಾಗೂ ದೇಶದ್ರೋಹಿಗಳನ್ನು ಹಿಮ್ಮೆಟ್ಟಿಸುವುದು.  ಸಜ್ಜನರಿಗೆ  ದಾನಧರ್ಮಮಾಡುವುದು. ಅನ್ಯಾಯದ ವಿರುದ್ಧ ಧ್ವನಿಎತ್ತಿ ಹೋರಾಡುವುದು. ಪ್ರಕೃತಿಯನ್ನು ರಕ್ಷಿಸುವುದು. ಉಪಕಾರಮಾಡಿದವರಲ್ಲಿ, ವಿದ್ಯೆಕಲಿಸಿದವರಲ್ಲಿ ತಂದೆತಾಯಿಗಳಲ್ಲಿ, ಜೀವನರೂಪಿಸಿಕೊಳ್ಳಲು ನೆರವಾದವರಲ್ಲಿ ಹಾಗೂ ದೇವರಲ್ಲಿ ಗೌರವ ಹಾಗೂ ಕೃತಜ್ಞತೆ ಹೊಂದುವುದು ಇವೇ ಕಲಿಯುಗದಲ್ಲಿ ಪುಣ್ಯ ಕಾರ್ಯವಾಗಿವೆ. ಪೂಜೆಮಾಡುವುದು ದೇವರಿಗೆ ಕೃತಜ್ಞತೆ ಸಲ್ಲಿಸುವಿಕೆ ಇದು ಪುಣ್ಯ ಸಂಪಾದನೆಯ ಸಣ್ಣದಾರಿ. ಪೂಜೆಯಿಂದ ಮಾತ್ರ ಪುಣ್ಯ ಎನ್ನುವ ಭ್ರಮೆ ಬೇಡ. ಧರ್ಮ, ಸಂಸ್ಕೃತಿ ಹಾಗೂ ದೇಶದ ರಕ್ಷಣೆಗಿಂತ ದೊಡ್ಡಪುಣ್ಯದ ಕೆಲಸ ಇನ್ನೊಂದಿಲ್ಲ. ನಮ್ಮ ಶಾಸ್ತ್ರಗಳು ಕರ್ಮದ ಫಲದ ಬಗ್ಗೆ ಹೇಳುತ್ತವೆ. ಕರ್ಮಫಲವು ಒಳ್ಳೆಯದಿರಲಿ ಕೆಟ್ಟದಿರಲಿ ನಾವು ಅನುಭವಿಸಲೇ ಬೇಕು ಇದುವೇ ಕರ್ಮ ಸಿದ್ಧಾಂತ.  ಧರ್ಮರಕ್ಷಣೆ ಪುಣ್ಯದ ಕೆಲಸ. ಧರ್ಮದ್ರೋಹಿಗಳನ್ನು ವಿರೋಧಿಸದೆ ತೋರುವ ಉದಾಸೀನ ಪಾಪದ ಕೆಲಸ. ಯುದ್ಧಭೂಮಿಯಲ್ಲಿ ಕೃಷ್ಣ ಅರ್ಜುನನಿಗೆ ಇದನ್ನೇ ಬೋದಿಸಿದ್ದಾನೆ ಅರ್ಜುನ ಷಂಡನಾಗಬೇಡ ಎನ್ನುತ್ತಾನೆ. ಧರ್ಮಬ್ರಷ್ಟರನ್ನು ಓಲೈಸುವುದು ಪರಮಪಾಪ ಇಂತಹವರು ಧರ್ಮದ್ರೋಹಿಗಳಾಗಿರುತ್ತಾರೆ. ಇಂತಹವರನ್ನು ಬೆಂಬಲಿಸುವುದೂ ಪರಮ ಪಾಪವಾಗಿದೆ. ನಾವು ಧರ್ಮರಕ್ಷಣೆಮಾಡಿರೆ. ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮೋರಕ್ಷತಿ ರಕ್ಷಿತಃ ಎಂಬುದಾಗಿ ಭಗವದ್ಗೀತೆ ಯಲ್ಲಿ ಕೃಷ್ಣ  ಹೇದ್ದಾನೆ. ಧರ್ಮವು ಎಲ್ಲರನ್ನೂ ರಕ್ಷಿಸುತ್ತದೆ. ಧರ್ಮ ಎಂದರೇನೆಂಬುದನ್ನು ನಮ್ಮ ಜಾಲತಾಣ, (ವೆಬ್ಸೈಟ್) ನಲ್ಲಿ ತಿಳಿಯಿರಿ. ಸಮಾಜದ ಜನರಲ್ಲಿ ಎರಡೇ ಪಕ್ಷ ಸತ್ಯಯುಗದಲ್ಲಿ ರಾಕ್ಷಸರು ದೇವತೆಗಳು ಇದ್ದರು. ತ್ರೇತಾಯುಗದಲ್ಲಿ ರಾಕ್ಷಸರೊಂದಿಗೆ ಮಾನವರು ವಾನರರು ಹೋರಾಡಿದರು. ದ್ವಾಪರದಲ್ಲಿ ಅಧರ್ಮ ಹಾಗೂ ಧರ್ಮದ ಹೋರಾಟ ನಡೆಯಿತು. ಈಗ ಕಲಿಯುಗದಲ್ಲಿಯೂ ರಾಕ್ಷಸರಿದ್ದಾರೆ ಅವರಿಗೆ ಹಲವು ಮುಖವಾಡಗಳಿವೆ. ಭಯೋತ್ಪಾದನೆಯ ವರ್ಗ ಒಂದುಕಡೆ, ಮತಾಂತರಿಗಳ ವರ್ಗ ಇನ್ನೊಂದುಕಡೆ. ಇವರನ್ನು ಬೆಳೆಸುವ ಜಾತ್ಯಾತೀತ ರಾಜಕೀಯ ವರ್ಗ ಮೂರನೆಯದು. ಸಮಾಜದಲ್ಲಿ ಎರಡೇ ಪಕ್ಷ ಒಂದು ಧರ್ಮದ ಪರ ಇರುವವರದ್ದು. ಇನ್ನೊಂದು ಧರ್ಮದ ವಿರುದ್ಧ ಇರುವವರದ್ದು. ಮೂರನೆಯ ಆಯ್ಕೆ ಇಲ್ಲ. ನಾವು ಎಲ್ಲಿನಿಂತಿದ್ದೇವೆ? ಎಲ್ಲಿ ನಿಲ್ಲಬೇಕು? ಎಲ್ಲಿನಿಲ್ಲಬಾರದು? ಎನ್ನುವುದನ್ನು ನಾವೇ ತೀರ್ಮಾನಿಸಬೇಕು.

ಸತ್ಯಯುಗದಲ್ಲಿ ದೇವತೆಗಳು ರಾಕ್ಷಸರು ಇದ್ದರು, ತ್ರೇತಾಯುಗದಲ್ಲಿಯೂ, ದೇವತೆಗಳಂತೆ ಮನುಷ್ಯರು, ಹಾಗೂ ರಾಕ್ಷಸರು ಇದ್ದರು, ದ್ವಾಪರಾಯುಗದಲ್ಲಿರಾಕ್ಷಸರು ಇದ್ದರು ಅಧರ್ಮಿಗಳೂ ಇದ್ದರು ಕೃಷ್ಣನು ಧರ್ಮದ ಪರ ನಿಂತಿದ್ದನು. ಕಲಿಯುಗದಲ್ಲಿ ಉತ್ತಮರನ್ನು ಶುಕ್ಲಪಕ್ಷದವರು ಎಂಬುದಾಗಿಯೂ ದುರ್ಜನರನ್ನು ಕೃಷ್ಣಪಕ್ಷದವರೆಂಬುದಾಗಿಯೂ ವಿಭಾಗಿಸೋಣ ನಾವು ಶುಕ್ಲಪಕ್ಷದ ಚಂದ್ರನಂತೆ ಬೆಳೆಯೋಣ. ಕೃಷ್ಣಪಕ್ಷದವರು ಧರ್ಮದ್ರೋಹಿಗಳೂ ಧರ್ಮ ಬ್ರಷ್ಟರೂ ಆಗಿ ಕೃಷ್ಣಪಕ್ಷದ ಚಂದ್ರನಂತೆ ಕಳಾಹೀನರಾಗುತ್ತಾ ನಾಶಹೊಂದುವುದನ್ನು ಗಮನಿಸೋಣ.

ಮಹಾಭಾರತಯುದ್ಧದಲ್ಲಿ ಅಧರ್ಮ ಸೋತಿತು ಧರ್ಮ ಗೆದ್ದಿತು. ಯುದ್ಧದಲ್ಲಿ ಅರ್ಜುನನಂತೆ ಗೊಂದಲಕ್ಕೊಳಗಾಗಬಾರದು. ಹೋರಾಟದ ಹಾದಿಯಲ್ಲಿ ಹಿಂಜರಿಕೆ ಇರಬಾರದು. ಹೇಡಿಗಳಾಗಬಾರದು. ವಿದುರ ಭಗವದ್ಗೀತೆಯ ಅಂತ್ಯದಲ್ಲಿ  ಹೀಗೆ ಹೇಳುತ್ತಾನೆ

 

ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ|

ತತ್ರ ಶ್ರೀವಿಜಯೋ ಭೂತಿಧ್ರುವಾ ನೀತಿರ್ಮತಿರ್ಮಮ||

 

ಕೃಷ್ಣ ಅರ್ಜುನರು ಎಲ್ಲಿದ್ದಾರೋ ಅಲ್ಲಿ ಜಯ ನಿಶ್ಚಿತ ಎಂಬುದಾಗಿ ಇಲ್ಲಿ ಕೃಷ್ಣ ಎಂದರೆ ಬುದ್ಧಿ ಅರ್ಜುನ ಎಂದರೆ ಬಲ ಇವೆರಡೂ ಇದ್ದಲ್ಲಿ ಜಯ ನಿಶ್ಚಿತವಾಗಿದೆ.

3. ಕೃತಜ್ಞತೆಯೇ ಪೂಜೆ

ದೇವರನ್ನು ಪೂಜೆಯಿಂದ ಮೆಚ್ಚಿಸಲುಸಾಧ್ಯವಿಲ್ಲ. ದೇವರಿಗೆ ಕೃತಜ್ಞತೆ ಸಲ್ಲಿಸಬಹುದು. ಇದಕ್ಕಾಗಿ ಆಡಂಬರ ಬೇಕಿಲ್ಲ. ನಿಷ್ಕಲ್ಮಷ ಮನಸ್ಸು, ನಿಷ್ಕಲ್ಪಷ ಬದುಕು ಹಾಗೂ ಪರಿಶುದ್ಧವಾದ ಭಕ್ತಿ ಇದ್ದರೆ ಸಾಕು. ಸತ್ಯದಿಂದ ಬದುಕುವವನಿಗೆ ಯಾವುದೇ ಹೋಮ ಪೂಜೆ ಉತ್ಸವ ಅನಿವಾರ್ಯವೇನಲ್ಲ. ಶಕ್ತಿ ಇದ್ದಾಗ ಇವನ್ನೆಲ್ಲಾ ಖಂಡಿತಾ ಮಾಡಬೇಕು. ಇವು ನಮ್ಮ ಸಂಸ್ಕೃತಿಯ ಭಾಗ. ಭಿನ್ನಭಿನ್ನ ಉಪಾಸನಾಪದ್ದತಿಗಳೆಲ್ಲಾ ನಾವು ದೇವರಿಗೆ ಸಲ್ಲಿಸುವ ಕೃತಜ್ಞತೆಯ ವಿವಿಧ ವಿಧಾನಗಳು ಹಾಗೂ ನಮ್ಮ ಸಂಸ್ಕೃತಿಯ ಸನ್ಮಾನ. ನಮ್ಮ ಉನ್ನತಿಗೆ ನಾವೇ ಕಾರಣ ಎನ್ನುವುದು ಅಹಂಕಾರ. ದೇವರು ಕಾರಣ ಎನ್ನುವುದು ಸೌಜನ್ಯ. ಎಲ್ಲದಕ್ಕೂ ದೇವರೇ ಕಾರಣ ಎನ್ನುವುದು ಮೂರ್ಖತನ. ಭಗವದ್ಗೀತೆಯ ಹದಿನೆಂಟನೆಯ ಅಧ್ಯಾಯದ ಹದಿನಾಲ್ಕನೆಯ ಶ್ಲೋಕದಲ್ಲಿ ಶ್ರೀ ಕೃಷ್ಣ ಹೇಳಿರುವುದನ್ನು ನಾವು ಗಮನಿಸಬೇಕು

ಅಧಿಷ್ಠಾನಂ ತಥಾಕರ್ತಾ ಕರಣಂ ಚ ಪೃಥಗ್ವಿಧಮ್ |

ವಿವಿದಾಶ್ಚ ಪೃಥಕ್ ಚೇಷ್ಟಾ ದೈವಂ ಚೈವಾತ್ರ ಪಂಚಮಮ್||

ಯಾವುದೇ ಸಂಕಲ್ಪದ ಯಶಸ್ಸಿಗೆ ಐದು ಅಂಶಗಳು ಕಾರಣವಾಗುತ್ತವೆ (ಅಧಿಷ್ಠಾನಮ್) ಕೆಲಸಮಾಡುವ ಸ್ಥಳ, (ಕರ್ತ) ಮಾಡುವ ವ್ಯಕ್ತಿ, (ಕರಣಮ್ ಪೃಥಗ್ವಿಧಮ್ ) ಭಿನ್ನ ಭಿನ್ನ ಸಾಧನಗಳು, (ವಿವಿದಾಶ್ಚ ಪೃಥಕ್ ಚೇಷ್ಟಾ) ವಿಧವಿಧವಾದ ಪ್ರಯತ್ನಗಳು (ದೈವಂ ಚ ಏವ ಅತ್ರ ಪಂಚಮಮ್),  ಚ= ಮತ್ತು, ದೈವಂ = ದೇವರು, ಅತ್ರ= ಇಲ್ಲಿ, ಪಂಚಮಮ್ = ಐದನೆಯವನು.

ಮೊದಲ ನಾಲ್ಕುವಿಷಯಗಳು ನಮಗೆ ನೇರವಾಗಿ ಸಂಬಂಧಿಸಿದ್ದು ನಾವೇ ಮಾಡಬೇಕಿರುವುದು. ಈ ಕ್ಷೇತ್ರಗಳಲ್ಲಿ ನಮ್ಮ  ಶ್ರದ್ಧೆ ನಿಷ್ಠೆ ಪ್ರಯತ್ನ ಪ್ರಾಮಾಣಿಕವಾಗಿದ್ದರೆ, ಐದನೆಯವನು ಭಗವಂತ ನಮ್ಮೊಂದಿಗೆ ನಿಲ್ಲುತ್ತಾನೆ. ಇದನ್ನು ಬಿಟ್ಟು ನಾವು ಎಲ್ಲವನ್ನೂ ಅವನಿಗೆ ಆರೋಪಿಸಿ ದೇವರೇ ಎಲ್ಲವನ್ನೂ ಮಾಡುತ್ತಾನೆಂದು ನಾವು ಕರ್ತವ್ಯಶೂನ್ಯರಾದರೆ, ಪೂಜೆ ಉತ್ಸವ ಸೇವೆ ಜಪ ಮಾಡುತ್ತಾ ಕುಳಿತರೆ ದೇವರೂ ನಮ್ಮನ್ನು ಕಾಪಾಡಲಾರ. ನಮ್ಮ ದೇವಾಲಯಗಳು ಲೂಟಿಕೋರರಿಂದ ನಾಶವಾಗಿದ್ದು ನಮ್ಮ ಜವಾಬ್ದಾರಿಯನ್ನು ನಾವು ನಿರ್ವಹಿಸದಿದ್ದುದರಿಂಲೇ ಆಗಿದೆ.

 

ಯಾವುದೇ ಒಬ್ಬ ವ್ಯಕ್ತಿಯ ಯಶಸ್ಸಿನಲ್ಲಿ ಸಮಾಜದ ಅನೇಕರ ಪಾಲು ಇರುತ್ತದೆ. ಯಾವುದೇ ಯಶಸ್ಸು ಒಬ್ಬನದೇ ಸಾಧನೆ ಯಾಗಿರುವುದಿಲ್ಲ. ಇಂತಹ ಸಮಾಜದ ಋಣವನ್ನು ತೀರಿಸಲು ಹಾಗೂ ಸಮಾಜಕ್ಕೆ ಪ್ರೇರಣೆಯಾಗಲು ಧಾರ್ಮಿಕ ಕಾರ್ಯ, ಪೂಜೆ, ಅರ್ಚನೆ, ಅನ್ನದಾನ ಇವೆಲ್ಲವೂ ಮುಖ್ಯವಾಗುತ್ತದೆ. ಸಾಲಮಾಡಿ ಯಾವಾಗಲೂ ದೇವರ ಕೆಲಸ ಮಾಡುವ ಅಗತ್ಯ ಇಲ್ಲ. ಜನರಿಗೆ ನಮ್ಮ ಕಷ್ಟ ಪ್ರೇರಣೆ ಯಾಗಬೇಕಿಲ್ಲ. ಕಷ್ಟದ ಸಮಯದಲ್ಲಿ ಪೂಜೆಗಿಂತಲೂ ಹೆಚ್ಚು ಪರಿಶ್ರಮಕ್ಕೆ ಗಮನ ಕೊಡಬೇಕು. ಆದರೆ ಮನಸ್ಸಿನಲ್ಲಿ ವೆಚ್ಚರಹಿತ ಶ್ರದ್ಧಾ ಭಕ್ತಿ ದೇವರಲ್ಲಿರಬೇಕು. ಶಬರಿಯಂತೆ ನಾವು ಇರಬಹುದು. ಆಕೆಗೆ ರಾಮನ ದರ್ಷನ ಆಗಲಿಲ್ಲವೇ? ಕೃಷ್ಣ ಕುಚೇಲನ ಅವಲಕ್ಕಿಗೆ ಖುಷಿಪಡಲಿಲ್ಲವೇ? ಕನಕದಾಸರಂತೆ, ರಾಮಕೃಷ್ಣ ಪರಮಹಂಸ ರಂತೆ ಸರಳವಾದ ನಿಷ್ಕಲ್ಮಶ ಭಕ್ತಿಯೇ ದೇವರ ಒಲುಮೆಗೆ ಉಚಿತ ಮಾರ್ಗ. ಇಂತಹ ಮನಸ್ಸಿನಲ್ಲಿ ಮಾಡುವ ಕೆಲಸದಲ್ಲಿ ಕಾರ್ಯತತ್ಪರರಾಗಬೇಕು.

ಶ್ರೀ ಕೃಷ್ಣನು ಗೀತೆಯಲ್ಲಿ ಈ ಮಾತನ್ನು ಹೇಳಿದ್ದಾನೆ

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ|

ತದಹಂ ಭಕ್ತ್ಯುಪಹೃತಮ,ಶ್ನಾಮಿ ಪ್ರಯತಾತ್ಮನಃ||

ಈ ಶ್ಲೋಕದ ಅರ್ಥ ಹೀಗಿದೆ.

ನನಗೆ ಯಾರು ಭಕ್ತಿಯಿಂದ ಒಂದು ತುಳಸಿ ಪತ್ರೆ, ಹೂವು, ಹಣ್ಣು, ನೀರು, ಕೊಟ್ಟರೂ ಅದನ್ನು ನಾನು ಸ್ವೀಕರಿಸುತ್ತೇನೆ. ಇಲ್ಲಿ ಕೊಟ್ಟವಸ್ತು ಮುಖ್ಯವಲ್ಲ ಕೊಡುವವನ ಮನಸ್ಥಿತಿ ಮುಖ್ಯ.

ಯಃ-ಯಾವನು, ಮೇ-ನನಗೆ, ಭಕ್ತ್ಯಾ-ಭಕ್ತಿಯಿಂದ, ಪತ್ರಂ-ಎಲೆಯನ್ನು, ಪುಷ್ಪಂ-ಹೂವನ್ನು, ಫಲಂ-ಹಣ್ಣನ್ನು, ತೋಯಮ್-ನೀರನ್ನು, ಪ್ರಯಚ್ಛತಿ-ಕೊಡುತ್ತಾನೋ, ಪ್ರಯತ ಆತ್ಮನಃ-ಶುದ್ಧಮನಸ್ಸಿನಲ್ಲಿ ಇರುವವನಿಂದ.  ಭಕ್ತ್ಯಾ ಉಪಹೃತಮ್-ಭಕ್ತಿಯಿಂದ ಸಮರ್ಪಿಸಿದ, ತತ್-ಅದನ್ನು, ಅಹಮ್-ನಾನು, ಅಶ್ನಾಮಿ-ಸ್ವೀಕರಿಸುತ್ತೇನೆ,

 

4. ತಾರತಮ್ಯ ರಹಿತ ಭಾವ . 

ಧರ್ಮಸಾಧಕರಲ್ಲಿ ಧರ್ಮ ಸೈನಿಕರಲ್ಲಿ ಮೇಲು ಕೀಳೆಂಬುದಿಲ್ಲ. ಎಲ್ಲರೂ ಒಂದೇ ನಾವೆಲ್ಲಾ ಪರಮಾತ್ಮನ ಮಕ್ಕಳು. ನಾವೆಲ್ಲಾ ಹಿಂದು ನಾವೆಲ್ಲಾ ಒಂದು ಈ ಭಾವ ನಮ್ಮಲ್ಲಿ ಸದಾ ಜಾಗ್ರತವಾಗಿರಬೇಕು. ನಾವು ಹಿಂದೂ ಧರ್ಮ ರಕ್ಷಣೆಗಾಗಿ ಧರ್ಮಯೋಧರಂತಿರಬೇಕು. ನಮ್ಮ ಜಾತಿ ಯಾವತ್ತೂ ಸಾರ್ವಜನಿಕವಾಗಿ ಪ್ರದರ್ಷನದ ವಸ್ತುವಾಗಿರಬಾರದು. ಜಾತಿಯ ಪ್ರದರ್ಷನ ಹಿಂದೂ ಏಕತೆಯನ್ನು ವಿಭಜಿಸುತ್ತದೆ. ನಮ್ಮ ಮನಸ್ಸಿನ ಅಪಕ್ವತೆಯನ್ನು ತೋರಿಸುತ್ತದೆ. ನಮ್ಮಲ್ಲಿರುವ ಮೇಲರಿಮೆಯ ಅಹಂಕಾರವನ್ನು ತೋರಿಸುತ್ತದೆ. ಇಂದು ದೊಡ್ಡ ದೊಡ್ಡ ಸಂಘಟನೆಗಳಲ್ಲಿ ಉನ್ನತ ಸ್ಥಾನಗಳಲ್ಲಿರುವವರೂ ಜಾತಿಯನ್ನು ಪ್ರದರ್ಷಿಸುತ್ತಾರೆ. ಇದು ಸಮಾಜದ ದುರಂತ ಸಾಂಸ್ಕೃತಿಕ ಭಿನ್ನತೆಯು ಮನೆಯ ಬಾಗಿಲಿನ ಒಳಗಿರಬೇಕು ಅದು ರಸ್ತೆಗೆ ಬರಬಾರದು. ಒಗ್ಗಟ್ಟಿನಲ್ಲಿ ಬಲವಿದೆ. ಮಕ್ಕಳನ್ನು ಶಾಲೆಗೆ ಸೇರಿಸುವಾಗ ಮಕ್ಕಳ ಹೆಸರಿನೊಂದಿಗೆ ಊರ ಹೆಸರು, ತಂದೆಯ ಹೆಸರು ನೀಡಬಹುದು. ಜಾತಿಯನ್ನು ಸೂಚಿಸಬೇಕಿಲ್ಲ. ಕೇವಲ ಇನ್ನೀಶಿಯಲ್ ಸೇರಿಸಬಹುದು. ಪೂರ್ಣ ವಿವರಣೆ ಕೊಡಬೇಕಿಲ್ಲ. ಇದು ಮುಂದೆ ಸಾಮಾಜಿಕ ಸಾಮರಸ್ಯಕ್ಕೆ ಸಹಾಯವಾಗುವುದು. ಎಲ್ಲಾ ಸರಕಾರಿ ಅರ್ಜಿಗಳಿಂದ ಜಾತಿ ಕೋಣೆಯನ್ನು ತೆಗೆಸಬೇಕು. ಸರಕಾರದ ರಿಯಾಯಿತಿ ಆರ್ಥಿಕ ಬಡತನದಮೇಲೆ ಸರ್ವರಿಗೂ ಸಿಗುವಂತಿರಬೇಕು. ಜಾತಿ ಆಧರಿಸಿ ಕೊಟ್ಟವರಿಗೇ ಪುನಃ ಪುನಃ ಕೊಡುವುದು ಸಾಮಾಜಿಕ ನ್ಯಾಯವಲ್ಲ. ಸರಕಾರಗಳು ಜಾತಿಯಿಂದ ಗುರುತಿಸುವ ಕೆಲಸವನ್ನು ಬಿಟ್ಟು ಹಿಂದುಳಿದವರನ್ನು ಗ್ರೇಡ್ ಮುಖಾಂತರ ಗುರುತಿಸಬೇಕು. ಅವರಿಗೆ ಅವರ ಆರ್ಥಿಕಸ್ಥಿತಿಗನುಗುಣವಾಗಿ ಗುರುತಿನ ಚೀಟಿ ಕೊಡಬೇಕು. ಸ್ಥರುನ್ನತಿ ಹೊಂದಿದವನನ್ನು ಮುಂದಿನ ಗ್ರೇಡಿಗೆ ಸ್ಥಳಾಂತರಿಸಬೇಕು. ಆಗ ಮಾತ್ರ ಶೋಶಿತ ಸರಕಾರದ ಲಾಭ ಪಡೆಯಲು ಸಾಧ್ಯ. ಇದು ಆರ್ಥಿಕ ಸ್ಥಿತಿಗನುಗುಣವಾಗಿ ಇರಬೇಕು.

 

5. ಆಹಾರ ಪದ್ದತಿ.

ಹಿಂದಿನಿಂದಲೂ ಎರಡು ವಿಧದ ಆಹಾರ ಪದ್ದತಿ ಭಾರತೀಯ ಸಮಾಜದಲ್ಲಿ ರೂಢಿಯಲ್ಲಿದೆ. ಸಸ್ಯಾಹಾರ ಹಾಗೂ ಮಾಂಸಾಹಾರ ಇವೆರಡು ಪದ್ದತಿಗಳಲ್ಲಿ ಮನುಷ್ಯನ ದೇಹವನ್ನು ಭಗವಂತ ಸಸ್ಯಾಹಾರಕ್ಕನುಗುಣವಾಗಿ ರೂಪಿಸಿದ್ದಾನೆ. ಈ ಬಗೆಯ ಆಹಾರ ಪದ್ದತಿಯನ್ನು ಆಯುರ್ವೇದದಲ್ಲಿ ಸಾತ್ವಿಕ ಆಹಾರ ಎನ್ನಲಾಗಿದೆ ಹಾಗೂ ಇದು ದೇಹ ಹಾಗೂ ಮನಸ್ಸಿನ ಆರೋಗ್ಯದ ದೃಷ್ಟಿಯಿಂದ ಉತ್ತಮ ಆಹಾರ ಎಂಬುದಾಗಿ ಧೃಢಪಟ್ಟಿದೆ. ಸಸ್ಯಾಹಾರ ಅಭ್ಯಾಸ ಸಾಧ್ಯವಾಗದಿದ್ದಲ್ಲಿ ಪರಂಪರೆಯಿಂದ ಮಾಂಸಾಹಾರ ಪದ್ದತಿಯಲ್ಲಿ ನಾವು ಬೆಳೆದು ಬಂದಿದ್ದಲ್ಲಿ. ಅಲ್ಲಿಯೂ ಒಂದು ಸಭ್ಯತೆಯನ್ನು ನಾವು ಪಾಲಿಸಬೇಕು. ನಮ್ಮ ಹಿರಿಯರು ಈ ದಾರಿಯನ್ನು ತೋರಿಸಿದ್ದಾರೆ ಈ ಸಭ್ಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಸಿಕ್ಕ ಸಿಕ್ಕ ಪ್ರಾಣಿಗಳನ್ನೆಲ್ಲಾ ಕೊಂದು ತಿನ್ನುವುದು ಮನುಷ್ಯ ಸ್ವಭಾವ ಅಲ್ಲ ಹಾಗೂ ಭಾರತೀಯರ ಸಂಸ್ಕೃತಿಯೂ ಅಲ್ಲ. ಅದು ರಾಕ್ಷಸರ ಜೀವನ ಕ್ರಮ. ಭೋಗ ಪ್ರವೃತ್ತಿ, ನಮಗೆ ಉಪಕಾರ ಮಾಡುವ ಪ್ರಾಣಿಗಳನ್ನು ತಿನ್ನುವುದಂತೂ ಅತ್ಯಂತ ಹೀನ ಅಂದರೆ ಪೈಶಾಚಿಕ ಪದ್ದತಿ. ಇದು ಹಿಂದೂ ಧರ್ಮದಲ್ಲಿ ಇಲ್ಲವೇ ಇಲ್ಲ. ಮಾಂಸಾಹಾರಿಗಳೂ ಆಹಾರ ಸಭ್ಯತೆಯನ್ನು ಪಾಲಿಸಬೇಕು. ಹಿಂದಿನಿಂದ ನಡೆದುಕೊಂಡು ಬಂದ ಮಾಂಸಾಹಾರ ಪದ್ದತಿಯಂತೆ. ಕುರಿ, ಕೋಳಿ, ಮೀನು, ಮೊಟ್ಟೆ, ಇದಕ್ಕಿಂತ ಹೊರಗೆ ಹೋಗಬಾರದು. ಇದಕ್ಕೆ ಹೊರತಾದ ಮಾಂಸಾಹಾರ ಸೇವನೆ ಅಸುರ ಪದ್ದತಿ ಎಂದು ಪರಿಗಣಿಸಬೇಕು. ಕಾಡುಪ್ರಾಣಿಗಳನ್ನು ತಿನ್ನುವುದು. ಗೋವುಗಳನ್ನು ಎತ್ತುಗಳನ್ನು ಎಮ್ಮೆ ಕೋಣಗಳನ್ನು ಕಡಿದು ತಿನ್ನುವುದು, ನಾಯಿಗಳನ್ನು, ಹಾವುಗಳನ್ನು ಹಂದಿಗಳನ್ನು ತಿನ್ನುವುದು ಇವೆಲ್ಲವೂ ರಾಕ್ಷಸರ ಆಹಾರ ಪದ್ದತಿ. ತಾಮಸ ಆಹಾರ ಎಂಬುದಾಗಿ ಭಾವಿಸಬೇಕು. ಇವು ಭಾರತೀಯಪದ್ದತಿಯಲ್ಲಿ ಸಾಮಾನ್ಯವಾಗಿ ಇಲ್ಲ.  ಆಹಾರವೂ ತಿನ್ನುವವನ ಮನಸ್ಸಿನ ಮೇಲೆ, ಮನುಷ್ಯನ ಸ್ವಭಾವದಮೇಲೆ  ಪ್ರಭಾವಬೀರುತ್ತದೆ. ಅಂತಹ ರಾಕ್ಷಸರಿಂದ ಸಜ್ಜನರು ದೂರ ಇರಬೇಕು. ಕಲಿಯುಗದ ರಾಕ್ಷಸರು ಇಂದು ನಮ್ಮ ಮಧ್ಯೆಯೇ ಬೆಳೆಯುತ್ತಿರುವುದನ್ನು ನಾವು ಗಮನಿಸಬಹುದು. ನಿರ್ದಯವಾಗಿ ಗೋವುಗಳನ್ನು ಕದಿಯುವುದು, ಕೊಲ್ಲುವುದು, ಕಡಿಯುವುದು, ತಿನ್ನುವುದು ಇಂದು ಸಾಮಾನ್ಯವಾಗಿದೆ. ನಮಗೆ ಕುಟುಂಬ ಸಂಸಾರ ಮಕ್ಕಳು ಇರುವಂತೆಯೇ ಎಲ್ಲಾ ಪ್ರಾಣಿಗಳಿಗೂ ಒಂದು ಜೀವನ ಇರುತ್ತದೆ. ಅವುಗಳೂ ತಮ್ಮ ಮರಿಗಳನ್ನು ನಮ್ಮಷ್ಟೇ ಪ್ರೀತಿಸುತ್ತವೆ. ನಮ್ಮ ನಾಲಿಗೆ ಚಪಲಕ್ಕೆ ಇತರ ಪ್ರಾಣಿಗಳನ್ನು ಕೊಲ್ಲುವುದು ಕ್ರೌರ್ಯ ಎನ್ನುವುದು ನಮ್ಮ ಮನಸ್ಸಿನಲ್ಲಿ ಮೂಡಬೇಕು. ನಮ್ಮ ಮಕ್ಕಳನ್ನು ಇನ್ನಾರೋ ನಮ್ಮೆದುರೇ ಕೊಂದು ತಿಂದರೆ ನಮ್ಮ ಮನಸ್ಸಿಗೆ ಹೇಗನಿಸುತ್ತದೆ ಎಂಬುದಾಗಿ ಯೋಚಿಸಬೇಕು. ಎಲ್ಲಾ ಜೀವಿಗಳ ಮೇಲಿನ ದಯವೇ ಮಾನವೀಯತೆ ಎನ್ನಿಸಿಕೊಳ್ಳುತ್ತದೆ. ಹಿರಿಯರು ದಯವೇ ಧರ್ಮದ ಮೂಲವಯ್ಯಾ ಎಂದಿದ್ದಾರೆ. ಆದರೆ ರಾಕ್ಷಸರಿಗೆ ಇಂತಹ ಮಾನವೀಯತೆ ಎಂದಿಗೂ ಇರುವುದಿಲ್ಲ. ಬಕಾಸುರ ಎತ್ತುಗಳೊಂದಿಗೆ ಮನುಷ್ಯನನ್ನೂ ತಿನ್ನುತ್ತಿದ್ದ. ಇಂದೂ ಗೋಭಕ್ಷಕರು ಕಟುಕರಂತೆ ನಮ್ಮ ನಡುವೆ ಸಮಾಜ ಕಂಠಕರಾಗಿ ಬದುಕಿದ್ದಾರೆ. ಜಿಹಾದ್ ಹಾಗೂ ಮತಾಂತರಮಾಡುವ ಈ ಆಧುನಿಕ ರಾಕ್ಷಸರು ಬೆಳೆಯುತ್ತಿದ್ದಾರೆ. ಇವರನ್ನು ಎಲ್ಲರೀತಿಯಲ್ಲಿಯೂ ದುರ್ಬಲಗೊಳಿಸಬೇಕು. ಅಸುರ ಶಕ್ತಿ ಅಳಿದು ಸಾತ್ವಿಕ ಶಕ್ತಿ ಬೆಳೆಯಬೇಕು. ಅದಕ್ಕೆ ಪೂರಕವಾಗಿ ನಾವು ಕೆಲಸ ಮಾಡಬೇಕು.

 

6. ಸ್ವಾಭಿಮಾನ ಹಾಗೂ ಸ್ವದೇಶಿ ಚಿಂತನೆ.

ಈ ದೇಶವನ್ನು ಲೂಟಿಮಾಡಲು ಬಂದ ಇಸ್ಲಾಮಿನ ದಾಳಿಕೋರರು ಹಾಗೂ ಕ್ರೈಸ್ತ ಮಿಶನರಿಗಳು ಹಿಂದುಗಳನ್ನು ಅತಿಯಾಗಿ ಹಿಂಸಿಸಿದುದು. ಹಾಗೂ ನಮ್ಮ ಸಂಸ್ಕೃತಿಯ ಮೇಲೆ ಶಿಕ್ಷಣದ ಮೇಲೆ ದಾಳಿಮಾಡಿದುದರ ಫಲವಾಗಿ ಹಿಂದುಗಳು ಇಂದು ತಮ್ಮ ಸಂಸ್ಕೃತಿಯ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿದ್ದಾರೆ. ನಂತರದಲ್ಲಿ ಮುಸಲ್ಮಾನ ಪ್ರೇಮಿಗಳಾದ ಗಾಂಧಿ ಹಾಗೂ ನೆಹರೂಪರಂಪರೆಯಿಂದ ಬಂದ ಕಾಂಗ್ರೇಸಿಗರು ವ್ಯಸ್ಥಿತವಾಗಿ ಭಾರತೀಯ ಶಿಕ್ಷಣದಲ್ಲಿ ವಿದೇಶೀಯತೆಯನ್ನು ತುಂಬಿ ಲೂಟೀಕೋರರನ್ನು ವೈಭವೀಕರಿಸಿ ಹಿಂದೂಗಳನ್ನು ಅವಗಣನೆ ಮಾಡಿದ್ದಾರೆ. ಹೀಗೆ ಹಿಂದುಗಳಲ್ಲಿ ಕೀಳರಿಮೆ ಮೂಡುವಂತೆ ನಡೆದುಕೊಂಡಿದ್ದಾರೆ. ಇವರೇ ಸಮಾಜದಲ್ಲಿ ವಿಷವನ್ನು ಬಿತ್ತಿ ಹಿಂದೂಗಳನ್ನು ಮೇಲ್ವರ್ಗ ಕೆಳವರ್ಗವೆಂಬುದಾಗಿ ಒಡೆದಿದ್ದಾರೆ. ಆರ್ಯದ್ರಾವಿಡವೆಂಬ ಸುಳ್ಳುಸಿದ್ದಾಂತವನ್ನು ಪೋಶಿಸಿದ್ದಾರೆ. ಮುಸ್ಲಿಮರ ಹಜ್ ಯಾತ್ರೆಗೆ ಸಬ್ಸಿಡಿ ಕೊಟ್ಟ ಕಾಂಗ್ರೇಸಿಗರು ಅಮರ ನಾಥ ಯಾತ್ರೆಗೆ ಹೋಗುವ ಹಿಂದುಗಳಿಗೆ ತೆರಿಗೆ ವಿಧಿಸಿದ್ದರು. ಚರ್ಚ್ ಮಸೀದಿಗಳನ್ನು ಸರ್ಕಾರದಿಂದ ಮುಕ್ತವಾಗಿಟ್ಟು ಹಿಂದೂ ದೇವಾಲಯಗಳನ್ನು ಸರಕಾರೀಕರಣ ಗೊಳಿಸಿ ಅವುಗಳನ್ನು ನಾಶದ ಅಂಚಿಗೆ ದೂಡಿದರು.  ಹೀಗೆ ವ್ಯಸ್ಥಿತವಾಗಿ ಹಿಂದೂ ಸಂಸ್ಕೃತಿಯ ನಾಶಕ್ಕೆ ಇಳಿದ ಕಾಂಗ್ರೇಸಿಗರಿಂದಾಗಿ ಹಿಂದೂಗಳಿಗೆ ತಮ್ಮ ಶ್ರೀಮಂತ ಪರಂಪರೆಯಬಗ್ಗೆ ತಿಳುವಳಿಕೆ ಇಲ್ಲದೆ ಕೀಳರಿಮೆ ಉಂಟಾಗಿದೆ. ಇದರಿಂದ ಸಮಾಜ ಹೊರಬರಬೇಕು. ಧರ್ಮದ್ರೋಹಿಗಳಿಗೆ ಅವರ ಯೋಗ್ಯತೆಗೆ ಸರಿಯಾದ ಜಾಗವನ್ನು ತೋರಿಸಬೇಕು. ನಮ್ಮ ಆಚಾರ ವಿಚಾರಗಳನ್ನು ಹೆಮ್ಮೆಯಿಂದ ನಾವು ಆಚರಿಸಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹಾಗೂ ಆಚರಿಸಲು ನಮಗೆ ಹಿಂಜರಿಕೆ ಬೇಕಿಲ್ಲ ಬದಲಾಗಿ ಹೆಮ್ಮೆ ಪಡಬೇಕು. ಮಕ್ಕಳ ಸಂಸ್ಕಾರವನ್ನು ನಾಶಮಾಡುವ ಮಿಶನರಿ ಶಾಲೆಗಳಿಂದ ಮಕ್ಕಳನ್ನು ದೂರವಿಡಬೇಕು. ಮನೆಯಲ್ಲಿಯೇ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಸ್ವದೇಶೀ ವಸ್ತುಗಳನ್ನೇ ಹೆಮ್ಮೆಯಿಂದ ಉಪಯೋಗಿಸಬೇಕು. ಮಕ್ಕಳಲ್ಲಿಯೂ ದೇಶಾಭಿಮಾನವನ್ನು ಧರ್ಮಾಭಿಮಾನವನ್ನೂ, ಸ್ವಾಭಿಮಾನವನ್ನೂ ಬೆಳೆಸಬೇಕು. ವಿದೇಶೀ ಮತಾರಾಧಕರಿಂದ ಎಚ್ಚರವಿರಬೇಕು. ಮತಾಂತರಿಗಳ ದುಷ್ಟ ಚಿಂತನೆಗಳಿಗೆ ಬಲಿಬೀಳದೆ ಇಂತಹ ದುರ್ಜನರ ಕುತಂತ್ರ ದಿಂದ ಯಾವಾಗಲೂ ದೂರವಿರಬೇಕು. ಹಾಗೂ ಹಿಂದೂಗಳ ಒಳಗಿರುವ ಜಾತ್ಯಾತೀತರೆಂಬ ಧರ್ಮ ದ್ರೋಹಿಗಳಿಂದಲೂ ಎಚ್ಚರದಿಂದ ಇರಬೇಕು. ಹೀಂದೂಗಳನ್ನು ಹೀಯಾಳಿಸುವ ರಾಜಕೀಯನಾಯಕರು ಹಾಗೂ ಅಂತಹವರನ್ನು ಪೋಷಿಸುವ ರಾಜಕೀಯ ಪಕ್ಷಗಳನ್ನು ಅವರಿಗೆ ಮತನೀಡಿ ಬೆಂಬಲಿಸುವ ಮೂರ್ಖ ಹಿಂದೂಗಳನ್ನೂ ಶಾಶ್ವತವಾಗಿ ಬಹಿಷ್ಕರಿಸಬೇಕು.

 

7. ಸಂಸ್ಕಾರ ಹಾಗೂ ಸಂಸ್ಕೃತಿ. 

ಸಂಸ್ಕೃತಿ ಉಳಿದರೆ ಸಂಸ್ಕಾರ ಬರುತ್ತದೆ. ಆದುದರಿಂದ ನಮ್ಮ ಪ್ರಾಚೀನರ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು. ಪುರುಷರಲ್ಲಿ ತಿಲಕ ಧಾರಣೆ, ಕರ್ಣಾಭರಣ, ಕೈಗೆ ಕಡಗ ಧರಿಸುವುದು, ಸ್ವದೇಶೀ ವಿನ್ಯಾಸದ ಖಾದಿ ಹಾಗೂ ರೇಷ್ಮೆಯ ವಸ್ತ್ರ ಧರಿಸುವುದು, ಧೋತಿ, ತಲೆಗೆ ಮುಂಡಾಸು ಮುಂತಾದುವು ಭಾರತೀಯ ಸಂಸ್ಕೃತಿ ಯಾಗಿತ್ತು. ಹಾಗೆಯೇ ಮಹಿಳೆಯರಲ್ಲಿ ಸೀರೆ, ಸಿಂಧೂರ ಧಾರಣೆ, ಕೈಗೆ ಬಳೆ, ಮುಡಿಗೆ ಹೂವು, ವಿವಾಹಿತರಲ್ಲಿ ಮಂಗಳಸೂತ್ರ, ಕಾಲುಂಗುರ ಮುಂತಾದುವು ನಮ್ಮ ಸಾಮಾನ್ಯ ಮಾಹ್ಯ ಸಂಸ್ಕೃತಿಯಾಗಿದೆ. ಇವುಗಳನ್ನು ನಾವು ಅಭಿಮಾನದಿಂದ ಆಚರಿಸುವುದನ್ನು ರೂಢಿಸಿಕೊಳ್ಳಬೇಕು. ಹಾಗೆಯೇ ಮನೆಯಲ್ಲಿ ದೇವರ ಕೋಣೆ, ತುಳಸಿ ಗಿಡ, ಪೂಜೆಗಾಗಿನ ಹೂವಿಗೆ ಹೂವಿನ ಗಿಡಗಳು. ಹಸು, ನಿತ್ಯ ದೇವರ ಪೂಜೆ, ಗಂಟೆ, ಜಾಗಂಟೆ, ತಾಳ, ಶಂಖಗಳ ನಾದ, ಭಜನೆ, ಉತ್ತಮ ಪುಸ್ತಕಗಳ ಪಠಣ, ಮನೆಗೆ ಬಂದವರನ್ನು ಸತ್ಕರಿಸುವುದು, ಸುಮಂಗಲೆಯರಿಗೆ ಅರಿಶಿಣ ಕುಂಕುಮ ಕೊಡುವುದು ಇವೆಲ್ಲವೂ ನಮ್ಮ ಸಂಸ್ಕೃತಿಯಾಗಿದೆ, ಕುಟುಂಬ ಸದಸ್ಯರೆಲ್ಲಾ ಒಟ್ಟಾಗಿ ಊಟಮಾಡುವುದು. ವಿಶೇಷ ಸಂದರ್ಭಗಳಲ್ಲಿ ಸಸ್ಯಾಹರವನ್ನೇ ಸೇವಿಸುವುದು. ಕುಟುಂಬ ಸಮೇತ ಕುಲದೇವರ ದರ್ಷನ ಮಾಡುವುದು. ಪೂಜೆ ನೇಮಗಳಲ್ಲಿ ಭಾಗವಹಿಸುವುದು. ಮನೆಯಲ್ಲಿ ದೇವರ ಪೂಜೆ ಮಾಡಿ ಅನ್ನದಾನ ಮಾಡುವುದು. ಮಕ್ಕಳು ತಂದೆ-ತಾಯಿ, ಅಜ್ಜ-ಅಜ್ಜಿ ಹಾಗೂ ಹಿರಿಯರ ಪಾದಕ್ಕೆ ನಮಸ್ಕರಿಸುವುದು. ಇದನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ಕಲಿಸುವುದು ಇವೆಲ್ಲವೂ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಹಬ್ಬ ಹರಿದಿನಗಳನ್ನು ಮಹತ್ವ ಅರಿತು ಆಚರಿಸುವುದು. ಹಿರಿಯರ ದಿನವನ್ನು ಸ್ಮಿರಿಸಿಕೊಳ್ಳುವುದು ಇವುಗಳನ್ನು ನಾವು ಆಚರಿಸಿಕೊಂಡು ಉಳಿಸಿಕೊಂಡು ಹೋಗಬೇಕು.

8. ಪರಂಪರೆಯ ತಿಳುವಳಿಕೆ.

ನಾವು ನಮ್ಮ ದೇಶದ ಇತಿಹಾಸ ಹಾಗೂ ಪರಂಪರೆಯಬಗ್ಗೆ ತಿಳುವಳಿಕೆ ಹೊಂದಿರಬೇಕು. ನಮ್ಮ ಸಂಸ್ಕೃತಿಯ ಮಹಾಪುರುಷರ ಕಥೆಗಳು, ಜೀವನ ಚರಿತ್ರೆಗಳು ನಮಗೆ ಗೊತ್ತಿರಬೇಕು. ಇವುಗಳನ್ನು ನಮ್ಮ ಮಕ್ಕಳಿಗೆ ನಾವು ತಿಳಿಸಿಕೊಡಬೇಕು. ರಾಮಾಯಣ, ಮಹಾಭಾರತ, ಪುರಾಣಾದಿ ಕಥೆಗಳು, ಭಗವದ್ಗೀತೆ, ಪೂಜಾದಿ ಪದ್ದತಿಗಳು, ಶೋಢಶ ಸಂಸ್ಕಾರಗಳು, ದೇವತಾಸ್ತೋತ್ರಗಳು, ಯೋಗ, ಸಂಗೀತ, ನೃತ್ಯ, ಆಯುರ್ವೇದಗಳ ಕನಿಷ್ಟ ಜ್ಞಾನ ಹಾಗೂ ನಮ್ಮ ದೇಶದ ಪ್ರಸಿದ್ಧ ಪೌರಾಣಿಕ ಸ್ಥಳಗಳು, ತೀರ್ಥ ಕ್ಷೇತ್ರಗಳು ಇವೆಲ್ಲವುಗಳ ತಿಳುವಳಿಕೆ ನಮಗೆ ನಮ್ಮ ಮಕ್ಕಳಿಗೆ ಇರಬೇಕು. ಇದನ್ನು ನಮ್ಮ ಮುಂದಿನ ಪೀಳಿಗೆಗೆ ನಾವು ತಿಳಿಸಬೇಕು ಹಾಗೂ ಕಲಿಸಬೇಕು. ಭಾರತದ ವೈಭವದ ದಿನಗಳು, ಅವನತಿಗೆ ಕಾರಣ, ಕಾರಣರಾದವರು, ಇವರೆಲ್ಲರ ಬಗ್ಗೆ ನಾವು ತಿಳುವಳಿಕೆ ಉಳ್ಳವರಾಗಬೇಕು. ನಮ್ಮ ಮಕ್ಕಳಿಗೆ ಲೌಕಿಕ ಶಿಕ್ಷಣದೊಂದಿಗೆ ಸಂಸ್ಕಾರಯುತವಾದ ನೈತಿಕ ಶಿಕ್ಷಣವನ್ನೂ ನೀಡಬೇಕು ಎಲ್ಲರೂ ಮಕ್ಕಳಿಗೆ ಸಂಸ್ಕೃತ ಕಲಿಯಲು ಪ್ರೋತ್ಸಾಹಿಸಬೇಕು.

9. ಶಿಷ್ಟಾಚಾರಗಳು ಹಾಗೂ ಅಸ್ಪೃಷ್ಯತೆ.

ವೇದಕಾಲದಲ್ಲಿ ಅಸ್ಪೃಷ್ಯತೆ ಇರಲಿಲ್ಲ ನಂತರದಲ್ಲಿ ಅದು ಆರಂಭವಾಯಿತು ಈಗ ಇದು ಪುನಃ ದೂರವಾಗುತ್ತಿದೆ. ಅಸ್ಪೃಷ್ಯತೆಯನ್ನು ಯಾರೂ ಪೋಷಿಸಬಾರದು ಹಾಗೂ ಪ್ರದರ್ಷಿಸಬಾರದು. ಹಾಗೆಯೇ ಕೆಲವೊಂದು ಸ್ಥಳಗಳಲ್ಲಿ ಸಾಂಪ್ರದಾಯಿಕ ಶಿಷ್ಟಾಚಾರಗಳು ನಡೆದುಕೊಂಡು ಬಂದಿರುತ್ತದೆ ಅದನ್ನೂ ಕೆಡಿಸುವ ಕೆಲಸ ಮಾಡಬಾರದು. ದೇವರಪೂಜೆಯನ್ನು ಅರ್ಚಕರುಮಾಡುತ್ತಾರೆ. ಅವರು ಸ್ನಾನಮಾಡಿ ಕ್ಷೇತ್ರನಿಯಮದಂತೆ ಅನುಷ್ಠಾನಮಾಡಿ ತನ್ನ ದೈನಂದಿನ ಪೂಜಾದಿ ದಿನಚರಿಯನ್ನು ಕೈಗೊಳ್ಳುತ್ತಾರೆ. ಅಲ್ಲಿ ಹೋಗಿ ನನಗೂ ಗರ್ಭಗುಡಿಗೆ ಪ್ರವೇಶಕೊಡಿ. ನನಗೂ ಪೂಜೆಗೆ ಅವಕಾಶಕೊಡಿ ಎನ್ನುವುದು ಶಿಷ್ಟಾಚಾರ ಅಲ್ಲ. ಇದು ಸಾಮಾಜಿಕ ನ್ಯಾಯದ ವಿಚಾರವೂ ಅಲ್ಲ. ಇದು ಕಿಡಿಗೇಡಿತನವಾಗುತ್ತದೆ. ಬ್ಯಾಂಕಿನ ಸಾಮಾನ್ಯ ಉದ್ಯೋಗಿ ನಿರ್ವಾಹಕನ ಕೋಣೆಯಲ್ಲಿ ತನಗೆ ಆಸನ ನೀಡಬೇಕೆನ್ನುವುದು. ಉಚಿತವಾಗಬಹುದೇ? ಊಟದ ವಿಚಾರದಲ್ಲಿ ಅನೇಕ ಗೊಂದಲಗಳನ್ನು ನಾವು ಸಮಾಜದಲ್ಲಿ ನೋಡುತ್ತೇವೆ. ಹಿಂದೂ ಧರ್ಮದಲ್ಲಿ ಅನ್ನದಾನಕ್ಕೆ ವಿಶೇಷ ಮಹತ್ವ ಇದೆ. ಎಲ್ಲೆಡೆ ದೇವಾಲಯಗಳಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ. ಅಲ್ಲಿ ಅರ್ಚಕರಿಗೆ ಬೇರೆ ಊಟಬಡಿಸುತ್ತಾರೆ, ಬೇಧ ಆಚರಿಸುತ್ತಾರೆ ಎನ್ನುವುದು ಒಂದು ವಿವಾದದ ಅಂಶ. ವೇದಾಧ್ಯನ ಮಾಡಿ ಉತ್ತಮ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಪ್ರತಿನಿತ್ಯ ಶಾಸ್ತ್ರಸಮ್ಮತ ವ್ರತಾನುಷ್ಟಾನ ಮಾಡಿಕೊಂಡು ಶಾಖಾಹಾರಿಗಳಾಗಿದ್ದು ದುರ್ವ್ಯಸನಗಳಿಂದ ದೂರವಿರುವ ಅರ್ಚಕರಿಗೆ ಹಸ್ತೋದಕ ಹಾಕಿನಂತರ ಉಳಿದವರು ಊಟಮಾಡುವುದು ಹಿಂದಿನಿಂದಲೂ ನಡೆದುಕೊಂಡುಬಂದ ಒಂದು ಪದ್ದತಿಯಾಗಿದೆ. ಆಪದ್ದತಿ ಹಲವುಕಡೆ ಇಂದಿಗೂ ಆಚರಣೆಯಲ್ಲಿ ಇದೆ. ಇದರಿಂದ ಸಾರ್ವಜನಿಕರ ಪ್ರಸಾದವಿತರಣೆಗೆ ತೊಂದರೆ ಯಾಗದಿದ್ದಲ್ಲಿ ಈ ಸಂಪ್ರದಾಯವನ್ನು ತೆಗಳುವ ಅಗತ್ಯ ಇಲ್ಲ. ಹಾಗೂ ಇಲ್ಲಿ ನನಗೆ ಊಟಬಡಿಸಬೇಕೆಂಬುದಾಗಿ ಗಲಾಟೆ ಮಾಡುವುದು ಉಚಿತವೆನಿಸಲಾರದು. ಇಂತಹ ಸಂಪ್ರದಾಯಗಳಲ್ಲಿ ಶಿಷ್ಟಾಚಾರವನ್ನು ಎಲ್ಲರೂ ಪಾಲಿಸಬೇಕು ಇಂದು ಎಲ್ಲರಿಗೂ ಈ ಜಾಗ್ರತಿಬರುತ್ತಿದೆ. ಬ್ರಹ್ಮಣರೆಂದು ಕರೆದುಕೊಂಡವರು ತಾವು ವ್ರತನಿಯಮ ಪಾಲನೆ ಮಾಡದೆ ಹೋಟೆಲುಗಳಲ್ಲಿ ತಿನ್ನುವ ಅಭ್ಯಾಸವಿಟ್ಟುಕೊಂಡು. ದೇವಸ್ಥಾನದಲ್ಲಿ ಮಾತ್ರ ನಾನು ಪುರೋಹಿತರ ಪಂಕ್ತಿಯಲ್ಲಿ ಊಟಮಾಡುತ್ತೇನೆ ಎನ್ನುವುದೂ ಸ್ವೀಕಾರ ಅರ್ಹ ಅಲ. ಇಂತಹವರು ಸಾರ್ವಜನಿಕರೊಂದಿಗೆ ಸಹಕರಿಸಬೇಕು.  ಊಟಮಾಡುವಾಗ ಎಲೆಗೆ ಬಡಿಸುತ್ತಿರುವಾಗಲೇ ತಿನ್ನುವುದು ಶಿಷ್ಟಾಚಾರ ಅಲ್ಲ ಎಲ್ಲಾಪದಾರ್ಥಗಳನ್ನೂ ಎಡೆಗೆ ಬಡಿಸಿ ಅನ್ನಬಡಿಸಿದನಂತರ ದೇವರನ್ನು ಸ್ಮರಿಸಿ ಸ್ತೋತ್ರ ಪಠನದ ನಂತರವಷ್ಟೇ ನಾವು ಊಟವನ್ನು ಆರಂಭಿಸಬೇಕು ಇದನ್ನು ಎಲ್ಲರೂ ಅನುಸರಿಸಬೇಕು. ಇದನ್ನುಸಂಘದ ಕಾರ್ಯಕ್ರಮಗಳಲ್ಲಿ ನಾವುನೋಡಬಹುದು.  ಪ್ರತಿಯೊಬ್ಬರೂ ಅವರವರ ವೈಯುಕ್ತಿಕ ಆಚರಣೆಗಳನ್ನು ಗೌರವಿಸುವುದನ್ನು ಕಲಿಯಬೇಕು. ನಾವುಮನೆಯಲ್ಲಿ ಒಂದು ಕಾರ್ಯಕ್ರಮಮಾಡಿ ಮಿತ್ರರನ್ನು ಊಟಕ್ಕೆ ಆಹ್ವಾನಿಸುತ್ತೇವೆ ಅಲ್ಲಿ ನಾನು ಮಾಂಸತಿನ್ನುತ್ತೇನೆ ಆದುದರಿಂದ ನನ್ನಮಿತ್ರನೂ ಮಾಂಸ ತಿಂದರೆ ಮಾತ್ರ ನಮ್ಮ ಮಿತ್ರತ್ವದಲ್ಲಿ ಸಮಾನತೆ ಬರುತ್ತದೆ ಎಂದು ಸಸ್ಯಾಹಾರಿಗೆ ಮಾಂಸತಿನ್ನಿಸುವುದು ಸಮಾನತೆ ಆಗಲಾರದು. ಹಾಗೆಯೇ ಒಬ್ಬವ್ಯಕ್ತಿ ಏಕಾದಶಿ ಉಪವಾಸವ್ರತ ಆಚರಿಸುತ್ತಾನೆ ಅಥವಾ ಶನಿವಾರ, ಬುಧವಾರ ಉಪವಾಸ ಇಂತಹ ವ್ರತ ಆಚರಿಸುತ್ತಾನೆ. ಆತನು ಸ್ನೇಹಿತನ ಕಾರ್ಯಕ್ರಮಕ್ಕೆ ಬರುತ್ತಾನೆ ಆದರೆ ಊಟಮಾಡುವುದಿಲ್ಲ ಕೇವಲ ಆಗಮಿಸಿ ಶುಭ ಹಾರೈಸುತ್ತಾನೆ. ಆಗ ನನ್ನ ಮನೆಯಲ್ಲಿ ಅವನು ಊಟಮಾಡಲಿಲ್ಲಇದು ಅವನು ನನಗೆ ಮಾಡಿದ ಅವಮಾನ. ಅಸ್ಪೃಷ್ಯತೆಯ ಆಚರಣೆ ಅವನಲ್ಲಿ ಜೀವಂತವಿದೆ.  ಎಂಬುದಾಗಿ ಭಾವಿಸುವುದು ಅಜ್ಞಾನವಾಗುತ್ತದೆ. ಕರೆಯದೇ ಬೇರೆಯವರ ಮದುವೆಗೆ ಊಟಕ್ಕೆ ಹೋಗುವುದು ಅಲ್ಲಿ ಅವಕಾಶಕೊಡದಿದ್ದರೆ ಅದನ್ನು ಅಸ್ಪೃಷ್ಯತೆ ಎಂಬುದಾಗಿ ಗಲಾಟೆ ಮಾಡುವವರೂ ಇದ್ದಾರೆ. ಹೀಗೆ ಸಮಾಜದಲ್ಲಿ ನಾವು ಅನೇಕ ಸಮಸ್ಯೆಗಳನ್ನು ನೋಡುತ್ತೇವೆ. ಎಲ್ಲರೂ ಸಮಯ ಸಂದರ್ಭ ಸನ್ನಿವೇಶ ಸಂಪ್ರದಾಯ ಸಂಸ್ಕೃತಿ ಇವುಗಳನ್ನರಿತು ಆಯಾ ಸ್ಥಳಗಳಲ್ಲಿ ಸೌಜನ್ಯದಿಂದ ನಡೆದುಕೊಂಡರೆ ಸಾಮಾಜಿಕ ಸಾಮರಸ್ಯ ಹಾಳಾಗುವುದಿಲ್ಲ ಇಂತಹ ವಿಷಯಗಳಲ್ಲಿ ನಾವು ಸಮಾಜಕ್ಕೆ ಮೇಲ್ಪಂಕ್ತಿಯಾಗಬೇಕು. ಎಲ್ಲಿಯೂ ಯಾರೂ ಯಾರನ್ನೂ ಅವಮಾನವಾಗುವಂತೆ ನಡೆಸಿಕೊಳ್ಳಬಾರದು ಗೌರವದಿಂದ ನಡೆಸಿಕೊಳ್ಳಬೇಕು. ಪದ್ದತಿಅರಿತು ಎಚ್ಚರಿಕೆಯಿಂದ ವರ್ತಿಸಬೇಕು. ಕ್ಷೇತ್ರದಿಂದ ಕ್ಷೇತ್ರಕ್ಕೆ ಆಚಾರ ವಿಚಾರ ಭಿನ್ನವಿರುತ್ತದೆ. ನಾವು ಅಲ್ಲಿನ ಪದ್ದತಿಗನುಗುಣವಾಗಿ ನಡೆದುಕೊಳ್ಲಬೇಕೇ ಹೊರತು ನನಗೆ ಬೇಕಾಂದಂತೆ ಎಲ್ಲರೂ ಇರಬೇಕೆಂದು ಬಯಸುವುದು ಉಚಿತವಾಗಲಾರದು ನಮ್ಮಸ್ವಭಾವಕ್ಕೆ ವಿರುದ್ಧವಾದ ಆಚರಣೆ ಇರುವಸ್ಥಳಗಳಲ್ಲಿ ಹೋಗಿ ಗಲಾಟೆ ಮಾಡುವುದಕ್ಕಿಂತ ಅಂತಹ ಸ್ಥಳದಿಂದ ನಾವು ಅಂತರ ಕಾಯ್ದುಕೊಳ್ಳುವುದು ಉಚಿತ.   

ನಮ್ಮ ಗುರಿ ಧ್ಯೇಯ ಹಿಂದೂ ಧರ್ಮದ ರಕ್ಷಣೆ ಹಾಗೂ ಹಿಂದೂ ರಾಷ್ಟ್ರದ ರಕ್ಷಣೆಯಾಗಿರಲಿ. ವೈಯುಕ್ತಿಕ ಅಹಂಕಾರವನ್ನು ಬದಿಗಿಟ್ಟು ವಿಶಾಲ ಮನಸ್ಸಿನಿಂದ ಈ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡೋಣ. ಅಖಂಡ ಭಾರತವನ್ನು ಪುನರ್ರೂಪಿಸೋಣ. ಹಿಂದೂ ಸಂಸ್ಕೃತಯನ್ನು ವಿಶ್ವವ್ಯಾಪಿ ಯಾಗಿಸೋಣ.

 

-ಶ್ರೀಜಿ

ಜೈ ಹಿಂದ್ ಜೈ ಶ್ರೀರಾಮ್

ನಾವೇ ಸರಿಯಾದ ಉತ್ತರಗಳನ್ನು ಕಂಡುಕೊಳ್ಳೋಣ ಮತ್ತು ಸರಿಯಾದ ರೀತಿಯನ್ನು ಅಳವಡಿಸಿಕೊಳ್ಳೋಣ.

1. ನಾನು ನನ್ನ ಪರಿಚಯದಲ್ಲಿ ಹೆಸರಿನೊಂದಿಗೆ ಜಾತಿಯನ್ನು ಸೇರಿಸಿ ಹೇಳುತ್ತೇನೆ [  ] ಹೌದು [  ] ಇಲ್ಲ

2. ನನ್ನ ಜೀವನದಲ್ಲಿ ಧರ್ಮ ಹಾಗೂ ಜಾತಿಯ ವಿಷಯ ಬಂದಾಗ ನನ್ನ ಮತ   [  ] ಧರ್ಮದಪರ   [  ] ಜಾತಿಯಪರ

3. ನಾನು ನನ್ನ ಮತವನ್ನು ಹಣ, ಆಮಿಶ, ಉದ್ಯೋಗಗಳಿಗಾಗಿ ಮಾರಿಕೊಳ್ಳುತ್ತೇನೆ [ ] ಹೌದು   [  ] ಇಲ್ಲ

4. ನಾನು ಅಧಿಕಾರ ಗೌರವ ಹಾಗೂ ನನ್ನ ವೈಯುಕ್ತಿಕ ವ್ಯವಹಾರದ ಬೆಳವಣಿಗೆಯ ದೃಷ್ಟಿಯಿಂದ ಸಂಘಟನೆಯೊಂದಿಗೆ ಗುರುತಿಸಿ ಕೊಂಡಿದ್ದೇನೆ [ ] ಹೌದು [  ] ಇಲ್ಲ

5. ನಾನು ಬಲಿಷ್ಟಹಿಂದೂ ಸಮಾಜದ ನಿರ್ಮಾಣಕ್ಕಾಗಿ ಸಂಘಟನೆ ಯೊಂದಿಗೆ ಗುರುತಿಸಿ ಕೊಂಡಿದ್ದೇನೆ [ ] ಹೌದು [  ] ಇಲ್ಲ

6. ಚರ್ಚೆಯಲ್ಲಿ ನನ್ನ ಮಾತಿಗೆ ವಿರುದ್ಧ ಬಹುಮತದ ನಿರ್ಣಯ ಕೈಗೊಂಡರೆ ಸಂಘಟನೆಯಿಂದ ಹೊರ ಹೋಗುತ್ತೇನೆ. [ ] ಹೌದು [  ] ಇಲ್ಲ

ಸಾಂಸ್ಕೃತಿಕ ಮೌಲ್ಯ ಮಾಪನ ವೈಯುಕ್ತಿಕ ಸ್ಥರದಲ್ಲಿ.

1. ಮನೆಯಲ್ಲಿ ದೇವರ ಪೂಜೆಗೆ ಸ್ಥಳ ಇದೆಯಾ? (ಪೋಟೋ ಅಥವಾ ದೇವರ ಕೋಣೆ) [ ] ಹೌದು [  ] ಇಲ್ಲ

2. ನಿತ್ಯ ದೇವರನ್ನು ಪೂಜಿಸುವಿರಾ? (ಕೆಲವುಶ್ಲೋಕ, ದೀಪ, ಧೂಪ, ಹಾಗೂ ನೈವೇದ್ಯದಿಂದ) [ ] ಹೌದು [  ] ಇಲ್ಲ

3. ನಿಮ್ಮ ಕುಲದೇವರು ಯಾರೆಂದು ತಿಳಿದಿದೆಯಾ? [ ] ಹೌದು [  ] ಇಲ್ಲ

4. ವರ್ಷದಲ್ಲಿ ಒಮ್ಮೆಯಾದರೂ ಕುಟುಂಬ ಸಮೇತ ಕುಲದೇವರ ದರುಷನ ಮಾಡುವಿರಾ [ ] ಹೌದು [  ] ಇಲ್ಲ

5. ವಾರದಲ್ಲಿ ಒಂದು ದಿನ ಕುಟುಂಬ ಸಮೇತ ಪಾರಂಪರಿಕ ವಸ್ತ್ರ ಧರಿಸಿ ಗ್ರಾಮ ದೇವರ ದರುಷನ ಮಾಡುವಿರಾ [ ] ಹೌದು [  ] ಇಲ್ಲ

6. ಮನೆಯಲ್ಲಿ ತುಳಸಿ ಗಿಡ ಇದೆಯಾ? ಅದಕ್ಕೆ ಯಾರಾದರೂ ನಿತ್ಯ ನೀರು ಹಾಕುವಿರಾ? [  ] ಹೌದು [  ] ಇಲ್ಲ

7. ಮನೆಯ ಮುಖ್ಯ ಬಾಗಿಲಿನಿಂದ ಒಳಗೆ ಪಾದರಕ್ಷೆ ಹಾಕಿ ಓಡಾಡುವಿರಾ? [ ] ಹೌದು [  ] ಇಲ್ಲ

8. ಧ್ಯಾನ, ಯೋಗ, ಸಂಗೀತ, ಭಜನೆ, ಧಾರ್ಮಿಕ ಗ್ರಂಥ ಪಠಣ, ಶ್ಲೋಕ ಪಠಣ, ಇವುಗಳಲ್ಲಿ ಯಾವುದಾದರೊಂದನ್ನು ಕನಿಷ್ಠ ದಿನದಲ್ಲಿ ಹದಿನೈದು ನಿಮಿಷ ನಿರಂತರ ಮಾಡುವಿರಾ? [ ] ಹೌದು [  ] ಇಲ್ಲ

9. ಮನೆಯ ಹೆಣ್ಣು ಮಕ್ಕಳು ತಿಲಕ ಬಳೆ ಮುಡಿಗೆ ಹೂವು ಧರಿಸಲು ಅಭಿಮಾನ ಪಡುತ್ತಾರಾ? [ ] ಹೌದು [  ] ಇಲ್ಲ

10. ಗಂಡು ಮಕ್ಕಳು ಹಣೆಗೆ ತಿಲಕ ವಿಡುವುದನ್ನು ಪಾಲಿಸುತ್ತಾರ? [ ] ಹೌದು [  ] ಇಲ್ಲ

11. ನೀವು ಹಣೆಗೆ ತಿಲಕ ವಿಡುತ್ತೀರಾ? [ ] ಹೌದು [  ] ಇಲ್ಲ

12. ನಾನೊಬ್ಬ ಸನಾತನಿ ಹಿಂದೂ ಎಂದು ಕರೆದುಕೊಳ್ಳವಲ್ಲಿ ನಿಮ್ಮ ಅಭಿಪ್ರಾಯ [ ] ಹೆಮ್ಮೆ ಇದೆ [ ] ಮುಜುಗರವಿದೆ

13. ಸ್ವದೇಶಿ ವಸ್ತುಗಳನ್ನೇ ಮನೆಯಲ್ಲಿ ಬಳಸಬೇಕೆನ್ನುವುದು ನಿಮ್ಮ ಪ್ರಥಮ ಆದ್ಯತೆಯಾ? ಪಾಲಿಸುತ್ತಿದ್ದೀರಾ? [ ] ಹೌದು  [  ] ಇಲ್ಲ

14. ಸಂಭಾಷಣೆಯ ಸಂದರ್ಭದಲ್ಲಿ ಆಂಗ್ಲ ಭಾಷೆಯ ಶಬ್ದಗಳನ್ನು ಮಧ್ಯೆ ಮಧ್ಯೆ ಅತಿಯಾಗಿ ಬಳಸುತ್ತೀರಿ : ಹೌದು [ ] ಇಲ್ಲ [ ]

15. ನೀವು ಕಲಿತಿರುವ ಮಾದ್ಯಮ : ಆಂಗ್ಲ [ ] ಸ್ವದೇಶೀ [ ]

16. ಮಕ್ಕಳು ಕಲಿಯುತ್ತಿರುವ ಶಾಲಾ ಮಾಧ್ಯಮ ಆಂಗ್ಲ [  ] ಸ್ವದೇಶೀ [  ]  

17. ಸಂಸ್ಕೃತ ಭಾಷೆಮಾತನಾಡಬಲ್ಲೆ ಅಥವಾ ಕಲಿಯುತ್ತಿದ್ದೇನೆ [ ] ಹೌದು [  ] ಇಲ್ಲ

18. ಭಗವದ್ಧ್ಗೀತೆ ಪುಸ್ತಕ ಮನೆಯಲ್ಲಿ ಇದೆಯಾ [ ] ಹೌದು [ ] ಇಲ್ಲ

19. ಭಗವದ್ಗ್ವೀತೆ ಪುಸ್ತಕ ಅರ್ಥ ಸಹಿತ ಒಮ್ಮೆಯಾದರೂ ಓದಿದ್ದೀರಾ [ ] ಹೌದು [ ] ಇಲ್ಲ

20. ಭಗವದ್ಗೀತೆಯ ಕನಿಷ್ಠ 5 ಶ್ಲೋಕ ಕಲಿತಿರುವಿರಾ ? [ ] ಹೌದು [ ] ಇಲ್ಲ

21. ಹಿಂದುಗಳು ಬಹುದೇವತಾರಾಧನೆ ಅಂದರೆ ಒಬ್ಬನೇ ದೇವರನ್ನು ವಿವಿಧ ರೂಪ, ನಾಮ, ವಿಧಾನಗಳಿಂದ ಪೂಜಿಸುತ್ತಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? [ ] ದೇವರೊಬ್ಬ ನಾಮ ಹಲವು ಎನ್ನುವುದಕ್ಕೆ ನನ್ನ ಸಹಮತ ಇದೆ [ ] ಅನೇಕ ದೇವರಿದ್ದಾರೆ ಅವರೆಲ್ಲಾ ಬೇರೆ ಬೇರೆಯವರೇ ಆಗಿದ್ದಾರೆ ಎನ್ನುವುದರಲ್ಲಿ ನನ್ನ ಸಹಮತವಿದೆ [ ]

22. ಮೂರ್ತಿ ಪೂಜೆಯಬಗ್ಗೆ ನಿಮ್ಮ ಅಭಿಪ್ರಾಯವೇನು ? [ ] ಕಲ್ಲಿನ ಮೂರ್ತಿಯೇ ದೇವರು [  ] ಮೂರ್ತಿಯಲ್ಲಿಯೂ ದೇವರಿದ್ದಾನೆ.

23. ಧರ್ಮಾಚರಣೆ ಎಂದೆ ನಿಮ್ಮ ಅಭಿಪ್ರಾಯ ವೇನು ? 1. [ ] ದೇವಸ್ಥಾನದ ದರ್ಷನ, ಪೂಜೆ, ಹೋಮ, ಹವನ, ಜಪ, ಭಜನೆ, ತ್ಯಾದಿಗಳಿಗೆ ಅತಿ ಹೆಚ್ಚು ಸಮಯ ನೀಡುವುದು [  ] ಸಜ್ಜನರಿಗೆ, ಪ್ರಕೃತಿಗೆ, ನಿರುಪದ್ರವಿ ಪ್ರಾಣಿಗಳಿಗೆ ಹಾನಿಯಾಗದಂತೆ ತೊಂದರೆಯಾಗದಂತೆ ಬದುಕುವುದು.

24. ಹಿಂದುಸಮಾಜಕ್ಕೆ ಅನ್ಯಾಯ ವಾದಾಗ ನಿಮ್ಮ ವರ್ತನೆ [ ] ಸುಮ್ಮನೆ ನಮಗೇಕೆ ಇದರ ಉಸಾಬರಿ ಎಂದು ಉದಾಸೀನ ತೋರುವುದು [   ] ಅನ್ಯಾಯದ ವಿರುದ್ಧ ಸಮಾಜದೊಂದಿಗೆ ಒಗ್ಗಟ್ಟಾಗಿ ನಿಲ್ಲುವುದು.

25. ಹಿಂದುತ್ವವೆಂದರೆ [ ] ದುಷ್ಟಜನರ ಬಗ್ಗೆಯೂ ಎಲ್ಲರೂ ಮನುಷ್ಯರೇ ಎಂದು ಕನಿಕರ ಅನುಕಂಪ ತೋರುವುದು [  ] ಧರ್ಮದ್ರೋಹಿಗಳನ್ನು ಹಿಂಜರಿಕೆ ಇಲ್ಲದೆ ಹಿಮ್ಮೆಟ್ಟಿಸುವುದು.

26. ಹಿಂದೂ ಸಮಾಜಕ್ಕೆ ಅಪಾಯ ಬಂದಾಗ ನಾವೇನು ಮಾಡಬೇಕು? 1. [  ] ಕ್ಷಾತ್ರಗುಣ ದಿಂದ ದುಷ್ಟರನ್ನು ಎದುರಿಸಿ ಹೋರಾಡಬೇಕು [  ] ದೇವರಿಗೆ ಪೂಜೆ ಮಾಡುತ್ತಾ ನಮ್ಮನ್ನು ಕಾಪಾಡು ಎಂದು ಬೇಡಿಕೊಳ್ಳಬೇಕು.

27. ವಿದೇಶಿಮತೀಯರು ಹಿಂದುಸಮಾಜದಲ್ಲಿ ಮತಾಂತರ ಹಾಗೂ ಭಯೋತ್ಪಾದನೆ ಮಾಡುತ್ತಿರುವಾಗ ನಾವು ಹೇಗಿರಬೇಕು [  ] ಅವರೊಂದಿಗೆ ಪ್ರೀತಿಯಿಂದ ಸೌಹಾರ್ಧ ಬದುಕನ್ನು ಬದುಕ ಬೇಕು [  ] ಇಂತಹ ಅನಿಷ್ಟ ಸಮಾಜದ್ರೋಹಿ ವ್ಯಕ್ತಿಗಳನ್ನು ಹಾಗೂ ಇವರ ಬೆಂಬಲಿಗರನ್ನು ಸಾಮೂಹಿಕವಾಗಿ ಬಹಿಷ್ಕರಿಸಬೇಕು.

 

ನಿಮ್ಮಮನೆಯಲ್ಲಿ ನೀವು ಬಳಸುವ ನಿತ್ಯಬಳಕೆಯ ಈ ಕೆಳಗಿನ ವಸ್ತುಗಳಲ್ಲಿ ಎಷ್ಟು ಕಂಪೆನಿ ಸ್ವದೇಶೀ ಇದೆ.

1.ಸ್ನಾನದ ಸೋಪು.

2. ಬಟ್ಟೆ ತೊಳೆಯುವ ಸೋಪು.

3.ಪಾತ್ರೆ ತೊಳೆಯುವ ಸೋಪು.

4.ಶಾಂಪು.

5. ಪೇಸ್ಟು

6. ಟೂತ್ ಬ್ರೆಷ್

7. ಚಪ್ಪಲಿ

8. ಬಟ್ಟೆಗಳು

9. ವಾಹನ

10. ಮೊಬೈಲ್

11. ಸೌಂದರ್ಯ ವರ್ಧಕ.

12. ಟಿ ವಿ.

13. ಫ್ರಿಜ್

14. ಎಸಿ

15. ಬ್ಯಾಂಕ್ ಅಕೌಂಟ್

16. ನಿತ್ಯ ವ್ಯವಹರಿಸುವ ಭಾಷೆ

17. ಶೇವಿಂಗ್ ಕ್ರೀಮ್

18. ಶೆವಿಂಗ್ ಬ್ಲೇಡ್

19. ಮಕ್ಕಳ ಕಲಿಕಾ ಮಾಧ್ಯಮ

20. ಸೌಂದರ್ಯ ವರ್ಧಕಗಳು  

[   ] ಸ್ವದೇಶೀ ಕಂಪೆನಿಗಳ ಸಂಖ್ಯೆ [  ] ವಿದೇಶೀ ಕಂಪೆನಿಗಳ ಸಂಖ್ಯೆ [  ] ಬಳಸದಿರುವುದರ ಸಂಖ್ಯೆ

ಧರ್ಮಸಾಧಕ ಮತ್ತು ಧರ್ಮಸೈನಿಕ (ಸಪೋರ್ಟರ್ ಮತ್ತು ಪ್ರೊಮೋಟರ್) (ಸದಸ್ಯ ಮತ್ತು ಕಾರ್ಯಕರ್ತ) ಎಂದರೆ ಯಾರು? ಇವರ ಜವಾಬ್ದಾರಿಗಳೇನು? ಇವುಗಳನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

1. ಧರ್ಮಸಾಧಕ ಎಂದರೆ ಯಾರು? ಧರ್ಮಸಾಧಕನ ಜವಾಬ್ದಾರಿ ಏನು?

   ಈ ಸಂಘಟನೆಯನ್ನು ಬೆಂಬಲಿಸಿ ಯಾರು ತಮ್ಮ ಹೆಸರನ್ನು absss.org ಜಾಲತಾಣದಲ್ಲಿ ನೋಂದಣಿ ಮಾಡಿಕೊಳ್ಳುತ್ತಾರೋ ಅವರನ್ನು ಧರ್ಮಸಾಧಕ ಅಥವಾ ಸದಸ್ಯ ಅಥವಾ ಸಪೋರ್ಟರ್ ಎಂಬುದಾಗಿ ಕರೆಯಲಾಗುವುದು. ಧರ್ಮಸಾಧಕನನ್ನು ನೋಂದಣಿಗೊಳಿಸುವ ಅವಕಾಶ ಕೇವಲ ಧರ್ಮಸೈನಿಕನಿಗೆ ಮಾತ್ರ ಇರುತ್ತದೆ. ಯಾರಿಗೂ ಸ್ವಯಂ ನೊಂದಣಿಮಾಡಿಕೊಳ್ಳುವ ಅನುಕೂಲ ಇರುವುದಿಲ್ಲ. ಯಾರು ಧರ್ಮಸಾಧಕನಾಗುತ್ತಾನೋ ಆತನು ಸರ್ವದಾ ಹಿಂದು ಧರ್ಮದ ಸಂರಕ್ಷಣೆಯ ಬಗ್ಗೆ ಚಿಂತಿಸುತ್ತಾನೆ. ಮನೆಯಲ್ಲಿ ಕನಿಷ್ಟ ಸಾಂಸ್ಕೃತಿಕ ಶಿಷ್ಟಾಚಾರಗಳನ್ನು ಆಚರಿಸುತ್ತಾ ಹಿಂದು ಸಂಸ್ಕೃತಿಯನ್ನು ರಕ್ಷಿಸುತ್ತಾನೆ. ಉದಾ: ನಿತ್ಯ ತಿಲಕ ಧಾರಣೆ ಮಾಡುವುದು. ನಿತ್ಯ ದೇವರನ್ನು ಪೂಜಿಸುವುದು. ಸ್ವದೇಶೀ ವಸ್ತುಗಳ ಬಳಕೆಗೆ ಹೆಚ್ಚು ಗಮನ ಕೊಡುವುದು. ಮಕ್ಕಳಿಗೆ ಹಿಂದೂ ಸಂಸ್ಕಾರವನ್ನು ಪರಿಚಯಿಸುವುದು. ಸಂಘಟನೆಯ ಚಿಂತನೆಗಳನ್ನು ಬೆಂಬಲಿಸುವುದು. ಪರಿಸರದಲ್ಲಿ ನಡೆಯುವ ಹಿಂದೂ ವಿರೋಧೀ ಧರ್ಮದ್ರೋಹೀ ಕೆಲಸಗಳು, ಮತಾಂತರ ಪ್ರಯತ್ನಗಳು, ಲೌ ಜಿಹಾದ್, ಲ್ಯಾಂಡ್ ಜಿಹಾದ್ ಇತ್ಯಾದಿಗಳನ್ನು ಧರ್ಮಸೈನಿಕನ ಅಥವಾ ಸಂಘಟನೆಯ ಗಮನಕ್ಕೆ ತರುವುದು. ಮಕ್ಕಳನ್ನು ಹಿಂದೂ ಸಂಸ್ಕೃತಿಯನ್ನು ಗೌರವಿಸುವ ಶಾಲೆಗಳಿಗೆ ಕಳಿಸುವುದು. ಭಗವದ್ಗೀತೆಯ ಕೆಲವಾದರೂ ಶ್ಲೋಕಗಳನ್ನು ಕಲಿಯುವುದು. ಮತ್ತು ಮಕ್ಕಳಿಗೆ ಕಲಿಸುವುದು. ಶಾಲೆಗಳಲ್ಲಿ ಸಂಸ್ಕೃತಭಾಷೆಯನ್ನು ಪ್ರಥಮ ಭಾಷೆಯಾಗಿ ಕಲಿಯುವಂತೆ ಪ್ರೋತ್ಸಾಹಿಸುವುದು. ನಿತ್ಯಶ್ಲೋಕಗಳು, ರಾಮಾಯಣ, ಮಹಾಭಾರತ, ಪುರಾಣಕಥೆಗಳು, ಮಹಾಪುರುಷರ ಜೀವನ ಕಥೆಗಳು ಇವುಗಳನ್ನು ಮಕ್ಕಳಿಗೆ ಪರಿಚಯಿಸುವುದು. ವ್ಯಾಪಾರ ವ್ಯವಹಾರಗಳನ್ನು ಧರ್ಮನಿಷ್ಟರಲ್ಲಿಯೇ ಮಾಡುವುದು. ವಾರದಲ್ಲಿ ಸಂಘಟನೆ ಸೂಚಿಸಿದ ಒಂದು ದಿನ ನಿರ್ದಿಷ್ಟ ಸಮಯದಲ್ಲಿ ಸಮೀಪದ ದೇವಸ್ಥಾನಕ್ಕೆ ಕುಟುಂಬ ಸಹಿತ ಭಾರತೀಯ ಸಭ್ಯತೆಯವಸ್ತ್ರಧರಿಸಿ ಭೇಟಿನೀಡುವ ಕ್ರಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು. ಸಂಘಟನೆಯ ಸದಸ್ಯರ ಪರಸ್ಪರ ಪರಿಚಯ ಮಾಡಿಕೊಳ್ಳುವುದು. ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಹಾಗೂ ಹಿಂದೂರಾಷ್ಟ್ರದ ಉನ್ನತಿಯಬಗ್ಗೆ  ಚಿಂತಿಸುವುದು. ದೇವರಲ್ಲಿ ಪ್ರಾರ್ಥಿಸುವುದು. ದೀಕ್ಷಾಬದ್ಧರಾಗುವುದು. ಅನಿವಾರ್ಯ ಸಂದರ್ಭದಲ್ಲಿ ಧರ್ಮ ಹಾಗೂ ಸಂಸ್ಕೃತಿಯಮೇಲೆ ದುರ್ಜನರು ಅನ್ಯಾಯ ಎಸಗಿದಾಗ  ಅದನ್ನು ಸಾತ್ವಿಕ ರೀತಿಯಲ್ಲಿ ಸಂಘಟನೆಯಜೊತೆ ಸೇರಿ ಪ್ರತಿಭಟಿಸುವುದು. ಸುತ್ತಮುತ್ತಲಿನ ಸಮಾಜದಲ್ಲಿ ಹಿಂದುತ್ವದ ಬಗ್ಗೆ ಸಕಾರಾತ್ಮಕ ವಿಚಾರವನ್ನು ಪಸರಿಸುವುದು. ನಕಾರಾತ್ಮಕ ಬುದ್ಧಿಜೀವಿಗಳನ್ನು ಖಂಡಿಸುವುದು, ತಾನೊಬ್ಬ ಸನಾತನ ಹಿಂದೂಧರ್ಮದ ಅನುಯಾಯಿ ಎಂಬುದಾಗಿ ಯಾವುದೇ ಹಿಂಜರಿಕೆ ಇಲ್ಲದೆ ಹೆಮ್ಮೆಪಡುವುದು. ಇವೆಲ್ಲವೂ ಒಬ್ಬ ಧರ್ಮ ಸಾಧಕನ ಜವಾಬ್ದಾರಿಗಳಾಗಿರುತ್ತವೆ.

2. ಧರ್ಮ ಸೈನಿಕನ ಜವಾಬ್ದಾರಿ ಏನು?

ಯಾರು ಧರ್ಮಸಾಧಕರ ಒಂದು ತಂಡವನ್ನುರಚಿಸಿ ಅದರ ನೇತೃತ್ವವನ್ನು ವಹಿಸಲು ಇಚ್ಚಿಸುತ್ತಾನೋ ಆತನನ್ನು ಧರ್ಮ ಸೈನಿಕ ಎಂಬುದಾಗಿ ಕರೆಯಲಾಗುವುದು. ಈತನು ತನ್ನ ಪರಿಸರದ ನೂರುಜನರನ್ನು ಸಂಘಟನೆಗೆ ಪರಿಚಯಿಸುವ ಅವಕಾಶಹೊಂದಿರುತ್ತಾನೆ. ಇದಕ್ಕೆ ಯಾವುದೇ ಸಮಯದ ಮಿತಿ ಇರುವುದಿಲ್ಲ. ಆ ನೂರು ಜನರಿಗೆ ಹಿಂದು ಧರ್ಮ ಹಾಗೂ ಸಂಸ್ಕೃತಿಯ ಪ್ರಥಮಿಕ ಪರಿಚಯ ಮಾಡಿಕೊಡಬೇಕು. ಸಂಘಟನೆಯ ಧ್ಯೇಯೊದ್ದೇಶಗಳನ್ನು ತಿಳಿಸಬೇಕು. ಅಲ್ಲದೆ ಹಿಂದೂಧರ್ಮದ ರಕ್ಷಣೆಯ ವಿಚಾರದಲ್ಲಿ ಪರಿಸರದಜನರಲ್ಲಿ ಜಾಗ್ರತೆ ಮೂಡಿಸಬೇಕು. ತನ್ನ ಗಣದ(ಗುಂಪಿನ) ಸದಸ್ಯರಿಗೆ ಅನ್ಯಧರ್ಮೀಯರಿಂದ ಅಥವಾ ದುರ್ಜನರಿಂದ ಸಮಸ್ಯೆ ಉಂಟಾದರೆ ಅವರ ಸಮಸ್ಯೆಗೆ ಸ್ಪಂದಿಸುವುದು. ತನ್ನ ಕೈಮೀರಿದ ವಿಷಯಗಳನ್ನು ಸಂಘಟನೆಯ ಗಮನಕ್ಕೆ ತರುವುದು. ಹೀಗೆ ಧರ್ಮ ಸೈನಿಕನು ತನ್ನ ಗಣದ ನೂರು ಜನರ ಸಮಸ್ಯೆಗೆ ಧ್ವನಿಯಾಗಬೇಕು. ವಾರದಲ್ಲಿ ಒಂದು ದಿನ ನಿರ್ಧರಿತ ಸ್ಥಳದಲ್ಲಿ ಧರ್ಮಸಭೆಗೆ ಹಾಜರಿದ್ದು ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ದೇಶದ ರಾಜಕೀಯ , ಸಾಮಾಜಿಕ, ಧಾರ್ಮಿಕ ವಿಚಾರಗಳಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು. ಇಂತಹ ಚರ್ಚೆಯ ವಿಚಾರಗಳನ್ನು ತನ್ನ ಗಣದಸದಸ್ಯರಾದ ಧರ್ಮಸಾಧಕರ ಗಮನಕ್ಕೆ ತರಬೇಕು. ಹೀಗೆ ಧರ್ಮ ಸೈನಿಕನು ಹಿಂದೂ ಧರ್ಮದ ರಕ್ಷಣೆಗಾಗಿ ಕನಿಷ್ಟ ಸಮಯ ದಾನ ಮಾಡುವವನಾಗಿರುತ್ತಾನೆ. ಹಾಗೂ ಸಂಘಟನೆಯ ಎಲ್ಲಾ ರೀತಿಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯನಾಗಿ ಗುರುತಿಸಿಕೊಂಡು. ಹಿಂದೂ ಧರ್ಮ ಹಾಗೂ ಹಿಂದೂ ಸಂಸ್ಕೃತಿಯ ರಕ್ಷಕನಾಗಿ ಜಾಗ್ರತ ನಾಗರಿಕನಾಗಿ ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ತನ್ನ ಅಳಿಲು ಸೇವೆಯನ್ನು ಸಲ್ಲಿಸುವವನಾಗಿರುತ್ತಾನೆ.

ಧರ್ಮಸೈನಿಕನ ಗಣವು ಒಂದು ಸಣ್ಣ ಹಿಂದೂ ಸಮಾಜವೇ ಆಗಿರುತ್ತದೆ. ಅದರಲ್ಲಿ ಎಲ್ಲಾ ವಯಸ್ಸಿನವರೂ, ಎಲ್ಲಾ ಸಮಾಜದವರೂ, ಮಹಿಳೆಯರೂ, ಪುರುಷರೂ ಇರುವಂತೆ ನೋಡಿಕೊಂಡರೆ ಅದು ಒಂದು ಸಮಗ್ರಸಮಾಜದ ಪ್ರತಿ ರೂಪದಂತಿದ್ದರೆ ಉತ್ತಮ ಗಣವಾಗಿ ಗುರುತಿಸಿಕೊಳ್ಳುತ್ತದೆ. ಕೇವಲ ವಂದೇವಯಸ್ಸಿನವರು, ಒಂದೇ ಸಮುದಾಯದವರು, ಒಂದೇ ಉದ್ಯೋಗದವರು, ಹೀಗಿದ್ದಗಣವು ಅಷ್ಟೊಂದು ಸಮತೋಲಿತ ಗಣ ಎನಿಸುವುದಿಲ್ಲ ಗಣನಿರ್ಮಾಣದ ಸಮಯದಲ್ಲಿ ಇಂತಹ ಅಂಶಗಳನ್ನು ಗಮನದಲ್ಲಿರಿಸಿ ಗಣ ನಿರ್ಮಾಣ ಮಾಡಿದರೆ ಉತ್ತಮ. ಭಿನ್ನ ಭಿನ್ನ ಸಮುದಾಯ, ಭಿನ್ನ ಭಿನ್ನ ಉದ್ಯೋಗಮಾಡುವವರು. ಭಿನ್ನ ಭಿನ್ನ ವಯಸ್ಸಿನವರು ಪುರುಷರು ಸ್ತ್ರಿಯರು ಯುವಕರು, ಮಕ್ಕಳು ಹೀಗೆ ಎಲ್ಲವಿಧದ ಜನರನ್ನೊಳಗೊಂಡ ತಂಡವನ್ನು ರಚಿಸಿಕೊಂಡರೆ ಅದು ಅತ್ಯುತ್ತಮವಾದ ಸಂಘಟನಾತ್ಮಕ ಗಣವಾಗುವುದು. ಇಲ್ಲಿ ಸಂಖ್ಯೆಮುಖ್ಯವಲ್ಲ ಉದ್ದೇಶದ ಈಡೇರಿಕೆ ಮುಖ್ಯವಾಗುವುದು. ನೂರುಜನರ ಗಣದಲ್ಲಿ ಹತ್ತು ಜನರು ಧರ್ಮ ಸೈನಿಕರಿರುವಂತೆ ನೋಡಿಕೊಳ್ಳಬೇಕು. ಹತ್ತುಜನರಲ್ಲಿ ಒಬ್ಬರಾದರೂ ಮಹಿಳೆಯರು ಒಬ್ಬರಾದರೂ ದಲಿತರು ಒಬ್ಬರಾದರೂ ಹಿಂದುಳಿದ ವರ್ಗದವರು ಧರ್ಮಸೈನಿಕರಾಗಿರುವಂತೆ ನೋಡಿಕೊಳ್ಳೋಣ. ಸಂಘಟನೆಯಲ್ಲಿ ಯಾವುದೇ ಜಾತಿಯ ಪರಿಚಯ ಪ್ರದರ್ಶನ ಮಾಡಲು ಅವಕಾಶ ಇರುವುದಿಲ್ಲ. ಜಾತಿ ಆಧಾರದಲ್ಲಿ ಗುರುತಿಸುವುದೂ ಇಲ್ಲ. ಆದರೆ ಯವುದೇ ವರ್ಗಸಂಘಟನೆಯಿಂದ ಹೊರಗಿರಬಾರದೆಂಬುದು ನಮ್ಮ ಅಪೇಕ್ಷೆ. ನಮ್ಮ ಗುಂಪಿನ ಹತ್ತುಜನ ಧರ್ಮಸೈನಿಕರಲ್ಲಿ ಐದಕ್ಕಿಂತ ಹೆಚ್ಚುಜನ ಭಿನ್ನ ಸಮಾಜದವರು ಇರುವಂತೆ ನೋಡಿಕೊಳ್ಳೋಣ ಇಲ್ಲವಾದಲ್ಲಿ ನಮ್ಮ ಗಣ ಕೇವಲ ಒಂದು ಕುಟುಂಬದ ಗಣ ಅಥವಾ ಒಂದೇಸಮಾಜದ(ಜಾತಿಯ) ಗಣವಾಗುವ ಸಂಭವ ಇರುತ್ತದೆ. ಈಬಗ್ಗೆ ಎಚ್ಚರಿಕೆ ವಹಿಸೋಣ.

ಸದಸ್ಯರು ಸಾಧ್ಯವಾದಷ್ಟು ನಮ್ಮ ಮನೆಯ ಸುತ್ತಮುತ್ತಲಿನವರೇ ಆಗಿರುವಂತೆ ನೋಡಿಕೊಳ್ಳೋಣ ಇದು ನಮಗೆ ಸಾಮಾಜಿಕ ಭದ್ರತೆಯನ್ನೂ ಒದಗಿಸುತ್ತದೆ. ನಿತ್ಯ ಸಂವಹನಕ್ಕೆ ಸಹಕಾರಿಯೂ ಆಗಿರುತ್ತದೆ. ನಮ್ಮಗಣದಲ್ಲಿ ಹತ್ತೇ ಸ್ಥಳೀಯ ಧರ್ಮಸೈನಿಕರಿಗೆ ಅವಕಾಶ ಅದಕ್ಕಿಂತ ಹೆಚ್ಚುವರಿಯಾಗಿ ಹೊರತಾಲೋಕಿನ, ಹೊರ ಜಿಲ್ಲೆಯ ಹಾಗೂ ಹೊರರಾಜ್ಯದ ಒಬ್ಬೊಬ್ಬರಂತೆ ಮೂರುಜನರನ್ನು ಪರಿಚಯಿಸಲು ಅವಕಾಶವಿರುವುದು. ಹಿಂದು ಧರ್ಮಕ್ಕೆ ಎಲ್ಲಿಯೇ ಯಾವುದೇ ಸಮಯದಲ್ಲಿ ಸಮಸ್ಯೆ ಉಂಟಾದಾಗ ಇಂತಹ ಧರ್ಮಸೈನಿಕರು ಆಕೂಡಲೇ ಅವರ ಸಮಸ್ಯೆಗೆ ಅಥವಾ ಅಲ್ಲಿನ ಪರಿಸ್ಥಿತಿಗೆ ತಕ್ಷಣಕ್ಕೆ ಸ್ಪಂದಿಸುವಂತಿರಬೇಕು. ಹಾಗೂ ಹಿಂಜರಿಕೆಯಿಂದ ಬೇಜವಾಬ್ದಾರರಂತೆ ವರ್ತಿಸಬಾರದು. ಗೀತೆಯಲ್ಲಿಶಸ್ತ್ರ ತ್ಯಜಿಸಿದ ಅರ್ಜುನನಾಗದೆ  ಗೀತೋಪದೇಶದ ನಂತರದ ಅರ್ಜುನನಾಗಿ ಧರ್ಮರಕ್ಷಣೆಯ ಕೈಂಕರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಮ್ಮ ಸುತ್ತಲಿನ ಸಮಾಜವನ್ನು ಎಚ್ಚರಿಸುವುದರಲ್ಲಿ ಕ್ರಿಯಾಶೀಲರಾಗಿರಬೇಕು. ಇದುವೇ ಧರ್ಮ ಸಾಧಕ ಹಾಗೂ ಧರ್ಮ ಸೈನಿಕರ ಜವಾಬ್ದಾರಿಯಾಗಿದೆ.

ಸಂಘಟನೆಯಿಂದ ಅಥವಾ ತಾನು ಸಂಘಟನೆಗೆ ಸೇರುವುದರಿಂದ ನನಗೇನು ಲಾಭ? ಎನ್ನುವುದಾಗಿ ಕೆಲವರು ಪ್ರಶ್ನಿಸಬಹುದು. ಇವರು ಇಂದು ಹಿಂದುಗಳಾಗಿದ್ದಾರೆ ಮುಂದೆಯೂ ಅವರ ಮಕ್ಕಳು ಮೊಮ್ಮಕ್ಕಳು ಹಿಂದುಗಳಾಗಿಯೇ ಇರಬೇಕು ಭಾರತವು ಇಸ್ಲಾಮಿಕ್ ಅಥವಾ ಕ್ರಿಶ್ಚಿಯನ್ನ್ ಲೂಟಿಕೋರರ ದೇಶವಾಗಬಾರದೆಂಬುದು ಇವರ ಮನಸ್ಸಿನಲ್ಲಿದ್ದರೆ ಇಂಥಹವರು ಸಂಘಟಿರತಾಗಿ ಧರ್ಮದ ವಿರೋಧಿಗಳನ್ನು ಎದುರಿಸಬೇಕು. ಇಲ್ಲವಾದಲ್ಲಿ ಕೃಷ್ಣಪಕ್ಷದಲ್ಲಿ ಗುರುತಿಸಿಕೊಂಡರೆ ಅವರೂ ನಾಶವಾಗುತ್ತಾರೆ. ದೇಶವೂ, ಸಂಸ್ಕೃತಿಯೂ ನಾಶವಾಗುತ್ತದೆ. ಸಂಘಟನೆಯ ಲಾಭ ಇಂದು ಕಣ್ಣಿಗೆ ಕಾಣದಂತಿರಬಹುದು. ಆದರೆ ನಮ್ಮ ಕೆಲಸದಲ್ಲಿ ನಾವು ನಿಷ್ಠರಾದರೆ ಇದರ ಪರಿಣಾಮ ಮಹತ್ತರವಾದುದಾಗಿರುವುದು. ನಿಧಾನವಾಗಿ ಇದು ಸಮಾಜದಲ್ಲಿ ಗೋಚರಿಸುವುದು. ಸಂಘಟನೆಗೆ ಸೇರುವುದರಿಂದ ಏನು ಲಾಭ ಎಂದು ಚಿಂತಿಸುವವರು ಸಂಘಟನೆಗೆ ಸೇರದಿದ್ದಲ್ಲಿ ಏನು ನಷ್ಟ ಎಂದು ಚಿಂತಿಸಿದರೆ ಅವರಿಗೆ ಸುಲಭವಾಗಿ ಅರ್ಥವಾಗಬಹುದು. ಇನ್ನೂ ಅರ್ಥವಾಗದವರಿಗೆ ಕಾಶ್ಮೀರ ಫೈಲ್ಸ್ ಹಾಗೂ ಕೇರಳ ಸ್ಟೋರಿ ಚಲನ ಚಿತ್ರಗಳನ್ನು ತೋರಿಸಬೇಕು. ನಮ್ಮ ಪ್ರಯತ್ನದಲ್ಲಿ ನಾವು ನಂಬಿಕೆ ಇಡೋಣ. ಕೆಲವು ಅಜ್ಞಾನಿಗಳೂ ವಿತಂಡವಾದಿಗಳೂ ಅಲ್ಪರೂ ಆದಂತಹ ಅವಿವೇಕಿಗಳನ್ನೂ ಧರ್ಮದ್ರೋಹಿಗಳನ್ನೂ ಉಪೇಕ್ಷಿಸೋಣ ನಮ್ಮ ಗುರಿಯ ದಾರಿಯಲ್ಲಿ ವೇಗವಾಗಿ ಮುಂದೆ ಹೋಗೋಣ.  ಇಂತಹ ಕೃಷ್ಣಪಕ್ಷದವರೊಂದಿಗೆ ಅತಿಯಾದ ಅನಗತ್ಯವಾದ ವಾದಕ್ಕೆ ಇಳಿಯುವುದು ಬೇಡ. “ಕ್ರಿಯಾಸಿದ್ಧಿಃ ಸತ್ವೇ ಭವತಿ, ಮಹತಾಂ ನೋಪಕರಣೇ” ಎಂಬುದು ಒಂದು ಸಂಸ್ಕೃತ ಪದ್ಯದಸಾಲು. ಕೆಲಸದ ಯಶಸ್ಸು ಕಾರ್ಯಶ್ರದ್ಧೆ ಹಾಗೂ ವಿಶ್ವಾಸದಿಂದ ಕೈಗೂಡುವುದು ಕೇವಲ ಸಲಕರಣೆಗಳಿಂದಲ್ಲ ಎನ್ನುವುದು ಇದರ ಅರ್ಥ. ಮನಸ್ಸಿನ ಗೊಂದಗಳಿಂದ ಶಸ್ತ್ರತ್ಯಜಿಸಿದ ಅರ್ಜುನನಿಂದ ಯುದ್ಧಗೆಲ್ಲಲು ಸಾಧ್ಯವಿರಲಿಲ್ಲ. ಬನ್ನಿ ಒಟ್ಟಾಗಿ ಗುರಿಯನ್ನು ಸಾಧಿಸೊಣ. ಜಗತ್ತಿನ್ನೋ ಹಿಂದೂಸಾಂಸ್ಕೃತಿಕಲೋಕವಾಗಿಸೋಣ.  

ಧರ್ಮಸಾಧಕ ಹಾಗೂ ಧರ್ಮ ಸೈನಿಕರಿಗೆ ಮೊದಲಮಾತು ಹಿಂದುಗಳ ಗುರುತಾಗಿ ಎಲ್ಲರೂ (ಐಡೆಂಟಿಟಿ) ಹುಬ್ಬುಗಳ ನಡುವೆ ಆಜ್ಞಾಚಕ್ರದ ಸ್ಥಳದಲ್ಲಿ ತಿಲಕಧಾರಣೆ ಮಾಡೋಣ. ಮತ್ತು ಹಿಂದೂ ಏಕತೆಗಾಗಿ ನಮ್ಮ ಪರಿಚಯಮಾಡಿಕೊಳ್ಳುವಾಗ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಜಾತಿಯನ್ನು ಹೇಳದಿರೋಣ ಶಾಲೆಗಳಲ್ಲಿ ಸ್ಪೆಲ್ಲಿಂಗ್ ಮಾತ್ರ ಬರೆಸಬಹುದು ಚಿಂತಿಸಿ ಯೋಚಿಸಿ. ನಮ್ಮ ಸ್ವಭಾವವೇ ನಮ್ಮ ಜಾತಿಯಾಗಲಿ. ಸಮಾಜದಲ್ಲಿ ಹಿಂದುವಾಗಿ ಗುರುತಿಸಿಕೊಳ್ಳೋಣ ಜಾತಿಯ ಆಚರಣೆಗಳನ್ನು ಮನಗೆ ಹಗೂ ಕುಟುಂಬದ ಆಚರಣೆಗಳಿಗೆ ಸೀಮಿತಗೊಳಿಸಿ ಅಲ್ಲಿ ಆಚರಿಸೋಣ.   

-ಶ್ರೀಜಿ

ಜೈ ಹಿಂದ್ ಜೈ ಶ್ರೀರಾಮ್

 

ಸಂಘಟನೆಯ ಸಾಮಾನ್ಯ ಸ್ವರೂಪ ಹೇಗಿರುತ್ತದೆ?

 

ಧರ್ಮ ಸಾಧಕನಾಗಿ ಸಂಘಟನೆಗೆ ಪ್ರವೇಶ.  ಆತ ಇಚ್ಚಿಸಿದಲ್ಲಿ ಧರ್ಮ ಸೈನಿಕನ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು. ಧರ್ಮ ಸೈನಿಕನಿಗೆ ನೂರುಜನರ ಒಂದು ಗುಂಪನ್ನು ಮುನ್ನಡೆಸುವ  ಮಾರ್ಗದರ್ಶನ ಮಾಡುವ ಅವಕಾಶವಿರುತ್ತದೆ.

 

ಸಂಘಟನಾತ್ಮಕ ದೃಷ್ಟಿಯಿಂದ ನಡೆಯುವ ಕಾರ್ಯಕ್ರಮಗಳು.

 

1. ಧರ್ಮ ಗೋಷ್ಟಿ – ಅಗತ್ಯ ಇದ್ದಾಗ ತುರ್ತು ಸಂದರ್ಭಗಳಲ್ಲಿ ಮುಖ್ಯರು ಒಂದಾಗಿ ನಡೆಸುವ ಚರ್ಚೆ

2. ಧರ್ಮ ಸಭೆ – ಪ್ರತೀವಾರ ನಿಯಮಿತವಾಗಿ ಧರ್ಮಸೈನಿಕರು ನಡೆಸುವ ಸಭೆ ಧರ್ಮ ಸಾಧಕರೂ ಜಿಜ್ಞಾಸುಗಳೂ ವೀಕ್ಷಕರಾಗಿ ಬರಬಹುದು. (ಮುಖ್ಯ ಚಿಂತನೆ ನಿರಂತರ ಇಲ್ಲಿ ನಡೆಯುತ್ತದೆ)

3. ಸಮನ್ವಯ ಸಭೆ – ಇತರ ಹಿಂದೂ ಸಂಘಟನೆಗಳೊಂದಿಗಿನ ನಾಯಕರೊಮದಿಗೆ ವಿಚಾರ ವಿನಿಮಯ ನಡೆಸುವುದು.

4. ಧರ್ಮ ಸಮಾವೇಶ – ಇದು ನಮ್ಮ ಒಗ್ಗಟ್ಟಿನ ಪ್ರದರ್ಷನಕ್ಕೆ ಅಗತ್ಯವಿದ್ದಾಗ ಮಾಡಬಹುದು. ಆದರೆ ಪ್ರಚಾರ ಹಾಗೂ ಪ್ರದರ್ಶನ ನಮ್ಮ ಉದ್ದೇಶ ಅಲ್ಲ. ಇದನ್ನು ನಾವು ಗಮನದಲ್ಲಿಡಬೇಕು.

5. ಧರ್ಮ ಸಂದೆಶ ವೇದಿಕೆ – ಇಲ್ಲಿ ಧರ್ಮ ಜಾಗ್ರತಿಯ ಪ್ರವಚನಗಳು, ಯಕ್ಷಗಾನ ನಾಟಕ ಮುಂತಾದ, ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ಚಲನ ಚಿತ್ರ, ದಾರವಾಹಿಗಳಲ್ಲಿ ಸಂದೇಶ ಕಳಿಸುವುದು. ಳಗು ಚಲನಚಿತ್ರಗಳನ್ನು ಸೃಷ್ಟಿಸಿ ಯೂಟ್ಯೂಬ್ ಮುಖಾಂತರ ಜಾಗ್ರತಿ ಮೂಡಿಸುವುದು ಮುಂತಾದ ಕೆಲಸಗಳು ನಡೆಯಬೇಕು. ಸಾಮಾಜಿಕ ಜಾಲತಾಣವೂ ಒಂದು ಮುಖ್ಯ ವೇದಿಕೆಯಾಗಿರುವುದು.

 

ಶಿಕ್ಷಣದ ದೃಷ್ಟಿಕೋನದಲ್ಲಿ ನಡೆಯುವ ಕಾರ್ಯಕ್ರಮಗಳು.

 

1. ಬಾಲಗುರುಕುಲ

2. ಕಿಶೋರ ಗುರುಕುಲ

3. ಧರ್ಮ ಶಿಕ್ಷಣ ವರ್ಗ

 

ಬದಲಾವಣೆ ತರಬೇಕಾದ ಕ್ಷೇತ್ರಗಳು.

 

1. ಶಿಕ್ಷಣ

2. ಆರೋಗ್ಯ

3. ಧಾರ್ಮಿಕ

4. ಕಾನೂನು

5. ಸಾಮಾಜಿಕ

6. ರಾಜಕೀಯ

 

“ಆರಬ್ಧಂ ಉತ್ತಮಜನಾಃ ನ ಪರಿತ್ಯಜಂತಿ”

ಅರ್ಥ ಹೀಗಿದೆ. ಉತ್ತಮ ಜನರು ತಾವು ಆರಂಭಿಸಿದ ಉತ್ತಮ ಕೆಲಸವನ್ನೂ ಎಂದೂ ನಿಲ್ಲಿಸುವುದಿಲ್ಲ. ಕೈ ಬಿಡುವುದಿಲ್ಲ.

ಸೂಚನೆ : ನಮ್ಮ ಯಾವುದೇ ಕಾರ್ಯಕ್ರಮದ ಮೂಲ ಉದ್ದೇಶ ಕೇವಲ ಪ್ರಚಾರ ಆಗಿರುವುದಿಲ್ಲ. ಆದುದರಿಂದ ಯಾವುದೇ ಪತ್ರಿಕೆ, ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯಗಳು ಅನಗತ್ಯವಾಗಿ ಹರಿದಾಡದಂತೆ ಎಚ್ಚರಿಕೆ ವಹಿಸಬೇಕು.

 

-ಶ್ರೀಜಿ

ಜೈ ಹಿಂದ್ ಜೈ ಶ್ರೀರಾಮ್

ಧರ್ಮಸಭೆ ಎಂದರೇನು? ಇದರ ಸ್ವರೂಪ ಹೇಗಿರಬೇಕು? ಈ ವಿಚಾರವನ್ನು ತಿಳಿಯೋಣ.

ಧರ್ಮ ಸಭೆ ಎಂದರೇನು ?  ಧರ್ಮ ಸಭೆ ಎಂದರೆ ಧರ್ಮ ಸೈನಿಕರು ವಾರದಲ್ಲಿ ಒಂದು ದಿನ ಒಟ್ಟಾಗಿ ಒಂದು ಸ್ಥಳದಲ್ಲಿ ಸೇರಿ ಒಂದರಿಂದ ಎರಡು ಗಂಟೆಗಳ ಕಾಲ ಹಿಂದೂಗಳ ಇಂದಿನ ಅಸ್ಥಿತ್ವದ ಸ್ಥಿತಿಗತಿಗಳಕುರಿತು ಒಂದು ನಿರ್ದಿಷ್ಟ ವಿಷಯದಬಗ್ಗೆ ಚರ್ಚಿಸುವ ಚರ್ಚೆ ಹಾಗೂ ಮುಂದಿನ ಕಾರ್ಯ ಯೋಜನೆಯನ್ನು ರೂಪಿಸುವ ಹಾಗೂ ನಿರ್ಣಯ ತೆಗೆದುಕೊಳ್ಳುವ ಕಾರ್ಯಕ್ರಮವಾಗಿರುವುದು. 

ಧರ್ಮಸಭೆಯಲ್ಲಿ ಯಾರು ಭಾಗವಹಿಸಬಹುದು?

ಧರ್ಮಸಭೆಯಲ್ಲಿ ಧರ್ಮಸೈನಿಕರು ಸಕ್ರಿಯವಾಗಿ ಚರ್ಚೆಯಲ್ಲಿ ಭಾಗವಹಿಸಬಹುದು. ಧರ್ಮ ಸಾಧಕರು ವೀಕ್ಷಕರಾಗಿ ಭಾಗವಹಿಸಬಹುದು.

ಧರ್ಮಸಭೆಯ ಆಹ್ವಾನ ಹೇಗಿರಬೇಕು?

ಧರ್ಮಸಭೆಗೆ ನಾವು ನಮ್ಮ ವ್ಯಾಪ್ತಿಯ ಪರಿಧಿಯಲ್ಲಿರುವ ಧರ್ಮಸೈನಿಕರನ್ನು ಆಹ್ವಾನಿಸಬೇಕು. ಧರ್ಮ ಸಭೆಯು ವಾರದಲ್ಲಿ ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ನಡೆಯುವುದನ್ನು ಮೊದಲೇ ಖಚಿತ ಪಡಿಸಿರಬೇಕು. ನಿರಂತರ ಇದು ಹೀಗೆಯೇ ನಡೆಯುತ್ತಿರಬೇಕು. ಆಹ್ವಾನದ ಸಂದೇಶ ತಲುಪದಿದ್ದರೂ ಅಪೇಕ್ಷಿತರು ಇಲ್ಲಿ ಹಾಜರಿರಲು ಈ ಪದ್ದತಿ ಸಹಾಯಕವಾಗುವುದು. ಪ್ರತಿಯೊಬ್ಬ ಧರ್ಮ ಸೈನಿಕನೂ ತನ್ನ ಗಣದ ವಿಶ್ವಾಸಾರ್ಹ ಧರ್ಮ ಸಾಧಕರಲ್ಲಿ ಒಬ್ಬರನ್ನೋ ಇಬ್ಬರನ್ನೋ ಇಂತಹ ಧರ್ಮಸಭೆಗೆ ಕರೆದುಕೊಂಡು ಬರಬಹುದು. ವಾಟ್ಸಾಪ್ ಮುಖಾಂತರ ಸಾರ್ವಜನಿಕ ಸಂದೇಶಕಳುಹಿಸುವ ಕ್ರಮ ಇಲ್ಲಿ ಅನುಸರಿಸುವಂತಿಲ್ಲ. ಇಲ್ಲಿ ಚರ್ಚಿತ ವಿಷಯಗಳನ್ನು ನಮ್ಮ ಮನಸ್ಸಿಗೆ ಬಂದಂತೆಯೂ ಸಾರ್ವಜನಿಕವಾಗಿ ಪ್ರಚಾರ ಮಾಡುವಂತಿಲ್ಲ. ಚರ್ಚಿತ ವಿಷಯ ಹಾಗೂ ತೆಗೆದುಕೊಂಡ ನಿರ್ಣಯದ ಬಗ್ಗೆ ಕೆಲಸಮಾಡುವುದು ನಮ್ಮ ಗುರಿಯಾಗಿರುವುದು. ಕೇವಲ ಪ್ರಚಾರ ನಮ್ಮ ಉದ್ದೇಶ ಆಗಿರಬಾರದು. ಎಲ್ಲಾಕೆಲಸಗಳಲ್ಲಿ ನಾವು ಎನ್ನುವ ಪದ ಬಳಕೆಯಾಗಬೇಕು. ನಾನು ಎನ್ನುವ ಪದ ಬಳಕೆಯಾಗಬಾರದು. ಧರ್ಮಸಭಾ ಸಂಚಾಲಕರನ್ನು ಹೊರತು ಪಡಿಸಿದವರು ಧರ್ಮ ಸಭೆಯ ಪೋಟೋಗಳನ್ನು ತೆಗೆಯುವಂತಿರಬಾರದು ಮತ್ತು ಎಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಟೋಗಳು ಹರಿದಾಡಬಾರದು. ಪ್ರಚಾರ ಹೆಚ್ಚಾದಷ್ಟೂ ಕೆಲಸ ಹಾಳಾಗುತ್ತದೆ. ನಮ್ಮ ಪ್ರಚಾರ ಬಾಯಿಂದ ಬಾಯಿಗೆ ಹೃದಯದಿಂದ ಹೃದಯಕ್ಕೆ ತಲುಪ ಬೇಕು. ಹಾಗೂ ಮಾಡುವ ಕೆಲಸ ಪ್ರಾಮಾಣಿಕವಾಗಿರಬೇಕು. ಪ್ರಾಚಾರದ ಉದ್ದೇಶ ಹೊಂದಿರಬಾರದು. ಉತ್ತಮ ಕೆಲಸವು ಪ್ರಚಾರಮಾಡದೆಯೂ ಜನಮನ್ನಣೆ ಗಳಿಸುತ್ತದೆ.

***

ಆಹ್ವಾನ ಸಂದೇಶ ಹೇಗಿರಬೇಕು? ( ಮಾದರಿ ಸಂದೇಶ )

ನಮಸ್ಕಾರ

ಇಂದಿನ ಅಥವಾ (ದಿನಾಂಕ) ಧರ್ಮ ಸಭೆಗೆ ತಾವು ಅಪೇಕ್ಷತರು.

ಧರ್ಮ ಸಭೆಯ ಸಮಯ :     ಸಂಜೆ  6-00 ರಿಂದ 7-30

ಸ್ಥಳ : ———- ಸಭಾಂಗಣ ( ಸ್ಥಳದ ಮಾಹಿತಿ )

ವಿಷಯ 1 : ಸಮಾನ ನಾಗರಿಕ ಸಂಹಿತೆ ? (ರಾಷ್ಟ್ರೀಯ ವಿಷಯ ಬೇರೆಕೂಡಾ ಇರಬಹುದು)

ವಿಷಯ 2: ………………………………ಸ್ಥಳೀಯ ವಿಷಯ ( ಯಾವುದೂ ಇರಬಹುದು)

ಮುಖ್ಯ ವಕ್ತಾರರು : X X X X X X X X

ವಂದನೆಗಳು.

*** 

ಧರ್ಮಸಭೆಯ ಸ್ವರೂಪ:

  1. ಶಂಖನಾದದೊಂದಿಗೆ ಧರ್ಮಸಭೆಯ ಆರಂಭ.
  2. ಸಂಯೋಜಕರಿಂದ ಸಂಘಟನೆಯ ಲಘುಪರಿಚಯ. ಕಾರ್ಯಕ್ರಮದ ಸ್ವರೂಪದ ಪರಿಚಯ.
  3. ಪೂರ್ವನಿರ್ಧರಿತ ಪುಸ್ತಕದಲ್ಲಿ ಉಪಸ್ಥಿತರ ದಾಖಲಾತಿ.
  4. ಧ್ಯಾನಭಂಗಿಯಲ್ಲಿ ಕುಳಿತು ಸಂಚಾಲಕರ ಸೂಚನೆಯಂತೆ ದೇವತಾಸ್ಥುತಿ ಹಾಗೂ ಪ್ರಾರ್ಥನೆ.
  5. ಸ್ವಾಗತ ಹಾಗೂ ಸಭೆಯ ವಕ್ತಾರರ ಪರಿಚಯ 1 ನಿಮಿಷದಲ್ಲಿ.
  6. ಎರಡು ವಿಷಯಗಳ ಬಗ್ಗೆ ಚರ್ಜೆ 1. ರಾಷ್ಟ್ರೀಯ. 2. ಸ್ಥಳೀಯ
  7. ಸಲಹೆ ಹಾಗೂ ಪ್ರಶ್ನೆಗಳ ದಾಖಲಾತಿ.
  8. ಸಭಾ ನಿರ್ಣಯ ಅಂಗೀಕಾರ.
  9. ಶ್ಲೋಕರೂಪದ ಸಂಕಲ್ಪಪ್ರತಿಜ್ಞೆ, ಶುಭಹಾರೈಕೆ, ಪ್ರಾರ್ಥನೆ, ಭಗವದರ್ಪಣೆ, ಶಾಂತಿಮಂತ್ರ ದೊಂದಿಗೆ ಸಮಾಪನ.
  10. ಅನೌಪಚಾರಿಕ ಅವಧಿ 30 ನಿಮಿಷ. ಹಾಜರಾದವರ ದಾಖಲಾತಿ, ಸರ್ವರೊಂದಿಗೆ ಅನೌಪಚಾರಿಕ ಚರ್ಚೆ. ಮುಂದಿನ ಸಂಘಟನಾತ್ಮಕ ಬೆಳವಣಿಗೆಗಳಬಗ್ಗೆ ಯೋಜನೆ. ಸಮಾಪ್ತಿ.

 

ಧರ್ಮಸಭೆಯ ಸಿದ್ಧತೆಗೆ ಸಂಬಂಧಿಸಿದ ಮಾಹಿತಿ.

 

1. ಪ್ರಶಾಂತವಾದ ಉಚಿತವಾದ ಸ್ಥಳದ ಆಯ್ಕೆ

2.ಹಳ್ಳಿಗಳಲ್ಲಿ ಮೈದಾನದಲ್ಲಿ ಮರದ ಬುಡದಲ್ಲಿಯೂ ಆಗಬಹುದು.

3. ಒಂದು ಹಾಜರಾತಿ ಪುಸ್ತಕ ಇರಬೇಕು ಇದರಲ್ಲಿ ಹೆಸರು ವಯಸ್ಸು ಊರು ಜವಾಬ್ದಾರಿ ದೂರವಾಣಿ ಸಂಖ್ಯೆ ಇಷ್ಟು ಮಾಹಿತಿ ಇರಬೇಕು. 

4. ನಡಾವಳಿ ಪುಸ್ತಕ ಇರಬೇಕು.  ಸಭೆಯ ನಿರ್ಣಯಗಳನ್ನು ದಾಖಲಿಸಬೇಕು.

5. ಕುಡಿಯುವ ನೀರಿನ ವ್ಯವಸ್ಥೆ ಇರಬೇಕು.

6. ಕುಳಿತು ಕೊಳ್ಳಲು ಜಮಖಾನ ಅಥವಾ ಚಾಪೆ ಅಥವಾ ಕುರ್ಚಿಗಳಿರಬೇಕು.

7. ಒಂದು ಸ್ಟೂಲು ಹಾಗೂ ದೀಪ ಮತ್ತು ಬೆಂಕಿಪೆಟ್ಟಿಗೆ, ಎಣ್ಣೆ ಹಾಗೂ ಬತ್ತಿ ಬೇಕು.

8. ಭಾರತಮಾತೆಯ ಭಾವಚಿತ್ರ ಹಾಗೂ ಯಾವುದೇ ಒಂದು ದೇವರ ಭಾವಚಿತ್ರ ಇರಬೇಕು.

9. ಸಾಧ್ಯವಿದ್ದಲ್ಲಿ ಶಂಖನಾದದ ಶಂಖ ಬೇಕು.

10.ಚಪ್ಪಲಿಗಳನ್ನು ಹೊರಗಡೆ ನೀಟಾಗಿ ಇಟ್ಟು ಒಳಗೆ ಬರಬೇಕು.

10.b. ಬರುವಾಗ ಹಣೆಗೆ ತಿಲಕಧರಿಸಿ ಬರಬೇಕು. ಇಲ್ಲವಾದಲ್ಲಿ ಒಳ ಬಂದಕೂಡಲೇ ತಿಲಕ ಧರಿಸಬೇಕು ಹಾಗೂ ಭಾರತಮಾತೆಗೆ ವಂದಿಸಿ ಕುಳಿತುಕೊಳ್ಳಬೇಕು.

11. ಧರಿಸಿದ ವಸ್ತ್ರಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರಬೇಕು.

12. ಬಳಸುವ ಭಾಷೆ ಭಾರತೀಯಗಿರಬೇಕು.

13. ಸಭೆಯ ಕೊನೆಗೆ ಸ್ಥಳವನ್ನು ಮೊದಲಿನ ಸ್ಥಿಯಲ್ಲಿಯೇ ಸಿದ್ಧಪಡಿಸಿಟ್ಟು ನಿರ್ಗಮಿಸಬೇಕು,

14. ಭಾರತ ಮಾತೆಗೆ ಜೈ ಘೋಷದ ಘೋಷಣೆಗಳನ್ನು ಕೂಗಬೇಕು.

ಸಭಾಸ್ವರೂಪ

ಧರ್ಮ ಸಭೆಯಲ್ಲಿ ಇಬ್ಬರು ಪ್ರಮುಖ ವ್ಯಕ್ತಿಗಳಿರಬೇಕು.

1. ಸಭಾಸಂಚಾಲಕರು ಅಥವಾ ಕಾರ್ಯಕ್ರಮ ನಿರ್ವಾಹಕರು

2. ಮುಖ್ಯ ವಕ್ತಾರರು ಅಥವಾ ಚೇರ್ ಪರ್ಸನ್

3.    ಭಾರತಮಾತೆ ಹಾಗೂ ದೇವರ ಫೋಟೋ ಎದುರಿಗೆ ಸಭೆಆರಂಭಕ್ಕಿಂತ ಐದುನಿಮಿಷ ಮೊದಲು ದೀಪವನ್ನು ಹಚ್ಚಿಡಬೇಕು.
(ಕತ್ತಲೆಯನ್ನು ಕಳೆದು ಬೆಳಕನ್ನು ನೀಡುವ ದೀಪವನ್ನು ಬೆಳಗುವಾಗ ಹಿನ್ನಲೆಯಿಂದ ಶ್ಲೋಕ)
ಅಸತೋಮಾ ಸದ್ಗಮಯಾ | ತಮಸೋಮಾ ಜ್ಯೋತಿರ್ಗಮಯಾ |ಮೃತ್ಯೋರ್ಮಾ ಅಮೃತಂ ಗಮಯಾ |ಓಂ ಶಾಂತಿಃ ಶಾಂತಿಃ ಶಾಂತಿಃ ||

4.  ಶಂಖನಾದ – ಸಮಯಕ್ಕೆ ಸರಿಯಾಗಿ ಪೂರ್ವ ಸೂಚಿತ ವ್ಯಕ್ತಿ ಶಂಖನಾದವನ್ನು ಮಾಡುತ್ತಾರೆ. ಶಂಖನಾದವು ಧರ್ಮಸಭೆಯ ಆರಂಭದ ಸಂಕೇತ.

5. ಸಂಚಾಲಕರು ಸೂಚನೆಗಳನ್ನು ಕೊಡುತ್ತಾರೆ.

ನೇರವಾಗಿ ಧ್ಯಾನಭಂಗಿಯಲ್ಲಿ ಕುಳಿತುಕೊಳ್ಳೊಣ. ಕೈಗಳು ಧ್ಯಾನ ಮುದ್ರೆಯಲ್ಲಿರಲಿ. ಕಣ್ಣುಗಳನ್ನು ಮುಚ್ಚಿಕೊಳ್ಳೋಣ. ಮನಸ್ಸು ಪ್ರಶಾಂತವಾಗಿರಲಿ.

ನಿಮ್ಮ ಮನಸ್ಸಿನಲ್ಲಿ ಒಂದುಕಾಲದಲ್ಲಿ ವಿಶ್ವಗುರುವಾಗಿಮೆರೆದ ಅಖಂಢಭಾರತ ರಾಷ್ಟ್ರವನ್ನು ಕಲ್ಪಿಸಿಕೊಳ್ಳಿ. ನಮ್ಮ ಅಖಂಡ ಭಾರತದ ಹಿರಿಮೆಯನ್ನು ಮೆರೆದ ಪುರಾಣ ಪುರುಷರು, ಚಕ್ರವರ್ತಿಗಳು, ಋಷಿಮುನಿಗಳು, ರಾಜ ಮಹಾರಾಜರು, ಸ್ವಾತಂತ್ಯ್ರಕ್ಕಾಗಿ ಪ್ರಾಣಾರ್ಪಣೆಮಾಡಿದ ವೀರರು, ದೇಶದ ಕೀರ್ತಿಯನ್ನು ಬೆಳಗಿಸಿದ ವಿಜ್ಞಾನಿಗಳು. ಕಲಾವಿದರು ಹಾಗೂ ವಿಭಿನ್ನ ಸಾಧಕರು ಇವರೆಲ್ಲರನ್ನೂ ನಮ್ಮಮನಸ್ಸಿನಲ್ಲಿ ಸ್ಮರಿಸೋಣ. ಒಂದು ಬಾರಿ ದೀರ್ಘವಾದ ಉಸಿರಾಟವನ್ನು ಮಾಡೋಣ. ಹಾಗೆಯೇ ಮೂರುಬಾರಿ ದೀರ್ಘವಾಗಿ ಓಂಕಾರವನ್ನು ಹೇಳೋಣ.

ಓಂ …………………………… ಓಂ………………………………….. ಓಂ…………………………

ಈಗ ಇಂದಿನ ಧರ್ಮಸಭೆಯು ನಿರ್ವಿಘ್ನವಾಗಿ ನಡೆಯಲೆಂದು ದೇವರನ್ನು ಸ್ಮರಿಸೋಣ.

ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭಾ|

ನಿರ್ವಿಘ್ನಂ ಕುರುಮೇ ದೇವಾ ಸರ್ವ ಕಾರ್ಯೇಷು ಸರ್ವದಾ||

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ |

ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ||

ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ|

ಅಮೃತೇಶಾಯ ಶರ್ವಾಯ ಮಹಾದೇವಾಯ ತೇ ನಮಃ||

ವಸುದೇವ ಸುತಂ ದೇವಂ ಕಂಸಚಾಣೂರ ಮರ್ದನಮ್ |

ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ ||

ಬುದ್ಧಿರ್ಭಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾ|

ಅಜಾಡ್ಯಂ ವಾಕ್ಪಟುತ್ವಂ ಚ ಹನುಮತ್ ಸ್ಮರಣಾದ್ಭವೇತ್ ||

ರತ್ನಾಕರಾಧೌತಪದಾಂ ಹಿಮಾಲಯಕಿರೀಟಿನೀಮ್ |

ಬ್ರಹ್ಮರಾಜರ್ಷಿರತ್ನಾಢ್ಯಾಂ ವಂದೇ ಭಾರತಮಾತರಮ್ ||

ವಂದೇ ಭಾರತಮಾತರಮ್ ||ವಂದೇ ಭಾರತಮಾತರಮ್ || 

***

ಸಂಘಟನೆಯ ಸಂಕ್ಷಿಪ್ತ ಪರಿಚಯ ಮತ್ತು ಸ್ವಾಗತ:

ಇಂದಿನ ಧರ್ಮ ಸಭೆಗೆ ಆಗಮಿಸಿದಂತ ಎಲ್ಲಾ ದರ್ಮಾಭಿಮಾನಿಗಳಿಗೂ ಹಾರ್ದಿಕ ಸ್ವಾಗತ. ಇಂದಿನ ಧರ್ಮಸಭೆಯ ಚರ್ಚೆಯ ವಿಷಯ “ …………………………. “  ಇಂದಿನ ಚರ್ಚೆಯ ವಿಷಯವನ್ನು ಮಂಡನೆಮಾಡಬೇಕೆಂಬುದಾಗಿ ಇಂದಿನ ಸಭೆಯಲ್ಲಿ ಉಪಸ್ಥತರಿರುವ ವಕ್ತಾರರಾದ  ಶ್ರೀ ————— ರಲ್ಲಿ ವಿನಂತಿಸಿಕೊಳ್ಳುತ್ತೇನೆ. ಇವರ ಪರಿಚಯ (ಲಘು ಪರಿಚಯ )

ವಕ್ತಾರರಿಂದ ವಿಷಯ ಮಂಡನೆ.

ಚರ್ಚೆ

ಪ್ರಶ್ನೆ – ಬರೆದು ಕೊಳ್ಳುವುದು.

ಸಲಹೆ – ಬರೆದುಕೊಳ್ಳುವುದು

ಸಾರಾಂಶ ಅಥವಾ ನಿರ್ಣಯ –  ಓದಿ ಹೇಳುವುದು. ಓಂ ಕಾರದೊಂದಿಗೆ ಸಮ್ಮತಿ.

ಸೂಚನೆ ಇದ್ದಲ್ಲಿ ಸೂಚನೆ.

ಕಾರ್ಯಸಿದ್ಧಿಗಾಗಿ ಸಂಕಲ್ಪ ಜಪ.

ಶುಭೇ ಶೋಭನೇ ಮುಹೂರ್ತೇ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಆದ್ಯ ಬ್ರಹ್ಮಣಃ ಧ್ವಿತೀಯಪರಾರ್ಧೇ ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಅಷ್ಟಾವಿಂಶತಿತಮೇ ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭರತಖಂಡೇ ಭಾರತವರ್ಷೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನಶಕೇ ಬೌದ್ಧಾವತಾರೇ ಪರಶುರಾಮ ಕ್ಷೇತ್ರೇ ಅಸ್ಮಿನ್ ವರ್ತಮಾನಕಾಲೇ ವ್ಯವಹಾರಿಕೇ ಶೋಭಕೃತ್ ನಾಮ ಸಂವತ್ಸರೇ ——- ಆಯನೇ (——) ಋತೌ (——) ಮಾಸೇ (——-) ಪಕ್ಷೇ (——-) ತಿಥೌ (——) ವಾಸರಯುಕ್ತಾಯಾಂ (——)  ನಕ್ಷತ್ರೇ (ಶುಭ) ಯೋಗೇ (ಶುಭ) ಕರಣೇ ಏವಂಗುಣ ವಿಶೇಷಣ ವಿಶಿಷ್ಟಾಯಾಂ (——) ತಿಥೌ (ಶ್ರೀ ಭಾರತಮಾತಾಯಾಃ/ಶ್ರೀ ಅಗ್ನಿ ಸನ್ನಿಧೌ, ಧರ್ಮನಿಷ್ಠಸಹಪಾಠೀನಾಂ ಸನ್ನಿಧೌ)  ಮಮ ಕುಲ (ಇಷ್ಟ) ದೇವತಾಪ್ರೇರಣಯಾ ಸನಾತನಧರ್ಮಸಂರಕ್ಷಣಾರ್ಥಂ, ಭಾರತಮಾತರಂ ವಿಶ್ವಗುರುಸ್ಥಾನೇ ಪುನಃಪ್ರತಿಷ್ಠಾಪನಾರ್ಥಂ, ಅಖಂಡ-ಭಾರತ-ಸನಾತನ-ಸ್ವಾಭಿಮಾನ-ಸೇನಾಯಾಃ ಲಕ್ಷ್ಯಂ ಸಾಧಯಿತುಂ, ಸಂಘಟನಾ ಶಕ್ತಿವರ್ಧನಾರ್ಥಂ, ಮಮ (ಧರ್ಮಸಾಧಕ/ಸೈನಿಕ) ದಾಯಿತ್ವನಿರ್ವಹಣೇ ಕ್ಷಾತ್ರತೇಜ ಸಂಚಯನಾರ್ಥಂ, ಮಮ ಕುಟುಂಬಸ್ಯ ಕ್ಷೇಮಾಭ್ಯುದಯಾರ್ಥಂ, ತ್ರಿಮೂರ್ತಿರೂಪ ಪರಬ್ರಹ್ಮ ಪ್ರೀತ್ಯರ್ಥಂ – (ಸ್ವನಾಮ) ನಾಮ್ನಾ ಅಹಂ ಯತಾನ್ ಶಕ್ತಿ (ಕುಲ/ಇಷ್ಟ) ದೇವತಾ ನಾಮಜಪಂ ಕರಿಷ್ಯೇ.

( ಸಂಕಲ್ಪದಲ್ಲಿ ಪಂಚಾಗ ತಿಥಿ ಮೊದಲೇ ತಿಳಿದುಕೊಂಡಿರಬೇಕು. ರಿಕ್ತ ಸ್ಥಳದಲ್ಲಿ “ಶುಭ” ಎನ್ನುವುದು ಅಂತಿಮ ಆಯ್ಕೆಯಾಗಿರುವುದು) 

(108 ಸಂಖ್ಯೆಯಲ್ಲಿ ಜಪ ಮಾಡುವುದು ಉತ್ತಮ. ಸಮಯ ಕಡಿಮೆ ಇದ್ದರೆ ಒಂದು ಅಥವಾ ಮೂರು ನಿಮಿಷ ಜಪ ಮಾಡೋಣ.)

* ಓಂ ಸ್ವಸ್ತಿ*

ಕರ್ತವ್ಯ ದೀಕ್ಷೆ –

(ದೀಪಕ್ಕೆ ಕೈತೋರಿಸಿ ಅಘ್ನಿ ಸಾಕ್ಷಿಯಾಗಿ ದೀಕ್ಷೆ ಸ್ವೀಕರಿಸೋಣ)

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|

ಧರ್ಮಸಂಸ್ಥಾಪನಾರ್ಥಾಯ ಕಾರ್ಯಂ ಕುರ್ಮಃ ಕ್ಷಣೇ ಕ್ಷಣೇ || 3 ಬಾರಿ

ಪ್ರಾರ್ಥನೆ.

ಶ್ರದ್ಧಾಂ ಮೇಧಾಂ ಯಶಃಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಮ್ |

ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಪುರುಷೋತ್ತಮ ||

ಭಗವದರ್ಪಣೆ.

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |

ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ||

ಇಷ್ಟದೇವರನ್ನು ಅಥವಾ ಕುಲದೇವರನ್ನು ನೆನೆದು ನಮಸ್ಕರಿಸಿರಿ.

 

ಶಾಂತಿ ಮಂತ್ರಃ.

ಸರ್ವೇಭವಂತು ಸುಖಿನಃ ಸರ್ವೇಸಂತು ನಿರಾಮಯಾಃ|

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ಧುಃಖಭಾಗ್ ಭವೇತ್|| 

  • ಅನೌಪಚಾರಿಕದ ಮಾಹಿತಿ

ಜೈಕಾರ ( ಆಯ್ದ ಕೆಲವು ಘೋಷಣೆಗಳು )

ವಿಶ್ವ ವಂದ್ಯ ಆರ್ಯ ಸನಾತನ ಹಿಂದು ಧರ್ಮಕ್ಕೇ – ವಿಜಯವಾಗಲಿ, ವಿಜಯವಾಗಲಿ.

ಜಗದ್ಗುರು ವಿಶ್ವ ವಂದ್ಯ ಅಖಂಡ ಭಾರತ ಮಾತೆಗೇ – ವಿಜಯವಾಗಲಿ, ವಿಜಯವಾಗಲಿ.

ಸನಾತನ ಭಾರತದ ಅಖಂಡ ಗುರುಪರಂಪರೆ – ಅಮರವಾಗಲಿ, ಅಮರವಾಗಲಿ.

ಸನಾತನ ಭಾರತದ ಅಖಂಡ ಜ್ಞಾನ ಪರಂಪರೆ – ಅಮರವಾಗಲಿ, ಅಮರವಾಗಲಿ.

ಜಯತು ಜಯತು – ಹಿಂದೂ ರಾಷ್ಟ್ರಂ .  3 ಬಾರಿ

ಭಾರತ್ ಮಾತಾಕೀ – ಜೈ.  – 3 ಬಾರಿ

ವಂದೇ – ಮಾತರಂ.  – 3 ಬಾರಿ

ಜೈ ಹಿಂದ್ – ಜೈ ಹಿಂದ್. 3 ಬಾರಿ

-ಶ್ರೀಜಿ 

ಜೈ ಹಿಂದ್ ಜೈ ಶ್ರೀರಾಮ್       

ಧರ್ಮ ಗೋಷ್ಠಿ ಎಂದರೆ  ಏನು?

ಯವುದೇ ತುರ್ತು ವಿಚಾರದಬಗ್ಗೆ ಸಂಘಟನೆಯ ಪ್ರಮುಖರು ಕುಳಿತು ಚರ್ಚಿಸುವುದು.

ಸಿದ್ಧತೆ

1. ಕುಳಿತುಕೊಳ್ಳಲು ಜಮಖಾನ ಅಥವಾ ಕುರ್ಚಿಗಳು

2. ದೀಪದ ವ್ಯವಸ್ಥೆ. ಎಣ್ಣೆ, ಬತ್ತಿ, ಬೆಂಕಿ ಪೆಟ್ಟಿಗೆ.

3. ಭಾರತ ಮಾತೆಯ ಫೋಟೋ ಹಾಗೂ ಒಂದು ದೇವರ ಫೋಟೋ.

4. ದೇವರ ಪೋಟೋಗೆ ಮಾಲೆ ಅಥವಾ ಬಿಡಿಹೂವುಗಳು

4. ಕುಡಿಯಲು ನೀರು.

 

ಗೋಷ್ಠಿ ಆರಂಭಕ್ಕೆ ಐದು ನಿಮಿಷ ಮೊದಲು ದೀಪವನ್ನು ಬೆಳಗಿಸಿ ಇಡುವುದು. 

(ದೀಪ ಬೆಳಗುವಾಗ ಹಿನ್ನಲೆಯಿಂದ ಶ್ಲೋಕ)

ಅಸತೋಮಾ ಸದ್ಗಮಯಾ 

ತಮಸೋಮಾ ಜ್ಯೋತಿರ್ಗಮಯಾ

ಮೃತ್ಯೋರ್ಮಾ ಅಮೃತಂ ಗಮಯಾ

ಓಂ ಶಾಂತಿಃ ಶಾಂತಿಃ ಶಾಂತಿಃ

 

ಆರಂಭ

 

ಸಮಯವಿದ್ದಲ್ಲಿ ಧರ್ಮಸಭೆಯಂತೆಯೇ ಮಾಡಬಹುದು. ಇಲ್ಲವಾದಲ್ಲಿ ಸ್ವಲ್ಪ ಸಂಕುಚಿತಗೊಳಿಸಿ ಮಾಡುವುದು.

1. ಓಂಕಾರ 3 ಬಾರಿ (ಕಣ್ಣುಮುಚ್ಚಿಕೊಂಡು)

ಈಗ ಇಂದಿನ ಧರ್ಮ ಸಭೆಯು ನಿರ್ವಿಘ್ನವಾಗಿ ನಡೆಯಲೆಂದು ವಿಘ್ನನಿವಾರಕ ಗಣಪತಿಯನ್ನು ಸ್ಮರಿಸೋಣ.

 

ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭಾ|

ನಿರ್ವಿಘ್ನಂ ಕುರುಮೇ ದೇವಾ ಸರ್ವ ಕಾರ್ಯೇಷು ಸರ್ವದಾ||

 

ಪೂರ್ವನಿರ್ಧರಿತ ವಿಷಯದ ಕುರಿತು ಚರ್ಚೆ

ಪ್ರಶ್ನೆ – ಬರೆದು ಕೊಳ್ಳುವುದು.

ಸಲಹೆ – ಬರೆದುಕೊಳ್ಳುವುದು

ನಿರ್ಣಯ –  ಓದಿ ಹೇಳುವುದು. ಓಂ ಕಾರದೊಂದಿಗೆ ಸಮ್ಮತಿ.

 

ಸೂಚನೆ.

 

ಕಾರ್ಯಸಿದ್ಧಿಗಾಗಿ ಸಂಕಲ್ಪ ಜಪ.

ಅಸ್ಮಿನ್ ಶುಭ ಅವಸರೇ ಮಮ ಕುಲ (ಇಷ್ಟ) ದೇವತಾಪ್ರೇರಣಯಾ ಸನಾತನಧರ್ಮ ಸಂರಕ್ಷಣಾರ್ಥಂ ಭಾರತಮಾತರಂ ವಿಶ್ವಗುರುಸ್ಥಾನೇ ಪುನಃಪ್ರತಿಷ್ಠಾಪನಾರ್ಥಂ ಅಖಂಡ-ಭಾರತ-ಸನಾತನ-ಸ್ವಾಭಿಮಾನ-ಸೇನಾಯಾಃ ಸೇನಾಯಾಃ ಲಕ್ಷ್ಯಂ ಸಾಧಯಿತುಂ ಸಂಘಟನಾ ಶಕ್ತಿವರ್ಧನಾರ್ಥಂ, ಮಮ (ಧರ್ಮಸಾಧಕ/ಸೈನಿಕ) ದಾಯಿತ್ವನಿರ್ವಹಣೇ ಕ್ಷಾತ್ರತೇಜ ಸಂಚಯನಾರ್ಥಂ ಮಮ ಕುಟುಂಬಸ್ಯ ಕ್ಷೇಮಾಭ್ಯುದಯಾರ್ಥಂ, ತ್ರಿಮೂರ್ತಿರೂಪ ಪರಬ್ರಹ್ಮ ಪ್ರೀತ್ಯರ್ಥಂ – (ಸ್ವನಾಮ) ನಾಮ್ನಾ ಅಹಂ ಯತಾನ್ ಶಕ್ತಿ (ಕುಲ/ಇಷ್ಟ) ದೇವತಾ ನಾಮಜಪಂ ಕರಿಷ್ಯೇ.

(108 ಸಂಖ್ಯೆಯಲ್ಲಿ ಜಪ ಮಾಡುವುದು ಉತ್ತಮ. ಸಮಯ ಕಡಿಮೆ ಇದ್ದರೆ ಒಂದು ಅಥವಾ ಮೂರು ನಿಮಿಷ ಜಪ ಮಾಡೋಣ.)

 

* ಓಂ ಸ್ವಸ್ತಿ*

 

ಸಂಕಲ್ಪ ದೀಕ್ಷೆ – ದೀಪಕ್ಕೆ ಕೈತೋರಿಸಿ ಅಗ್ನಿ ಸಾಕ್ಷಿಯಾಗಿ ದೀಕ್ಷೆ ಸ್ವೀಕರಿಸೋಣ.

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|

ಧರ್ಮಸಂಸ್ಥಾಪನಾರ್ಥಾಯ ಕಾರ್ಯಂ ಕುರ್ಮಃ ಕ್ಷಣೇ ಕ್ಷಣೇ || 3 ಬಾರಿ ||

 

ಪ್ರಾರ್ಥನೆ

 

ಶ್ರದ್ಧಾಂ ಮೇಧಾಂ ಯಶಃಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಮ್ |

ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಪುರುಷೋತ್ತಮ ||

 

ಭಗವದರ್ಪಣೆ.

 

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |

ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ||

 

ಇಷ್ಟದೇವರನ್ನು ಅಥವಾ ಕುಲದೇವರನ್ನು ನೆನೆದು ನಮಸ್ಕರಿಸಿರಿ.

ಜೈಕಾರ  

(ಆಯ್ದ ಕೆಲವು ಘೋಷಣೆಗಳನ್ನು ಕೂಗೋಣ)

ವಿಶ್ವ ವಂದ್ಯ ಆರ್ಯ ಸನಾತನ ಹಿಂದು ಧರ್ಮಕ್ಕೇ – ವಿಜಯವಾಗಲಿ, ವಿಜಯವಾಗಲಿ.

ಜಗದ್ಗುರು ವಿಶ್ವ ವಂದ್ಯ ಅಖಂಡ ಭಾರತ ಮಾತೆಗೇ – ವಿಜಯವಾಗಲಿ, ವಿಜಯವಾಗಲಿ.

ಸನಾತನ ಭಾರತದ ಅಖಂಡ ಗುರುಪರಂಪರೆ – ಅಮರವಾಗಲಿ, ಅಮರವಾಗಲಿ.

ಸನಾತನ ಭಾರತದ ಅಖಂಡ ಜ್ಞಾನ ಪರಂಪರೆ – ಅಮರವಾಗಲಿ, ಅಮರವಾಗಲಿ.

ಜಯತು ಜಯತು – ಹಿಂದೂ ರಾಷ್ಟ್ರಂ .  3 ಬಾರಿ

ಭಾರತ್ ಮಾತಾಕೀ – ಜೈ.  – 3 ಬಾರಿ

ವಂದೇ – ಮಾತರಂ.  – 3 ಬಾರಿ

ಜೈ ಹಿಂದ್ – ಜೈ ಹಿಂದ್. 3 ಬಾರಿ

ಶಾಂತಿ ಮಂತ್ರಃ.

ಸರ್ವೇಭವಂತು ಸುಖಿನಃ ಸರ್ವೇಸಂತು ನಿರಾಮಯಾಃ

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ಧುಃಖಭಾಗ್ ಭವೇತ್.

-ಶ್ರೀಜಿ

ಜೈ ಹಿಂದ್ ಜೈ ಭಾರತ ಮಾತಾ